Wednesday 19 February 2020

ಸಿರಿಭೂವಲಯದಲ್ಲಿ ಸ್ತಂಬಕಾವ್ಯರೂಪದ ಅಂತರ್ಸಾಹಿತ್ಯವಾಗಿ ಉಗಮವಾಗುವ ಇಂದ್ರಾಕ್ಷೀಸ್ತೋತ್ರಸಾಹಿತ್ಯ


ಕುಮುದೇಂದುಮುನಿಯ ಸಿರಿಭೂವಲಯದಲ್ಲಿ ಪ್ರಥಮಖಂಡದ ೫೯ ಅಧ್ಯಾಯಗಳ ಪೈಕಿ ೪೧ನೇ ಅಧ್ಯಾಯದಿಂದ ೫೯ನೇ ಅಧ್ಯಾಯದವರೆವಿಗೆ  ಪೂರ್ಣ ಪದ್ಯಗಳ ೩ನೇ ಪಾದದ ಬೇರೆ ಬೇರೆ ಶ್ರೇಣಿಗಳಲ್ಲಿ ಶ್ರೀ ಮಾರ್ಕಾಂಡೇಯ ಪುರಾಣೋಕ್ತ ಇಂದ್ರಕೃತ 'ಇಂದ್ರಾಕ್ಷೀಸ್ತೋತ್ರ'ವು ಕೆಲವು ಶ್ರೇಣಿಗಳಲ್ಲಿ ಮೇಲಿನಿಂದ ಕೆಳಕ್ಕೂ, ಕೆಲವು ಶ್ರೇಣಿಗಳಲ್ಲಿ ಕೆಳಗಿನಿಂದ ಮೇಲಕ್ಕೂ ಪ್ರವಹಿಸಿರುವುದನ್ನು ಕಾಣಬಹುದು.
ಈ ರೀತಿಯಲ್ಲಿ ಪ್ರವಹಿಸಿರುವ ಯಾವುದೇ ಶ್ರೇಣಿಯಲ್ಲೂ ಈ ಸ್ತೋತ್ರಸಾಹಿತ್ಯವು ನಾವು ಈಗ ಬಳಸುತ್ತ್ತಿರುವ ಕ್ರಮದಲ್ಲಿ ಒಂದೇ ಧಾರೆಯಾಗಿ ಸಾಗುವುದಿಲ್ಲ! ಈ ಸಾಹಿತ್ಯವನ್ನು ಸ್ತಂಬಕಾವ್ಯದ ಶ್ರೇಣಿಯಲ್ಲಿ ಪುನಃ ಅಶ್ವಗತಿಯಲ್ಲಿ ಸಾಗುತ್ತಾ ಪ್ರತ್ಯೇಕವಾಗಿ ಬರೆದುಕೊಂಡು ಸಮರ್ಪಕವಾದ ಪೂರ್ಣಪಾಠವನ್ನು ಪಡೆಯಬೇಕಾಗುತ್ತದೆ.  ಸ್ತೋತ್ರಾರಂಭದಲ್ಲಿ ಅಂಗನ್ಯಾಸ, ಹೃದಯನ್ಯಾಸ,  ದಿಗ್ಭಂಧನ ಹಾಗೂ ದಿಗ್ವಿಮೋಚನಕ್ರಮವನ್ನು ಅಳವಡಿಸಿರುವುದು ವಿಶೇಷವಾಗಿದೆ.
ಇಲ್ಲಿ ಪ್ರಚಲಿತವಿರುವ ಪೂರ್ಣಪಾಠವನ್ನು ನೀಡಲಾಗಿದೆ. ಇದರೊಂದಿಗೆ ಸಿರಿಭೂವಲಯದಲ್ಲಿ ಉಗಮವಾಗುವ ಸ್ತಂಬಕಾವ್ಯದಲ್ಲಿ ಅಶ್ವಗತಿಯಲ್ಲಿ ಕಾಣಬರುವ ಪಾಠವನ್ನು ತಾಳೆಹಾಕಿದಾಗ ಕೆಲವು ಪಾಠಾಂತರಗಳು ಹಾಗೂ ಹಲವಾರು ಅಕ್ಷರಗಳು ಲೋಪವಾಗಿರುವಂತೆ ಕಾಣುವುದು ಸಹಜ. ಇದಕ್ಕೆ ಪ್ರಮುಖಕಾರಣ ಕವಿಯು ಬಳಸಿರುವ ಗಣಿತಸೂತ್ರಗಳ ಇತಿಮಿತಿ ಹಾಗೂ ನೂರು ಸಾವಿರ ಲಕ್ಷಕೋಟಿ ಶ್ಲೋಕಗಳ ವ್ಯಾಪ್ತಿಯಲ್ಲಿ ಜಗತ್ತಿನ ಎಲ್ಲಭಾಷೆಗಳ ಎಲ್ಲ ಸಾಹಿತ್ಯಕೃತಿಗಳನ್ನೂ ಕಟ್ಟಿರಿಸುವಲ್ಲಿ ಕೆಲವಾರು ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕಾದುದು ಕವಿಗೆ ಅನಿವಾರ್ಯವಾಗಿದೆ ಎಂಬುದನ್ನು ಓದುಗರು ಮರೆಯಬಾರದು.
 ಕೆಲವೊಂದು ಪದಗಳ ರಚನೆಯಲ್ಲಿ ಸಾಮಾನ್ಯ ಓದುಗರೂ ಸುಲಭವಾಗಿ ಊಹಿಸಿ ಅರ್ಥಮಾಡಿಕೊಳ್ಳಬಹುದಾದಂಥ ಅಕ್ಷರಗಳ ಲೋಪವನ್ನು ಕುಮುದೇಂದು ಮುನಿಯು ಯಥೇಚ್ಛವಾಗಿ ಮಾಡಿರುವುದನ್ನು ನಾನು ನನ್ನ ಅಧ್ಯಯನ ಸಮಯದಲ್ಲಿ ಗಮನಿಸಿದ್ದೇನೆ. ಇದನ್ನು ವಿದ್ವಾಂಸರು 'ದೋಷ'  ಎಂದು ಪರಿಗಣಿಸಬಾರದು.
ಮನುಷ್ಯನ ದೇಹಾರೋಗ್ಯವು ಕೆಡುವುದಕ್ಕೆ ಹಲವಾರು ಕಾರಣಗಳಿರುತ್ತವೆ. ಅವುಗಳಪೈಕಿ, ಏನನ್ನೋ ಕಂಡು ಹೆದರಿದಂತೆ ಭ್ರಮೆಗೊಳಗಾಗುವುದೂ ಒಂದು ಕಾರಣ. ಸುಮಾರು ೭೦ ವರ್ಷಗಳಹಿಂದೆ  ನಾನಿನ್ನೂ ಚಿಕ್ಕವನಿದ್ದಾಗ, ನನ್ನ ತಾಯಿ ಹಾಸನದ ಮಿಷಿನ್ ಆಸ್ಪತ್ರೆಯ ಹಿಂಭಾಗದ ರಸ್ತೆಯಲ್ಲಿರುವ( ಈಗಿನ ಹರ್ಷಾಮಹಲ್ ರಸ್ತೆ) ಮನೆಯ ಹಿಂಭಾಗದಲ್ಲಿ ಸಂಜೆಗತ್ತಲಿನಲ್ಲಿ ಪಾತ್ರೆತೊಳೆಯುವಾಗ ಏನೋ ನೆರಳುಕಂಡಂತಾಗಿ ಹೆದರಿದರು. ಅಂದು ರಾತ್ರಿಯಿಂದಲೇ ಅವರಿಗೆ ಚಳಿ ಜ್ವರ ಬರಲಾರಂಭಿಸಿತು.   ಇಂದಿನ ದಿನಗಳಲ್ಲಿ ದೇಹಾರೋಗ್ಯಕೆಟ್ಟಕೂಡಲೇ ವೈದ್ಯರಲ್ಲಿ ಓಡಿಹೋಗುವುದು ಸಾಮಾನ್ಯಸಂಗತಿ! ಆದರೆ ನಮ್ಮ ತಂದೆಯವರು ಈ ಪದ್ಧತಿಗೆ ವಿರುದ್ಧವಾಗಿದ್ದವರು. ತಮ್ಮ ಪತ್ನಿಯ ಅನಾರೋಗ್ಯಕ್ಕೆ ಆಕೆ ಹೆದರಿರುವುದೇ ಕಾರಣವೆಂದು ಖಚಿತವಾಗಿ ತಿಳಿದುಕೊಂಡು, ಕೂಡಲೇ ಬೆಳಗಿನಜಾವ ಹಾಗೂ ಸಂಜೆಯವೇಳೆಯಲ್ಲಿ ಇಂದ್ರಾಕ್ಷೀ ಸ್ತೋತ್ರ ಹಾಗೂ ಶಿವಕವಚದ ಪಾರಾಯಣಕ್ಕೆ ಪ್ರಾರಂಭಿಸಿದರು! ಒಂದು ವಾರದ ಅವಧಿಯೊಳಗಾಗಿ ನನ್ನ ತಾಯಿಯ ಆರೋಗ್ಯ ಸುಧಾರಿಸಿತು.  ಸಾಮಾನ್ಯವಾಗಿ ತಲೆದೋರುವ ಇಂಥ ಅನಾರೋಗ್ಯದ ನಿವಾರಣೆಗಾಗಿ ನನ್ನ ತಂದೆಯವರು ತಮ್ಮ ಜೀವಮಾನಪೂರ್ತ ಈ ಜಪದ ಕ್ರಮವನ್ನು ಅನುಸರಿಸುತ್ತಿದ್ದರು. ೧೯೬೫ರ ಸುಮಾರಿನಲ್ಲಿ ಅವರು ಕಾಲವಶರಾದರು. ೧೯೭೫ರ ನಂತರ, ನನಗೂ ಈರೀತಿಯಲ್ಲಿ ಹಲವಾರುಸಲ ಸ್ವಲ್ಪ ಅನಾರೋಗ್ಯ ಉಂಟಾದಕಾರಣ ನಾನೂ ಈ ಪಾರಾಯಣಕ್ರಮವನ್ನು ಪ್ರಯೋಗಿಸಿ, ಯಶಸ್ವಿಯಾಗಿದ್ದೇನೆ.  ಈ ಸ್ತೋತ್ರಸಾಹಿತ್ಯದಲ್ಲಿ ಬರುವ  ”ಆಯುರಾರೋಗ್ಯಮೈಶ್ವರ್ಯಂ ಜ್ಞಾನಂ ವಿತ್ತಂ ಯಶೋಬಲಂ ಕ್ಷಯಾಪಸ್ಮಾರ ಕುಷ್ಟಾದಿ ತಾಪಜ್ವರನಿವಾರಣಂ| ” ಇಂದ್ರಸ್ತೋತ್ರಮಿದಂ ಪುಣ್ಯಂ ಜಪೇ ದಾಯುಷ್ಯ ವರ್ಧನಂ|” ವಿನಾಶಾಯಚ ರೋಗಾಣಾಮಪಮೃತ್ಯು ಹರಾಯಚ ”|ಎಂಬುದನ್ನು ನಾನು ಪ್ರಾಯೋಗಿಕವಾಗಿ ಪರಿಶೀಲಿಸಿದ್ದಾಗಿದೆ.
”ಶತಮಾವರ್ತಯೇ ದ್ಯಸ್ತು ಮುಚ್ಯತೇ ವ್ಯಾಧಿಬಂಧನಾತ್|
ಆವರ್ತಯೇತ್ ಸಹಸ್ರಂತು ಲಭತೇ ವಾಂಛಿತಂ ಫಲಂ| ” -ಅಂದರೆ, ನೂರುಸಲ ಈ ಮಂತ್ರಜಪ ಮಾಡುವುದರಿಂದ ರೋಗಬಂಧನದಿಂದ ಬಿಡುಗಡೆಯಾಗಬಹುದು ಹಾಗೂ ಸಾವಿರಸಲ ಜಪಮಾಡುವುದರಿಂದ ನಾವು ಇಚ್ಛಿಸಿದ ಫಲವು ದೊರೆಯುತ್ತದೆ’ ಎಂಬುದನ್ನು ಶಕ್ತಿಇರುವವರು ಪರೀಕ್ಷಿಸಿ ಫಲ ಪಡೆಯಬಹುದಾಗಿದೆ.
ಶ್ರೀಮನ್ಮಾರ್ಕಂಡೇಯ ಪುರಾಣೋಕ್ತ
   ಇಂದ್ರಕೃತ ಶ್ರೀಮದಿಂದ್ರಾಕ್ಷೀಸ್ತೋತ್ರಂ

ಓಂ ಅಸ್ಯ ಶ್ರೀ ಇಂದ್ರಾಕ್ಷೀಸ್ತೋತ್ರ ಮಹಾಮಂತ್ರಸ್ಯ| ಶಚೀಪುರಂದರ ಋಷಿಃ|
ಅನುಷ್ಟುಪ್ಛಂದಃ| ಇಂದ್ರಾಕ್ಷೀ ದೇವತಾ| ಮಹಾಲಕ್ಷ್ಮೀರಿತಿ ಬೀಜಂ
ಭುವನೇಶ್ವರೀ ಶಕ್ತಿಃ -ಭವಾನೀತೀ ಕೀಲಕಂ-
ಮಮ ಇಂದ್ರಾಕ್ಷೀ ಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ|
ಇಂದ್ರಾಕ್ಷೀಂ ಅಂಗುಷ್ಟಾಭ್ಯಾಂನಮಃ| ಮಹಾಲಕ್ಷ್ಮೀ ತರ್ಜನೀಭ್ಯಾ ನಮಃ|
ಮಾಹೇಶ್ವರೀಂ ಮಧ್ಯಮಾಭ್ಯಾಂನಮಃ| ಅಂಬುಜಾಕ್ಷೀಂ
ಅನಾಮಿಕಾಭ್ಯಾಂನಮಃ| ಕಾತ್ಯಾಯನೀಂ ಕನಿಷ್ಠಿಕಾಭ್ಯಾಂ ನಮಃ|
ಕೌಮಾರೀಂ ಕರತಲಪೃಷ್ಠಾಭ್ಯಾಂನಮಃ| ಇಂದ್ರಾಕ್ಷೀಂ ಹೃದಯಾಯನಮಃ|
ಮಹಾಲಕ್ಷ್ಮೀ ಶಿರಸೇಸ್ವಾಹಾ|  ಮಾಹೇಶ್ವರೀಂ ಶಿಖಾಯೈವಷಟ್|
ಅಂಬುಜಾಕ್ಷೀಂ ಕವಚಾಯಹುಂ| ಕಾತ್ಯಾಯನೀಂ ನೇತ್ರತ್ರಯಾ ಯವಷಟ್|
ಕೌಮಾರೀಂಅಸ್ತ್ರಾಯಫಟ್| ಭೂರ್ಭುವಸ್ಸುವರೋಂಇತಿ ದಿಗ್ಬಂಧಃ|
ಧ್ಯಾನಂ: ನೇತ್ರಾಣಾಂ ದಶಭಿಶ್ಶತೈಃ ಪರಿವೃತಾಮತ್ಯುಗ್ರಚರ್ಮಾಾಂಬರಾಂ
ಹೇಮಾಭಾಂ ಮಹತೀ ವಿಲಂಬಿತಶಿಖಾ| ಮಾಮುಕ್ತಕೇಶಾನ್ವಿತಾಂ|
ಘಂಟಾಮಂಡಿತ ಪಾದಪದ್ಮಯುಗಳಾಂ ನಾಗೇಂದ್ರ ಕುಂಭಸ್ತನೀಂ
 ಇಂದ್ರಾಕ್ಷೀಂ ಪರಿಚಿಂತಯಾಮಿ ಮನಸಾ ಪ್ರತ್ಯಕ್ಷಸಿದ್ಧಿಪ್ರದಾಂ|
ಇಂದ್ರಾಕ್ಷೀಂ ಶಿವಯುವತೀಂ ನಾನಾಲಂಕಾರ ಭೂಷಿತಾಂ|
 ಪ್ರಸನ್ನ ವದನಾಂಭೋಜಾ ಮಪ್ಸರೋಗಣ ಸೇವಿತಾಂ|
ಇಂದ್ರಾಕ್ಷೀಂ ದ್ವಿಭುಜಾಂ ವಂದೇ ಪೀತವಸ್ತ್ರ ದ್ವಯಾನ್ವಿತಾಂ|
ವಾಮಹಸ್ತೇ ವಜ್ರಧರಾ ದಕ್ಷಿಣೇನ ವರಪ್ರದಾಂ| ಇಂದ್ರ ಉವಾಚ|
ಓಂ ಇಂದ್ರಾಕ್ಷೀ ನಾಮ ಸಾ ದೇವಿ ದೈವತಾಸ್ಸಮುದಾಹೃತಾ|
ಗೌರೀ ಶಾಖಾಂಬರಿದೇವೀ ದುರ್ಗಾನಾಮ್ನೀತಿವಿಶ್ರುತಾ|
ನಿತ್ಯಾನಂದೀ ನೀರಾಹಾರೀ ನಿಷ್ಕಳಾಯೈ ನಮೋಸ್ತುತೇ|
ಕಾತ್ಯಾಯನೀ ಮಹಾದೇವೀ ಛಿನ್ನಘಂಟಾ ಮಹಾತಪಾ|
ಸಾವಿತ್ರೀ ಸಾ ಚ ಗಾಯತ್ರೀ ಬ್ರಹ್ಮಾಣೀ ಬ್ರಹ್ಮವಾದಿನೀ|
 ನಾರಾಯಣೀ ಭದ್ರಕಾಳಿ ರುದ್ರಾಣಿ ಕೃಷ್ಣಪಿಂಗಳಾ|
 ಅಗ್ನಿ ಜ್ವಾಲಾ ರೌದ್ರಮುಖೀ ಕಾಳರಾತ್ರೀ ತಪಸ್ವಿನೀ|
ಮೇಘಸ್ವನಾಸಹಸ್ರಾಕ್ಷೀ ವಿಕಟಾಂಗೀ ಜಟೋದರೀ| ಮಹೋದರೀ
 ಮುಕ್ತಕೇಶೀ ಘೋರರೂಪಾ ಮಹಾಬಲಾ| ಅಜಿತಾ ಭದ್ರದಾನಂತಾ
ರೋಗಹರ್ತ್ರೀ ಶಿವಪ್ರಿಯಾ| ಶಿವದೂತಿ ಕರಾಳೀ ಚ ಪ್ರತ್ಯಕ್ಷ ಪರಮೇಶ್ವರೀ|
ಇಂದ್ರಾಣೀ ಇಂದ್ರರೂಪಾ ಚ ಇಂದ್ರಶಕ್ತಿಃ ಪರಾಯಣೇ|
ಸದಾ ಸಂಮೋಹಿನೀದೇವಿ ಸುಂದರೀ ಭುವನೇಶ್ವರೀ|
ಏಕಾಕ್ಷರೀ ಪರಬ್ರಹ್ಮೀ ಸ್ಥೂಲಸೂಕ್ಷ್ಮಪ್ರವರ್ಧಿನೀ|
 ರಕ್ತಾಕ್ಷೀ ರಕ್ತದಂತಾ ಚ ರಕ್ತಮಾಲ್ಯಾಂಬರಾಪರಾ|
 ಮಹಿಷಾಸುರಹಂತೀ ಚ ಚಾಮುಂಡಾ ಖಡ್ಗಧಾರಿಣೀ|
ವಾರಾಹೀ ನಾರಸಿಂಹೀ ಚ ಭೀಮಾ ಭೈರವ ನಾದಿನೀ|
ನಂದಾ ಚ ರಕ್ತದಂತಾ ಚ ಚಕ್ರಧಾರಾ ವಿಭೂಷಿತಾ|
ಶೃತಿಃ ಸ್ಮೃತಿರ್ಧೃತಿರ್ಮೇದಾ ವಿದ್ಯಾ ಲಕ್ಷ್ಮೀ ಸರಸ್ವತೀ|
ಅನಂತಾ ವಿಜಯಾಪರ್ಣಾ ಮಾನಸ್ತೋಕಾಪರಾಜಿತಾ|
ಭವಾನೀ ಪಾರ್ವತೀ ದುರ್ಗಾ ಹೈಮವತ್ಯಂಬಿಕಾ ಶಿವಾ|
ಶಿವಾ ಭವಾನೀ ರುದ್ರಾಣೀ ಶಂಖರಾರ್ಧಶರೀರಿಣೀ|
ನಿತ್ಯಾ ಸಕಲ ಕಲ್ಯಾಣೀ ಸರ್ವೈಶ್ವರ್ಯ ಪ್ರದಾಯಿನೀ|
ದಾಕ್ಷಾಯಿಣೀ ಪದ್ಮಹಸ್ತಾ ಭಾರತೀ ಸರ್ವಮಂಗಳಾ|
ಕಲ್ಯಾಣೀ ಜನನೀ ದುರ್ಗಾ ಸರ್ವದುರ್ಗತಿನಾಶಿನೀ|
ಇಂದ್ರಾಕ್ಷೀ ಸರ್ವಭೂತೇಶೀ ಸರ್ವರೂಪಾ ಮನೋನ್ಮನೀ|
 ಮೃತ್ಯುಂಜಯೀ ಮಹಾಮಾಯಾ ಮಹಾಮಂಗಳದಾಯಿನೀ|
ಐರಾವತ ಗಜಾರೂಢಾ ವಜ್ರಹಸ್ತಾ ಮಹಾಬಲಃ|
 ಈಶ್ವರಾರ್ಧಾಂಗನಿಲಯಾ ವಿಧುಬಿಂಬಾ ನಿಭಾನನಾ|
ಸರ್ವರೋಗಪ್ರಶಮನೀ ಸರ್ವಮೃತ್ಯುವಿನಾಶಿನೀ|
 ಅಪವರ್ಗ ಪ್ರದಾರಮ್ಯಾ ಆಯುರಾರೋಗ್ಯದಾಯಿನೀ|
 ಇಂದ್ರಾದಿ ದೇವಸಂಸ್ತುತ್ಯಾ ಇಹಾಮುತ್ರಫಲಪ್ರದಾ|
ಇಚ್ಛಾಶಕ್ತಿಸ್ವರೂಪಾ ಚ ಇಭವಕ್ತ್ರಾದಿಜನ್ಮಭೂಃ|
ಐಂದ್ರೀದೇವೀ ಮಹಾಕಾಳೀ ಮಹಾಲಕ್ಷ್ಮೀ ನಮೋಸ್ತುತೇ|
ಮಾರ್ಕಂಡೇಯಃ|
ಏತೈ ರ್ನಾಮಪದೈರ್ದೇವ್ಯೈ ಸ್ತುತಾಃ ಶಕ್ರೇಣ ಧೀಮತಾ|
ಪರಿತುಷ್ಟಾವರಂಪ್ರಾದಾ ತಸ್ಮೈದೇವಿತದೀಪ್ಸಿತಂ|
ಆಯುರಾರೋಗ್ಯಮೈಶ್ವರ್ಯಂ ಜ್ಞಾನಂ ವಿತ್ತಂ ಯಶೋಬಲಂ|
ಕ್ಷಯಾಪಸ್ಮಾರ ಕುಷ್ಟಾದಿ ತಾಪಜ್ವರನಿವಾರಣಂ|
 ಶತಮಾವರ್ತಯೇ ದ್ಯಸ್ತು ಮುಚ್ಯತೇ ವ್ಯಾಧಿಬಂಧನಾತ್|
ಆವರ್ತಯೇತ್ ಸಹಸ್ರಂತು ಲಭತೇ ವಾಂಛಿತಂ ಫಲಂ|
ಇಂದ್ರಸ್ತೋತ್ರಮಿದಂ ಪುಣ್ಯಂ ಜಪೇ ದಾಯುಷ್ಯ ವರ್ಧನಂ|
ವಿನಾಶಾಯಚ ರೋಗಾಣಾಮಪಮೃತ್ಯು ಹರಾಯಚ |
ಸರ್ವಮಂಗಳಮಾಂಗಲ್ಯೇ ಶಿವೇ ಸರ್ವಾರ್ಥಸಾಧಕೇ|
ಶರಣೈತ್ರ್ಯಂಬಕೀ ದೇವೀ ನಾರಾಯಣೀ ನಮೋಸ್ತುತೇ|
ಅಪಮೃತ್ಯುಮಪಕ್ಷಧಂ ಅಪೆತಶ್ಯಪಥನ್ಜಹಿ|
ಅಥಾನೋ ಅಗ್ನ ಆವಹ| ರಾಯಸ್ಪೋಷಂಗ್ಂಸಹಸಿಣಂ|
ಏತೇ ಸಹಸ್ರಮಯುತಂ ಪಾಶಾನ್ ಮೃತ್ಯೋ ರ್ಮರ್ತ್ಯಾಯ ಹಂತವೇ|
ತಾನ್ಯಜ್ವಸ್ಯ ಮಾಯಯಾ ಸರ್ವಾನವ ಯಜಾಮಹೇ|
ಮೃತ್ಯವೇಸ್ವಾಹಾ ಮೃತ್ಯವೇಸ್ವಾಹಾ|
ಓನ್ನಮೋ ಭಗವತೇ ರುದ್ರಾಯ ವಿಷ್ಣುವೇ ಮೃತ್ಯುರ್ಮೇಪಾಹಿ|
ಮಮ ಅಪಮೃತ್ಯುರ್ನಶ್ಯಶು| ಆಯರ್ವರ್ಧತಾಂ|
ತ್ರಿಯಂಬಕಂ ಯಾಜಾಮಹೆ ಸುಗಂಧೀಂ ಪುಷ್ಟಿವರ್ಧನಂ|
 ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯಮಾಮೃತಾತ್|
ಮಮ ಅಪಮೃತ್ಯುರ್ನಶ್ಯತು ಆಯುರ್ವರ್ಧತಾಂ||
ಇಂದ್ರಾಕ್ಷೀಂ ಅಂಗುಷ್ಟಾಭ್ಯಾಂನಮಃ|
ಮಹಾಲಕ್ಷ್ಮೀ ತರ್ಜನೀಭ್ಯಾ ನಮಃ|
ಮಾಹೇಶ್ವರೀಂ ಮಧ್ಯಮಾಭ್ಯಾಂನಮಃ|
ಅಂಬುಜಾಕ್ಷೀಂ ಅನಾಮಿಕಾಭ್ಯಾಂನಮಃ|
ಕಾತ್ಯಾಯನೀಂ ಕನಿಷ್ಠಿಕಾಭ್ಯಾಂ ನಮಃ|
ಕೌಮಾರೀಂ ಕರತಲಪೃಷ್ಠಾಭ್ಯಾಂನಮಃ|
ಇಂದ್ರಾಕ್ಷೀಂ ಹೃದಯಾಯನಮಃ|
ಮಹಾಲಕ್ಷ್ಮೀ ಶಿರಸೇಸ್ವಾಹಾ|
ಮಾಹೇಶ್ವರೀಂ ಶಿಖಾಯೈವಷಟ್|
ಅಂಬುಜಾಕ್ಷೀಂ ಕವಚಾಯಹುಂ|
ಕಾತ್ಯಾಯನೀಂ ನೇತ್ರತ್ರಯಾಯವಷಟ್|
ಕೌಮಾರೀಂಅಸ್ತ್ರಾಯಫಟ್|
ಭೂರ್ಭುವಸ್ಸುವರೋಂಇತಿ ದಿಗ್ವಿಮೋಕಃ|
ಇತಿ ಶ್ರೀಮದಿಂದ್ರಾಕ್ಷೀಸ್ತೋತ್ರಂ ಸಂಪೂರ್ಣಂ.
                                   -ಸಿರಿಭೂವಲಯದಸುಧಾರ್ಥಿ. 

No comments:

Post a Comment