Monday 10 February 2020

ಸಮತಾವಾದದ ಉಗಮ ಎಲ್ಲಿಂದಾದುದು??


ಜಗತ್ತಿನಲ್ಲಿ ಕಾರ್ಲ್ ಮಾರ್ಕ್ಸ್, ಲೆನಿನ್ ಮುಂತಾದವರಿಂದ  ಸಮತಾವಾದವು ಹುಟ್ಟಿ ಬೆಳೆಯಿತೆಂಬ ವಿಚಾರ ಚರಿತ್ರೆಯಾಗಿ ಪ್ರಚಲಿತವಿದೆ! ಆದರೆ ಈ ಸಮತಾವಾದವು ದ್ವಾರಕೆಯ ಶ್ರೀ ಕೃಷ್ಣನ ಕಾಲಕ್ಕೆ ಮೊದಲೇ ತಲೆಯೆತ್ತಿದ್ದ ಒಂದು ಸಾಮಾಜಿಕ ಪ್ರತಿಭಟನೆಯಾಗಿತ್ತು!!
ವೇದೋಕ್ತಜೀವನಪಥದಲ್ಲಿ ಪ್ರತಿಯೊಬ್ಬರೂ ತಮಗೆ ವಿದಿತವಾದ ಕ್ರಮದಲ್ಲಿ ಜೀವನಸಾಗಿಸುತ್ತ, ಸಮಾಜದ ಏಳಿಗೆಯಲ್ಲಿ ಭಾಗವಹಿಸುವ ಕ್ರಮವಿದೆ.   ದುಡಿದವರು ಸಂಪತ್ತನ್ನು ಹೊಂದಿ ತಾವೂ ನೆಮ್ಮದಿಯಿಂದಿದ್ದು, ಉಳಿದವರ ನೆಮ್ಮದಿಗೂ ನೆರವಾಗುವ ಕ್ರಮವಿತ್ತು. ಆದರೆ ಸಮತಾವದದ ನೀತಿಯಲ್ಲಿ ಉಳ್ಳವರನ್ನು ಗುರುತಿಸಿ, ತಮ್ಮ ತೋಳ್ಬಲದಿಂದ ಅವರನ್ನು ಬೀದಿಗೆ ತಂದು ತಮಗೆ ಬೇಕಾದವರಿಗೆ ಸಂಪತ್ತನ್ನು ಹಂಚುವುದು ಸಮತಾವಾದದ ನೀತಿ!!
ಚೈನಾ, ರಷ್ಯಾ, ಸೈಬೀರಿಯಾ ಮುಂತಾದ ಶೀತದೇಶಗಳಲ್ಲಿ ಪ್ರಚಲಿತವಿದ್ದ  ಇಂಥ ಜೀವನ ಪದ್ಧತಿ , ಹಾಗೂ ಅವರ ಸಾಮಾಜಿಕ ತಿಳುವಳಿಕೆಯು ಸಮಂಜಸವಲ್ಲ ಎಂಬುದನ್ನು ಕೃಷ್ಣನು ಪಾರ್ಥನಿಗೆ ಸೂಚಿಸುವ ಸನ್ನಿವೇಶವೊಂದು ಸಿರಿಭೂವಲಯದಲ್ಲಿ ಕಾಣಬರುತ್ತದೆ!
 ಅಂದರೆ ನಾಲ್ಕುಸಾವಿರ ವರ್ಷಗಳಿಗೂ ಹಿಂದಿನಿಂದಲೇ ಜಗತ್ತಿನಲ್ಲಿ ಈ ಸಮತಾವಾದಿಗಳ (ಕಮ್ಮಿನಿಷ್ಟೆಯರ) ಉಗಮವಾಗಿತ್ತೆಂಬುದನ್ನು  ಇಂದಿನ ಜಗತ್ತು ಅರಿಯಬೇಕಿದೆ!!
 ”ಶೀತದೇಶದ ಜನರ ಅರಿವ ಅರಿವೆಂದರಿಯಲಾಗದು ಅರಿಯೆಂದು ತಿಳಿದು ಇರಿ’ ಎಂಬ ಕೃಷ್ಣನ ಉಪದೇಶವು ಸಿರಿಭೂವಲಯದಲ್ಲಿದೆ. ಅಂದರೆ ’ಜೀವನಸಾಗಿಸುವ ದಿಸೆಯಲ್ಲಿ ಶೀತದೇಶದಜನರು ಅನುಸರಿಸುವ ಕ್ರಮ ಸರಿಯಲ್ಲ;  ಅದನ್ನು ತಿಳುವಳಿಕೆ ಎಂದು ನಿರ್ಧರಿಸಲಾಗದು, ಅದನ್ನು ’ಜೀವವಿರೋದಿ ತಿಳುವಳಿಕೆ’ ಎಂದು ತಿಳಿದು  ನಾಶಮಡಬೇಕು’ ಎಂಬುದು ಯೋಗೀಶ್ವರನಾದ ಕೃಷ್ಣನ ಉಪದೇಶವಾಗಿದೆ.
ಆದರೆ ನಾಲ್ಕುಸಾವಿರ ವರ್ಷಕ್ಕೂ ಹೆಚ್ಚು ಸಮಯಕಳೆದರೂ ಅಂದಿನಿಂದ ಇಂದಿನವರೆವಿಗೂ ಜಗತ್ತಿನಲ್ಲಿ ಈ ಕಮ್ಮಿನಿಷ್ಟೆಯವರ ಕುತಂತ್ರವನ್ನು ನಂಬಿ ಜೀವನವನ್ನು ವ್ಯರ್ಥಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿಲ್ಲ!!
ಭಾರತದ ಚರಿತ್ರೆಯಲ್ಲಂತೂ ಶೋಕೀಲಾಲ ನೆಹರೂ  ಇಲ್ಲಿನ ಕೇರಳದ ಕೃಷ್ಣ ಮೆನನ್ನನಂಥ ದೇಶದ್ರೋಹಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ,  ಜಾತ್ಯಾತೀತವೆಂಬ ಭೂತದ ನೆನ್ನೇರಿ, ಭಾರತವನ್ನು ಅಧೋಗತಿಗೆ ಇಳಿಸಿದ್ದು ಸರ್ವ ವಿದಿತ. ದೇವರಾಜ ಅರಸರು ’ಉಳುವವನಿಗೇ ಭೂಮಿ’ ಎಂಬ ಘೋಷಣೆಲ್ಲಿ,  ’ಭೂಸುಧಾರಣೆ’ ಕಾನೂನಿನ  ನೆಲೆಯಲ್ಲಿ ದುರ್ಬಲರಾದ ಸಾವಿರಾರು ಜನ ಭೂಮಾಲೀಕರನ್ನು ನೆಲಸಮಮಾಡಿ  ದೇಶೋದ್ಧಾರಮಾಡಿದ್ದಾಯಿತು. ಇಂದಿನ ಕಾಂಗ್ರೆಸ್ ಭ್ರಮಾಧೀನರೂ ಇದೇ ಹಾದಿಯಲ್ಲಿ ಸಾಗುತ್ತ ತಮ್ಮನ್ನೂ, ದೇಶವನ್ನೂ ಆಳವಾದ ಕಂದಕದಲ್ಲಿ ಬೀಳಿಸುತ್ತಿದ್ದಾರೆ.
ಇದನ್ನು ಅನುಭವಿಸುವುದು ಈ ದೇಶದ ಜನಸಾಮಾನ್ಯರಿಗೆ ಅನಿವಾರ್ಯ!!  ಕಾರಣ ಅನ್ಯಾಯವನ್ನು ವಿರೋಧಿಸಿ, ದೇಶದ, ಧರ್ಮದ ರಕ್ಷಣೆಮಾಡುವ ಚೈತನ್ಯವೇ ಇವರಲ್ಲಿ ನಾಶವಾಗಿ ಪೌರುಷಹೀನರಾದ ನಪುಂಸಕರಂತೆ ವರ್ತಿಸುವುದೇ ಬಹುಪಾಲು ಜನರ ಜೀವನಮಾರ್ಗವಾಗಿದೆ
 ಇಂಥ ಪ್ರಜೆಗಳಿಂದ ರೂಪಿತವಾಗುವ ಆಡಳಿತ ವ್ಯವಸ್ಥೆಯು  ದೇಶದ ಹಿತ ಕಾಪಾಡಲು ಹೇಗೆ ಸಾಧ್ಯ!!?? ಈ ಕಾರಣದಿಂದಾಗಿಯೇ ದೇಶದಲ್ಲಿ ಮೋದಿವಿರೋಧಿಗಳ ಕೈ ಮೇಲಾಗಲು ಅವಕಾಶವಾಗುತ್ತಿದೆ.  ಜನತೆ ಎಚ್ಚೆತ್ತರೆ ಇದನ್ನು ಬದಲಿಸುವುದು ಅಸಾಧ್ಯವೇನಲ್ಲ.  ವಿವೇಕಿಗಳು ತಾಳ್ಮೆಯಿಂದ ಈ ಕಾರ್ಯ ಸಾಧಿಸಬೇಕಿದೆ.
           ಸಿರಿಭೂವಲಯದಸುಧಾರ್ಥಿ.

No comments:

Post a Comment