Tuesday 18 February 2020

ಸಿರಿಭೂವಲಯ ಕಾವ್ಯಕ್ಕಿಂತಲೂ ವ್ಯಾಖ್ಯಾನವೇ ಅಧಿಕವಾಗುತ್ತದೆ!!


”ಅಲ್ಪದರಲ್ಲಿ ಅಪಾರವನ್ನು ಅಡಗಿಸಿಡಬಲ್ಲ ಪ್ರಚಂಡ ಮೇಧಾವಿಗಳ ಕಾವ್ಯ ಸಂಪತ್ತನ್ನು ಸರಳವಾಗಿ ವ್ಯಾಖ್ಯಾನ ಮಾಡಲು ಹೊರಟರೆ. ಅವರ ಕಾವ್ಯದ ಪರಿಧಿಗಿಂತಲೂ ಮಿಗಲಾದ ಬರಹವನ್ನು ರೂಪಿಸುವುದಾಗುತ್ತದೆ! ಸಿರಿಭೂವಲಯದ ವ್ಯಾಖ್ಯಾನಕ್ಕೆ ಕೈಹಾಕುವವರಿಗೂ ಇದೇ ಸಮಸ್ಯೆ ಎದುರಾಗುತ್ತದೆ!!
ಸರ್ವಜ್ಞಸ್ವರೂಪಿಯಾದ ಕುಮುದೇಂದುವಿನ ಸಿರಿಭೂವಲಯಕಾವ್ಯವನ್ನು ಅರ್ಥೈಸುವ ಕಾರ್ಯ ಬಹಳ ಶ್ರಮದ್ದು. ಅಲ್ಲಿ ಧ್ವನಿಸುವ ಮಾಹಿತಿಗಳನ್ನು ಯಥಾವತ್ತಾಗಿ ವಿವರಿಸಬೇಕಾದಲ್ಲಿ ಹಲವೆಡೆ ಹಿಂದಿನ ಹಾಗೂ ಮುಂದಿನ ಸಾಂಗತ್ಯಗಳ ಸಂಬಂಧವನ್ನು ಗಮನಿಸಿ, ವಿವರಣೆ ನೀಡಬೇಕಾಗುತ್ತದೆ.
ಆರೀತಿಯಲ್ಲಿ ಕ್ರಮಬದ್ಧವಾದ ಸಮಸಂಜಸ ವಿವರಣೆಯನ್ನು ನೀಡಲು ಹೋದರೆ, ಕಾವ್ಯಕ್ಕಿಂತಲೂ ವ್ಯಾಖ್ಯಾನವೇ ಅಧಿಕವಾಗುತ್ತದೆ! ಈ ಕಾರಣದಿಂದಾಗಿ ಇಲ್ಲಿ ವಿವರಿಸಿರುವ ಕೆಲವಾರು ಸಾಂಗತ್ಯಪದ್ಯಗಳಿಗೆ  ಸಾಧ್ಯವಿರುವಷ್ಟೂ ಸಂಕ್ಷಿಪ್ತವಾದ- ಪರಿಚಯಕಾರನ ಸೀಮಿತ ಪರಿಧಿಯ ವ್ಯಾಪ್ತಿಯಲ್ಲಿ - ವಿವರಣೆಯನ್ನು ನೀಡಲಾಗಿದೆ.  ಕವಿಯು ಬಳಸಿರುವ ಪದಗಳ ನಾನಾ ರೀತಿಯ ಅರ್ಥಗಳ ಪರಿಚಯವಿರುವವರು ಈ ಕಾರ್ಯದಲ್ಲಿ ಪರಿಪೂರ್ಣತೆಯನ್ನು ತೋರಬಹುದೆಂದು ಸುಧಾರ್ಥಿಯು ಭಾವಿಸಿದ್ದಾನೆ.
                                                            ಸಿರಿಭೂವಲಯದಸುಧಾರ್ಥಿ.  

No comments:

Post a Comment