Sunday 9 February 2020

ಸಿರಿಭೂವಲಯವು ಸೂಚಿಸುವ ಜೀವನದ ಹಾದಿ


ಜಗತ್ತಿನಲ್ಲಿ ವ್ಯಕ್ತಿಜೀವನವು ಧರ್ಮ ಕರ್ಮಗಳ ಸೊಂಯೋಗದ ಫಲವಾಗಿದೆ!  ಯೋಗ ಭೋಗಗಳ ಒಕ್ಕೂಟವಾಗಿದೆ. ಧರ್ಮವನ್ನು ಬದಿಗಿರಿಸಿ, ಕರ್ಮದಲ್ಲೇ ಮುಳುಗಿದರೆ ಅಪಾಯ! ಕರ್ಮವನ್ನು ನಿರಾಕರಿಸಿ ಧರ್ಮದಲ್ಲೇ ಐಕ್ಯವಾದರೂ ಅಪಾಯತಪ್ಪಿದ್ದಲ್ಲ!!  ಭೋಗದಲ್ಲೇ ಆಸಕ್ತರಾಗಿ ಯೋಗವನ್ನು ಬದಿಗಿರಿಸಿದರೂ ಕಷ್ಟು; ಭೋಗವನ್ನು ತೊರೆದು ಯೋಗದಲ್ಲೇ ಮುಳುಗಿದರೂ  ಸರಿಯಿರದು!  ಯೋಗ ಭೋಗಗಳನ್ನು ಸಮನ್ವಯಗೊಳಿಸಿಕೊಳ್ಳುವುದು ಅವಶ್ಯಕ.
ಧರ್ಮಕರ್ಮಗಳು; ಯೋಗಭೋಗಗಳು ಜೀವನದ ಅವಿಭಾಜ್ಯ ಅಂಗಗಳೆಂದೂ, ಅವುಗಳನ್ನು ಸಮನ್ವಯಗೊಳಿಸಿಕೊಳ್ಳುವುದು ಸಾರ್ಥಕಜೀವನಕ್ಕೆ ಅನಿವಾರ್ಯವೆಂದೂ ಸಿರಿಭೂವಲಯವು ಸಮರ್ಥಿಸುತ್ತದೆ. "ಸರ್ವಾರ್ಥಸಿದ್ಧಿಸಂಪದದನಿರ್ಮಲಕಾವ್ಯ|ಧರ್ಮವಲೌಕಿಕಗಣಿತ|ನಿರ್ಮಮ ಬುದ್ಧಿಯನವಲಂಬಿಸಿರುವರ| ಧರ್ಮಾನುಯೋಗದವಸ್ತು|| ಧರ್ಮಸಮನ್ವಯಕಾವ್ಯ|ಧರ್ಮಸಮನ್ವಯಗಣಿತ| ಮುಂತಾದ ಪದ್ಯಗಳಮೂಲಕ ಗಣಿತಶಾಸ್ತ್ರದ ’ಸಂಖ್ಯಾತ’  ’ಅಸಂಖ್ಯಾತ’  ’ಅನಂತಾಂಕ’  ’ಉತ್ಕೃಷ್ಟದನಂತ’  ಮುಂತಾದ ಗಣಿತಾಂಕಗಳ ಸ್ಥಾನನಿರ್ದೇಶನದ ತಾಂತ್ರಿಕ ಪದಗಳನ್ನು ಸೂಚಿಸಲಾಗಿದೆ. ಅಧ್ಯಾಯದ ಅಂತ್ಯಭಾಗದಲ್ಲಿ  ’ಆದಿಮದ ’ಅ’ಕ್ಷರಮಂಗಲ| ನವ ಆ ಅ ಅ ಅ ಅ ಅ ಅ ಅ ಅ| ಎಂದು ಸೂಚಿಸಿದ್ದು,  ೫೯ನೇ ಅಧ್ಯಾಯದಲ್ಲೂ ಕೊನೆಯಕ್ಷರದ ಸ್ತಂಬಕಾವ್ಯದಲ್ಲಿ  ಈರೀತಿ ಒಂಬತ್ತು ’ಅ’ ಕಾರಗಳನ್ನು ಸೂಚಿಸಿರುವುದು ಕಾಣಬರುತ್ತದೆ.
                               -ಸಿರಿಭೂವಲಯದಸುಧಾರ್ಥಿ.

No comments:

Post a Comment