Tuesday 26 May 2020

**कवि कुमुदॆंदुमुनीजी की रचना सिरिभूवलय की एक् झांकी**

***ಸಿರಿಭೂವಲಯ ಕುರಿತು ಸುಧಾರ್ಥಿಯು ರೂಪಿಸಿರುವ   
     ಸರಳಪರಿಚಯಕೃತಿಗಳ ಒಂದು ಸಂಕ್ಷಿಪ್ತ ಸಮೀಕ್ಷೆ***   
ಭಾಗ: ೬.

**कवि कुमुदॆंदुमुनीजी की  रचना
    सिरिभूवलय की एक्  झांकी**

मूल कन्नड परिचयकार : सुधार्थि हासन.

भावानुवाद  :  ऎस . रामण्ण

ಹಲವಾರು ವರ್ಷಗಳ  ಅಪಾರ ಶ್ರಮದ ಪರಿಣಾಮವಾಗಿ ರೂಪುಗೊಂಡ  ಸಿರಿಭೂವಲಯದ ಸರಳಪರಿಚಯಕೃತಿಗಳನ್ನು  ಅವುಗಳಿಗೆ ಅರ್ಹವಾದ ಪ್ರಮಾಣದಲ್ಲಿ ಕನ್ನಡಿಗರು ಸ್ವಾಗತಿಸದೇ ಹೋದರೂ,  ಸುಧಾರ್ಥಿಯು ನಿರಾಶನಾಗದೇ, ಇವುಗಳ ಸಂಕ್ಷಿಪ್ತರೂಪವನ್ನಾದರೂ ಭಾರತದಲ್ಲಿ ಹೆಚ್ಚುಜನಗಳಿಗೆ ಪರಿಚಯವಿರುವ ರಾಷ್ಟ್ರಭಾಷೆ  ಹಿಂದಿಯಮೂಲಕ ಸಾಹಿತ್ಯಾಸಕ್ತರ ಗಮಕ್ಕೆ ತರಲೇಬೇಕೆಂಬ ಹಂಬಲ ಈತನ ಆಂತರ್ಯಲ್ಲಿ ಅಂಕುರಿಸಿತು. 
 ಸುಧಾರ್ಥಿಯ ಶ್ರೀಮತಿ  ಗಿರಿಜಾ ಅವರ ತವರೂರು ಸಕಲೇಶಪುರ. ಸಕಲೇಶಪುರದಲ್ಲಿ ಹಿಂದಿ ಪ್ರಚಾರಕರಾಗಿದ್ದ ಎಸ್. ರಾಮಣ್ಣನವರು  ಚಿರಪರಿಚಿತರು. ಕೂಡಲೇ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಯಿತು. ಅವರು ಸಕಲೇಶಪುರದಿಂದ ಹಾಸಕ್ಕೆ ವಲಸೆಬಂದಿರುವ ಮಾಹಿತಿ ದೊರೆಯಿತು.  ಅವರ ನೆಲೆಯನ್ನು ಪತ್ತೆಮಾಡಿ, ಅವರಿಗೆ ಈ ಅನುವಾದಕಾರ್ಯದ ಯೋಜನೆಯನ್ನು ವಿವರಿಸಲಾಯಿತು.
 ವಯೋಸಹಜವಾಗಿ  ಅನಾರೋಗ್ಯದಲ್ಲಿದ್ದ ಅವರಿಗೆ ಈ ಕಾರ್ಯವನ್ನು ನಿರ್ವಹಿಸಲು ಆದೀತೋ ಇಲ್ಲವೋ ? ಎಂಬ ಸಂಶಯವಿತ್ತು. ಆದರೂ ಕೂಡಲೇ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ನಿಶ್ಚಯಿಸಿದರು!  ಒಂದೆರಡು ದಿನಗಳಲ್ಲಿಯೇ ಸಿರಿಭೂವಲಯಸಾರದ ಸ್ವರೂಪವನ್ನು ಪರಿಶೀಲಿಸಿದ  ರಾಮಣ್ಣನವರು ಮೊದಲ ಪುಟದಿಂದ ಕೊನೆಯ ಪುಟದವರೆವಿಗೆ ಪ್ರವಹಿಸಿರುವ ಬರಹದ ಪ್ರವಾಹವನ್ನು ಗಮನಿಸಿ, ಅದನ್ನು ಯಥಾವತ್ತಾಗಿ ಹಿಂದೀಭಾಷೆಗೆ ಅನುವಾದಿಸಲು ಸಾಧ್ಯವಾಗದೆಂಬ ನಿಲುವನ್ನು ಸೂಚಿಸಿದರು. 
ಸ್ವಾಭಾವಿಕವಾಗಿಯೇ ಈ ಸುಧಾರ್ಥಿಯದು ಬಹಳ ಉದ್ದವಾದ ವಾಕ್ಯಸರಣಿಯ ಸಂಕೀರ್ಣವಾದ ಶೈಲಿ.  ಜೊತೆಗೆ ಬರಹದವ್ಯಾಪ್ತಿಯೂ ತುಂಬಾ ವಿಸ್ತಾರವಾದುದು.  ಸಂಪೂರ್ಣವಾಗಿ ಅಲ್ಲಿನ ಎಲ್ಲ ಮಾಹಿತಿಗಳನ್ನೂ ಮನನಮಾಡಿಕೊಂಡು ಯಥಾವತ್ತಾಗಿ ಅನುವಾದಮಾಡಲು  ಹಲವಾರು ವರ್ಷಗಳಾದರೂ ಬೇಕೆಂಬುದು ಖಚಿತವಿತ್ತು. ’ವಿಷಯ ಗ್ರಹಣಕ್ಕಾಗಿ ನೀವು ಈ ವಿಸ್ತಾರವಾದ ಬರಹವನ್ನುಒಮ್ಮೆ ಓದಿ, ಅನುವಾದಕ್ಕೆ ಸೂಕ್ತವಾದ ಬರವಣಿಗೆಯನ್ನು ಪ್ರತ್ಯೇಕವಾಗಿ  ರೂಪಿಸಿ ಕೊಡುತ್ತೇನೆ’ ಎಂದು ಸೂಚಿಸಿದ್ದಾಯಿತು.
ತನ್ನದೇ ಬರವಣಿಗೆಯಲ್ಲಿ ಆಯ್ಕೆ, ಕತ್ತರಿಸು, ನಕಲಿಸು ತಂತ್ರದಮೂಲಕ ಅಗತ್ಯ ಮಾಹಿತಿಗಳನ್ನು ಒಂದೆಡೆ ಸೇರಿಸಿ, ಅಲ್ಲಿವ ವಾಕ್ಯ ಸರಣಿಯನ್ನು ಅಗತ್ಯಕ್ಕೆ ಅನುಗುಣವಾಗಿ ಬದಲಿಸಿ, ಅದನ್ನು ರಾಮಣ್ಣನವರಿಗೆ ತಲುಪಿಸಲಾಯಿತು.   ಈ ನೂತನ ಪ್ರತಿಯ ಸರಳ ಶೈಲಿಯನ್ನು ನೋಡಿ ರಾಮಣ್ಣನವರಿಗೆ ಸಂತೋಷವಾಯಿತು.
 ಅಲ್ಲಿಂದ ಮುಂದಕ್ಕೆ ಯಾವುದೇ ಅಡಚಣೆಯಿಲ್ಲದೆ ಅತಿ ಶೀಘ್ರವಾಗಿ ಅನುವಾದದ ಕಾರ್ಯ ಮುಂದುವರೆದು ಮುಕ್ತಾಯವಾಯಿತು!   ರಾಮಣ್ಣನವರ  ಸೊಸೆ ಶ್ರೀಮತಿ ಎನ್.ಎ. ಶುಭಾ ಅವರು  ಈ  ಹಿಂದೀ ಅವತರಣಿಕೆಯನ್ನು  ಕಂಪ್ಯೂಟರಿನಲ್ಲಿ ಮುದ್ರಿಸಿಕೊಟ್ಟ ಕಾರಣ,  ಮುದ್ರಣಕ್ಕಾಗಿ  ಉತ್ತಮಪ್ರತಿಯನ್ನು ರೂಪಿಸುವ ಸಮಯ ಹಾಗೂ ಶ್ರಮವನ್ನು ಕಡಿತಗೊಳಿಸಿತು.
ಮುನಿಕೃಪೆಯಿಂದಾಗಿ, ನಿರೀಕ್ಷಿಸಿದ್ದಕ್ಕಿಂತ  ಸುಲಭವಾಗಿ, ಶೀಘ್ರವಾಗಿ, ಸಮರ್ಪಕವಾಗಿ ಸಿರಿಭೂವಲಯದ ಸರಳಪರಿಚಯಕೃತಿಗಳ ಭಾವಾನುವಾದವು ಸಿದ್ಧವಾಯಿತು!!! ಎಸ್. ರಾಮಣ್ಣನವರೇ ಈ ಭಾವಾನುವಾದಿತಕೃತಿಗೆ  ’ಸಿರಿಭೂವಲಯಕೀ ಏಕ್ ಝಾಂಕಿ’  ಎಂದು ನಾಮಕರಣ ಮಾಡಿದರು! 
 ’ ಒಂದು ಮಿಂಚುನೋಟ’  ”ಭಗವದ್ಗೀತಾ’ ಹಾಗೂ ’ಸಿರಿಭೂವಲಯಕೀ ಏಕ್ ಝಾಂಕಿ’ ಮೂರುಕೃತಿಗಳೂ ಮುದ್ರಣಾಲಯವನ್ನು ಸೇರಿ,  ಪ್ರಕಟಣೆಗೆ ಸಿದ್ಧವಾದುವು. ಡೆಮಿ ೧/೪ ಅಳತೆಯ ಸುಮಾರು ೧೪೪ ಪುಟಗಳವ್ಯಾಪ್ತಿಯ ಈ ಭಾವಾನುವಾದದ ಪ್ರಕಟಣೆಯ ಹೊಣೆಯನ್ನೂ  ಶ್ರೀಮತಿ ಗಿರಿಜಾಶಂಕರ್ ಅವರೇ  ವಹಿಸಿಕೊಂಡರು.
 ಆತ್ಮೀಯಮಿತ್ರರಾದ ಶ್ರೀ ಹರಿಹರಪುರ ಶ್ರೀಧರ್ ಅವರ ಹಾಸನದ ಸ್ವಗೃಹ ’ಈಶಾವಾಸ್ಯಮ್’ ನಲ್ಲಿ ಇವುಗಳ ಲೋಕಾರ್ಪಣೆಯ ಸಮಾರಂಭವೂ ಸರಳವಾಗಿ ನಡೆಯಿತು.  ಕನ್ನಡದ ಕೀರ್ತಿಕಳಶವೆನಿಸುವ ಈ ಅಮೂಲ್ಯಕೃತಿಯಲ್ಲಿ  ಸುಧಾರ್ಥಿಯವರ ಮಿತ್ರ ಶ್ರೀ ಎಚ್. ಎಂ. ಸದಾನಂದ ಅವರು ’ಓದುಗರೊಂದಿಗೆ’        ( पाठकॊं से एक बात ) ಎಂಬ ಶೀರ್ಷಿಕೆಯಲ್ಲಿ,   ಸಿರಿಭೂವಲಯದ ಸರಳಪರಿಚಯ ಕೃತಿಗಳ ರಚನೆಯಲ್ಲಿ ಸುಧಾರ್ಥಿಯವರ ಪ್ರಯತ್ನದ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.
  ’अनुवदक की दॊ, बातॆ’ ಎಂಬ ಶೀರ್ಷಿಕೆಯಲ್ಲಿ  ಹಿಂದೀಪಂಡಿತ್ ಎಸ್. ರಾಮಣ್ಣವರು  ಸಿರಿಭೂವಲಯಕ್ಕೆ ಸಂಬಂಧಿಸಿದ  ಹೇಳಿಕೆಗಳನ್ನು ಕುರಿತು, ಕನ್ನಡ ವಿದ್ವಾಂಸಾರು ತಳೆದಿರುವ ನಿಲುವುಗಳನ್ನು ಕುರಿತು,   ಕಳೆದ ೬೦ ವರ್ಷಗಳಿಂದ ಕನ್ನಡವಿದ್ವಾಂಸರ ವಲಯದಲ್ಲಿ ಈ ವಿಶ್ವಕಾವ್ಯದ ವಿಚಾರವಾಗಿ ಬೆಳೆದುಬಂದಿರುವ ’ಹಟದ’ಸ್ವಭಾವವನ್ನು ಕುರಿತು, ಸಿರಿಭೂವಲಯದಂಥ ಮಹಾನ್ ಸಾಹಿತ್ಯಕೃತಿಯ ಸರಳಪರಿಚಯಮಾಡಿಕೊಡಲು ೬೦ ವರ್ಷಗಳಿಂದಲೂ  ಕನ್ನಡದ ಪ್ರಸಿದ್ಧ ವಿದ್ವಾಂಸರಿಗೆ ಏಕೆ ಸಾಧ್ಯವಾಗಲಿಲ್ಲ? ಎಂಬುದನ್ನು ಕುರಿತು, ಸುಮಾರು ೨೫ ಪ್ರಶ್ನೆಗಳಿಗೆ  ಸುಧಾರ್ಥಿಯವರ ಸರಳ ಪರಿಚಯಕೃತಿಗಳಲ್ಲಿ ಸಮರ್ಪಕವಾದ ಉತ್ತರಗಳು ಅಡಕವಾಗಿವೆ.  ಎಂಬ ಮಾತುಗಳನ್ನಾಡಿದ್ದಾರೆ.
ಅವುಗಳಲ್ಲಿ ಕೆಲವನ್ನು  ಈ ಸಂಕ್ಷಿಪ್ತ  ಸರಳ ಭಾವಾನುವಾದದಲ್ಲಿ ಅಳವಡಿಸಲಾಗಿದೆ.

कन्नड-भाषा ने संसार की समस्त भाषाओं कॊ अपने ’उदर’ में आश्रय दिया है । यह कथन क्या सत्य है ?

कन्नड -भाषा को करॊडों वर्षॊं का इतिहास है  ।  क्या यह विचार आप को  ज्ञात है ?

इस र्पाचीन  साहित्य  कृति में  विश्व की ७१८ भाषावों के साहित्य का सार है ।  यह बात, क्या सच है ?

संसारके  समस्त ज्ञान -विज्ञान  , मत-धर्म , कला मॆ संम्बंधित सारॆ विवरण  इस  सिरिभूवलय काव्य में निहित हुए है? । क्या यह सच है ?

सर  १९५३ में अक्षर रूप मॆं  प्रकाशित हुआ यह  आश्चर्यपूर्ण काव्य को  कन्नड-  सरस्वत  लॊक ने  काली-कोठरी में  क्यॊं रखा है ?

गत ६० वर्ष से कन्नड-साहित्य क्षॆत्र के विद्वानॊं को यह सिरिभूवलय कव्य को अर्थ न हॊने का कारण क्या है ?

इस ग्रंथ के संषॊधन  से  संबन्धित  सुप्रसिद्ध  इतिहस प्राध्यापक डा॥  एस . श्रीकंठशास्त्रीजी के  सत्य निष्ट वास्तव  विचार  क्या है ?

वास्तव में विश्व विद्यलयॊं ने  इस ग्रंथ का संशॊधन कार्य  संपन्न किया  हो तॊ  कई  भाषाओं के हजारॊं छात्रॊं के  शॊधकार्य में पूर्णावधि  कार्यक्रम मिलॆगा ।
ಸರಳಪರಿಚಯಕಾರರ ಇಚ್ಛೆಯಂತೆ ನಾನು ಈ ಮಹಾನ್ ಕೃತಿಯ ಭಾವಾನುವಾದಕ್ಕೆ ಕೈಹಾಕಿದ್ದೇನೆ.  ಇಷ್ಟು ವ್ಯಾಪಕವಾದ ಪರಿಚಯ ಕೃತಿಯ ಭಾವಾನುವಾದದ ಕಾರ್ಯ ಕಠಿಣವಾದುದು, ಆದರೂ ನನ್ನ ಶಕ್ತ್ಯಾನುಸಾರವಾಗಿ ಇದನ್ನು ನಿರ್ವಹಿಸಿದ್ದೇನೆ.  ಸುಧಾರ್ಥಿಯವರು ಹಾಗೂ ಅವರ ಪತ್ನಿ ಶ್ರೀಮತಿ ಗಿರಿಜಾಶಂಕರ್ ಅವರಿಗೆ ಧನ್ಯವಾದಗಳನ್ನರ್ಪಿಸಿದ್ದೇನೆ ಎಂಬ ಮಾತುಗಳನ್ನು ಭಾವಾನುವಾದಕರು  ದಾಖಲಿಸಿದ್ದಾರೆ.
  ’भूमिका’  ಎಂಬ ಶೀರ್ಷಿಕೆಯಲ್ಲಿ ಸುಧಾರ್ಥಿಯವರು ಈ ಯೋಜನೆಯನ್ನು ಕುರಿತಂತೆ ತಮ್ಮ  ಅನಿಸಿಕೆಗಳನ್ನು ಸೂಚಿಸಿ, ನೆರವಾದವರೆಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿದ್ದಾರೆ.
’सर्वभाषामयी  भाषा  सिरिभूवलय की एक विहंगम दृष्टि अथवा एक झांकी’ (ग्रंथ का उदय तथा  विकास) ಎಂಬ ಶೀರ್ಷಿಕೆಯಲ್ಲಿ  ಸಂಬಂಧಿಸಿದ ಮಾಹಿತಿಯನ್ನು ವಿವರಿಸಲಾಗಿದೆ.  ’सिरिभूवलय का कुछ ब्यॊरा’ ಎಂಬ ಶೀರ್ಷಿಕೆಯಲ್ಲಿ  ಕೇವಲ ೫ ಪುಟಗಳವ್ಯಾಪ್ತಿಯಲ್ಲಿ  ವ್ಯಾಪಕವಾದ ಮಾಹಿತಿಯನ್ನು ನೀಡಲಾಗಿದೆ.
’सिरिभूवलय का स्वरूप , निर्माण , वृद्धि, तथा  बची हुई रीति’  ಎಂಬ ಶೀರ್ಷಿಕೆಯಲ್ಲಿ  ಸರ್ವಭಾಷಾಮಯೀಭಾಷಾ ಕನ್ನಡ ವರ್ಣಮಾಲೆಯೊಂದಿಗೆ ಕನ್ನಡದ ಮೂಲ ಸಾಹಿತ್ಯವನ್ನು ದೇವನಾಗರೀ ಲಿಪಿಯಲ್ಲಿ ಸೂಚಿಸುವ ಮೂಲಕ ಭಾವಾನುವಾದವನ್ನು ನೀಡಿ ಹಿಂದೀಭಾಷಿಕರಿಗೆ ಮೂಲಕೃತಿಯನ್ನು ಕುರಿತು ಹೆಚ್ಚಿನ ಪರಿಚಯಾಗುವಂತೆ ಮಾಡಲಾಗಿದೆ.
संशॊधन , संरक्षण , सिरिभूवलय मॆ आयुर्वॆद ,  सिरिभूवलय मॆ  विज्ञान ,  सिरिभूवलय मॆ धर्म , ಎಂಬ ಶೀರ್ಷಿಕೆಗಳಡಿಯಲ್ಲಿ ಸಂಬಂಧಿಸಿದ ವಿಷಯಗಳ ಮಾಹಿತಿಯನ್ನು ಸೂಕ್ತವಾಗಿ ಪರಿಚಯಿಸಲಾಗಿದೆ.
ಮುಂದೆ    सर्वभाषामयीभाषा  सिरिभूवलय ग्रंथ का स्थूलपरिचय’  ಎಂಬ ಶೀರ್ಷಿಕೆಯಲ್ಲಿ  प्रथम अध्याय ದಿಂದ तैंतीस्वा  अध्याय ದ ವರೆವಿಗಿನ ಮೂಲಕಾವ್ಯದ ಸಾರವನ್ನುಸಂಗ್ರಹಿಸಿ,  ಸಂಕ್ಷಿಪ್ತವಾದ ಭಾವಾನುವಾದವನ್ನು ನೀಡಲಾಗಿದೆ.
ಈ ಪ್ರಯತ್ನದಿಂದಾಗಿ ಹೆಚ್ಚಿನ ಶ್ರಮವಿಲ್ಲದೇ ಆಸಕ್ತಿ ಇರುವ ಹಿಂದೀಭಾಷಾ ಓದುಗರು ಈ ಕನ್ನಡದ ಅಚ್ಚರಿಯ ಕಾವ್ಯವನ್ನು ಕುರಿತು ಅಮೂಲ್ಯವಾದ ಮಾಹಿತಿಗಳನ್ನು ಸಂಕ್ಷಿಪ್ತವಾಗಿಯಾದರೂ  ಸಮರ್ಪಕವಾಗಿ ಪಡೆಯಲು ಸಹಕಾರಿಯಾಗಿದೆ.  ಕೆಲವೊಂದು ಪ್ರಮುಖ ಮಾಹಿತಿಗಳನ್ನು ಅಲ್ಲಲ್ಲೇ  ಸಂಕ್ಷಿಪ್ತವಾಗಿ ’ಮಂಜೂಷ’ ರೂಪದಲ್ಲಿ ನೀಡಲಾಗಿದೆ.
’कुमुदॆंदु मुनीजी की रचना सिरिभूवल की एक झांकी  ಎಂಬ ಶೀರ್ಷಿಕೆಯಲ್ಲಿ  ಹಿಂದೀಭಾಷಾ ಓದುಗರಿಗೆ  ಈ ಕನ್ನಡಕಾವ್ಯದ ಸೊಬಗನ್ನು ಮೂಲರೂಪದಲ್ಲೇ ಸವಿಯಲು ಅನುಕೂಲವಾಗುವಂತೆ ಕಾವ್ಯಾರಂಭದ ಮೊದಲ ಶ್ಲೋಕರಿಂದ ಪ್ರಾರಂಭಿಸಿ  ೩೩ನೇ ಅಧ್ಯಾಯದವರೆಗಿನ ಸಾಹಿತ್ಯದಲ್ಲಿ ೪೮ ಪ್ರಮುಖ ಸಾಂಗತ್ಯ ಪದ್ಯಗಳನ್ನು ಆಯ್ಕೆಮಾಡಿ, ದೇವನಾಗರಿಲಿಪಿಯಲ್ಲೂ. ಅವುಗಳ  ಭಾವಾರ್ಥವನ್ನು ಹಿಂದೀಭಾವಾನುವಾದವಾಗಿ  ಸುಮಾರು ೧೪ ಪುಟಗಳ ವ್ಯಾಪ್ತಿಯಲ್ಲಿ ನೀಡಲಾಗಿದೆ. 
’ द्वितीय खंड श्रुतावतार वदनरंगस्थलाधिकार  का  प्रथम् ’स’ अध्याय’  ಎಂಬ ಶೀರ್ಷಿಕೆಯಲ್ಲಿ  ಸಿರಿಭೂವಲಯದ ದ್ವಿತೀಯಖಂಡ ಶ್ರುತಾವತಾರ ವದನರಂಗಸ್ಥಲಾಧಿಕರವೆಂಬ ’ಸ’ ಅಧ್ಯಾಯವನ್ನು ಕುರಿತು ವಿವರಿಸಲಾಗಿದೆ. ಸಿರಿಭೂವಲಯದಲ್ಲಿ ೭೧೮ ಭಾಷೆಗಳ ಸಾಹಿತ್ಯವಿರುವುದೆಂಬ ಹೇಳಿಕೆಯನ್ನು ಅಲ್ಲಗಳೆಯುತ್ತಿದ್ದ ಅಂದಿನ ವಿದ್ವಾಂಸರ ಗಮನ ಸೆಳೆಯಲು ಈ ಮಾಹಿತಿಯನ್ನು ಮುಂದಾಗಿ ಪ್ರಕಟಸಲಾಗಿತ್ತು. ಇದರಲ್ಲಿನ ಮಾಹಿತಿಗಳನ್ನು ಈಲ್ಲಿ ದಾಖಲಿಸಲಾಗಿಲ್ಲ.  ಬದಲಿಗೆ ಜಗತ್ತಿನಲ್ಲಿ ಅಮೂಲ್ಯವಾಗಿರುವ ಅಕ್ಷರ ಸಾಹಿತ್ಯವು ನಾಶವಾಗದರೀತಿಯಲ್ಲಿ ಅವುಗಳನ್ನು ಅಂಕಿಗಳಲ್ಲಿ ಕಟ್ಟಿಡುವ ಉದ್ದೇಶದಿಂದ ರಾಶಿ ರಾಶಿಯಾಗಿ ಅಂಕಗಳನ್ನು ಸೃಷ್ಟಿಸಿ, ಈ ಅಂಕಕಾವ್ಯವನ್ನು ರಚಿಲಾಗಿರುವ ಮಾಹಿತಿಯನ್ನು ಸೂಚಿಸಲಾಗಿದೆ. ಸಿರಿಭೂವಲಯದ ಪ್ರಚಾರಕರಾದ ಸುಧಾರ್ಥಿಯ ಸಂಕ್ಷಿಪ್ತ ಪರಿಚಯವನ್ನು ನೀಡಲಾಗಿದೆ.  ಕೊನೆಯಲ್ಲಿ ಕನ್ನಡ ಅಂಕಿಗಳ ಉಗಮ ಹಾಗೂ ವಿಕಾಸಕ್ಕೆ ಸಂಬಂಧಿಸಿದ ಚಿತ್ರ  ಹಾಗೂ ಕನ್ನಡ ಅಕ್ಷರ ಚಕ್ರದ ಒಂದು ಚಿತ್ರವನ್ನೂ ನೀಡಲಾಗಿದೆ. (ಮುಂದುವರೆಯುವುದು) 
                                                               -ಜಮದಗ್ನಿಸುತ.

No comments:

Post a Comment