Friday 21 February 2020

ಸಿರಿಭೂವಲಯದಲ್ಲೇ ಭೂಮಿಯಸುತ್ತಲೂ ಸಮುದ್ರವು ಹರಡಿದೆಯೆಂಬ ಮಾಹಿತಿ ಇದೆ!


’ಭರತಖಂಡವೆಂಬುದು ಒಂದು ಹಾವಾಡಿಗರ ದೇಶ. ಇಲ್ಲಿನಜನರಿಗೆ ಲೋಕಜ್ಞಾನಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯೂ ತಿಳಿದಿಲ್ಲ!!  ಆಧುನಿಕ ವಿಜ್ಞಾನದ ಪರಿಚಯವೇ ಇವರಿಗಿಲ್ಲ!
ಸಾವಿರ ವರ್ಷಗಳ ಹಿಂದೆ ಮುಸ್ಲಿಮರ ಧಾಳಿಯೊಂದಿಗೆ ಈ ದೇಶದ ಜನರ ಜೀವನದಲ್ಲಿ ಸಂಚಲನವು ಪ್ರಾರಂಭವಾಯಿತು. ಪೋರ್ಚುಗೀಸರ ಆಗಮನದಿಂದ ಇಲ್ಲಿನವರಿಗೆ ಸಾಗರವು ಹೆಚ್ಚು ವಿಶಾಲವಾಗಿದೆ. ಅದರ ಆಚೆಯಲ್ಲಿ ಬೇರೆ ದೇಶಗಳಿವೆ  ಸಾಗರವು ಭೂಮಿಯಸುತ್ತಲೂ ವ್ಯಾಪಿಸಿದೆ ಎಂಬ ವಿಚಾರ ಅವರಿಗೆ ಅರಿವಾಯಿತು.  ಬ್ರಿಟಿಷರ ಆಗಮನದಿಂದಾಗಿ ಈ ದೇಶದ ಜನಜೀವನದಲ್ಲಿ ನಾಗರಿಕತೆ ತಲೆದೋರಿತು’ ಎಂಬ ಹುಚ್ಚು ಕಲ್ಪನೆ ಕೆಲವರದು!
ಇದೊಂದು ತಪ್ಪು ಕಲ್ಪನೆ ಎಂಬುದನ್ನು ಹಲವಾರುಜನ ಪಾಶ್ಚಿಮಾತ್ಯ ವಿಚಾರ ಶಾಲಿಗಳೇ ಹಲವಾರುಸಲ ಹೇಳಿದ್ದಾಗಿದೆ! ಈಗ ಭೂಮಿಯ ಬೇರೆ ಭಾಗದಲ್ಲೂ ಸಮುದ್ರವು ವ್ಯಾಪಿಸಿದೆ ಎಂಬ ಒಂದು ಮಾಹಿತಿಯನ್ನೇ ಗಮನಿಸಿ. ಈ ಮಾಹಿತಿಯನ್ನು ೧೨೦೦ ವರ್ಷಗಳಿಗೂ ಹಿಂದಿನವನಾದ ಕುಮುದೇಂದುಮುನಿಯೇ ತನ್ನ ಸಿರಿಭೂವಲಯಕಾವ್ಯದಲ್ಲಿ ಖಚಿತವಾಗಿ ಸೂಚಿಸಿರುವುದಿದೆ!!
ಈ ಕಾವ್ಯದಲ್ಲಿ ಇಂದಿನ ಆಧುನಿಕ ವಿಜ್ಞಾನದ ಸಾಧನೆಗಳೆಲ್ಲವೂ ತನಗೆ ತಿಳಿದೆತ್ತೆಂದು ಕವಿಯು ಸೂಚಿಸಿರುವುದನ್ನೂ ಕಾಣಬಹುದು. ಈಗ ಸಮುದ್ರದ ವ್ಯಾಪ್ತಿಯನ್ನು ಕುರಿತಂತೆ ಈ ಕಾವ್ಯದ ಹೇಳಿಕೆ ಏನೆಂಬುದನ್ನು ಇಲ್ಲಿ ನೋಡಿರಿ:
(ಮೂಲಸಾಹಿತ್ಯದ ೧೩ನೇ ಅಧ್ಯಾಯದ ಪಾದಪದ್ಯಗಳು ಹಾಗೂ ಪೂರ್ಣಪದ್ಯಗಳಲ್ಲಿ ಅಶ್ವಗತಿಯಲ್ಲಿ ಸಾಗಿದಾಗ ಉಗಮವಾಗುವ ಅಂತಸ್ರಾಹಿತ್ಯದ ೧೩ನೇ ಪದ್ಯ)
”ರಮೆಯಸುತ್ತಿಹಸಾಗರದಂತೆಗಂಭೀರರ್|ಸಮರದೊಳ್ಕರ್ಮವಗಲವರ್||
ಸಮತೆಯೊಳ್ಮಂದರಾಚಲದಂತೆಉಪಸರ್ಗ|ವಮರಲಕಂಪರಾಗಿಹರುಮ್|| ” ”ವ್ಯಕ್ತಿಜೀವನದ ಸಮಸ್ಯೆಗಳಿಗೆ ಮೂಲಕಾರಣವಾದ ’ಕರ್ಮ’ ವನ್ನು ಇಲ್ಲಿನ ಜನ ಯುದ್ಧದ ಮೂಲಕವೂ ಪರಿಹರಿಸಿಕೊಳ್ಳುತ್ತಾರೆ.  ಮಂದರ ಪರ್ವತಕ್ಕೆ ಸಮಾನವಾದ ಕಷ್ಟ, ತೊಂದರೆಗಳನ್ನು ಹೂವಿನ ಪರಿಮಳದಂತಾಗಿಸಿಕೊಳ್ಳುತ್ತಾರೆ. ಇವರು ಭೂಮಿಯನ್ನು ಸುತ್ತಿರುವ ಸಾಗರದಂತೆ ಗಂಭೀರವಾಗಿರುತ್ತಾರೆ’ ಎಂದು ಇಲ್ಲಿನ ಸಾಧು ಸಂತರ ಸಾಮರ್ಥ್ಯವನ್ನು ಸೂಚಿಸುವಲ್ಲಿ ಹೇಳಿರುವುದಿದೆ. ಅಂದರೆ ೧೨೦೦ ವರ್ಷಕ್ಕೆ ಮೊದಲೇ ಇಲ್ಲಿನವರಿಗೆ ’ಭೂಮಿಯಸುತ್ತಲೂ ಸಾಗರವು ಆವರಿಸಿಕೊಂಡಿದೆ’ ಎಂಬ ಮಾಹಿತಿಯು ತಿಳಿದಿರಲೇ ಬೇಕಲ್ಲವೇ!!??
                                      -ಸಿರಿಭೂವಲಯದಸುಧಾರ್ಥಿ.

No comments:

Post a Comment