Thursday 13 February 2020

ಸಿರಿಭೂವಲಯದಲ್ಲಿ ಕನ್ನಡ ಭಗವದ್ಗೀತೆಯ ಸೊಬಗು.ಭಾಗ:೪.


ಕೆಲವು ಹೆಂಗಸರು ಬಡವನನ್ನೇ ಮದುವೆಯಾಗಿ ಸುಖಪಡುತ್ತೇನೆ ಎಂಬ ಘೋರವಾದ ಆಶೆಯನ್ನು ಮುಡುಪಾಗಿರಿಸುತ್ತಾರೆ.  ಆದರೆ,  ಬಡವನನ್ನೇ ಸೇರಿದಮೇಲೆ, ಸುಖವಿಲ್ಲದವಳಾದ ಆಕೆ ಗೋಳಾಡುವಂತೆ ಶೂರನಿಗೂ ಕ್ರೂರವಾದ ದುಃಖವೆಂಬುದನ್ನು ಅರಿಯಬೇಕು.  ಎಂದು ವಿವೇಕ ಹೇಳುತ್ತಾನೆ.
ನಾರಿದರಿದ್ರನಸೇರಿಸುಖಿಪೆನೆಂಬ|ಘೋರವಾದಾಶೆಯಮುಡುಪು|ಸೇರಲುಸುಖವಳಿದವಳುಶೋಕಿಪತೆರಶೂರನು ಕ್ರೂರದುಃಖ್ವರಿಬ||
ಯಾವುದೇ ಕೆಲಸವನ್ನು ತಾನಾಗಿಯೇ ಮಾಡುವವನು, ಮಾಡಿಸುವವನು ಮಾಡುವವರು ಗುಣದೊಡನೆ ಸೇರಿರುತ್ತಾರೆ.  ಯಾವಾಗಲೂ ದೊಡ್ಡದಾದ ಕರ್ಮದಲ್ಲಿ ನಿರತರಾಗಿರಬೇಕಮ್ಮಾ! ಇದನ್ನು ಜಿನದೇವ ನೇಮಿಯು ಪರ್ವತದಷ್ಟು ಹೇಳಿದ್ದಾನೆ. ( ಸಾಮಾನ್ಯವಾಗಿ ಆತ್ಮೀಯಗೆಳೆಯರು ತಮ್ಮ ಮಾತಿನಲ್ಲಿ ಲೀನರಾದಾಗ ಬಹಳ ಪ್ರೀತಿಯಿಂದ ’ ಲೋ ನನ್ನ ಮಾತು ಕೇಳಮ್ಮ’  ಎಂದು ಗಂಡನ್ನು  ಹೆಣ್ಣಿನಂತೆಯೂ,  ’ನನ್ನಮಾತು ಕೇಳಪ್ಪಾ’ ಎಂದು ಹೆಣ್ಣನ್ನು ಗಂಡಿನಂತೆಯೂ ಓಲೈಸುವುದು ಸಾರ್ವಕಾಲಿಕ ಪದ್ಧತಿ! ಇಂದಿಗೂ ಈ ಕ್ರಮವಿದೆ!  ಮಹಾಭಾರತದ ಯುದ್ಧ ಸಮಯದಲ್ಲೂ ಇದು ಇತ್ತೆಂಬುದನ್ನು ಕುಮುದೇಂದುಮುನಿಯು ಈ ಸಂದರ್ಭದಲ್ಲಿ ಪ್ರಯೋಗಿಸಿ ತೋರಿಸಿದ್ದಾನೆ!!!)
”ತಾನಾಗಿಮಾಡುವನುಮಾಡಿಸುವನುಮಾಳ್ಪುದ|ಗುಣವನೊಡಂಬಡುವವರ್ ಸ|ಘನಯೋಗ್ಯಕರ್ಮದೊಳ್ ತೊಡಗಿರಬೇಕಮ್ಮ|ಜಿನದೇವನೇಮಿಪೇಳ್ದನಗಜ||
ಕರ್ಮಾಷ್ಟಕದಕಥೆಯನ್ನೇ ಜಪಿಸುವ ಕಾವ್ಯಾಂಗವು ಎಲ್ಲವನ್ನೂ ತೋರಿಸುತ್ತದೆ.  ಈ ಕರ್ಮಾಷ್ಟಕದ ವರ್ಣದಲ್ಲಿ ಋಗ್ಮಂತ್ರದವರು ಸೂಚಿಸುವ ’ಸಾಯುಜ್ಯಮೋಕ್ಷ’ದವಚನವಿದೆ. ಎಂದು ಕೃಷ್ಣನು ಸೂಚಿಸುತ್ತಾನೆ.
”ಕವಮುಂದೆಯೋಷ್ಟಗಾಥಾಜಪೇಕಾವ್ಯಾಂಗ|ದವತಾರವದುಸರ್ವದರ್ಶಿ|ಯವುಕರ್ಮಾಷ್ಟಕವರ್ಣದೆ ಋಗ್ ಮಂತ್ರ|ದವರನಿರ್ಜರೆಮೋಕ್ಷವಚ||
ದೇಶದಮಹಾವ್ರತದವರರಿದ ನಿಶ್ಚಲಸ್ಥಿತಿ. ಜಯಕಾವ್ಯದಲ್ಲಿ ಧ್ಯಾನಿಸಿದಾಗ ಜ್ಞಾನದಭಾಗ ವೇದಯುತವಾದ ಪರಮಪದ ವಾಗುತ್ತದೆ. ವ್ಯಾಸರ ಜಯಭಾರತಗೀತೆಯು ಋಗ್ವೇದದ ವಸ್ತುವಾಗಿದೆ.  ಎಂಬ ಸಾರ್ವಕಾಲಿಕ ಸತ್ಯವನ್ನು ಕವಿಯು ಇಲ್ಲಿ ಸೂಚಿಸಿದ್ದಾನೆ.
”ತ್ ಯುದೇಶಮಹಾವ್ರತದದವರಿದನಿಶ್ಚಲ|ಜಯದೆಧ್ಯಾನಿಸೆ ಜ್ಞಾನವಿಭವೇ|ದಯುತಪರಮಪದವಹುದುವ್ಯಾಸರಕಾವ್ಯ| ಜಯಭಾರತಗೀತೆಋಗ್ವಸ್ತು||               
ಈ ಮಾಹಿತಿಗಳು ಜಯಾಖ್ಯಾನಕ್ರಮದಲ್ಲಿ ಪ್ರಾಪ್ತವಾದ ಋಗ್ಮಂತ್ರಾಂನ್ತವರಿತ ನಿರ್ಮಲವಾದ ಜನ್ಮ ವೃಷಭದ್ವಜ ನಂದಿಯ ಕಮಲಸರೋವರದ ದಡಲ್ಲಿ ಕುಳಿತು ಸಂಪಾದಿಸಿದ ಸಂಪತ್ತು ಎಂಬುದಾಗಿ ಕವಿ ಕುಮುದೇಂದೇಂದುವು ಅಮೋಘವರ್ಷನಿಗೆ ಕೃಷ್ಣನ ಭವದ್ಗೀತೆಯ ವಿಚಾರವನ್ನು ತಿಳಿಸುತ್ತಿದ್ದಾನೆ.
”ಗಮನಿಸಲಿಂತುಈದ್ರವ್ಯಜಯಾಖ್ಯಾನ|ಕ್ರಮಪ್ರಪ್ತಋಗ್ಮಂತ್ರಾಣ್ತವರಿತ|ದಮಲಪಾಹುಡವೃಷಭದ್ವಜನಂದಿಯ| ಕಮಲಸರೋವರದ ದಡದ||
ದಕ್ಷಿಣದೇಶದವರನ್ನು ದ್ರಾವಿಡರೆಂದು ಸೂಚಿಸುವುದು, ಕೇವಲ ಕಣ್ಣು, ಕಿವಿ, ಮೂಗು, ನಾಲಿಗೆಯಂಥ ರಸನೇಂದ್ರಿಯಗಳಲ್ಲಿ ಮುಳುಗಿದ್ದ ಇವರಿಗೆ ಅಸದೃಶವಾದ ಶಾಸ್ತ್ರಗಳನ್ನು ತೋರಿಸಿ ವಶಗೊಳಿಸಿಕುಂಡೆವೆಂಬುವವರ ಅರಿವನ್ನು ಅರಿಯೆಂದು ಬಿಸುಡುವುದು ಕುರುಕ್ಷೇತ್ರವನ್ನು ವಶಪಡಿಸಿಕೊಂಡಂತೆ. ಎಂದು ಪಾರ್ಥನಿಗೆ ಕೃಷ್ಣನು ಸೂಚಿಸುತ್ತಾನೆ. ಮಧ್ಯ ಏಷ್ಯಾದಿಂದ ಬಂದ ’ಆರ್ಯರೆಂಬ’ ಮೇಧಾವಿ ಜನಾಂಗವು ದಕ್ಷಿಣಭಾರತೀಯರಿಗೆ ಜ್ಞಾನದಾನಮಾಡಿ   ಉದ್ಧರಿಸಿದರೆಂಬ ಸುಳ್ಳು ಮಾಹಿತಿಯು ಕೇವಲ ಬ್ರಿಟಿಷರ ಕಾಲದಿಂದ ಪ್ರಾರಂಭವಾದ ವ್ಯಾಧಿಯಲ್ಲ!! ಈ ವ್ಯಾಧಿಯು ಮಹಾಭಾರತ ಯುದ್ಧದ ಕಾಲದಲ್ಲೂ ಇಲ್ಲಿ ವ್ಯಾಪಿಸಿತ್ತೆಂಬುದನ್ನು ಸುಮಾರು ೧೨೦೦ ವರ್ಷಗಳ ಹಿಂದೆಯೇ ಕುಮುದೇಂದುಮುನಿಯು ತನ್ನ ಕಾವ್ಯದಲ್ಲಿ ಖಚಿತವಾಗಿ ಸೂಚಿಸಿರುವುದಿದೆ!!
ಕೆಲವೊಂದು ಸುಳ್ಳುಮಾಹಿತಿಗಳು ಸಾವಿರಾರುವರ್ಷಗಳು ಕಳೆದರೂ ಜನಜೀವನದಲ್ಲಿ ಪ್ರಚಾರದಲ್ಲುಳಿಯುವಷ್ಟು ಪ್ರಭಾವಶಾಲಿಯಾಗಿರುತ್ತವೆಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ!
”ರಸನೇಂದ್ರಿಯವಸದೊಳಗಿರ್ದ|ದಸ್ಯುಗಳ್ಗಸದೃಶಶಾಸ್ತ್ರವತೋರಿ|ವಶಗೊಳಿಸುವುದವರರಿವನುಅರಿಯೆಂದು| ಬಿಸುಡುವುದುಕುರುಕ್ಷೇತ್ರವಶಕ||
ಒಂದೇಅಕ್ಷರವು ಒಂದೊಂದೇ ಅಕ್ಷರವಣ್ಣ. ನಿಂದು ಬಂದಿದೆ ಇದು ಹಿಂದಿನಿಂದ ಇರುವ ವರ. ಕಂದದೇ ಕುಂದದೇ ನಿಂತಿರುವ ಋಗ್ವೇದದ್ದಲ್ಲಿ ಓಂದೊಂದೇ ಅಕ್ಷರವನ್ನು ಹರಡಲಾಗಿದೆ.  ಪಕ್ಕದಲ್ಲಿ ಸಡಿಲಬಿಟ್ಟರೆ, ಪ್ರಬಲನಾದ ಶತೃವು ಪ್ರಾಣಿಯಂತೆ ಸಾಯುವ ರೌದ್ರಾಂಕಸ. ಪ್ರಾಣಿಗಳು ಮನುಷ್ಯರಾಗುವರೀತಿಯಲ್ಲಿ. ಈ ಯುದ್ಧವು ಶತೃವಿಗೆ ಅಂತರಂಗದಲ್ಲಿಯೇ ಗೆಲುವು. ಹುಲಿಗೆ (ಅಂದರೆ ಪಾರ್ಥನಿಗೆ) ಜ್ಞಾನೋದಯವಾಗುವುದು ಮಗನ ರಕ್ತವನ್ನು ಹೀರುವ ಸಮಯದಲ್ಲಿ.  ಅಮಿತಾರಿಮುನಿಯಿಂದ ದೊರೆತ  ಅಜ್ಞಾನದ ಕುಶ್ರುತಾಂಕವು ಕಳೆದಂತೆ ಆ ಕರ್ಣನು ಗೆಲ್ಲುತ್ತಾನೆ, ಎಂದು ಕೃಷ್ಣನು ಪಾರ್ಥನನ್ನು ಎಚ್ಚರಗೊಳಿಸುತ್ತಾನೆ. ನೋಡಿ:
ಓಂದೇಅಕ್ಷರವುಒಂದೊಂದೇಅಕ್ಷರವಣ್ಣ|ನಿಂದುಬಂದಿದೆಯನಾದಿವರ| ಕಂದದೆಕುಂದದೇನಿಂದಋಗ್ವೇದದೆ| ಓದೊಂದೇಅಕ್ಷರಹರವಿ||
ಬಗಳಳಕಗದುನಾಳೆಪ್ರಬಲಶತ್ರು|ಮಿಗದಂತೆಸಾಯ್ವರೌದ್ರಾಂಕಸ| ಹಗೆಗಂತರಂಗದಗೆಲ್ಲುವುದೀಅಂಕ| ಮಿಗವುಮನವನಪ್ಪಬಗೆಯು||
ಹುಲಿಗೆಜ್ಞಾನೋದಯಸುತನರಕ್ತವಪೀರ್ವ|ಘಳಿಗೆಯೊಳದಮಿತಾರಿಮುನಿಯಿಂ|ವಲಿಸಿತಜ್ಞಾನಕುಶ್ರುತಾಂಕ| ಕಳೆದಂತೆಗೆಲುವಕರ್ಣನವ||
ನೇಮಿತೀರ್ಥಂಕರನು ತನ್ನ ಉಸಿರಾಟದ ಕೊನೆಯಲ್ಲಿ ಕೃಷ್ಣನವಶಕ್ಕಿತ್ತಿದ್ದ ಭಗವದ್ಗೀತೆಯನ್ನು ಜಯದ ಹಿಂಸೆಯಯುದ್ಧದೊಳಗೆ ಕೃಷ್ಣನು ಅದನ್ನು ಪಾರ್ಥನಿಗೆ ಉಪದೇಶಿಸುತ್ತಾನೆ. ಈಶ್ವರನ ರೀತಿಯಲ್ಲಿ ಬಾಳುವುದಕ್ಕೆ ನಾಲ್ಕನೆಯಜ್ಞಾನವಿರಬೇಕು ಎಂಬುದು ಸರಲವಾದ ದನಿ. ಸರುವವೆಂದರೆ, ಹದಿನೆಂಟುರಾಜ್ಯಾಂಗವನ್ನು ನಿರ್ವಹಿಸುವಾಗಲೂ ಇದರ ಅಂಶವಿರುತ್ತದೆ. ಲೌಕಾಂತಿಕರಾದ ಬ್ರಹ್ಮರ್ಷಿವರರು ನೇಮಿಗೆ ತಿಳಿಸಿಕೊಟ್ಟ ಹಿತನುಡಿಗಳನ್ನು ಕೇಳಿ ನನ್ನ ಚೈತನ್ಯದ ಅತಿಶಯವನ್ನು ನಾನು  ತಿಳಿದುಕೊಂಡೆ. ಎಂದು ಕೃಷ್ಣನು ತನ್ನ ಜ್ಞಾನದ ಮೂಲವನ್ನು ಪಾರ್ಥನಿಗೆ ತಿಳಿಸುತ್ತಾನೆ.  ನೋಡಿ: (ಮುಂದುವರೆಯುವುದು)
                                                                                                                     -ಸಿರಿಭೂವಲಯದಸುಧಾರ್ಥಿ. 

No comments:

Post a Comment