Tuesday 11 February 2020

ಸಂಧ್ಯಾವಂದನೆ ಯಾರಿಗೆ?

ಸನಾತನ ಸಂಪ್ರದಾಯದಲ್ಲಿ ಬ್ರಾಹ್ಮಣರು ತ್ರಿಕಾಲ ಸಂಧ್ಯಾವಂದನೆಯನ್ನಾಚರಿಸುವುದು ಪದ್ಧತಿಯಾಗಿತ್ತು. ಈಗ ಬಹುಪಾಲು ’ದಶಗಾಯತ್ರೀಜಪ’ ದಮಟ್ಟಿಗೇ ಈ ಪದ್ಧತಿಯು ಸೀಮಿತವಾಗಿದೆ! ಅದೂ ಇಲ್ಲದೇ ಇರುವವರೂ ಇರಬಹುದು!! ಪರಿಸರ ಹೀಗಿರುವಲ್ಲಿ  ’ನಾವು ವೇದಸಂಪ್ರದಾಯವನ್ನು ಒಪ್ಪುವುದಿಲ್ಲ’ ಎಂದು ಬಹಿರಂಗವಾಗಿಯೇ ಘೋಷಿಸುವ  ಜೈನಸಂಪ್ರದಾಯದವರು ಈ ಸಂಧ್ಯಾವಂದನೆಯ ಕ್ರಿಯೆಯನ್ನು ಆಚರಿಸುವರೋ ಇಲ್ಲವೋ ಎಂದು ಖಚಿತವಾಗಿ ಹೇಳಲಾಗದು.
 ಆದರೂ ೧೨೦೦ ವರ್ಷಗಳ ಹಿಂದಿನವನಾದ ಕುಮುದೇಂದುಮುನಿಯು ತನ್ನ ಸಿರಿಭೂವಲಯ ಕಾವ್ಯದಲ್ಲಿ ಈ ಸಂಧ್ಯಾವಂದನೆಯ ಕ್ರಮವು ಜೈನಸಮುದಾಯದಲ್ಲಿಯೂ ಪ್ರಚಲಿತವಿದ್ದ ಮಾಹಿತಿಯನ್ನು ಖಚಿತವಾಗಿ ಸೂಚಿಸಿರುವುದಿದೆ!! ಇದನ್ನು ಯಾರಾದರೂ ’ಈ ಮಾಹಿತಿಯು ತಪ್ಪು. ಇದು ಸುಧಾರ್ಥಿಯ ಸ್ವಕಪೋಲ ಕಲ್ಪಿತ ಬರಹ ’ಎಂದು ವಾದಿಸುವುವುದಾದಲ್ಲಿ, ಅದಕ್ಕೆ ಉತ್ತರಿಸಿ, ಅವರಿಗೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯ ನನಗಿಲ್ಲ!!
 ಕಾವ್ಯದ ಅಧ್ಯಯನ ಸಮಯದಲ್ಲಿ ನಾನು ಕಂಡ ಮಾಹಿತಿಯನ್ನು ಯಥಾವತ್ತಾಗಿ ಇಲ್ಲಿ ನಿರೂಪಿಸಿದ್ದೇನೆ. ಅದನ್ನು ಗ್ರಹಿಸಿ, ಸಮ್ಮತಿಸುವುದೂ ಬಿಡುವುದು ಯಾವುದೇ ಸಮುದಾಯದ ಓದುಗರಿರಲೀ ಬಿಟ್ಟ ಸಂಗತಿ. ಸಿರಿಭೂವಲಯದಲ್ಲಿ  ಅಂತರ್ಗತವಾದ ಮಹಿತಿಗಳ ಕಿಂಚಿತ್ ಪರಿಚಯಕ್ಕಾಗಿ ಈ ಬರಹವೇ ಹೊರತು, ಯಾವುದೇ ರೀತಿಯ ವಾದ- ಪ್ರತಿವಾದಳಿಗೂ ಸುಧಾರ್ಥಿಯು ಆಸಕಿಹೊಂದಿಲ್ಲ.
*   *   *
ಸಿರಿಭೂವಲಯ ಕಾವ್ಯದ ಅಧ್ಯಾಯ ೩೬ ರಿಂದ  ಅಧ್ಯಾಯ ೪೦ರವರೆವಿಗೆ ಪೂರ್ಣಪದ್ಯಗಳ ೨ನೇ ಪಾದದ ಕೊನೆಯಕ್ಷರಗಳನ್ನು  ಜೋಡಿಸಿಕೊಳ್ಳುತ್ತಾ ಕೆಳಮುಖವಾಗಿ ಸಾಗಿದಾಗ ದೊರೆಯುವ ಅಕ್ಷರಗಳ ಸರಪಣಿಯಲ್ಲಿ  ಗಮನಿಸಿದರೆ: ಈ ಕೆಳಕಂಡ ಜೈನಸಂಪ್ರದಾಯದ ಸಂಧ್ಯಾವಂದನ ಮಂತ್ರದ ಪಾಠವು ಉಗಮವಾಗುತ್ತದೆ. 
ಅಥಸಂಧ್ಯಾವಂದನಾ
ಅಪವಿತ್ರಪವಿತ್ರೋವಾಸರ್ವಾವಸ್ಥಾಗತೋಪಿವಾ
ಯಸ್ಮರೇಪರಮಾತ್ಮಾನಂಸಬಾಹ್ಯಾಭ್ಯಂತರೇಶುಚಿಃ
ಅಪವಿತ್ರಃಪವಿತ್ರೋವಾಸುಸ್ತಿತ್ಯೋದುಸ್ಥಿತೋಪಿವಾ|
ಧ್ಯಾಯೇಪಂಚನಮೋಕಾರಸರ್ವಪಾಪಃಪ್ರಮುಚ್ಯತೇ|
ಸರ್ವವೇದೇಷುಯತ್ಪುಣ್ಯಂಸರ್ವತೀರ್ಥೇಷುಯತ್ಫಲಂ|
ತತ್ಫಲಂಸಮವಾಪ್ನೋತಿಸ್ತುತ್ವಾದೇವಂಜಿನೇಶ್ವರಃ|
ವಾಸನಾದ್ವಾಸುದೇವಸ್ಯವಾಸಿತಂತೋಜಗತ್ರಯಂ|
ಸರ್ವಭೂತನಿವಾಸೋಸಿನೇಮಿಕೃಷ್ಣನಮೋಸ್ತುತೇ|
ನಮೊಸ್ತ್ವನಂತಾಯಸಹಸ್ರಮೂರ್ಥಯೇಸಹಸ್ರಪಾದಾಕ್ಷಿಶಿರೋರುಬಾಹವೇ|
ಸಹಸ್ರನಾಮ್ನೇಪುರುಷಾಯಶಾಶ್ವತೇಸಹಸ್ರಕೋಟಿಯುಗಧಾರಿಣೇನಮಃ|
ಆಸತ್ಯಲೋಕದಾಶೆಷಾಲೋಕಾಲೋಕವಾತತ್ರೀಣ್ಯೇಸನ್ತಿಬ್ರಾಹ್ಮಣಾ|
ದೇವಾಸ್ತೇಭ್ಯೋತಾಕಾನ್ತಿಕೇನಮಃ ವನ್ದೇಗುರೂಣಾಂಚರಣಾರವಿಂದೇ|
ಸಂದರ್ಶಿತಸ್ವಾತ್ಮಸುಖಾವಬೋಧೇಜನಸ್ಯೇಜ್ಞಾಗಲಿಕಾಯಮಾನೇ|
ಸಂಸಾರಹಾಲಾಹಲಮೋಹಶಾನ್ತೈವನ್ದೇಗುರುಪದದ್ವನ್ದ್ವಮ್|
ವಾಜ್ಞ್ ಮಾನಸಗೋಚರಂಧರ್ಮಶುಕ್ಲಪ್ರಭಾಮೀಶ್ರಮತಕ್ರ್ಯಂತ್ರೈಪುರಂಮಹಃ|
ಅಚಿಂನ್ತ್ಯಮವ್ಯಕ್ತತಮನಂತಮವ್ಯಯಂವಿಭುಂಪ್ರಭುಂ|
ಭಾವಿತಭೂತಭಾವಕಂತ್ರೈಲೋಕ್ಯವಿಸ್ತಾರವಿಹಾರತಾರಕಂ| ಹರಿಂಪ್ರಪಸನೋಸ್ಮಿಗತಿಂಮಹಾತ್ಮನಾಪಾರಾಶರ್ಯವಚಸ್ಸರೋಜಮಮಲಂ|
ಗಾಥಾರ್ಥಗಂಧೋತ್ತಟಂವಾನಾಖ್ಯಾನಸಕೇಸರಂಜಿನತಥಾಸದ್ಭಾನುನಾಬೋಧಿತಂ|
ಲೋಕೇಸಜ್ಜನಷಟ್ಪದೈರಹರಹಃಪೇಪೀಯಮಾನಂಮದಾ|
ಭೂಯಾದ್ಭೂವಲಯಾಕ್ಷರಂಸಲಲಿತಂಗಾಯತ್ರೀಋಗ್ವಂಶತಂ| (ಅ.೪೦)
(೪೨ನೇ ಅಧ್ಯಾಯದಿಂದ ೪೫ನೇ ಅಧ್ಯಾಯದ  ೨ನೇ ಪಾದದ ಕೊನೆಯಿಂದ ೪ನೇ ಅಕ್ಷರಲ್ಲಿ ಕೆಳಕ್ಕೆ ಸಾಗಿದಾಗ ದೊರೆಯುವ ಅಕ್ಷರಗಳಸರಪಣಿಯಲ್ಲೂ ಈ ಸಂಧ್ಯಾವಂದನ ಮಂತ್ರಭಾಗವು ಪ್ರವಹಿಸಿದೆ. ಅವನ್ನು ಇಲ್ಲಿ ಸೂಚಿಸಿಲ್ಲ)--
ಪುನಃ ೪೮ನೇ ಅಧ್ಯಾಯದಿಂದ ೫೯ನೇ ಅಧ್ಯಾಯದವರೆವಿಗೆ ಪೂರ್ಣ ಪದ್ಯಗಳ ಎರಡನೇ ಪಾದದ ಕೊನೆಯಕ್ಷರ ಮೇಲಿನಿಂದ ಕೆಳಕ್ಕೆ ಸಾಗಿದಾಗ:
ವರ್ತಮಾನ ಸಂವತ್ಸರೇ ಅಯನೇ ಋತೌ ಮಾಸೆ ಪಕ್ಷೇ ತಿಥೌ ನಾಸೋ (ಥೋ?)ವಂಶೇ ಉಚ್ಚಗೋತ್ರ ಸೂತ್ರ ಪ್ರವರ ಋಗ್ಶಾಖಾ ವಿಶಿಷ್ಠೇ ಪ್ರಶಸ್ತ ನಕ್ಷತ್ರತಾರಕಾ ಯೋಗ ಕರಣ ಹೋರಾ ದ್ರೇಕ್ಕಾಣ ಮುಹೂರ್ತ ಧಗ್ದಯುಕ್ತಾ ಯಾಂ ದೇವದತ್ತ ನಾಮಧೇಯೋಹಂ ಮಮಬಂಧುಹತ್ಯಾ ಅ.೪೮
 ದಿ ಸರ್ವಪಾಪಕ್ಷಯಾರ್ಥಂ ಮಮಸಂಘಕೃತ ಸರ್ವ ಪಾಪ ಕ್ಷಯಾರ್ಥಂ ವರ್ಣಶುದ್ಧ್ಯರ್ಥಂ ಆಯುರಾರೋಗ್ಯ ಐಶ್ವರ್ಯಾದಿ ಪಶ್ಚಿಮ ಸಲ್ಲೇಖನಾಂತ ಸಮಸ್ತ ಇಹಪರಸುಖಸೊಧ್ಯರ್ಥಂ ದುಃಖಶಾಂತ್ಯರ್ಥಂ ಸಮಸ್ತ ಮಂಗಲಪಾಹು ಅ.೪೯.
ಡ ಸಿದ್ಯರ್ಥಂ ತ್ರಿಕಾಲ ಸಂಧ್ಯಾಚರಣಂ ಕರಿಷ್ಯೆ ಇತಿ ಸಂಕಲ್ಪಹಃ ಅಥಾಚಮನಂ ಪ್ರಾಣಾವಾಯಂಯ ಮಮ ಉಪಾತ್ತ ಪಾಪಪುಣ್ಯಕ್ಷಯದ್ವಾರಾ ಶ್ರೀ ತ್ರಿಜಗತ್ಪರಮೇಶ್ವರ ಪ್ರೀತ್ಯರ್ಥಂ ತ್ರಿಕಾಲ ಸಂಧ್ಯಾರ್ಘ್ಯಪ್ರಧಾನಂ ಕರಿಷ್ಯೇ ಓಂ ಭೂರ್ಭುವಃ ಓಂ ಸುವಹಃ ಓಂ ಹ್ರೀಂ ಝ್ವೀಂ ಕ್ಷ್ವೀಂ ವಂ ಮಂ ಹಂ  ಸಂ ತಂ ಪಂ ದ್ರಾಂ ದ್' ಅ.೫೦.
'ರೀಂ ಹಂ ಸಃ ಮಃ ಸ್ವಾಹಾ ಅಥ ಪ್ರಾಣಾಯಾಮಃ ಓಂ ಭೂರ್ಭುವಸ್ಸುವಗ ಓಂ ಣಮೋ ಅರಹಂತಾಣಂ ಓಂತತ್ಸವಿತುರ್ವರೇಣ್ಯಂ ಓಂ ಣಮೋಸಿದ್ಧಾಣಂ ಭರ್ಗೋ ದೇವಸ್ಯಧೀಮಹಿ ಓಂ 'ಣಟಗ್ಇರಿಯಾದವ' ಎಂದಿದೆ ಇದು ( ಓಂ 'ಣಮೋ ಆಯಿರಿಯಾಣಂ' ಎಂದಾಗಬೇಕು) ಧಿಯೋ ಯೋನಃ ಓಂಣಮೋ ಉವಜ್ಝಾಯಾಣಂ ಪ್ರಚೋದಯಾತ್  ಓಂ ಣ ಅ.೫೧.
ಮೋಳ್ಳೋಏಸವ್ವಸಾಹೂಣಂ ಏವಂತ್ರಿಃ ಅಸಾವಾದಿತ್ಯೋ ಬ್ರಹ್ಮ ಓಂ ಹ್ರೀಂ ಸ್ನಾನ ಸ್ಥಾನ ಭೂಃ ಶುದ್ಧಯತುಸ್ವಾಹಾ ಓಂ ಹ್ರಾಂ ಹ್ರೀಂ ಹ್ರೂಂ ಹ್ರೌಂ ಹ್ರಃ ಗಾಯತ್ರೀನ್ ಅಸಿಆಉಸಾ ಅನಾದಿಮೂಲ ಋಗ್ಮಂತ್ರಮಿದಂ ಸಮಸ್ತ ಗಂಗಾಸಿಂಧ್ವಾದಿ ನದನದೀತೀ ಅ.೫೨
ರ್ಥಜಲಂಸವಿತು ಸ್ವಾಹಾ ಝಂ ಠಂ ಸ್ವರಾವೃತಂ ತೋಯಮಂಡಲ ತ್ರೈವೇಷ್ಠಿತಂ ತೋಯೋ ನ್ಯಸ್ಯಾಗ್ರತರ್ಜನ್ಯಾತೇನಾನು ಸ್ನಾನಮಾಚತರ್ಧ ಚಂದ್ರಘಟೀರೂಪಂ ಚತುಃ ಪತ್ರಾಂಬುಜಾನ್ಹ ವಿಲಾನ್ತನಾಂ ತಾಬ್ತ ದಿಕ್ಕೋಣಂ ಪಂಚಾಗಸ್ಥಲಮಂಡಲ. ಅ.೫೩
ಂ ವಂ ಪಂ ಇತಿ ಬೀಜಂ ಕೋಣ ಚತುಷ್ಕೇಲಿಖಿಕ್ವಾ ಓಂ ಯ ರ ಲ ವ ಶ ಷ ಸ ಹ ಂ(ಅಂ) ಃಅಹ್) ಃ(ಕಹ್) ಃಃ (ಫಹ್) ಅಮುಷ್ಯ ಪ್ರಾಣಾ ಇಹಪ್ರಾಣಾ ಇಹಮಂತ್ರ ಯಂತ್ರ ತಂತ್ರಾಣಾಂ ಕಾಯವಾಚಗ್ಮನಃ ಚಕ್ಷ ಶ್ರೋತ್ರ ತ್ವಕ್ ಜಿಹ್ವಾ ಘ್ರಾಣ ಪ್ರಾಣಾ ಶ್ಚಿರಮತ್ರತಿಷ್ಠಂತುಸ್ವಾಹಾ ಝ್ವ ಲಂ ಹ್ವ ಅ.೫೪
ಃ ಪಃ ಇತಿ ಸುರಭಿಮುದ್ರಾಬೀಜಾನಿ ಇತಿ ಮುದ್ರಾಃ ಚಕ್ಷುರ್ವೋಂ ಶಾಂತಿ  ಗಾಯತ್ರೀ ಸುಪ್ರತಿಷ್ಠಿತಾ ಏತೇ ಮುದ್ರಾನಜಾನಾತಿ ಗಾಯತ್ರೀ ನಿಷ್ಫಲಂಭವೇತ್ ಯಥಾಶಕ್ತಿ ಗಾಯತ್ರೀ ಜಪಂ ಕರಿಷ್ಯೇ ಓಂಅಮೃತೇ ಅಮೃತೋದ್ಭವೇ ಅಮೃತವರ್ಷಿಣೀ ಅಮೃತಂ ಸ್ರಾವಯೇ ಸ್ರಾವಯ ಸವಿತ್ರೀ ಸಂ ಸಂ ಕ್ಲೀಂ ಕ್ಲೀಂ ಬ್ಲೂಂ ಬೂಂ ದ್ರಾಂ ದ್ರೀಂ ದ್ರಾವಯ ದ್ರಾವಯ ಹಂ ಅ.೫೫
ರುಂ ಝ್ವೀಂ ಕ್ಷ್ವೀಂ ಹಂಸಿ ಹಂಸಃ ಅಸಿಆಉಸಾ ಸರ್ವಮಿದ ಮಮೃತಂಭವತು ಸ್ವಾಃ ಇತಮೃತೀ ಕರಣಂ ಓಂ ಹ್ರೀಂ ಸರ್ವಕರ್ಮ ಮಲಂ ಪ್ರಕ್ಷಾಲ್ಯ ಕ್ಷಾಲಯಸ್ವಾಹಾ ಸ್ನಾನಂ ಓಂ ಓಂ ಓಂ ಹ್ರೀಂ ಝ್ವೀಂ ಝ್ವೀಂ ಕ್ಷ್ವೀಂ ವಂ ಮಂ ಹಂ ಸಂ ಅ.56.
ತಂ ಪಂ ದ್ರಾಂ ದ್ರೀಂ ಹಂಸಿ ಹಂಸಃ ಸ್ವಾಹಾ ಓಂ ಅ ಆ ಸಾ ಜಲಂ ಮಾರ್ಜನಂ ಕರೋಮಿಸ್ವಾಹಾ ಮಮದುರಿತಸಂತಾ ಪಾಪನೋ ದೋಸ್ತು ಸ್ವಾಹಾ ಇತಿ ತ್ರಿವಾರಂ ಪುನಸ್ಸ್ನಾನಂ ಓಂ ಝಾಂ ವಂ ಹ್ವಃ ಸ್ವಾಹಾ ಇತಿದಿಗಂಜಲಿಃ ಓಂ ಹ್ರೀಂ ಅ ಸಿ ಆ ಉ ಸಾ ಜಲಪ್ರದಾ ಅ.೫೭
ನಂ ಓಂ ಹ್ರಾಂ ಓಹಿ ಜಿಣಾಣಃ ಸ್ವಾಹಾ ಓಂ ಹ್ರೀಂ ಸ್ವವ ಅರ್ಹದ್ಭ್ಯಃ ಸ್ವಾಹಾ ಓಂ ಹ್ರೂಂ ಸಿದ್ಧೇಭ್ಯಃ ಸ್ವಾಹಾ ಓಂ ಹ್ರೇಂ ಸೂರಿಭ್ಯಃ ಸ್ವಾಹಾ ಓಂ ಹ್ರೈಂ ಪಾಠಕೇಭ್ಯಃ ಸ್ವಾಹಾ ಓಂ ಹ್ರೌಂ ಸರ್ವಸಾಧುಭ್ಯಃ ಸ್ವಾಹಾ ಓಂ ಹ್ರಹಃ ಜಿನಧರ್ಮಭ್ಯಃ ಸ್ವಾಹಾ ಓಂ ಹ್ರೂಂ ಜಿನಚೈತ್ಯೇಭ್ಯಃ ಸ್ವಾಹಾ ಓಂ ಹ್ರೇಂ ಜಿನಚೈತ್ಯಾಲಯಾದಿ ಸರ್ವ ಅ.೫೮ರ್ಮೇ
ಆಪಾಗ್ನಿ ರ್ವಾಯು ವನಸ್ಪತ್ಯಂತರ್ಗತ ಅಮೃತೇ ನಾವ್ತಾಂ ಪೂರಿಂ ಬ್ರಂಹಾಯತ ಯಗ್ದರ್ಶನೇಭ್ಯಃ ಸ್ವಾಹಾ ಓಂ ಹ್ರೋಂ ಸಂಯಜ್ಞಾನೇಭ್ಯಃ ಸ್ವಾಹಾ ಓಂ ಹ್ರೌಂ ಸಂಯಕ್ಚಾರಿತ್ರೇಭ್ಯಃ ಸ್ವಾಹಾ ಓಂ ಹ್ರಂ ಸಮ್ಯಕ್ತಪೋಭ್ಯಃ ಸ್ವಾಹಾ ಓಂ ಹ್ರಹಃ ಅಸ್ಮದ್ ಸಮಸ್ತವಿದ್ಯಾಗುರುಭ್ಯಃ ಸ್ವಾಹಾ ಆಚಮ್ಯ ಶಾಂತಿಶ್ಶಾಂತಿಶ್ಶಾಂತಿಃ|| ಅ.೫೯. 
*   *    *
ಮಹಾಭಾರತದ ಅನುಶಾಸನಿಕ ಪರ್ವದಲ್ಲಿ ಭೀಷ್ಮ-ಯುಧಿಷ್ಠಿರ ಸಂವಾದದ ವಿಷ್ಣುಸಹಸ್ರನಾಮದಲ್ಲಿ ಬರುವ ಇಲ್ಲಿನ ಕೆಲವುಶ್ಲೋಕಗಳನ್ನು  ವೈದಿಕ ಸಂಪ್ರದಾಯದ ಸಂಧ್ಯಾ ವಂದನೆಯ ಅಂತ್ಯದಲ್ಲಿ ನದಿ, ಮುನಿ, ದೇವ, ಋಷಿವಂದನೆ ಮಾಡುವಲ್ಲಿಯೂ ಉಪಯೋಗಿಸಲಾಗುತ್ತಿದೆ. ಸರ್ವವೇದೇಷುಯತ್ಪುಣ್ಯಂಸರ್ವತೀರ್ಥೇಷುಯತ್ಫಲಂತತ್ಫಲಂಸಮವಾಪ್ನೋಸ್ತುತ್ವಾದೇವಂ ಜನಾರ್ಧನಂ ಎಂದಿರುವಲ್ಲಿ ಜನಾರ್ಧನನ ಬದಲಿಗೆ ಜಿನೇಶ್ವರಃ ಎಂಬ ಪಾಠಾಂತರ ವಿದೆ. ವಾಸನಾದ್ವಾಸುದೇವಸ್ಯವಾಸಿತಂತೋಜಗತ್ರಯಂಸರ್ವಭೂತನಿವಾಸೋಸಿವಾಸುದೇವ ನಮೋಸ್ತುತೇ ಎಂದಿರುವಲ್ಲಿ 'ನೇಮಿಕೃಷ್ಣ ನಮೋಸ್ತುತೇ' ಎಂಬ ಪಾಠಾಂತರವಿದೆ. ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ಮೂವರು ದೇವತಾ ವಿಶೇಷಗಳೂ ಒಂದೇ ಆಗಿದೆ. 'ಏಕದೈವ ಯಜಮಾನ್ಯ' ಎಂಬ ವೇದೋಕ್ತ ಸೂಕ್ತಿಯನ್ನು ಅಕ್ಷರಶಃ ಪ್ರತಿಪಾದಿಸಿರುವ ಸರ್ವಧರ್ಮ ಸಮನ್ವಯಿಯಾದ ಕುಮುದೇಂದುಮುನಿಯು ಸಹಜವಾಗಿಯೇ ಈ ಪಾಠಾಂತರಗಳನ್ನು ರೂಪಿಸಿದ್ದಾನೆ. ಯಾವ ಯಾವ ಫಲಪ್ರಾಪ್ತಿಗಾಗಿ ಸಂಧ್ಯಾವಂದನೆಯನ್ನಾಚರಿಸಬೇಕೆಂಬ ವಿವರವನ್ನು ಗಮನಿಸಿದಾಗ, ನಿಜಕ್ಕೂ ಅರ್ಹರಾದ ಯಾರೊಬ್ಬರಿಗೂ ಸಂಧ್ಯಾವಂದನೆಯನ್ನು ದೂರವಿರಿಸುವ  ಇಚ್ಛೆಯಾಗುವುದಿಲ್ಲ!
 ’ಇಂದಿನ ಸಾಮಾಜಿಕ ಪರಿಸರದಲ್ಲಿ ಇಂಥ ಅರ್ಥಹೀನ ಆಚರಣೆಗಳು ಹಾಸ್ಯಾಸ್ಪದ’ ಎಂದು ಭಾವಿಸುವ ಮೇಧಾವಿಗಳಿಗೆ ನಮ್ಮಲ್ಲಿ ಕೊರತೆಯಿಲ್ಲ. ಮನೋಬಲವನ್ನು ಹೆಚ್ಚಿಸುವುದು , ಇಚ್ಛಾಶಕ್ತಿಯನ್ನು  ಹೆಚ್ಚಿಸುವುದು,  ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುವುದು ಹಾಗೂ ಎಂಥ ಪ್ರಕ್ಷುಬ್ಧ ಪರಿಸ್ಥಿತಿಯಲ್ಲೂ ಮನಸ್ಸಿನ ನೆಮ್ಮದಿಯನ್ನು ಕಾಪಾಡಿಕೊಳ್ಳುವುದರಿಂದ ಆಗುವ  ಫಲವನ್ನು ಯಾರೊಬ್ಬರೂ ಊಹಿಸಿಕೊಳ್ಳಲಗದ್ದು. 
ಇದರೊಂದಿಗೇ ಗಾಯತ್ರೀಜಪ ಮಾಡುವಲ್ಲಿ ’ಮುದ್ರಾಜ್ಞಾನ’ ವಿರಬೇಕು’ ಇಲ್ಲವಾದಲ್ಲಿ ಅದು ನಿಷ್ಫಲ’ ಎಂಬ ಎಚ್ಚರಿಕೆಯನ್ನೂ ನಾವು ಗಮನದಲ್ಲಿರಿಸಿಕೊಳ್ಳಬೇಕು! ಇದನ್ನು ಇತ್ತೀಚಿನಯಾರೂ ಪುರೋಹಿತರು ರೂಪಿಸಿದ ನಿಯಮೆವೆಂದು ಯಾರೂ ಉದಾಸೀನಮಾಡುವಂತಿಲ್ಲ!! ೧೨೦೦ ವರ್ಷಗಳ ಹಿಂದಿನ ಕಾಲಾವಧಿಗೆ ಸೇರಿದ ಸಿರಿಭೂವಲಯದಲ್ಲಿ ಇದರ ವಿಚಾರವಾಗಿ ಇರುವ ಮಾಹಿತಿಯನ್ನು ಸುಲಭವಾಗಿ ಉಪೇಕ್ಷಿಸುವುದು ಯುಕ್ತವಲ್ಲ. 
ಸಿರಿಭೂವಲಯದಲ್ಲಿ ಕಾಣಬರುವ ಇಂಥ ಮಂತ್ರಗಳ ಅರ್ಥ, ತಾತ್ಪರ್ಯಗಳನ್ನು ಸಮರ್ಪಕವಾಗಿ ಅರಿತನಂತರವಾದರೂ, ಸನಾತನಸಂಸ್ಕೃತಿ ಹಾಗೂ ಜೈನ ಸಂಸ್ಕೃತಿಯ ನಡುವಣ ಪ್ರಾಚೀನ ಸಂಬಂಧವನ್ನು ಅರ್ಥಮಾಡಿಕೊಳ್ಳುವ  ವಿವೇಕವು ಉಭಯ ಸಂಸ್ಕೃತಿಯವರಲ್ಲೂ ಉಗಮವಾಗುವ ಅಗತ್ಯವಿದೆ.
- ಸಿರಿಭೂವಲಯದಸುಧಾರ್ಥಿ. 

No comments:

Post a Comment