Sunday 14 May 2023

ಸಾವಿನನಂತರ ತಕ್ಷಣಕ್ಕೆ ಜೀವದ ಸ್ಥಿತಿಯೇನು??

 ** ಸಾವಿನನಂತರ ತಕ್ಷಣಕ್ಕೆ ಜೀವದ ಸ್ಥಿತಿಯೇನು??**

ನಿಜಕ್ಕೂ ಇದೊಂದು  ಸಮರ್ಪಕವಾದ  ಉತ್ತರ ಕಾಣಿಸದ 

ಪ್ರಶ್ನೆಯಾಗಿದೆ ನಮ್ಮ ಪ್ರಪಂಚದಲ್ಲಿ!!

’ಕನ್ನಡದವೇದ’  ’ಕನ್ನಡದ ವೇದಾಂತ’ವಾಗಿರುವ ಸಿರಿಭೂವಲಯವು 

ಈ ಪ್ರಶ್ನೆಗೆ ಸೂಕ್ತ ಉತ್ತರ ನೀಡಿರುವುದನ್ನು ನೀವಿಲ್ಲಿ ನೋಡಬಹುದು!!

 ಯಾವುದೇ ಶರೀರವಿರಲೀ,  ಅದರಲ್ಲಿ ಸೇರಿಕೊಂಡು 

ವ್ಯವಹರಿಸುವ ಒಂದು ಅಗೋಚರ ಶಕಿಗೆ; ಯಾವುದೇ ರೂಪ

ಆಕಾರಗಳಿಲ್ಲ.  ಕೇವಲ ಅದೊಂದು ’ಚೈತನ್ಯ’  ಭಾರತೀಯರು ಇದನ್ನು 

’ಜೀವ’ ’ಪ್ರಾಣ’   ಎಂಬ ಹೆಸರಿನಲ್ಲಿ ಸೂಚಿಸುತ್ತಾರೆ. ಆಧುನಿಕ ವಿಜ್ಞಾನಿಗಳ 

 ಅನಿಸಿಕೆಯಂತೆ ಈ ಪ್ರಶ್ನೆಗೆ ಒಂದು ಸೀಮಿತವಾದ ಉತ್ತರವು ಪ್ರಚಲಿತವಿದೆ. 

ಶರೀರ ಕ್ರಿಯೆಗಳ ಚಲನೆಗೆ ನೆರವಾಗುವ  ಚೈತನ್ಯವು (ಜೀವ) ಒಂದು ಶಕ್ತಿ. (ಎನರ್ಜಿ)

ಈ ಶಕ್ತಿಯು ಕಡಿಮೆಯಾದಂತೆ  ಶರೀರದ ಕ್ರಿಯೆಯು ಸೊರಗುತ್ತದೆ.  ಈ ಶಕ್ತಿಯು

ಸಂಪೂರ್ಣವಾಗಿ ಉಡುಗಿದಾಗ ಶರೀರವು ಶಾಶ್ವತವಾಗಿ  ನಿಶ್ಚಲವಾಗಿ,

ನಿರುಪಯೋಗಿಯಾಗುತ್ತದೆ.  

ವ್ಯವಸ್ಥಿತವಾಗಿ  ರೂಪಿಸಲಾದ ಯಂತ್ರಕ್ಕೆ ಇಂಧನ ; ಉರುವಲು; ವಿದ್ಯುತ್ ಶಕ್ತಿಯನ್ನು 

ಒದಗಿಸಿ ಚಾಲನೆಗೊಳಿಸಿದಾಗ , ಅದು ಸಮರ್ಪಕವಾಗಿ  ಕಾರ್ಯಾರಂಭಮಾಡುತ್ತದೆ. 

ಇಂಧನದ ಕೊರತೆಯಾಗಿ ಅದು ಇನ್ನಿಲ್ಲವೆಂಬಂತಾದಾಗ,  ಯಂತ್ರದ ಕಾರ್ಯವು

ಸ್ಥಗಿತಗೊಳ್ಳುತ್ತದೆ. ಮತ್ತೆ ಇಂಧನವನ್ನು ತುಂಬಿದಾಗ, ಅದು ಕ್ರಿಯಾಶೀಲವಾಗುತ್ತದೆ. 

ಇದು ಮಾನವ ನಿರ್ಮಿತ ಯಂತ್ರಗಳ ವಿಚಾರ.  ಆದರೆ, ಪ್ರಕೃತಿ ನಿರ್ಮಿತವಾದ 

ಪ್ರಾಣಿಗಳ  ಶರೀರದಲ್ಲಿ ನೆಲೆಸಿರುವ ಚೈತನ್ಯವು (ಜೀವ/ ಪ್ರಾಣ) ಶಾಶ್ವತವಾಗಿ  

ಇಲ್ಲವಾದಾಗ, ಶರೀರಕ್ರಿಯೆಯು  ಶಾಶ್ವತವಾಗಿ ಸ್ಥಗಿತಗೊಳ್ಳುತ್ತದೆ.  ಈ ಶರೀರಕ್ಕೆ 

ಮತ್ತೆ  ಜೀವವೆಂಬ ಚೈತನ್ಯವನ್ನು ತುಂಬಿ ಅದು ಕ್ರಿಯಾಶೀಲವಾಗುವಂತೆ ಮಾಡಲು 

ಸಾಧ್ಯವಿಲ್ಲ ಎಂಬ ವಿಚಾರ ಸರ್ವವಿದಿತ.  

ಸಾಮಾನ್ಯವಾಗಿ ವಿಚಾರಶಾಲಿಗಳು ಹಾಗೂ ವಿಜ್ಞಾನಿಗಳೂ  ಇದಕ್ಕೆ ಸಮ್ಮತಿಸುತ್ತಾರೆ.  

ಆದರೆ, ಶರೀರಾಂತರ್ಗತವಾದ  ಆತ್ಮವುತಾನು ಆಶ್ರಯಿಸಿದ್ದ  ಶರೀರವನ್ನು ತ್ಯಜಿಸಿ

ಹೊರಬಂದನಂತರ, ಆ ಜೀವದ ಸ್ಥಿತಿಯನ್ನು ಕುರಿತು  ನಮ್ಮ ವೇದೋಪನಿಷತ್ತುಗಳು 

ತಮ್ಮದೇ ಆದ ಮಾರ್ಗದಲ್ಲಿ ಈ ಪ್ರಶ್ನೆಗೆ ಉತ್ತರನೀಡುವಲ್ಲಿ  ಬಹಳ ವಿಸ್ತಾರವಾದ 

ಮಾಹಿತಿಗಳನ್ನು ನೀಡಿ,  ’ದೇಹವನ್ನು ತ್ಯಜಿಸಿದ ಆತ್ಮವು ತನ್ನ ಕರ್ಮಾನುಸಾರವಾಗಿ 

ಬೇರೊಂದು ಶರೀರವನ್ನು ಆಶ್ರಯಿಸಿವ್ಯವಹರಿಸುವ ’ಪುನರ್ಜನ್ಮ’ ಕುರಿತ ಮಾಹಿತಿಯನ್ನು 

ನೀಡುತ್ತವೆ.  ಇದನ್ನು ಒಪ್ಪುವವರಿರಬಹುದು; ನಿರಾಕರಿಸುವವರೂ ಇರಬಹುದು. 

ಸಂಸ್ಕೃತಭಾಷೆಯ ದೇವನಾಗರೀ ಲಿಪಿಯಲ್ಲಿ  ಪ್ರಚಲಿತವಿರುವ ವೇದಗಳು ಹಾಗೂ 

ಉಪನಿಷತ್ತುಗಳ ಮಾಹಿತಿಯನ್ನು ಕನ್ನಡಭಾಷೆಯಲ್ಲಿ ನಿರೂಪಿಸಿರುವವರು 

ಹಲವರಿದ್ದಾರೆ.  ಆದರೆ, ಶೃತಿ; ಸ್ಮೃತಿ ಕ್ರಮದಲ್ಲಿ ಉಳಿದುಬಂದಿರುವ ’ಅಪೌರುಷೇಯವಾದ’

ವೇದಗಳು; ಇದಕ್ಕೆ ಸಂಬಂಧಿಸಿದ ಬ್ರಾಹ್ಮಣಗಳು; ಅರಣ್ಯಕಗಳು;  ಉಪನಿಶತ್ತುಗಳು;  ಸೂತ್ರಗಳು

ಮುಂತಾದವುಗಳಲ್ಲಿ ಅಡಕವಾಗಿರುವ ಖಚಿತಮಾಹಿತಿಗಳನ್ನು ಸಮರ್ಪಕವಾಗಿ ವಿವರಿಸುವುದು

ಸಾಮಾನ್ಯಸ್ಥರದ  ಮಾನವಮಾತ್ರದವರಿಗೆ ಸಾಧ್ಯವಾಗದ ಕಾರ್ಯ.  ಈ ಕಾರ್ಯ ನಿರ್ವಹಿಸುವುದಕ್ಕೆ 

ಸರ್ವಜ್ಞ ಸ್ವರೂಪಿಯಾದ  ತ್ರಿಕಾಲ ಜ್ಞಾನಿಯೇ ಬೇಕಾಗುತ್ತದೆ.  ಅಂಥವರು ಮಾತ್ರವೇ 

ವೇದೋಪನಿಷತ್ತುಗಳ ನೈಜವಿವರಗಳನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ಸರಳವಾಗಿ 

ವಿವರಿಸಬಲ್ಲರು. ಇಂಥ ಮಹತ್ತರವಾದ ಕಾರ್ಯವನ್ನು ಸುಮಾರು ೧೨೦೦ ವರ್ಷಗಳ ಹಿಂದೆ

ಕುಮುದೇಂದುವೆಂಬ ಮಹಾನ್ ಜ್ಞಾನಿಯು  ತನ್ನ ’ಸಿರಿಭೂವಲಯ’ ಎಂಬ  ಜಗದಚ್ಚರಿಯ 

ಕನ್ನಡಕಾವ್ಯದಲ್ಲಿ  ಬಹಳ ಸರಳವಾಗಿ; ಖಚಿತವಾಗಿ; ಸಂಕ್ಷಿಪ್ತವಾಗಿ  ಸೂಚಿಸಿರುವುದನ್ನು

ನಾನು ಗಮನಿಸಿದ್ದೇನೆ. 

ಕೋಟ್ಯಾಂತರ ವರ್ಷಗಳ ಹಿಂದೆ ಋಷಭದೇವನಿಗೆ ಪ್ರಾಪ್ತವಾದ ’ಕೇವಲಜ್ಞಾನಕ್ಕೆ’  ’ಜಿನವಾಣಿಗೆ’  

ಭಗವದ್ವಾಣಿ; ಆದಿಗೀತೆ ಎಂದು  ಹೆಸರಾಯಿತು.  ಈ ಆದಿಗೀತೆಯೇ ಮುಂದೆ  ಭಗದ್ಗೀತೆ ಎಂದು 

ಪ್ರಚಲಿತವಾಯಿತು. ನೇಮಿತೀರ್ಥಂಕರನಿಂದ  ಉಪದೇಶವಾದ ಈ ಆದಿಗೀತೆಯು  ದ್ವಾರಕೆಯ

ಶ್ರೀಕೃಷ್ಣನಿಗೂ; ಕೃಷ್ಣದ್ವೈಪಾಯನ ವ್ಯಾಸನಿಗೂ  ಉಪದೇಶವಾಗುತ್ತದೆ. ಈ ಉಪದೇಶವನ್ನು 

ವ್ಯಾಸಮಹರ್ಷಿಯು  ತನ್ನ  ’ಜಯಕಾವ್ಯದಲ್ಲಿ’  ೧೬೨ ಶ್ಲೋಕಗಳ ವ್ಯಾಪ್ತಿಯಲ್ಲಿ  ಮೂರು 

ಅಧ್ಯಾಯಗಳಲ್ಲಿ  ಅಳವಡಿಸುತ್ತಾನೆ.  ಯುದ್ಧ ವಿಮುಖನಾಗಲಿದ್ದ ಪಾರ್ಥನಿಗೆ  ಇದೇ ಗೀತೆಯನ್ನು

ರಣಾಂಗಣದಲ್ಲಿ ಕೃಷ್ಣನು  ’ಭಗವದ್ಗೀತೆ’ ಯಾಗಿ ಬೋಧಿಸುತ್ತಾನೆ.  ಮುಂದೆ ಕಲಿಯುಗದ  ಜಗದ್ಗುರು 

ಶಂಕರ ಭಗವತ್ಪಾದರು ಅಗಾಧವಾದ ವೇದೋಪನಿಶತ್ತುಗಳ ಸಾರವನ್ನೆಲ್ಲ  ೭೦೦ಶ್ಲೋಕಗಳ ೧೮ 

ಅಧ್ಯಾಯದ ಭಗವದ್ಗೀತೆಯಾಗಿ ಪರಿಷ್ಕರಿಸಿ, ಆವೇಳೆಗೆ ಪ್ರಚಲಿತವಿದ್ದ ’ಮಹಾಭಾರತ’ದ 

ಭೀಷ್ಮಪರ್ವದಲ್ಲಿ  ಅಳವಡಿಸುತ್ತಾರೆ. ಇದೊಂದು ಲೋಕಹಿತಕ್ಕಾಗಿ ನಡೆದ ರಹಸ್ಯ ಕಾರ್ಯಾಚರಣೆ. 

ಅಲ್ಲಿನ ಮಾಹಿತಿಗಳೆಲ್ಲವೂ ಸಂಸ್ಕೃತಭಾಷೆಯಲ್ಲಿದ್ದವು. ಕನ್ನಡಿಗರಿಗೆ ಅವು  ಸುಲಭವಾಗಿ; 

ಸಮರ್ಪಕವಾಗಿ ಓದಲಾಗದ್ದು!  ಇದನ್ನು ಪರಿಹರಿಸುವ ದಿಸೆಯಲ್ಲಿ ಮುಂದೆ ಶಂಕರರ 

ಸಮೀಪಕಾಲೀನನೂ, ಶಂಕರರಿಗೆ ಸರಿಮಿಗಿಲಾದ  ಸರ್ವಜ್ಞ ಸ್ವರೂಪಿಯೂ; ತ್ರಿಕಾಲಜ್ಞಾನಿಯೂ

ಆಗಿದ್ದ  ಕುಮುದೇಂದುವೆಂಬ ದಿಗಂಬರ ಜೈನ ಸಂಪ್ರದಾಯದ ಯತಿಯು  ಕನ್ನಡದ ವೇದವೂ, 

ಕನ್ನಡದ ವೇದಾಂತವೂ ಆದ ತನ್ನ  ’ಸಿರಿಭೂವಲಯ’ ಎಂಬ ಜಗತ್ತಿನ ಅಚ್ಚರಿಯ ಕಾವ್ಯವಾದ 

ಬಹಳ ಸರಳವಾಗಿಯೂ; ಸುಲಲಿತವಾಗಿಯೂ  ಸಾಮಾನ್ಯ ಓದುಗರಿಗೆ 

ವೇದ್ಯವಾಗುವಂತೆ ನಿರೂಪಿಸಿರುವುದನ್ನು ನಾನು ಗಮನಿಸಿದ್ದೇನೆ. 

 ಸಿರಿಭೂವಲಯದ ವ್ಯಾಪ್ತಿ ಬಹಳ ವಿಸ್ತಾರವಾದುದು. ಇದರಲ್ಲಿ ಒಂಬತ್ತು ಖಂಡಗಳಿವೆ 

ಪ್ರತಿಯೊಂದು ಖಂಡದಲ್ಲಿಯೂ ಹಲವಾರು ಅಧ್ಯಾಯಗಳಿವೆ. ಜಗತ್ತಿನಲ್ಲಿ ಜ್ಞಾನಕ್ಕೆ 

ಸಂಬಂಧಿಸಿದಂತೆ ೭೧೮ ಭಾಷೆಗಳ,೩೬೨ ಮತಧರ್ಮಗ  ಜ್ಞಾನ- ವಿಜ್ಞಾನಕ್ಕೆ  ಸಂಬಂಧಿಸಿದ 

ಮಾಹಿಗಳೆಲ್ಲವೂ ಈ ಕಾವ್ಯದಲ್ಲಿ’ನೂರುಸಾವಿರಲಕ್ಷಕೋಟಿ’ ಶ್ಲೋಕಗಳ ವ್ಯಾಪ್ತಿಯಲ್ಲಿ ಅಡಕವಾಗಿವೆ. 

ಇಲ್ಲಿನ ಮೂಲ ಸಾಂಗತ್ಯ ಪದ್ಯಗಳ ಸಂಖ್ಯೆ ಆರು ಲಕ್ಷ! ಆರುಸಾವಿರ ಗಣಿತಸೂತ್ರಗಳ ನೆರವಿನಿಂದ 

ಈ ಕಾವ್ಯದ ರಚನೆಯಾಗಿದೆ. ಅರುವತ್ತು ಸಾವಿರಪ್ರಶ್ನೆಗಳಿಗೆ ಈ ಕಾವ್ಯದಲ್ಲಿ ಉತ್ತರವಿದೆಯೆಂಬುದು 

ಕವಿಯ ಘೋಷಣೆ!! ಈ ಕಾವ್ಯದಲ್ಲಿ ಅಡಕವಾಗದೇ ಯಾವುದೇ ವಿಚಾರವೂ 

ಹೊರಗುಳಿದಿಲ್ಲವೆಂದೂ ಕವಿಯು ಘೋಷಿಸಿರುವುದಿದೆ!! ಜಗತ್ತಿನ ಮಾನರೆಲ್ಲರಿಗೂ 

ಒಂದೇ ಧರ್ಮ; ಅದು ಜೀವಧರ್ಮ ಎಂಬುದು ಕವಿಯ ಹೇಳಿಕೆ. 

ಚಕ್ರಬಂಧರೂಪದಲ್ಲಿರುವ ಕನ್ನಡಕಾವ್ಯ ಸಿರಿಭೂವಲಯದ ಒಂಬತ್ತು ಖಂಡಗಳಪೈಕಿ;

ಮಂಗಳಪ್ರಾಭೃತವೆಂಬ ಮೊದಲನೇ ಖಂಡದ ೫೯ ಅಧ್ಯಾಯಗಳ ಮಾಹಿತಿಯನ್ನು 

ಸಾಮಾನ್ಯ ಓದುಗರು ಓದಿತಿಳಿಯಲು  ಸಾಧ್ಯವಿಲ್ಲ.  ಈ ಕಾರಣಕ್ಕಾಗಿ  ಕಾವ್ಯದಲ್ಲಿ

ಅಡಗಿಕುಳಿತಿರುವ  ಅಂತರ್ಸಾಹಿತ್ಯವನ್ನು ಹೊರತೆಗೆದು ಸರಳವಾಗಿ ಪರಿಚಯಿಸುವ 

ಕಾರ್ಯಕ್ಕೆ ಕನ್ನಡ ಬೆರಳಚ್ಚುಯಂತ್ರ ಶಿಲ್ಪಿ ಸ್ವರ್ಗೀಯ ಕೆ. ಅನಂತಸುಬ್ಬರಾಯರು ನನ್ನನ್ನು  

ಪ್ರೇರೇಪಿಸಿದರು.  ಸುಮಾರು ೩೦ ವರ್ಷಗಳ ಅಧ್ಯಯನದಿಂದ ಈ ಕಾರ್ಯವನ್ನು

ಸಾಧ್ಯವಿರುವಮಟ್ಟಿಗೆ ಯಶಸ್ವಿಯಾಗಿ ನಿರ್ವಹಿಸುವ ಭಾಗ್ಯ ನನ್ನದಾಯಿತು. 

 ಈ ಸುದೀರ್ಘವಾದ ಪಯಣದಲ್ಲಿ ನಮ್ಮ ಸಾಮಾಜಿಕ; ಪಾರಮಾರ್ಥಿಕ; ವೈಜ್ಞಾನಿಕ

ವಿಚಾರಗಳಿಗೆ ಸಂಬಂಧಿಸಿದ ಹಲವಾರು ಅಚ್ಚರಿಯ ಮಾಹಿತಿಗಳು ನನ್ನ  ಅರಿವಿಗೆ ದಕ್ಕಿದುವು.

ಅವುಗಳನ್ನು ಅಳವಡಿಸಿ ಸುಮಾರು ೩೦೦೦ ಪುಟಗಳ ವ್ಯಾಪ್ತಿಯಲ್ಲಿ ೯ ಪರಿಚಯಕೃತಿಗಳನ್ನು

ರೂಪಿಸಿದ್ದಾಯಿತು. ಇವುಗಳ ಭಾವಾನುವಾದದ ಸಂಗ್ರಹವನ್ನೂ ಇಂಗ್ಲಿಷ್ ಹಾಗೂ ಹಿಂದಿ 

ಭಾಷೆಯಲ್ಲಿ ಪ್ರಕಟಿಸಿದ್ದಾಯಿತು.  ಕನ್ನಡದ ಮಾನಸ್ತಂಭವಾದ ಈ ಮಹೋನ್ನತವಾದ ಕೃತಿಗೆ 

ಸೂಕ್ತವಾದ ಬೆಂಬಲ ದೊರೆಯಲಿಲ್ಲ! ಈ ಕಾವ್ಯದ ಸರಳ ಪರಿಚಯ ಕೃತಿಗಳನ್ನು 

ಉಚಿತವಾಗಿಯೂ ಹಂಚಿದ್ದಾಯಿತು.  ಆದರೂ ಈ ಕಾವ್ಯವನ್ನು ಆಸ್ವಾದಿಸುವುದು 

ಓದುಗರಿಗೆ ಕಠಿನವೆನಿಸಿತು.  ಈ ಕಾರಣದಿಂದಾಗಿ ಕಾವ್ಯಭಾಗವನ್ನು ಇಂದಿನ ಒತ್ತಕ್ಷರ 

ಕ್ರಮದಲ್ಲಿಯೇ ಪರಿವರ್ತಿಸಿ, ಎರಡು ಸಂಪುಟಗಳಾಗಿ ಸುಮಾರು ೯೦೦ ಪುಟಗಳವ್ಯಾಪ್ತಿಯಲ್ಲಿ 

ಜ್ಞಾನದಾನವಾಗಿ ಮುದ್ರಿಸಿ, ವಿತರಿಸುವ ಕಾರ್ಯ ನಿರ್ವಹಿಸಲು ಯೋಚಿಸಿದೆ. ಸಧ್ಯದಲ್ಲಿಯೇ 

’ಸಿರಿಭೂವಲಯದ ಸಂಕ್ಷಿಪ್ತ ಅಂತರ್ಸಾಹಿತ್ಯ ದರ್ಶನ’ ಎಂಬ ಕೃತಿಯು ಬೆಳಕುಕಾಣಲಿದೆ.  

ಸಿರಿಭೂವಲಯ ಕಾವ್ಯದಲ್ಲಿ ಅಡಕವಾಗಿರುವ ನೂರಾರು ಮಹತ್ವದ ಮಾಹಿತಿಗಳ ಪೈಕಿ

ಪ್ರಕೃತ ಈ ಲೇಖನದ ವಿಚಾರವೂ ಒಂದು.  ಇಲ್ಲಿನ ಓದುಗರಿಗೆ ಈ ಮಾಹಿತಿಯ ಪರಿಚಯ

ಆಗಲೆಂಬುದು ಈ ಬರಹದ ಉದ್ದೇಶ.

ಉನ್ನತವಾದ ಪರ್ವತದಂತೆಮಹೋನ್ನತವಾದ ಬ್ರಹ್ಮಾಂಡದ ಜಾಗದಲ್ಲೆಲ್ಲಾ  ಒಂದೇ ಕ್ಷಣದಲ್ಲಿ

ತಾನೇ ತಾನಾದ ಆತ್ಮನ ಉಗಮವನ್ನು ಕಾಣಿಸುವ ಆನನಂದದ ಎಣಿಕೆಯನ್ನು  ತಿಳಿಯಿರಿ’ 

ಎಂಬ  ಸಾರಾಂಶದ 

ಆನಗದಂತೆ ಮಹೋನ್ನತಬ್ರಹ್ಮಾಂಡ|

ತಾಣವೆಲ್ಲವ ತಾನೊಂದೇಕ್ಷಣದಲಿ|

ತಾನೇ ತಾನಾದಾತ್ಮನುಗಮವಕಾಣಿಪ|

ಆನಂದದಕ್ಷವರಿಯ||

(ಪ್ರಥಮಖಂಡದ ೨೮ನೇ ಅಧ್ಯಾಯದ ಪಾದಪದ್ಯಗಳ ಅಶ್ವಗತಿಯ ಅಂತರ್ಸಾಹಿತ್ಯದಲ್ಲಿ)

ಈ ಸಾಂಗತ್ಯ ಪದ್ಯದಲ್ಲಿ ಕವಿಯು ಬಹಳ ಸಂಕ್ಷಿಪ್ತವಾಗಿ;  ಖಚಿತವಾಗಿ ಈ 

ಸಾವಿನನಂತರದ ಆತ್ಮದ ಸ್ಥಿತಿಯನ್ನು ಕುರಿತು  ವಿವರಿಸಿರುವುದನ್ನು ಗಮನಿಸಿರಿ. 

ಸರ್ವವ್ಯಾಪಿಯಾದ ಪರಮಾತ್ಮನ ಸೂಕ್ಷ್ಮರೂಪವಾದ ಈ ಜೀವಾತ್ಮನಿಗೆ ಯಾವುದೇ 

ದೇಹದಲ್ಲಿನ ವಾಸದ ಅವಧಿಯು  ಆನಂದದ ವಿಚಾರವೇನಲ್ಲ ಎಂಬುದು ಸರ್ವವೇದ್ಯ. 

ಇದೊಂದು ರೀತಿಯ ಬಂಧನ.  ಇಂಥ ಸೀಮಿತ ಪರಿಧಿಯ ದೇಹದಿಂದ ಮುಕ್ತವಾದ

ಕೂಡಲೇ ಆತ್ಮಕ್ಕೆ ತಾನು ಬ್ರಹ್ಮಾಂಡವನ್ನೆಲ್ಲ ವ್ಯಾಪಿಸಿದವನು ಎಂಬುದಾಗಿ ತನ್ನ ಉಗಮದ

ವ್ಯಾಪ್ತಿಯ ಅರಿವಾಗಿ ಆನಂದವಾಗುತ್ತದೆ.  ಈ ಆನಂದದಲೆಕ್ಕವನ್ನು ತಿಳಿದಿಕೋ ಎಂಬುದಾಗಿ

ಕವಿಯು ಮಾರ್ಮಿಕವಾಗಿ ಸೂಚಿಸಿದ್ದಾನೆ.  

ಸಾವಿನನಂತರ ಆತ್ಮದ ಪ್ರೇತತ್ವ; ಈ ಪ್ರೇತತ್ವದ ಮುಕ್ತಿಗಾಗಿ  ನಡೆಯುವ ಕ್ರಿಯೆಗಳು;  ಆತ್ಮದ

ಪರಲೋಕ ಪ್ರಯಾಣ; ಅಲ್ಲಿ ಪಾಪ-ಪುಣ್ಯಗಳನ್ನು ಕುರಿತ ವಿಚಾರಣೆಯ ಲೆಕ್ಕಾಚಾರ;  

ಅದಕ್ಕನುಗುಣವಾಗಿ  ಪ್ರಾಪ್ತವಾಗುವ ಮುಂದಿನ ಜೀವನಮಾರ್ಗ; ಅದಕ್ಕೆ ಸೂಕ್ತವಾದ 

ಪುನರ್ಜನ್ಮ ಇತ್ಯಾದಿಗಳು ಮುಂದಿನ ವಿವರಗಳು.  ಆದರೆ, ಆತ್ಮವು  ದೇಹದಿಂದ 

ಹೊರಬಂದಕೋಡಲೇ ಅದಕ್ಕೆ ಉಂಟಾಗುವ ಅನುಭವವನ್ನು ಕುರಿತು ನೀಡಿರುವ 

ಸಾಹಿತ್ಯಿಕ ಮಾಹಿತಿಯಲ್ಲಿ ಸಿರಿಭೂವಲಯದ ಮಾಹಿತಿಯೇ ಅಪರೂಪದ್ದಾಗಿದೆ. 

ವೇದೋಪನಿಷತ್ತುಗಳ ವಿಸ್ತಾರವಾದ ವಿವರಣೆಗಳಲ್ಲಿ ಈ ಮಾಹಿತಿಯು  ಇರಬಹುದು;

ಅಥವಾ ಇಲ್ಲದಿರಬಹುದು. ಆದರೆ, ಕನ್ನಡದ ವೇದಾಂತವಾದ ತನ್ನ ಕಾವ್ಯದಲ್ಲಿ 

ಕವಿಯು ಈ ವಿಚಾರವನ್ನು ಖಚಿತವಾಗಿ ಸೂಚಿಸಿರುವುದನ್ನಂತೂ ನಾನು ಸರಳವಾಗಿ 

ಅರಿತಿದ್ದೇನೆ.  ಆತ್ಮವು ದೇಹವನ್ನು ತ್ಯಜಿಸಿ ಹೋಗುವ ’ಸಾವು’ ಎಂಬ ಕ್ರಿಯೆಯು 

ಯಾರಿಗೇ ಆಗಲೀ ಸಂಕಟದ ವಿಚಾರವಲ್ಲ.  ಆತ್ಮದ ಅತಿದೀರ್ಘ ಪಯಣದಲ್ಲಿ ಇದೊಂದು

ಅನಿವಾರ್ಯವಾದ ನಿಲ್ದಾಣ. ಇದಕ್ಕಾಗಿ ಸಂಕಟಪಡುವ ಬದಲಿಗೆ ಸಂತಸ ಪಡುವುದುದನ್ನು

ಅರಿತುಕೊಳ್ಳೋಣ. ಸಾವು ವ್ಯಕ್ತಿ ಜೀವನದಲ್ಲಿ ಸಂಭ್ರಮಿಸುವುದಲ್ಲವಾದರೂ 

ಸಂತಾಪಪಡುವುದಂತೂ ಅಲ್ಲವೆಂಬ ಅರಿವು  ನಮಗೆ ದೊರೆಯಲಿ. 

ತನ್ನ ಪ್ರಕೃತಜೀವನದುದ್ದಕ್ಕೂ ಹಲವಾರು ಜಂಜಡಗಳಿಂದ  ಜರ್ಜರಿತವಾಗಿರುವ ’ಆತ್ಮ’ಕ್ಕೆ 

ನಿಜಕ್ಕೂ ತನ್ನನ್ನು ಬಂಧಿಸಿರುವ  ದೇಹ ಮೋಹದ ವಿಚಾರದಲ್ಲಿ  ಜುಗುಪ್ಸೆಯುಂಟಾಗುವುದು

ಸಹಜ.  ಈ ಬಂಧನದಿಂದ ಬಿಡುಗಡೆಯಾದಕೂಡಲೇ ತನ್ನ  ನಿಜವಾದ ಸ್ವರೂಪದ ಅರಿವಾಗಿ 

ಅದಕ್ಕೆಮಹತ್ತರವಾದ  ಆನಂದ ಉಂಟಾಗುವುದು  ಸಹಜ. ಈ ಆನಂದದ ಪರಿಧಿಯ ಲೆಕ್ಕವನ್ನು

ತಿಳಿಯಿರಿ ಎಂದು ಕವಿಯು ಸೂಚಿಸಿದ್ದಾನೆ. ಹೀಗಾಗಿ ಸಾವೆಂಬುದು ನಮಗೆ  ಸಂತಸದ  

ಸಂಗತಿಯೇ ಹೊರತು; ಸಂತಾಪದ ವಿಚಾರವಂತೂ ಅಲ್ಲವೇ ಅಲ್ಲ. ಈ ರೀತಿಯಲ್ಲಿ 

ಮಹತ್ವದ ಹಲವಾರು  ಮಾಹಿತಿಗಳನ್ನು  ಸರಳವಾಗಿ ಓದಿತಿಳಿಯಲು  ಮುಂದೆ ಬೆಳಕುಕಾಣಲಿರುವ

 ’ಸಿರಿಭೂವಲಯದ ಸಂಕ್ಷಿಪ್ತ ಅಂತರ್ಸಾಹಿತ್ಯ ಸೌರಭ’ ಭಾಗ ೧ಮತ್ತು ೨ ಅನ್ನು ಉಚಿತವಾಗಿ

ಪಡೆಯಲು ಸಂಪರ್ಕಿಸಿ: ೭೬೭೬೪೭೪೯೭೨.  ಕೃತಿ ಪ್ರಕಟಣೆಯ ದಿನಾಂಕವನ್ನು ಕುರಿತು

ಸಧ್ಯದಲ್ಲೇ  ಇಲ್ಲಿ ಪ್ರಕಟಿಸಲಾಗುವುದು.  ಈ ವಿಚಾರದಲ್ಲಿ ಆಸಕ್ತಿ ಇರುವವರು ಮಾತ್ರ

ಸಂಪರ್ಕಿಸಿ. ಉಳಿದವರು ಅನವಶ್ಯಕವಾಗಿ ಪ್ರತಿಕ್ರಿಯಿಸುವುದು ಸೂಕ್ತವಲ್ಲ.

ಸಿರಿಭೂವಲಯದಸುಧಾರ್ಥಿ, ಹಾಸನ.

***

Wednesday 1 February 2023

ತಪಸ್ಸನ್ನು ಕುರಿತು ಸಿರಿಭೂವಲಯದ ಹೇಳಿಕೆ ಏನು ?

ತಪಸ್ಸನ್ನು ಕುರಿತು ಸಿರಿಭೂವಲಯದ ಹೇಳಿಕೆ ಏನು ?


ತಪಸ್ಸೆಂದರೆ, ದೇವರನ್ನು ಕುರಿತು  ಕಾಡಿನಲ್ಲಿ ಧ್ಯಾನಮಾಡುವುದೆಂಬ ವಿಚಾರವಿದೆ. ಆದರೆ,  ಮೋಕ್ಷಸಾಧನೆಗೆ ಅಡ್ಡಿಯಾಗಿರುವ ನಮ್ಮ ಪ್ರಾಚೀನ ಕರ್ಮಫಲಗಳನ್ನು ನಾಶಮಾಡಲು, ಸುಡಲು, ತಪಿಸಲು ಅನುಸರಿಸುವ ಕ್ರಮವನ್ನು ತಪಸ್ಸು ಎನ್ನಲಾಗುತ್ತದೆ. ನಮ್ಮ ದೇಹಾಂತರ್ಗತವಾದ ಆತ್ಮವು ಲಕ್ಷಾಂತರ ಜನ್ಮಗಳಲ್ಲಿ ಸಂಪಾದಿಸಿದ ಪಾಪಕರ್ಮದ ರಾಶಿಯ ಅರಿವು ನಮಗಿರುವುದಿಲ್ಲ!  ಅದು ಊಹಾತೀತವಾದಷ್ಟು ಅಗಾಧವಾದುದು.  ನಾವು ಮಾಡಿದ ಪುಣ್ಯಕಾರ್ಯಗಳ ಫಲವನ್ನು ನಾವು ’ಕೃಷ್ಣಾರ್ಪಣಮಸ್ತು’ ಎಂದು ಬೇರೆಯವರಿಗೆ ದಾನಮಾಡಲು  ಸಾಧ್ಯವಿದೆ. ಆದರೆ;  ಪಾಪಕರ್ಮಗಳ ಫಲಕ್ಕೆ ಅನುಭವಿಸಲೇಬೇಕಾದ  ’ಶಿಕ್ಷೆ’ ಯನ್ನು ನಮ್ಮ ದೇಹಾಂತರ್ಗತವಾದ ಆತ್ಮವೇ ಅನುಭವಿಸಬೇಕಾದುದು ವಿಧಿನಿಯಮ.  ಅದನ್ನು ಬೇರೆಯವರಿಗೆ ಕೊಡಲು ಸಾಧ್ಯವಿಲ್ಲ! ಆತ್ಮವು ದೇಹವನ್ನು ತ್ಯಜಿಸಿದನಂತರ ಅದು ಸಂಪಾದಿಸಿದ ಪಾಪ- ಪುಣ್ಯಗಳ  ಲೆಕ್ಕಹಾಕಿ, ಅವನ್ನು ಪರಸ್ಪರ ವಜಾಮಾಡಿ ಲೆಕ್ಕವನ್ನು ಸರಿದೂಗಿಸಲು  ಅವಕಾಶವಿಲ್ಲ. ಮುಂದೆ ಎಷ್ಟೋ ಜನ್ಮಗಳನ್ನೆತ್ತಿದರೂ ನಮ್ಮ ಪಾಪದ ರಾಶಿಯನ್ನು ಶಿಕ್ಷೆಯ ಮೂಲಕ ಅನುಭವಿಸಿ ಮುಗಿಸಲು; ನಾಶಮಾಡಲು ಸಾಧ್ಯವಿರುವುದಿಲ್ಲ. ಮಾನವ ಜನ್ಮದಲ್ಲಿ ಮಾತ್ರವೇ ನಮ್ಮ ಆತ್ಮವು ಪಾಪ-ಪುಣ್ಯಗಳ ಸಂಪಾದನೆ ಹಾಗೂ, ಪುಣ್ಯಫಲವನ್ನು  ಸತ್ಪಾತ್ರರಿಗೆ ದಾನಮಾಡುವುದು ಹಾಗೂ ಪಾಪರಾಶಿಯನ್ನು ಧ್ಯಾನ; ತಪಸ್ಸಿನಮೂಲಕ ತಪಿಸಿ, ನಾಶಮಾಡಲು ಸಾಧ್ಯವೆಂಬುದು   ಶಾಸ್ತ್ರವಚನ.  

ಈ ಕಾರಣದಿಂದಾಗಿ ವಿವೇಕಿಗಳು ಧ್ಯಾನ/ ತಪಸ್ಸಿನಲ್ಲಿ ತೊಡಗುತ್ತಾರೆ. ಈ ತಪಸ್ಸಿನಲ್ಲಿ  ಏಳು ವಿಧಗಳಿವೆ ಎಂಬುದನ್ನು ದ್ವಾರಕೆಯ ಶ್ರೀಕೃಷ್ಣನು ತನ್ನಣ್ಣ ನೇಮಿಯಿಂದ ತಿಳಿದಿದ್ದವಿಚಾರ ಹಾಗೂ ಉಗ್ರ; ದೀಪ್ತ; ಸಹತಪ್ತ;  ಮಹಾಘೋರ ಮುಂತಾದುವು ಬೇರೆ ಬೇರೆ ತಪೋಕ್ರಮಗಳೆಂಬ ಮಾಹ್ಗಿತಿಯು ಸಿರಿಭೂವಲಕಾವ್ಯದಲ್ಲಿ ಸೂಚಿತವಾಗಿದೆ. ಕಠಿಣತಪಸ್ಸು;  ಹಾಗೂ ಘೋರತಪಸ್ಸು ಎಂಬ ಪದಬಳಕೆಯನ್ನು  ಇಂದಿಗೂ  ಕಾಣಬಹುದು. 

ತಪಸ್ಸುಮಾಡುವವರ ಉದ್ದೇಶವು ಸಾತ್ವಿಕವಾಗಿದ್ದಾಗ, ಅವರ ಮುಖದಲ್ಲಿ ಶಾಂತತೆ; ತೇಜಸ್ಸು  ಹೊರಹೊಮ್ಮುತ್ತಿರುತ್ತದೆ. ಇದನ್ನು ದೀಪ್ತತಪಸ್ಸು ಎಂದು ಸೂಚಿಸುವುದಿದೆ. ( ವಸಿಷ್ಠ, ವಾಲ್ಮಿಕಿ ಮುಂತಾದವರು) ರಾಕ್ಷಸರು ಮಾಡುವ ತಪಸ್ಸು  ಘೋರ ಹಾಗೂ ಮಹಾಘೋರವಾಗಿರುತ್ತದೆ.  ತಪಸ್ಸುಮಾಡುವಾಗ ಅವರ ಮುಖದಲ್ಲಿ  ಶಂತತೆ ಹಾಗೂ  ಪ್ರಸನ್ನತೆಯ ಬದಲಿಗೆ ಕಾಠಿಣ್ಯ ಹಾಗೂ  ಕ್ರೌರ್ಯ ತುಂಬಿರುತ್ತದೆ. ಇದರಿಂದ ಲೋಕಹಾನಿಗೆ ಕಾರಣವಾಗುವುದು ಸಹಜ. (ಹಿರಣ್ಯಕಶಿಪು; ರಾವಣ ಮುಂತಾದವರು) ಹಲವಾರು ಋಷಿ; ಮುನಿಗಳ ಕಠಿಣ ತಪಸ್ಸು ಉಗ್ರ ತಪಸ್ಸು ಹಾಗೂ ಸಹತಪ್ತ ಮುಂತಾದ ತಪಸ್ಸುಗಳಿಂದ  ಅವರಿಗೆ ವ್ಯಕ್ತಿಗತ ಶಕ್ತಿ ಸಾಮರ್ಥ್ಯಗಳು ದೊರೆತರೂ  ಅದರಿಂದ ಲೋಕೋಪಕಾರವೂ ಆಗುತ್ತದೆ!! (ಜಮದಗ್ನಿ; ವಿಶ್ವಾಮಿತ್ರ;  ದೂರ್ವಾಸ ಮುಂತಾದವರು) ಇಂಥವರ ತಪಸ್ಸಿನ ಸಮಯದಲ್ಲಿ ಅವರ ಮುಖದಲ್ಲಿ ತೇಜಸ್ಸು ತುಂಬಿರುತ್ತದೆ. ಇವರಿಂದ ಲೋಕಕಲ್ಯಾಣವೂ ಆಗುತ್ತದೆ. ವೈಯಕ್ತಿಕವಾಗಿ  ಸುಧಾರ್ಥಿಯಂತೂ ಕಳೆದ ಮೂರುದಶಕಗಳಿಂದ ಸಿರಿಭೂವಲಯದ ಅಧ್ಯಯನ ಹಾಗೂ ಸರಳಪರಿಚಯದ ಪರಿಚಾರಿಕೆಯಲ್ಲಿ ತೊಡಗಿದ್ದಾನೆ. ಪುಣ್ಯ ಲಭಿಸದಿದ್ದರೂ ಪಾಪಸಂಚಯವಂತೂ ಆಗಿಲ್ಲವೆಂಬುದು ಅನುಭವವೇದ್ಯವಾಗಿದೆ. ಸಿರಿಭೂವಲಯದ ಸರಳಪರಿಚಯಕೃತಿಗಳನ್ನಾದರೂ ಓದುವಮೂಲಕ ನೀವೂ ಈ ಪ್ರಯೋಗದಲ್ಲ್ಲಿ ಭಾಗವಹಿಸಬಹುದಲ್ಲವೇ!?? 

                                                    ಸಿರಿಭೂವಲಯದಸುಧಾರ್ಥಿ ಹಾಸನ. ೭೬೭೬೪೭೪೮೭೨. .

Monday 23 January 2023

ಜಾಗತಿಕ ಆಹಾರ ಸಮಸ್ಯೆಗೊಂದು ಪರಿಹಾರ ಸಿರಿಭೂವಲಯಕಾವ್ಯದಲ್ಲಿ!!!

ಜಾಗತಿಕ ಆಹಾರ ಸಮಸ್ಯೆಗೊಂದು ಪರಿಹಾರ ಸಿರಿಭೂವಲಯಕಾವ್ಯದಲ್ಲಿ!!!

ಇದಕ್ಕೆ ವಿಜ್ಞಾನಿಗಳ ಅನಿಸಿಕೆ ಏನು!!??

ಪ್ರಿಯ ಓದುಗರೇ,

ಜಾಲತಾಣದಲ್ಲಿ  ಸಿರಿಭೂವಲಯ ಕಾವ್ಯದ ವಿಚಾರವಾಗಿ ಸಾಕಷ್ಟು  ಬರೆದದ್ದಾಗಿದೆ. ಓದುಗರ ನಿರಾಸಕ್ತಿಯ ಕಾರಣದಿಂದಾಗಿ ಕಾವ್ಯವನ್ನು ಕುರಿತು ನನಗೂ ಕೆಲವೊಮ್ಮೆಭ್ರಮನಿರಸವಾದದ್ದಿದೆ!!  ಅದನ್ನು ದೂರಮಾಡಿ, ಉತ್ತೇಜಿಸಿದವರುಸಾಮಾಜಿಕ

ಜಾಲತಾಣಫೇಸ್ ಬುಕ್ಕಿನ’  ಕೆಲವು ಅಭಿಮಾನೀ ಓದುಗರುಅವರಿಗಾಗಿ ನಾನು  ಕಾವ್ಯದ ಸರಳ ಪರಿಚಯ ಕೃತಿಯನ್ನು  ಪರಿಷ್ಕರಿಸಿ, ಒತ್ತಕ್ಷರ ರೂಪದಲ್ಲಿ ಮುದ್ರಿಸಿ, , ಎರಡು ಸಂಪುಟಗಳ ವ್ಯಾಪ್ತಿಯಲ್ಲಿ  ಜ್ಞಾನದಾನ  ರೂಪದಲ್ಲಿ ವಿತರಿಸುವ ಯೋಜನೆಯಅನುಷ್ಟಾನಕ್ಕಾಗಿಕ್ರಿಯಾಶೀಲನಾಗಿದ್ದೇನೆಈಸನ್ನಿವೇಶದಲ್ಲಿಒಂದೆರಡುಸಾಂಗತ್ಯಪದ್ಯಗಳು  ನನ್ನ ಗಮನ ಸೆಳೆದುವು. ಅವುಗಳ ಮಹತ್ವವು ನನ್ನ ಗಮನಕ್ಕೆ ಬಂದಕೂಡಲೇ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು  ಉತ್ಸುಕನಾಗಿ ಬರಹವನ್ನು ರೂಪಿಸಿದ್ದೇನೆ.

ದ್ವಾಪರಯುಗದ ಕುರುಕ್ಷೇತ್ರಯುದ್ಧದಲ್ಲಿ ಪಾರ್ಥನಿಗೆ ದ್ವಾರಕೆಯ ಶ್ರೀಕೃಷ್ಣನು ಅಚ್ಚರಿಯ ಅಲೌಕಿಕ  ಮಾಹಿತಿಯನ್ನು ಕುರಿತು ವಿವರಿಸಿದ್ದಾನೆ. ಇದೊಂದುಜಗತ್ತಿನ ಜೀವಿಗಳ ಆಹಾರದ ವಿಚಾರಕ್ಕೆ ಸಂಬಂಧಿಸಿದ್ದುಇಂದಿನ ಪರಿಸರದಲ್ಲಿ ಅವಿವೇಕಿಗಳಾದ  ಬಿಟ್ಟಿಭಾಗ್ಯಗಳ ರಾಜಕಾರಣಿಗಳ  ಹೀನ ವರ್ತನೆಯಿಂದಾಗಿ ರಾಜ್ಯದ ರಾಷ್ಟ್ರದ ಕೃಷಿಕರು ಕಷ್ಟ ನಷ್ಟದ ತಮ್ಮ ದಿನನಿತ್ಯದ ಕೃಷಿಕಾರ್ಯಗಳನ್ನು  ದೂರವಿರಿಸಿ, ಸುಲಭದ ಕೂಲಿ ಕೆಲಸದತ್ತ ಸಾಗಿದ್ದಾರೆ!   ಹಾಗಿದ್ದಲ್ಲಿ ಮುಂದಿನ ಸಂತತಿಯ ಆಹಾರಕ್ಕೆ  ಗತಿಯೇನು!?  ಕೇವಲ ಆಹಾರಕ್ಕಾಗಿ ನಾವು ನಮ್ಮ ಶತೃರಾಷ್ಟ್ರಗಳನ್ನು

ಆಶ್ರಯಿಸಿ, ಅವರ ಊಳಿಗದ ಆಳುಗಳಾಗಬೇಕೆನಮ್ಮ ದೇಶದ ಪ್ರಖ್ಯಾತವಿಜ್ಞಾನಿಗಳಾದರೂ ಇದನ್ನು ಕುರಿತು ಯೋಚಿಸಬೇಡವೇದೇಶದಲ್ಲಿ ಆಹಾರೋತ್ಪಾದನೆಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತಿರುವ ಹಲವಾರುಸಂಸ್ಥೆಗಳು ಗಂಡಾತರವನ್ನು ಕುರಿತು ಯೋಚಿಸಬೇಡವೇ??  ಇದಕ್ಕೊಂದು ಸರಳವಾದ ಪರಿಹಾರವು ನನಗೆ  ಕಾವ್ಯದಲ್ಲಿ ಗೋಚರಿಸಿತು. ಅದನ್ನು ಕುರಿತುಇಲ್ಲಿ ವಿವರಿಸುತ್ತಿದ್ದೇನೆ. ಜಗತ್ತಿನಲ್ಲಿ  ಯಾರೂ ಊಹಿಸಲಾಗದ ರೀತಿಯಲ್ಲಿ ವಿಜ್ಞಾನವು ಮುಂದುವರೆದುಯಾರೊಬ್ಬರ ಕಲ್ಪನೆಗೂ ನಿಲುಕದಿರುವಂಥಆವಿಷ್ಕಾರಗಳನ್ನುಮಾಡಿರುವುದು ಸರಿಯಷ್ಟೇಇದಕ್ಕೆ ಸಂಬಂಧಿಸಿದಂತೆ  ದೂರರ್ಶನದ ವಿಚಾರವಾಗಿ ನಾನು ಜಾಲತಾಣದಲ್ಲಿ ಒಮ್ಮೆದೂರದರ್ಶನದಲ್ಲಿ ಪ್ರಸಾರವಾಗುವ  ಚಿತ್ರಗಳಲ್ಲಿ ಬಗೆ ಬಗೆಯ ಆಹಾರ ಪದಾರ್ಥಗಳನ್ನು ಪ್ರದರ್ಶಿಸಲಾಗುತ್ತದೆ. ಯಾರಾದರೂ ವಿಜ್ಞಾನಿಗಳು ಆಹಾರ ಪದಾರ್ಥಗಳಿಗೆಳಲ್ಲಿ ಅವುಗಳ ಸ್ವಾಭಾವಿಕವಾದ ಪರಿಮಳವನ್ನೂ ಸೇರಿಸುವ ಸಂಶೋಧನೆ ಮಾಡಬಾರದೇ!? ಎಂದು ಸೂಚಿಸಿದ್ದುಂಟುಅದು ಕೆಲವರಿಗೆ ತಮಾಷೆಯ ವಿಚಾರವಾಗಿದ್ದಿರಬಹುದುಆದರೆ, ಈಗ ಇಲ್ಲಿ ಸೂಚಿಸುತ್ತಿರುವ ಮಾಹಿತಿಯು ಆರೀತಿಯಲ್ಲಿ ತಮಾಷೆಯದಲ್ಲ. ವಿಜ್ಞಾನಕ್ಷೇತ್ರದಮೇಧಾವಿಗಳಿಗೆಒಂದು ರೀತಿಯ ಸವಾಲಿನಂತಿರುವುದು ಮಾಹಿತಿ!! ಜನಸಾಮಾನ್ಯರಿಗೆ ಅಗತ್ಯವಾದುದನ್ನು ಅನ್ವೇಷಿಸಿ, ಲೋಕಕ್ಕೆ ಒದಗಿಸಿಕೊಡುವುದುವಿಜ್ಞಾನಕ್ಷೇತ್ರದ ಕಾರ್ಯಮುಂದೆ ಜಗತ್ತಿನಲ್ಲಿ ಆಹಾರಕ್ಕೆ ಸಂಬಂಧಿಸಿದಂತೆ ಹಾಹಾಕಾರಉಂಟಾಗುವುದು ನಿಸ್ಸಂಶಯಆದ್ದರಿಂದ  ಗಡ್ಡಕ್ಕೆ ಬೆಂಕಿಬಿದ್ದಾಗ, ಬಾವಿತೋಡಲುಗುದ್ದಲಿ ಹುಡುಕಿದರುಎಂಬ ಗಾದೆಯಂತಾಗಬಾರದುಇಲ್ಲಿ ಸೂಚಿಸಿರುವ  ಒಂದುಅಲೌಕಿಕ ಮಾಹಿತಿಯ ವಿವರದ ನೆಲೆಯಲ್ಲಿ ಜಗತ್ತಿನ ಆಹಾರ ಕ್ಷೇತ್ರದ  ಮುಂದಿನಸವಾಲನ್ನು ವಿಜ್ಞಾನಿಗಳು ಸಮರ್ಥವಾಗಿ   ಎದುರಿಸುವಂತಾಗಲಿ ಎಂಬುದುಇಲ್ಲಿ ನನ್ನ ಉದ್ದೇಶ. ವಿಚಾರಕ್ಕೆ ಸಂಬಂಧಿಸಿದಂತೆ ಸಿರಿಭೂವಲಯಕಾವ್ಯದಲ್ಲಿ ಉಲ್ಲೇಖವಾಗಿರುವ ಮಾಹಿತಿಯನ್ನು ಇಲ್ಲಿ ಸೂಚಿಸಲಾಗಿದೆ:

ಶ್ರೀ ಕೃಷ್ಣನು ಪಾರ್ಥನನ್ನು ಕುರಿತುಲೋಆಕಿ ದೂರಾಸ್ವಾದಿತ್ವರ್ಧಿಯರಿ ಪಾರ್ಥಎಂದು ಸೂಚಿಸಿ, ಮುಂದಿನ ಮಾಹಿತಿಯನ್ನು ಹೇಳುತ್ತಾನೆ.

ಲೋಲ್ಯಕ್ಷೇತ್ರದ ಹೊರಗಣ|ಸಂಖ್ಯಾತ ಸಾಲುಯೋಜನ ಪ್ರಮಾಣವು| ನೀಲೀಲೆಯೊಳ್ಹೊಗಿಸಿ ಅಲ್ಲಿಹ ವಸ್ತುಗಳ| ರಸದಾಳವನಿಲ್ಲಿಯೇತಿಳಿದತ್||

ಕಳೆಮಳೆಗಹ ಹುಳಿ, ಉಪ್ಪು, ಸಿಹಿ, ಕಹಿ|ಯಾರ್ಕೆತಿಳಿದ ಆಸ್ವಾದತ್ವ| ಬುದ್ಧಿಯಾಗಲುಬಂದಬಳಿಯ| ದೂರಸ್ಪರ್ಶದರ್ಶಿ||

ಅಂದರೆ, ಲೋಕದ ದೂರದಿಂದಲೇ ರುಚಿಯ ಸಮುದ್ರವನ್ನರಿಯುವುದನ್ನುಪರೀಕ್ಷಿಸುಪಾರ್ಥ. (ಅವು)ತೂಗಾಡುವ ಪ್ರದೇಶದ ಹೊರಗಿರುವ  ಲೆಕ್ಕಮಾಡಲುಸಾಧ್ಯವಾಗದಷ್ಟು ಸಾಲಿನ ಯೋಜನಗಳ ಪ್ರಮಾಣದಲ್ಲಿವೆ! (ಯೋಜನವೆಂದರೆ, ಸುಮಾರು ಹನ್ನೆರಡು ಮೈಲು ಪ್ರಮಾಣದ ಒಂದು ಮೂಲಮಾನ . ಇಂಥ ಯೋಜನಗಳು ಎಣಿಸಲಾಗದಷ್ಟು ದೊಡ್ಡ ಸಾಲಿನಲ್ಲಿವೆ!)ಇಷ್ಟು ಅಗಾಧ ಪ್ರಮಾಣದಲ್ಲಿ ಅಡಕವಾಗಿರುವ ವಸ್ತುವನ್ನು ಲೀಲೆಯಿಂದ ಮುಚ್ಚಿರಿಸಲಾಗಿದೆಅಲ್ಲಿರುವ ವಸ್ತುಗಳ ರಸದ ಆಳವನ್ನು ಇಲ್ಲಿಯೇ ತಿಳಿಯಬಹುದುಕಳೆಮಳೆ, ಹುಳಿ, ಉಪ್ಪು, ಸಿಹಿ, ಕಹಿಯನ್ನು ಆಯ್ಕೆಮಾಡಿತಿಳಿಯುವ, ಆಸ್ವಾಧಿಸುವ ಬುದ್ಧಿಯಾದರೆ, ಹತ್ತಿರಕೆ ಬಂದ ದೂರಸ್ಪರ್ಷ,ದೂರ ದರ್ಷಿತ್ವವಾಗುತ್ತದೆಅಂದರೆ, ನಾವಿರುವಲ್ಲಿಯೇ ಕುಳಿತು ಹಲವಾರು ಯೋಜನಗಳ ದೂರದಲ್ಲಿ ಪರಮಾಣುರೂಪದಲ್ಲಿರುವ  ದ್ರವ್ಯಗಳರುಚಿಯನ್ನು ಸವಿಯಬಹುದೆಂದು ೧೨೦೦ ವರ್ಷಗಳ  ಹಿಂದೆಯೇ ಸರ್ವಜ್ಞ ಸ್ವರೂಪಿಯಾದ ಕುಮುದೇಂದು ಮುನಿಯು ಖಚಿತವಾಗಿ ತಿಳಿಸಿದ್ದಾನೆ!!! ಇದು ನಮ್ಮ ಪ್ರಾಚೀನರ ಜ್ಞಾನ ಪರಿಧಿ!! ಆಧುನಿಕ ವಿಜ್ಞಾನಿಗಳು  ಟೆಲಿವಿಷನ್ನನ್ನು  ಸಂಶೋಧಿಸಿ, ಜನಸಾಮಾನ್ಯರಿಗೆ ದೂರದರ್ಶನದ ಸಾಕ್ಷಾತ್ಕಾರ ಮಾಡಿಸಿದ್ದಾಗಿದೆಅವರೇ ಇನ್ನೂ ಮುಂದುವರೆದು ಸಂಶೋಧಿಸಿದರೆ, ಲೋಕಾಕಾಶದಲ್ಲಿ ಯಾರೂ ಊಹಿಸಲಾಗದಷ್ಟು ಅಗಾಧ ಪ್ರಮಾಣದಲ್ಲಿ ಪರಮಾಣುರೂಪದಲ್ಲಿ ಅಡಗಿರುವ ಆಹಾರ ಸಂಬಂಧವಾದ ಸೂಕ್ಷ್ಮ ಪರಮಾಣುಗಳನ್ನು  ಅವುಗಳ ಸ್ವಾಭಾವಿಕ ಪರಿಮಳ ಹಾಗೂ ರುಚಿಯ ಸಹಿತವಾಗಿಸಾಕ್ಷಾತ್ಕರಿಸಿಕೊಳ್ಳುವ, ಆಸ್ವಾದಿಸುವತಂತ್ರಜ್ಞಾನವನ್ನುಆವಿಷ್ಕಾರಮಾಡಿದಲ್ಲಿ ಸಂಶೋಧನೆಯ ಸೌಲಭ್ಯವು ಜಗತ್ತಿನ ಜೀವರಾಶಿಗಳೆಲ್ಲವಕ್ಕೂ ಕಡಿಮೆ ವೆಚ್ಚದಲ್ಲಿ ಯಥೇಚ್ಚವಾಗಿ ಆಹಾರವುದೊರೆಯುವಂತಾಗುತ್ತದೆಇಂಥ ಸಂಶೋಧನೆಯತ್ತ ಧನಪಿಶಾಚಿಗಳಾದ ಪಾಶ್ಚಾತ್ಯರುಗಮನಹರಿಸಿ ಸಂಶೋಧನೆಯ ಸ್ವಾಮ್ಯ (ಹಕ್ಕು)ಸ್ಥಾಪಿಸುವಮೊದಲುಭಾರತೀಯರು, ಅದರಲ್ಲೂ ಮೇಧಾವಿಗಳಾದ ಕನ್ನಡ ವಿಜ್ಞಾನಿಗಳು  ಪ್ರಯೋಗ ನಡೆಸಿ,ಅದರಲ್ಲಿಯಶಸ್ವಿಗಳಾಗಲೆಂದು ನನ್ನ ಹಂಬಲ. ಕೆಲಸಕ್ಕೆ ಬಾರದ ಪ್ರಾಚೀನಕನ್ನಡ ಕಾವ್ಯವನ್ನು ಕುರಿತು ಇವನು ತನ್ನ೩೫ ವರ್ಷಗಳ ಆಯಸ್ಸನ್ನು ವ್ಯರ್ಥವಾಗಿ ಕಳೆದಿದ್ದಾನೆ. ಎಂಬ ಆಪಾದನೆ ನನ್ನಮೇಲಿದೆ. ಆದರೂ ಸಾಧನೆಯಲ್ಲಿ ಜಗತ್ತಿಗೆ, ಭಾರತಕ್ಕೆ, ಕನ್ನಡಿಗರಿಗೆ ಮಹತ್ತರವಾದ ಪ್ರಯೋಜನಉಂಟೆಂಬ ನಂಬಿಕೆ ನನಗಿದೆವೇದೋಪನಿಷತ್ತುಗಳ ಮುಂದುವರೆದ ಭಾಗವೇವಿಜ್ಞಾನಎಂಬುದು ಸರ್ವವೇದ್ಯ. ವೇದೋಪನಿಷತ್ತುಗಳಹಲವಾರುಹೇಳಿಕೆಗಳನ್ನು ವಿಜ್ಞಾನವು ತನ್ನ ಪ್ರಯೋಗಗಳಿಂದ ಪ್ರತ್ಯಕ್ಷ ವಾಗಿಸಿಕೊಂಡಿದೆ. ದೂರದರ್ಶನ ತಂತ್ರಜ್ಞಾನದಲ್ಲಿ ಯಶಸ್ಸುಗಳಿಸಿರುವವರಿಗೆ, ಪರಿಣತರಾಗಿರುವವರಿಗೆ ಇಲ್ಲಿ ಶ್ರೀಕೃಷ್ಣನುತಿಳಿಸಿರುವದೂರಾಸ್ವಾದಿತ್ವರ್ಧಿಯನ್ನುಸಾಕ್ಷಾತ್ಕರಿಸಿಕೊಳ್ಳುವುದುಅಸಾಧ್ಯವೇನಲ್ಲ!! ಮಾಹಿತಿಯನ್ನು ಯಾರುಬೇಕಾದರೂ ಉಪೇಕ್ಷಿಸಬಹುದು,ನಿರ್ಲಕ್ಷಿಸಬಹುದು,ಅವಹೇಳನಮಾಡಬಹುದು, ಅಪಹಾಸ್ಯಮಾಡಬಹುದು. ಅದಕ್ಕೆ ಅವರು ಸ್ವತಂತ್ರರು. ಆದರೆ, ಪ್ರಾಚೀನ ಭಾರತೀಯ ಜ್ಞಾನಸಂಪತ್ತಿನ ವಿಚಾರದಲ್ಲಿ  ಸದ್ಭಾವನೆ ಹೊಂದಿರುವವರು ಮಾಹಿತಿಯ ವಿಚಾರದಲ್ಲಿ ನಂಬಿಕೆಯಿರಿಸಿ, ತಾವು ಹಾಗೂ ತಮ್ಮ ಮಕ್ಕಳುಈ ಕಾವ್ಯದತ್ತ ಗಮನಹರಿಸಿ, ಇಲ್ಲಿ ಸೂಚಿಸಿರುವ ವಿಜ್ಞಾನದ ಪ್ರಯೋಗದತ್ತ ಗಮನಹರಿಸಿ, ಯಶಸ್ಸು ಗಳಿಸುವಂತಾಗಲೆಂದು  ಹಾರೈಸುತ್ತೇನೆಭಾರತ ಸರ್ಕಾರವು ಮಂಗಳ ಗ್ರಹದತ್ತ ಪಯಣಿಸು ವುದಕ್ಕೆಕೋಟ್ಯಾಂತರರುಪಾಯಿಗಳನ್ನುವಿನಿಯೋಗಿಸಿ,ಬಾಹ್ಯಾಕಾಶಯಾನಕ್ಕೆಬೆಂಬಲಿಸಿದ್ದಾಗಿದೆಈಗ  ಆಹಾರದ ಆವಿಷ್ಕಾರದ ಯೋಜನೆಯನ್ನು ಸೂಕ್ತವಾಗಿ  ಆಯೋಜಿಸಿದರೆ, ಮೋದಿಯವರಂಥ ಸಾತ್ವಿಕ ನಾಯಕರ ಬೆಂಬಲ ದೊರೆಯುವುದರಲ್ಲಿ ಸಂದೇಹವಿಲ್ಲ. ಸಂಬಂಧಿಸಿದ ಕ್ಶೇತ್ರದಪರಿಣತರು ಇದರತ್ತಗಮನಹರಿಸಿದಲ್ಲಿಸರ್ಕಾರದ ಬೆಂಬಲಗಳಿಸುವುದು ಅಸಾಧ್ಯವೇನಲ್ಲ ಕಾವ್ಯಕ್ಕೆ ಸಂಬಂಧಿಸಿದಂತೆ ಇಲ್ಲಸಲ್ಲದ ಸುಳ್ಳು ಮಾಹಿತಿಗಳ ಪ್ರಚಾರಕ್ಕೆ ಆಧ್ಯತೆ ನೀಡುವವರು  ಇಂಥ ಕಾರ್ಯಸಾಧುವಾದ,ಸರ್ವಜನೋಪಯೋಗಿಯಾದಪ್ರಯತ್ನಗಳತ್ತ ಗಮನಹರಿಸಬಾರದೇಕೆ!!?

ಸಿರಿಭೂವಲಯದಸುಧಾರ್ಥಿ.ಹಾಸನ.   

Monday 13 September 2021

ವೇದಗಳು ಅಪೌರುಷೇಯ ಎಂಬುದು ಪ್ರಶ್ನಾತೀತವಾದುದು.

 ವೇದಗಳು ಅಪೌರುಷೇಯ ಎಂಬುದು ಪ್ರಶ್ನಾತೀತವಾದುದು.

ವೇದವಿರೋಧಿಯದ ಯಾವ ಸಿದ್ಧಾಂತವೂ ಜಗತ್ತಿನಲ್ಲಿಲ್ಲ!
ಎಲ್ಲ ಸಿದ್ಧಾಂತಗಳೂ ರೂಪಾಂತರಗೊಂಡ (ಪರಿಷ್ಕಾರಗೊಂಡ) ಸಿದ್ಧಾಂತಗಳೇ ಆಗಿವೆ!!!!
ಜೈನಸಂಪ್ರದಾಯದ ’ಅಸಿಆಉಸಾ’ ಮಂತ್ರವು (ಅರ್ಹಂತಾಣಮ್; ಸಿದ್ಧಾಣಮ್; ಆಯಿರಿಯಾಣಮ್; ಉವಜ್ಝಾಯಾಣಮ್; ಸಾಹೂಣಮ್) ಎಂಬ ಪಂಚಪರಮೇಷ್ಠಿಯು ’ಶುಕ್ಲಋಗ್ವೇದಶಾಖೆ’ ಗೆ ಸೇರಿದ್ದೆಂಬ ಮಾಹಿತಿಯು ಸಿರಿಭೂವಲಯದಲ್ಲಿ ಸ್ಪಷ್ಟವಾಗಿದೆ. ಜೈನ ಸಂಪ್ರದಾಯವೂ ವೇದಮೂಲದ್ದೇ ಎಂಬುದನ್ನು ಅರಿಯಲು ಇದಕ್ಕಿಂತಲೂ ಖಚಿತವಾದ ಮಾಹಿತಿ ಇನ್ನೇನು ಬೇಕು!? ೫೦ನೇ ಅಧ್ಯಾಯದ ನಾಲ್ಕನೇ ಪಾದದ ಕೊನೆಯಿಂದ ಮೂರನೇ ಅಕ್ಷರಗಳ ಸ್ತಂಬಕಾವ್ಯದ ತುಣುಕಿನಲ್ಲಿ ಇದನ್ನು ಕಾಣಬಹುದು. ಇಲ್ಲಿ ಕುಮುದೇಂದುಮುನಿಯು ಶುಕ್ಲಋಗ್ವೇದ ಶಾಖೆ ಎಂದು ಸ್ಪಷ್ಟವಾಗಿ ಸೂಚಿಸಿರುವುದು ಗಮನಾರ್ಹ. ಋಗ್ವೇದಸಂಹಿತೆಯು ೨೧ ಶಾಖೆಗಳಲ್ಲಿ ಇತ್ತೆಂದು ಪತಂಜಲಿಯ ಹೇಳಿಕೆ ಇದೆ.. ಇವುಗಳು ಈಗ ಉಪಲಬ್ಧವಿಲ್ಲ. ಈಗಿನ ಶಾಖೆಗಳಲ್ಲಿ ಶಾಕಲ; ಬಾಷ್ಕಲ; ಆಶ್ವಲಾಯನ; ಶಾಂಖಾಯನ; ಮಾಂಡೂಕೇಯ ಶಾಖೆಗಳು ಪ್ರಮುಖವಾದುವು. ಸಾಮವೇದದಲ್ಲಿ ಸಾವಿರಶಾಖೆಗಳೆಂದು ಪತಂಜಲಿಯ ಹೇಳಿಕೆ. ಈಗ ೧೩ ಶಾಖೆಗಳು ಪ್ರಚಲಿತವಿವೆ. ಯಜುರ್ವೇದದಲ್ಲಿ ೮೫ ಶಾಖೆಗಳಿದ್ದು; ಈಗ ೪ ಶಾಖೆಗಳು ಮಾತ್ರ ಪ್ರಚಲಿತವಿವೆ. ಅಥರ್ವಣ ವೇದದಲ್ಲಿ ಒಂಬತ್ತು ಶಾಖೆಗಳಿದ್ದುವೆಂದು ಪತಂಜಲಿಯ ಹೇಳಿಕೆ ಎಂಬುದಾಗಿ ವೇದ ವಿದ್ವಾಂಸರು ಸೂಚಿಸಿರುವುದಿದೆ. ವೇದೋಪನಿಷತ್ತುಗಳ ವಿಚಾರದಲ್ಲಿ ಅಪರೂಪದ ಗೌರವಾದರಗಳನ್ನು ವ್ಯಕ್ತಪಡಿಸಿರುವ ಕುಮುದೇಂದುವಿನ ಹೇಳಿಕೆಯನ್ನು ಯಾರೊಬ್ಬರೂ ಸುಲಭವಾಗಿ ಅಲ್ಲಗಳೆಯಲು ಸಾಧ್ಯವಿಲ್ಲವೆಂಬುದು ನನ್ನ ಅನಿಸಿಕೆ. ಸನಾತನ ಧರ್ಮವೆಂದರೆ, ವೇದಮೂಲದ ಧರ್ಮ. ಈ ಧರ್ಮವನ್ನು ಪಾಲಿಸಲು ಇಚ್ಚಿಸದವರು ತಮ್ಮದೇ ಆದ ಹೊಸದಾರಿ ಹಿಡಿಯುವುದು ಜಗತ್ತಿನ ಆದಿಯಿಂದ ಇಂದಿನವರೆವಿಗೆ, ಅಷ್ಟೇಅಲ್ಲ! ಮುಂದೆಯೂ ಉಳಿದು ಬೆಳೆಯುವ ಪರಿಸ್ಥಿತಿ!! ಇದನ್ನು ಯರೊಬ್ಬರೂ ಬದಲಿಸಲು ಸಾಧ್ಯವಿಲ್ಲ! ಸನಾತನ ಧರ್ಮಾವಲಂಭಿಗಳೆಂದರೆ, ಸಾಕ್ಷಾತ್ ಸರ್ವಸಂಘ ಪರಿತ್ಯಾಗಿಗಳು; ಪರಬ್ರಹ್ಮದ ಅಪರಾವತಾರವೆಂದು ಯಾರೂ ಭಾವಿಸಬೇಕಿಲ್ಲ!! ಅರೀತಿ ಆಗಿದ್ದರೆ; ವಿಶ್ವಾಮಿತ್ರ; ಋಷಭದೇವ ಮುಂತಾದವರು ತಮ್ಮ ಸಮಕಾಲೀನ ಸಾಮಾಜಿಕ ಪರಿಸರದ ವಿರುದ್ಧ ಸಿಡಿದೇಳುವ ಅಗತ್ಯವೇ ಇರಲಿಲ್ಲ!! ತನ್ನಕಾಲದಲ್ಲಿ ತಲೆದೋರಿದ್ದ ಸಾಮಾಜಿಕ ಜೀವನದ ತೊಡಕುಗಳ ನಿವಾರಣೆಗಾಗಿ ಜೈನಸಂಪ್ರದಾಯದ ಆದಿತೀರ್ಥಂಕರ ಋಷಭದೇವನು ಸನಾತನಧರ್ಮದಿಂದ ಅತ್ಯಗತ್ಯವಾದ ವಿಚಾರಗಳನ್ನು ಮಾತ್ರ ಅಳವಡಿಸಿಕೊಂಡು, ಸಾಮಾಜಿಕಹಿಂಸೆ, ಹಾಗೂ ಶೋಷಣೆಯ ವಿರುದ್ಧ ಬಂಡಾಯವೆದ್ದು ’ಅಹಿಂಸಾಪರಮೋಧರ್ಮ’ ’ಸಹನೆಯೇ ಅತ್ಯುಚ್ಚಧರ್ಮ; ಎಂಬ ನೆಲೆಯಲ್ಲಿ ಜೀವನದ ಜಂಜಡವನ್ನು ಜಯಿಸುವ ಹಾದಿಯನ್ನು ಬೋಧಿಸಿದವನು. ಜೀವನದ ಜೊಂಜಡವನ್ನು ಯಶಸ್ವಿಯಾಗಿ ಜಯಿಸಿದ ಕಾರಣದಿಂದಾಗಿಯೇ ಈತನಿಗೆ ’ಜಿನ’ ಎಂಬ ಪದವಿ ಲಭಿಸಿತು. ಜಿನನ ಪಥದಲ್ಲಿ ಸಾಗುವವರು ಜೈನರೆಂದಾದರು. ಮುಂದೆ ಈ ಸಂಪ್ರದಾಯದಲ್ಲೂ ಹಲವಾರು ಕವಲುಗಳು ಉಗಮವಾದುವು! ಅವುಗಳ ಪೈಕಿ ಎಂಟನೇ ತೀರ್ಥಂಕರ ’ಚಂದ್ರಪ್ರಭ’ನು ಪ್ರತಿಪಾದಿಸಿದ ಸರ್ವಧರ್ಮ ಸಹಿಷ್ಣುತೆಯನ್ನು ಅಂಗೀಕರಿಸುವ ’ಯಾಪನೀಯ’ ಸಂಪ್ರದಾಯವೂ ಒಂದು. ಯಾಪನೀಯರನ್ನು ಜೈನರು ’ಜೈನ’ರೆಂದು ಮಾನ್ಯಮಾಡಿರಲಿಲ್ಲ!! ೧೨೦೦ ವರ್ಷಗಳಹಿಂದೆ ಅಷ್ಟಮತೀರ್ಥಂಕರ ಚಂದ್ರಪ್ರಭದೇವನನ್ನು ಆರಾದ್ಯದೈವವಾಗಿ ಪರಿಗಣಿಸಿದ್ದ ಕುಮುದೇಂದುಮುನಿಯು ತನ್ನ ಸಿರಿಭೂವಲಯದಲ್ಲಿ ಪ್ರಾಚೀನ ವಿಚಾರಗಳಿಗೆ ಬಂಧಿಸಿದ ಹಲವಾರು . ಮಾಹಿತಿಗಳನ್ನು ನಿರೂಪಿಸಿರುವುದಿದೆ. ಇದಾವುದರ ಪರಿವೆಯೂ ಇಲ್ಲದೇ, ಕೆಲವು ಜೈನ ವಿದ್ವಾಂಸರು ಸುಮಾರು ೨೦೦ ವರ್ಷಗಳಿಂದೀಚೆಗೆ, ’ಜೈನಧರ್ಮವು ವೇದಧರ್ಮಕ್ಕಿಂತಲೂ ಪ್ರಾಚೀನವಾದುದು’ ಎಂಬ ತಪ್ಪು ಗ್ರಹಿಕೆಯನ್ನು ಆ ಸಮುದಾಯದಲ್ಲಿ ಬಿತ್ತಿ ಬೆಳೆದು, ಸಫಲರಾಗಿದ್ದಾರೆ! ೧೯೫೩ರ ಅನಂತರ ಸಿರಿಭೂವಲಯದ ಅಂತರಂಗವನ್ನು ಕುರಿತು ಸಾಕಷ್ಟು ಮಾಹಿತಿಗಳು ಹೊರಬರಲಾರಂಬಿಸಿದಮೇಲೆ; ಈ ಸಮುದಾಯದ ಕೆಲವರ ಆಂತರ್ಯದಲ್ಲಿ ಕಸಿವಿಸಿಯು ಪ್ರಾರಂಭವಾದಂತೆ ಕಾಣುತ್ತದೆ! ಜೈನಸಂಪ್ರದಾಯವು ಈಚಿನವರು ನಂಬಿರುವಂತೆ ವೈದಿಕ ಸಂಪ್ರದಾಯಕ್ಕಿಂತ ಪ್ರಾಚೀನ ವಾಗಿದ್ದಲ್ಲಿ, ಅದರಿಂದ ಯಾರಿಗೂ ಯಾವುದೇ ಲಾಭವೂ ಇಲ್ಲ; ನಷ್ಟವೂ ಇಲ್ಲ!! ಇದೊಂದು ಕೇವಲ ಭಾವನಾತ್ಮಕ ವಿಚಾರ. ಆದರೆ, ಕುಮುದೇಂದುಮುನಿಯ ಸಿರಿಭೂವಲಯವು ಈ ಜಗತ್ತಿನ ಮೊಟ್ಟಮೊದಲನೇ ’ವಿಶ್ವಕೋಶ’! ಇದರಲ್ಲಿ ಅಡಕವಾಗಿರುವ ಸಾವಿರಾರು ಮಾಹಿತಿಗಳು ಆಧುನಿಕ ಜಗತ್ತಿನಲ್ಲಿ, ಕನ್ನಡದ ಹಾಗೂ ಭಾರತದಹಿರಿಮೆಯನ್ನು ಮುಗಿಲೆತ್ತರಕ್ಕೆ ಏರಿಸುವ ಸಾಧನಗಳಾಗಿವೆ!! ಅವುಗಳು ಬೆಳಕುಕಾಣುಅವಂತಾಗಲೆಂಬುದಷ್ಟೇ ಈ ಸಿರಿಭುವಲಯದಸುಧಾರ್ಥಿಯ ಪ್ರಮುಖ ಗುರಿ. ಸನಾತನ ಧರ್ಮಾವಲಂಬಿಗಳು ಅಥವಾ ಜೈನಸಂಪ್ರದಾಯದವರು ಈಗಾಗಲೇ ಹೊಂದಿರುವ ತಮ್ಮ ಧರ್ಮವೇ ಶ್ರೇಷ್ಟವೆಂಬ ಹಲವಾರು ’ಧರ್ಮದಅಂಗಡಿಗಳ’ ಜೊತೆ ಸ್ಪರ್ಧೆಗಿಳಿಯುವ ’ಹೊಸಧರ್ಮದಂಗಡಿ’ಯನ್ನು ತೆರೆದು ಇವರಿಗೆ ಸ್ಪರ್ಧೆನೀಡುವ ಉದ್ದೇಶವೇನೂ ಈತನಿಗಿಲ್ಲ! ಅದಕ್ಕೆ ಬೇಕಾದ ಸಂಪತ್ತಾಗಲೀ; ಅಸಕ್ತಿಯಾಗಲೀ ಈತನಿಗೆ ಖಂಡಿತವಾಗಿಯೂ ಇಲ್ಲ!! ಈ ಕಾರಣದಿಂದಾಗಿ ಸಿರಿಭೂವಲಯವನ್ನು ನಿರ್ಲಕ್ಷಿಸಿರುವ ಯಾವ ಸಮುದಾಯದವರೂ ಈತನ ಸಿರಿಭೂವಲಯದ ಆಸಕ್ತಿಯನ್ನು ಸಂಶಯಿಸಲಾಗದು!! ಈಗಾಗಲೇ ಸಿರಿಭೂವಲಯದ ಪರಿಚಯರೂಪದಲ್ಲಿ ಪ್ರಕಟವಾಗಿರುವ ಹಲವಾರು ’ಆತಂಕಕಾರಿ’ ಮಾಹಿತಿಗಳನ್ನು ವಿರೋಧಿಸಲು ಹೆಣಗಾಡುತ್ತಿರುವ ’ಕೆಲವರು’ ಈ ವಿಚಾರವಾಗಿ (ಸುಧಾರ್ಥಿಯು ಜೈನಸಂಪ್ರದಾಯಕ್ಕೆ ವಿಷ ಉಣಿಸಿಸುತ್ತಿದ್ದಾನೆ’ ಎಂಬ ಮಾಹಿತಿಯಮೂಲಕ) ಅಪಪ್ರಚಾರ ಮಾಡುವುದರಿಂದ ಯಾವುದೇ ಉಪಯೋಗವಿಲ್ಲ!! ವೈದಿಕ ಹಾಗೂ ಜೈನ ಸಂಪ್ರದಾಯಕ್ಕೆ ಸೇರಿದ ವಿವೇಕಿಗಳಾದ ಯುವಜನತೆಗೆ ಇಲ್ಲಿ ಪ್ರತಿಪಾದಿತವಾಗುತ್ತಿರುವ ಮಾಹಿತಿಗಳ ಉದ್ದೇಶವೇನೆಂಬುದು ಈ ಗಾಗಲೇ ಸಾಕಷ್ಟು ಮನದಟ್ಟಾಗಿದೆ. ಇಲ್ಲಿ ಯಾರನ್ನೂ ಅವಹೇಳನ ಮಾಡುವ ಅಥವಾ ಯಾವರೀತಿಯಲ್ಲೂ ವಂಚಿಸುವ ಉದ್ದೇಶವಿಲ್ಲವೆಂಬುದು ಅರಿವಾಗಿದೆ. ಸರ್ವಜ್ಞಸ್ವರೂಪಿಯಾಗಿದ್ದ ಕುಮುದೇಂದು ಮುನಿಯು ತನ್ನ ಪರಿಚಯನೀಡುವಲ್ಲಿ "ಅಣುವಿಜ್ಞಾನ; ಆಕಾಶಗಮನ, ಆಕಾಶವಾಣಿ; ಗಣಕಯಂತ್ರಕ್ರಮ; ದೂರದರ್ಶನ; ದೂರವಾಣಿ ಮುಂತಾದ ತಂತ್ರಜ್ಞಾನವೆಲ್ಲವೂ ತನಗೆ ಅಂಗೈಯಲ್ಲಿನ ನಲ್ಲಿಯಕಾಯಿಯಂತೆ ಚಿರಪರಿಚಿತವಾಗಿದೆ ಎಂಬ ವಿಚಾರವು ಸೈಗೊಟ್ಟ ಸಿವಮಾರನಿಗೂ; ಅಮೋಘವರ್ಷನಿಗೂ ತಿಳಿದಿದೆ" ಎಂಬ ಸೂಚನೆ ನೀಡಿರುವುದಿದೆ! ಆದರೆ ಇವೆಲ್ಲವೂ "ಪಾರಮಾರ್ಥಿಕವಾಗಿ ನಿಷ್ಪ್ರಯೋಜಕೆವೆಂದು ತಿಳಿದು ಕಾಲಿನಿಂದ ಒದ್ದು ಎದ್ದುಬಂದ ಮುನಿವಂಶದವರ ಕಾವ್ಯ ಭೂವಲಯ" ಎಂದು ಕಾವ್ಯದಲ್ಲಿ ಸ್ಪಷ್ಟವಾಗಿ ಸೂಚಿಸಿರುವುದಿದೆ!! ಇಂಥ ’ದಿಗಿಲು ಹುಟ್ಟಿಸುವ’ ಮಾಹಿತಿಗಳನ್ನು ಜಗತ್ತಿನ ಅರಿವಿಗೆ ತರುವುದೇ ಸುಧಾರ್ಥಿಯ ಮೂಲ ಉದ್ದೇಶ. ಜೈನಸಂಪ್ರದಾಯಕ್ಕೆ ನಿಧಾನಗತಿಯಲ್ಲಿ ವಿಷ ಉಣಿಸುವುದರಿಂದ ಈತನಿಗೆ ಯಾವುದೇ ಪ್ರಯೋಜನವೂ ಇಲ್ಲವೆಂಬುದು ಆ ಸಮುದಾಯದ ಯುವಜನತೆಗೆ ಅರಿವಾದರೆ ಸಾಕು!! ಆಗ ನಿಜಕ್ಕೂ ಈ ಸಿರಿಭೂವಲಯದ ಸರಳಪರಿಚಯಕ್ಕಾಗಿ ಒಬ್ಬ ’ಅನಾಮಧೇಯ’ ’ಅವಿದ್ಯಾವಂತನು’ ೩೫ ವರ್ಷಗಳಕಾಲ ಬುದ್ಧಿಯಿಲ್ಲದೇ ಶ್ರಮಿಸಿದ್ದು ಸಾರ್ಥಕವಾದಂತೆ ಎಂದು ಭಾವಿಸುತ್ತೇನೆ. ಇತ್ತೀಚೆಗೆ ಅರ್ಹಂತಾಧೀನರಾದ ದಿಗಂಬರ ಜೈನ ಮುನಿ ತರುಣಸಾಗರ ಮಹರಾಜರಿಗೆ ಸಿರಿಭೂವಲದ ವಿಚರವಾಗಿ ಅಪಾರವಾದ ಆಸಕ್ತಿಯಿತ್ತು. ಇದನ್ನು ಕುರಿತು ಸಂಶೋಧನೆ ಮಾಡಲು ಅವರು ಜೈನಸಮುದಾಯದ ಹಲವಾರು ’ವಿದ್ವಾಂಸರಿಗೆ’ ಆದೇಶನೀಡಿದ್ದೂ ಪ್ರಚಲಿತವಿದೆ. ಸಿರಿಭೂವಲಯವು ತಮ್ಮ ಕೈಗೆಟುಕದ ಹುಳಿದ್ರಾಕ್ಷಿ’ ಎಂಬ ಸಂಕಟ ದಿಂದ ಸುಧಾರ್ಥಿಯ ವಿರುದ್ಧ ಹಗೆಸಾಧಿಸುವವರು ಏನನ್ನಾದರೂ ಹೇಳಿಕೊಳ್ಳಲಿ; ಅದರ ಚಿಂತೆ ಈತನಿಗಿಲ್ಲ!!ಇನ್ನು ಕೆಲವರ ಅನಿಸಿಕೆಯಂತೆ ಈ ಕಾವ್ಯದಲ್ಲಿರುವ ವಿಚಾರಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವುದು ಅಗತ್ಯ; ಇಲ್ಲವಾದಲ್ಲಿ ಅದರಿಂದ ಇಂದಿನ ಸಮಾಜಕ್ಕೆ ಪ್ರಯೋಜನವೇನು? ಎಂಬುದಾಗಿದೆ!. ಇದೊಂದು ವಿಚಿತ್ರವಾದ ಅನಿಸಿಕೆ. ಪ್ರಾಚೀನಕಾವ್ಯದ ಪರಿಚಯಕಾರನು ಸಮರ್ಥ ವಿಜ್ಞಾನಿಯೂ ಆಗಿರಬೇಕೆಂದು ನಿರೀಕ್ಷಿಸಲು ಸಾಧ್ಯವೇ!!?? ಈ ಕಾವ್ಯದಲ್ಲಿ ನಾನು ಕಂಡಿರುವ ಮಾಹಿತಿಗಳನ್ನು ಯಥಾವತ್ತಾಗಿ, ಪ್ರಾಮಣಿಕತೆಯಿಂದ ನಾನು ಪರಿಚಯಿಸಿದ್ದೇನೆ. ಇದರಲ್ಲಿ ನನ್ನ ’ಕೈವಾಡ’ ಏನೂ ಇಲ್ಲ!! ಯಾರಿಗಾದರೂ ಈ ಮಾಹಿತಿಗಳ ವಿಚಾರದಲ್ಲಿ ಸಂದೇಹವಿದ್ದರೆ; ಅವರು ಅದನ್ನು ಸಕಾರಣವಾಗಿ ವಿರೋಧಿಸಲಿ; ಅದಕ್ಕೆ ನನ್ನದೇನೂ ಆಕ್ಷೇಪವಿಲ್ಲ. ಆದರೆ ಅನವಶ್ಯಕವಾಗಿ ಅರ್ಥಹೀನವಾದ ವಿವಾದಗಳನ್ನು ಹುಟ್ಟುಹಾಕುವುದರಿಂದ ಯಾವುದೇ ಪ್ರಯೋಜನ ವಿಲ್ಲ!! ಅದಕ್ಕೆ ನಾನು ಪ್ರತಿಕ್ರಿಯೆ ನೀಡುವುದೂ ಇಲ್ಲ. ಇತಿ ವಿವೇಕಿಗಳ ವಿಧೇಯ -ಸಿರಿಭೂವಲಯದಸುಧಾರ್ಥಿ.

Friday 9 April 2021

ವೇದ, ವೇದ. ಏನಿದನ್ನುಕುರಿತ ವಾದ ಪ್ರತಿವಾದ; ವಿವಾದ!? (ಭಾಗ: ೧)

ಮೊದಲಮಾತು:

ನನ್ನ ಜೀವಿತಲ್ಲಿ ೭೭ ಸಂವತ್ಸರಗಳನ್ನು ಸವೆಸಲಿರುವ ನೆನಪಿಗಾಗಿ  ಸಿರಿಭೂವಲಯದ ಅಂತರ್ಸಾಹಿತ್ಯ ಸೌರಭಎಂಬ ನಾಲ್ಕು ಸಂಪುಟಗಳ ಕೃತಿಯೊಂದನ್ನು ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಜ್ಞಾನದಾನವಾಗಿ ನೀಡುವ ಉದ್ದೇಶದಿಂದ ಪ್ರಯತ್ನ ನಡೆಸಿದೆ. ಕಾರಣಾಂತರದಿಂದಾಗಿ ಅದಕ್ಕೆ ತಾತ್ಕಾಲಿಕ ಅಡಚಣೆಯುಂಟಾಯಿತು. ಅದರ ಬದಲಿಗೆ ಈ ಕಿರು ಲೇಖನಮಾಲಿಕೆಯನ್ನು ನನ್ನ ಅಭಿಮಾನಿ ಓದುಗರಿಗೆ ವಿಶ್ವಾಸ ಪೂರ್ವಕವಾಗಿ ಮುಂಗಡವಾಗಿ ಅರ್ಪಿಸಿದ್ದೇನೆ.  ಕೆಲವರಿಗಾದರೂ ಇದು ಉಪಯುಕ್ತವಾದೀತೆಂದು ಭಾವಿಸಿದ್ದೇನೆ.  ಸಾಧ್ಯವಿರುವಷ್ಟು ಶೀಘ್ರವಾಗಿ ಸಿರಿಭೂವಲಯದ ಅಂತರ್ಸಾಹಿತ್ಯ ಸೌರಭವೂ ನಿಮ್ಮ ಕೈಸೇರಲಿದೆ.

***

 ವೇದವೆಂದರದೇನು?

ವೇದಗಳನ್ನು ಓದಿದವರಿಗೆ ಅದು ವೇದ್ಯವಾಗುತ್ತದೆ! ವೇದವೆಂಬ ಶಬ್ದಕ್ಕೆ  ಹಳೆಯಮಾತು; ’ಜ್ಞಾನ’  ತಿಳಿವು ಎಂಬ ಅರ್ಥಗಳಿವೆ.  ಜ್ಞಾನವೆಂದರೆ, ’ಅರಿವು’ ’ಎಚರಎಂಬ ಅರ್ಥಗಳೂ ಇವೆ!  ಇವುಗಳ ಹಿನ್ನೆಲೆಯಲ್ಲಿ ನೋಡಿದಾಗ:  ತಿಳುವಳಿಕೆ’  ಎಂಬ ವಿವರಣೆಯೂ ದೊರೆಯುತ್ತದೆ.  ಈ ಹಿನ್ನೆಲೆಯಲ್ಲಿ ನೋಡಿದಾಗ; ಜಗತ್ತಿನಲ್ಲಿ ತಿಳುವಳಿಕೆಗೆ ಸಂಬಂಧಿಸಿದ್ದೆಲ್ಲವೂ ವೇದಮೂಲದ್ದೇ ಆಗಿರುತ್ತದೆ!!

ವೇದವೆಂಬುದು ಅಪೌರುಷೇಯವಾದುದು ಎಂಬ ವಿಚಾರವು  ಪ್ರಾಚೀನಕಾಲದಂದಲೂ ಪ್ರಚಲಿತವಿರುವ ಸನಾತನಿಗಳ ನಂಬಿಕೆ. ಈ ವೇದವೆಂಬ ಮಹಾನ್ ಸಾಹಿತ್ಯರಾಶಿಯು ಅಪಾರವಾದುದು. ಓದಲು ಅತ್ಯಂತ ಕ್ಲಿಷ್ಟಕರವಾದುದು, ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲದ್ದು. ಎಂಬುದು ಪ್ರಾಮಾಣಿಕರಾದ ಕೆಲವರ ಅಭಿಪ್ರಾಯ. 

ವೇದಗಳು ಅಪೌರುಷೆಯ ಎಂಬುದು  ಅರ್ಥಹೀನವಾದ ನಂಬಿಕೆ. ಈ ವೇದವನ್ನು ಪ್ರಾಚೀನಕಾಲದ ಯಾರೋ ಕೆಲವು ಋಷಿ ಮುನಿಗಳು ಬರೆದಿರುವುದು, ವೇದಗಳಲ್ಲೇ ಖಚಿತವಾಗಿದೆ! ಆದ್ದರಿಂದ ವೇದಗಳು ಮಾನವಕೃತವೇ ಹೊರತು; ಅಪೌರುಷೇಯವೆಂಬುದೇನೂ ಇಲ್ಲ!  ಎಂಬುದು ಕೆಲವರ ವಾದ.

ಸಾಕಷ್ಟು ದೀರ್ಘಕಾಲಾವಧಿಗೆ ನಮ್ಮ ದೇಶದಲ್ಲಿ ಆಡಳಿತದ ಚಿಕ್ಕಾಣಿ ಹಿಡಿದಿದ್ದ ಪರಕೀಯರು ಈ ದೇಶದ  ಅಪಾರ ಸಂಪತ್ತನ್ನು ಲೋಟಿಮಾಡಿದ್ದು ಮಾತ್ರವಲ್ಲ, ಇಲ್ಲಿನ ಪ್ರಾಚೀನ ಸಂಸ್ಕೃತಿಯ ನಾಶಕ್ಕೂ ಸಾಕಷ್ಟು ಶ್ರಮಿಸಿದವರು.  ಈ ದೇಶದ ಪ್ರಾಚೀನ ಇತಿಹಾಸದ  ನೆನಪನ್ನೂ ವಿರೂಪಗೊಳಿಸಿ, ಇಲ್ಲಿನವರನ್ನು ಚರಿತ್ರಹೀನರೆನಿಸುವ ಮಟ್ಟಕ್ಕೆ ತಂದವರು. ಇದಕ್ಕೂ ಮೊದಲು ಈ ಪ್ರಾಚೀನ ಸಂಸ್ಕೃತಿಯ ಕವಲುಗಳಾದ ನಿಶ್ರೇಯಸವಾದಿಗಳು (ಜೈನಸಂಪ್ರದಾಯ ದವರು) ಹಾಗೂ ಇವರದೇ ಆದ  ಇನ್ನೊಂದು ಕವಲಾಗಿ ಉಗಮವಾದ ಬೌದ್ಧರುಇಲ್ಲಿನ ಸಾಮಾಜಿಕ ಪರಿಸರದಲ್ಲಿ  ರಾಜಾಶ್ರಯದ ಬೆಂಬಲದಿಂದಪ್ರಾಚೀನವಾದ ಸನಾತನ ಸಂಸ್ಕೃತಿಯಮೇಲೆ ಹೆಚ್ಚಿನ ಪ್ರಮಾಣದ ಧಾಳಿ ನಡೆಸಿದ್ದವರು. ಈ ಸನಾತನ ಸಂಸ್ಕೃತಿಯ ವಿರೋಧಿಗಳ ಪ್ರಾಭಲ್ಯ ಹಾಗೂ ನಿಗೂಢ ತಂತ್ರಗಳು ಹಾಗೂ ಅನುಸರಿಸುತ್ತಿದ್ದ ಕೃತ್ರಿಮ ಮಾರ್ಗಗಳು ಊಹಾತೀತ ವಾಗಿದ್ದವು!

ಉಪಲಬ್ಧವಿರುವ ಸಾಹಿತ್ಯಿಕ ಮಾಹಿತಿಗಳು; ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿ ಬಂದಿರುವ ವೇದೋಕ್ತ ಕ್ರಿಯಾಕಲಾಪಗಳ ಮಾಹಿತಿಗಳ ವಿವರ ಹಾಗೂ ಮಹತ್ತರವಾದ ಧಾರ್ಮಿಕ ಸಾಹಿತ್ಯಗಳ ಆಧಾರದಲ್ಲಿ ವಿವೇಚಿಸಿದಾಗ ಸುಮಾರು ೭೫೦ ಕೋಟಿವರ್ಷಗಳಹಿಂದೆ ಜೈನ ಸಂಪ್ರದಾಯದ ಪ್ರವರ್ತಕ (ಪ್ರಥಮ ತೀರ್ಥಂಕರ) ಋಷಭದೇವನು ಅಂದು ಪ್ರಚಲಿತವಿದ್ದ ಅಭ್ಯುದಯವಾದಕ್ಕೆ (ಸನಾತನಧರ್ಮ) ಪ್ರತಿಯಾಗಿ ನಿಶ್ರೇಯಸವಾದವನ್ನುರೂಪಿಸಿದನು ಎಂಬ ಮಾಹಿತಿಯನ್ನು ಕಾಣಬಹುದು.

(ದೇವತೆಗಳಕೃಪೆಯಿಂದ ಮಾನವರ ಜೀವನದ ಭದ್ರತೆ ಎಂಬುದು ಅಭ್ಯುದಯವಾದ. ತಮ್ಮ ಜೀವನನಿರ್ವಹಣೆಗಾಗಿ ದೇವತೆಗಳನ್ನು ಮೆಚ್ಚಿಸಲು ಹಿಂಸಾತ್ಮಕವಾದ ಯಜ್ಞ ಯಾಗಗಳ ಅಗತ್ಯವಿಲ್ಲ, ಎಂಬುದು ನಿಶ್ಶ್ರೇಯಸವಾದ.  ಇದರಲ್ಲಿ ಸಂಪ್ರದಾಯಗಳ ಆಚರಣೆಯಲ್ಲಿ ಪ್ರತ್ಯೇಕತೆಯೇ ವಿನಃ. ಪ್ರಾಚೀನವಾದ ವೇದಗಳನ್ನೇ ಅಲ್ಲಗಳೆಯುವ ವಿರೋಧವೇನೂ ಇರಲಿಲ್ಲ. ಕಾಲಕ್ರಮದಲ್ಲಿ ಆ ಸಂಪ್ರದಾಯದ ವಿದ್ವಾಂಸರ ಅಗತ್ಯಕ್ಕನುಗುಣವಾಗಿ ವೇದವಿರೋಧವು ಹುಟ್ಟಿ ಬೆಳೆಯಿತು!)  ಈ ಸಂಪ್ರದಾಯದವರು ತಮ್ಮ ಧಾರ್ಮಿಕ ಸಾಹಿತ್ಯದಲ್ಲಿ ಋಷಭನಾಥನೇ ಮೊದಲಿಗನಲ್ಲ; ಭೂತಕಾಲದಲ್ಲಿ ೨೪ ಜನ ತೀರ್ಥಂಕರರು, ವರ್ತಮಾನಕಾಲದಲ್ಲಿ ೨೪ ಜನ ತೀರ್ಥಂಕರರು, ಭವಿಷ್ಯತ್ ಕಾಲದಲ್ಲಿ ೨೪ ಜನ ತೀರ್ಥಂಕರರು, ಈ ತೀರ್ಥಂಕರರ ಜೀವಿತಾವಧಿಯು ಲಕ್ಷಾಂತರವರ್ಷಗಳು ಎಂಬ ಅತಿದೊಡ್ಡ ಕಾಲಾವಧಿಯ ಚರಿತ್ರೆಯನ್ನು ರೂಪಿಸಿಕೊಂಡಿದ್ದಾರೆ! ಒಟ್ಟಿನಲ್ಲಿ  ವೇದಗಳನ್ನು ಅಲ್ಲಗಳೆಯುವುದು ಅವರ ಮೂಲ ಉದ್ದೇಶ. ಕಾಲಕ್ರಮದಲ್ಲಿ ಈ ಜೈನಸಂಪ್ರದಾಯದಿಂದಲೇ ಹೊರಹೊಮ್ಮಿದ ಬೌದ್ಧ ಸಂಪ್ರದಾಯವು  ಸನಾತನಧರ್ಮ ಹಾಗೂ ಜೈನ ಸಂಪ್ರದಾಯಕ್ಕೆ ವಿರೋಧಿಯಾಗಿ ಬೆಳವಣಿಗೆ ಹೊಂದಿ, ನೆರೆಯ ರಾಷ್ಟ್ರ  ಚೀನಾದಲ್ಲೂ ಜನಪ್ರಿಯವಾಯಿತು.  ಸನಾತನ ಧರ್ಮವು ಆಸ್ತಿಕವಾದವನ್ನು  ಪ್ರತಿಪಾದಿಸಿದರೆ , ಜೈನ ಹಾಗೂ ಬೌದ್ಧ ಸಂಪ್ರದಾಯಗಳು ನಾಸ್ತಿಕವಾದವನ್ನು ತಮ್ಮದೇ ಆದ ರೀತಿಯಲ್ಲಿ ಬೆಂಬಲಿಸುತ್ತವೆ. 

ವಿದೇಶಿಯರ ವಿಕೃತ ವಾದಸರಣಿ:

 ಚೀನಾದೇಶದ ನಿವಾಸಿಗಳು ಪ್ರಾಚೀನ ಕಾಲದಿಂದಲೂ ನಿರೀಶ್ವರವಾದಿಗಳು.  ಇದೇ ಜಾಡಿನಲ್ಲಿ ಸಾಗಿದ ಬೌದ್ಧ ಧರ್ಮವು ಸಹಜವಾಗಿಯೇ  ಅವರನ್ನು ಆಕರ್ಷಿಸಿತು! ತಮ್ಮಲ್ಲಿ ಹೆಚ್ಚು ಪ್ರಚಾರಕ್ಕೆ ಬಂದ  ಬುದ್ಧನ ತತ್ವಗಳ ಪ್ರಭಾವದಿಂದ, ಬುದ್ಧನು ಹುಟ್ಟಿಬೆಳೆದ ದೇಶವೆಂಬ ಅಭಿಮಾನದಿಂದ ಚೀನಾದೇಶದ ಕೆಲವು ವಿದ್ವಾಂಸರು ಇಲ್ಲಿಗೆ ಆಗಮಿಸಿ, ಇಲ್ಲಿನ ಸಾಮಾಜಿಕ ಪರಿಸರದ ಕೆಲವು ವಿವರಗಳು ಹಾಗೂ ಇಲ್ಲಿನ ಸಂಸ್ಕೃತಭಾಷೆಯ ಅಮೂಲ್ಯ ಸಾಹಿತ್ಯದಕೆಲವು ಭಾಗಗಳನ್ನು ತಮ್ಮ ಭಾಷೆಗೆ ಅನುವಾದ ಮಾಡಿಕೊಂಡು, ತಮ್ಮಲ್ಲಿ ಪ್ರಚಾರ ನಡೆಸಿರುವುದಿದೆ.

ಇದೇ ಕ್ರಮದಲ್ಲಿ  ವಿಲ್ಸನ್; ವೆಬರ್ಮ್ಯಾಕ್ಸ್ ಮುಲ್ಲರ್; ಮ್ಯಾಕ್ಡೊನಾಲ್ಡ್; ವಿಂಟರ್ನಿಟ್ಸ್ಕೀತ್ಮುಂತಾದವರು ಜರ್ಮನಿ, ಇಂಗ್ಲೇಂಡ್  ದೇಶಗಳವರು  ಇಲ್ಲಿನ ಪ್ರಾಚೀನ  ಸಾಹಿತ್ಯವನ್ನು ತಮ್ಮ ಭಾಷೆಗಳಿಗೆ ಅನುವಾದ ಮಾಡಿಕೊಂಡಿದ್ದಾರೆ.  ಇವರುಗಳಾರೂ ಭಾರತೀಯ  ಶಾಸ್ತ್ರ, ಸಂಪ್ರದಾಯ, ಪ್ರಾಚೀನ ನಾಗರೀಕತೆಯನ್ನು  ಒಪ್ಪದೇ  ಗ್ರೀಕ್ನಾಗರಿಕತೆಯೇ ಜಗತ್ತಿನಲ್ಲಿ ಶ್ರೇಷ್ಠವೆಂದು  ಬಿಂಬಿಸಿದವರು. ನಮ್ಮ ಪ್ರಾಚೀನ ಕಾಲದ ಗ್ರಾಮೀಣಜನರು ಬೆಳಗಾಗ ಎದ್ದಕೂಡಲೇ ಕೆರೆಯಕಡೆ ಹೋಗುವ ಪದ್ಧತಿಯನ್ನು ಅನುಸರಿಸುತ್ತಿದ್ದರು. ಹೊಟ್ಟೆಯಲ್ಲಿದ್ದ ಹೊಲಸು ಹೊರಹೋದಮೇಲೆ. ಹೊಲಸು ಹೋಗುವ ದ್ವಾರವನ್ನು ನೀರಿನಿಂದ ತೊಳೆಯುವ ಆರೋಗ್ಯಕರ ಜ್ಞಾನ ಅವರಿಗಿತ್ತು. ಆಗಿನಿಂದಲೂ ವಿದೇಶಿಯರು ಕಾಗದದಿಂದ ಈ ಕೆಲಸ ಮಾಡುತ್ತಿದ್ದರುನೀರಿನ ಉಪಯೋಗದ ಸುರಕ್ಷತೆಯನ್ನೇ ಅರಿಯದವರು ಇನ್ನೆಂಥ ನಾಗರಿಕತೆ ಹೊಂದಿರಬಹುದು! ’ಅದು ಶೀತದೇಶ. ನೀರಿನಿಂದ ತೊಳೆಯುವುದು ಸಾಧ್ಯವಿಲ್ಲಎಂದು ವಾದಿಸಬಹುದು. ಬಿಸಿನೀರು ಬಳಸಿದರೆ ಜೀವವೇನೂ ಹೋಗಲಾರದಲ್ಲವೇ!? ಇದನ್ನೂ ಅನುಸರಿಸದವರು ಇನ್ನೆಂಥನಾಗರಿಕರಿರಬೇಕು!? 

 ವೇದಸಾಹಿತ್ಯದ ಅರ್ಥನಿರ್ಣಯ ಮಾಡುವುದು ಸುಲಭದ ಕಾರ್ಯವಲ್ಲ. ಪಾಶ್ಚಾತ್ಯರು ಈ ವಿಚಾರವಾಗಿ ಎಷ್ಟೇ ಬರೆದರೂ  ಅದು ವಾಸ್ತವತೆಯ ಪರಿಧಿಯಲ್ಲಿ ಬರುವುದಲ್ಲವೇ ಅಲ್ಲ! 

ಮೋಕ್ಷಮೂಲರು ಎಂಬ ಬಿರುದು ಪಡೆದ ಜರ್ಮನಿಯಮೂಲದ ಮ್ಯಾಕ್ಸ್  ಮುಲ್ಲರ್ ಎಂಬುವವನು  ವೇದಗಳು ಹುಟ್ಟಿದ  ದಿನಾಂಕವನ್ನೇ ಕರಾರುವಾಕ್ಕಾಗಿ ನಿರ್ಧರಿಸಿದವನು!! 

ಆರ್ಯರುಭಾರತಕ್ಕೆ ವಲಸೆಬಂದು  ಇಲ್ಲಿನ ಅನಾಗರಿಕ ಸಮಾಜವನ್ನು  ಉದ್ಧಾರಮಾಡಿದವರು  ಎಂಬ ನಿಲುವು ಪಾಶ್ಚಾತ್ಯ ವಿದ್ವಾಂಸರದು.

 ತನ್ನ ಜೀವಿತಕಾಲದಲ್ಲಿ ಒಮ್ಮೆಯೂ  ಭಾರತಕ್ಕೆ ಕಾಲಿರಿಸದೇ  ಸಂಸ್ಕೃತಭಾಷೆಯ ಪ್ರಾಥಮಿಕ ಪರಿಚಯವೂ ಇಲ್ಲದೇ  ಮ್ಯಾಕ್ಸ್  ಮುಲ್ಲರ್  ಮಹಾಶಯನು ಅಪೌರುಷೇಯವಾದ ವೇದಗಳ ರಾಶಿಯನ್ನು ಅರೆದು ಕುಡಿದು, ಬೆಟ್ಟದಷ್ಟು ರಾಶಿಯ ಮಾಹಿತಿಗಳನ್ನು ರಚಿಸಿರುವುದಿದೆ!  ಭಾರತದ ಬಹಳಷ್ಟುಜನ ಎಡಬಿಡಂಗಿ ವಿದ್ಯಾವಂತರಿಗೆಕೆಲವು ವೇದವಿದ್ವಾಂಸರಿಗೆ ಇಂಥವರ ಹೇಳಿಕೆಗಳೇ ವೇದವಾಕ್ಯ’ !!

ಇದೆಲ್ಲ ಮಾಹಿತಿಗಳನ್ನು ಕುರಿತು ಬರೆಯುತ್ತಿರುವ ಈ ಬರಹಗಾರ ಜ್ಞಾನದ ಪರಿಧಿ ಏನಿದ್ದರೂ, ಕನ್ನಡ ಭಾಷೆಯಲ್ಲಿರುವ ಈ ವಿಚಾರಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಸಾಹಿತ್ಯ ಕೃತಿಗಳ ಅಧ್ಯಯನವಷ್ಟೇ ಈತನ ಬರಹಕ್ಕೆ ಆಶ್ರಯತಾಣ!  ವಾಸ್ತವವಾದ ಈ ಮಾಹಿತಿಯನ್ನರಿತು ಓದುಗರು ಈ ಬರಹದ ಓದುವಿಕೆಯನ್ನು ಮುಂದುವರೆಸಬಹುದು; ಅಥವಾ ಇದೊಂದು ನಿರುಪಯೋಗಿಯಾದ ಮಾಹಿತಿ ಎಂದು ನಿರ್ಧರಿಸಿ, ದೂರವಾಗಬಹುದು!!

ಶಾಸ್ತ್ರಾಧ್ಯಯನ ಸುಲಭದ ವಿಚಾರವಲ್ಲ:

ಯಾವುದೇ ಒಂದು ಶಾಸ್ತ್ರವನ್ನು ಸಮಗ್ರವಾಗಿ ಅಧ್ಯಯನ ಮಾಡಲು ಮಾನವನ ಒಂದು ಜೀವಿತಕಾಲದ ಅವಧಿಯು ಸಾಲದೆಂಬ ಹೇಳಿಕೆ ಇದೆ.  ವೇದಗಳಲ್ಲಿರುವ ವಿವರಗಳು ಜಗತ್ತಿನ ಎಲ್ಲ ವಿಚಾರಗಳನ್ನೂ ಒಳಗೊಂಡಿರುವುದೆಂಬ ಮಾಹಿತಿಯೂ ಪ್ರಚಲಿತವಿದೆ.  ವೇದಗಳನ್ನು ಸಂಪೂರ್ಣವಾಗಿ ಓದದೇ ಅದರಲ್ಲಿರುವ ಸಮ್ಯಜ್ಞಾನವನ್ನು ಅರಿಯಲಾಗದು ಎಂಬುದೂ ಸಹಜವಾದುದು.  ಇಂದಿನವರಿರಲೀ, ಹಿಂದಿನ  ವಿದ್ಯಾವಂತರಿಗೇ ಈ ರೀತಿಯಲ್ಲಿ ಸಮ್ಯಜ್ಞಾನ ಸಂಪಾದಿಸುವುದು ಶ್ರಮದ ಸಂಗತಿಯಾಗಿತ್ತು!  ಇದನ್ನರಿತೇ ಕೆಲವು ಮಹಾತ್ಮರು ತಮ್ಮ ಕಾಲಘಟ್ಟದ ಹಾಗೂ ತಮ್ಮ ನಂತರದ ಮುಂದಿನ ಸಮಾಜದ ನೆರವಿಗಾಗಿ ಈ ಸಮ್ಯಜ್ಞಾನವನ್ನು ಕುರಿತು ಅಪರೂಪದ್ದಾದ; ಮಹತ್ವಪೂರ್ಣವಾದ ಮಾಹಿತಿಗಳನ್ನು ಬರೆದಿರಿಸಿರುವುದಿದೆ.  ಅವುಗಳ ಅಂತರಾರ್ಥವನ್ನು ನಾವು ಗಮನಿಸಿದಾಗ; ವೇದಗಳು ಉಗಮವಾಗಿರುವುದು  ಜನಸಾಮಾನ್ಯರ ಮನರಂಜಿಸುವ ಉದ್ದೇಶದಿಂದಲ್ಲ. ಎಂಬುದು ನಮಗೆ ಮನವರಿಕೆ ಯಾಗಬೇಕು. ವೇದೋಪನಿಷತ್ತುಗಳ ಸಮ್ಯಜ್ಞಾನವನ್ನು ಸಮರ್ಪಕವಾಗಿ ವಿವರಿಸುವ ಜನೋಪಯೋಗಿ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಮೊದಲ ಯತಿ ಶಂಕರಭಗವತ್ಪಾದರು ಎಂಬುದು ಗಮನಾರ್ಹ ಸಂಗತಿ.

ಸಾಮಾನ್ಯವಾಗಿ ಸಂಗೀತ ಹಾಗೂ ನೃತ್ಯಶಾಸ್ತ್ರಗಳಲ್ಲಿ ಪರಿಪೂರ್ಣವಾದ ಪ್ರಭುತ್ವ ಪಡೆಯಲು ಹಲವಾರು ವರ್ಷಗಳ ಸತತ ಅಭ್ಯಾಸದ ಅಗತ್ಯ ವಿರುತ್ತದೆ.  ಇವು ಒಂದೊಂದು ಶಾಸ್ತ್ರಕ್ಕೆ ಸಂಬಂಧಿಸಿದ್ದು. ವೇದಗಳಲ್ಲಿ ಜಗತ್ತಿನ ಎಲ್ಲ ಶಾಸ್ತ್ರಗಳ ಮಾಹಿತಿಯೂ ಅಡಕವಾಗಿದೆ. ಅಂದಮೇಲೆ, ಅವುಗಳನ್ನು ಸಮರ್ಪಕವಾಗಿ ಅಧ್ಯಯನ ಮಾಡಲು ಎಷ್ಟು ಜೀವಿತದ ಅವಧಿ ಬೇಕಾದೀತೆಂಬುದು ಊಹಾತೀತ!

ಇವುಗಳ ಅಭಾಸಕ್ಕೆ ಸಾಹಿತ್ಯಜ್ಞಾನ; ಸಂಗೀತಜ್ಞಾನ, ರಾಗ ತಾಳಗಳಿಗೆ ಸಂಬಂಧಿಸಿದ ಜ್ಞಾನ, ಸಾಹಿತ್ಯಕ್ಕೆ ಅನುಗುಣವಾದ ಆಂಗಿಕ ಅಭಿನಯದ ಮುದ್ರೆಗಳುಇವೆಲ್ಲವುಗಳಿಗೂ ಮೂಲಾಧಾರವಾದ ಗಣಿತಜ್ಞಾನವು ಅತ್ಯವಶ್ಯಕವಾದುದು.  ಇದನ್ನೆಲ್ಲ ಕಲಿತು, ಸಂಗೀತದಲ್ಲಾಗಲೀ, ನೃತ್ಯದಲ್ಲಾಗಲೀ ಪರಿಣತಿ ಪಡೆಯುವುದರೊಳಗೆ ಸಂಬಂಧಿಸಿದ  ಕಲಾವಿದನ ಆಯುಷ್ಯದ ಬಹುಭಾಗವು ವ್ಯಯವಾಗಿರುತ್ತದೆ! 

ಆದರೂ ಕೆಲವೊಂದು ವಿಶೇಷ ಸನ್ನಿವೇಶಗಳಲ್ಲಿ  ಕೆಲವು ಪ್ರತಿಭಾಶಾಲಿ ಮಕ್ಕಳು ತಮ್ಮ ಎಂಟು- ಹತ್ತು ವರ್ಷಗಳ ಪ್ರಾಯಕ್ಕೇ ಈ ಶಾಸ್ತ್ರದಲ್ಲಿ ಊಹಾತೀತವಾದ ಪ್ರತಿಭೆಯನ್ನು ಸಾಧಿಸಿ; ಪ್ರದರ್ಶಿಸುವುದನ್ನು ಪ್ರತ್ಯಕ್ಷವಾಗಿ ಕಾಣುತ್ತೇವೆ!!  ಇದಕ್ಕೆ ಅವರ ಪೂರ್ವಜನ್ಮದ  ಸಂಸ್ಕಾರವು ಪ್ರಮುಖ ಕಾರಣವಾಗಿರುತ್ತದೆ.   ಕೆಲವು ಮೇಧಾವಿಗಳು ತಮ್ಮ ಜೀವಿತಾವಧಿಯಲ್ಲಿ ಹಲವಾರು ವರ್ಷಗಳ ಅಧ್ಯಯದಿಂದ ಡಾಕ್ಟರೇಟ್ಪಡೆಯುತ್ತಾರೆ. ಇವರ ಪ್ರತಿಭೆಯು ಎಷ್ಟು ವ್ಯಾಪಕವೆಂದರೆ, ಇಂಥವರಲ್ಲಿ ಕೆಲವರು ಹಲವಾರು ಶಾಸ್ತ್ರಗಳನ್ನು ಅಧ್ಯಯನಮಾಡಿ  ನಾಲ್ಕಾರು ಶಾಸ್ತ್ರಗಳಲ್ಲಿ ಈ ರೀತಿಯ ಡಾಕ್ಟರೇಟ್ ಪಡೆಯುತ್ತಾರೆ!! 

ಆದರೆ, ಇಂಥ ಗಹನವಾದ  ಹಲವಾರು ಶಾಸ್ತ್ರಗಳನ್ನು ಒಳಗೊಂಡು ಸರ್ವಶಾಸ್ತ್ರಮಯಿಯಾದ ವೇದಗಳನ್ನು ಸಮಗ್ರವಾಗಿ ಅಧ್ಯಯನಮಾಡಿ , ಪಾರಂಗತರಾಗಲು ಹಲವು ಸಾವಿರ ವರ್ಷಗಳ ಸಾಧನೆಯೂ ಸಾಲದೆಂಬುದು  ಬಲ್ಲವರ ಅನಿಸಿಕೆ.  ಈ ಕಾರಣದಿಂದಾಗಿ ಯಾವುದೇ ವ್ಯಕ್ತಿಯು ತನ್ನ ಬಾಲ್ಯಾವಸ್ಥೆಯಲ್ಲಿಯೇ ವೇದವಿದ್ಯಾ ಪಾರಂಗತ ಎನಿಸಿಕೊಂಡು, ಜಗತ್ತಿನ ಗಮನ ಸೆಳೆದಿರುವ ಉದಾಹರಣೆಯು ಬಹಳ ಅಪರೂಪದ್ದು!!

ಕಲಿಯುಗದ ಜಗದ್ಗುರು ಎಂಬ ಪ್ರಖ್ಯಾತಿಹೊಂದಿರುವ ಶಂಕರಭಗವತ್ಪಾದರು ತಮ್ಮ ಐದನೇ ವಯಸ್ಸಿಗೇ ಸಮಗ್ರವಾಗಿ ವೇದಜ್ಞಾನವನ್ನು ಸಂಪಾದಿಸಿ, ಎಂಟನೆಯ ವಯಸ್ಸಿಗೇ ವೇದೋಕ್ತವಾದ ನಿವೃತ್ತಿಮಾರ್ಗದ ನೆಲೆಯಾದ - ಸನ್ಯಾಸಾಶ್ರಮದ ದೀಕ್ಷೆಹೊಂದಿ, ವೇದೋಪನಿಷತ್ತುಗಳಿಗೆ ಸಂಬಂಧಿಸಿದ ಸಮಗ್ರಜ್ಞಾನವನ್ನು ಸಂಪಾದಿಸಿಪ್ರಾಚೀನ ಕಾಲದಿಂದಲೂ ಪ್ರಚಲಿತವಿದ್ದ  ಮೂರು ಅಧ್ಯಾಯಗಳ ೩೬೩ ಶ್ಲೋಕಗಳ ಭಗವದ್ಗೀತೆಯನ್ನು   ಹದಿನೆಂಟು ಅಧ್ಯಾಯಗಳ ೭೦೦ ಶ್ಲೋಕಗಳ ಅದ್ವೈತಾಮೃತವರ್ಷಿಯಾಗುವಂತೆ ಉಪನಿಷತ್ತಿನ ಮಂತ್ರಗಳ ಆಧಾರದಲ್ಲಿ ವಿಸ್ತರಿಸಿ, ಅದನ್ನೂ ಒಂದು ಪ್ರಸ್ಥಾ ಗ್ರಂಥವನ್ನಾಗಿಸಿದರು.  ಉಪನಿಷತ್ತುಗಳು; ಬ್ರಹ್ಮಸೂತ್ರಗಳು ಹಾಗೂ ಭಗವದ್ಗೀತೆಗೆ (ಪ್ರಸ್ಥಾನತ್ರಯಕ್ಕೆ)  ಸೂಕ್ತವಾದ ವ್ಯಾಖ್ಯಾನವನ್ನು ರಚಿಸಿ, ಲೋಕೋಪಕಾರದ ಕಾರ್ಯವನ್ನು ಎಸಗಿದವರು.  ತಮ್ಮ ಜೀವಿತದ ೩೨ ಸಂವತ್ಸರಗಳು ಕಳೆಯುವ ವೇಳೆಗೆ ಇಹಲೋಕದ ವ್ಯವಹಾರವನ್ನು ತ್ಯಜಿಸಿದ  ಮಹಾಮಹಿಮರು  ಶಂಕರಭವತ್ಪಾದರು.  ವ್ಯಾಸಮಹರ್ಷಿಯು ರಚಿಸಿದ್ದು ಜಯಕಾವ್ಯ, ಇದರಲ್ಲಿ ಪ್ರಾಚೀನವಾದ ಭಗವದ್ಗೀತೆಯು ೩೬ ಶ್ಲೋಕಗಳವ್ಯಾಪ್ತಿಯದು ಎಂಬುದಕ್ಕೆ ೧೨೦೦ ವರ್ಷಗಳ ಹಿಂದಿನದೆಂದು  ಪ್ರಚಲಿತವಿರುವ ಸಿರಿಭೂವಲಯದ ಖಚಿತ ಆಧಾರವಿದೆ.

 ಇಲ್ಲಿ ಪ್ರಸ್ಥಾನತ್ರಯಎಂಬ ಶಬ್ಧಕ್ಕೆ ನಾವು ಅರ್ಥವನ್ನರಿಯಬೇಕು. ಪ್ರಸ್ಥಾನವೆಂದರೆಪ್ರಯಾಣ, ಯುದ್ಧಸಿದ್ಧತೆಹೋರಾಟಕ್ಕೆ ಹೊರಡುವುದು ಎಂಬ ಅರ್ಥವಿದೆ. ಇದು ವ್ಯಕ್ತಿ ವ್ಯಕ್ತಿಗಳ ನಡುವಿನ ಹೋರಾಟದ ಪರಿಯಲ್ಲ!!  ಜಗತ್ತಿನಲ್ಲಿ ಜೀವನದ ಜಂಜಡಗಳಿಂದ ಬಿಡುಗಡೆಹೊಂದಲುಆತ್ಮೋನ್ನತಿಯ ಹಾದಿಯಲ್ಲಿ ನಡೆಸುವ ಹೋರಾಟದ ವಿಚಾರ!

 ಈ ಹೋರಾಟದಲ್ಲಿಆತ್ಮದ ವಿಚಾರವನ್ನು ಸರಿಯಾಗಿ ತಿಳಿದಿರುವ  ಉಪನಿಷತ್ತುಗಳು, ಬ್ರಹ್ಮಸೂತ್ರಗಳು ಹಾಗೂ ಭಗವದ್ಗೀತೆಯೆಂಬ  ಪ್ರಸ್ಥಾನತ್ರಯಗಳು. ನಮ್ಮ ಆತ್ಮದ  ಹೋರಾಟಕ್ಕೆ ಬೆಂಬಲನೀಡಿ, ನಮ್ಮ ಹೋರಾಟದಲ್ಲಿ ಜಯಸಾಧಿಸಲು ನೆರವಾಗುತ್ತವೆ ಈ ಪ್ರಸ್ಥಾನತ್ರಯಗಳು!!  ಈ ಕಾರಣಕ್ಕಾಗಿ ನಾವು ಈ ಪ್ರಸ್ಥಾನ ತ್ರಯಗಳ ವಿಚಾರಗಳನ್ನು ಸತತವಾಗಿ ಅಭ್ಯಾಸಮಾಡಬೇಕೆಂಬುದು  ಸಾವಿರಾರುವರ್ಷಗಳಿಂದ ನಮ್ಮ ಪ್ರಾಚೀನರ ಉಪದೇಶ.

ಇದಿಷ್ಟನ್ನು ಸಮರ್ಪಕವಾಗಿ ತಿಳಿಯುವುದರಿಂದ; ನಾವು ಸಮಸ್ಥ ವೇದಗಳ ಸಾರವನ್ನೂ ಅರಿತು, ವೇದೋಕ್ತ ಜೀವನಕ್ರಮವನ್ನು ನಡೆಸುವುದರಿಂದ, ನಮ್ಮ ಜೀವನದಲ್ಲಿ  ಸಾರ್ಥಕತೆ  ದೊರೆಯುತ್ತದೆಂಬ ಮಾಹಿತಿ ಪ್ರಚಲಿತವಿದೆ.  ಆಸಕ್ತಿ ಹೊಂದಿರುವವರು  ಇದನ್ನು ಪಾಲಿಸಬಹುದು. ಇಲ್ಲವರು ನಿರಾಕರಿಸಿ, ತಮ್ಮಿಚ್ಚೆಯಂತೆ ಜೀವಿಸಲು ಸ್ವತಂತ್ರರು

ವೇದಗಳಾಗಲೀ, ವೇದಾಂತವಾಗಲೀ, ಭಗವದ್ಗೀತೆಯಾಗಲೀ ಯಾರೊಬ್ಬರನ್ನೂ ಇದೇ ಕ್ರಮದಲ್ಲಿ ಜೀವಿಸಲೇ ಬೇಕೆಂದು ಒತ್ತಾಯಪಡಿಸಿಲ್ಲ!  ಜಗತ್ತಿನಲ್ಲಿ  ಬೇರಾವುದೇ ಜೀವನ ಸಂಪ್ರದಾಯವೂ ಈ ರೀತಿಯ ಸ್ವಾತಂತ್ರ್ಯವನ್ನು ವ್ಯಕ್ತಿಗೆ ನೀಡಿಲ್ಲವೆಂಬುದು ಸರ್ವವೇದ್ಯ.   ಯಾವುದೇ ವ್ಯಕ್ತಿಯು ತನ್ನ ಜೀವಿತದಲ್ಲಿ ಎಸಗಿದ ಕರ್ಮಕ್ಕೆ ಅನುಗುಣವಾದ ಫಲವನ್ನು  ತಾನೇ  ಅನುಭವಿಸಬೇಕು ಎಂಬುದು ಇಲ್ಲಿನ ನಿಯಮ. ಕೆಲಮಟ್ಟಿಗೆ ನಿಶ್ರೇಯಸವಾದವೂ ಈ ನಿಯಮವನ್ನು ಹೊಂದಿದೆ. ಆದರೆ ಉಳಿದವರು ಪಾರಮಾರ್ಥಿಕ ಜೀವನದಿಂದ ದೂರವಾಗಿ; ಲೌಕಿಕ ಜೀವನದಲ್ಲೇ ಆಸಕ್ತರಾಗಿ, ಜೀವನದ ಜಂಜಡಗಳಿಂದ  ಬೇಸತ್ತರೂವ್ಯರ್ಥವಾದ ಸ್ವೇಚ್ಛಾಜೀವನವನ್ನೇ ಸುಖಎಂದು ಭ್ರಮಿಸಿ, ಜೀವಿಸುತ್ತಾರೆ!! ಇತ್ತೀಚಿನ ದಿನಗಳಲ್ಲಿ ವಿದೇಶಿಯರೂ ಕೆಲವರು ಈ ನೆಮ್ಮದಿಯ ಜೀವನಕ್ರಮವನ್ನು ಅನುಸರಿಸಲು ಸ್ವಪ್ರೇರಣೆಯಿಂದ ಮುಂದೆಬರುತ್ತಿರುವು ದುಂಟು.  ಜೀವನದಲ್ಲಿ ಅನುಸರಿಸಲು ಸರಳವಾದುದು; ಸುಲಭವಾದುದು ಎಂಬ ಕಾರಣಕ್ಕಾಗಿ  ತಾವು ಹುಟ್ಟಿಬೆಳೆದ ಪರಿಸರದ ಧರ್ಮವನ್ನು ತ್ಯಜಿಸಿ; ಬೇರೊಂದು ಧರ್ಮಕ್ಕೆ ಸೇರಿಕೊಳ್ಳುವುದು ಕೆಲವರಿಗೆ ಒಂದು ಹವ್ಯಾಸವಾಗಿರುತ್ತದೆ. ಇದನ್ನು ಕುರಿತು ಶಂಕರಭಗವತ್ಪಾದರು ಸ್ವಧರ್ಮೇ ನಿಧನಃ ಶ್ರೇಯಃ ಅನ್ಯಧರ್ಮ ಭಯಾವಹ’  ಎಂದು ಎಚ್ಚರಿಸಿರುವುದಿದೆ.  ಇದನ್ನು ಅರಿತು ಲೌಕಿಕ ಬಂಧನದಿಂದ ಬಿಡುಗಡೆಯನ್ನು ಬಯಸುವವರಿಗೆ  ಮಾತ್ರವೇ ಇಲ್ಲಿನ ಮಾಹಿತಿಗಳು ಉಪಯುಕ್ತವಾಗುತ್ತವೆ. ಉಳಿದವರಿಗೆ ವ್ಯರ್ಥವಾದ ಕಾಲಹರಣವೆಂಬುದು ನಿಶ್ಚಿತ.

-ಸಿರಿಭೂವಲಯದಸುಧಾರ್ಥಿ