Monday 23 January 2023

ಜಾಗತಿಕ ಆಹಾರ ಸಮಸ್ಯೆಗೊಂದು ಪರಿಹಾರ ಸಿರಿಭೂವಲಯಕಾವ್ಯದಲ್ಲಿ!!!

ಜಾಗತಿಕ ಆಹಾರ ಸಮಸ್ಯೆಗೊಂದು ಪರಿಹಾರ ಸಿರಿಭೂವಲಯಕಾವ್ಯದಲ್ಲಿ!!!

ಇದಕ್ಕೆ ವಿಜ್ಞಾನಿಗಳ ಅನಿಸಿಕೆ ಏನು!!??

ಪ್ರಿಯ ಓದುಗರೇ,

ಜಾಲತಾಣದಲ್ಲಿ  ಸಿರಿಭೂವಲಯ ಕಾವ್ಯದ ವಿಚಾರವಾಗಿ ಸಾಕಷ್ಟು  ಬರೆದದ್ದಾಗಿದೆ. ಓದುಗರ ನಿರಾಸಕ್ತಿಯ ಕಾರಣದಿಂದಾಗಿ ಕಾವ್ಯವನ್ನು ಕುರಿತು ನನಗೂ ಕೆಲವೊಮ್ಮೆಭ್ರಮನಿರಸವಾದದ್ದಿದೆ!!  ಅದನ್ನು ದೂರಮಾಡಿ, ಉತ್ತೇಜಿಸಿದವರುಸಾಮಾಜಿಕ

ಜಾಲತಾಣಫೇಸ್ ಬುಕ್ಕಿನ’  ಕೆಲವು ಅಭಿಮಾನೀ ಓದುಗರುಅವರಿಗಾಗಿ ನಾನು  ಕಾವ್ಯದ ಸರಳ ಪರಿಚಯ ಕೃತಿಯನ್ನು  ಪರಿಷ್ಕರಿಸಿ, ಒತ್ತಕ್ಷರ ರೂಪದಲ್ಲಿ ಮುದ್ರಿಸಿ, , ಎರಡು ಸಂಪುಟಗಳ ವ್ಯಾಪ್ತಿಯಲ್ಲಿ  ಜ್ಞಾನದಾನ  ರೂಪದಲ್ಲಿ ವಿತರಿಸುವ ಯೋಜನೆಯಅನುಷ್ಟಾನಕ್ಕಾಗಿಕ್ರಿಯಾಶೀಲನಾಗಿದ್ದೇನೆಈಸನ್ನಿವೇಶದಲ್ಲಿಒಂದೆರಡುಸಾಂಗತ್ಯಪದ್ಯಗಳು  ನನ್ನ ಗಮನ ಸೆಳೆದುವು. ಅವುಗಳ ಮಹತ್ವವು ನನ್ನ ಗಮನಕ್ಕೆ ಬಂದಕೂಡಲೇ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು  ಉತ್ಸುಕನಾಗಿ ಬರಹವನ್ನು ರೂಪಿಸಿದ್ದೇನೆ.

ದ್ವಾಪರಯುಗದ ಕುರುಕ್ಷೇತ್ರಯುದ್ಧದಲ್ಲಿ ಪಾರ್ಥನಿಗೆ ದ್ವಾರಕೆಯ ಶ್ರೀಕೃಷ್ಣನು ಅಚ್ಚರಿಯ ಅಲೌಕಿಕ  ಮಾಹಿತಿಯನ್ನು ಕುರಿತು ವಿವರಿಸಿದ್ದಾನೆ. ಇದೊಂದುಜಗತ್ತಿನ ಜೀವಿಗಳ ಆಹಾರದ ವಿಚಾರಕ್ಕೆ ಸಂಬಂಧಿಸಿದ್ದುಇಂದಿನ ಪರಿಸರದಲ್ಲಿ ಅವಿವೇಕಿಗಳಾದ  ಬಿಟ್ಟಿಭಾಗ್ಯಗಳ ರಾಜಕಾರಣಿಗಳ  ಹೀನ ವರ್ತನೆಯಿಂದಾಗಿ ರಾಜ್ಯದ ರಾಷ್ಟ್ರದ ಕೃಷಿಕರು ಕಷ್ಟ ನಷ್ಟದ ತಮ್ಮ ದಿನನಿತ್ಯದ ಕೃಷಿಕಾರ್ಯಗಳನ್ನು  ದೂರವಿರಿಸಿ, ಸುಲಭದ ಕೂಲಿ ಕೆಲಸದತ್ತ ಸಾಗಿದ್ದಾರೆ!   ಹಾಗಿದ್ದಲ್ಲಿ ಮುಂದಿನ ಸಂತತಿಯ ಆಹಾರಕ್ಕೆ  ಗತಿಯೇನು!?  ಕೇವಲ ಆಹಾರಕ್ಕಾಗಿ ನಾವು ನಮ್ಮ ಶತೃರಾಷ್ಟ್ರಗಳನ್ನು

ಆಶ್ರಯಿಸಿ, ಅವರ ಊಳಿಗದ ಆಳುಗಳಾಗಬೇಕೆನಮ್ಮ ದೇಶದ ಪ್ರಖ್ಯಾತವಿಜ್ಞಾನಿಗಳಾದರೂ ಇದನ್ನು ಕುರಿತು ಯೋಚಿಸಬೇಡವೇದೇಶದಲ್ಲಿ ಆಹಾರೋತ್ಪಾದನೆಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತಿರುವ ಹಲವಾರುಸಂಸ್ಥೆಗಳು ಗಂಡಾತರವನ್ನು ಕುರಿತು ಯೋಚಿಸಬೇಡವೇ??  ಇದಕ್ಕೊಂದು ಸರಳವಾದ ಪರಿಹಾರವು ನನಗೆ  ಕಾವ್ಯದಲ್ಲಿ ಗೋಚರಿಸಿತು. ಅದನ್ನು ಕುರಿತುಇಲ್ಲಿ ವಿವರಿಸುತ್ತಿದ್ದೇನೆ. ಜಗತ್ತಿನಲ್ಲಿ  ಯಾರೂ ಊಹಿಸಲಾಗದ ರೀತಿಯಲ್ಲಿ ವಿಜ್ಞಾನವು ಮುಂದುವರೆದುಯಾರೊಬ್ಬರ ಕಲ್ಪನೆಗೂ ನಿಲುಕದಿರುವಂಥಆವಿಷ್ಕಾರಗಳನ್ನುಮಾಡಿರುವುದು ಸರಿಯಷ್ಟೇಇದಕ್ಕೆ ಸಂಬಂಧಿಸಿದಂತೆ  ದೂರರ್ಶನದ ವಿಚಾರವಾಗಿ ನಾನು ಜಾಲತಾಣದಲ್ಲಿ ಒಮ್ಮೆದೂರದರ್ಶನದಲ್ಲಿ ಪ್ರಸಾರವಾಗುವ  ಚಿತ್ರಗಳಲ್ಲಿ ಬಗೆ ಬಗೆಯ ಆಹಾರ ಪದಾರ್ಥಗಳನ್ನು ಪ್ರದರ್ಶಿಸಲಾಗುತ್ತದೆ. ಯಾರಾದರೂ ವಿಜ್ಞಾನಿಗಳು ಆಹಾರ ಪದಾರ್ಥಗಳಿಗೆಳಲ್ಲಿ ಅವುಗಳ ಸ್ವಾಭಾವಿಕವಾದ ಪರಿಮಳವನ್ನೂ ಸೇರಿಸುವ ಸಂಶೋಧನೆ ಮಾಡಬಾರದೇ!? ಎಂದು ಸೂಚಿಸಿದ್ದುಂಟುಅದು ಕೆಲವರಿಗೆ ತಮಾಷೆಯ ವಿಚಾರವಾಗಿದ್ದಿರಬಹುದುಆದರೆ, ಈಗ ಇಲ್ಲಿ ಸೂಚಿಸುತ್ತಿರುವ ಮಾಹಿತಿಯು ಆರೀತಿಯಲ್ಲಿ ತಮಾಷೆಯದಲ್ಲ. ವಿಜ್ಞಾನಕ್ಷೇತ್ರದಮೇಧಾವಿಗಳಿಗೆಒಂದು ರೀತಿಯ ಸವಾಲಿನಂತಿರುವುದು ಮಾಹಿತಿ!! ಜನಸಾಮಾನ್ಯರಿಗೆ ಅಗತ್ಯವಾದುದನ್ನು ಅನ್ವೇಷಿಸಿ, ಲೋಕಕ್ಕೆ ಒದಗಿಸಿಕೊಡುವುದುವಿಜ್ಞಾನಕ್ಷೇತ್ರದ ಕಾರ್ಯಮುಂದೆ ಜಗತ್ತಿನಲ್ಲಿ ಆಹಾರಕ್ಕೆ ಸಂಬಂಧಿಸಿದಂತೆ ಹಾಹಾಕಾರಉಂಟಾಗುವುದು ನಿಸ್ಸಂಶಯಆದ್ದರಿಂದ  ಗಡ್ಡಕ್ಕೆ ಬೆಂಕಿಬಿದ್ದಾಗ, ಬಾವಿತೋಡಲುಗುದ್ದಲಿ ಹುಡುಕಿದರುಎಂಬ ಗಾದೆಯಂತಾಗಬಾರದುಇಲ್ಲಿ ಸೂಚಿಸಿರುವ  ಒಂದುಅಲೌಕಿಕ ಮಾಹಿತಿಯ ವಿವರದ ನೆಲೆಯಲ್ಲಿ ಜಗತ್ತಿನ ಆಹಾರ ಕ್ಷೇತ್ರದ  ಮುಂದಿನಸವಾಲನ್ನು ವಿಜ್ಞಾನಿಗಳು ಸಮರ್ಥವಾಗಿ   ಎದುರಿಸುವಂತಾಗಲಿ ಎಂಬುದುಇಲ್ಲಿ ನನ್ನ ಉದ್ದೇಶ. ವಿಚಾರಕ್ಕೆ ಸಂಬಂಧಿಸಿದಂತೆ ಸಿರಿಭೂವಲಯಕಾವ್ಯದಲ್ಲಿ ಉಲ್ಲೇಖವಾಗಿರುವ ಮಾಹಿತಿಯನ್ನು ಇಲ್ಲಿ ಸೂಚಿಸಲಾಗಿದೆ:

ಶ್ರೀ ಕೃಷ್ಣನು ಪಾರ್ಥನನ್ನು ಕುರಿತುಲೋಆಕಿ ದೂರಾಸ್ವಾದಿತ್ವರ್ಧಿಯರಿ ಪಾರ್ಥಎಂದು ಸೂಚಿಸಿ, ಮುಂದಿನ ಮಾಹಿತಿಯನ್ನು ಹೇಳುತ್ತಾನೆ.

ಲೋಲ್ಯಕ್ಷೇತ್ರದ ಹೊರಗಣ|ಸಂಖ್ಯಾತ ಸಾಲುಯೋಜನ ಪ್ರಮಾಣವು| ನೀಲೀಲೆಯೊಳ್ಹೊಗಿಸಿ ಅಲ್ಲಿಹ ವಸ್ತುಗಳ| ರಸದಾಳವನಿಲ್ಲಿಯೇತಿಳಿದತ್||

ಕಳೆಮಳೆಗಹ ಹುಳಿ, ಉಪ್ಪು, ಸಿಹಿ, ಕಹಿ|ಯಾರ್ಕೆತಿಳಿದ ಆಸ್ವಾದತ್ವ| ಬುದ್ಧಿಯಾಗಲುಬಂದಬಳಿಯ| ದೂರಸ್ಪರ್ಶದರ್ಶಿ||

ಅಂದರೆ, ಲೋಕದ ದೂರದಿಂದಲೇ ರುಚಿಯ ಸಮುದ್ರವನ್ನರಿಯುವುದನ್ನುಪರೀಕ್ಷಿಸುಪಾರ್ಥ. (ಅವು)ತೂಗಾಡುವ ಪ್ರದೇಶದ ಹೊರಗಿರುವ  ಲೆಕ್ಕಮಾಡಲುಸಾಧ್ಯವಾಗದಷ್ಟು ಸಾಲಿನ ಯೋಜನಗಳ ಪ್ರಮಾಣದಲ್ಲಿವೆ! (ಯೋಜನವೆಂದರೆ, ಸುಮಾರು ಹನ್ನೆರಡು ಮೈಲು ಪ್ರಮಾಣದ ಒಂದು ಮೂಲಮಾನ . ಇಂಥ ಯೋಜನಗಳು ಎಣಿಸಲಾಗದಷ್ಟು ದೊಡ್ಡ ಸಾಲಿನಲ್ಲಿವೆ!)ಇಷ್ಟು ಅಗಾಧ ಪ್ರಮಾಣದಲ್ಲಿ ಅಡಕವಾಗಿರುವ ವಸ್ತುವನ್ನು ಲೀಲೆಯಿಂದ ಮುಚ್ಚಿರಿಸಲಾಗಿದೆಅಲ್ಲಿರುವ ವಸ್ತುಗಳ ರಸದ ಆಳವನ್ನು ಇಲ್ಲಿಯೇ ತಿಳಿಯಬಹುದುಕಳೆಮಳೆ, ಹುಳಿ, ಉಪ್ಪು, ಸಿಹಿ, ಕಹಿಯನ್ನು ಆಯ್ಕೆಮಾಡಿತಿಳಿಯುವ, ಆಸ್ವಾಧಿಸುವ ಬುದ್ಧಿಯಾದರೆ, ಹತ್ತಿರಕೆ ಬಂದ ದೂರಸ್ಪರ್ಷ,ದೂರ ದರ್ಷಿತ್ವವಾಗುತ್ತದೆಅಂದರೆ, ನಾವಿರುವಲ್ಲಿಯೇ ಕುಳಿತು ಹಲವಾರು ಯೋಜನಗಳ ದೂರದಲ್ಲಿ ಪರಮಾಣುರೂಪದಲ್ಲಿರುವ  ದ್ರವ್ಯಗಳರುಚಿಯನ್ನು ಸವಿಯಬಹುದೆಂದು ೧೨೦೦ ವರ್ಷಗಳ  ಹಿಂದೆಯೇ ಸರ್ವಜ್ಞ ಸ್ವರೂಪಿಯಾದ ಕುಮುದೇಂದು ಮುನಿಯು ಖಚಿತವಾಗಿ ತಿಳಿಸಿದ್ದಾನೆ!!! ಇದು ನಮ್ಮ ಪ್ರಾಚೀನರ ಜ್ಞಾನ ಪರಿಧಿ!! ಆಧುನಿಕ ವಿಜ್ಞಾನಿಗಳು  ಟೆಲಿವಿಷನ್ನನ್ನು  ಸಂಶೋಧಿಸಿ, ಜನಸಾಮಾನ್ಯರಿಗೆ ದೂರದರ್ಶನದ ಸಾಕ್ಷಾತ್ಕಾರ ಮಾಡಿಸಿದ್ದಾಗಿದೆಅವರೇ ಇನ್ನೂ ಮುಂದುವರೆದು ಸಂಶೋಧಿಸಿದರೆ, ಲೋಕಾಕಾಶದಲ್ಲಿ ಯಾರೂ ಊಹಿಸಲಾಗದಷ್ಟು ಅಗಾಧ ಪ್ರಮಾಣದಲ್ಲಿ ಪರಮಾಣುರೂಪದಲ್ಲಿ ಅಡಗಿರುವ ಆಹಾರ ಸಂಬಂಧವಾದ ಸೂಕ್ಷ್ಮ ಪರಮಾಣುಗಳನ್ನು  ಅವುಗಳ ಸ್ವಾಭಾವಿಕ ಪರಿಮಳ ಹಾಗೂ ರುಚಿಯ ಸಹಿತವಾಗಿಸಾಕ್ಷಾತ್ಕರಿಸಿಕೊಳ್ಳುವ, ಆಸ್ವಾದಿಸುವತಂತ್ರಜ್ಞಾನವನ್ನುಆವಿಷ್ಕಾರಮಾಡಿದಲ್ಲಿ ಸಂಶೋಧನೆಯ ಸೌಲಭ್ಯವು ಜಗತ್ತಿನ ಜೀವರಾಶಿಗಳೆಲ್ಲವಕ್ಕೂ ಕಡಿಮೆ ವೆಚ್ಚದಲ್ಲಿ ಯಥೇಚ್ಚವಾಗಿ ಆಹಾರವುದೊರೆಯುವಂತಾಗುತ್ತದೆಇಂಥ ಸಂಶೋಧನೆಯತ್ತ ಧನಪಿಶಾಚಿಗಳಾದ ಪಾಶ್ಚಾತ್ಯರುಗಮನಹರಿಸಿ ಸಂಶೋಧನೆಯ ಸ್ವಾಮ್ಯ (ಹಕ್ಕು)ಸ್ಥಾಪಿಸುವಮೊದಲುಭಾರತೀಯರು, ಅದರಲ್ಲೂ ಮೇಧಾವಿಗಳಾದ ಕನ್ನಡ ವಿಜ್ಞಾನಿಗಳು  ಪ್ರಯೋಗ ನಡೆಸಿ,ಅದರಲ್ಲಿಯಶಸ್ವಿಗಳಾಗಲೆಂದು ನನ್ನ ಹಂಬಲ. ಕೆಲಸಕ್ಕೆ ಬಾರದ ಪ್ರಾಚೀನಕನ್ನಡ ಕಾವ್ಯವನ್ನು ಕುರಿತು ಇವನು ತನ್ನ೩೫ ವರ್ಷಗಳ ಆಯಸ್ಸನ್ನು ವ್ಯರ್ಥವಾಗಿ ಕಳೆದಿದ್ದಾನೆ. ಎಂಬ ಆಪಾದನೆ ನನ್ನಮೇಲಿದೆ. ಆದರೂ ಸಾಧನೆಯಲ್ಲಿ ಜಗತ್ತಿಗೆ, ಭಾರತಕ್ಕೆ, ಕನ್ನಡಿಗರಿಗೆ ಮಹತ್ತರವಾದ ಪ್ರಯೋಜನಉಂಟೆಂಬ ನಂಬಿಕೆ ನನಗಿದೆವೇದೋಪನಿಷತ್ತುಗಳ ಮುಂದುವರೆದ ಭಾಗವೇವಿಜ್ಞಾನಎಂಬುದು ಸರ್ವವೇದ್ಯ. ವೇದೋಪನಿಷತ್ತುಗಳಹಲವಾರುಹೇಳಿಕೆಗಳನ್ನು ವಿಜ್ಞಾನವು ತನ್ನ ಪ್ರಯೋಗಗಳಿಂದ ಪ್ರತ್ಯಕ್ಷ ವಾಗಿಸಿಕೊಂಡಿದೆ. ದೂರದರ್ಶನ ತಂತ್ರಜ್ಞಾನದಲ್ಲಿ ಯಶಸ್ಸುಗಳಿಸಿರುವವರಿಗೆ, ಪರಿಣತರಾಗಿರುವವರಿಗೆ ಇಲ್ಲಿ ಶ್ರೀಕೃಷ್ಣನುತಿಳಿಸಿರುವದೂರಾಸ್ವಾದಿತ್ವರ್ಧಿಯನ್ನುಸಾಕ್ಷಾತ್ಕರಿಸಿಕೊಳ್ಳುವುದುಅಸಾಧ್ಯವೇನಲ್ಲ!! ಮಾಹಿತಿಯನ್ನು ಯಾರುಬೇಕಾದರೂ ಉಪೇಕ್ಷಿಸಬಹುದು,ನಿರ್ಲಕ್ಷಿಸಬಹುದು,ಅವಹೇಳನಮಾಡಬಹುದು, ಅಪಹಾಸ್ಯಮಾಡಬಹುದು. ಅದಕ್ಕೆ ಅವರು ಸ್ವತಂತ್ರರು. ಆದರೆ, ಪ್ರಾಚೀನ ಭಾರತೀಯ ಜ್ಞಾನಸಂಪತ್ತಿನ ವಿಚಾರದಲ್ಲಿ  ಸದ್ಭಾವನೆ ಹೊಂದಿರುವವರು ಮಾಹಿತಿಯ ವಿಚಾರದಲ್ಲಿ ನಂಬಿಕೆಯಿರಿಸಿ, ತಾವು ಹಾಗೂ ತಮ್ಮ ಮಕ್ಕಳುಈ ಕಾವ್ಯದತ್ತ ಗಮನಹರಿಸಿ, ಇಲ್ಲಿ ಸೂಚಿಸಿರುವ ವಿಜ್ಞಾನದ ಪ್ರಯೋಗದತ್ತ ಗಮನಹರಿಸಿ, ಯಶಸ್ಸು ಗಳಿಸುವಂತಾಗಲೆಂದು  ಹಾರೈಸುತ್ತೇನೆಭಾರತ ಸರ್ಕಾರವು ಮಂಗಳ ಗ್ರಹದತ್ತ ಪಯಣಿಸು ವುದಕ್ಕೆಕೋಟ್ಯಾಂತರರುಪಾಯಿಗಳನ್ನುವಿನಿಯೋಗಿಸಿ,ಬಾಹ್ಯಾಕಾಶಯಾನಕ್ಕೆಬೆಂಬಲಿಸಿದ್ದಾಗಿದೆಈಗ  ಆಹಾರದ ಆವಿಷ್ಕಾರದ ಯೋಜನೆಯನ್ನು ಸೂಕ್ತವಾಗಿ  ಆಯೋಜಿಸಿದರೆ, ಮೋದಿಯವರಂಥ ಸಾತ್ವಿಕ ನಾಯಕರ ಬೆಂಬಲ ದೊರೆಯುವುದರಲ್ಲಿ ಸಂದೇಹವಿಲ್ಲ. ಸಂಬಂಧಿಸಿದ ಕ್ಶೇತ್ರದಪರಿಣತರು ಇದರತ್ತಗಮನಹರಿಸಿದಲ್ಲಿಸರ್ಕಾರದ ಬೆಂಬಲಗಳಿಸುವುದು ಅಸಾಧ್ಯವೇನಲ್ಲ ಕಾವ್ಯಕ್ಕೆ ಸಂಬಂಧಿಸಿದಂತೆ ಇಲ್ಲಸಲ್ಲದ ಸುಳ್ಳು ಮಾಹಿತಿಗಳ ಪ್ರಚಾರಕ್ಕೆ ಆಧ್ಯತೆ ನೀಡುವವರು  ಇಂಥ ಕಾರ್ಯಸಾಧುವಾದ,ಸರ್ವಜನೋಪಯೋಗಿಯಾದಪ್ರಯತ್ನಗಳತ್ತ ಗಮನಹರಿಸಬಾರದೇಕೆ!!?

ಸಿರಿಭೂವಲಯದಸುಧಾರ್ಥಿ.ಹಾಸನ.