Tuesday 28 January 2020

ಜಾತಿಪದ್ಧತಿಯನ್ನು ರೂಪಿಸಿದವರು ಬ್ರಾಹ್ಮಣರಲ್ಲ!!

ಜಾತಿಪದ್ಧತಿಯ ಮೂಲವನ್ನು ಸರಿಯಾಗಿ ಅರಿಯಬಯಸುವವರು ಅದರ ಮಾಹಿತಿಯನ್ನು ಸಿರಿಭೂವಲಯ ಕಾವ್ಯದಲ್ಲಿ ಹುಡುಕಬೇಕು!! ಈ ಕವ್ಯದ ಪ್ರಥಮಖಂಡದ ೪೩ನೇ ಅಧ್ಯಾಯದ ಮೊದಲನೇ ಪೂರ್ಣಪದ್ಯದ  ಮೊದಲನೇ ಪಾದದ  ಕೊನೆಯಿಂದ ನಾಲ್ಕನೇ ಅಕ್ಷರಗಳನ್ನು ಮೇಲಿನಿಂದ ಕೆಳಕ್ಕೆ ಸಾಗುತ್ತಾ  ಮೂರನೇ ಅಕ್ಷರಗಳನ್ನು ಕೆಳಗಿನಿಂದ ಮೇಲಕ್ಕೆ ಸಾಗಿ, ಎರಡನೇ ಅಕ್ಷರಗಳನ್ನು ಮೇಲಿನಿಂದ ಕೆಳಕ್ಕೆ ಸಾಗಿ, ಕೊನೆಯ ಅಕ್ಷರಗಳನ್ನು ಕೆಳಗಿನಿಂದ ಮೇಲಕ್ಕೆ ಸಾಗುತ್ತಾ ಜೋಡಿನಾಗರ ಬಂಧದಲ್ಲಿ ಸಾಗುತ್ತ ಪ್ರತ್ಯೇಕವಾಗಿ ಜೋಡಿಸಿಕೊಂಡಾಗ:
’ರಿಯಯ್ ಹೇಳುವೋಂಓಂದುಓಂಬತ್ತಿದಂಕವಂಕೇಳಿಂಓಂಬತ್ಓಂದೆಂಬಬಾರಿದಬೆಳೆಯುತಕಳೆದರೆಕೂಡುವಲೀಲೆ ತಾಗತತಾಂಕಓಂದುವಶವಾಗೆನವಸಿದ್ಧಚಕ್ರದಾರಾಧನೆರಸಯನ್ತ್ರಸೃಷ್ಟಿಯನಾದಿವಿಷಯಾವಗಾಹನಸಿದ್ಧಾನ್ತದೊಳುಬರ್ಪಹೊಸಶಂ(ಬಲಬದಿಯ ಅಕ್ಷರದಿಂದ ಕೆಳಗಿಳಿಯಬೇಕು)ಕೆಭರತಭೂವಲಯಜೀವದ್ರವ್ಯಗಳೆಷ್ಟು ಅವರಜಾತಿಗಳೆಷ್ಟು ಪಾವನಪರಿಶುದ್ಧರೆಷ್ಟು ಸಾವುಹುಟ್ಟಿಗೆಸಿಕ್ಕಿಬಾಳ್ವಜೀವರುಎಷ್ಟುರುವಾಂಬರುವಹಿಂದಿದ್ದವರ ಜ್ಞಾನವರಿವಿಲ್ಲದಿರುವ ಜೀವಗಳೆಷ್ಟುಅರಹಂತರಾಗುವರೆಷ್ಟುಸಿರಿಕ್ಷ್ಣಯೋಗಿಯಪರಿ (ಬಲಬದಿಯ ಅಕ್ಷರದಿಂದಮೇಲಕ್ಕೆಸಾಗಬೇಕು) ಯಾಯಹೋನ್ದದೆಸರುವಜ್ಞರಾಗುವರೆಷ್ಟುವರತತ್ವನ್ನಾಅಸ್ಜಿರಪ್ರಾಯಣಃಪರಃಪರರಾನದಿರುಮ್ಓಹ್ರಿಯಗಚಂಂದರೀಲರಿಚಿಜ್ಜಗತ್ಸರ್ವಂದ್ಋಂತ್ಹರಿಶ್ಯತೇಶ್ರ್ಯೂಯಶಿಯವ್ರತೇಪಿವಾದ್ರರ್ಬಹಿಡಿಶನರಶ್ಚತತ್ಸರ್ವಂವ್ಯಾಪ್ಸ ’ ಎಂಬ ಅಕ್ಷರಗಳ ಸರಪಣಿಯು ದೊರೆಯುತ್ತದೆ.
ಇದರಿಂದ ಉಗಮವಾಗುವ ಅಂತರ್ಸಾಹಿತ್ಯವು ಪ್ರಾರಂಭದಲ್ಲಿ ಕನ್ನಡಭಾಷಾಸಾಹಿತ್ಯದ ತುಣುಕಾಗಿದ್ದು, ಕೊನೆಯಲ್ಲಿ ಸಂಸ್ಕೃತಭಾಷಾಸಾಹಿತ್ಯದ ತುಣುಕಾಗುತ್ತದೆ! ಕನ್ನಡಭಾಷಾಸಾಹಿತ್ಯದ ತುಣುಕಿನಲ್ಲಿ ಜೀವಾತ್ಮಗಳು ತಮ್ಮ ಸಂಸ್ಕಾರಕ್ಕನುಗುಣವಾಗಿ ಬೇರೆ ಬೇರೆ ಹಂತಗಳಲ್ಲಿ ಪ್ರಕಟವಾಗುವ ವಿಚಾರವಿರುವುದನ್ನು ಗಮನಿಸಬೇಕು. ಇದನ್ನು ಜಾತಿಪದ್ಧತಿ ಎಂದು ಇಂದಿನ ಕೆಲವರು ನಿರಾಕರಿಸಬಹುದು.
ಜಾತಿಪದ್ಧತಿಯು ಪ್ರಾಚೀನವಾದುದುಲ್ಲ; ಯಾವುದೋ ಒಂದು ಕಾಲಘಟ್ಟದಲ್ಲಿ ನಮ್ಮ ಪೂರ್ವಜರು ಈ ಪದ್ಧತಿಯನ್ನು ಹುಟ್ಟುಹಾಕಿದ್ದಾರೆ, ಇದರಿಂದ ಮಾನವ ಸಮೂಹಕ್ಕೆ ಭಾರಿ ಅನ್ಯಾಯವಾಗಿದೆ. ಇದನ್ನು ತೊಡೆದುಹಾಕಿ ಎಲ್ಲರೂ ಒಂದೇ ಎಂಬುದನ್ನು ಅರಿತು ಸರ್ವಸಮಾನತೆಯ ಸಾಮೂಹಿಕ ಜೀವನ ಸಂಪ್ರದಾಯವನ್ನನುಸರಿಸಬೇಕು. ಇದಕ್ಕೆ ಅಂತರ್ಜಾತಿಯ ವಿವಾಹವೇ ಸೂಕ್ತವಾದ ಪರಿಹಾರ ಎಂದು ವಾದಿಸುವುದಿದೆ.
ಇದು ಸಮರ್ಪಕವಾದುದಲ್ಲವೆಂದು ನನ್ನ ಅನಿಸಿಕೆ. ಜಾತಿಪದ್ಧತಿಯು ಇತ್ತೀಚಿನ ಯಾವುದೋ ಕಾಲಘಟ್ಟದಲ್ಲಿ ನಮ್ಮ ಪೂರ್ವಿಕರು ಅಮಾಯಕರನ್ನು ಶೋಷಿಸಲು ಆಚರಣೆಗೆ ತಂದಿರುವ ಪದ್ಧತಿಯಲ್ಲ. ಅಥವಾ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಸೂಚಿಸಿರುವಂತೆ ಗುಣಕರ್ಮಗಳಿಗನುಸಾರವಾಗಿ ಸಮಾಜವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ಜಾತಿಗಳಾಗಿ ವಿಂಗಡಿಸಿದ್ದೂ ಅವನಲ್ಲ್ಲ!
ಕೋಟ್ಯಾಂತರ ವರ್ಷಗಳ ಹಿಂದೆ ಈ ಭೂಮಂಡಲವನ್ನಾಳಿದ ಭರತ ಚಕ್ರವರ್ತಿಯು ರೂಪಿಸಿದ ಪದ್ಧತಿ ಇದು ಎಂಬುದು ಪ್ರಾಚೀನ ಜೈನ ಸಂಪ್ರದಾಯದ ಗ್ರಂಥಗಳ ಹೇಳಿಕೆಯಾಗಿದೆ. ಇದು ಮಾನವಕುಲದ ಆತ್ಮೋನ್ನತಿಗೆ  ಸಾರ್ವಕಾಲಿಕವಾದ ಸುರಕ್ಷಿತವಾದ ಪದ್ಧತಿ.
 ಇದನ್ನು ನಿರಾಕರಿಸಿ ಕೇವಲ ದೈಹಿಕ ಆಕರ್ಷಣೆಯಿಂದ ಎಲ್ಲರೂ ಒಂದೇ ಎಂದು ನಿರ್ಧರಿಸಿ, ಇಚ್ಛಿಸಿದವರನ್ನು ವಿವಾಹವಾಗಿ ಹೊಸಸಮಾಜ ನಿರ್ಮಿಸುವ ಸ್ವೇಚ್ಛಾ ವರ್ತನೆಯು ಪ್ರಕೃತಿ ವಿರೋಧಿಯಾಗುವುದು ನಿಶ್ಚಿತ. ಇದರಿಂದ ವ್ಯಕ್ತಿಗೂ ಸುಖವಿಲ್ಲ; ಸಮಾಜಕ್ಕೂ ನೆಮ್ಮದಿಯಿಲ್ಲ!
ಸಮಾಜವಿರೋಧಿಯಲ್ಲದ, ಪರಸ್ಪರ ಆತ್ಮಸಾಕ್ಷಿಯ ಬೆಂಬಲಪಡೆದ ದೇಹ ಮನಸ್ಸುಗಳ ಒಂದುಗೂಡುವಿಕೆಯು ಮಾತ್ರ ನಿಜವಾದ ವಿವಾಹವಾದೀತೇ ಹೊರತು, ಕೇವಲ ತೋರಿಕೆಗಾಗಿ, ಸಾಂಪ್ರದಾಯಿಕವಾಗಿ ನಡೆಯುವ ಯಾವ ವಿವಾಹ ಕ್ರಿಯೆಯೂ ವ್ಯಕ್ತಿಗಾಗಲೀ ಸಮಾಜಕ್ಕಾಗಲೀ ನೆಮ್ಮದಿಯನ್ನು ತರಲಾರದು ಎಂಬುದು ಗಮನಾರ್ಹವಾದ ಸಂಗತಿ.
ವ್ಯಕ್ತಿಯ ಜಾತಿಯಿಂದ ಅವನ ಯೋಗ್ಯತೆಯನ್ನು ನಿರ್ಧರಿಸುವುದು ತಪ್ಪು. ವ್ಯಕ್ತಿಯ ಆತ್ಮಸಂಸ್ಕಾರವೇ ಅವನ/ಅವಳ ಯೋಗ್ಯತೆಯ ನಿಜವಾದ ಮಾನದಂಡ. ಮಾನವ ಕುಲದ ಪೂರ್ವಜರು ಇದನ್ನು ಖಚಿತವಾಗಿ ಅರಿತಿದ್ದರು. ಆದ್ದರಿಂದಲೇ ಅಂದಿನ ಸಮಾಜ ನೆಮ್ಮದಿಯಿಂದಿತ್ತು.
ದೇಹಾಕರ್ಷಣೆಯ ಕಾರಣಕ್ಕಾಗಿ ಯಾವುದೇ ಜಾತಿ, ಮತ, ಸಂಪ್ರದಾಯಗಳ ಗಂಡುಹೆಣ್ಣುಗಳು ಪರಸ್ಪರ ವಿವಾಹವಾಗುವುದು ಅಥವಾ ವಿವಾಹೇತರವಾದ ಸಂಬಂಧ ಹೊಂದುವುದು ಪ್ರಾಚೀನಕಾಲದಿಂದಲೂ ರೂಢಿಯಲ್ಲಿರುವುದೇ ಆಗಿದೆ. ಆದರೆ, ಸಾಮಾಜಿಕ ಸ್ವಾಸ್ತ್ಯ ಕೆಡದಂತೆ ಅಂದಿನ ದಿನಗಳಲ್ಲಿ ಇಂಥ ಸಂಬಂಧಗಳಿಗೆ ಒಂದು ಸೀಮಿತವಾದ ಇತಿಮಿತಿಗಳಿರುತ್ತಿದ್ದುದು ಗಮನಾರ್ಹ. ಜೀವಮಾನಪೂರ್ತ ಹಲವಾರು ದಶಕಗಳಕಾಲ ಈ ಸಂಬಂಧವು ಯಶಸ್ವಿಯಾಗಿ ಮುನ್ನಡೆಯುತ್ತಿತ್ತು.
ಈಗ ವ್ಯಕ್ತಿಯ ಇಚ್ಛಾನುಸಾರ ವರ್ತಿಸುವ ನಿರ್ಧಾರದಿಂದಾಗಿ ಗಂಡು ಹೆಣ್ಣುಗಳ ಸಂಬಂಧವು ಕೇವಲ ಕೆಲವೇ ಕ್ಷಣಗಳಿಗೆ ಸೀಮಿತವೆನ್ನುವಂತಾಗಿದೆ! ವ್ಯಕ್ತಿಜೀವನದ ಉಳಿದೆಲ್ಲ ಜೀವನದಮೌಲ್ಯಗಳೂ ಕಣ್ಮರೆಯಾಗುತ್ತಿವೆ!! ಮುಂದಿನ ಸಂತತಿಯ ಹಿತದೃಷ್ಟಿಯಿಂದ ಇದು ಸಮಂಜಸವೇ? ಎಂಬುದನ್ನು ವಿವೇಕಿಗಳು ಆಲೋಚಿಸಬೇಕು.
                                                                                          -ಸಿರಿಭೂವಲಯದಸುಧಾರ್ಥಿ. 

No comments:

Post a Comment