Friday 16 October 2020

 ಡಾ|| ಎಸ್. ಶ್ರೀಕಂಠಶಾಸ್ತ್ರಿ

ಯವರ ಹೇಳಿಕೆಯಂತೆ ೧೯೫೩ರಲ್ಲಿ
ಸಿರಿಭೂವಲಯದ ಕಾರ್ಯವು
ಜಗತ್ತಿನಲ್ಲಿ ೭-೮ ಜನಗಳಿಗೆ
ಮಾತ್ರ ಆಸಕ್ತಿ ಇರುವುದೆನಿಸಿತ್ತು!
ಈಗ Fb ಒಂದರಲ್ಲೇ ಸುಮಾರು
೨೦ಕ್ಕೂ ಹೆಚ್ಚುಜನ ಈ ಕಾವ್ಯದಲ್ಲಿ
ಅಭಿಮಾನ ಹೊಂದಿದ್ದಾರೆ!
೩೦ ವರ್ಷದಲ್ಲಿ ಸುಧಾರ್ಥಿಯು
ಸಾಧಿಸಿದ್ದು ಇದಿಷ್ಟನ್ನೇ!!
ಇಂದಿನ ವೈಜ್ಞಾನಿಕಯುಗದಲ್ಲಿ
ಲಕಾಂತರ ಜನಗಳಿಗೆ ಒಮ್ಮೆಗೇ
ಈಕಾವ್ಯದಪರಿಚಯಒದಗಿದರೂ
ದೊರೆತಫಲವಿದು ಗುಡ್ಡವನು
ಬಗೆದು ಇಲಿಯನ್ನುಹಿಡಿದಂತೆ!!
ಕನ್ನಡದ ಕುಲದವರ
ಕಾವ್ಯದಾಸಕ್ತಿಯೂ
ಇದಕಿಂತ ಬೇರಲ್ಲ
ಭೂವಲಯದೊಳಗೆ!!
ಕುದುರೆಯನು ಕರೆದೊಯ್ದು
ಕೆರೆಯೊಳಗೆ ನಿಲಿಸಿದರು,
ನೀರಕುಡಿಯುವುದದುವೆ
ಕುದುರೆಯಾ ಮನದಿಚ್ಛೆ!!
ಕೆರೆಯ ಅಂಗಳಕಂತು
ಕರೆದೊಯ್ದುದಾಗಿಹುದು
ಕುಡಿಯದಲೆ ಬಿಡುತಿರಲು
ನನಗೇಕೆ ಚಿಂತೆ!?
ಸಿರಿಭೂವಲಯದ
ಸುಧೆಯನು ಸವಿಯುತ
ವೃದ್ಧಿಸಲಿನಿಮ್ಮಗಳ
ಸಂಸ್ಕಾರಶರಧಿಯದು
ಜಗದಪರಿಧಿಯವರೆಗೆ.
ಅಧಿಕಮಾಸವಿದು
ಅಧಿಕವಾಗುತಲಿರಲಿ
ಅಧಿಕಜನಗಳಿಗದುವೆ
ಅಧಿಕಫಲತರುತಿರಲಿ
ಹೌದು ಪೂರ್ವಸಿದ್ಧತೆಗಾಗಿ
ಈಕಾವ್ಯದ ಸರಳಪರಿಚಯದಲ್ಲಿ
ಅಲ್ಪ ವಿರಾಮವಿದ್ದದ್ದುನಿಜ.
ಈಗ ಮತ್ತೆ ಹರಿಯಲಿದೆ ಈ
ಕಾವ್ಯರಸದಾ ಪ್ರವಾಹ.
ಸಧ್ಯದಲ್ಲಿಯೇ!!!
-ಸಿರಿಭೂವಲಯದಸುಧಾರ್ಥಿ.

No comments:

Post a Comment