Monday 17 December 2012

ಸಿರಿಭೂವಲದ ಬಗ್ಗೆ ಪ್ರೊ. ಜಿ ವೆಂಕಟಸುಬ್ಬಯ್ಯನವರೊಡನೆ ವಿಚಾರ ವಿನಿಮಯ

OLYMPUS DIGITAL CAMERAOLYMPUS DIGITAL CAMERA    
ಯಾವ ಮುನ್ಸೂಚನೆ ಇಲ್ಲದೆ ನಮ್ಮ ರಿಕ್ಷಾ ಪ್ರೊ. ಜಿ.ವೆಂಕಟಸುಬ್ಬಯ್ಯನವರ ಮನೆ ಮುಂದೆ ನಿಂತಾಗ, ನಮಗೆ ಅಚ್ಚರಿ ಕಾದಿತ್ತು. ನಗುಮುಗ ಹೊತ್ತ ವೆಂಕಟಸುಬ್ಬಯ್ಯನವರು ನಮ್ಮನ್ನು ಎದಿರುಗೊಳ್ಳಲು ನಿಂತಂತೆ ಮನೆಯ ಗೇಟ್ ನಲ್ಲೇ ನಿಂತಿರಬೇಕೇ! ನಗುಮೊಗದಿಂದಲೇ ಒಳಗೆ ಬನ್ನಿ, ಎಂದರು ಶ್ರೀ ಸುಧಾರ್ಥಿಯವರು ನನ್ನ ಪರಿಚಯ ಮಾಡಿಕೊಟ್ಟರು. ಸುಮಾರು ಅರ್ಧಗಂಟೆ ಉಭಕುಶಲೋಪರೀ ಮಾತನಾಡಿದಮೇಲೆ ಅವರ ಮಾತುಗಳನ್ನು ರೆಕಾರ್ಡ್ ಮಾಡಿಕೊಳ್ಳಲು ಅವರ ಅನುಮತಿ ಪಡೆದು ನನ್ನ ರೆಕಾರ್ಡರ್ ಅವರ ಮುಂದಿಟ್ಟೆ. ಮಾತುಕತೆ ಶುರುವಾಯ್ತು.
"ಸಿರಿಭೂವಲಯ" ಗ್ರಂಥದ ಬಗ್ಗೆ ಅದೇಕೋ ಸತ್ಯವು ಹೊರಬರುತ್ತಿಲ್ಲ. ಸಾಹಿತಿಗಳು ಸಂಶೋಧಕರಿಗೆ ಅದೇಕೋ ಸಿರಿಭೂವಲಯದಲ್ಲೇನಿದೆ, ಎಂಬ ವಿಚಾರವನ್ನು ತಿಳಿಯುವ ಕಾತುರತೆ ಕಾಣುತ್ತಿಲ್ಲ. ಅಥವಾ ಸತ್ಯ ಹೊರಬರುವುದು ಕೆಲವರಿಗೆ ಬೇಕಿಲ್ಲವೇನೋ. ಅಂತೂ ಕಳೆದ ಇಪ್ಪತ್ತೈದು ವರ್ಷಗಳಿಂದ ಈ ಗ್ರಂಥದ ಬಗ್ಗೆ ಸಂಶೋಧನೆ ಮಾಡುತ್ತಾ ಅದರಲ್ಲಿ ಅದ್ಭುತ ಅಡಗಿದೆ ಎನ್ನುವ ಸುಧಾರ್ಥಿಯವರ ಮಾತು ನಿಜವಾಗಬೇಕು, ಇಲ್ಲವೇ ಸುಳ್ಳಾಗಬೇಕು...ಎಂಬುದು ನನ್ನ ಅನಿಸಿಕೆ ಆ ದೃಷ್ಟಿಯಿಂದ ಇಂತಾ ಹಿರಿಯರನ್ನು ಮಾತನಾಡಿಸಿ ನಿಮ್ಮ ಮುಂದೆ ಅವರ ಮಾತುಗಳನ್ನು ಯಥಾವತ್ತಾಗಿ ಅವರ ಧ್ವನಿಯಲ್ಲೇ ಇಟ್ಟಿರುವೆ. ಸಾಹಿತ್ಯಾಸಕ್ತರು, ನಿಜವ ತಿಳಿಯಬೇಕೆನ್ನುವ ಕುತೂಹಲಿಗಳು ದಯಮಾಡಿ ಸನ್ಮಾನ್ಯ ವೆಂಕಟಸುಬ್ಬಯ್ಯನವರ ಮಾತುಗಳನ್ನು ಕೇಳಬೇಕೆಂಬುದು ನನ್ನ ಕೋರಿಕೆ. ಆ ನಂತರ ಒಂದು ದಿನ ವಿಚಾರಗೋಷ್ಠಿ ನಡೆಯಬೇಕು, ಈ ಬಗ್ಗೆ ಸಿರಿಭೂವಲಯದ  ಅಭಿಮಾನಿಗಳು ನಿಮ್ಮ ಅಭಿಪ್ರಾಯ ತಿಳಿಸಬೇಕು.
ಪ್ರೊ. ಜಿ. ವೆಂಕಟಸುಬ್ಬಯ್ಯನವರ ಬಗ್ಗೆ ತಿಳಿದುಕೊಂಡಿಲ್ಲದವರು ಕರ್ನಾಟಕದಲ್ಲಿ ವಿರಳ. ಹಾಗಾಗಿ ಅವರ ಪರಿಚಯ ಇಲ್ಲಿ ಮಾಡುವುದು ಅನಗತ್ಯ. ಆದರೂ ಗೂಗಲ್ ಮೂಲಕ ಶ್ರೀಯುತರ ಫೇಸ್ ಬುಕ್ ತೆರೆದಾಗ ಸಿಕ್ಕ ಮಾಹಿತಿಗಳನ್ನು ಓದುಗರ ಗಮನಕ್ಕಾಗಿ ಪ್ರಕಟಿಸಿರುವೆ.
ಮಾಹಿತಿ ಕೃಪೆ: ಫೇಸ್ ಬುಕ್
Biography
Early life and education: Venkatasubbaiah was born on August 23, 1913. He was born and brought up in Mysore. He is the son of renowned Kannada and Sanskrit scholar Ganjam Thimmanniah. He secured his Masters of Arts degree from the Maharaja college in Mysore in the year 1932, ranking first in the university. He took up the teaching profession and taught Kannada language at the Maharaja's College in Mysore and the Vijaya college in Bangalore.He served as Head of department of Kannada in Vijaya College and Prof.V.T.Srinivasan was the Principal of that college from 1951 to 1972. Literary contributions: Venkatasubbaiah has compiled more than 10 dictionaries, including an eight-volume Kannada-Kannada Nighantu (Dictionary). This dictionary has also been translated to the Braille language by the Braille Transcription Centre of the Canara Bank Relief and Welfare Society. He has been writing the popular column, Igo Kannada for over a decade in the major Kannada daily, Prajavani. The articles published in Igo Kannada have been compiled into a book in two volumes. He has also authored a dictionary entitled Klishtapada Kosha (a dictionary of complex Kannada words) which was released to mark the Suvarna Karnataka (Silver Jubilee of the formation of Karnataka). It is the first of its kind in Kannada language which covers different language specifications such as derivation, punctuation, phoneme and morphological patterns of Kannada language as the language has evolved over the centuries. He has served as the vice president of the Lexicographical Association of India for 17 years. In 1998, he was appointed as an advisor to the multilingual dictionary project of the Institute of Asian Studies, Chennai, which comprises Japanese, Kannada, English and Tamil. He was also appointed as a consultative committee member in the Telugu lexicon project initiated by the Telugu Academy of the Government of Andhra Pradesh.
Description
Prof. G. Venkatasubbaiah (Kannada: ಪ್ರೊ ಜಿ.ವೆಂಕಟಸುಬ್ಬಯ್ಯ) (born August 23, 1913) is a Kannada lexicographer who has compiled over 10 dictionaries, edited over 25 books and published several papers. He is regarded as the father of the modern Kannada dictionary
Awards:
Venkatasubbaiah has been conferred numerous awards, important among which are the Kannada Sahitya Academy award, the Karnataka Rajyotsava award and the Nadoja award, which is honorary degree equivalent to the D.Litt degree. He has also been awarded the Masti Award by the Government of Karnataka. He was President of the Kannada Sahitya Parishat from 1964-69. He has also chaired the annual Kannada literary festival, Alvas Nudisiri in 2007.He was also congratulated at the first international lexicographers meeting held in Annamalai University in Tamil Nadu.
Special occasion: Writers Chennaveera Kanavi, G.S. Shivarudrappa, G. Venkatasubbaiah, L.S. Seshagiri Rao and Sa.Shi. Marulaiah at a function to felicitate writer and historian M. Chidananda Murthy (second from left) on the occasion of his 80th birthday, in Bangalore on Tuesday. — Photo: V. Sreenivasa Murthy Special occasion: Writers Chennaveera Kanavi, G.S. Shivarudrappa, G. Venkatasubbaiah, L.S. Seshagiri Rao and Sa.Shi. Marulaiah at a function to felicitate writer and historian M. Chidananda Murthy (second from left) on the occasion of his 80th birthday, in Bangalore on Tuesday. — Photo: V. Sreenivasa Murthy      
---------------------------------------------------------------------------------------------
ಸುಧಾರ್ಥಿಯವರ ಮಾತುಗಳಲ್ಲಿ.....
ಹಲ್ಮಿಡಿ ಶಾಸನಕ್ಕಿಂತಲೂ ಹಳೆಯ ಕನ್ನಡ ಶಾಸನಗಳಿವೆ
ಋಗ್ವೇದವೇ  ಎಲ್ಲಾ  ಜ್ಞಾನಿಗೂ ಮೂಲ
ಿರಿೂವ ಗ್ರ ಅಕ್ೂಪಲ್ಲೂ ಇದ
ಂದಿ ಬೆಟ್ಟ ಅತ್ಯಂತ ಪ್ರಾಚೀನಾದದ್ದೇ?
ಾವೀರತ್ತು ಬುದ್ಲ್ಲಿ ಯಾರು ಮೊದಿಗ 

"ಸಿರಿಭೂವಲಯ ಒಂದು ರಾಷ್ಟ್ರೀಯ ಸಂಪತ್ತು ಅದರಲ್ಲಿರುವ   ಜ್ಞಾನ ಹೊರಬರಬೇಕ" ಪ್ರೊ. ಜಿ ವೆಂಕಟಸುಬ್ಬಯ್ಯನವರ ಖಚಿತ ನಿಲುವು
----------------------------------------------------------------------------------




ಅಭಿಪ್ರಾಯಗಳು:

ಸಿರಿ ಭೂ ವಲಯ ಒಂದು ಅತ್ಯಪೂರ್ವ ಗ್ರಂಥ ಎನ್ನುವುದು ನಿರ್ವಿವಾದ, ಅದೇ ರೀತಿ ಹಲ್ಮಿಡಿ ಗಿಂತಲೂ ಬಹಳ ಹಿಂದೆಯೇ ಕನ್ನಡ ಶಾಸನಗಳು ಬಂದಾಗಿತ್ತು. ಹಾಗೆಯೇ ಕನ್ನಡ ಲಿಪಿಯ ದೃಷ್ಟಿಯಿಂದ ಅದಕ್ಕೂ ಮೊದಲು ಅಂದರೆ ೨ನೆ ಶತಮಾನದ ಕಾಲಕ್ಕೆಲ್ಲ ಕನ್ನಡ ಲಿಪಿ ಬಳಕೆ ಗೊಂದಾಗಿತ್ತು. ಬ್ರಾಹ್ಮಿಯಿಂದ ನೇರವಾಗಿ ಕವಲೊಡೆದು ಬಂದ ಕನ್ನಡ ಕ್ರಿಸ್ತ ಪೂರ್ವಕ್ಕೆ ಒಂದು ಹಂತ ತಲುಪಿತ್ತು, ಅಂದಾಗ ಕನ್ನಡ ಇನ್ನು ಹಿಂದಕ್ಕೆ ಇದ್ದಿರಲೇ ಬೇಕು. ಅಂದರೆ ಕ್ರಿಸ್ತ ಪೂರ್ವ ೩ನೆ ಶತಮಾನದ ಸುಮಾರಿಗೆ ಕನ್ನಡ ಇದ್ದಿರಲೇ ಬೇಕು.




Friday 2 November 2012

ಸಿರಿಭೂವಲಯ ಒಂದು ಪರಿಚಯ

The Tenth wonder of the world
SARVA BHASHAMAYI BHASHA SIRIBUVALAYA
(A Book by name SarvaBhashamayIbhasha Siribhuvalaya is written in Kannada numerals, which comprised all Languages of the universe)
                   The volume of this amazing Book is about 16,000 pages. These pages are named as “CHAKRAS’ These chakras are in the form of a Magic Square, formed by small 27 squares horizontally and 27 squares vertically. These small squares filled with Kannada numerals from 1 to 64 as per formula. These 1 to 64 numerals represents 64 ancient Kannada Alphabets, which can pronounce and write all sounds /words belongs to 718languages of the Universe! Without any ambiguity SiriBhuvalaya is undoubtedly an amazing poem that belongs to all mankind.
The custodian of this ancient Kannada Numeric Literature was Mr. Yallappa Shastri, who was an Ayurvedic Medical representative in Bangalore. However he was not in a position to open the secret of this Book. Deciphering of this numeric literature was not an ordinary Job to do during 1930.
Mr. Karlamangalam Srikantaiah –A great legend in Kannada Literature –an unique scholar in his life time-with-out any degree or doctorate from any university, but studied only up to primary 3rd year, made an attempt to meet this challenge and ultimately succeeded. Just because of this reason his effort in this research work was agitated by the scholars. Dr. S. Srikantashastri M.A.D.Lit,-a great name in the study of Indian history has scrutinized the authenticity of Karlamangalam Srikantaiah’s effort in this project. He also discarded all the childish and unfair comments of kannada scholars during his life time. The same situation is continuing till date.
The metre (prosody) which is used by Kumudendu to compose this astonishing work is ‘Shabdagana’, which was a branch of ‘Sangthya’ This information is available in his work itself, and was clearly pointed out by K. Srikantaiah. Kannada scholars are not accepting this truth.
During 1953, a part of this book (about 1270 chakras out of 16,000 chakras) was deciphered, edited, printed, published and propagated by Karlamangalam Srikanatiah with the help of the custodian of the original manuscript, and Mr. K. Ananthasubbarao This attracted the notice of the president of India, Dr. Rajendra Prasad. As per his instruction, Government of India made an arrangement to preserve some portion of this work in the form of micro film.
The author of Sarvabhashamayibhasha Siribhuvalaya is Kumudendu . A Jain saint who lived during 800 A.D. He was the discipal of Virasena; Jinasena and Guru of Rashtrakuta Amoghavarsha Nrupatunga- and saigotta Sivamara of ganga Dynasty at Talakad..
Kumudendu was popularly known as yalavabhurisi and produced an unparalleled work Viz , siribhuvalaya with a brilliance of rarity, he stands out as a meteor, Though coming to lime light, this precious work of literature is not merely cornered, but has remained unknown, which is still a mystery. May be it is due to callous indifference, negligence and egoism of scholars in kannada literary field. What should have been proclaimed from house tops as the best literary work of the universe has gone to incognito-which is our misfortune.
Siribhuvalaya is comprising of the wisdom of 362 religions. All the branches of knowledge beginning from cattle rearing, Atomic sciences, Ayurveda, Aerodynamics, Astrology, Numerology, Physics, Chemistry, Metallurgy, Philosophy, Politics, culture, science of matrimony, Theosophy, History, Music, Dance and other subjects appear in this work. It is a fact, that this amazing work is also comprising of the ancient literature of India, like Ramayana; Bharatha; Bagavatha; bhagavadgeetha; Sahasranamas etc. In general all the information regarding to the subject of ‘knowledge’ are embedded in this unique work. This is a big ocean of Knowiedge.
Some great personalities from abroad have seen this Siribhuvalaya and described it as “The Tenth Wonder Of The World”.
The treasure house of knowledge designed to realize the achievements of individuals in this and other world,(Lowkika and paramarthika) Siribhuvalaya is basically a religious work. Sanathana Dharma is the root of all Dharmas., it is this part that siribhuvalaya heralds.
Vedas and Upanishads are the basics of Sanathana Dharma. Jainism does not concur with Vedas and Upanishads. It is an account of this factor (Hostility/ Controversy/ Disagreement) the Jains, Jain Scholars did not respect this great work with the honor it richly deserved, though its author was Jain, labeled as ‘Yapaniya’. Other religions of Kannada literary field also did not identify and recognize this unique work, this is just for the reason which they only know it better.
Mr. K. Ananthasubbarao who was the founder of kannada Shorthand and Typewriter, and a close associate of  karlamangalam Srikantaiah and yallappa Shasthti was propagating this Book throughout his lifetime. All the authentic information’s about this Book was induced to K.R. Shankaranarayana , who was working in ITI.Bangalore. He is studying this Book Since 1978, and collecting all internally generated literature from 1953 publication.
Since 2000 A.D, ‘Pustakashakthi prakashana‘-A Bangalore based publication is publishing number .of Books on this work, With the assistance of some well known scholars, headed by Dr. T.V. venkatachala sastry, and throwing some light on this work in their own way.
Recently, a Book by name ‘Sarvabhashamayibhasha Siribhuvalayasara’ written By: Sudharthy Hassan, (the penname of K.R.Shankaranarayana.) has been published by Sri Kashisheshashastri Caritable trust, Bangalore, during 2010. All the authentic information’s which belongs Siribhuvalaya of 1953 edition, and a general review of Pustakashakthi publications work, belongings to Siribhuvalaya are discussed in detail, in this book. It is a use full guide to forthcoming researchers on Kumudendu’s wonderfull work. More details can be had in this work about “kumudendumuni’s siribhuvalaya’. It is very difficult to go through the text which is internally generated out of 1953 edition. To over come this, Sudharthy Hassan made another effort to simplify the text, and published a selected poems of his siribhuvalayasara. ‘Siribhuvalayada AYDHA SANGATHYA PADYAGALA SANGRAHA is published during 2011.
The house top of Kannada literature were not able to experience the very rare essence of Kumudendu’s work, since last 60 years. Sudharthy Hassan has made it possible to enjoy this beauty by any interested common reader who can go through modern Kannada script. Through this ‘Aydha Sangathya padyagala sangraha’ author will take the common readers to very near to Kumudendu without any hurdle. More details can be had from above mentioned two Books which are available with leading Book sellers in Bangalore, and also with the author.
May contact : SUDHARTHY HASSAN, HALUVAGILU, THATTEKERE POST, HASSAN KASABA, HASSAN. 573 201. Mob. NO. 9449946280.

"ಸಿರಿಭೂವಲಯವನ್ನು "ಅಧ್ಯಯನ ಮಾಡಲು ಮನವಿ


ವೇದಸುಧೆಯ ಪ್ರೀತಿಯ ಅಭಿಮಾನಿಗಳೇ, ನಮಸ್ತೆ.
ಹಾಸನದ ಶ್ರೀ ಸುಧಾರ್ಥಿಯವರು ತಮ್ಮ ಸುಮಾರು ಇಪ್ಪತ್ತೈದು ವರ್ಷಗಳ ಸತತ ಪರಿಶ್ರಮದಿಂದ ಬಹಳ ಅಪರೂಪವಾದ ವಿಚಿತ್ರವಾದ, ವಿಶಿಷ್ಟವಾದ ಸಿರಿಭೂವಲಯ ಎಂಬ ಒಂದು ಅಂಕರೂಪದ ಗ್ರಂಥವನ್ನು ನಮಗೆ ಪರಿಚಯಿಸಲು ಹೊರಟಿದ್ದಾರೆ. ಸರಳವಾಗಿರದ ಅವರ ಈ ಪ್ರಯತ್ನವು ಕಷ್ಟಕರವೇ ಹೌದು. ವಿಶ್ವಕ್ಕೆ ನೀಡಬಹುದಾದ ಜ್ಞಾನವು ಸಿರಿಭೂವಲಯ ಗ್ರಂಥದಲ್ಲಿ ಅಡಗಿದೆ ಎನ್ನುವುದು ಅವರ ವಿಶ್ವಾಸ.ಏನಾದರಾಗಲೀ, ಅವರ ಲೇಖನವನ್ನು ದಯಮಾಡಿ ಓದಿ ನಿಮ್ಮ ಪ್ರಶ್ನೆಗಳನ್ನು ಕೇಳಿ, ಅವರೇ ನೇರವಾಗಿ ಉತ್ತರಿಸುವರು. ಸಾವಿರಾರು ವರ್ಷಗಳಿಂದ ಮೂಲೆಗೆ ಸೇರಿರುವ ಈ ಗ್ರಂಥದಿಂದ ಅನೇಕ ಅಚ್ಚರಿಯ ಮಾಹಿತಿಗಳು ಲಭ್ಯವಾಗಬಹುದು. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆಯೆಂದು ಹೇಳುವ ಸುಧಾರ್ಥಿಯವರ ಮಾತನ್ನು ಅಲ್ಲಗಳೆಯಲಾಗದು. ಅಷ್ಟೇ ಅಲ್ಲ ಬದುಕಿನ ಸೂತ್ರ ಅದರಲ್ಲಡಗಿದೆ ಎಂದು ಅವರು ಹೇಳುತ್ತಾರೆ! ವೇದಸುಧೆಯನ್ನು ವಿಶ್ವದ ಮೂಲೆ ಮೂಲೆಯಲ್ಲಿರುವ ಕನ್ನಡಿಗರು ಓದುತ್ತಿರುವ ಮಾಹಿತಿಯು ನಿತ್ಯವೂ ಲಭ್ಯವಾಗುತ್ತಿದೆ. ಸಾಫ್ಟ್ ವೇರ್ ಕ್ಷೇತ್ರದಲ್ಲಿ ಪರಿಣಿತ ಯುವಕರು ಸಂಶೋಧನೆಯ ದೃಷ್ಟಿಯಲ್ಲಿ "ಸಿರಿಭೂವಲಯವನ್ನು " ಅಧ್ಯಯನ ಮಾಡಬೇಕೆಂಬುದು ವೇದಸುಧೆಯ ಮನವಿ.ಅಧ್ಯಯನ ಮಾಡುತ್ತೀನೆನ್ನುವವರಿಗಾಗಿ ಸುಧಾರ್ಥಿಯವರು ಮಾಹಿತಿ ಒದಗಿಸುವರು. ಸಿರಿಭೂವಲಯ ಅಧ್ಯಯನ ಗೋಷ್ಟಿಯೊಂದನ್ನು ಹಾಸನದಲ್ಲಿ ಆರಂಭಿಸುವ ಪ್ರಯತ್ನ ಸಾಗಿದೆ. ಈ ವಿಚಾರವು ಯಾರಲ್ಲಿ ಆಸಕ್ತಿ ಮೂಡಿಸುತ್ತದೆಯೋ, ಯಾರಲ್ಲಿ ಸಂದೇಹ ಮೂಡುತ್ತದೆಯೋ ಅಂತವರು ತಮ್ಮ ವಿಚಾರವನ್ನು ಕಾಮೆಂಟ್ ಕಾಲಮ್ ನಲ್ಲಿ ಬರೆದರೆ ಚರ್ಚೆ ಮುಂದುವರೆಸಬಹುದು.

ಕನ್ನಡಕುಲಕೋಟಿಯ ಜನ್ಮಜನ್ಮಾಂತರದ ಜ್ಞಾನಸಂಪತ್ತು ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯ ಶಾಸ್ತ್ರೀಯಭಾಷೆಯ ಸ್ಥಾನಮಾನದ ಸಮಸ್ಯೆಗೆ ಇದೊಂದೇ ಸೂಕ್ತ ಪರಿಹಾರ !
ಸಿರಿಭೂವಲಯ ಎಂಬುದು ಒಂದು ಪ್ರಾಚೀನ ಕನ್ನಡ ಅಂಕಕಾವ್ಯ. ಕನ್ನಡದ ಒಂದರಿಂದ ೬೪ ರವರೆಗಿನ ಅಂಕಿಗಳನ್ನು ಮಾತ್ರ ಬಳಸಿ ಈ ಗ್ರಂಥವನ್ನು ರಚಿಸಲಾಗಿದೆ. ಸರ್ವಭಾಷಾಮಯೀಭಾಷಾ ಕನ್ನಡವರ್ಣಮಾಲೆಯ ೬೪ ಅಕ್ಷರಗಳನ್ನು ಈ ೬೪ ಅಂಕಿಗಳು ಪ್ರತಿನಿಧಿಸುತ್ತವೆ. ಒಂದೊದು ಪುಟದಲ್ಲಿಯೂ ಅಡ್ಡಸಾಲು ೨೭ ಹಾಗೂ ಉದ್ದಸ್ಸಾಲು ೨೭ ರಂತೆ ಒಟ್ಟು ೭೨೯ ಚಿಕ್ಕ ಚೌಕಗಳಿರುವ ಒಂದು ಪುಟವನ್ನು ಚಕ್ರ ಎಂದು ಕರೆಯಲಾಗುತ್ತದೆ.ಇಂಥ ೧೬೦೦೦ ಚಕ್ರಗಳು ಈ ಗ್ರಂಥದ ಒಟ್ಟುವ್ಯಾಪ್ತಿಯಾಗಿತ್ತು. ಅಂಕಿಗಳಿರುವಲ್ಲಿ ಅನ್ವಯವಾಗುವ ಅಕ್ಷರಗಳನ್ನು ಅಳವಡಿಸಿಕೊಂಡು; ಸುಮಾರು ೪೦ ಬೇರೆ ಬೇರೆ ಬಂಧಗಳಲ್ಲಿ ಓದಿದಾಗ, ಅದರಲ್ಲಿ ಆರುಲಕ್ಷ ಮೂಲ ಕನ್ನಡ ಸಾಂಗತ್ಯ ಪದ್ಯಗಳು ಹೊರಹೊಮ್ಮುತ್ತವೆ. ಇವುಗಳನ್ನು ಸೂಚನೆಗನುಗುಣವಾಗಿ ವಿಂಗಡಿಸಿಕೊಂಡು ಓದಿದಾಗ, ಅಕ್ಷರಕ್ಕೆ ಲಕ್ಷದಂತೆ ಜಗತ್ತಿನ ೭೧೮ ಭಾಷೆಗಳಿಗೆ ಸೇರಿದ, ೩೬೩ ಮತಧರ್ಮಗಳ ಸಮನ್ವಯ ಹಾಗೂ ಅಣುವಿಜ್ಞಾನ; ಆಕಾಶಗಮನ; ಆಯುರ್ವೇದ; ಅಂಕಗಣಿತ ಇತ್ಯಾದಿ ಸಕಲ ಜ್ಞಾ-ವಿಜ್ಞಾನಗಳಿಗೆ ಸೇರಿದ ಪ್ರಾಚೀನ ಸಾಹಿತ್ಯದ ಸಾರವು ನಮಗೆ ದೊರೆಯುತ್ತದೆ.೭೧೮ ಭಾಷೆಗಳ ಬೇರೆ ಬೇರೆ ಸಾಹಿತ್ಯವನ್ನು ಒಂದೆಡೆ ಕಟ್ಟಿರಿಸುವ ದಿಸೆಯಲ್ಲಿ ಬಳಸಿರುವ ಇಲ್ಲಿನ ಲಿಪಿಕ್ರಮವು ನಮಗೆ ಸ್ವಲ್ಪ ಅಪರಿಚಿತವೆನಿಸುವುದು ಸಹಜ. ಇಲ್ಲಿನ ಬರವಣಿಗೆಯಲ್ಲಿ ಪ್‌ಊರ್‌ಣ್‌ಆಕ್‌ಷ್‌ಅರ್‌ಅ ಕ್‌ರಮವಿಲ್‌ಲ. ಈ ಕ್ರಮದಲ್ಲಿ ಸಮಗ್ರ ಕಾವ್ಯವನ್ನು ಓದಿತಿಳಿಯುವುದು ಬಹಳ ಕಠಿಣವಾದ ಕಾರ್ಯ. ಕ್ರಿ.ಶ. ೮೦೦ ರರ ಸುಮಾರಿನಲ್ಲಿದ್ದ ಸುಪ್ರಸಿದ್ಧ ವ್ಯಾಖ್ಯಾನಕಾರ ವೀರಸೇನನ ಶಿಷ್ಯನೂ; ರಾಷ್ಟ್ರಕೂಟ ಚಕ್ರವರ್ತಿ ಮಾನ್ಯಖೇಟದ ಅಮೋಘವರ್ಷನಿಗೆ ಗುರುವೂ ಆಗಿದ್ದ ಕುಮುದೇಂದುವೆಂಬ ಜೈನ ಮುನಿಯು ತನ್ನ ಪ್ರಾಚೀನ ಗುರುಪರಂಪರೆಯ ಜ್ಞಾನಧಾರೆಯ ಆಧಾರದಲ್ಲಿ ರಚಿಸಿದ ಜಗತ್ತಿನ ಅತ್ಯದ್ಭುತ ಕನ್ನಡ ಅಂಕಕಾವ್ಯ ಈ ಸಿರಿಭೂವಲಯ.
ಈ ರೀತಿಯಲ್ಲಿ ಊಹಾತೀತವಾದ ಸಂಗತಿಯನ್ನು ಸಾಕ್ಷಾತ್ಕರಿಸಿಕೊಂಡು; ಕನ್ನಡದ ಅಂಕಿಗಳಿಗೆ ಅನ್ವಯವಾಗುವ ಪ್ರಾಚೀನ ಲಿಪಿಕ್ರಮವನ್ನು ರೂಪಿಸಿಕೊಂಡು; ಒಟ್ಟುಗ್ರಂಥದ ೬೦ ರಲ್ಲಿ ನಾಲ್ಕುಭಾUದಷ್ಟನ್ನು ಸಂಶೋಧಿಸಿ; ಅದರಲ್ಲಿ ನಾಲ್ಕನೇ ಒಂದುಭಾಗದಷ್ಟನ್ನು ೧೯೫೩ ರರಷ್ಟು ಹಿಂದೆಯೇ ಆಧುನಿಕ ಮುದ್ರಣ ಕ್ರಮದಲ್ಲಿ ಮುದ್ರಣ ಮಾಡಿಸಿ; ಕನ್ನಡಿಗರಿಗೆ ಓದಲು ಒದಗಿಸಿಕೊಟ್ಟ ಅನುಪಮ ಕನ್ನಡಾಭಿಮಾನಿ ಕರ್ಲಮಂಗಲಂ ಶ್ರೀಕಂಠಯ್ಯನವರೆಂಬ ಬಹುಭಾಷಾ ವಿಶಾರದರ ಶೈಕ್ಷಣಿಕ ಅರ್ಹತೆ ಕೇವಲ ಪ್ರಾಥಮಿಕ ೩ನೇ ತರಗತಿ ಎಂದರೆ, ಓದುಗರು ನಂಬಲಾರರೇನೋ! ಇದೊಂದೇ ಕಾರಣದಿಂದಾಗಿ ಅಂದಿನ ವಿದ್ವಾಂಸರು ಇವರ ಪ್ರತಿಭೆಯ ವಿರುದ್ಧ ಇಲ್ಲ ಸಲ್ಲದ ತಕರಾರು ತೆಗೆದು; ಇವರ ಅನುಪಮ ಸಂಶೋಧನೆಯನ್ನು ಮೂಲೆಗುಂಪು ಮಾಡುವಲ್ಲಿ ಯಶಸ್ವಿಯಾದರು.
ಸರಿಸಾಟಿಯಿಲ್ಲದ ಇವರ ಪ್ರಚಂಡ ಮೇಧಾಶಕಿಯಿಂದಾಗಿ ಬೆಳಕುಕಂಡ ಈ ಸಿರಿಭೂವಲಯz ೧೨೭೦ ಚಕ್ರಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಮೂಲಸಾಹಿತ್ಯವನ್ನು ಭಾರತದ ರಾಷ್ಟ್ರಪತಿ ಡಾ|| ರಾಜೇಂದ್ರ ಪ್ರಸಾದರು ಇದು ಕೇವಲ ಕನ್ನಡಭಾಷೆಯ ಸಾಹಿತ್ಯವಲ್ಲ; ಜಗತ್ತಿನ ಮಾನವಕುಲಕ್ಕೆ ಸೇರಿದ ಜ್ಞಾನದಗಣಿ ಎಂಬ ಅನಿಸಿಕೆಯಿಂದ ಅವುಗಳನ್ನು ಕೇಂದ್ರ ಸರ್ಕಾರದ ಪ್ರಾಚ್ಯಪತ್ರಾಗಾರ ಇಲಾಖೆಯಲ್ಲಿ ಮೈಕ್ರೋಫಿಲಂ ರೂಪದಲ್ಲಿ ಶಾಶ್ವತವಾಗಿ ಸಂರಕ್ಷಿಸುವ ಕಾರ್ಯ ನೆರವೇರಿಸಿದರು. ಕರ್ಲಮಂಗಲಂ ಶ್ರೀಕಂಠಯ್ಯನವರ ವಿದ್ವತ್ತು ಊಹಾತೀತವಾದುದು. ಅವರೊಬ್ಬ ಬಹುಮುಖ ಪ್ರತಿಭಾಶಾಲಿ. ಕ್ರಮಬದ್ಧವಾದ ಶಾಲಾಶಿಕ್ಷಣವಿಲ್ಲದೆಯೇ ಸ್ವಯಂಶಿಕ್ಷಣ ಕ್ರಮದಲ್ಲಿ ದೇಶವಿದೇಶಗಳಿಗೆ ಸೇರಿದ ಸುಮಾರು ೧೪ ಭಾಷೆಗಳಲ್ಲಿ ಅವರಿಗೆ ಸಂಶೋಧನೆಯ ಮಟ್ಟದ ಪಾಂಡಿತ್ಯವಿದ್ದುದನ್ನು ಗಮನಿಸಿದವರಿಗೆ; ಸಹಿಸಿದವರಿಗೆ ಮಾತ್ರವೇ ಅವರ ಮಹತ್ವದ ಅರಿವಾಗುತ್ತಿದ್ದುದು. ಈ ಕಾರಣದಿಂದಾಗಿಯೇ ಸುಪ್ರಸಿದ್ಧ ಭಾರತೀಯ ಇತಿಹಾಸ ಪ್ರಾಧ್ಯಾಪಕ ಡಾ|| ಎಸ್. ಶ್ರೀಕಂಠಶಾಸ್ತ್ರಿಗಳು ಇವರ ಅಗಾಧವಾದ ಪ್ರತಿಭೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
ಕನ್ನಡಭಾಷೆ; ಸಾಹಿತ್ಯ; ಸಂಸ್ಕೃತಿ; ಜನಜೀವನದ ಪರಿಸರ ಮುಂತಾದುವುಗಳ ನೆಲೆ-ಬೆಲೆಯನ್ನು ಕುರಿತು ಚಿಂತಿಸಿ, ಚರ್ಚಿಸುವುದಕ್ಕಾಗಿ ತಾಲ್ಲೂಕು ಮಟ್ಟದಿಂದ ಆರಂಭಿಸಿ; ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ವಿಶಮಟ್ಟದಲ್ಲಿ ಸಮ್ಮೇಳನಗಳು ನಡೆದು, ಇತಿಹಾಸ ನಿರ್ಮಿಸುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಆದರೆ, ಜಗತ್ತಿನ ಹತ್ತನೇ ಅಚ್ಚರಿ ಎಂಬುದಾಗಿ ವಿದೇಶೀ ವಿದ್ವಾಂರುಗಳಿಂದಲೂ ಪ್ರಶಂಸೆ ಪಡೆದಿರುವ ಜಗತ್ತಿನ ಅತ್ಯಂತ ಪ್ರಾಚೀನ ಕನ್ನಡಅಂಕಕಾವ್ಯ ಸರ್ವಭಾಷಾಮಯೀಭಾಷಾ ಸಿರಿಭೂವಲಯದ ವಿಚಾರವನ್ನು ಕುರಿತು ಖಚಿತವಾಗಿ ಯಾವುದೇ ಒಂದು ವಿಸ್ತೃತ ಚರ್ಚೆಯೂ ಕಳೆದ ೬೦ ವರ್ಷಗಳಿಂದ ಇದುವರೆವಿಗೂ ನಡೆದ ದಾಖಲೆ ಇರುವುದು ಅಪರೂಪ.! ಈ ಅಚ್ಚರಿಯ ಅಂಕಕಾವ್ಯವನ್ನು ಕುರಿತು ಬಹಳ ಅಚ್ಚರಿಯ ಕಾವ್ಯ ಅಮೋಘವಾದ ಸಾಹಿತ್ಯ ಎಂಬ ಉದ್ಘಾರವನ್ನು ಹೊರತು ಪಡಿಸಿ; ಈ ಕಾವ್ಯದಲ್ಲಿ ಏನಿದೆ? ಎಂಬುದನ್ನು ಕುರಿತು ಸಾಮಾನ್ಯ ಓದುಗರಿಗೆ ನಿಖರವಾದ ಪರಿಚಯ ಮಾಡಿಕೊಡುವ ಪ್ರಯತ್ನವು ಇದುವರೆವಿಗೂ ನಡೆಯಲೇ ಇಲ್ಲವೆಂದರೆ ತಪ್ಪಾಗಲಾರದು.
ಈಚೆಗೆ ಬೆಂಗಳೂರಿನ ಪುಸ್ತಕಶಕ್ತಿ ಪ್ರಕಾಶನದವರು ನಡೆಸಿದ ಪ್ರಯತ್ನದಿಂದಾಗಿ; ನಾಡಿನ ಸುಪ್ರಸಿದ್ಧ ವಿದ್ವಾಂಸರಾದ ಡಾ|| ಟಿ. ವಿ. ವೆಂಕಟಾಚಲಶಾಸ್ತ್ರಿಯವರ ನೇತೃತ್ವದಲ್ಲಿ ವಿದ್ವಾಂಸರ ತಂಡವೊಂದು ಸುಮಾರು ಒಂದುದಶಕದ ಕಾಲ ಶ್ರಮವಹಿಸಿ ಈ ಗೃಂಥದ ೧೯೫೩ ರರ ಮುದ್ರಣವನ್ನು ತಮ್ಮದೇಆದ ಹಾದಿಯಲ್ಲಿ ಪರಿಷ್ಕರಿಸಿ ಅಪೂರ್ಣವಾಗಿ ಪುನರ್ಮುದ್ರಿಸಿದ್ದಾರೆ. ಆದರೆ ಅಲ್ಲ್ಲಿನ ವಿವರಗಳಿಂದ ಸಿರಿಭೂವಲಯದ ವಿಚಾರವು ಇನ್ನಷ್ಟು ಗೊಂದಲದ ಗೂಡಾಗಿದೆ!
ಮುದ್ರಿತವಾಗಿರುವ ಭಾಗದ ಸಿರಿಭೂವಲಯವನ್ನು ಅಭ್ಯಾಸಮಾಡುವುದಕ್ಕೂ; ಅರ್ಥಮಾಡಿಕೊಳ್ಳುವುದಕ್ಕೂ ಬೇರೆಯವರಿಗೆ ಅದನ್ನು ಪರಿಚಯ ಮಾಡಿಕೊಡುವುದಕ್ಕೂ ಅಪಾರವಾದ ಸಹನೆ; ಶ್ರಮಸಹಿಷ್ಣುತೆ ಹಾಗೂ ಅನ್ಯರಲ್ಲಿರುವ ಅಪಾರ ಮೇಧಾವಿತನವನ್ನು ಮುಕ್ತಮನಸ್ಸಿನಿಂದ ಮೆಚ್ಚುವ ಉದಾರಗುಣ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಮುದ್ರಿತ ಪ್ರತಿಯ ಒಂದೇವೊಂದು ಪುಟವನ್ನೂ ಓದಿತಿಳಿಯಲು ಸಾಧ್ಯವಾಗದು. ಇದರ ವಿಚಾರವಾಗಿ ಕುಮುದೇಂದುಮುನಿಯೇ ಯಾರೆಷ್ಟುಜಪಿಸಿದರಷ್ಟು ಸತ್ಫಲವೀವ ಕಾವ್ಯ ಅವರವರ ಶಕ್ತಿಗೆ ತಕ್ಕ ವರವಾದ ಕಾವ್ಯ ಮುಂತಾಗಿ ಸೂಚನೆ ನೀಡಿದ್ಧಾನೆ! ಈ ಗ್ರಂಥದ ಭಾಷೆಯ ಲಿಪಿಕ್ರಮವು ಇಂದಿನ ಸರಳಭಾಷೆಗೆ ಹೊಂದಿಕೊಂಡಿರುವ ವಿದ್ವಾಂಸರ ಸುಲಭವಾದ ಓದಿಗೆ ತೊಡಕಾಗಿ ಪರಿಣಮಿಸಿದೆ. ಈ ಕಾರಣದಿಂದ ನಮ್ಮ ವಿದ್ವಾಂಸರು ಇದಕ್ಕೆ ಕಬ್ಬಿಣದಕಡಲೆ ಎಂದು ಹೆಸರಿಟ್ಟು ದೂರವಿರಿಸಿದ್ದರು. ಈಗ ಈ ಅಚ್ಚರಿಯ ಅಂಕಕಾವ್ಯವನ್ನು ಸರಳವಾಗಿ ಪರಿಚಯಮಾಡಿಕೊಡುವ ಕೆಲಸವು ಯಶಸ್ವಿಯಾಗಿ ನಡೆದಿದೆ.
ಭಾರತದ ರಾಷ್ತ್ರಪತಿ ಡಾ|| ರಾಜೇಂದ್ರಪ್ರಸಾದರ ಆಣತಿಯಂತೆ ಕೇಂದ್ರಸರ್ಕಾರವು ಭಾರತೀಯ ಪ್ರಾಚ್ಯಪತ್ರಾಗಾರ ಇಲಾಖೆಯಲ್ಲಿ ಮೈಕ್ರೋಫಿಲಂ ರೂಪದಲ್ಲಿ ಸಂರಕ್ಷಿಸುವ ಸಂರಕ್ಷಿಸಿರುವ ಸುಮಾರು ೧೨೭೦ ಚಕ್ರಗಳಷ್ಟು ಭಾಗದ ಸಾಹಿತವು ಆದರೆ ಆಸಕ್ತಿಯಿರುವ ಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತಿಲ್ಲ!. ಆಸಕ್ತಿ ಇರುವ ಅಭಿಮಾನಿಗಳಿಗೆ ಇವುಗಳು ಕನ್ನಡನಾಡಿನಲ್ಲಿಯೇ ಸುಲಭವಾಗಿ ಕೈಗೆಟುಕುವಂತೆ ವ್ಯವಸ್ಥೆಮಾಡಬೇಕಾದುದು ರಾಜ್ಯಸರ್ಕಾರದ ಕರ್ತವ್ಯವಾಗಿದೆ. ಇಂದಿನ ಕಂಪ್ಯೂಟರ್ ಸಾಧನದ ನೆರವಿನಿಂದ ಈ ಗ್ರಂಥದ ಮುಂದಿನ ಸಂಶೋಧನೆಗೆ ನೆರವು ದೊರೆಯುವ ವಿಚಾರದಲ್ಲಿ ಸಾಫ್ಟ್‌ವೇರ್ ವಿಜ್ಞಾನಿಗಳಿಗೆ ಭರವಸೆಯಿದೆ. ಈ ವಿಚಾರದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಬಲ್ಲವರಿಗೆ; ನಿರ್ವಹಿಸಿರುವವರಿಗೆ ಈ ವಿಶ್ವವಿದ್ಯಾಲಯಗಳ ವಿದ್ಯಾವಂತರ ಮನ್ನಣೆಯು ಅದೇಕೋ ದೊರೆಯುತ್ತಿಲ್ಲ! ಕನ್ನಡಭಾಷೆಯಲ್ಲಿರುವ ಅಪರೂಪದ ಜ್ಞಾನನಿಧಿಯು ಇಂಥ ಕ್ಷುಲ್ಲಕ ಕಾರಣದಿಂದಾಗಿ ಜಗತ್ತಿನಲ್ಲಿ ಸೂಕ್ತವಾಗಿ ಬೆಳಕಿಗೆಬಾರದಂತಾಗಿದೆ.
ಕಳೆದ ಅರುವತ್ತು ವರ್ಷಗಳಿಂದ ಈ ಗ್ರಂಥವನ್ನು ಕುರಿತು ನಡೆದಿರುವ ಚಾರಿತ್ರಿಕ ಚಟುವಟಿಕೆಗಳ ಮಾಹಿತಿಗಳು ಹಾಗೂ ಗ್ರಂಥದ ಅಧ್ಯಯನದಿಂದ ದೊರೆಯುವ ಮಹತ್ತರವಾದ ಮಾಹಿತಿಗಳು ಮತ್ತು ಈ ಗ್ರಂಥದಲ್ಲಿ ಅಡಕವಾಗಿರುವ ಬೇರೆ ಬೇರೆ ಸಾಹಿತ್ಯದ ವಿವರವನ್ನು ಸೂಚಿಸಿ; ನಾನು ಈಗಾಗಲೇ ಸಿರಿಭೂವಲಯಸಾರ ಎಂಬ ಪರಿಚಯ ಗ್ರಂಥ ಪ್ರಕಟಿಸಿದ್ದಾಗಿದೆ. ಅದರಲ್ಲಿ ಕಳೆದ ೬೦ ವರ್ಷಗಳಿಂದಲೂ ಸಿರಿಭೂವಲಯದ ವಿಚಾರವಾಗಿ ನಡೆದಿರುವ; ನೆಡಯಬೇಕಾಗಿದ್ದ; ಮುಂದೆನಡೆಬೇಕಿರುವ ಚಟುವಟಿಕೆಗಳನ್ನು ಕುರಿತು ವಿವರವಾದ ಚರ್ಚೆನಡೆದಿದೆ.
ಈ ಗ್ರಂಥದ ಸಾಂಗತ್ಯ ಪದ್ಯಗಳನ್ನು ಇಂದಿನ ಸರಳವಾದ ಕ್ರಮದಲ್ಲಿಯೇ ಓದಲು ಸುಲಭ ಸಾಧ್ಯವಾಗುವಂತೆ ನಿರೂಪಿಸಿ; ಸಿರಿಭೂವಲಯದ ಆಯ್ದ ಸಾಂಗತ್ಯ ಪದ್ಯಗಳ ಸಂಗ್ರಹ ಎಂಬ ಕೃತಿಯನ್ನೂ ಪ್ರಕಟಿಸಲಾಗಿದೆ. ಈ ಕಾರ್ಯಗಳಿಗೆ ಸಕಾರದಿಂದ ಯಾವುದೇ ನೆರವನ್ನೂ ಅಪೇಕಿಸಿಲ್ಲ. ಏಕಾಂಗಿಯಾಗಿ ಒಬ್ಬ ವ್ಯಕಿಯು ಮಾಡಬಹುದಾದುದನ್ನು ನಾನು ಮಾಡಿ ಮುಗಿಸಿದ್ದೇನೆ. ಅದನ್ನು ಈ ಮೂಲಕ ನಿಮ್ಮೆಲ್ಲರ ಗಮನಕ್ಕೆ ತಂದಿದ್ದೇನೆ. ಇಂದಿನ ಕನ್ನಡದ ಬೆಳವಣಿಗೆಗೆ ಮೂಲಕಾರಣವಾಗಿರುವ ಕನ್ನಡ ಬೆರಳಚ್ಚುಯಂತ್ರಕ್ರಮದ ನಿರೂಪಕರಾದ ದಿವಂಗತ ಕೆ. ಅನಂತಸುಬ್ಬರಾಯರು ಈ ಗ್ರಂಥದ ಸಂಶೋಧಕ ಕರ್ಲಮಂಗಲಂ ಶ್ರೀಕಂಠಯ್ಯನವರ ಸಹಚರರಾಗಿದುಡಿದು; ತಮ್ಮ ಜೀವಮಾನಪೂರ್ತ ಸಿರಿಭೂವಲಯದ ಪ್ರಚಾರಮಾಡಿದವರು. ಅವರಿಂದ ಸಂಪೂರ್ಣವಾಗಿ ಖಚಿತ ಮಾಹಿತಿಗಳನ್ನರಿತು; ಕಳೆದ ೨೫ ವರ್ಷಗಳಿಂದ ಶ್ರದ್ಧೆವಹಿಸಿ ಈ ಗ್ರಂಥದ ಅಧ್ಯಯನ ಮಾಡಿರುವುದಷ್ಟೇ ನನ್ನ ಶಿಕ್ಷಣಾರ್ಹತೆ. ನನಗೂ ಯಾವುದೇ ವಿಶ್ವವಿದ್ಯಾಲಯ ಪದವಿಯ ಮುದ್ರೆ ಇಲ್ಲ!
ಈಚೆಗೆ ಬೆಂಗಳೂರು ಹಾಗೂ ಬೆಳಗಾವಿ ನಗರದಲ್ಲಿ ಏರ್ಪಾಡಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ವಿಶ್ವಕನ್ನಡ ಸಮ್ಮೇಳನದ ವೇದಿಕೆಯಲ್ಲಿ ಕಳೆದ ಐವತ್ತು ವರ್ಷಗಳಿಂದ ಕನ್ನಡ ಭಾಷೆಯ ಸಾಹಿತ್ಯ; ಸಂಸ್ಕೃತಿ; ಜನಜೀವನ; ರಾಜಕಾರಣ ಇತ್ಯಾದಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಆಗಿರುವ ಸಾಧನೆಯನ್ನು ಕುರಿತು ಆತ್ಮಾವಲೋಕನ ಮಾಡಿಕೊಳ್ಳಲು ಅವಕಾಶವಾಗುವುದೆಂಬ ನಿರೀಕ್ಷೆಯಿತ್ತು. ಆದರೆ ಸಿರಿಭೂವಲಯದ ವಿಚಾರವಾಗಿ ಅಭಿಮಾನಹೊಂದಿದ್ದ ಮಾನ್ಯಶ್ರೀ ಜಿ. ವೆಂಕಟಸುಬ್ಬಯ್ಯನವರೂ ಕೂಡ ಚಕಾರವೆತ್ತಲಿಲ್ಲ! ಪ್ರಜಾವಾಣಿಯಲ್ಲಿ ಈ ವಿಚಾರವಾಗಿ ಮನವಿಮಾಡಿರೂ ಅದು ಫಲನೀಡಲಿಲ್ಲ. ಕನ್ನಡಕುಲಕೋಟಿಯ ಜನ್ಮಜನ್ಮಾಂತರದ ಜ್ಞಾನಸಂಪತ್ತು ಎನಿಸಿಕೊಂಡಿರುವ ಸರ್ವಭಾಷಾಮಯೀಭಾಷಾ ಸಿರಿಭೂವಲಯ ಎಂಬ ಅಚ್ಚರಿಯ ಪ್ರಾಚೀನ ಕನ್ನಡ ಅಂಕಕಾವ್ಯದ ವಿಚಾರದಲ್ಲಿ ಕಳೆದ ಅರುವತ್ತು ವರ್ಷಗಳಿಂದಲೂ ಕನ್ನಡ ಕನ್ನಡಸಾಹಿತ್ಯದ ದಿಗ್ಗಜರು ಅನುಸರಿಕೊಂಡು ಬಂದಿರುವ ಉದಾಸೀನ ಧೋರಣೆಯಿಂದ ಉಂಟಾಗಿರುವ ತೊಡಕನ್ನು ಕುರಿತು ಇಲ್ಲಿ ಓದುಗರ ಗಮನಸೆಳೆಯಲು ಆಶಿಸುತ್ತೇನೆ.
ಕ್ರಿ.ಶ. ೮೫೦ರ ಸುಮಾರಿನಲ್ಲಿ ಅಮೋಘವರ್ಷ ನೃಪತುಂಗನ ಕಾಲದಲ್ಲಿ ರಚನೆಯಾದ ಕವಿರಾಜಮಾರ್ಗ ಎಂಬ ಲಕ್ಷಣಗ್ರಂಥವೇ ಕನ್ನಡದ ಪ್ರಾಚೀನ ಸಾಹಿತ್ಯ ಎಂದು ಕನ್ನಡ ಸಾರಸ್ವತ ಲೋಕದ ದಿಗ್ಗಜರು ನಿರ್ಧರಿಸಿಬಿಟ್ಟಿದ್ದಾರೆ! ಇದಕ್ಕೂ ಮೊದಲು ರಚನೆಯಾಗಿರುವ ಅಂಕಕಾವ್ಯ ಸಿರಿಭೂವಲಯ. ಈ ಗ್ರಂಥದಲ್ಲಿ ಕನ್ನಡದ ಪ್ರಾಚೀನತೆಯ ಬಗೆಗೆ ಖಚಿತವಾದ ಹೇಳಿಕೆಗಳಿವೆ. ೨೪ನೇ ತೀರ್ಥಂಕರ ಮಹಾವೀರನು ಕನ್ನಡಭಾಷೆಯಲ್ಲಿ ನೀಡಿರುವ ಪರಂಪರಾಗತ ಉಪದೇಶಗಳ ಸಾರವೇ ಈ ಗ್ರಂಥದ ಮೂಲವೆಂದು ಕುಮುದೇಂದುಮುನಿಯು ಸ್ಪಷ್ಟವಾಗಿ ಸೂಚಿಸಿದ್ದಾನೆ. ಅಂದರೆ ಕನ್ನಡವು ೨೩೦೦ ವರ್ಷಗಳ ಇತಿಹಾಸ ಹೊಂದಿರುವುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ. ಇದನ್ನು ಅಲ್ಲಗಳೆಯಲು ಯಾರಿಗೂ ಸಾಧ್ಯವಿಲ್ಲ.
ಕನ್ನಡ ಅಕ್ಷರಗಳು ಹಾಗೂ ಅಂಕಿಗಳು ಕರುನಾಡತಣ್ಪಿನ ನೆಲದೊಳ್ ಹುಟ್ಟಿದ ಕುರು; ಹರಿ; ಪುರುವಂಶವೆರೆದು ಪೊರೆದು ಹೊತಿಸಿದ ಅಂಕಜ್ವಾಲೆಯ ಬೆಳಕಿನ ಪರಿಯ ಚುಜ್ಯೋತಿ ಇದರಿಯಾ ಎಂದು ಶ್ರೀಕೃಷ್ಣನು ಪಾರ್ಥನಿಗೆ ತಿಳಿಯಹೇಳಿದ್ದನ್ನು ಈ ಗ್ರಂಥವು ಸೂಚಿಸಿದೆ. ಅಂದರೆ, ಕನ್ನಡವು ಕ್ರಿ.ಪೂ. ೧೫೬೦ ಕ್ಕೆ ಮೊದಲೇ -ಸುಮಾರು ನಾಲ್ಕುಸಾವಿರ ವರ್ಷಗಳ ಹೆಂದೆಯೇ-ಬಳಕೆಯಲ್ಲಿದ್ದುದಕ್ಕೆ ಇದು ಸಾಕ್ಷಿಯಾಗಿದೆ.
ಆದಿ ತೀರ್ಥಂಕರ ಋಷಭದೇವನು ಕನ್ನಡ ಅಕ್ಷರಗಳ ಹಾಗೂ ಅಂಕಿಗಳ ಉಗಮವನ್ನು ಕುರಿತು ತನ್ನ ಪುತ್ರಿಯರಿಗೆ ತಿಳಿಸಿ ಕೊಟ್ಟದ್ದನ್ನೂ; ಅದೇ ಬ್ರಾಹ್ಮಿ ಹಾಗೂ ಸೌಂದರಿ ಲಿಪಿಗಳೆಂದು ಪ್ರಚಾರಕ್ಕೆ ಬಂದುದನ್ನೂ ಸಿರಿಭೂವಲಯವು ಖಚಿತವಾಗಿ ನಿರೂಪಿಸಿದೆ. ಸಿರಿಭೂವಲಯದ ಒಂದು ಅಂಗವೇಆಗಿದ್ದು ಇಂದಿನ ಜಗತ್ತಿನಾದ್ಯಂತ ಮನ್ನಣೆಗಳಿಸಿರುವ ಭಗವದ್ಗೀತೆಯಲ್ಲಿರುವ ಮಾಹಿತಿಗಳನ್ನಾಧರಿಸಿ ಲೆಕ್ಕಹಾಕಿದಲ್ಲಿ; ಕನ್ನಡ ಲಿಪಿ ಹಾಗೂ ಅಂಕಿಗಳಿಗೆ ಲಕ್ಷಾಂತರ ವರ್ಷಗಳಷ್ಟೇಅಲ್ಲ; ಕೋಟ್ಯಾಂತರ ವರ್ಷಗಳ ಇತಿಹಾಸವಿರುವುದು ಸ್ಪಷ್ಟವಾಗಿದೆ. ಆದರೆ ನಮ್ಮ ಕನ್ನಡ ವಿದ್ವಾಂಸರು ಕ್ರಿ. ಶ. ೬೦೦ ಕ್ಕೆ ಮೊದಲು ಕನ್ನಡವು ಲಿಪಿಬದ್ಧವಾಗಿರಲಿಲ್ಲವೆಂದೇ ನಿರ್ಧರಿಸಿಬಿಟ್ಟಿದ್ದರು! ಈಗ ಸುಮಾರು ಎರಡುಸಾವಿರ ವರ್ಷಗಳ ಶಾಸನದ ಆಧಾರವಿದೆ ಎಂದು ತಿದ್ದುಪಡಿ ಮಾಡಿಕೊಂಡಿದ್ದಾರೆ!! ಇದೆಲ್ಲ ಮಾಹಿತಿಗಳನ್ನು ಕುರಿತು ಸಿರಿಭೂವಲಯದ ಶ್ರೀಕಂಠಯ್ಯನವರು ೧೯೫೦ ಕ್ಕೆ ಮೊದಲೇ ಜಗತ್ತಿನ ಗಮನ ಸೆಳೆದಿದ್ದಾರೆ
ಕನ್ನಡಭಾಷೆಗೆ ಶಾಸ್ತ್ರೀಯಭಾಷೆಯ ಸ್ಥಾನಮಾನ ನೀಡುವ ವಿಚಾರದಲ್ಲಿ ಚೆನ್ನೈನ ಶ್ರೇಷ್ಠನ್ಯಾಯಾಲಯದಲ್ಲಿರುವ ವಿವಾದದ ಸೂಕ್ತ ಪರಿಹಾರಕ್ಕೆ ಈ ಅಪರೂಪದ ಅಪರಿಚಿತ ಕಾವ್ಯದಲ್ಲಿರುವ ಖಚಿತವಾದ ಮಾಹಿತಿಗಳು ಪ್ರಮುಖವಾದ ಸಾಕ್ಷ್ಷಿಯಾಗಿವೆ. ಇದರ ಆಧಾರದಲ್ಲಿ, ಮದ್ರಾಸಿನ ನ್ಯಾಯಾಲಯ ದಲ್ಲಿರುವ ವಿವಾದವನ್ನು ಸುಲಭವಾಗಿ; ಶೀಘ್ರವಾಗಿ ಪರಿಹರಿಸಿಕೊಳ್ಳಬಹುದು. ಅದಕ್ಕೆ ಮೊದಲು ನಮ್ಮ ವಿದ್ವಾಂಸರು ಸಿರಿಭೂವಲಯವನ್ನು ಅದರಲ್ಲಿ ಅಡಕವಾಗಿರುವ ಮಾಹಿತಿಗಳ ಆಧಾರದಲ್ಲಿ ಪ್ರಾಚೀನ ಕನ್ನಡ ಅಂಕಕಾವ್ಯ ಎಂಬುದಕ್ಕೆ ತಮ್ಮ ಸಮ್ಮತಿಯ ಮುದ್ರೆ ದಾಖಲಿಸಿ ನ್ಯಾಯಾಧೀಶರನ್ನು ಒಪ್ಪಿಸಬೇಕಾದ ಅಗತ್ಯವಿದೆ!
ಸಿರಿಭೂವಲಯ ಗ್ರಂಥವು ನನ್ನೊಬ್ಬನ ಆಸಕ್ತಿಯ ವಿಚಾರವಲ್ಲ. ಇಂದಿನ ಆರುಕೋಟಿ ಕನ್ನಡಿಗರು ಮಾತ್ರವಲ್ಲ; ಇಡೀ ಜಗತ್ತಿನ ಜನತೆಗೆ ಮಹತ್ತರವಾದ ಜ್ಞಾನನೀಡುವ ಕೃತಿಯಾಗಿz ಇದು. ಇದರಲ್ಲಿ ೭೧೮ ಭಾಷೆಯ ಸಾಹಿತ್ಯವು ಅಡಕವಾಗಿದೆ! ಜಗತ್ತಿನ ೩೬೩ ಮತಧರ್ಮಗಳೂ ಸಮಾನವೆಂದು ವಿವರಿಸಿ; ಯೋಗ ಹಾಗೂ ಭೋಗವನ್ನು ಸಮನ್ವಯಗೊಳಿಸಿಕೊಂಡಿದ್ದ ಯಾಪನೀಯವೆಂಬ ಅಲ್ಪಸಂಖ್ಯಾತ ಪಂಗಡಕ್ಕೆ ಸೇರಿದವನು ಈ ಅಚ್ಚರಿಯ ಗ್ರಂಥದ ಕರ್ತೃ ಕುಮುದೇಂದು ಮುನಿ!
ಅಣುವಿಜ್ಞಾನ; ಆಕಾಶಗಮನ; ಗಣಕಯಂತ್ರಕ್ರಮ; ಗಣಿತಶಾಸ್ತ್ರ; ಜೀವವಿಜ್ಞಾನ; ಶಿಲ್ಪಶಾಸ್ತ್ರ; ಧರ್ಮಶಾಸ್ತ್ರ; ಪುರಾಣ; ಇತಿಹಾಸ; ಸಂಗೀತ; ನೃತ್ಯ ಇತ್ಯಾದಿ ಸಕಲಜ್ಞಾನಕ್ಕೆ ಸಂಬಂಧಿಸಿದಂತೆ ಜಗತ್ತಿನಲ್ಲಿ ೧೨೦೦ ವರ್ಷಗಳ ಹಿಂದೆ ನಮ್ಮಲ್ಲಿ ಪ್ರಚಾರದಲ್ಲಿದ್ದ ಮಾಹಿತಿಗಳನ್ನು ಈ ಅಚ್ಚರಿಯ ಅಂಕಕಾವ್ಯವು ತೆರೆದಿಟ್ಟಿದೆ.
ಈ ಗ್ರಂಥದ ಭಾಷೆಯ ಲಿಪಿಕ್ರಮವು ಕಠಿಣವಾದುದು. ಇಂದಿನ ಸರಳಭಾಷೆಗೆ ಹೊಂದಿಕೊಂಡಿರುವ ವಿದ್ವಾಂಸರ ಸುಲಭವಾದ ಓದಿಗೆ ಇದು ತೊಡಕಾಗಿ ಪರಿಣಮಿಸಿದೆ. ಈ ಕಾರಣದಿಂದ ನಮ್ಮ ವಿದ್ವಾಂಸರು ಇದಕ್ಕೆ ಕಬ್ಬಿಣದಕಡಲೆ ಎಂದು ಹೆಸರಿಟ್ಟು ದೂರವಿರಿಸಿದ್ದರು. ಈಗ ಈ ಅಚ್ಚರಿಯ ಅಂಕಕಾವ್ಯವನ್ನು ಸರಳವಾಗಿ ಪರಿಚಯಮಾಡಿಕೊಡುವ ಕೆಲಸವು ಯಶಸ್ವಿಯಾಗಿ ನಡೆದಿದೆ. ಆಯುರ್ವೇದ ಹಾಗೂ ಗಣಕಯಂತ್ರ ಕ್ಷೇತ್ರದವರು; ಗಣಿತಜ್ಞರು ಮತ್ತು ಇಂಜಿನಿಯರಿಂಗ್ ಕ್ಷೇತ್ರದವರು ಈ ಗ್ರಂಥದ ವಿಚಾರದಲ್ಲಿ ಆಸಕ್ತಿವಹಿಸುತ್ತಿರುವುದು ತಂಬಾ ಹೆಚ್ಚಿನ ಸಂತೋಷದ ಸಂಗತಿ!
ಭಾರತದ ಸಾಹಿತ್ಯಪರಂಪರೆಯ ಪುರಸ್ಕಾರದ ಸರಣಿಯಲ್ಲಿ ಒಂದು ಮಹೋನ್ನತವಾದ ಕೀರ್ತಿಪತಾಕೆ ಎನಿಸಿರುವ ಜ್ಞಾನಪೀಠ ಪ್ರಶಸ್ತಿಗೂ ಸಿರಿಭೂವಲಯದ ಶ್ರೀಕಂಠಯ್ಯನವರ ವಿದ್ವತ್ತು; ವಿನಯ; ಉದಾರಗುಣ ಹಾಗೂ ನಿರಪೇಕ್ಷಮನೋಭಾವಕ್ಕೂ ಒಂದು ರೀತಿಯ ನೆರವಾದ ಸಂಪರ್ಕವಿದೆ. ಸಿರಿಭೂವಲಯದ ವಿಚಾರದಲ್ಲಿ ಆಸಕ್ತರಾಗಿದ್ದ ಅಂದಿನ ಕಲ್ಕತ್ತೆಯ ಕೋಟ್ಯಾಧಿಪತಿ ಶಾಂತಿಪ್ರಸಾದ್‌ಜೈನ್ ಅವರು ಶ್ರೀಕಂಠಯ್ಯನವರನ್ನು ತಮ್ಮಲ್ಲಿಗೆ ಕರೆಸಿಕೊಂಡು; ಅವರಿಂದ ಸಿರಿಭೂವಲಯದ ಸಮರ್ಪಕವಾದ ಪರಿಚಯ ಪಡೆದು ಕೃತಾರ್ಥರಾದರು. ಈ ಅಗಾಧವಾದ ಜ್ಞಾನನಿಧಿಯನ್ನು ಸೂಕ್ತವಾಗಿ ಗೌರವಿಸುವ ದಿಶೆಯಲ್ಲಿ ನಾನು ನಿಮಗೆನು ಕೊಡಬಲ್ಲೆ ಅಪ್ಪಣೆಯಾಗಲೀ ಎಂದು ವಿನಂತಿಸಿದರು. ಇವರ ಅಪಾರ ವಿದ್ವತ್ತನ್ನು ಬಹಳವಾಗಿ ಮೆಚ್ಚಿಕೊಂಡಿದ್ದ ಜೈನ್ ಅವರು ಈ ಗ್ರಂಥದ ಸಂಶೋಧನೆಯ ವೆಚ್ಚಕ್ಕಾಗಿ ಇವರು ಕೋಟ್ಯಾಂತರ ರೂಪಾಯಿಗಳ ಆರ್ಥಿಕ ನೆರವು ಕೇಳಿದ್ದರೂ ಸಂತೋಷದಿಂದ ಕೊಡುವ ಮನೋಸ್ಥಿತಿಯಲ್ಲಿದ್ದರು. ಬಹಳನಯವಾಗಿ ಇವರ ಈ ಕೊಡುಗೆಯನ್ನು ನಿರಾಕರಿಸಿದ ಶ್ರೀಕಂಠಯ್ಯನವರು ತಮ್ಮ ನಿರಪೇಕ್ಷಾ ಮನೋಭಾವವನ್ನು ಮೆರೆದರು. ಇದು ಶಾಂತಿಪ್ರಸಾದ್ ಜೈನ್ ಅವರ ಅಂತರಂಗದಲ್ಲಿ ಅಳಿಸಲಾಗದ ಪ್ರಭಾವಬೀರಿ; ಇಂಥ ಅಭಿಮಾನಧನರಾದ ಮಹಾನ್ ಜ್ಞಾನಿಗಳನ್ನು ಸೂಕ್ತವಾಗಿ ಗೌರವಿಸುವ ಸಲುವಾಗಿ ಅಪಾರ ಧನರಾಶಿಯನ್ನು ದೇಣಿಗೆನೀಡಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಸ್ಥಾಪನೆಗೆ ನಾಂದಿಹಾಡಿದರು! ಈ ಘಟನೆಯ ಪ್ರತ್ಯಕ್ಷಸಾಕ್ಷಿಯಾಗಿದ್ದವರಿಗೆ ಮಾತ್ರವೇ ಶ್ರೀಕಂಠಯ್ಯನವರ ವ್ಯಕ್ತಿತ್ವದ ಅರಿವಾಗುವುದು ಸಾಧ್ಯ!!
ಈ ಹಿನ್ನೆಲೆಯಲ್ಲಿ ವಿಚಾರಶಾಲಿಗಳಾದ ಓದುಗರು ಸಿರಿಭೂವಲಯ ಗ್ರಂಥದ ಮುಂದಿನ ಸಂಶೋಧನೆಯ ವಿಚಾದಲ್ಲಿ ಸರ್ಕಾರವನ್ನು ಸೂಕ್ತವಾಗಿ ಒತ್ತಾಯಿಸುವಂತಾಗಲೆಂದು ಆಶಿಸುತ್ತೇನೆ. ಸಿರಿಭೂವಲಯದಲ್ಲಿ ಸುಲಭವಾಗಿ ಓದಿ ತಿಳಿಯಬಹುದಾದ ಕೆಲವು ಸಾಂಗತ್ಯ ಪದ್ಯಗಳನ್ನು ಇಲ್ಲಿ ಓದುಗರ ಅವಗಾಹನೆಗೆ ತರಲಿಚ್ಚಿಸುತ್ತೇನೆ:
* * *
ಅಷ್ಟಮಹಾಪ್ರಾತೀಹಾರ್ಯವೈಭವದಿಂದ| ಅಷ್ಟಗುಣಂಗಳೊಳ್‌ಓಂದಮ್|
ಸೃಷ್ಟಿಗೆ ಮಂಗಲಪರ್ಯಾಯದಿನಿತ್ತ| ಅಷ್ಟಮಜಿನಗೆರಗುವೆನು||೧||
ಓದಿಸಿದೆನುಕರ್ಮಾಟದಜನರಿಗೆ| ಶ್ರೀದಿವ್ಯವಾಣಿಯಕ್ರಮದೆ|
ಶ್ರೀದಯಾಧರ್ಮಸಮನ್ವಯಗಣಿತದ| ಮೋದದಕಥೆಯನಾಲಿಪುದು||೨||
ಕನ್ನಡದೊಂದೆರಳ್‌ಮೂರುನಾಲ್ಕೈದುಆರೇ| ಳೆಂಟುಒಂಬತ್ತೆಂಬ|
ಉನ್ನತವಾದಂಕಸೊನ್ನೆಯಿಂಹುಟ್ಟಿತೆಂ| ದೆನುವುದನು ಕಲಿಸಿದನು||೩||
ಅಂಕೆಯಿಂದಿರಿಕೊಳ್ಳುವವಿಜ್ಞಾನದ| ಶಂಕೆಗಳನಿಲ್ಲಿಪೇಳುವೆ|
ಶಂಕೆಗುತ್ತರವನುಮುಂದಕೆಪೇಳ್ವಾಗ| ಅಂಕಿಯಶಂಕೆಗಳೆಷ್ಟು||೪||
ಅಣುವೆಂದುಪರಮಾಣುವೆಂದುಪುದ್ಗಲವನು| ಗಣಿಸುವಾಗಿರುವಂಕವೆಷ್ಟು|
ಅಣುವಿನಗುಣವೇನುಅಣುವಿನಕ್ಷಣವೇನು| ಗಣಿತದಮರ್ಮವದೇನು||೫||
ಅಣುವನೊಡೆದುಪರಮಾಣುವಮಾಡಲು| ಕೊನೆಗೆನಿಲ್ಲುವಶಕ್ತಿಯೇನು|
ಅಣುವಿಂದಣುವಾಗಿನಿಲ್ಲುವದ್ರವ್ಯದ| ಗಣನೆಯಪೇಳುವುದೆಂತು||೬||
ತನುವನಾಕಾಶಕೆಹಾರಿಸಿನಿಲಿಸುವ| ಘನವೈಮಾನಿಕದಿವ್ಯಕಾವ್ಯ|
ಪನಸಪುಷ್ಪದಕಾವ್ಯವಿಶ್ವಂಭರಕಾವ್ಯ| ಜಿನರೂಪಿನಭದ್ರಕಾವ್ಯ||೭||
ಯವೆಯಕಾಳಿನಕ್ಷೇತ್ರದಳತೆಯೊಳಡಗಿಸಿ| ಅವರೊಳನಂತವಸಕಲಾನ್|
ಕವನವದೊಳ್‌ಸವಿಯಾಗಿಸಿಪೇಳುವ| ನವಸಿರಿಇರುವಭೂವಲಯ||೮||
ವನಿತಾಬಿಂಬಾದರದಚುಂಬನದರಸಪೀರ್| ದನದರರಸದರುಚಿಯಿಂತೇರಿದರ್|
ಶನದಪರವಶರಾನಂದಲಾವಣ್ಯz| ಯದುರಿನಭವನಾಮರರ್||೯||
ಕರುಣೆಯಧವಲವರ್ಣದಪಾದಗಳಿಹ| ಪರಮಾತ್ಮಪಾದದ್ವಯದೆ|
ಸಿರವಿಹನಾಲ್ಕಂಕವೆರಸಿಸಿಂಹದಮುಖ| ಭರತಖಂಡದಶುಭಚಿಹ್ನೆ||೧೦||
ಸಿವಪಾರ್ವತೀಶನಗಣಿತದಶ್ರೀಕಂಠ| ದವನಿಯತಾಳೆಯೋಲೆಗಳ|
ಸುವಿಶಾಲಪತ್ರದಕ್ಷರದಭೂವಲಯಕೆ| ಸವಿಸ್ತರಕಾವ್ಯಕೆನ್ನನಮಹವು||೧೧||
ನೀಲಾಂಬರದೊಳುಹೊಳೆವನಕ್ಷತ್ರ| ಮಾಲಿನ್ಯವಾಗದವರೆಗೆ|
ಶೀಲವ್ರತಂಗಳೊಳುಬಾಳ್ದುಜನರೆಲ್ಲ| ಕಾಲನಜಯಿಸಲೆತ್ನಿಸಲಿ||೧೨||
* * *
ಸಿರಿಭೂವಲಯದಲ್ಲಿ ಈ ರೀತಿಯ ಮೂಲ ಕನ್ನಡ ಸಾಂಗತ್ಯ ಪದ್ಯಗಳ ಸಂಖ್ಯೆಯು ಆರುಲಕ್ಷ! ಇವುಗಳಲ್ಲೇ ಅಕ್ಷರಕ್ಕೆ ಲಕ್ಷದಂತೆ ಬೇರೆ ಬೇರೆ ಭಾಷೆಗಳಲ್ಲಿ ಈ ಜಗತ್ತನ್ನೇ ತುಂಬಿರಿಸುವಷ್ಟು ಸಾಹಿತ್ಯದ ರಚನೆಯಾಗುತ್ತದೆ!! ವಿದೇಶಗಳ ವಿದ್ಯಾವಂತರು ಇದನ್ನು ಜಗತ್ತಿನ ಹತ್ತನೇ ಆಶ್ಚರ್ಯ ಎಂದು ಪರಿಗಣಿಸಿದ್ದಾರೆ!!! ಇಂಥ ಮಹೋನ್ನತ ಸಾಹಿತ್ಯ ಕೃತಿಯು ಇಂದಿನ ಆಧುನಿಕ ವಿಜ್ಞಾನಯುಗದಲ್ಲಿ ಪ್ರಜ್ವಲಿಸುವಂತೆ ಮಾಡುವಲ್ಲಿ ನಾಡಿನ ವಿದ್ಯಾವಂvರು ಹಾಗೂ ಆಡಳಿತಗಾgರು ಉತ್ಸಾಹದಿಂದ ಕೈಜೋಡಿಸುವಂತಾಗಲೆಂಬುದು ಈ ಬರಹದ ಉದ್ದೇಶವಾಗಿದೆ. ಓದುಗರು ಈ ದಿಸೆಯಲ್ಲಿ ಸಂಬಂಧಿಸಿದವರೆದುರು ತಮ್ಮ ಹಕ್ಕೊತ್ತಾಯವನ್ನು ಮಂಡಿಸಬೇಕಾಗಿ ವಿನಂತಿ.
ಕನ್ನಡಕುಲಕೋಟಿಯು ಚಿರಾಯುವಾಗಲೀ ಸಿರಿಭೂವಲಯದ ಅಭಿಮಾನಿಗಳ ಪರವಾಗಿ,
ಕನ್ನಡದ ಅಡಿಯಾಳು: ಸುಧಾರ್ಥಿ ಹಾಸನ, ಹಾಲುವಾಗಿಲು ಗ್ರಾಮ, ತಟ್ಟೇಕೆರೆ ಅಂಚೆ. ಹಾಸನ ಕಸಬ, ಹಾಸನ. ೫೭೩೨೦೧. ದೂರವಾಣಿ: ೯೪೪೯೯೪೬೨೮೦.    ೭೬೭೬೪೭೪೯೭೨.   

ಸಿರಿಭೂವಲಯ ಪರಿಚಯ ಕೃತಿಗಳ ಲೋಕಾರ್ಪಣೆ ಸಮಾರಂಭದ ದೃಶ್ಯಾವಳಿ ಮತ್ತು ಕೆಲವು ಆಡಿಯೋ ಕ್ಲಿಪ್ ಗಳು

ದಿನಾಂಕ 20.1.2012  ರಂದು ಹಾಸನದ "ಈಶಾವಾಸ್ಯಮ್" ಸಭಾಂಗಣದಲ್ಲಿ ಬಿಡುಗಡೆಯಾದ ಅತ್ಯಂತ ಪ್ರಾಚೀನ ಅಂಕಕಾವ್ಯ ಸಿರಿಭೂವಲಯ ಗ್ರಂಥದ ಪರಿಚಯ ಕೃತಿಗಳ ಸಮಾರಂಭದ ಕೆಲವು ದೃಶ್ಯಗಳು ಮತ್ತು ಕೆಲವು ಆಡಿಯೋ ಕ್ಲಿಪ್ ಗಳು ಇಲ್ಲಿವೆ. ಬರುವ ದಿನಗಳಲ್ಲಿ ಸಮಾರಂಭದಲ್ಲಿ ಮಾತನಾಡಿದ ಎಲ್ಲರ ಭಾಷಣವನ್ನೂ ಪ್ರಕಟಿಸಲಾಗುವುದು. ಇದೊಂದು ಕುತೂಹಲಕಾರಿ ವಿಷಯವಾಗಿರುವುದರಿಂದ ವೇದಸುಧೆಯ ಅಭಿಮಾನಿಗಳು ಕೃತಿಪರಿಚಯದ ಮತ್ತು ಮುಂದೆ ಪ್ರಕಟವಾಗಲಿರುವ ಕೃತಿಯ ಕರ್ತೃ ಶ್ರೀ ಸುಧಾರ್ಥಿ ಹಾಸನ ಇವರ ಮಾತುಗಳನ್ನೂ ಇಲ್ಲಿ ಕೇಳಬಹುದಾಗಿದೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತವಿದೆ. ನಿಮ್ಮ ಸಂದೇಹಗನ್ನು ಬರೆದು ವೇದಸುಧೆಗೆ ತಿಳಿಸಿದರೆ ಶ್ರೀ ಸುಧಾರ್ಥಿಯವರು ನಿಮ್ಮ ಸಂದೇಹಗಳಿಗೆ ಉತ್ತರಿಸುವರು.

ಶ್ರೀ ಕೈಪಾ ಶೇಷಾದ್ರಿ, ಶ್ರೀ ಸಿ.ಎಸ್.ಕೃಷ್ಣಸ್ವಾಮಿ,ಮತ್ತು ಶ್ರೀ ಸುಧಾರ್ಥಿ-ಹಾಸನ








ಸಭೆಯ ಮುಂದಿನಸಾಲಿನಲ್ಲಿ  ಕನ್ನಡಸಾಹಿತ್ಯ ಪರಿಷತ್    ಜಿಲ್ಲಾಧ್ಯಕ್ಷರಾದ        ಶ್ರೀ ಉದಯರವಿ, ಪತ್ರಕರ್ತರ ಸಂಘದ ಕಾರ್ಯದರ್ಶಿ ಶ್ರೀ ಪ್ರಭಾಕರ್ 







ಕೃತಿಯ ಹಿಂದಿಯ ಅನುವಾದಕಮತ್ತು    ವಿದ್ವಾಂಸರಾದ ಶ್ರೀ ರಾಮಣ್ಣ 



ಶ್ರೀಮತಿ  ಶಾರದಮ್ಮನವರು

ಶ್ರೀ ರಾಮಣ್ಣ    ದಂಪತಿಗಳಿಗೆ ಸನ್ಮಾನ 

ಶ್ರೀ ಪ್ರಭಾಕರರಿಂದ ರಾಮಣ್ಣನವರ ಪರಿಚಯ 

ಪ್ರಾಧ್ಯಾಪಕರಾದ ಶ್ರೀ ನಾರಾಯಣ ಪ್ರಸಾದ್ ರಿಂದ ಕೃತಿ ಪರಿಚಯ 











ಶ್ರೀ ಸದಾನಂದರಿಂದ ಸಿರಿಭೂವಲಯದ ಬಗ್ಗೆ  ಅನಿಸಿಕೆ







                   ಹರಿಹರಪುರ ಶ್ರೀಧರ್  ಅವರಿಂದ ಧನ್ಯವಾದ ಸಮರ್ಪಣೆ 
 

ಸಿರಿಭೂವಲಯ ಗ್ರಂಥದ ಕುರಿತ ಒಂದು ಮಿಂಚುನೋಟ‌



ಕನ್ನಡಕುಲಕೋಟಿಯ ಜನ್ಮಜನ್ಮಾಂತರದ ಜ್ಞಾನಸಂಪತ್ತು ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯ ಶಾಸ್ತ್ರೀಯಭಾಷೆಯ ಸ್ಥಾನಮಾನದ ಸಮಸ್ಯೆಗೆ ಇದೊಂದೇ ಸೂಕ್ತ ಪರಿಹಾರ !
ಸಿರಿಭೂವಲಯ ಎಂಬುದು ಒಂದು ಪ್ರಾಚೀನ ಕನ್ನಡ ಅಂಕಕಾವ್ಯ. ಕನ್ನಡದ ಒಂದರಿಂದ ೬೪ ರವರೆಗಿನ ಅಂಕಿಗಳನ್ನು ಮಾತ್ರ ಬಳಸಿ ಈ ಗ್ರಂಥವನ್ನು ರಚಿಸಲಾಗಿದೆ. ಸರ್ವಭಾಷಾಮಯೀಭಾಷಾ ಕನ್ನಡವರ್ಣಮಾಲೆಯ ೬೪ ಅಕ್ಷರಗಳನ್ನು ಈ ೬೪ ಅಂಕಿಗಳು ಪ್ರತಿನಿಧಿಸುತ್ತವೆ. ಒಂದೊದು ಪುಟದಲ್ಲಿಯೂ ಅಡ್ಡಸಾಲು ೨೭ ಹಾಗೂ ಉದ್ದಸ್ಸಾಲು ೨೭ ರಂತೆ ಒಟ್ಟು ೭೨೯ ಚಿಕ್ಕ ಚೌಕಗಳಿರುವ ಒಂದು ಪುಟವನ್ನು ಚಕ್ರ ಎಂದು ಕರೆಯಲಾಗುತ್ತದೆ.ಇಂಥ ೧೬೦೦೦ ಚಕ್ರಗಳು ಈ ಗ್ರಂಥದ ಒಟ್ಟುವ್ಯಾಪ್ತಿಯಾಗಿತ್ತು. ಅಂಕಿಗಳಿರುವಲ್ಲಿ ಅನ್ವಯವಾಗುವ ಅಕ್ಷರಗಳನ್ನು ಅಳವಡಿಸಿಕೊಂಡು; ಸುಮಾರು ೪೦ ಬೇರೆ ಬೇರೆ ಬಂಧಗಳಲ್ಲಿ ಓದಿದಾಗ, ಅದರಲ್ಲಿ ಆರುಲಕ್ಷ ಮೂಲ ಕನ್ನಡ ಸಾಂಗತ್ಯ ಪದ್ಯಗಳು ಹೊರಹೊಮ್ಮುತ್ತವೆ. ಇವುಗಳನ್ನು ಸೂಚನೆಗನುಗುಣವಾಗಿ ವಿಂಗಡಿಸಿಕೊಂಡು ಓದಿದಾಗ, ಅಕ್ಷರಕ್ಕೆ ಲಕ್ಷದಂತೆ ಜಗತ್ತಿನ ೭೧೮ ಭಾಷೆಗಳಿಗೆ ಸೇರಿದ, ೩೬೩ ಮತಧರ್ಮಗಳ ಸಮನ್ವಯ ಹಾಗೂ ಅಣುವಿಜ್ಞಾನ; ಆಕಾಶಗಮನ; ಆಯುರ್ವೇದ; ಅಂಕಗಣಿತ ಇತ್ಯಾದಿ ಸಕಲ ಜ್ಞಾ-ವಿಜ್ಞಾನಗಳಿಗೆ ಸೇರಿದ ಪ್ರಾಚೀನ ಸಾಹಿತ್ಯದ ಸಾರವು ನಮಗೆ ದೊರೆಯುತ್ತದೆ.೭೧೮ ಭಾಷೆಗಳ ಬೇರೆ ಬೇರೆ ಸಾಹಿತ್ಯವನ್ನು ಒಂದೆಡೆ ಕಟ್ಟಿರಿಸುವ ದಿಸೆಯಲ್ಲಿ ಬಳಸಿರುವ ಇಲ್ಲಿನ ಲಿಪಿಕ್ರಮವು ನಮಗೆ ಸ್ವಲ್ಪ ಅಪರಿಚಿತವೆನಿಸುವುದು ಸಹಜ. ಇಲ್ಲಿನ ಬರವಣಿಗೆಯಲ್ಲಿ ಪ್‌ಊರ್‌ಣ್‌ಆಕ್‌ಷ್‌ಅರ್‌ಅ ಕ್‌ರಮವಿಲ್‌ಲ. ಈ ಕ್ರಮದಲ್ಲಿ ಸಮಗ್ರ ಕಾವ್ಯವನ್ನು ಓದಿತಿಳಿಯುವುದು ಬಹಳ ಕಠಿಣವಾದ ಕಾರ್ಯ. ಕ್ರಿ.ಶ. ೮೦೦ ರರ ಸುಮಾರಿನಲ್ಲಿದ್ದ ಸುಪ್ರಸಿದ್ಧ ವ್ಯಾಖ್ಯಾನಕಾರ ವೀರಸೇನನ ಶಿಷ್ಯನೂ; ರಾಷ್ಟ್ರಕೂಟ ಚಕ್ರವರ್ತಿ ಮಾನ್ಯಖೇಟದ ಅಮೋಘವರ್ಷನಿಗೆ ಗುರುವೂ ಆಗಿದ್ದ ಕುಮುದೇಂದುವೆಂಬ ಜೈನ ಮುನಿಯು ತನ್ನ ಪ್ರಾಚೀನ ಗುರುಪರಂಪರೆಯ ಜ್ಞಾನಧಾರೆಯ ಆಧಾರದಲ್ಲಿ ರಚಿಸಿದ ಜಗತ್ತಿನ ಅತ್ಯದ್ಭುತ ಕನ್ನಡ ಅಂಕಕಾವ್ಯ ಈ ಸಿರಿಭೂವಲಯ.
ಈ ರೀತಿಯಲ್ಲಿ ಊಹಾತೀತವಾದ ಸಂಗತಿಯನ್ನು ಸಾಕ್ಷಾತ್ಕರಿಸಿಕೊಂಡು; ಕನ್ನಡದ ಅಂಕಿಗಳಿಗೆ ಅನ್ವಯವಾಗುವ ಪ್ರಾಚೀನ ಲಿಪಿಕ್ರಮವನ್ನು ರೂಪಿಸಿಕೊಂಡು; ಒಟ್ಟುಗ್ರಂಥದ ೬೦ ರಲ್ಲಿ ನಾಲ್ಕುಭಾUದಷ್ಟನ್ನು ಸಂಶೋಧಿಸಿ; ಅದರಲ್ಲಿ ನಾಲ್ಕನೇ ಒಂದುಭಾಗದಷ್ಟನ್ನು ೧೯೫೩ ರರಷ್ಟು ಹಿಂದೆಯೇ ಆಧುನಿಕ ಮುದ್ರಣ ಕ್ರಮದಲ್ಲಿ ಮುದ್ರಣ ಮಾಡಿಸಿ; ಕನ್ನಡಿಗರಿಗೆ ಓದಲು ಒದಗಿಸಿಕೊಟ್ಟ ಅನುಪಮ ಕನ್ನಡಾಭಿಮಾನಿ ಕರ್ಲಮಂಗಲಂ ಶ್ರೀಕಂಠಯ್ಯನವರೆಂಬ ಬಹುಭಾಷಾ ವಿಶಾರದರ ಶೈಕ್ಷಣಿಕ ಅರ್ಹತೆ ಕೇವಲ ಪ್ರಾಥಮಿಕ ೩ನೇ ತರಗತಿ ಎಂದರೆ, ಓದುಗರು ನಂಬಲಾರರೇನೋ! ಇದೊಂದೇ ಕಾರಣದಿಂದಾಗಿ ಅಂದಿನ ವಿದ್ವಾಂಸರು ಇವರ ಪ್ರತಿಭೆಯ ವಿರುದ್ಧ ಇಲ್ಲ ಸಲ್ಲದ ತಕರಾರು ತೆಗೆದು; ಇವರ ಅನುಪಮ ಸಂಶೋಧನೆಯನ್ನು ಮೂಲೆಗುಂಪು ಮಾಡುವಲ್ಲಿ ಯಶಸ್ವಿಯಾದರು.
ಸರಿಸಾಟಿಯಿಲ್ಲದ ಇವರ ಪ್ರಚಂಡ ಮೇಧಾಶಕಿಯಿಂದಾಗಿ ಬೆಳಕುಕಂಡ ಈ ಸಿರಿಭೂವಲಯz ೧೨೭೦ ಚಕ್ರಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಮೂಲಸಾಹಿತ್ಯವನ್ನು ಭಾರತದ ರಾಷ್ಟ್ರಪತಿ ಡಾ|| ರಾಜೇಂದ್ರ ಪ್ರಸಾದರು ಇದು ಕೇವಲ ಕನ್ನಡಭಾಷೆಯ ಸಾಹಿತ್ಯವಲ್ಲ; ಜಗತ್ತಿನ ಮಾನವಕುಲಕ್ಕೆ ಸೇರಿದ ಜ್ಞಾನದಗಣಿ ಎಂಬ ಅನಿಸಿಕೆಯಿಂದ ಅವುಗಳನ್ನು ಕೇಂದ್ರ ಸರ್ಕಾರದ ಪ್ರಾಚ್ಯಪತ್ರಾಗಾರ ಇಲಾಖೆಯಲ್ಲಿ ಮೈಕ್ರೋಫಿಲಂ ರೂಪದಲ್ಲಿ ಶಾಶ್ವತವಾಗಿ ಸಂರಕ್ಷಿಸುವ ಕಾರ್ಯ ನೆರವೇರಿಸಿದರು. ಕರ್ಲಮಂಗಲಂ ಶ್ರೀಕಂಠಯ್ಯನವರ ವಿದ್ವತ್ತು ಊಹಾತೀತವಾದುದು. ಅವರೊಬ್ಬ ಬಹುಮುಖ ಪ್ರತಿಭಾಶಾಲಿ. ಕ್ರಮಬದ್ಧವಾದ ಶಾಲಾಶಿಕ್ಷಣವಿಲ್ಲದೆಯೇ ಸ್ವಯಂಶಿಕ್ಷಣ ಕ್ರಮದಲ್ಲಿ ದೇಶವಿದೇಶಗಳಿಗೆ ಸೇರಿದ ಸುಮಾರು ೧೪ ಭಾಷೆಗಳಲ್ಲಿ ಅವರಿಗೆ ಸಂಶೋಧನೆಯ ಮಟ್ಟದ ಪಾಂಡಿತ್ಯವಿದ್ದುದನ್ನು ಗಮನಿಸಿದವರಿಗೆ; ಸಹಿಸಿದವರಿಗೆ ಮಾತ್ರವೇ ಅವರ ಮಹತ್ವದ ಅರಿವಾಗುತ್ತಿದ್ದುದು. ಈ ಕಾರಣದಿಂದಾಗಿಯೇ ಸುಪ್ರಸಿದ್ಧ ಭಾರತೀಯ ಇತಿಹಾಸ ಪ್ರಾಧ್ಯಾಪಕ ಡಾ|| ಎಸ್. ಶ್ರೀಕಂಠಶಾಸ್ತ್ರಿಗಳು ಇವರ ಅಗಾಧವಾದ ಪ್ರತಿಭೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
ಕನ್ನಡಭಾಷೆ; ಸಾಹಿತ್ಯ; ಸಂಸ್ಕೃತಿ; ಜನಜೀವನದ ಪರಿಸರ ಮುಂತಾದುವುಗಳ ನೆಲೆ-ಬೆಲೆಯನ್ನು ಕುರಿತು ಚಿಂತಿಸಿ, ಚರ್ಚಿಸುವುದಕ್ಕಾಗಿ ತಾಲ್ಲೂಕು ಮಟ್ಟದಿಂದ ಆರಂಭಿಸಿ; ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ವಿಶಮಟ್ಟದಲ್ಲಿ ಸಮ್ಮೇಳನಗಳು ನಡೆದು, ಇತಿಹಾಸ ನಿರ್ಮಿಸುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಆದರೆ, ಜಗತ್ತಿನ ಹತ್ತನೇ ಅಚ್ಚರಿ ಎಂಬುದಾಗಿ ವಿದೇಶೀ ವಿದ್ವಾಂರುಗಳಿಂದಲೂ ಪ್ರಶಂಸೆ ಪಡೆದಿರುವ ಜಗತ್ತಿನ ಅತ್ಯಂತ ಪ್ರಾಚೀನ ಕನ್ನಡಅಂಕಕಾವ್ಯ ಸರ್ವಭಾಷಾಮಯೀಭಾಷಾ ಸಿರಿಭೂವಲಯದ ವಿಚಾರವನ್ನು ಕುರಿತು ಖಚಿತವಾಗಿ ಯಾವುದೇ ಒಂದು ವಿಸ್ತೃತ ಚರ್ಚೆಯೂ ಕಳೆದ ೬೦ ವರ್ಷಗಳಿಂದ ಇದುವರೆವಿಗೂ ನಡೆದ ದಾಖಲೆ ಇರುವುದು ಅಪರೂಪ.! ಈ ಅಚ್ಚರಿಯ ಅಂಕಕಾವ್ಯವನ್ನು ಕುರಿತು ಬಹಳ ಅಚ್ಚರಿಯ ಕಾವ್ಯ ಅಮೋಘವಾದ ಸಾಹಿತ್ಯ ಎಂಬ ಉದ್ಘಾರವನ್ನು ಹೊರತು ಪಡಿಸಿ; ಈ ಕಾವ್ಯದಲ್ಲಿ ಏನಿದೆ? ಎಂಬುದನ್ನು ಕುರಿತು ಸಾಮಾನ್ಯ ಓದುಗರಿಗೆ ನಿಖರವಾದ ಪರಿಚಯ ಮಾಡಿಕೊಡುವ ಪ್ರಯತ್ನವು ಇದುವರೆವಿಗೂ ನಡೆಯಲೇ ಇಲ್ಲವೆಂದರೆ ತಪ್ಪಾಗಲಾರದು.
ಈಚೆಗೆ ಬೆಂಗಳೂರಿನ ಪುಸ್ತಕಶಕ್ತಿ ಪ್ರಕಾಶನದವರು ನಡೆಸಿದ ಪ್ರಯತ್ನದಿಂದಾಗಿ; ನಾಡಿನ ಸುಪ್ರಸಿದ್ಧ ವಿದ್ವಾಂಸರಾದ ಡಾ|| ಟಿ. ವಿ. ವೆಂಕಟಾಚಲಶಾಸ್ತ್ರಿಯವರ ನೇತೃತ್ವದಲ್ಲಿ ವಿದ್ವಾಂಸರ ತಂಡವೊಂದು ಸುಮಾರು ಒಂದುದಶಕದ ಕಾಲ ಶ್ರಮವಹಿಸಿ ಈ ಗೃಂಥದ ೧೯೫೩ ರರ ಮುದ್ರಣವನ್ನು ತಮ್ಮದೇಆದ ಹಾದಿಯಲ್ಲಿ ಪರಿಷ್ಕರಿಸಿ ಅಪೂರ್ಣವಾಗಿ ಪುನರ್ಮುದ್ರಿಸಿದ್ದಾರೆ. ಆದರೆ ಅಲ್ಲ್ಲಿನ ವಿವರಗಳಿಂದ ಸಿರಿಭೂವಲಯದ ವಿಚಾರವು ಇನ್ನಷ್ಟು ಗೊಂದಲದ ಗೂಡಾಗಿದೆ!
ಮುದ್ರಿತವಾಗಿರುವ ಭಾಗದ ಸಿರಿಭೂವಲಯವನ್ನು ಅಭ್ಯಾಸಮಾಡುವುದಕ್ಕೂ; ಅರ್ಥಮಾಡಿಕೊಳ್ಳುವುದಕ್ಕೂ ಬೇರೆಯವರಿಗೆ ಅದನ್ನು ಪರಿಚಯ ಮಾಡಿಕೊಡುವುದಕ್ಕೂ ಅಪಾರವಾದ ಸಹನೆ; ಶ್ರಮಸಹಿಷ್ಣುತೆ ಹಾಗೂ ಅನ್ಯರಲ್ಲಿರುವ ಅಪಾರ ಮೇಧಾವಿತನವನ್ನು ಮುಕ್ತಮನಸ್ಸಿನಿಂದ ಮೆಚ್ಚುವ ಉದಾರಗುಣ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಮುದ್ರಿತ ಪ್ರತಿಯ ಒಂದೇವೊಂದು ಪುಟವನ್ನೂ ಓದಿತಿಳಿಯಲು ಸಾಧ್ಯವಾಗದು. ಇದರ ವಿಚಾರವಾಗಿ ಕುಮುದೇಂದುಮುನಿಯೇ ಯಾರೆಷ್ಟುಜಪಿಸಿದರಷ್ಟು ಸತ್ಫಲವೀವ ಕಾವ್ಯ ಅವರವರ ಶಕ್ತಿಗೆ ತಕ್ಕ ವರವಾದ ಕಾವ್ಯ ಮುಂತಾಗಿ ಸೂಚನೆ ನೀಡಿದ್ಧಾನೆ! ಈ ಗ್ರಂಥದ ಭಾಷೆಯ ಲಿಪಿಕ್ರಮವು ಇಂದಿನ ಸರಳಭಾಷೆಗೆ ಹೊಂದಿಕೊಂಡಿರುವ ವಿದ್ವಾಂಸರ ಸುಲಭವಾದ ಓದಿಗೆ ತೊಡಕಾಗಿ ಪರಿಣಮಿಸಿದೆ. ಈ ಕಾರಣದಿಂದ ನಮ್ಮ ವಿದ್ವಾಂಸರು ಇದಕ್ಕೆ ಕಬ್ಬಿಣದಕಡಲೆ ಎಂದು ಹೆಸರಿಟ್ಟು ದೂರವಿರಿಸಿದ್ದರು. ಈಗ ಈ ಅಚ್ಚರಿಯ ಅಂಕಕಾವ್ಯವನ್ನು ಸರಳವಾಗಿ ಪರಿಚಯಮಾಡಿಕೊಡುವ ಕೆಲಸವು ಯಶಸ್ವಿಯಾಗಿ ನಡೆದಿದೆ.
ಭಾರತದ ರಾಷ್ತ್ರಪತಿ ಡಾ|| ರಾಜೇಂದ್ರಪ್ರಸಾದರ ಆಣತಿಯಂತೆ ಕೇಂದ್ರಸರ್ಕಾರವು ಭಾರತೀಯ ಪ್ರಾಚ್ಯಪತ್ರಾಗಾರ ಇಲಾಖೆಯಲ್ಲಿ ಮೈಕ್ರೋಫಿಲಂ ರೂಪದಲ್ಲಿ ಸಂರಕ್ಷಿಸುವ ಸಂರಕ್ಷಿಸಿರುವ ಸುಮಾರು ೧೨೭೦ ಚಕ್ರಗಳಷ್ಟು ಭಾಗದ ಸಾಹಿತವು ಆದರೆ ಆಸಕ್ತಿಯಿರುವ ಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತಿಲ್ಲ!. ಆಸಕ್ತಿ ಇರುವ ಅಭಿಮಾನಿಗಳಿಗೆ ಇವುಗಳು ಕನ್ನಡನಾಡಿನಲ್ಲಿಯೇ ಸುಲಭವಾಗಿ ಕೈಗೆಟುಕುವಂತೆ ವ್ಯವಸ್ಥೆಮಾಡಬೇಕಾದುದು ರಾಜ್ಯಸರ್ಕಾರದ ಕರ್ತವ್ಯವಾಗಿದೆ. ಇಂದಿನ ಕಂಪ್ಯೂಟರ್ ಸಾಧನದ ನೆರವಿನಿಂದ ಈ ಗ್ರಂಥದ ಮುಂದಿನ ಸಂಶೋಧನೆಗೆ ನೆರವು ದೊರೆಯುವ ವಿಚಾರದಲ್ಲಿ ಸಾಫ್ಟ್‌ವೇರ್ ವಿಜ್ಞಾನಿಗಳಿಗೆ ಭರವಸೆಯಿದೆ. ಈ ವಿಚಾರದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಬಲ್ಲವರಿಗೆ; ನಿರ್ವಹಿಸಿರುವವರಿಗೆ ಈ ವಿಶ್ವವಿದ್ಯಾಲಯಗಳ ವಿದ್ಯಾವಂತರ ಮನ್ನಣೆಯು ಅದೇಕೋ ದೊರೆಯುತ್ತಿಲ್ಲ! ಕನ್ನಡಭಾಷೆಯಲ್ಲಿರುವ ಅಪರೂಪದ ಜ್ಞಾನನಿಧಿಯು ಇಂಥ ಕ್ಷುಲ್ಲಕ ಕಾರಣದಿಂದಾಗಿ ಜಗತ್ತಿನಲ್ಲಿ ಸೂಕ್ತವಾಗಿ ಬೆಳಕಿಗೆಬಾರದಂತಾಗಿದೆ.
ಕಳೆದ ಅರುವತ್ತು ವರ್ಷಗಳಿಂದ ಈ ಗ್ರಂಥವನ್ನು ಕುರಿತು ನಡೆದಿರುವ ಚಾರಿತ್ರಿಕ ಚಟುವಟಿಕೆಗಳ ಮಾಹಿತಿಗಳು ಹಾಗೂ ಗ್ರಂಥದ ಅಧ್ಯಯನದಿಂದ ದೊರೆಯುವ ಮಹತ್ತರವಾದ ಮಾಹಿತಿಗಳು ಮತ್ತು ಈ ಗ್ರಂಥದಲ್ಲಿ ಅಡಕವಾಗಿರುವ ಬೇರೆ ಬೇರೆ ಸಾಹಿತ್ಯದ ವಿವರವನ್ನು ಸೂಚಿಸಿ; ನಾನು ಈಗಾಗಲೇ ಸಿರಿಭೂವಲಯಸಾರ ಎಂಬ ಪರಿಚಯ ಗ್ರಂಥ ಪ್ರಕಟಿಸಿದ್ದಾಗಿದೆ. ಅದರಲ್ಲಿ ಕಳೆದ ೬೦ ವರ್ಷಗಳಿಂದಲೂ ಸಿರಿಭೂವಲಯದ ವಿಚಾರವಾಗಿ ನಡೆದಿರುವ; ನೆಡಯಬೇಕಾಗಿದ್ದ; ಮುಂದೆನಡೆಬೇಕಿರುವ ಚಟುವಟಿಕೆಗಳನ್ನು ಕುರಿತು ವಿವರವಾದ ಚರ್ಚೆನಡೆದಿದೆ.
ಈ ಗ್ರಂಥದ ಸಾಂಗತ್ಯ ಪದ್ಯಗಳನ್ನು ಇಂದಿನ ಸರಳವಾದ ಕ್ರಮದಲ್ಲಿಯೇ ಓದಲು ಸುಲಭ ಸಾಧ್ಯವಾಗುವಂತೆ ನಿರೂಪಿಸಿ; ಸಿರಿಭೂವಲಯದ ಆಯ್ದ ಸಾಂಗತ್ಯ ಪದ್ಯಗಳ ಸಂಗ್ರಹ ಎಂಬ ಕೃತಿಯನ್ನೂ ಪ್ರಕಟಿಸಲಾಗಿದೆ. ಈ ಕಾರ್ಯಗಳಿಗೆ ಸಕಾರದಿಂದ ಯಾವುದೇ ನೆರವನ್ನೂ ಅಪೇಕಿಸಿಲ್ಲ. ಏಕಾಂಗಿಯಾಗಿ ಒಬ್ಬ ವ್ಯಕಿಯು ಮಾಡಬಹುದಾದುದನ್ನು ನಾನು ಮಾಡಿ ಮುಗಿಸಿದ್ದೇನೆ. ಅದನ್ನು ಈ ಮೂಲಕ ನಿಮ್ಮೆಲ್ಲರ ಗಮನಕ್ಕೆ ತಂದಿದ್ದೇನೆ. ಇಂದಿನ ಕನ್ನಡದ ಬೆಳವಣಿಗೆಗೆ ಮೂಲಕಾರಣವಾಗಿರುವ ಕನ್ನಡ ಬೆರಳಚ್ಚುಯಂತ್ರಕ್ರಮದ ನಿರೂಪಕರಾದ ದಿವಂಗತ ಕೆ. ಅನಂತಸುಬ್ಬರಾಯರು ಈ ಗ್ರಂಥದ ಸಂಶೋಧಕ ಕರ್ಲಮಂಗಲಂ ಶ್ರೀಕಂಠಯ್ಯನವರ ಸಹಚರರಾಗಿದುಡಿದು; ತಮ್ಮ ಜೀವಮಾನಪೂರ್ತ ಸಿರಿಭೂವಲಯದ ಪ್ರಚಾರಮಾಡಿದವರು. ಅವರಿಂದ ಸಂಪೂರ್ಣವಾಗಿ ಖಚಿತ ಮಾಹಿತಿಗಳನ್ನರಿತು; ಕಳೆದ ೨೫ ವರ್ಷಗಳಿಂದ ಶ್ರದ್ಧೆವಹಿಸಿ ಈ ಗ್ರಂಥದ ಅಧ್ಯಯನ ಮಾಡಿರುವುದಷ್ಟೇ ನನ್ನ ಶಿಕ್ಷಣಾರ್ಹತೆ. ನನಗೂ ಯಾವುದೇ ವಿಶ್ವವಿದ್ಯಾಲಯ ಪದವಿಯ ಮುದ್ರೆ ಇಲ್ಲ!
ಈಚೆಗೆ ಬೆಂಗಳೂರು ಹಾಗೂ ಬೆಳಗಾವಿ ನಗರದಲ್ಲಿ ಏರ್ಪಾಡಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ವಿಶ್ವಕನ್ನಡ ಸಮ್ಮೇಳನದ ವೇದಿಕೆಯಲ್ಲಿ ಕಳೆದ ಐವತ್ತು ವರ್ಷಗಳಿಂದ ಕನ್ನಡ ಭಾಷೆಯ ಸಾಹಿತ್ಯ; ಸಂಸ್ಕೃತಿ; ಜನಜೀವನ; ರಾಜಕಾರಣ ಇತ್ಯಾದಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಆಗಿರುವ ಸಾಧನೆಯನ್ನು ಕುರಿತು ಆತ್ಮಾವಲೋಕನ ಮಾಡಿಕೊಳ್ಳಲು ಅವಕಾಶವಾಗುವುದೆಂಬ ನಿರೀಕ್ಷೆಯಿತ್ತು. ಆದರೆ ಸಿರಿಭೂವಲಯದ ವಿಚಾರವಾಗಿ ಅಭಿಮಾನಹೊಂದಿದ್ದ ಮಾನ್ಯಶ್ರೀ ಜಿ. ವೆಂಕಟಸುಬ್ಬಯ್ಯನವರೂ ಕೂಡ ಚಕಾರವೆತ್ತಲಿಲ್ಲ! ಪ್ರಜಾವಾಣಿಯಲ್ಲಿ ಈ ವಿಚಾರವಾಗಿ ಮನವಿಮಾಡಿರೂ ಅದು ಫಲನೀಡಲಿಲ್ಲ. ಕನ್ನಡಕುಲಕೋಟಿಯ ಜನ್ಮಜನ್ಮಾಂತರದ ಜ್ಞಾನಸಂಪತ್ತು ಎನಿಸಿಕೊಂಡಿರುವ ಸರ್ವಭಾಷಾಮಯೀಭಾಷಾ ಸಿರಿಭೂವಲಯ ಎಂಬ ಅಚ್ಚರಿಯ ಪ್ರಾಚೀನ ಕನ್ನಡ ಅಂಕಕಾವ್ಯದ ವಿಚಾರದಲ್ಲಿ ಕಳೆದ ಅರುವತ್ತು ವರ್ಷಗಳಿಂದಲೂ ಕನ್ನಡ ಕನ್ನಡಸಾಹಿತ್ಯದ ದಿಗ್ಗಜರು ಅನುಸರಿಕೊಂಡು ಬಂದಿರುವ ಉದಾಸೀನ ಧೋರಣೆಯಿಂದ ಉಂಟಾಗಿರುವ ತೊಡಕನ್ನು ಕುರಿತು ಇಲ್ಲಿ ಓದುಗರ ಗಮನಸೆಳೆಯಲು ಆಶಿಸುತ್ತೇನೆ.
ಕ್ರಿ.ಶ. ೮೫೦ರ ಸುಮಾರಿನಲ್ಲಿ ಅಮೋಘವರ್ಷ ನೃಪತುಂಗನ ಕಾಲದಲ್ಲಿ ರಚನೆಯಾದ ಕವಿರಾಜಮಾರ್ಗ ಎಂಬ ಲಕ್ಷಣಗ್ರಂಥವೇ ಕನ್ನಡದ ಪ್ರಾಚೀನ ಸಾಹಿತ್ಯ ಎಂದು ಕನ್ನಡ ಸಾರಸ್ವತ ಲೋಕದ ದಿಗ್ಗಜರು ನಿರ್ಧರಿಸಿಬಿಟ್ಟಿದ್ದಾರೆ! ಇದಕ್ಕೂ ಮೊದಲು ರಚನೆಯಾಗಿರುವ ಅಂಕಕಾವ್ಯ ಸಿರಿಭೂವಲಯ. ಈ ಗ್ರಂಥದಲ್ಲಿ ಕನ್ನಡದ ಪ್ರಾಚೀನತೆಯ ಬಗೆಗೆ ಖಚಿತವಾದ ಹೇಳಿಕೆಗಳಿವೆ. ೨೪ನೇ ತೀರ್ಥಂಕರ ಮಹಾವೀರನು ಕನ್ನಡಭಾಷೆಯಲ್ಲಿ ನೀಡಿರುವ ಪರಂಪರಾಗತ ಉಪದೇಶಗಳ ಸಾರವೇ ಈ ಗ್ರಂಥದ ಮೂಲವೆಂದು ಕುಮುದೇಂದುಮುನಿಯು ಸ್ಪಷ್ಟವಾಗಿ ಸೂಚಿಸಿದ್ದಾನೆ. ಅಂದರೆ ಕನ್ನಡವು ೨೩೦೦ ವರ್ಷಗಳ ಇತಿಹಾಸ ಹೊಂದಿರುವುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ. ಇದನ್ನು ಅಲ್ಲಗಳೆಯಲು ಯಾರಿಗೂ ಸಾಧ್ಯವಿಲ್ಲ.
ಕನ್ನಡ ಅಕ್ಷರಗಳು ಹಾಗೂ ಅಂಕಿಗಳು ಕರುನಾಡತಣ್ಪಿನ ನೆಲದೊಳ್ ಹುಟ್ಟಿದ ಕುರು; ಹರಿ; ಪುರುವಂಶವೆರೆದು ಪೊರೆದು ಹೊತಿಸಿದ ಅಂಕಜ್ವಾಲೆಯ ಬೆಳಕಿನ ಪರಿಯ ಚುಜ್ಯೋತಿ ಇದರಿಯಾ ಎಂದು ಶ್ರೀಕೃಷ್ಣನು ಪಾರ್ಥನಿಗೆ ತಿಳಿಯಹೇಳಿದ್ದನ್ನು ಈ ಗ್ರಂಥವು ಸೂಚಿಸಿದೆ. ಅಂದರೆ, ಕನ್ನಡವು ಕ್ರಿ.ಪೂ. ೧೫೬೦ ಕ್ಕೆ ಮೊದಲೇ -ಸುಮಾರು ನಾಲ್ಕುಸಾವಿರ ವರ್ಷಗಳ ಹೆಂದೆಯೇ-ಬಳಕೆಯಲ್ಲಿದ್ದುದಕ್ಕೆ ಇದು ಸಾಕ್ಷಿಯಾಗಿದೆ.
ಆದಿ ತೀರ್ಥಂಕರ ಋಷಭದೇವನು ಕನ್ನಡ ಅಕ್ಷರಗಳ ಹಾಗೂ ಅಂಕಿಗಳ ಉಗಮವನ್ನು ಕುರಿತು ತನ್ನ ಪುತ್ರಿಯರಿಗೆ ತಿಳಿಸಿ ಕೊಟ್ಟದ್ದನ್ನೂ; ಅದೇ ಬ್ರಾಹ್ಮಿ ಹಾಗೂ ಸೌಂದರಿ ಲಿಪಿಗಳೆಂದು ಪ್ರಚಾರಕ್ಕೆ ಬಂದುದನ್ನೂ ಸಿರಿಭೂವಲಯವು ಖಚಿತವಾಗಿ ನಿರೂಪಿಸಿದೆ. ಸಿರಿಭೂವಲಯದ ಒಂದು ಅಂಗವೇಆಗಿದ್ದು ಇಂದಿನ ಜಗತ್ತಿನಾದ್ಯಂತ ಮನ್ನಣೆಗಳಿಸಿರುವ ಭಗವದ್ಗೀತೆಯಲ್ಲಿರುವ ಮಾಹಿತಿಗಳನ್ನಾಧರಿಸಿ ಲೆಕ್ಕಹಾಕಿದಲ್ಲಿ; ಕನ್ನಡ ಲಿಪಿ ಹಾಗೂ ಅಂಕಿಗಳಿಗೆ ಲಕ್ಷಾಂತರ ವರ್ಷಗಳಷ್ಟೇಅಲ್ಲ; ಕೋಟ್ಯಾಂತರ ವರ್ಷಗಳ ಇತಿಹಾಸವಿರುವುದು ಸ್ಪಷ್ಟವಾಗಿದೆ. ಆದರೆ ನಮ್ಮ ಕನ್ನಡ ವಿದ್ವಾಂಸರು ಕ್ರಿ. ಶ. ೬೦೦ ಕ್ಕೆ ಮೊದಲು ಕನ್ನಡವು ಲಿಪಿಬದ್ಧವಾಗಿರಲಿಲ್ಲವೆಂದೇ ನಿರ್ಧರಿಸಿಬಿಟ್ಟಿದ್ದರು! ಈಗ ಸುಮಾರು ಎರಡುಸಾವಿರ ವರ್ಷಗಳ ಶಾಸನದ ಆಧಾರವಿದೆ ಎಂದು ತಿದ್ದುಪಡಿ ಮಾಡಿಕೊಂಡಿದ್ದಾರೆ!! ಇದೆಲ್ಲ ಮಾಹಿತಿಗಳನ್ನು ಕುರಿತು ಸಿರಿಭೂವಲಯದ ಶ್ರೀಕಂಠಯ್ಯನವರು ೧೯೫೦ ಕ್ಕೆ ಮೊದಲೇ ಜಗತ್ತಿನ ಗಮನ ಸೆಳೆದಿದ್ದಾರೆ
ಕನ್ನಡಭಾಷೆಗೆ ಶಾಸ್ತ್ರೀಯಭಾಷೆಯ ಸ್ಥಾನಮಾನ ನೀಡುವ ವಿಚಾರದಲ್ಲಿ ಚೆನ್ನೈನ ಶ್ರೇಷ್ಠನ್ಯಾಯಾಲಯದಲ್ಲಿರುವ ವಿವಾದದ ಸೂಕ್ತ ಪರಿಹಾರಕ್ಕೆ ಈ ಅಪರೂಪದ ಅಪರಿಚಿತ ಕಾವ್ಯದಲ್ಲಿರುವ ಖಚಿತವಾದ ಮಾಹಿತಿಗಳು ಪ್ರಮುಖವಾದ ಸಾಕ್ಷ್ಷಿಯಾಗಿವೆ. ಇದರ ಆಧಾರದಲ್ಲಿ, ಮದ್ರಾಸಿನ ನ್ಯಾಯಾಲಯ ದಲ್ಲಿರುವ ವಿವಾದವನ್ನು ಸುಲಭವಾಗಿ; ಶೀಘ್ರವಾಗಿ ಪರಿಹರಿಸಿಕೊಳ್ಳಬಹುದು. ಅದಕ್ಕೆ ಮೊದಲು ನಮ್ಮ ವಿದ್ವಾಂಸರು ಸಿರಿಭೂವಲಯವನ್ನು ಅದರಲ್ಲಿ ಅಡಕವಾಗಿರುವ ಮಾಹಿತಿಗಳ ಆಧಾರದಲ್ಲಿ ಪ್ರಾಚೀನ ಕನ್ನಡ ಅಂಕಕಾವ್ಯ ಎಂಬುದಕ್ಕೆ ತಮ್ಮ ಸಮ್ಮತಿಯ ಮುದ್ರೆ ದಾಖಲಿಸಿ ನ್ಯಾಯಾಧೀಶರನ್ನು ಒಪ್ಪಿಸಬೇಕಾದ ಅಗತ್ಯವಿದೆ!
ಸಿರಿಭೂವಲಯ ಗ್ರಂಥವು ನನ್ನೊಬ್ಬನ ಆಸಕ್ತಿಯ ವಿಚಾರವಲ್ಲ. ಇಂದಿನ ಆರುಕೋಟಿ ಕನ್ನಡಿಗರು ಮಾತ್ರವಲ್ಲ; ಇಡೀ ಜಗತ್ತಿನ ಜನತೆಗೆ ಮಹತ್ತರವಾದ ಜ್ಞಾನನೀಡುವ ಕೃತಿಯಾಗಿz ಇದು. ಇದರಲ್ಲಿ ೭೧೮ ಭಾಷೆಯ ಸಾಹಿತ್ಯವು ಅಡಕವಾಗಿದೆ! ಜಗತ್ತಿನ ೩೬೩ ಮತಧರ್ಮಗಳೂ ಸಮಾನವೆಂದು ವಿವರಿಸಿ; ಯೋಗ ಹಾಗೂ ಭೋಗವನ್ನು ಸಮನ್ವಯಗೊಳಿಸಿಕೊಂಡಿದ್ದ ಯಾಪನೀಯವೆಂಬ ಅಲ್ಪಸಂಖ್ಯಾತ ಪಂಗಡಕ್ಕೆ ಸೇರಿದವನು ಈ ಅಚ್ಚರಿಯ ಗ್ರಂಥದ ಕರ್ತೃ ಕುಮುದೇಂದು ಮುನಿ!
ಅಣುವಿಜ್ಞಾನ; ಆಕಾಶಗಮನ; ಗಣಕಯಂತ್ರಕ್ರಮ; ಗಣಿತಶಾಸ್ತ್ರ; ಜೀವವಿಜ್ಞಾನ; ಶಿಲ್ಪಶಾಸ್ತ್ರ; ಧರ್ಮಶಾಸ್ತ್ರ; ಪುರಾಣ; ಇತಿಹಾಸ; ಸಂಗೀತ; ನೃತ್ಯ ಇತ್ಯಾದಿ ಸಕಲಜ್ಞಾನಕ್ಕೆ ಸಂಬಂಧಿಸಿದಂತೆ ಜಗತ್ತಿನಲ್ಲಿ ೧೨೦೦ ವರ್ಷಗಳ ಹಿಂದೆ ನಮ್ಮಲ್ಲಿ ಪ್ರಚಾರದಲ್ಲಿದ್ದ ಮಾಹಿತಿಗಳನ್ನು ಈ ಅಚ್ಚರಿಯ ಅಂಕಕಾವ್ಯವು ತೆರೆದಿಟ್ಟಿದೆ.
ಈ ಗ್ರಂಥದ ಭಾಷೆಯ ಲಿಪಿಕ್ರಮವು ಕಠಿಣವಾದುದು. ಇಂದಿನ ಸರಳಭಾಷೆಗೆ ಹೊಂದಿಕೊಂಡಿರುವ ವಿದ್ವಾಂಸರ ಸುಲಭವಾದ ಓದಿಗೆ ಇದು ತೊಡಕಾಗಿ ಪರಿಣಮಿಸಿದೆ. ಈ ಕಾರಣದಿಂದ ನಮ್ಮ ವಿದ್ವಾಂಸರು ಇದಕ್ಕೆ ಕಬ್ಬಿಣದಕಡಲೆ ಎಂದು ಹೆಸರಿಟ್ಟು ದೂರವಿರಿಸಿದ್ದರು. ಈಗ ಈ ಅಚ್ಚರಿಯ ಅಂಕಕಾವ್ಯವನ್ನು ಸರಳವಾಗಿ ಪರಿಚಯಮಾಡಿಕೊಡುವ ಕೆಲಸವು ಯಶಸ್ವಿಯಾಗಿ ನಡೆದಿದೆ. ಆಯುರ್ವೇದ ಹಾಗೂ ಗಣಕಯಂತ್ರ ಕ್ಷೇತ್ರದವರು; ಗಣಿತಜ್ಞರು ಮತ್ತು ಇಂಜಿನಿಯರಿಂಗ್ ಕ್ಷೇತ್ರದವರು ಈ ಗ್ರಂಥದ ವಿಚಾರದಲ್ಲಿ ಆಸಕ್ತಿವಹಿಸುತ್ತಿರುವುದು ತಂಬಾ ಹೆಚ್ಚಿನ ಸಂತೋಷದ ಸಂಗತಿ!
ಭಾರತದ ಸಾಹಿತ್ಯಪರಂಪರೆಯ ಪುರಸ್ಕಾರದ ಸರಣಿಯಲ್ಲಿ ಒಂದು ಮಹೋನ್ನತವಾದ ಕೀರ್ತಿಪತಾಕೆ ಎನಿಸಿರುವ ಜ್ಞಾನಪೀಠ ಪ್ರಶಸ್ತಿಗೂ ಸಿರಿಭೂವಲಯದ ಶ್ರೀಕಂಠಯ್ಯನವರ ವಿದ್ವತ್ತು; ವಿನಯ; ಉದಾರಗುಣ ಹಾಗೂ ನಿರಪೇಕ್ಷಮನೋಭಾವಕ್ಕೂ ಒಂದು ರೀತಿಯ ನೆರವಾದ ಸಂಪರ್ಕವಿದೆ. ಸಿರಿಭೂವಲಯದ ವಿಚಾರದಲ್ಲಿ ಆಸಕ್ತರಾಗಿದ್ದ ಅಂದಿನ ಕಲ್ಕತ್ತೆಯ ಕೋಟ್ಯಾಧಿಪತಿ ಶಾಂತಿಪ್ರಸಾದ್‌ಜೈನ್ ಅವರು ಶ್ರೀಕಂಠಯ್ಯನವರನ್ನು ತಮ್ಮಲ್ಲಿಗೆ ಕರೆಸಿಕೊಂಡು; ಅವರಿಂದ ಸಿರಿಭೂವಲಯದ ಸಮರ್ಪಕವಾದ ಪರಿಚಯ ಪಡೆದು ಕೃತಾರ್ಥರಾದರು. ಈ ಅಗಾಧವಾದ ಜ್ಞಾನನಿಧಿಯನ್ನು ಸೂಕ್ತವಾಗಿ ಗೌರವಿಸುವ ದಿಶೆಯಲ್ಲಿ ನಾನು ನಿಮಗೆನು ಕೊಡಬಲ್ಲೆ ಅಪ್ಪಣೆಯಾಗಲೀ ಎಂದು ವಿನಂತಿಸಿದರು. ಇವರ ಅಪಾರ ವಿದ್ವತ್ತನ್ನು ಬಹಳವಾಗಿ ಮೆಚ್ಚಿಕೊಂಡಿದ್ದ ಜೈನ್ ಅವರು ಈ ಗ್ರಂಥದ ಸಂಶೋಧನೆಯ ವೆಚ್ಚಕ್ಕಾಗಿ ಇವರು ಕೋಟ್ಯಾಂತರ ರೂಪಾಯಿಗಳ ಆರ್ಥಿಕ ನೆರವು ಕೇಳಿದ್ದರೂ ಸಂತೋಷದಿಂದ ಕೊಡುವ ಮನೋಸ್ಥಿತಿಯಲ್ಲಿದ್ದರು. ಬಹಳನಯವಾಗಿ ಇವರ ಈ ಕೊಡುಗೆಯನ್ನು ನಿರಾಕರಿಸಿದ ಶ್ರೀಕಂಠಯ್ಯನವರು ತಮ್ಮ ನಿರಪೇಕ್ಷಾ ಮನೋಭಾವವನ್ನು ಮೆರೆದರು. ಇದು ಶಾಂತಿಪ್ರಸಾದ್ ಜೈನ್ ಅವರ ಅಂತರಂಗದಲ್ಲಿ ಅಳಿಸಲಾಗದ ಪ್ರಭಾವಬೀರಿ; ಇಂಥ ಅಭಿಮಾನಧನರಾದ ಮಹಾನ್ ಜ್ಞಾನಿಗಳನ್ನು ಸೂಕ್ತವಾಗಿ ಗೌರವಿಸುವ ಸಲುವಾಗಿ ಅಪಾರ ಧನರಾಶಿಯನ್ನು ದೇಣಿಗೆನೀಡಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಸ್ಥಾಪನೆಗೆ ನಾಂದಿಹಾಡಿದರು! ಈ ಘಟನೆಯ ಪ್ರತ್ಯಕ್ಷಸಾಕ್ಷಿಯಾಗಿದ್ದವರಿಗೆ ಮಾತ್ರವೇ ಶ್ರೀಕಂಠಯ್ಯನವರ ವ್ಯಕ್ತಿತ್ವದ ಅರಿವಾಗುವುದು ಸಾಧ್ಯ!!
ಈ ಹಿನ್ನೆಲೆಯಲ್ಲಿ ವಿಚಾರಶಾಲಿಗಳಾದ ಓದುಗರು ಸಿರಿಭೂವಲಯ ಗ್ರಂಥದ ಮುಂದಿನ ಸಂಶೋಧನೆಯ ವಿಚಾದಲ್ಲಿ ಸರ್ಕಾರವನ್ನು ಸೂಕ್ತವಾಗಿ ಒತ್ತಾಯಿಸುವಂತಾಗಲೆಂದು ಆಶಿಸುತ್ತೇನೆ. ಸಿರಿಭೂವಲಯದಲ್ಲಿ ಸುಲಭವಾಗಿ ಓದಿ ತಿಳಿಯಬಹುದಾದ ಕೆಲವು ಸಾಂಗತ್ಯ ಪದ್ಯಗಳನ್ನು ಇಲ್ಲಿ ಓದುಗರ ಅವಗಾಹನೆಗೆ ತರಲಿಚ್ಚಿಸುತ್ತೇನೆ:
* * *
ಅಷ್ಟಮಹಾಪ್ರಾತೀಹಾರ್ಯವೈಭವದಿಂದ| ಅಷ್ಟಗುಣಂಗಳೊಳ್‌ಓಂದಮ್|
ಸೃಷ್ಟಿಗೆ ಮಂಗಲಪರ್ಯಾಯದಿನಿತ್ತ| ಅಷ್ಟಮಜಿನಗೆರಗುವೆನು||೧||
ಓದಿಸಿದೆನುಕರ್ಮಾಟದಜನರಿಗೆ| ಶ್ರೀದಿವ್ಯವಾಣಿಯಕ್ರಮದೆ|
ಶ್ರೀದಯಾಧರ್ಮಸಮನ್ವಯಗಣಿತದ| ಮೋದದಕಥೆಯನಾಲಿಪುದು||೨||
ಕನ್ನಡದೊಂದೆರಳ್‌ಮೂರುನಾಲ್ಕೈದುಆರೇ| ಳೆಂಟುಒಂಬತ್ತೆಂಬ|
ಉನ್ನತವಾದಂಕಸೊನ್ನೆಯಿಂಹುಟ್ಟಿತೆಂ| ದೆನುವುದನು ಕಲಿಸಿದನು||೩||
ಅಂಕೆಯಿಂದಿರಿಕೊಳ್ಳುವವಿಜ್ಞಾನದ| ಶಂಕೆಗಳನಿಲ್ಲಿಪೇಳುವೆ|
ಶಂಕೆಗುತ್ತರವನುಮುಂದಕೆಪೇಳ್ವಾಗ| ಅಂಕಿಯಶಂಕೆಗಳೆಷ್ಟು||೪||
ಅಣುವೆಂದುಪರಮಾಣುವೆಂದುಪುದ್ಗಲವನು| ಗಣಿಸುವಾಗಿರುವಂಕವೆಷ್ಟು|
ಅಣುವಿನಗುಣವೇನುಅಣುವಿನಕ್ಷಣವೇನು| ಗಣಿತದಮರ್ಮವದೇನು||೫||
ಅಣುವನೊಡೆದುಪರಮಾಣುವಮಾಡಲು| ಕೊನೆಗೆನಿಲ್ಲುವಶಕ್ತಿಯೇನು|
ಅಣುವಿಂದಣುವಾಗಿನಿಲ್ಲುವದ್ರವ್ಯದ| ಗಣನೆಯಪೇಳುವುದೆಂತು||೬||
ತನುವನಾಕಾಶಕೆಹಾರಿಸಿನಿಲಿಸುವ| ಘನವೈಮಾನಿಕದಿವ್ಯಕಾವ್ಯ|
ಪನಸಪುಷ್ಪದಕಾವ್ಯವಿಶ್ವಂಭರಕಾವ್ಯ| ಜಿನರೂಪಿನಭದ್ರಕಾವ್ಯ||೭||
ಯವೆಯಕಾಳಿನಕ್ಷೇತ್ರದಳತೆಯೊಳಡಗಿಸಿ| ಅವರೊಳನಂತವಸಕಲಾನ್|
ಕವನವದೊಳ್‌ಸವಿಯಾಗಿಸಿಪೇಳುವ| ನವಸಿರಿಇರುವಭೂವಲಯ||೮||
ವನಿತಾಬಿಂಬಾದರದಚುಂಬನದರಸಪೀರ್| ದನದರರಸದರುಚಿಯಿಂತೇರಿದರ್|
ಶನದಪರವಶರಾನಂದಲಾವಣ್ಯz| ಯದುರಿನಭವನಾಮರರ್||೯||
ಕರುಣೆಯಧವಲವರ್ಣದಪಾದಗಳಿಹ| ಪರಮಾತ್ಮಪಾದದ್ವಯದೆ|
ಸಿರವಿಹನಾಲ್ಕಂಕವೆರಸಿಸಿಂಹದಮುಖ| ಭರತಖಂಡದಶುಭಚಿಹ್ನೆ||೧೦||
ಸಿವಪಾರ್ವತೀಶನಗಣಿತದಶ್ರೀಕಂಠ| ದವನಿಯತಾಳೆಯೋಲೆಗಳ|
ಸುವಿಶಾಲಪತ್ರದಕ್ಷರದಭೂವಲಯಕೆ| ಸವಿಸ್ತರಕಾವ್ಯಕೆನ್ನನಮಹವು||೧೧||
ನೀಲಾಂಬರದೊಳುಹೊಳೆವನಕ್ಷತ್ರ| ಮಾಲಿನ್ಯವಾಗದವರೆಗೆ|
ಶೀಲವ್ರತಂಗಳೊಳುಬಾಳ್ದುಜನರೆಲ್ಲ| ಕಾಲನಜಯಿಸಲೆತ್ನಿಸಲಿ||೧೨||
* * *
ಸಿರಿಭೂವಲಯದಲ್ಲಿ ಈ ರೀತಿಯ ಮೂಲ ಕನ್ನಡ ಸಾಂಗತ್ಯ ಪದ್ಯಗಳ ಸಂಖ್ಯೆಯು ಆರುಲಕ್ಷ! ಇವುಗಳಲ್ಲೇ ಅಕ್ಷರಕ್ಕೆ ಲಕ್ಷದಂತೆ ಬೇರೆ ಬೇರೆ ಭಾಷೆಗಳಲ್ಲಿ ಈ ಜಗತ್ತನ್ನೇ ತುಂಬಿರಿಸುವಷ್ಟು ಸಾಹಿತ್ಯದ ರಚನೆಯಾಗುತ್ತದೆ!! ವಿದೇಶಗಳ ವಿದ್ಯಾವಂತರು ಇದನ್ನು ಜಗತ್ತಿನ ಹತ್ತನೇ ಆಶ್ಚರ್ಯ ಎಂದು ಪರಿಗಣಿಸಿದ್ದಾರೆ!!! ಇಂಥ ಮಹೋನ್ನತ ಸಾಹಿತ್ಯ ಕೃತಿಯು ಇಂದಿನ ಆಧುನಿಕ ವಿಜ್ಞಾನಯುಗದಲ್ಲಿ ಪ್ರಜ್ವಲಿಸುವಂತೆ ಮಾಡುವಲ್ಲಿ ನಾಡಿನ ವಿದ್ಯಾವಂvರು ಹಾಗೂ ಆಡಳಿತಗಾgರು ಉತ್ಸಾಹದಿಂದ ಕೈಜೋಡಿಸುವಂತಾಗಲೆಂಬುದು ಈ ಬರಹದ ಉದ್ದೇಶವಾಗಿದೆ. ಓದುಗರು ಈ ದಿಸೆಯಲ್ಲಿ ಸಂಬಂಧಿಸಿದವರೆದುರು ತಮ್ಮ ಹಕ್ಕೊತ್ತಾಯವನ್ನು ಮಂಡಿಸಬೇಕಾಗಿ ವಿನಂತಿ.
ಕನ್ನಡಕುಲಕೋಟಿಯು ಚಿರಾಯುವಾಗಲೀ ಸಿರಿಭೂವಲಯದ ಅಭಿಮಾನಿಗಳ ಪರವಾಗಿ,
ಕನ್ನಡದ ಅಡಿಯಾಳು: ಸುಧಾರ್ಥಿ ಹಾಸನ, ಹಾಲುವಾಗಿಲು ಗ್ರಾಮ, ತಟ್ಟೇಕೆರೆ ಅಂಚೆ. ಹಾಸನ ಕಸಬ, ಹಾಸನ. ೫೭೩೨೦೧. ದೂರವಾಣಿ: ೯೪೪೯೯೪೬೨೮೦./೭೬೭೬೪೭೪೮೭೨.