Sunday 16 February 2020

ಸಿರಿಭೂವಲಯವು ನಿಜವಾದ ಕನ್ನಡಕಾವ್ಯಾಭ್ಯಾಸಿಗಳಿಗೆ ಒಂದು ಕಠಿಣವಾದಸವಾಲು

ಸಿರಿಭೂವಲಯಕಾವ್ಯದ ಅಂತರ್ಸಾಹಿತ್ಯದ ಮೂಲಪಾಠವನ್ನು ಸ್ವರ ವ್ಯಂಜನಗಳನ್ನು ಬಿಡಿಸಿ ಬರೆದಿರುವುದನ್ನ- ಒಟ್ಟುಗೂಡಿಸಿ  ಸಂಯುಕ್ತಾಕ್ಷರ ಕ್ರಮದಲ್ಲಿ ಬರೆದಿರುವುದು ಈ ಕಾವ್ಯದ ಸರಳಪರಿಚಯನೀಡುವಲ್ಲಿ ಸುಧಾರ್ಥಿಯು ಅನುಸರಿಸಿರುವ ಎರಡನೇ ಹೆಜ್ಜೆಯಾಗಿದೆ. 
ಇದನ್ನು ಓದುವುದೂ ಕಷ್ಟವೆಂದು ಭಾವಿಸುವವರಿಗೆ ಸಾಂಗತ್ಯಪದ್ಯಗಳನ್ನು ಪದವಿಭಾಗಮಾಡಿ ಮುದ್ರಿಸಬೇಕಾಗುತ್ತದೆ. ಸಮಸ್ಯೆಯು ಅಲ್ಲಿಗೇ ಮುಗಿಯುವುದಿಲ್ಲ! ಕಠಿಣಪದಗಳಿಗೆ ಅರ್ಥವಿವರಿಸಬೇಕಾಗುತ್ತದೆ.
ಅದಕ್ಕೆ ಸೂಕ್ತವಾದ ಪ್ರಾಚೀನ ಶಬ್ದಕೋಶ ಯಾವುದೂ ಇಲ್ಲ!! ಆ ಕಾರಣದಿಂದಾಗಿ ಓದುಗರು ಈ ಕಾವ್ಯಾಧ್ಯಯನಕ್ಕೆ ಹೆಚ್ಚಿನ ಶ್ರಮವಹಿಸಿ, ತಮ್ಮ ಚಿತ್ತವೃತ್ತಿಗೆ ಸಾಕಷ್ಟು ಕೆಲಸಕೊಡಲೇಬೇಕಾದುದು ಅನಿವಾರ್ಯ.
ಈಕಾವ್ಯದ ವಿಚಾರವಾಗಿ ಸುಮಾರು ಒಂದುದಶಕದಿಂದ ಸಾಕಷ್ಟು ಸರಳಪರಿಚಯನೀಡಿದ್ದರೂ, ಕೋಟ್ಯಾಂತರ ಜನ ಅಕ್ಷರಸ್ತರಿರುವ ಕನ್ನಡನಾಡಿನಲ್ಲಿ ಈ ಜಗತ್ತಿನ ಜ್ಞಾನನಿಧಿಯನ್ನು ನೋಡುವತ್ತ ಆಸಕ್ತಿವಹಿಸಿದರು ಬೆರಳೆಣಿಕೆಗೆ ಸಾಲುವಷ್ಟು ಜನರಿಲ್ಲ!! 
ಆದರೂ ಮುಂದೆಹುಟ್ಟಿಬರುವ ಯಾರಾದರೂ ಮೇಧಾವಿಯ ನೆರವಿಗೆ ಉಪಯುಕ್ತವಾಗಲೆಂಬ ಏಕೈಕ ಉದ್ದೇಶದಿಂದ ಸುಧಾರ್ಥಿಯು ಲೌಕಿಕವಾಗಿ ಯಾವುದೇ ಉಪಯೋಗವಿಲ್ಲದ ಈ ’ಗಾಳಿಗುದ್ದಿ ಮೈನೋಯಿಸಿಕೊಳ್ಳುವ’ ಕಾರ್ಯದಲ್ಲಿ ಲೀನನಾಗಿರುವುದಾಗಿದೆ.
ಯೋಗವಿದ್ದಲ್ಲಿ ಇಂದಿನ ವಿದ್ಯಾವಂತರಲ್ಲಿಯೂ ಕೆಲವರಾದರೂ ಈ ಅಚ್ಚರಿಯ ಕಾವ್ಯಾಧ್ಯಯನದತ್ತ ಆಸಕ್ತಿಹೊಂದಬಹುದು.  ಈ ಕಾರ್ಯವು ಪುರುಷರಿಗಿಂತಲೂ ಮಹಿಳೆಯರಿಂದಲೇ ಹೆಚ್ಚಾಗಿ ನಡೆಯಬೇಕಾದ ಸಾಧನೆಯಾಗಿದೆ.  ಆಸಕ್ತಿ ಇರುವವರು ಪ್ರಯತ್ನಿಸಬಹುದು.   
                                                    -ಸಿರಿಭೂವಲಯದಸುಧಾರ್ಥಿ.

No comments:

Post a Comment