Saturday 15 February 2020

ಸಿರಿಭೂವಲಯ ಕಾವ್ಯಾಂತರ್ಗತವಾದ ಮಾಹಿತಿಯನ್ನು ನಿರ್ಲಕ್ಷಿಸುವುದು ಸರಿಯೇ!?


 ಮಾನ್ಯಖೇಟದದೊರೆ ಜಿನಭಕ್ತನಾಗಿದ್ದ ಅಮೋಘವರ್ಷಾಂಕನ ರಾಜ್ಯದಲ್ಲಿ ಬೆರೆ ಬೇರೆ ಜನಪದ ಸಮೂಹವೆಲ್ಲದರಲ್ಲಿಯು ಧರ್ಮವು ಕ್ಷೀಣಿಸುತ್ತ ಬರುವಾಗ, ಈ ಸಿರಿಭೂವಲಯವೆಂಬ ಸರ್ವ ಧರ್ಮ ಸಮನ್ವಯಿಯಾದ ಕಾವ್ಯವು ರಚೆನೆಯಾಗಿರುವ ಮಾಹಿತಿಯನ್ನು  ಕುಮುದೇಂದುಮುನಿಯು ತನ್ನ ಕಾವ್ಯದಲ್ಲಿ ನಿರೂಪಿಸಿರುವುದಿದೆ. ನೋಡಿ: " ಣಾಣಾಜನಪದವೆಲ್ಲದರೊಳುಧರ್ಮ|ತಾನು ಕ್ಷೀಣಿಸಿ ಬರ್ಪಾಗ| ತಾನ್ ಅಲ್ಲಿ ಮಾನ್ಯಖೇಟದದೊರೆ ಜಿನಭಕ್ತ|ತಾನು ಅಮೋಘವರ್ಷಾಂಕ||" 
ಈ ಮಾಹಿತಿಯು ಕಾವ್ಯರಚನೆಯಾಗಿರುವ ಸ್ಥಳ ಹಾಗೂ ಕಾಲವನ್ನು ಕುರಿತ ಖಚಿತವಾದ ಮಾಹಿತಿಯಾಗಿದೆ.  ಅಮೋಘವರ್ಷನು ಜೈನಸಂಪ್ರದಾಯವನ್ನು ಅನುಸರಿಸುತ್ತಿದ್ದವನೆಂಬ ಚಾರಿತ್ರಿಕ ಮಾಹಿತಿಯತ್ತಲೂ ಕಾವ್ಯವು ಬೆಳಕುಬೀರಿದೆ. ಹಾಗಿದ್ದೂ ಇಂದಿನ ವಿದ್ವಾಂಸರು ಶ್ರಮವಹಿಸಿ ಕಾವ್ಯವನ್ನು ಓದದೆಯೇ  ಕವಿ, ಕಾವ್ಯ, ಕಾವ್ಯರಚನೆಯಕಾಲ, ದೇಶ ಮುಂತಾದ ವಿಚಾರಗಳಲ್ಲಿ ತಮ್ಮ ಸಂಶಯವನ್ನು ಪ್ರಧಾನವಾಗಿಸಿ ಬರೆದಿರುವುದು ಈ ಕಾವ್ಯಕ್ಕಿಂತಲೂ ಹಿಚ್ಚಿನ ಅಚ್ಚರಿಯ ವಿಚಾರವಾಗಿದೆ!!!
ಇದರಿಂದಾಗಿ ಕವಿಗಾಗಲೀ ಕಾವ್ಯಕ್ಕಾಗಲೀ ಯಾವುದೇ ಕುಂದೂ ಇರುವುದಿಲ್ಲ! ಆದರೆ, ಮುಂದೆ ಯಾರಾದರೂ ಸಾಮರ್ಥ್ಯಶಾಲಿಯು ಈ ಕಾವ್ಯವನ್ನು ಕುರಿತು ಸಮಗ್ರವಾದ ಮಾಹಿತಿಯನ್ನೂ ನೀಡಿ, ಪರಿಚಯಿಸುವ ಕಾರ್ಯಕ್ಕೆ  ಹೋದಲ್ಲಿ ಇಂಥವರ ಬರಹಗಳು ಅವನ ದಾರಿತಪ್ಪಿಸುವುದು ಖಚಿತ.
                                                          -ಸಿರಿಭೂವಲಯದಸುಧಾರ್ಥಿ. 

No comments:

Post a Comment