Thursday 13 February 2020

ಸಿರಿಭೂವಲಯದಲ್ಲಿ ಕನ್ನಡ ಭಗವದ್ಗೀತೆಯ ಸೊಬಗು ಭಾಗ:೩.


ನನಗೆ ಯಾವುದೇ ಧರ್ಮೋಪದೇಶವೂಬೇಡ,  ಯಾರ ಆಪ್ತವಚನವೂ ಬೇಡ. ನನ್ನ ಅಂತರಾತ್ಮದ ಹೇಳಿಕೆಯಂತೆ ವರ್ತಿಸುತ್ತೇನೆ  ಎನ್ನುವುದಕ್ಕೆ ನೀನೇನು ಮದನನಂತೆ ತ್ಯಾಗಮಡುವ ಬುದ್ಧಿಯಿಂದ ಮೃದುಯುದ್ಧಮಾಡುವುದಕ್ಕಾಗಿ ನಾನು ಬಂದಿದ್ದೇನೆ ಎನ್ನುವೆಯೇನು!? ಹಾಗಿದ್ದಲ್ಲಿ  ಹೃದಯಲ್ಲಿ ಕುಳಿತಿರುವವನು ನಾನು ಎಂಬುದನ್ನು ತಿಳಿದುಕೋ! ಎಂದು ಕೃಷ್ಣ ಎಚ್ಚರಿಸುತ್ತಾನೆ.
”ಯದೆಯೊಳುಹೊಕ್ಕಂತೆನಡೆಸಲುನೀನೇನು|ಮೃದುಯುದ್ಧಗೈಯ್ಯುವುದಕಾಗಿ|ಮದನನಂದದೆತ್ಯಾಗದರಿವುಬಂದಿರೆನಾನು|ಹೃದಯದೊಳುಕುಳಿತೆನು ಅರಿಕ್|| ಎಂದು ಹೇಳುತ್ತಾನೆ.
ಆಗಲೇ ಎದೆಯೊಳಗೆ ಗೆಲುವಿನ ಅನುಮಾನದ ತಿಕ್ಕಟ ಪ್ರಾರಂಭವಾಗಿದೆಯೇನು!?  ದಿಕ್ಕು .ಅಶುಭದ ಮಣಿಯಾಗಿದೆಯೇನು?  ಭೂಮಿಯಲ್ಲಿ ದಾಯಾದಿಗಳು ಇರಬೇಕೆಂಬ ಆಶೆ ಕೆಲವರಿಗಿರುತ್ತದೆ. ಧರ್ಮರಾಯನೇನಾದರೂ  ಆದಾರಿಯನ್ನು ಹಿಡಿದಿದ್ದಾನೆಯೇನು!? ಕೇಳುತ್ತಾನೆ ಕೃಷ್ಣ.
ಮಸೆಯುವುದೆ ಎದೆಯೊಳುಗೆಲುವಿನೊಳನುಮಾನ|ದಿಸೆಯುನಚೈತದವಿಮಣಿ|ರಸೆಯೊಳುದಯಾದರಿರಲೆಂಬನನಾಶೆ| ದಿಸೆಯುಧರ್ಮಜನರೀತಿಯದೆನ್|| ಎಂದು ಪಾರ್ಥನನ್ನು ಕೆಣಕುತ್ತಾನೆ. ಮುಂದುವರೆದು..
ಆಳವಾದ ಮಡುವಿನ ನೀರು ತುಂಬಾ ತಣ್ಣಗಿರುತ್ತದೆ. ಸದಾಕಲವೂ ಅದರಲ್ಲೇ ಸ್ನಾನಮಾಡುತ್ತಿರುವ ಮೀನು ತುಂಬಾ ಕೋಪಕ್ಕೊಳಗಾಗಿದೆಯಂತೆ! ಇಂಥ ನೀರಿನಲ್ಲಿ ಸ್ನಾನಮಾಡುವುದು ಹಿತವಲ್ಲ. ಸುಮ್ಮನೆ ಕುರುಕ್ಷೇತ್ರದ  ಕೊಲೆಯ ಹಾಡಿಗೆ ಸಮ್ಮತಿಸಯ್ಯಾ  ಪಾರ್ಥಾ. ಎಂದು ಹೇಳುತ್ತಾನೆ ದ್ವಾರಕೆಯ ಕೃಷ್ಣ.
”ಮಸತೆಯಮೀನುಸದಾಸ್ನಾನಮಾಡುತ|ಖತಿಗೊಳಗಾಗಿದೆಯಂತೆ|ಹಿತವಲ್ಲಜಲಸ್ನಾನಕುರುಕ್ಷೇತ್ರ|ಗೀತದನುಮತಿಸಯ್ಯಹಂತಪಾರ್ಥ||
ನಾನು ನಾನು ಎಂಬ ರಣವನ್ನು ತಣ್ಣಗೆಮಾಡಿ, ಇದೇ ನನ್ನ ಕೊನೆಯಜನ್ಮವೆಂದು ತಿಳಿದು,  ದೇಹದ ಯುದ್ಧದಲ್ಲಿ ಭೂಮಿಯನ್ನು ಸಂಪಾದಿಸಿ, ಪಾಲಿಸಿ, ಕೊನೆಗೆ ಅದನ್ನು ಬಿಟ್ಟು ಧಣಿ ಎನಿಸಿಕೊಳ್ಳಬೇಕು. ಇದನ್ನು ನೀನು ತಿಳಿದುಕೋ.
ಎಂದು ಎಚ್ಚರಿಸುತ್ತಾನೆ.
”ನನರಣವಾರಿಸಿಕೊನೆಯಜನ್ಮವಹೊಂದೆ|ತನುವಿನಯುದ್ಧದೊಳುಧರಣೀ|ಮಣಿಯನರ್ಜಿಸಿಪಾಲಿಸಿಕೊನೆಗದಬಿಟ್ಟು|ಧಣಿಯಾಗುವುದುಇಂತರಿನೀ|| ಎಂದು ಕೃಷ್ಣನು ಹೇಳಿದರೆ, ಪಾರ್ಥನು ಜಗತ್ತಿನ ಸೃಷ್ಟಿಸ್ಥಿತಿಲಯಗಳ ವಿಚಾರ ಕುರಿತು ಪ್ರಶ್ನಿಸುತ್ತಾನೆ! ಅದನ್ನು ಕುರಿತು ಕೃಷ್ಣನು..
ಅಯ್ಯೋ ಅದನ್ನೇನಯ್ಯಾ ಹೇಳುವುದು?  ಇವರು ಅವರು ನಾವು ಎಲ್ಲರೂ ತುಂಬ ಪರಿಚಯವಿರುವ ಒಂದೇ ಕ್ಷೇತ್ರದ ಹೃದಯದೊಳಗಿದ್ದು ಮತ್ತೆ ಮತ್ತೆ ತಿರುತಿರುಗಿ ಬಂದು ಅದನ್ನೇ ಹೊಂದುತ್ತೇವೆಂಬುದನ್ನು ತಿಳಿದುಕೊಳ್ಳಯ್ಯಾ. ಎಂದು ಸೂಚಿಸುತ್ತಾನೆ.
”ಮದಪೇಳುವುದೇನುಇವರವರ್ನಾವೆಲ್ಲ|ಸದರದಿಓಂದೇಕ್ಷೇತ್ರದರ| ಹೃದಯದೊಳಿರ್ದುತಿರುತಿರುಗಿಬಂದು| ಅದದನೆಹೊಂದುವೆವರಿಯಾ|| ಎಂಬುದಾಗಿ ಜಗತ್ತಿನ ನಿಜವಾದ ಸ್ವರೂಪವನ್ನು ಕುರಿತು ಹೇಳುತ್ತಾನೆ..
ಜಗತ್ತಿನಲ್ಲಿರುವುದೆಲ್ಲ ಅರ್ಧಸುಖದವಸ್ತು, ಅರ್ಧ ದುಃಖದವಸ್ತು ಎಂಬುದನ್ನು ತಿಳಿದುಕೊ. ಇದನ್ನು ಮರೆಯದೇ ಬಾಳುವುದೇ ಪರಿಪೂರ್ಣಜೀವನ. ಆದ್ದರಿಂದ ಅರ್ಧವನ್ನಾಶಿಸುವುದೇ ಈ ಭೂಮಿಯಲ್ಲಿರುವ ಫಲ. (ಇಲ್ಲಿ ಕವಿಯು ಸುಖ-ದುಃಖ, ಪಾಪ-ಪುಣ್ಯ, ಲಾಭ-ನಷ್ಟ, ಹಗಲು- ರಾತ್ರಿ, ಒಳ್ಳೆಯದು-ಕೆಟ್ಟದ್ದು, ನೀತಿ-ಅನೀತಿ, ಸ್ವರ್ಗ- ನರಕ, ಮುಂತಾದ ದ್ವಂದ್ವಗಳೆಲ್ಲವೂ ಭೂಮಿಯಲ್ಲಿ ಅರ್ಧರ್ಧದಂತೆ ಸಮವಾಗಿವೆ. ಅದರಲ್ಲಿ ಎಲ್ಲರಿಗೂ ಸಮಪಾಲಿದೆ ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ಸೂಚಿಸಿರುವುದಿದೆ! ಆದರೂ ಅರಿವಿಲ್ಲದ ಜನರು ಜಗತ್ತಿನಲ್ಲಿ ನಮ್ಮಷ್ಟು ಕಷ್ಟಪಡುವವರು ಯಾರೂ ಇಲ್ಲ! ಜಗತ್ತಿನ ಕಷ್ಟವೆಲ್ಲವೂ ನಮ್ಮಪಾಲಿಗೇ ಬಂದಿದೆ. ಉಳಿದವರೆಲ್ಲರೂ ಸುಖವಾಗಿದ್ದಾರೆ ಎಂದು ಗೋಳಾಡುವುದಿದೆ! ಇದೆಲ್ಲವೂ ತಮ್ಮ ಪೂರ್ವಾರ್ಜಿತದ ಕರ್ಮಫಲ ಎಂಬುದನ್ನು ಮಾತ್ರ ಎಲ್ಲರೂ ಮರೆತುಬಿಡುತ್ತಾರೆ )
ಅರೆರಾಶಿಯಲ್ಲವೆಜಗದಸೌಖ್ಯವಸ್ತು|ಅರೆರಾಶಿದುಃಖವಸ್ತುವರಿ| ಮರೆಯದೆಬಾಳಗವಕೆಪರಿಪೂರ್ಣವದರಿಂದ| ಅರೆಯನಾಶಿಪಲಭವದುನಂ|| (ಮುಂದುವರೆಯುತ್ತದೆ)
                                             -ಸಿರಿಭೂವಲಯದಸುಧಾರ್ಥಿ.

No comments:

Post a Comment