Thursday, 23 May 2013

ಓದುಗರೊಂದಿಗೆ ಕೃತಿಕರ್ತ ಸುಧಾರ್ಥಿ, ಹಾಸನ



  ಕುಮುದೇಂದುಮುನಿ, ಕರ್ಲಮಂಗಲಂ ಶ್ರೀಕಂಠಯ್ಯನವರು ಹಾಗೂ ಕೆ. ಅನಂತಸುಬ್ಬರಾಯರಂಥವರ ಅನನ್ಯವಾದ ಕನ್ನಡಾಭಿಮಾನದಿಂದ ಪ್ರೇರಿತನಾಗಿ ನಾನು ಈ ಸಿರಿಭೂವಲಯ ಎಂಬ ಅಚ್ಚರಿಯ ಗ್ರಂಥದ ಪ್ರಭಾವಕ್ಕೆ ಒಳಗಾದಮೇಲೆ, ಕಳೆದ ಅರುವತ್ತು ವರ್ಷಗಳ ಅವಧಿಯಲ್ಲಿ ಕನ್ನಡನಾಡಿನ ಸಾರಸ್ವತಲೋಗದ ದಿಗ್ಗಜಗಳು ಈ ಮಹಾನ್ ಗ್ರಂಥದ ವಿಚಾರವಾಗಿ ತಳೆದಿರುವ ಉದಾಸೀನ ಮನೋಭಾವದಿಂದ ಬಹಳ ಬೇಸಗೊಂಡದ್ದು ಸಹಜ ಸಂಗತಿ. ಕಬ್ಬಿಣದ ಕಡಲೆ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದ ಈ ಅದ್ಭುತ ಗ್ರಂಥವನ್ನು ಕುರಿತು ಸಾಮಾನ್ಯ ಓದುಗರಿಗೆ ಪರಿಚಯಮಾಡಿಕೊಡುವ ನಿರ್ಧಾರಮಾಡಿ, ಗ್ರಂಥದ ಅಧ್ಯಯನಕ್ಕೆ ಪ್ರಾರಂಭಿಸಿದಮೇಲೆ, ಬೆಂಗಳೂರಿನ ಪುಸ್ತಕಶಕ್ತಿ ಪ್ರಕಾಶನದವರು ನಾಡಿನ ಹಿರಿಯ ವಿದ್ವಾಂಸರುಗಳ ಸಮೂಹದೊಂದಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಈ ಪ್ರಾಚೀನ ಕೃತಿಯ ಪುನರುತ್ಥಾನ ಮಾಡುವ ಪ್ರಯತ್ನ ಪ್ರಾರಂಭಿಸಿದ ವಿಚಾರ ತಿಳಿಯಿತು. ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ಅವರ ಕೆಲವು ಕೃತಿಗಳೂ ಪ್ರಕಟವಾದುವು. ಆದರೆ, ೧೯೫೩ ರಲ್ಲಿ ಸಿರಿಭೂವಲಯದ ಅಕ್ಷರ ಅವತರಣಿಕೆಯು ಪ್ರಕಟವಾದ ವಿಚಾರವಾಗಿ ದಿ| ಕೆ. ಅನಂತಸುಬ್ಬರಾಯರಿಂದ ನಾನು ತಿಳಿದಿದ್ದ ಮಾಹಿತಿಗಳಿಗೂ, ಈಗ ಪುಸ್ತಕಶಕ್ತಿ ಪ್ರಕಾಶನದವರು ನಡೆಸಿರುವ ಪುನರುತ್ಥಾನ ಕಾರ್ಯದ ವಿವರಗಳಿಗೂ ಇರುವ ಅಂತರವನ್ನು ಗಮನದಲ್ಲಿರಿಸಿಕೊಂಡು, ಈ ಪುನರುತ್ಥಾನದ ಕಾಯಕಕ್ಕೆ ನೆರವಾದ ವಿದ್ವಾಂಸರ ಪ್ರತಿಯೊಂದು ಮಾತುಗಳನ್ನೂ ನಾನು ಗಮನವಿಟ್ಟು ಅಭ್ಯಸಿಸಿ, ಅಲ್ಲಿನ ನ್ಯೂನತೆಗಳನ್ನು ಗುರುತಿಸತೊಡಗಿದೆ. 
  ಸಿರಿಭೂವಲಯದ ಸಂಶೋಧನೆಗೆ ಸಂಬಂಧಿಸಿದಂತೆ ಇಲ್ಲದ ಇತಿಹಾಸವನ್ನು ನಿರೂಪಿಸುವ ಅನುಚಿತ ಪ್ರಯತ್ನದ ಯಶಸ್ಸನ್ನು ಗಮನಿಸಿ ನನಗೆ ಖೇದವಾಯಿತು. ಸಂಬಂಧಿಸಿದ ವಿದ್ವಾಂಸರ ಸಮೂಹವು ಸಿರಿಭೂವಲಯವನ್ನು ಸಮರ್ಪಕವಾಗಿ ಅಧ್ಯಯನಮಾಡದೇ, ನಾನಾರೀತಿಯ ಒತ್ತಡಗಳಿಗೆ ಸಿಲುಕಿ, ಸಿರಿಭೂವಲಯದ ಘನತೆಗೆ ಕುಂದುತರುತ್ತಿರುವರೆಂಬ ಅಸಮಾಧಾನ ನನ್ನಲ್ಲಿ ಉಂಟಾಯಿತು. ಈ ಕಾರಣದಿಂದಾಗಿ ನಾನು ಸಿರಿಭೂವಲಯಸಾರದಲ್ಲಿ ಸಂಬಂಧಿಸಿದ ವಿದ್ವಾಂಸರೆಲ್ಲರ ಹಾಗೂ ಹಿಂದೆ ಈ ಗ್ರಂಥದ ಅಕ್ಷರ ಸಂಸ್ಕರಣೆಯ ಪ್ರಕಟಣೆಯ ಪ್ರಾರಂಭದಲ್ಲಿ ವಿರೋಧ ಸೂಚಿಸಿದ ಅಂದಿನ ಸಾಹಿತ್ಯಕ್ಷೇತ್ರದ ದಿಗ್ಗಜಗಳ ವಿರುದ್ಧ ಸಕಾರಣವಾದ, ಸಮರ್ಪಕವಾದ, ವಾಕ್ಸಮರನಡೆಸಿದಾಯಿತು. 
   ಸಿರಿಭೂವಲಯದ ನಿಜವಾದ ಕಠಿಣತೆ, ಅದನ್ನ ಸರಳವಾಗಿ ಓದಲು ಸಾಧ್ಯವಿರದ ವಿಚಾರ, ತಮ್ಮ ವೃತ್ತಿ, ಪ್ರವೃತ್ತಿಗಳೊಂದಿಗೆ ವಿದ್ವಾಂಸರು ಇದನ್ನು ಸರಿಯಾಗಿ ತಿಳಿಯಲು ಅವಕಾಶವಾಗದೆ ಹೋದುದು ಸಹಜ ಎಂಬ ವಿಚಾರ ನನಗೆ ಈಗ ಮನವರಿಕೆಯಾಗಿದೆ. ಏಕೆಂದರೆ, ಎಲ್ಲರೂ ಎಲ್ಲವಿಚಾರಗಳಲ್ಲೂ ಸಮಾನವಾದ ಆಸಕ್ತಿ ಹೊಂದಿರುವು ಅಸಂಭವ. ನನ್ನ ವಿಚಾರವನ್ನೇ ತೆಗೆದುಕೊಂಡರೂ ಸಿರಿಭೂವಲಯದ ವಿಚಾರದಲ್ಲಿ ನನಗಿರುವಷ್ಟು ತೀವ್ರವಾದ ಆಸಕ್ತಿಯು ಬೇರೆ ಯಾವುದೇ ವಿಚಾರದಲ್ಲೂ ಇಲ್ಲವೆಂಬುದು ನನ್ನ ಸ್ವಾನುಭವ. ಅಲ್ಲದೇ ಈ ಸಿರಿಭೂವಲಯದ ಸರಳ ಪರಿಚಯದ ಕಾರ್ಯವನ್ನು ಈಹಿಂದೆಯೇ ಯಾರಾದರೂ ಮಾಡಿದ್ದರೆ, ನನಗೆ ಅಲ್ಲಿ ಪ್ರವೇಶವೇ ಇರುತ್ತಿರಲಿಲ್ಲ! ಒಟ್ಟಿನಲ್ಲಿ ಸಿರಿಭೂವಲಯದ ವಿಚಾರವಾಗಿ ಸೂಕ್ತ ಗಮನಹರಿಸಲಿಲ್ಲವೆಂದು ಉಳಿದವರನ್ನು ಆಕ್ಷೇಪಿಸುವುದು ಸೂಕ್ತವಲ್ಲವೆನಿಸಿತು. ನನ್ನ ಕಠಿಣವಾದ ಬರಹದ ವಿಚಾರವಾಗಿ ನನಗೇ ಮುಜುಗರವಾಯಿತು, ಇದರ ಪರಿಣಾಮವಾಗಿಯೇ ಮೈಸೂರಿಗೆ ಹೋದಾಗ, ಡಾ|| ಟಿ. ವಿ. ವೆಂಕಟಾಚಲಶಾಸ್ತ್ರಿಯವರನ್ನು ಕಂಡು ಮಾತನಾಡಿದ್ದಾಯಿತು. ನನ್ನ ಭಾವನೆಯೊಂದಿಗೆ ಅವರು ಪೂರ್ಣ ಸಹಮತ ಸೂಚಿಸದೇ ಹೋದರೂ, ನಾನು ಆ ವಿಚಾರದಲ್ಲಿ ತಟಸ್ಥನಾದೆ. ಕನ್ನಡ ಚೆನ್ನುಡಿಯ ಈ ಮಹಾ ಚೇತನಕ್ಕೆ ನನ್ನ ಗೌರವ ಸೂಚಿಸುವಲ್ಲಿ ಸಿರಿಭೂವಲಯದ ಜಯಾಖ್ಯಾನಾಂತರ್ಗತ ಭಗವದ್ಗೀತಾ ಕೃತಿಯನ್ನು ಅವರಿಗೆ ಅರ್ಪಿಸಿದೆ. ಇದುವರೆವಿಗೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 
  ವ್ಯಕ್ತಿಜೀವನದ ಸಾರ್ಥಕತೆಯ ದಿಸೆಯಲ್ಲಿ ಸಾಹಿತ್ಯದ ಪಾತ್ರವು ಬಹಳ ಪ್ರಮುಖವಾದುದೆಂಬುದು ನಿರ್ವಿವಾದ. ಪ್ರತಿಯೊಂದು ಸಾಹಿತ್ಯಕೃತಿಗೂ ತನ್ನದೇಆದ ನೆಲೆಬೆಲೆ ಇರುತ್ತದೆ. ಈ ಕಾರಣದಿಂದಾಗಿಯೇ ವೇದಮಂತ್ರಗಳು, ಉಪನಿಷತ್ತುಗಳು, ಸಹಸ್ರನಾಮಗಳು ಮುಂತಾದುವು ರಚನೆಯಾಗಿವೆ, ಇಂಥ ಸಾರ್ಥಕ ಸಾಹಿತ್ಯಕೃತಿಗಳ ನಿಜವಾದ ಪ್ರಯೋಜನ ನಮಗೆ ದೊರೆಯಬೇಕಾದರೆ ನಾವು ಓದಿದ ಸಾಹಿತ್ಯಕೃತಿ ನಮಗೆ ಅರ್ಥವಾಗಬೇಕು! ಅಂದರೆ, ಸಾಹಿತ್ಯಕೃತಿಯಲ್ಲಿ ಬಳಸಿರುವ ಪ್ರತಿಯೊಂದು ಪದದ ಅರ್ಥವೂ ನಮಗೆ ಖಚಿತವಾಗಿ ತಿಳಿದಿರಬೇಕು. ಈ ರೀತಿಯಲ್ಲಿ ಯಾವುದೆ ಭಾಷೆಯ ಯಾವುದೇ ಪದವು ಪ್ರತಿನಿಧಿಸುವ ನಾನಾ ರೀತಿಯ ಅರ್ಥಗಳನ್ನು ನಮಗೆ ತಿಳಿಸಿಕೊಡುವ ಕಾರ್ಯವನ್ನು ಅರ್ಥಕೋಶವು ನಿರ್ವಹಿಸುತ್ತದೆ. ವ್ಯಾಪಕವಾದ ಜೀವನಾನುಭವದ ಸಂಪಾದನೆಗೆ ಸಮರ್ಪಕವಾದ ಪ್ರವಾಸವು ನೆರವಾಗುತ್ತದೆ. ಈ ಕಾರಣದಿಂದಾಗಿಯೇ ದೇಶಸುತ್ತಿನೋಡು; ಕೋಶ ಓದಿನೋಡು ಎಂಬ ಗಾದೆಯಮಾತು ರೂಢಿಗೆ ಬಂದಿದೆ. ಇಂದಿಗೂ ಜಗದ್ವ್ಯಾಪಿಯಾಗಿರುವ ಸಂಸ್ಕೃತಭಾಷೆಗೆ ಬಹಳ ಪ್ರಾಚೀನ ಕಾಲದಲ್ಲಿ ನಿರೂಪಿತವಾದ ನಿರುಕ್ತ ಎಂಬ ಅರ್ಥಕೋಶವನ್ನು ನಿರೂಪಿಸಿದ ಯಾಸ್ಕಾಚಾರ್ಯನ ಕಾಲದಿಂದ ಇಂದಿನ ವರೆವಿಗೂ ಜಗತ್ತಿನಲ್ಲಿ ಸಾವಿರಾರು ಭಾಷೆಗಳಿಗೆ ಲಕ್ಷಾಂತರ ನಿಘಂಟುಗಳು ರಚನೆಯಾಗಿವೆ. ಕನ್ನಡಭಾಷೆಯಲ್ಲಿ ಕಿಟೆಲ್ ಕೋಶವು ಪ್ರಸಿದ್ಧವಾಗಿತ್ತು. ಅನಂತರ ಹಲವಾರು ಜನಗಳು ಈ ಅರ್ಥಕೋಶದ ರಚನೆಯಲ್ಲಿ ಕೈಹಾಕಿರುವುದುಂಟು. ನಿಘಂಟು, ಶಬ್ದಕೋಶ, ಅರ್ಥಕೋಶ, ಶಬ್ದಾರ್ಥಚಿಂತಾಮಣಿ, ಪದಾರ್ಥಚಿಂತಾಮಣಿ ಮುಂತಾದ ಶಬ್ದಗಳೆಲ್ಲವೂ ನಾವು ಬಳಸುವ ಭಾಷೆಯ ಪದಗಳ ಅರ್ಥವನ್ನು ಸೂಚಿಸುವ ಡಿಕ್ಷ್‌ನರಿ ಎಂಬ ಶಬ್ದದವ್ಯಾಪ್ತಿಗೇ ಬರುತ್ತವೆ. ಇವುಮಾತ್ರವಲ್ಲ; ಸಮಯಾವಕಾಶವಿದ್ದು, ಲಭ್ಯವಿರುವ ಹಲವಾರು ಶಬ್ದಕೋಶಗಳನ್ನು ತೆರೆದು, ಅವುಗಳ ಅರ್ಥವಿವರಣೆಯನ್ನು ಗಮನಿಸಿದಾಗ, ಅಲ್ಲಿ ಕಾಣಬರುವ ಪ್ರತಿಯೊಂದು ಶಬ್ದದ ಅರ್ಥವ್ಯಾಪ್ತಿಯೂ ಒಂದಲ್ಲ ಒಂದು ರೀತಿಯಲ್ಲಿ ಪರಸ್ಪರ ಸಂಬಂಧ ಹೊಂದಿ ಎಲ್ಲವೂ ಒಂದೇ ಎಂಬುದು ಮನವರಿಕೆಯಾಗುತ್ತದೆ. ಅದನ್ನೇ ಶಬ್ದಬ್ರಹ್ಮವೆನ್ನುವುದು. ಅನಾದಿ, ಅನಂತಕಾಲಾವಾಧಿಯಲ್ಲಿ ಒಂದೇ ಒಂದಾಗಿರುವ ಪರಮಾತ್ಮವು ಜೀವಾತ್ಮವಾಗಿ, ಕೋಟ್ಯಾಂತರ ದೇಹಗಳ ರೂಪದಲ್ಲಿ ಪ್ರಕಟವಾಗಿರುವಂತೆ! ಸಹಸ್ರನಾಮಗಳಲ್ಲಿಯೂಕೂಡ ಇದೇ ಮಾತುಗಳು ವ್ಯಕ್ತವಾಗುತ್ತವೆ. ಅನೇಕಕೋಟಿಬ್ರಹ್ಮಾಂಡಜನನಿ ಆಬ್ರಹ್ಮಕೀಟ ಜನನಿ ಮುಂತಾದ ಪದಪುಂಜಗಳ ಅರ್ಥವು ಧ್ವನಿಸುವುದೂ ಇದನ್ನೇ. ಕನ್ನಡ ಭಾಷೆಗೆ ಸಂಬಂಧಿಸಿದ ಲಕ್ಷಾಂತರ ಪದಗಳ -ಶಬ್ದಗಳ ಅರ್ಥವಿವರಿಸಿರುವ ಮಹಾನ್ ಚೇತನ ಪ್ರೊ. ಜಿ, ವೆಂಕಟಸುಬ್ಬಯ್ಯನವರು. ಸಮಕಾಲೀನ ಸಾಹಿತ್ಯ ಕ್ಷೆತ್ರದಲ್ಲಿ ಹೆಚ್ಚು ಉಪಯೋಗಕ್ಕೆ ಬಂದು, ಹೆಚ್ಚು ಪ್ರಸಿದ್ಧಿಗೆ ಬಂದಿರುವ ಹಲವಾರು ಅರ್ಥಕೋಶಗಳನ್ನು ನಿರೂಪಿಸಿ ನಿಘಂಟುಬ್ರಹ್ಮ ಎಂದೇ ಪ್ರಖ್ಯಾತರಾಗಿರುವ ಈ ಮಹನೀಯರದು ಜಗದ್ವಿಖ್ಯಾತವಾದ ವ್ಯಕ್ತಿತ್ವ. ನಾಡಿನ ಜ್ಞಾನವೃದ್ಧರೂ, ವಯೋವೃದ್ಧರೂ ಆಗಿರುವ ಈ ಹಿರಿಯ ಚೇತನವು ಈಗ ಶತಾಯುಷಿ. ಇಂಥ ಮಹನೀಯರ ಸಂಪರ್ಕ ಹೊಂದಿರುವುದು ಸಾಧಾರ್ಥಿಯ ಸುಕೃತವಾಗಿದೆ.  
  ಸಿರಿಭೂವಲಯದ ಪರಿಚಯಕ್ಕೆ ಸೇರಿದ ಐದು ಕೃತಿಗಳ ಪ್ರಕಟಣೆಯಾದಮೇಲೆ, ಬೆಂಗಳೂರಿಗೆ ಹೋಗಿದ್ದಾಗ ನಾಡಿನ ಸಾಹಿತ್ಯಕ್ಷೇತ್ರದ ಹಿರಿಯ ಚೇತನ ಶ್ರೀ ಜಿ. ವೆಂಕಟಸುಬ್ಬಯ್ಯನವರನ್ನು ಭೇಟಿಯಾಗಲು ಹೋದೆ. ನನ್ನ ಸಾಹಿತ್ಯಿಕ ಚಟುವಟಿಕೆಯ ವಿಚಾರದಲ್ಲಿ ಸುಮಾರು ನಲವತು ವರ್ಷಗಳಿಂದ ಪರಿಚಿತರಾಗಿ ಹಿತೈಷಿಯಾಗಿರುವ ಈ ಮಹನೀಯರನ್ನು ಕಳೆದ ಸುಮಾರು ೧೪ ವರ್ಷಗಳಿಂದ ಸಂಪರ್ಕಿಸಿರಲಿಲ್ಲ!  ಸಿರಿಭೂವಲಯಸಾರ ದಲ್ಲಿನ ನನ್ನ ನಿಷ್ಟುರವಾದ ಬರಹದಿಂದ ಅವರಿಗೆ ಮನನೊಂದಿರುವ ವಿಚಾರದಲ್ಲಿ ನನಗೆ ಸಂಶಯವೇನಿರಲಿಲ್ಲ. ಹೀಗಿದ್ದೂ ಮನೆಗೆ ಹೋಗಿ, ಕರೆಗಂಟೆಯ ಗುಂಡಿ ಒತ್ತಿದಾಗ, ಸ್ವತಃ ತಾವೇ ಬಂದು ಬಾಗಿಲು ತೆರೆದು, ಸಾಂಪ್ರದಾಯಿಕವಾಗಿ ನಾನು ನಮಸ್ಕರಿಸುವ ಮೊದಲೇ ಓಹೋ, ಬನ್ನಿ ಬನ್ನಿ. ಬಹಳದಿನಗಳಮೇಲೆ ಹಳೇ ಪರಿಚಯದವರನ್ನು ನೋಡಿದಂತಾಯ್ತು ಎಂದು ನಗುಮೊಗದಿಂದ ಸ್ವಾಗತಿಸಿದರು! ನಿಜಕ್ಕೂ ನನಗೆ ಬಹಳ ನಾಚಿಕೆಯಾಯ್ತು. ಸಾಕಷ್ಟು ಸಮಯ ಮಾತನಾಡಿದಮೇಲೆ, ನಾನು ಬರೆದಿರುವ ಸಿರಿಭೂವಲಯದ ಪರಿಚಯ ಕೃತಿಗಳನ್ನು ಅವರಿಗೆ ಒಪ್ಪಿಸಿದೆ.  ಏನಪ್ಪ, ಇಷ್ಟು ಅಲ್ಪ ಕಾಲದಲ್ಲಿ ಇಷ್ಟೊಂದು ಕೃತಿಗಳನ್ನು ಪ್ರಕಟಿಸಿದ್ದೀಯೆ. ಕುಮುದೇಂದುವನ್ನು ಕುರಿತು ಒಂದು ಪುಟ್ಟ ಗ್ರಂಥಾಲಯವೇ ಸಿದ್ಧವಾಗಿದೆ! ಇರಲೀ ನಿಧಾನವಾಗಿ ಓದಿ ನನ್ನ ಅನಿಸಿಕೆಯನ್ನು ಬರೆಯುತ್ತೇನೆ ಎಂದು ಆಶಿರ್ವದಿಸಿದರು. ಅಲ್ಲಿಂದ ಮುಂದೆ ಸಿರಿಭೂವಲಯಕ್ಕೆ ಸಂಬಂಧಿಸಿದ ನನ್ನ ಚಟುವಟಿಕೆಗಳನ್ನೆಲ್ಲ ಅವರಿಗೆ ವರದಿ ಮಾಡುವುದು ರೂಢಿಯಾಯಿತು. ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ನನ್ನ ಶ್ರೀಮತಿಯು ಪ್ರಕಟಿಸಿರುವ ಯಾವ ಕೃತಿಯೂ ಸರ್ಕಾರದ ಯಾವುದೇ ಇಲಾಖೆಯ ಗ್ರಂಥಾಲಯಕ್ಕೆ ಆಯ್ಕೆಯಾಗದೇ ತಿರಸ್ಕೃತವಾಗಿರುವ ಸಂಗತಿ ಅವರಿಗೆ ಅಚ್ಚರಿಯನ್ನುಂಟುಮಾಡಿತು. ಅದಕ್ಕೆ ಸಂಬಂಧಿಸಿದಂತೆ ನಾನು ಗಮನವನ್ನೇ ಹರಿಸಿರಲಿಲ್ಲ!  
  ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ನನ್ನ ಮುಂದಿನ ಹೆಜ್ಜೆಯಾಗಿ ಸಿರಿಭೂವಲಯಸಾಗರರತ್ನಮಂಜೂಷ ವನ್ನು ನಿರೂಪಿಸಿರುವ ವಿಚಾರ ತಿಳಿಸಿ, ಅದರ ಪ್ರಮುಖ ಮಾಹಿತಿಗಳನ್ನು ಅವರಿಗೆ ಪ್ರತ್ಯೇಕವಾಗಿ ಸಿದ್ಧಪಡಿಸಿ, ಓದಲು ಸಲ್ಲಿಸಿ, ಈ ಪ್ರಯತ್ನಕ್ಕೆ ನಿಮ್ಮಿಂದ ಮುನ್ನುಡಿಯಾಗಬೇಕೆಂದು ವಿನಂತಿಸಿದೆ. ಸಂತೋಷದ ಮುಗುಳ್ನಗೆ ಸೂಸಿದ ಈ ಶತಾಯುಷಿಯು ಯಾವುದೇ ಆಕ್ಷೇಪ ಸೂಚಿಸದೇ ನನ್ನ ವಿಂತಿಗೆ ಸಮ್ಮತಿಸಿದರು! ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ಈಗ ತಮ್ಮ ಅಂತರಂಗದ ಭಾವನೆಗಳಿಗೆಲ್ಲ ಅಕ್ಷರ ರೂಪನೀಡಿದ ಮೌಲಿಕವಾದ ಮುನ್ನುಡಿಗೆ ಅಂಕಿತವಿಟ್ಟು ನನ್ನ ಈ ಪ್ರಯತ್ನವನ್ನು ತುಂಬು ಹೃದಯದಿಂದ ಆಶೀರ್ವದಿಸಿರು. ಮೊದಲಿಗೆ ಈ ಸಂತಸದ ಸುದ್ದಿ ತಿಳಿದ ನನ್ನ ಆತ್ಮೀಯ ಗೆಳೆಯರಬಳಗದ ಶ್ರೀ ನೀರಗುಂದ ಕೇಶವಮೂರ್ತಿರಾವ್ ಅವರಂತೂ ನಿನ್ನ ಮೂರುದಶಕಗಳ ಪ್ರಯತ್ನವು ಸಾರ್ಥಕವಾಯಿತು. ಶೀಘ್ರಕೋಪಿಯಾದ ವಿಶ್ವಾಮಿತ್ರನು ಸದಾ ಶಾಂತಿಸ್ವರೂರಾದ ವಸಿಷ್ಠರಿಂದ ಬ್ರಹ್ಮರ್ಷಿ ಪದವಿ ಪಡೆದಂತಾಯ್ತು ಎಂದು ಅಭಿನಂದಿಸಿದರು. ಈವಿಚಾರ ಕೇಳಿತಿಳಿದು ಶತಾಯುಷಿಯು ಸಂತೋಷದಿಂದ ಮನಃಪೂರ್ವಕವಾಗಿ ನಕ್ಕದ್ದೂ ಆಯಿತು. ಜೀವನದಲ್ಲಿ ಇದಕ್ಕಿಂತ ಹೆಚ್ಚಿನ ಸಂತೋಷ, ಸಂಭ್ರಮ ಇನ್ನೇನಿದೆ?! 
  ಸಿರಿಭೂವಲಯ ಕುರಿತು ಸುಧಾರ್ಥಿಯು ನಿರೂಪಿಸಿರುವ ಪರಿಚಯ ಕೃತಿಗಳಲ್ಲಿ ಕಿರೀಟಪ್ರಾಯವಾದ ಸಿರಿಭೂವಲಯಸಾಗರರತ್ನಮಂಜೂಷವು ಈ ಮಹನೀಯರ ಮುನ್ನುಡಿಯಿಂದಾಗಿ ತನ್ನದೆ ಆದ ಘನತೆ, ಗಾಂಭೀರ್ಯವನ್ನು ಪಡೆದಂತಾಗಿದೆ. ನನ್ನ ಪಾಲಿಗೆ ಇದು ಜಗತ್ತಿನ ಯಾವುದೇ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿಗಿಂತಲೂ ಮಿಗಿಲಾದುದು. ಯಾವುದೇ ಪ್ರತಿಷ್ಠಿತ ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಪ್ರಶಸ್ತಿಗಿಂತಲೂ ಉನ್ನತವಾದುದು. ನನ್ನ ಜೀವನದ ಸಾರ್ಥಕತೆ ನನಗೆ ಲಭಿಸಿದೆ. ಇದಕ್ಕಿಂತ ಮಿಗಿಲಾದುದು ನನಗೆ ಏನೂಯಿಲ್ಲ. ಈ ಸಾರ್ಥಕತೆಯನ್ನು ಅನುಗ್ರಹಿಸಿದ್ದಕ್ಕಾಗಿ ನಾನು ಈ ಶತಾಯುಷಿಗೆ ಈ ಸಿರಿಭೂವಲಯಸಾಗರರತ್ನಮಂಜೂಷವನ್ನು ಸಮರ್ಪಿಸುವದರೊಂದಿಗೆ,  ನನ್ನ ಅನಂತ ವಂದನೆಗಳನ್ನರ್ಪಿಸುತ್ತಿದ್ದೇನೆ. 
  ಸಿರಿಭೂವಲಯವು ಮೂಲತಃ ಒಂದು ಪದ್ಧತಿಗ್ರಂಥ. ಅಂದರೆ, ಕನ್ನಡ; ಪ್ರಾಕೃತ; ಸಂಸ್ಕೃತಭಾಷಾ ಮಿಶ್ರಿತ ಕಾವ್ಯವೆಂಬ ಆಧಾರದಲ್ಲಿ ಅಶ್ವಗತಿಯ ಅಂತರ್ಸಾಹಿತ್ಯವನ್ನು ಪ್ರತ್ಯೇಕಿಸುವಾಗ, ಅಲ್ಲಿನ ಶಬ್ದಗಳ ಆಧಾರದಲ್ಲಿ ಕನ್ನಡ,ಪ್ರಾಕೃತ,ಸಂಸ್ಕೃತಭಾಷಾ ಅಂತರ್ಸಾಹಿತ್ಯಎಂದು ಸೂಚಿಸಲಾಗಿದೆ. ಆದಾಗ್ಯೂ ಅಲ್ಲಿ ಮಾಗಧಿ, ಅರ್ಧಮಾಗಧಿ, ಶೂರಸೇನಿ, ಪೈಶಾಚಿಕ, ಅಪಭ್ರಂಶ ಇತ್ಯಾದಿ ಬೇರೆಬೇರೆ ಭಾಷೆಗಳ ಶಬ್ದಗಳೂ ಅಡಕವಾಗಿರುವ ಸಾಧ್ಯತೆ ಉಂಟು. ಅಂಥ ಶಬ್ದಗಳ ಸಮೂಹವನ್ನು ಪ್ರತ್ಯೇಕಿಸಿ ಅವು ಯಾವ ಭಾಷೆಗೆ ಸೇರಿದುವುಗಳು ಎಂಬುದನ್ನು ತಿಳಿದವರು ಗುರುತಿಸಿ, ಅದರ ಪರಿಚಯ ಮಾಡಿಕೊಡಬೇಕಾಗಿದೆ. ಮೂಲ ಸಾಹಿತ್ಯದಲ್ಲಿ ಕೆಲವು ಭಾಗವನ್ನು ಬಿಟ್ಟು, ಒಟ್ಟುಸೇರಿರುವ ಈ ಅಂತರ್ಸಾಹಿತ್ಯದಲ್ಲಿ ಬೇರೆಭಾಷೆಯ ಸಾಹಿತ್ಯಕ್ಕಾಗಿ ಹುಡುಕಾಟ ನಡೆಸುವವರಿಗೆ ನೆರವಾಗಲೆಂಬ ಉದ್ದೇಶದಿಂದ ಈ ಪ್ರಯತ್ನನಡೆಸಲಾಗಿದೆ. 
ಕೆ. ಅನಂತಸುಬ್ಬರಾಯರ ಸಮರ್ಪಕ ಮಾರ್ಗದರ್ಶನದ ನೆರವಿದ್ದೂ, ಸಿರಿಭೂವಲಯದ ೧೯೫೩ರ ಪ್ರಥಮ ಮುದ್ರಣದ ೩೩ ಅಧ್ಯಾಯಗಳನ್ನು ಓದಿ ಅರ್ಥಮಾಡಿಕೊಂಡು, ಅದರಿಂದ ಪುನರುತ್ಪತ್ತಿಯಾಗುವ ಅಂತರ್ಸಾಹಿತ್ಯವನ್ನು ಕ್ರಮವರಿತು ಪ್ರತ್ಯೇಕವಾಗಿ ನಿರೂಪಿಸಿ, ಮುದ್ರಣಮಾಡಿಸುವ ಕಾರ್ಯಕ್ಕೆ ಸುಮಾರು ೨೭ ವರ್ಷಗಳ ಕಾಲಾವಧಿ ಹಿಡಿದಿತ್ತು. ಈಗ ಮುಂದಿನ ೨೬ ಅಧ್ಯಾಯಗಳ ಕಾರ್ಯವನ್ನು ಕೈಗೆತ್ತಿಕೊಂಡಾಗ, ಅಸಮರ್ಪಕವಾದ ಕೈಬರಹದ ಕರಡುಪ್ರತಿಯನ್ನು ಮುಂದಿರಿಸಿಕೊಂಡು ಅಧ್ಯಯನ ಮಾಡುವುದು ಅಸಾಧ್ಯವಾದಕಾರ್ಯವೆಂದು ಭಾಸವಾಯಿತು. ಅಲ್ಲಿನ ಅಶ್ವಗತಿಯ ಗುರುತುಗಳನ್ನು ಗಮನಿಸಿದಾಗ, ಯಾವ ಅಕ್ಷರವನ್ನು ತೆಗೆದುಕೊಳ್ಳುವುದು? ಯಾವ ಅಕ್ಷರವನ್ನು ಬಿಡುವುದು? ಎಂಬ ಸಮಸ್ಯೆ ಎದುರಾಯಿತು. ಇದರೊಂದಿಗೆ ಝರಾಕ್ಸ್ ಪ್ರತಿಯಲ್ಲಿನ ಕೈಬರಹದಲ್ಲಿ ಹಲವೆಡೆ ಕ/ತ, ಅ/ಲ; ರ/ಲ, ಪ/ಷ, ಮ/ಯ, ಲಿ/ತಿ/ರೆ, ಉ/ಲು ರ/ಗ ಮುಂತಾದ ಅಕ್ಷರಗಳನ್ನು ಸರಿಯಾಗಿ ಗುರುತಿಸುವುದು ಕಠಿಣವಾಗಿತ್ತು. ಅಂಥಲ್ಲಿ ಕೆಲವು ಅಕ್ಷರ ದೋಷಗಳು ಉಳಿದಿರುವ ಸಾಧ್ಯತೆ ಉಂಟು. ಅಂತರ್ಸಾಹಿತ್ಯವನ್ನು ಓದುವಾಗ ಕೆಲವೆಡೆ ಇಂಥ ತಪ್ಪುಗಳು ತಕ್ಷಣವೇ ಗಮನಕ್ಕೆ ಬಂದಿವೆ ಸಾಧ್ಯವಿರುವ ಮಟ್ಟಿಗೆ ಅವುಗಳನ್ನು ತಿದ್ದಲಾಗಿದೆ.
    ಈ ಕಾರ್ಯವನ್ನು ಸಾಧಿಸಲೇಬೇಕೆಂಬ ಛಲದಿಂದ, ನನ್ನಿಂದ ಸಾಧ್ಯವಾದಷ್ಟು ಕಾರ್ಯಪ್ರಗತಿಯನ್ನು ಸಾಧಿಸಿದ್ದೇನೆ. ಈ ಕಾರ್ಯಸಾಧಿಸಲು ಸಿರಿಭೂವಲಯಸಾರ  ನಿರೂಪಣೆಯ ಕಾಲಾವಧಿಯಂತೆಯೇ ಲೆಕ್ಕಹಾಕಿದರೆ,  ೧೫-೨೦ ವರ್ಷಗಳ ಕಾಲಾವಧಿಯಾದರೂ ಬೇಕೇನೋ ಎನಿಸಿತ್ತು. ಆದರೆ ಜೀವನಾವಧಿಯು ಕೊನೆಯಾಗುವುದರೊಳಗೆ ಈ ಕಾರ್ಯಕ್ಕೆ ಒಂದು ಖಚಿತ ಸ್ವರೂಪವನ್ನು ನೀಡಲೇಬೇಕೆಂಬ ಆತಂರಿಕ ಒತ್ತಡದ ಕಾರಣದಿಂದಾಗಿ, ಹಗಲು ಇರುಳಿನ ಪರಿವೆಯೂ ಇಲ್ಲದೇ ಅಧ್ಯಯನವು ಮುನ್ನಡೆಯಿತು. ಅಲ್ಲಿ ಎದುರಾದ ಅಡ್ಡಿ ಆತಂಕಗಳ ವಿವರವು ಇಲ್ಲಿ ಅನಗತ್ಯವಾದುದು. ನನ್ನ ನಿರೀಕ್ಷೆಮೀರಿ ಕೇವಲ ೧೫-೨೦ ತಿಂಗಳ ಅವಧಿಯೊಳಗಾಗಿಯೇ ಈ ಅಚ್ಚರಿಯ ಕಾವ್ಯದ ಮುಂದಿನ ಪರಿಚಯವು ಸಿರಿಭೂವಲಯಸಾಗರರತ್ನಮಂಜೂಷ ಎಂಬ ರೂಪದಲ್ಲಿ ಒಂದು ಸೀಮಿತ ಹಂತದ ಪರಿಧಿಯನ್ನು ತಲುಪಿತು. ಇದು ನಿಜಕ್ಕೂ ನನಗೆ ನೆಮ್ಮದಿಯ ವಿಚಾರವಾಗಿದೆ. ಈ ಪರಿಚಯಕೃತಿ ನಿರೂಪಣೆಯ ಕಾರ್ಯದಲ್ಲಿ ಶ್ರಮಿಸಿದವನು ಈಗ ನಾನೊಬ್ಬನೇ ಅಲ್ಲ. ನನ್ನ ಅರ್ಧಾಂಗಿ ಶ್ರೀಮತಿ ಗಿರಿಜೆಯಪಾಲೂ ಈ ಕಾರ್ಯದಲ್ಲಿ ನನಗಿಂತಲೂ ಮಿಗಿಲಾದುದು ಎಂದರೆ, ಅದು ಅತಿಶಯೋಕ್ತಿಯಲ್ಲ. ಮನೆಗೆಲಸದ ದಿನನಿತ್ಯದ ಕಾಯಕವನ್ನು ನಿರ್ವಹಿಸುವುದರೊಂದಿಗೆ ಈ ಸಾಧ್ವಿಯು ಅಕ್ಷರಶಃ ಹಗಲಿರುಳೂ ಶ್ರಮಿಸಿ, ೨೫ ಅಧ್ಯಾಯಗಳ ಸ್ತಂಭಕಾವ್ಯರೂಪದ ಅಂತರ್ಸಾಹಿತ್ಯವನ್ನು ಒಂದೊಂದೇ ಅಕ್ಷರವಾಗಿ ಬಿಡಿಸಿ; ಜೋಡಿಸಿಕೊಟ್ಟು, ಪರಿಚಯ ಕೃತಿ ನಿರೂಪಣೆಯ ಕಾರ್ಯದಲ್ಲಿ ನೆರವಾದುದು ನಿಜಕ್ಕೂ ಶ್ಲಾಘನೀಯವಾದ ಕಾರ್ಯ. ಈ ನಿರೂಪಣೆಯಲ್ಲಿ ಸುಧಾರ್ಥಿಯ ಶ್ರಮಕ್ಕೆ ಸರಿಮಿಗಿಲಾಗಿ ಗಿರಿಜೆಯೂ ಪಾಲುದಾರಳೆಂದು ಸಂಕೋಚವಿಲ್ಲದೇ ಸಂತೋಷದಿಂದ ಸೂಚಿಸುತ್ತಿದ್ದೇನೆ. ಆದರೆ ಒಂದೇ ಒಂದು ಪ್ರಮುಖ ಕೊರತೆ. ನನ್ನಂತೆಯೇ ಈಕೆಗೂ ವಿಶ್ವವಿದ್ಯಾಲಯದ ಶಿಕ್ಷಣಾರ್ಹತೆಯ ಮುದ್ರೆ ಇಲ್ಲ!. 
  ಸಿರಿಭೂವಲಯಸಾರವನ್ನು ನೋಡಿದ, ಓದಿದ ಕೆಲವು ಅಭಿಮಾನಿಗಳು ನನ್ನ ಬರವಣಿಗೆಯ ವಿಚಾರವಾಗಿ ಮೆಚ್ಚುಗೆಯ ಮಾತುಗಳನ್ನು ಸೂಚಿಸಿರುವುದಿದೆ. ಅಲ್ಲಿನ ವಿಷಯವ್ಯಪ್ತಿಯನ್ನು ಗಮನಿಸಿದ ಕೆಲವರು ನೀವು ಎಷ್ಟೊಂದು ಕಷ್ಟಪಟ್ಟು ಈ ಗ್ರಂಥ ರಚಿಸಿದ್ದೀರಿ ಎಂದಿರುವುದಿದೆ. ಇನ್ನು ಕೆಲವರು ನೀವಾಗುವ ಹೊತ್ತಿಗೆ ಈ ಗ್ರಂಥ ರಚಿಸಿದ್ದೀರಿ, ನಮಗೆ ಸಾಧ್ಯವಿಲ್ಲ ಎಂದಿರುವುದುಂಟು. ಮತ್ತೆ ಕೆಲವರು ಕಾಲೇಜು ಶಿಕ್ಷಣವೂ ಇಲ್ಲದ ಈ ಮನುಷ್ಯ ಇದನ್ನು ಹೇಗೆ ಬರೆದ?!  ಎಂದು ಅಚ್ಚರಿಪಟ್ಟಿರುವುದಿದೆ. ಆತ್ಮೀಯ ಗೆಳೆಯ ಶ್ರೀ ಹೆಚ್.ಎಂ ಸದಾನಂದ ಅವರಂತೂ  ಸುಧಾರ್ಥಿಯನ್ನು ಬಿಟ್ಟರೆ ಬೆರೆ ಯಾರೂ ಈ ಪರಿಚಯಗ್ರಂಥಗಳನ್ನು ಇಷ್ಟು ಶ್ರಮವಹಿಸಿ, ಇಷ್ಟು ಸಮರ್ಪಕವಾಗಿ ರೂಪಿಸಲು ಸಾಧ್ಯವೇ ಇಲ್ಲ ಎಂದು ಮೆಚ್ಚುಗೆ ಸೂಚಿಸಿರುವುದಿದೆ. ಇವರೆಲ್ಲರ ಅಂತರಂಗದ ಭಾವನೆಯನ್ನೂ ಸುಧಾರ್ಥಿಯು ಅರ್ಥಮಾಡಿಕೊಳ್ಳಬಲ್ಲ. ಸರಿಯಾದ ವಿಳಾಸವಿದ್ದರೂ ಕೆಲವೆಡೆ ನಮಗೆ ಬೇಕಾದವರ ಮನೆಯನ್ನು ಹುಡುಕುವುದು ಶ್ರಮದ ಕೆಲಸ. ಕಾಡಿನಲ್ಲಿಓಡಾಡಿ ಅನುಭವವಿಲ್ಲದವರು ಅಲ್ಲಿ ಒಳಗೆಸೇರಿದರೆ, ಸುರಕ್ಷಿತವಾಗಿ ಹೊರಬರುವುದು ಬಹಳ ಕಷ್ಟ. ಆದರೂ ಈ ಸಿರಿಭೂವಲಯದ ಕೆಲಸ ಸುಧಾರ್ಥಿಗೆ ಬಹಳ ಇಷ್ಟ! 
  ಈ ಸಿರಿಭೂವಲಯದ ಸಾಗರದಲ್ಲಿ ಸುಳಿವು ಸಿಗದಂತೆ ಒಳಗೆ ಅಡಗಿಕುಳಿತ ಒಂದೊಂದೇ ಅಕ್ಷರದ ಜಾಡನ್ನು ಹಿಡಿದು ಅವುಗಳನ್ನು ಒಂದೆಡೆ ಕಲೆಹಾಕಿ, ಅವುಗಳನ್ನು ವಿಂಗಡಿಸಿ, ಅರ್ಥಪೂರ್ಣವಾಗಿ ಸರಳವಾಗಿ ಪರಿಚಯಿಸುವ ಕಾರ್ಯವು ಸುಲಭವಾದುದಲ್ಲ; ನಿಜ. ಆದರೆ ಆಸಕ್ತಿಯಿದ್ದು, ಇಚ್ಛಾಶಕ್ತಿಯನ್ನು ಹೊಂದಿ, ಕ್ರಿಯಾಶಕ್ತಿಯನ್ನು ಸೂಕ್ತವಾಗಿ ಬಳಸಿಕೊಳ್ಳುವ ಜ್ಞಾನಶಕ್ತಿ ಉಳ್ಳವರಾದರೆ, ಅವರು ಸುಧಾರ್ಥಿಗಿಂತಲೂ ಸಾಮಾನ್ಯವ್ಯಕ್ತಿಗಳಾಗಿದ್ದರೂ, ಒಬ್ಬಿರಲ್ಲ; ಹಲವಾರು ಜನಗಳು ಈ ಸಾಧನೆಯನ್ನು ಸಾಧಿಸಬಲ್ಲರೆಂಬ ನಂಬಿಕೆ ಸುಧಾರ್ಥಿಗಿದೆ. ಇದುವರೆವಿಗೂ ಯಾರೊಬ್ಬರೂ ಸೂಕ್ತವಾಗಿ ಕೈಹಾಕದೇ ಇದ್ದ ಕೆಲಸಕ್ಕೆ ಈಗ ಸುಧಾರ್ಥಿಯು ಕೈಹಾಕಿ ಸಾಧ್ಯವಿವಷ್ಟು ಸಾಧನೆ ಮಾಡಿದ್ದಾಗಿದೆ. ಇಲ್ಲವಾಗಿದ್ದರೆ, ಇನ್ನಾರಾದರೂ ಈ ಕೆಲಸಕ್ಕೆ ಕೈಹಾಕಿ ಯಶಸ್ಸು ಪಡೆಯುತ್ತಿದ್ದುದು ಖಚಿತ. ಪ್ರಕೃತ ಸುಧಾರ್ಥಿಯು ಈ ಕಾರ್ಯಕ್ಕೆ ನಿಮಿತ್ತಮಾತ್ರವೇ ವಿನಃ, ಅವನಿಲ್ಲದಿದ್ದರೆ ಇದು ಸಾಧ್ಯವೇ ಆಗುತ್ತಿರಲಿಲ್ಲ ಎಂಬ ಭಾವನೆಯು ಸರ್ವಥಾ ಸಲ್ಲದು. ಈಗಲೂ ಅಷ್ಟೇ, ಸುಧಾರ್ಥಿಯ ಕಾಲಮುಗಿದಕೂಡಲೇ ಬೇರೊಬ್ಬರು ಈ ಕಾರ್ಯವನ್ನು ಮುಂದುವರೆಸಲೇಬೇಕು. ಮುಂದುವರೆಸುತ್ತಾರೆ. ಶ್ರೀಕಂಠಯ್ಯನವರಿಗೆ ಅಕ್ಷರಭೂವಲಯದ ಮಾರ್ಗದರ್ಶನವಿದ್ದಂತೆ; ಕೆ. ಅನಂತಸುಬ್ಬರಾಯರಿಗೆ ಶ್ರೀಕಂಠಯ್ಯನವರ ಮಾರ್ಗದರ್ಶನವಿದ್ದಂತೆ, ಸುಧಾರ್ಥಿಗೆ ಅನಂತಸುಬ್ಬರಾಯರ ಮಾರ್ಗದರ್ಶನವಿದ್ದಂತೆ, ಸುಧಾರ್ಥಿಯ ಕೃತಿಗಳು ಮುಂದಿನವರಿಗೆ ದಿಕ್ಸೂಚಿಯಾಗಿ, ಅವರು ಇನ್ನಷ್ಟು ಹೆಚ್ಚಿನ ಸಾಧನೆ ಸಾಧಿಸಲೆಂದು ನಾನು ಆಶಿಸುತ್ತೇನೆ. 
  ೧೯೫೩ ರಲ್ಲಿ ಸರ್ವಾರ್ಥಸಿದ್ಧಿಸಂಘವು ಸಿರಿಭೂವಲಯದ ಅಕ್ಷರ ಅವತರಣಿಕೆಯನ್ನು ರೂಪಿಸಿದಾಗ, ಕರ್ಲಮಂಗಲಂ ಶ್ರೀಕಂಠಯ್ಯನವರ ಅಪಾರ ವಿದ್ವತ್ತು ಹಾಗೂ ಯುಗಾಂತರ ಮುದ್ರಣಾಲಯದವರ ತಾಳ್ಮೆ, ಶ್ರದ್ಧೆ ಹಾಗೂ ಕೌಶಲ್ಯದ ಪರಿಣಾಮವಾಗಿ ಮೂಲಸಾಹಿತ್ಯದಲ್ಲಿ ಸಂಸ್ಕೃತ; ಪ್ರಾಕೃತ ಇತ್ಯಾದಿ ಅನ್ಯ ಭಾಷೆಗಳ ಸಾಹಿತ್ಯವನ್ನು ಗುರುತಿಸಲು ಓದುಗರಿಗೆ ಸುಲಭವಾಗುವಂತೆ ಹಲವಾರು ಲೇಖನ ಚಿಹ್ನೆಗಳನ್ನು ಬಳಸಿ, ಬಹಳ ಸುಂದರವಾಗಿ ಮದ್ರಣಮಾಡಲಾಗಿದೆ. ನನಗೆ ಆಮಟ್ಟದ ಸಮರ್ಥ್ಯವಿಲ್ಲ. ಈ ನನಗೆ ಸಾಧ್ಯವಾದಮಟ್ಟಿಗೆ ಮೂಲಸಾಹಿತ್ಯದ ವಿನ್ಯಾಸವನ್ನು ರೂಪಿಸಿದ್ದೇನೆ. ಸಮರ್ಥರಾದ ಮುಂದಿನ ಆಸಕ್ತ ಸಂಶೋಧಕರು ಈ ನ್ಯೂನತೆಯನ್ನು ಪರಿಷ್ಕರಿಸಬೇಕಾಗಿ ವಿನಂತಿ.
  ಸಿರಿಭೂವಲಯವನ್ನು ಕುರಿತು ಕನ್ನಡ ನಾಡಿನಲ್ಲೇ ಸಾಕಷ್ಟು ಅನಾದರಣೆಯಿರುವುದು ವಾಸ್ತವ ವಿಚಾರ. ವಿಶ್ವವಿದ್ಯಾಲಯಗಳೂ ಈ ಅಚ್ಚರಿಯ ಕೃತಿಯಿಂದ ದೂರವುಳಿದಿವೆ. ಇಂಥ ಪರಿಸರದಲ್ಲಿ  ಹಂಪಿಯ ಕನ್ನಡವಿಶ್ವವಿದ್ಯಾಲಯದವರು ಈ ವಿಚಾರದಲ್ಲಿ ಈಚೆಗೆ ಆಸಕ್ತಿವಹಿಸಿರುವುದು ಸಂತೋಷದ ಸಂಗತಿಯಾಗಿದೆ. ಇಲ್ಲಿನ ಆಡಳಿಯವು ಸಿರಿಭೂವಲಯ ಕುರಿತು ಮಹಾಪ್ರಬಂಧ ರಚಿಸುವವರಿಗೆ ಸೂಕ್ತ ಅವಕಾಶಕಲ್ಪಿಸಿರುವುದು ಹೆಮ್ಮೆಯ ವಿಚರ. ಉಳಿದೆಲ್ಲ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗವೂ ಇತ್ತ ಗಮನ ಹರಿಸಿ, ಸಿರಿಭೂವಲಯದ ಅಧ್ಯಯನವನ್ನು ತಮ್ಮ ಪಠ್ಯಕ್ರಮದಲ್ಲಿ ಅಳವಡಿಸುವತ್ತ ಗಮನ ಹರಿಸಿದರೆ, ಮುಂದಾದರೂ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಸಿರಿಭೂವಲಯದ ವ್ಯಾಪಕವಾದ ಅಧ್ಯಯನಕ್ಕೆ ಅವಕಾಶ ಲಭಿಸಲು ಸಾಧ್ಯವಾದೀತು. 
  ಈ ಪರಿಚಯಕೃತಿಯ ರಚನೆಯಲ್ಲಿ ನೆರವಾದವರಿಗೆ ಕೃತಜ್ಞತೆಯನ್ನರ್ಪಿಸುವುದು ಕೃತಿಕರ್ತೃವಿನ ಆದ್ಯಕರ್ತವ್ಯ. ಈ ದಿಸೆಯಲ್ಲಿ ನಾನು ಕೃತಜ್ಞತೆ ಸೂಚಿಬೇಕಾದುದು ನನ್ನ ಈ ಪ್ರತ್ನಕ್ಕೆ ಮೂಲಕರಣರಾಗಿ, ನನಗೆ ಸಿರಿಭೂವಲಯದ ಮೂಲಕೃತಿಯ ಝೆರಾಕ್ಸ್ ಪ್ರತಿಯನ್ನು ಅನಿರೀಕಿತವಾಗಿ, ಅಯಾಚಿತವಾಗಿ ತಂದು ತಲುಪಿಸಿದ ಅಪರಿಚಿತ ಮಿತ್ರರೊಬ್ಬರಿಗೆ. -ಅವರು ಅಪರಿಚಿತರಾಗಿಯೇ ಉಳಿಯುವಂತಾದುದು ನನಗೆ ಖೇದದ ಸಂಗತಿಯಾದರೂ- ನನ್ನ ಈ ಪ್ರಯತ್ನಕ್ಕೆ ಮೂಲಕಾರಣರಾದ ಅವರಿಗೆ ನನ್ನ ಹೃದಯಪೂರ್ವಕ ನಮನಗಳನ್ನರ್ಪಿಸುತ್ತಿದ್ದೇನೆ.   
  ಈ ಅಪರಿಚಿತ ಮಿತ್ರನಿಂದ ದೊರೆತ ಅಸಮರ್ಪಕವಾದ ಪ್ರತಿಯನ್ನು ಸುವ್ಯವಸ್ಥಿತಗೊಳಿಸುವಲ್ಲಿ ನೆರವಾಗುವುದರೊಂದಿಗೆ, ತಮ್ಮ ಸಂಶೋಧನಾ ಪ್ರಬಂಧ ರಚನೆಗಾಗಿ, ತಾವು ಅಧಿಕೃತವಾಗಿ ನಿಗಧಿತ ಶುಲ್ಕತೆತ್ತು  ದೆಹಲಿಯ ಪಾಚ್ಯಪತ್ರಾಗಾರದಿಂದ ಸಂಗ್ರಹಿದ ಸಿರಿಭೂವಲಯದ ಮೂಲಪ್ರತಿಯ ಝೆರಾಕ್ಸ್ ನಕಲನ್ನು ನನ್ನ ಪರಿಶೀಲನೆಯ ಕಾರ್ಯಕ್ಕೆ ಕೆಲವು ಸಮಯ ಎರವಲು ನೀಡಿದ ಆತ್ಮೀಯ ಮಿತ್ರ ಶ್ರೀ ಎಚ್. ಎಂ. ಸದಾನಂದರಿಗೆ, ತಾವು ಇಂದೂರಿನ ಕುಂದ ಕುಂದ ಜ್ಞಾನಪೀಠದ ಪದಾಧಿಕಾರಿಗಳಿಂದ ಪಡೆದು ತಂದ ಸಿರಿಭೂವಲಯದ ಅಕ್ಷರಪ್ರತಿ ಹಾಗೂ ಅಂಕಪ್ರತಿಯನ್ನು ನನ್ನ ಪರಿಶೀಲನೆಗೆ ಒದಗಿಸುವ ಮೂಲಕ ಈ ಮಹತ್ಕಾರ್ಯಕ್ಕೆ ನೆರವಾದ ಹಿರಿಯ ಮಿತ್ರ, ವೇದಗಣಿತ ತಜ್ಞ ಶ್ರೀ ಎಂ.ಕೆ. ಶಿವಪ್ಪನವರಿಗೆ, ಎಂದಿನಂತೆ ಇಂದಿಗೂ ನನ್ನ ಈ ಸಾಹಿತ್ಯಿಕ ಸಾಧನೆಯ ಆರ್ಥಿಕ ಸಾಮಥಕ್ಕೆ ಸಹಕಾರಿಯಾಗಿರುವ ಆತ್ಮೀಯ ಮಿತ್ರ ಶ್ರೀ ಯತಿರಾಜುಲುನಾಯ್ಡು ಹಾಗೂ ಅವರ ಕುಟುಂಬಕ್ಕೆ ನನ್ನ ಅನಂತ ವಂದನೆಗಳು. 
  ಹಿರಿಯಮಿತ್ರ ಶ್ರೀ ವೆಂಕಟರಮಣಯ್ಯನವರಿಗೆ; ಬೆಳಗಾವಿಯ ಶ್ರೀ ಧರಣೇಂದ್ರಕುಮಾರ್, ಹಾಗೂ ಪತ್ರಿಕೋದ್ಯೋಗಿ ಮಿತ್ರರು- ಮೂಲತಃ ವಕೀಲರಾದ ಗೆಳೆಯ ಶ್ರೀ ಎಂ.ವಿ.ಆರ್. ಅವರಿಗೆ, ವೈದ್ಯರೂ ಬರಹಗಾರರೂ ಆದ  ಡಾ|| ಪ್ರದೀಪಕುಮಾರ್ ಹೆಬ್ರಿ ಅವರಿಗೆ, ಶ್ರೀ ಡಿ. ಎನ್. ಅಕ್ಕಿ ಮಾಸ್ತರಿಗೆ, ಕೊಕ್ಕರಣೆ ಅರಮನೆಯ ಶ್ರೀ ಗುಣವರ್ಮರಾಜಾ ಅವರಿಗೆ, ಬೆಳಗಾವಿಯ ಭರತೇಶ ಶಿಕ್ಷಣ ಸಮೂಹದ ಪದಾಧಿಕಾರಿಗಳಿಗೆ, ಶ್ರೀ ಹರಿಹರಪುರ ಶ್ರೀಧರ್ ಅವರಿಗೆ; ಶ್ರೀ ಹೆಚ್. ಎಸ್. ಪ್ರಭಾಕರ್ ಅವರಿಗೆ; ಮಾಧ್ಯಮದ ಮಿತ್ರರೆಲ್ಲರಿಗೆ; ನನ್ನ ಬರಹದ ವಿಚಾರದಲ್ಲಿ ಅದರಲ್ಲೂ ಸಿರಿಭೂವಲಯಕ್ಕೆ ಸಂಬಂಧಿಸಿದ ಪರಿಚಯಗ್ರಂಥಗಳ ವಿಚಾರದಲ್ಲಿ ಆಸಕ್ತಿವಹಿಸಿ, ಅದರ ಪ್ರಚಾರಕ್ಕೆ ನೆರವಾಗಿರುವ ನೂರಾರು ಅಭಿಮಾನಿಗಳಿಗೆನನ್ನ ಕೃತಜ್ಞತೆಗಳು. 
  ಸಿರಿಭೂವಲಯಸಾರದಲ್ಲಿ ಪ್ರಥಮ ಖಂಡದ ೧ ರಿಂದ ೩೩ ಅಧ್ಯಾಯಗಳ ಅಂತರ್ಸಹಿತ್ಯ ಹಾಗೂ ಅದಕ್ಕೆ ಪೂರಕವಾದ ಕೆಲವರು ಮಾಹಿತಿಗಳನ್ನು ಅಳವಡಿಸಲಾಗಿತ್ತು. ಇದರ ಮುಂದುವರೆದ ಭಾಗವಾಗಿ ಸಿರಿಭೂವಲಯಸಾರ ೨ ಎಂಬ ಹೆಸರಿನಿಂದ ೩೪ ರಿಂದ ೫೯ನೇ ಅಧ್ಯಾಯದ ವರೆಗಿನ ಮೂಲಸಾಹಿತ್ಯ, ಅವುಗಳ ಅಂತರ್ಸಾಹಿತ್ಯ ಹಾಗೂ ಪೂರಕವಾದ ಕೆಲವಾರು ಮಾಹಿತಿಗಳನ್ನು ನಿರೂಪಿಸಿ, ಪ್ರಕಟಿಸುವ ನಿರ್ಧಾರವಾಗಿತ್ತು. ವಿವಿಧ ಮೂಲಗಳಿಂದ ಲಭ್ಯವಾದ ಮೂಲಸಾಹಿತ್ಯದ ಝೆರಾಕ್ಸ್ ಪ್ರತಿಗಳನ್ನು ಪರಸ್ಪರ ತಾಳೆನೋಡಿ, ಅಲ್ಲಿನ ವ್ಯತ್ಯಾಸಗಳನ್ನು ಸಾಧ್ಯವಿರುವಷ್ಟು ಸಮರ್ಪಕವಾಗಿ ಸರಿಪಡಿಸಿಕೊಂಡು, ಮೂಲಸಾಹಿತ್ಯವನ್ನು ರೂಪಿಸಿಕೊಳ್ಳುವುದೇ ಸಾಕಷ್ಟು ಸಮಯವನ್ನು ತೆಗೆದುಕೊಂಡಿತು. ಉಳಿದ ವಿಚಾರಗಳ ಸೂಕ್ತ ನಿರ್ವಹಣೆ ಇತ್ಯಾದಿಗಳಿಂದಾಗಿ, ನಿಗದಿತ ಗುರಿಯನ್ನು ಕ್ಲುಪ್ತಕಾಲವಧಿಯಲ್ಲಿ ಮಾಡಿ ಮುಗಿಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ೩೪ ರಿಂದ ೫೦ನೇ ಅಧ್ಯಾಯದ ವರೆವಿಗೆ ಮಾತ್ರರವೇ ಮೂಲಸಾಹಿತ್ಯ ಹಾಗೂ ಸಂಬಂಧಿಸಿದ ಅಂತರ್ಸಾಹಿತ್ಯವನ್ನು ನಿರೂಪಿಸಿ ಪ್ರಕಟಿಸಲು ಸಾಧ್ಯವಾಯಿತು. ಪ್ರಥಮ ಖಂಡದ ಉಳಿದ ಅಧ್ಯಾಯಗಳು ಹಾಗೂ ಮುಂದಿನ ಅಪಾರ ಸಾಹಿತ್ಯಸಾಗರದ ಮೂಲಸಾಹಿತ್ಯ ಹಾಗೂ ಅದಕ್ಕೆ ಸಂಬಂಧಿಸಿದ ಅಂತರ್ಸಾಹಿತ್ಯ ಮತ್ತು ಇತರ ಮಾಹಿತಿಗಳನ್ನು ಪರಿಚಯಿಸಿ, ಪ್ರಕಟಿಸುವ ನಿರ್ಧಾರವಿದೆ. ನನ್ನ ಶ್ರೀಮತಿಯ ನಿರ್ಧಾರದಂತೆ ಈ ಪರಿಚಯ ಕೃತಿಗೆ ಸಿರಿಭೂವಲಯಸಾಗರರತ್ನಮಂಜೂಷ ಎಂದು ನಾಮಕರಣ ಮಾಡಲಾಯಿತು. ಮಕ್ಕಳನ್ನು ಹೆತ್ತವಳು ತಾಯಿಯಾದರೂ ಹೆಸರಿಡುವವರು ಬೇರೆಯವರೇ ತಾನೆ! 
  ತಂದೆಯಮಾತಿಗೆ ಪ್ರತಿಯಾಡದೇ ತಾಯಿಯ ಶಿರವನ್ನೇ ತರಿದೊಗೆದ ಕೊಡಲಿಯಾಯುಧನ (ಪರಶುರಾಮನ) ತಂದೆಯಗೋತ್ರದಲ್ಲಿ ಜನಿಸಿದ ಈ ಮುಂಗೋಪಿ ಗಂಡನ ಕೈಹಿಡಿದಂದಿನಿಂದಲೂ ನೆರಳಿನಂತೆ ಸಹಚರಳಾಗಿದ್ದು, ಮಾತೃಸ್ವರೂಪಳಾಗಿ ಇಲ್ಲಿಯವರೆವಿಗೂ ನನ್ನನ್ನು ತಾಳ್ಮೆಯಿಂದ ಸಹಿಸಿರುವುದರೊಂದಿಗೆ, ಈಗ ಸಿರಿಭೂವಲಯದ ಅಂತರ್ಸಾಹಿತ್ಯದ ಅಕ್ಷರಸರಪಣಿಯನ್ನು ಹೊರತೆಗೆಯುವಲ್ಲಿ ನನಗಿಂತ ಹೆಚ್ಚು ಉತ್ಸಾಹದಿಂದ ಮುನ್ನುಗ್ಗಿ, ಈ ಕೃತಿರಚನೆಯಲ್ಲಿ ನನಗೆ ನೆರವು ನೀಡಿದ್ದು ಮಾತ್ರವಲ್ಲ; ಇದನ್ನು ಪ್ರಕಟಿಸುವ ಗುರುತರವಾದ ಹೊಣೆಯನ್ನು ಅಕ್ಷರಶಃ ಶ್ರಮವಹಿಸಿ ನಿರ್ವಹಿಸಿರುವ ನನ್ನ ಶ್ರೀಮತಿ ಗಿರಿಜೆಗೂ, ಈ ಯಜ್ಞದ ಫಲವನ್ನು ಆತ್ಮೀಯತೆಯಿಂದ ಸ್ವೀಕರಿಸಿ ನಮಗೆ ಸಾರ್ಥಕತೆಯನ್ನೊದಗಿಸುವ ನನ್ನ ಆತ್ಮೀಯ ಓದುಗರಿಗೂ, ಈ ಪ್ರಯತ್ನದಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ನೆರವಾಗಿರಯವ ಆತ್ಮೀಯರೆಲ್ಲರಿಗೂ ಈಮೂಲಕ ನನ್ನ ತುಂಬುಹೃದಯದ ವಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಸರ್ವಜ್ಞ ಸ್ರೂಪಿಯಾದ ಕುಮುದೇಂದು ಮುನಿಯ ಕೃಪೆಯು ಸಜ್ಜನರೆಲ್ಲರಿಗೂ ಒದಗಿಬಂದು ಈ ಕೃತಿಯ ವಾಚನದಿಂದ ಅವರು ಪಾರಮಾರ್ಥಿಕವಾಗಿ ಹೊಸಮಾನವರಾಗುವಂತಾಗಲೆಂದು ಪ್ರಾರ್ಥಿಸುತ್ತೇನೆ. 

ದಿನಾಂಕ ೧೩ -೦೫- ೨೦೧೩.
                                                   ಸುಧಾರ್ಥಿ ಹಾಸನ. ಸಂಚಾರಿದೂರವಾಣಿ: ೯೪೪೯೯೪೬೨೮೦.    


ಕುಮುದೇಂದುವಿನ ಬಗ್ಗೆ ಸಂಶೋಧನೆ ನಡೆಯಬೇಕಾಗಿದೆ


ನಂದಿಬೆಟ್ಟದ ಸಮೀಪದ ಇಂದಿನ ಯಲವಳ್ಳಿಗೆ ಯಲವ ಯಲವಳಾ ಎಂಬ ಹೆಸರಿದ್ದದ್ದು, ಹಾಗೂ ಅಲ್ಲಿನ ಒಂದು ವಿಸ್ತರಣಕ್ಕೆ ನಂದಗಿರಿಪುರ ಎಂಬ ಹೆಸರಿದ್ದ ವಿಚಾರವು ಸಷ್ಟವಾಗುತ್ತದೆ. ಅಂದರೆ ಕುಮುದೇಂದುವಿನ ೧೫೦೦ ಶಿಷ್ಯರ ಸಮೂಹದ ಅಂದಿನ ವಿಶ್ವವಿದ್ಯಾಲಯದ ಈ ನಗರವು ಬಹಳ ವಿಸ್ತಾರವಾಗಿದ್ದುದು ಸ್ವಾಭಾವಿಕ. ಅಲ್ಲಿನ ಮಂದರತೀರ್ಥ ಚೈತ್ಯಾಲಯದಲ್ಲಿ ಋಷಭದೇವನಾದಿಯಾಗಿ ಕೃಷ್ಣನಪರ್ಯಂತ ತೀರ್ಥಂಕರರು ಹರಿಪೀಠಸ್ಥಿತರಾಗಿದ್ದ ಸಂಗತಿಯು ಸೂಚಿತವಾಗಿದೆ.  ಶಕರಾಯನೃಪಪಾಲಿತ ಪ್ರದೇಶವೆಂಬ ಮಾಹಿತಿಯೂ ಇಲ್ಲಿ ಉಕ್ತವಾಗಿದ್ದು ಇದೊಂದು ಚಾರಿತ್ರಿಕ ಮಹತ್ವದ ಮಾಹಿತಿಯಾಗಿದೆ. ಇತಿಹಾಸಕಾರರು ಈವಿಚಾರವಾಗಿ ಪರಿಶೀಲನೆ ಮಾಡಬಹುದಾದ ಅವಕಾಶವಿದೆ. ಯಲವಳ್ಳಿಯ ಸಮೀಪದಲ್ಲಿ ಹಾದುಹೋಗಿರುವ ಹೆದ್ದಾರಿಯ ಪಕ್ಕದ ಜಮೀನಿನಲ್ಲಿ ಕುಮುದೇಂದುವಿನಬಾವಿ ಎಂಬ ಪ್ರಾಚೀನವಾದ ಬಾವಿಯೊಂದು ಕೆಲದಿನಗಳ ಹಿಂದಿನ ವರೆವಿಗೂ ಅಸ್ಥಿತ್ವದಲ್ಲಿ ವಿಚಾರವನ್ನು ಅಲ್ಲಿನ ಸ್ಥಳೀಯರು ತಿಳಿಸುತ್ತಾರೆ. ಹಂಪೆಯ ಮಾದರಿಯಲ್ಲಿ ಇಲ್ಲಿಯೂ ಸಮರ್ಪಕವಾದ ಉತ್ಕನನವು ನಡೆದಲ್ಲಿ ಕುಮುದೇಂದು ಮುನಿಗೆ ಸಂಬಂಧಿಸಿದ ಚಾರಿತ್ರಿಕ ಮಹತ್ವದ ಅವಶೇಷಗಗಳು ದೊರೆಯುವುದು ಖಚಿತ. ಈವಿಚಾರದತ್ತ ಪ್ರಾಚ್ಯವಸ್ತು ಇಲಾಖೆಯವರು ಗಮನಹರಿಸಬೇಕಾದ ಅಗತ್ಯವಿದೆ. ಆದರೆ ಕುಮುದೇಂದುವೇ ಅಜ್ಞಾತ ವ್ಯಕ್ತಿಯಾಗಿರುವ ಕಾರಣ, ಈಮಾಹಿತಿಗಳಿಗೆ ನಮ್ಮ ವಿಶ್ವವಿದ್ಯಾಲಯದ ವಿದ್ವಾಂಸರಲ್ಲಿ ಮಾನ್ಯತೆ ದೊರೆಯುವುದಾರೂ ಹೇಗೆ?! 

ಸಿರಿಭೂವಲಯಸಾಗರರತ್ನಮಂಜೂಷ ಕೃತಿಗೆ ಪ್ರೊ.ಜಿ.ವೆಂಕಟಸುಬ್ಬಯ್ಯನವರ ಮುನ್ನುಡಿ

OLYMPUS DIGITAL CAMERA

    ಸಿರಿಭೂವಲಯಸಾಗರರತ್ನಮಂಜೂಷವು ಕವಿಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯವನ್ನು ಕುರಿತಂತೆ ಹಾಸನದ ಸುಧಾರ್ಥಿಯು ರಚಿಸಿರುವ ಏಳನೇ ಪರಿಚಯಕೃತಿಯಾಗಿದೆ. ಒಬ್ಬ ಪ್ರಾಚೀನ ಕನ್ನಡ ಕವಿಯನ್ನು, ಅವನ ಕಾವ್ಯವನ್ನು ಕುರಿತು     ಇಷ್ಟು ದೀರ್ಘಕಾಲಾವಧಿಯನಂತರ, ಇಷ್ಟು ಅಲ್ಪಕಾಲಾವಧಿಯಲ್ಲಿ ಒಬ್ಬನೇ ಲೇಖಕನ ಪ್ರಯತ್ನದಿಂದ ಈರೀತಿಯ ಏಳು ಪರಿಚಯಕೃತಿಗಳು ಪ್ರಕಟವಾಗಿರುವುದು ಒಂದು ಸಂತೋಷದ ಸಂಗತಿ. ೨೦೧೦ರ ಅನಂತರ ಹಾಸನದ ಸುಧಾರ್ಥಿಯು ನಿರೂಪಿಸಿ ಪ್ರಕಟಿಸಿರುವ ಆರು ಪರಿಚಯಕೃತಿಗಳನ್ನೂ ನಾನು ಗಮನಿಸಿದ್ದೇನೆ. ಸಿರಿಭೂವಲಯದ ವಿಚಾರವಾಗಿ ಇದುವರೆವಿಗೂ ಅಜ್ಞಾತವಾಗಿದ್ದ ಹಲವಾರು ಅಚ್ಚರಿಯ ಮಾಹಿತಿಗಳನ್ನು ಪರಿಚಯಕಾರನು ಈ ಬೃಹತ್ ಕೃತಿಯಲ್ಲಿ ಅಳವಡಿಸಿರುವ  ಅತಿಪ್ರಮುಖವಾದ ವಿಚಾರಗಳ ಸಾರಾಂಶವನ್ನು ನನ್ನ ಓದಿಗೆ ಪ್ರತ್ಯೇಕವಾಗಿ ಒದಗಿಸಿದ್ದು, ಅಲ್ಲಿ ಕಾಣಬರುವ ಹಲವಾರು ಹೊಸವಿಚಾರಗಳು ನನ್ನ ಗಮನ ಸೆಳೆದಿವೆ. ಈ ಕಾರಣದಿಂದಾಗಿ ಈ ಪರಿಚಯಕೃತಿಗೆ ಒಂದೆರಡು ಮಾತುಗಳನ್ನು ಮುನ್ನುಡಿಯಾಗಿ ಬರೆಯಲು ಸಂತೋಷವಾಗಿದೆ.
   ೧೯೪೫ರಲ್ಲಿ ನಾನು ಬೆಂಗಳೂರಿಗೆ ಬಂದು ಖಾಸಗೀ ಕಾಲೇಜೊಂದನ್ನು ಪ್ರಾರಂಭಿಸುವ ಕಾರ್ಯದಲ್ಲಿ ತೊಡಗಿದ್ದಾಗಲೇ ಈ ಸಿರಿಭೂವಲಯಗ್ರಂಥವು ಅಂದಿನ ಹಿರಿಯ, ಕಿರಿಯ ಸಾಹಿತಿಗಳ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದ ಸಂಗತಿ; ಸಿರಿಭೂವಲಯದ ಸಂಶೋಧನೆಯಲ್ಲಿ ಕರ್ಲಮಂಗಲಂ ಶ್ರೀಕಂಠಯ್ಯನವರೂ, ಕನ್ನಡ ಬೆರಳಚ್ಚುಯಂತ್ರಶಿಲ್ಪಿ ಕೆ. ಅನಂತಸುಬ್ಬರಾಯರೂ ತುಂಬಾ ಶ್ರಮವಹಿಸಿ ಗ್ರಂಥದ ಅಂತರಂಗ ಶೋಧನೆಯಲ್ಲಿ ತೊಡಗಿದ್ದ ವಿಚಾರ ಮುಂತಾದುವನ್ನು ಕುರಿತು ನಾನು ಈಗಾಗಲೇ ಒಮ್ಮೆ ಬರೆದದ್ದಾಗಿದೆ. ೧೯೫೩ರ ಸುಮಾರಿನಲ್ಲಿ ಅಕ್ಷರರೂಪದಲ್ಲಿ ಪ್ರಕಟವಾದ ಈ  ಗ್ರಂಥದ ಸ್ವಲ್ಪಭಾಗವು ಅಂದಿನ ದಿನಗಳಲ್ಲಿ ಸಾಕಷ್ಟು ಚರ್ಚೆಯ ವಿಷಯವಾಗಿತ್ತು. ಕನ್ನಡ ಅಂಕಲಿಪಿಯಲ್ಲಿ ರಚನೆಯಾಗಿರುವುದೆಂದು ಪ್ರಚಾರವಾಗಿದ್ದ ಈ ಗ್ರಂಥದ ವಿಚಾರಗಳು ಸಾಕಷ್ಟು ನಿಗೂಢವೆನಿಸಿಕೊಂಡು ಓದಲು ಸುಲಭವಾಗಿರಲಿಲ್ಲ. ಈ ಕಾರಣದಿಂದ ಇದು ಹೆಚ್ಚು ಪ್ರಚಾರಕ್ಕೆ ಬಾರದೇ ಕತ್ತಲೆಯಕೋಣೆ ಸೇರಿತ್ತು. ೨೦೦೩ರಲ್ಲಿ ಬೆಂಗಳೂರಿನ ಪುಸ್ತಕಶಕ್ತಿ ಪ್ರಕಾಶನದ ಶ್ರೀ ವೈ.ಕೆ.ಮೋಹನ್ ಅವರು ಈ ಗ್ರಂಥವನ್ನು ಪರಿಷ್ಕರಿಸಿ ಪ್ರಕಟಿಸುವ ಆಲೋಚನೆ ಕೈಗೊಂಡಾಗ, ಗ್ರಂಥದ ಚಮತ್ಕಾರರೂಪವನ್ನು ತಿಳಿದಿದ್ದ ನಾನು ಅವರಿಗೆ ಡಾ| ಟಿ.ವಿ. ವೆಂಕಟಾಚಲಶಾಸ್ತ್ರಿಗಳ ಸಹಾಯಪಡೆಯುವಂತೆ ಸೂಚಿಸಿದ್ದೆ. ಅದರಂತೆ ಡಾ| ವೆಂಕಟಾಚಲಶಾಸ್ತ್ರಿಗಳೂ, ಡಾ| ಮರುಳಯ್ಯನವರೂ, ಡಾ|ಗಣೇಶ್ ಅವರೂ ಸೇರಿ ತಮ್ಮ ಅರಿವಿಗೆ ದೊರೆತ ಅಂಶಗಳನ್ನು ಸೇರಿಸಿ ಲೇಖನಗಳನ್ನು ಬರೆದರು. ಪುಸ್ತಕಶಕ್ತಿಪ್ರಕಾಶನದವರು ಅವುಗಳನ್ನು ಸೇರಿಸಿ ಕೆಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.
   ಈಚೆಗೆ ಹಾಸನದ ಸುಧಾರ್ಥಿಯು ರೂಪಿಸಿ ಪ್ರಕಟಿಸಿರುವ ಸಿರಿಭೂವಲಯಸಾರ ಸಿರಿಭೂವಲಯದ ಸಾಂಗತ್ಯಪದ್ಯಗಳ ಸಂಗ್ರಹ ಸಿರಿಭೂವಲಯ ಒಂದು ಮಿಂಚುನೋಟ  ಸಿರಿಭೂವಲಯದ ಜಯಾಖ್ಯಾನಾಂತರ್ಗತ ಭಗವದ್ಗೀತಾ ಸಿರಿಭೂವಲಯಕೀ ಏಕ್ ಝಾಂಕಿ ಸಿರಿಭೂವಲಯದ ಒಳನೋಟ ಎಂಬ ಪರಿಚಯ ಕೃತಿಗಳು ಈ ನಿಗೂಢಗ್ರಂಥದ ವಿಚಾರವಾಗಿ ಸಾಕಷ್ಟು ವಿವರವಾದ, ಸರಳವಾದ ಪರಿಚಯ ನೀಡುವ ಮೂಲಕ ಗ್ರಂಥದ ಅಂತರಂಗವನ್ನು ಸಾಮಾನ್ಯ ಓದುಗರಿಗೆ ತಿಳಿಸುವ ಕಾರ್ಯದಲ್ಲಿ ಸಾರ್ಥಕತೆ ಪಡೆದಿವೆ. ಸಾಮಾನ್ಯ ಓದುಗರಿಗೂ ಈಗ ಕುಮುದೇಂದು ಮುನಿ ಹಾಗೂ ಅವನ ಸಿರಿಭೂವಲಯವು ಸಾಕಷ್ಟು ಸಮೀಪವಾಗಿರುವುದು ಖಚಿತ. ಅಂಕ ಚಕ್ರಗಳ ಭೂವಲಯ, ಅಕ್ಷರಭೂವಲಯ, ಇವುಗಳ ಮೂಲಸಂಶೋಧನೆ, ಅವುಗಳ ಕೆಲವೊಂದು ಭಾಗವು ರಾಷ್ರೀಯ ಪ್ರಾಚ್ಯಪತ್ರಾಗಾರದಲ್ಲಿ ಸಂರಕ್ಷಿತವಾಗಿರುವ ವಿಚಾರ, ಸಂಶೋಧನೆಯ ವಿಚಾರದಲ್ಲಿ ಕಾಣಬರುವ ಗೊಂದಲಗಳು, ಇತ್ಯಾದಿ ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ಸುಧಾರ್ಥಿಯು ತರ್ಕಬದ್ಧವಾಗಿ ನಿರೂಪಿಸಿರುವ ಮಾಹಿತಿಗಳು ಆಸಕ್ತಿದಾಯಕವಾಗಿವೆ., ನಿಗೂಢವಾಗಿವೆ. ಈ ಮಾಹಿತಿಗಳಿಗೆ ಸಮ್ಮತಿಸುವುದೂ; ಸಮ್ಮತಿಸದಿರುವುದೂ ಓದುಗರ ವಿವೇಚನೆಗೆ ಬಿಟ್ಟದ್ದು.
  ೧೯೫೩ರಲ್ಲಿ ಪ್ರಕಟವಾದ ಸಿರಿಭೂವಲಯದ ಅಕ್ಷರಮುದ್ರಣವನ್ನು ಸರಳವಾಗಿ ಓದಿತಿಳಿಯುವುದು ಕಠಿಣವಾದ, ಹಾಗೂ ಹೆಚ್ಚಿನ ಸಮಯನಿರೀಕ್ಷಿಸುವ ಕಾರ್ಯವಾಗಿದ್ದ ಕಾರಣದಿಂದ ಅದರಲ್ಲಿನ ವಿವರಗಳು ಕತ್ತಲಕೋಣೆಸೇರುವಂತಾಗಿತ್ತು.  ಈಚೆಗೆ  ಪುಸ್ತಕಶಕ್ತಿಪ್ರಕಾಶನದವರು ಪರಿಷ್ಕರಿಸಿ ಮಾಡಿದ ಮರುಮುದ್ರಣದ ಪ್ರಯತ್ನದಿಂದಲೂ ಪರಿಸ್ಥಿಯು ಬದಲಾಗಲಿಲ್ಲ. ಈ ಗ್ರಂಥದಲ್ಲಿ ಅಡಕವಾಗಿರುವ ಕೆಲವೊಂದು ಪ್ರಮುಖ ವಿಚಾರಗಳನ್ನಾದರೂ ಓದಿ ತಿಳಿಯದೇ,  ಕುಮುದೆಂದುವಿನ ಸಿರಿಭೂವಲಯ ಗ್ರಂಥವು ಸರ್ವಭಾಷಾಮಯಿ, ಸರ್ವಜ್ಞಾನಮಯಿ, ಸರ್ವಶಾಸ್ತ್ರಮಯಿ ಎಂಬ ಹೇಳಿಕೆಗೆ ಸಮ್ಮತಿಸುವುದು ಸಾಧ್ಯವಿರದ ಸಂಗತಿಯಾಗಿತ್ತು. ಈಗ ಸುಧಾರ್ಥಿಯು ನಿರೂಪಿಸಿರುವ ಸಿರಿಭೂವಲಯ ಸಂಬಂಧವಾದ ಪರಿಚಯ ಕೃತಿಗಳ ಅವಲೋಕನದಿಂದ ಈ ಹೇಳಿಕೆಯನ್ನು ಏಕಾಏಕಿ ನಿರಾಕರಿಸಲು ಸಾಧ್ಯವಾಗದೆಂಬ ಪರಿಸರ ನಿರ್ಮಾಣವಾಗಿರುವುದು ನಿಶ್ಚಯ. ಮೇಲಿನ ಎರಡು ಪ್ರಯತ್ನಗಳಲ್ಲಿ ಪ್ರಕಟವಾಗಿದ್ದ ಕೆಲವಾರು ಮಾಹಿತಿಗಳಗಿಂತಲೂ ಹೊಸದಾದ, ಖಚಿತವಾದ, ಹಲವಾರು ಮೌಲಿಕ ಮಾಹಿತಿಗಳನ್ನು ಸುಧಾರ್ಥಿಯ  ಕೃತಿಗಳಲ್ಲಿ ಓದುಗರು  ಕಾಣಬಹುದಾಗಿದೆ.
  ಕಾವ್ಯದಲ್ಲಿ ಬಳಕೆಯಾಗಿರುವ ಛಂದಸ್ಸು ಹಾಗೂ ಭಾಷೆಯ ಸ್ವರೂಪದ ಆಧಾರದಲ್ಲಿ, ಕವಿ ಮತ್ತು ಕಾವ್ಯದ ಕಾಲವನ್ನು ಕುರಿತು ಇನ್ನೂ ಖಚಿತವಾದ ನಿರ್ಧಾರವಾಗಿಲ್ಲ. ಕಾವ್ಯದಲ್ಲಿ ಪದೇಪದೇ ಕಾಣಬರುವ ಗಂಗರಸ ಸೈಗೊಟ್ಟ ಸಿವಮಾರ ಹಾಗೂ ಮಾನ್ಯಖೇಟದ ಅಮೋಘವರ್ಷ, ಧವಳಗ್ರಂಥಗಳ ಕರ್ತೃ ವೀರಸೇನಾಚಾರ್ಯ, ಮಹಾಪುರಾಣದ ಕರ್ತೃ ಜಿನಸೇನಾಚಾರ್ಯ ಮುಂತಾದವರ ವಿಚಾರದಲ್ಲಿ ಚಾರಿತ್ರಿಕವಾಗಿ ನಿರ್ಧಾರವಾಗಿರುವ ಕಾಲಮಾನದ ಆಧಾರದಲ್ಲಿ ಕವಿ ಹಾಗೂ ಕಾವ್ಯವು ಒಂಬತ್ತನೇ ಶತಮಾನದಿಂದ ಈಚಿನದಲ್ಲ ಎಂಬ ಡಾ| ಎಸ್. ಶ್ರೀಕಂಠಶಾಸ್ತ್ರಿಯವರ ಖಚಿತ ಹೇಳಿಕೆಯು ಗಮನಾರ್ಹವಾದುದು. ಸ್ವತಃ ಕವಿಯೇ ತಾನು ಮಹಾವೀರನ ನಿರ್ವಾಣಾನಂತರ ಸಾವಿರದ ಒಂದೂವರೆ ವರ್ಷಕ್ಕೆ ಸರಿಯಾಗಿ ಸಿರಿಭೂವಲಯದ ರಚನೆಮಾಡಿರುವೆನೆಂದು ಸೂಚಿಸಿರುವ ಮಾಹಿತಿಯ ಆಧಾರದಲ್ಲಿ ಮಹಾವೀರನ ಕಾಲನಿರ್ಣಯದಲ್ಲಿ ಕಾಣಬರುವ ಗೊಂದಲವನ್ನು ಸೂಚಿಸಿ, ಸುಧಾರ್ಥಿಯು ವಿವರವಾಗಿ ಚರ್ಚಿಸಿ, ಕವಿ ಹಾಗೂ ಕಾವ್ಯದ ಕಾಲವು ಕ್ರಿ.ಶ. ೮೦೦ ರ ಸುಮಾರಿನದೆಂಬ ಅಂಶವನ್ನು ಬಲವಾಗಿ ಸಮರ್ಥಿಸಿರುವುದನ್ನು ಸಂಬಂಧಿಸಿದವರು ಸೂಕ್ತವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ.
   ಸಿರಿಭೂವಲಯದಲ್ಲಿ ೭೧೮ ಭಾಷೆಗಳ ಸಾಹಿತ್ಯವು ಅಡಕವಾಗಿರುವುದೆಂಬ ಕಾರಣದಿಂದ ಪ್ರಚಾರಕ್ಕೆ ಬಂದಿರುವ ಸರ್ವಭಾಷಾಮಯೀ ಎಂಬುದನ್ನು ಒಪ್ಪುವುದೂಕೂಡ ಅವರವರ ನಿರ್ಧಾರಕ್ಕೆ ಬಿಟ್ಟವಿಚಾರ. ಆದರೆ, ಅಂತರ್ಸಾಹಿತ್ಯರೂಪದಲ್ಲಿ ಈಗಾಗಲೇ ಸಂಸ್ಕೃತ, ಪ್ರಾಕೃತ, ಮಾಗಧಿ, ಅರ್ಧಮಾಗಧಿ, ಶೂರಸೇನಿ, ಪಾಳಿ ಮುಂತಾದ ಹಲವಾರು ಭಾಷಾ ಸಾಹಿತ್ಯದ ತುಣುಕುಗಳನ್ನು ಉದಾಹರಣೆಗಾಗಿ ತೋರಿಸಿರುವ ಹಿನ್ನೆಲೆಯಲ್ಲಿ, ಕಾವ್ಯದಲ್ಲಿ ಬೇರೆ ಬೇರೆ ಭಾಷೆಯ ಅಂತರ್ಸಾಹಿತ್ಯವು ಉಗಮವಾಗುವ ಕ್ರಮವನ್ನು ಗಮನಿಸಿದಾಗ ಉಳಿದ ಭಾಷೆಗಳ ಸಾಹಿತ್ಯವೂ ಉಗಮವಾಗುವ ಸಂಗತಿಯನ್ನು ನಿರಾಕರಿಸಲು ಸಾಧ್ಯವೆ? ಒಟ್ಟು ಗ್ರಂಥದ ವ್ಯಾಪ್ತಿಯು ಆರುಲಕ್ಷ ಮೂಲ ಕನ್ನಡ ಶ್ಲೋಕಗಳು ಎಂಬ ಮಾಹಿತಿನ್ನು ಒಪ್ಪಿ, ಅವುಗಳ ಪೈಕಿ ಈಗ ಸುಲಭವಾಗಿ ಓದಲು ಸಾಧ್ಯವಾಗುವ ಕ್ರಮದಲ್ಲಿ ಪ್ರಕಟವಾಗಿರುವುದು ಸುಮಾರು ೨೧೦೦೦ ಪದ್ಯಗಳು ಮಾತ್ರ ಎಂಬ ಮಾಹಿತಿಯ ಆಧಾರದಲ್ಲಿ ಗಮನಿಸಿದಾಗ, ಇಲ್ಲಿ ಉಗಮವಾಗಿರುವ ಅಂತರ್ಸಾಹಿತ್ಯದ ವ್ಯಾಪ್ತಿಯನ್ನು ನೋಡಿದಾಗ, ಗ್ರಂಥವು ಸಮಗ್ರವಾಗಿ ಪ್ರಕಟವಾದಲ್ಲಿ ಕವಿಯ ಹೇಳಿಕೆಯಂತೆ ಸಾವಿರದಂಟು ಭಾಷೆಗಳಿದ್ದರೂ ಅವುಗಳ ಸಾಹಿತ್ಯವನ್ನು ಸಿರಿಭೂವಲಯವು ಕಟ್ಟರಿಸಿದೆ ಎಂಬುದನ್ನು ನಿರಾಕರಿಸುವುದು ಸುಲಭವಲ್ಲ.
     ಕುಮುದೇಂದುಮುನಿಯು ತನ್ನ ಸಿರಿಭೂವಲಯದಲ್ಲಿ ಅಣುವಿಜ್ಞಾನದ ಮಾಹಿತಿಯನ್ನು ಕನ್ನಡದಲ್ಲಿ ಬಹಳ ಸರಳವಾಗಿ ವಿವರಿಸಿದ್ದಾನೆ. (ಊ೨o) ಎಂಬ  ಆಧುನಿಕ ವಿಜ್ಞಾನ ಸೂತ್ರದ ಕನ್ನಡ ಅವತರಣಿಕೆಯನ್ನು ನಾವು ಸಿರಿಭೂವಲಯದಲ್ಲಿ ಸ್ಪಷ್ಟವಾಗಿ ಕಾಣಬಹುದು! ಅಣುವು ನೀರೊಳಗೆಷ್ಟು|ಅನಲವಾಯುಗಳೆಷ್ಟು| ನೆನೆದು ಸುಡದ ಅಣುವೆಷ್ಟು| ಮುಂತಾಗಿ ವಿವರಿಸಿದ್ದಾನೆ. ತನುವನು ಆಕಾಶಕೆ ಹಾರಿಸಿ ನಿಲಿಸುವ ಘನವೈಮಾನಿಕ ಕಾವ್ಯ ಎಂಬಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ವಿಚಾರವನ್ನು ಸೂಚಿಸಿದ್ದಾನೆ. ಇಂದಿನ ಜಗತ್ತಿನ ಅತ್ಯಾಧುನಿಕವಾದ ಗಣಕಯಂತ್ರ ಕ್ರಮ ಹಾಗೂ ಮೊಬೈಲ್ ತಂತ್ರಜ್ಞಾನವೂ ಕುಮುದೇಂದುವಿಗೆ ಕರತಲಾಮಲಕವಾಗಿದ್ದ ವಿಚಾರ. ಯವೆಯಕಾಳಿನ ಕ್ಷೇತ್ರದಳತೆಯೊಳಡಗಿಸಿ..  ; ಜೋಡಿಯಂಕದ ಕೂಟದಂಗ ಎಂಬಲ್ಲಿ ಈ ವಿಚಾರವು ನಿರೂಪಿತವಾಗಿದೆ. ಕಟ್ಟಡ ನಿರ್ಮಾಣ ತಂತ್ರಜ್ಞಾನ ಹಾಗೂ ಭೂಮಾಪನ ವಿಜ್ಞಾನಕ್ಕೆ  (ಸರ್ವೆ) ಸಂಬಂಧಿಸಿದ ವಿವರಗಳು ಗ್ರಂಥದಲ್ಲಿ ಅಡಗಿವೆಎಂದು ಸಿರಿಭೂವಲಯಸಾರದಲ್ಲಿ  ಸುಧಾರ್ಥಿ ಪರಿಚಯಿಸಿರುವುದಿದೆ.
  ಪ್ರಕೃತ ಸಿರಿಭೂವಲಯ ಸಾಗರರತ್ನಮಂಜೂಷದಲ್ಲಿ ಇನ್ನೂ ಮುಂದುವರೆದು ದೂರವಾಣಿ, ಆಕಾಶವಾಣಿ, ದೂರದರ್ಶನ, ಮುಂತಾದ ಸಮೂಹಮಾಧ್ಯಮಗಳು ಆಧುನಿಕ ವಿಜ್ಞಾನದ ಸಾಧನೆಗಳು ಎಂಬ ತಪ್ಪುಗ್ರಹಿಕೆಯು ಜಗತ್ತಿನಲ್ಲಿ ತುಂಬಿದೆ! ಆದರೆ ಈ ತಂತ್ರಜ್ಞಾನದ ನೈಪುಣ್ಯವನ್ನು ಹೊಂದಿದ್ದ ಕುಮುದಚಂದ್ರನ (ಕುಮುದೆಂದುವಿನ) ಪ್ರತಿಭೆಗೆ ತಲಕಾಡಿನ ಗಂಗರಸ ಸೈಗೊಟ್ಟ ಸಿವಮಾರನೂ, ರಾಷ್ಟ್ರಕೂಟ ಅಮೋಘವರ್ಷ ನೃಪತುಂಗನೂ ಮೆಚ್ಚುಗೆ ಸೂಚಿಸಿದ್ದ ಸಂಗತಿ, ಈರೀತಿಯ ಯಶಸ್ಸು ಹಾಗೂ ಕೀರ್ತಿಯಿಂದ  ಪಡೆಯಬಹುದಾದ ಅಪಾರ ಸಂಪತ್ತನ್ನು ಕಾಲಿನಿಂದ ಒದೆಯುವ ಮುನಿವಂಶದವರ ಭೂವಲಯ ಎಂಬುದಾಗಿ ಸಿರಿಭೂವಲಯವು ಸೂಚಿಸಿದೆ! ನೋಡಿ: ೩೬ನೇ ಅಧ್ಯಾಯದ  ಪೂರ್ಣಪದ್ಯಗಳ ಅಶ್ವಗತಿಯ ಅಂತರ್ಸಾಹಿತ್ಯ ಪದ್ಯಸಂಖ್ಯೆ ೫೨-೫೪. ಪಾರಮಾರ್ಥಿಕವಾಗಿ ನಿರುಪಯೋಗಿಯಾದ ಇಂಥ ಲೌಕಿಕ ಸಂಪತ್ತನ್ನು ಕುಮುದೆಂದುಮುನಿಯು ಕಾಲಿನಿಂದ ಒದ್ದು, ಪರಮಾರ್ಥದೆಡೆಗೆ ಸಾಗಿದ್ದಾನೆ.  ಎಂಬ ವಿಚಾರವನ್ನೂ, ಆಧುನಿಕ ವೈದ್ಯಕೀಯ ವಿಜ್ಞಾನವು ವ್ಯಾಸೆಕ್ಟಮಿ ಟ್ಯೂಬೆಕ್ಟಮಿ ಎಂಬ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ನೂತನವಾಗಿ ರೂಪಿಸಿದೆ ಎಂಬ ವಿಚಾರವು ಲೋಕಪ್ರಸಿದ್ಧಿ ಪಡೆದಿದೆ. ಆದರೆ ನಮ್ಮ ಪೂರ್ವಿಕರಿಗೆ ಪ್ರಾಚೀನಕಾಲದಲ್ಲೇ ಈ ತಂತ್ರಜ್ಞಾನವು ತಿಳಿದಿದ್ದ ಸಂಗತಿಯಾಗಿತ್ತೆಂದರೆ ಅಚ್ಚರಿಯ ವಿಚಾರವಾಗಬಹುದು. ಅದನ್ನು ಯಾರೂ ನಂಬಲಾರರು! ಆದರೆ ಕುಮುದೇಂದುಮುನಿಯು ಕಟ್ಟಿರಿಸಿರುವ ಪ್ರಾಚೀನ ಗ್ರಂಥಮಾಹಿತಿಯಂತೆ ಇದು ಸತ್ಯ ಸಂಗತಿಯಾಗಿದೆ. ಈ ತಂತ್ರಜ್ಞಾನವನ್ನು ಲಿಂಗಛೇಧನವಿಜ್ಞಾನ ಎಂದು ಸೂಚಿಸಲಾಗಿದೆ. ನೋಡಿ: ೪೫ನೇ ಅಧ್ಯಾಯದ ಅಶ್ವಗತಿಯ ಅಂತರ್ಸಾಹಿತ್ಯ ಪದ್ಯ ಸಂಖ್ಯೆ ೫೪.  ಎಂಬ ಮಾಹಿತಿಯನ್ನು ಸುಧಾರ್ಥಿಯು ನೀಡಿರುವುದಿದೆ.  ಇಂಥ ಹೊಸ ಹೊಸ ಮಾಹಿತಿಗಳನ್ನು ಗ್ರಂಥದಲ್ಲಿ ಪ್ರತ್ಯಕ್ಷವಾಗಿ ಗಮನಿಸಿದಾಗ, ಸರ್ವಶಾಸ್ತ್ರಮಯಿ ಎಂಬ ಹೇಳಿಕೆಯನ್ನು ಹೇಗೆ ನಿರಾಕರಿಸಲಾದೀತು?
  ಸಿರಿಭೂವಲಯವು ಪ್ರಾಚೀನ ಕಾಲದಿಂದ ಮಾತ್ರವಲ್ಲ: ಇಂದಿಗೂ ಅಪರಿಚಿತವಾದ ಕೃತಿಯಾಗಿಯೇ ಉಳಿದಿರುವುದನ್ನು ಕುರಿತು ಸುಧಾರ್ಥಿಯು ಮಾಡಿರುವ ವಿಶ್ಲೇಷಣೆಯೂ ಸ್ವಾರಸ್ಯವಾಗಿದೆ!  ಮಾನವಕುಲದ ಜೀವನಪ್ರವಾಹದಲ್ಲಿ ಋಗ್ವೇದವು ಅತ್ಯಂತ ಪ್ರಾಚೀನವಾದ ಜ್ಞಾನಮೂಲವೆಂಬ ಸಂಗತಿಯನ್ನು ಸಂಶಯಾತೀತವಾಗಿ ನಿರೂಪಿಸುವಲ್ಲಿ ಕುಮುದೇಂದುಮುನಿಯ ಸಿರಿಭೂವಲಯವು ಪ್ರತ್ಯಕ್ಷ ಸಾಕ್ಷಿಯಾಗಿದೆ. ಜೈನಸಂಪ್ರದಾಯವು ಎಷ್ಟೇ ಕೋಟ್ಯಾಂತರ ವರ್ಷಗಳ ಪ್ರಾಚೀನ ಪರಂಪರೆಯನ್ನು ಹೊಂದಿದ್ದರೂ ಈ ಸಂಪ್ರದಾಯದ ಮೂಲ ಬೇರಿರುವುದು ವೇದೋಪನಿಷತ್ತುಗಳಲ್ಲಿಯೇ. ಈ ವೇದೋಪನಿಷತ್ತುಗಳೆಲ್ಲವೂ ಪಾವನ ತೀರ್ಥಗಳೆಂದೇ ಕುಮುದೆಂದು ಮುನಿಯು ಖಚಿತವಾಗಿ ನಿರೂಪಿಸಿರುವುದನ್ನು ಕಾಣಬಹುದು. ಸಿರಿಭೂವಲಯದ ಪ್ರಥಮಕಾಂಡದಲ್ಲಿ ಋಗ್‌ವೇದಕ್ಕೆ ಸಂಬಂಧಿಸಿದಂತೆ ಋಗ್ವೇದ, ಋಗ್‌ಭೂವಲಯ ಋಗ್, ಮುಂತಾದ ಶಬ್ದಗಳು ಸಾವಿರಾರುಸಲ ಪ್ರಯೋಗವಾಗಿರುವುದನ್ನು ಗಮನಿಸಬೇಕು.  ಕುಮುದೇಂದುಮುನಿಯು ಋಗ್ವೇದದ ಮಹತ್ವವನ್ನು ಸಮರ್ಪಕವಾಗಿ ಅರಿತವನು. ಮಹಾಬಂಧ ವು ಸಿರಿಭೂವಲಯದ ಪ್ರಾಚೀನ ಹೆಸರೆಂಬುದು ಸ್ಪಷ್ಟವಿದೆ. ಕುಮುದೇಂದುಮುನಿಯು ಈ ಮಹಾಬಂಧ ಯಾವುದೆಂಬುದನ್ನು ಖಚಿತವಾಗಿ ನಿರೂಪಿಸಿದ್ದಾನೆ. ನೋಡಿ: ೫೮ನೇ ಅಧ್ಯಾಯದ ೧೩೪ನೇ ಪದ್ಯ. ಋಗ್‌ಮಹಾಬಂಧ ಎಂಬ ಇಲ್ಲಿನ ವಿವರಣೆಯ ಮೂಲಕ ಜೈನ ಸಂಪ್ರದಾಯದ ಸಕಲ ಶಾಸ್ತ್ರ ಗ್ರಂಥಗಳಿಗೂ ಋಗ್‌ವೇದವೇ ಮೂಲ ಆಕರ ಎಂಬ ಮೂಲ ಸತ್ಯವನ್ನು ಖಚಿತ ಗೊಳಿಸಿದ್ದಾನೆ. ಇಂಥ ಮಾಹಿತಿಗಳ ಪರಿಚಯದಿಂದಾಗಿಯೇ ಡಾ| ಎಸ್. ಶ್ರೀಕಂಠಶಾಸ್ತ್ರಿಯವರು ಹಾಗೂ ಸತ್ಯ ಪತ್ರಿಕೆಯವರು ೬೦ ವರ್ಷಗಳಿಗೆ ಹಿಂದೆಯೇ ಈ ವಿಚಾರವಾಗಿ ತಮ್ಮ ಖಚಿತ ಅಭೀಪ್ರಾಯ ಸೂಚಿಸಲು ಅವಕಾಶವಾಗಿದೆ. ಆದರೆ ಕಳೆದ ೬೦ ವರ್ಷಗಳಿದಲೂ ಜೈನ ಸಂಪ್ರದಾಯದವರಾಗಲೀ; ವೈದಿಕಸಂಪ್ರದಾಯದವರಾಗಲೀ  ಈವಿಚಾರವಾಗಿ ಚಕಾರವೆತ್ತಿಲ್ಲವೆಂಬುದು ಗಮನಾರ್ಹ ಸಂಗತಿಯಾಗಿದೆ! ಈ ಎರಡೂ ಸಂಪ್ರದಾಯಗಳವರೂ  ತಾವು ಹಾಗೂ ತಮ್ಮ ತತ್ವಸಿಂದ್ಧಾಂತಗಳೇ ಸರ್ವಶ್ರೇಷ್ಠ ಎಂಬ ಮೇಲರಿಮೆಯ ಹುಚ್ಚು ಹೊಳೆಯ ಸೆಳತಕ್ಕೆ ಸಿಲುಕಿ, ಜಗತ್ತಿನ ಈ ಪ್ರಾಚೀನ ಅಮೂಲ್ಯ ಜ್ಞಾನರತ್ನವು ಆಸಕ್ತರ ಅವಗಾಹನೆಗೂ ಸುಲಭಾಗಿ ಸಿಗದಂತಾಗಿದ್ದಿತು. ಈಗ ಪ್ರಥಮ ಖಂಡವಾದರೂ ಪೂರ್ಣವಾಗಿ ಲಭಿಸಿರುವುದು ಸಂತಸದ ಸಂಗತಿ. ಎಂಬ ವಿಶ್ಲೇಷಣೆಯು ಕೆಲವರಿಗೆ ರುಚಿಸದಿರಬಹುದು.
  ಜಾಮದಗ್ನ್ಯಾವತ್ಸಸಗೋತ್ರದ ಸುಧಾರ್ಥಿಯು ಬಹಳವಾಗಿ ಗೌರವಿಸುವ ಕೋಟ ವಾಸುದೇವ ಕಾರಂತರು, ಡಾ| ಮಳಿಯೆ ಗೋಪಾಲಕೃಷ್ಣರಾಯರು, ಕರ್ಲಮಂಗಲಂ ಶ್ರೀಕಂಠಯ್ಯನವರು, ಕೆ. ಅನಂತಸುಬ್ಬರಾಯರು ಮುಂತಾದ ಹಿಂದಿನ ತಲೆಮಾರಿನ ಹಿರಿಯರು ತಾವು ಹಿಡಿದಕಾರ್ಯವನ್ನು ಬಿಡದೇ ಪಟ್ಟುಹಿಡಿದು ಸಾಧಿಸುವ ಛಲಗಾರರು. ಇಂಥವರ ಜೀವನಾದರ್ಶವನ್ನು ಅನುಸರಿಸುವ ಸುಧಾರ್ಥಿಯಲ್ಲೂ ಈ ಹಟದಗುಣ ಮೈಗೂಡಿರುವುದು ಸಹಜ. ಕುಮುದೇಂದುವೂ ಕೂಡ ಸಿರಿಭೂವಲಯವನ್ನು ಛಲಗಾರನಿಗೆ ಒಲಿಯುವ ಕಾವ್ಯ ಎಂದು ಸೂಚಿಸಿರುವುದರಿಂದ ಈ ಪರಿಚಯ ಗ್ರಂಥಗಳ ನಿರೂಪಣೆಯಲ್ಲಿ ಈ ವ್ಯಕ್ತಿಯು ಪಡೆದಿರುವ ಸಾರ್ಥಕತೆ ಸಹಜವಾಗಿದೆ.
  ನಾನು ಕೈಗೊಂಡಿರುವ ಈ ಕಾರ್ಯವು ಕೇವಲ ಸಿರಿಭೂವಲಯದ ಪರಿಚಯಮಾತ್ರ. ಇದು ಸಂಶೋಧನೆಯಲ್ಲ. ಸಮಗ್ರವಾದ, ಸಮರ್ಪಕವಾದ ಸಂಶೋಧನೆಯು ನಡೆಯಲು ಬಹುಭಾಷಾವಿಶಾರದರಾದ ಹಲವಾರು ವಿದಾಂಸರ ಸಮೂಹವೇ ಕಾರ್ಯನಿರ್ವಹಿಸಬೇಕು. ಇದು ವಿಶ್ವವಿದ್ಯಾಲಯಗಳು ಆಸಕ್ತಿವಹಿಸಿ ಮಾಡಬೇಕಾದ ಮಹತ್ಕಾರ್ಯ. ಒಬ್ಬ ವ್ಯಕ್ತಿಯು ಮಾಡಬಹುದಾದ ಪರಿಚಯದ ಕಾರ್ಯವನ್ನು ನನಗೆ ಸಾಧ್ಯವಿರುವ ಮಟ್ಟಿಗೆ ನಿರ್ವಹಿಸದ್ದೇನೆ ಎಂದು ಸೂಚಿಸುವ ಸುಧಾರ್ಥಿಗೆ ಈ ಮಹನ್ ಗ್ರಂಥದಲ್ಲಿ ಅತಂರ್ಗತವಾಗಿರುವ ಅಮೂಲ್ಯ ಮಾಹಿತಿಗಳು ಬೆಳಕುಕಾಣಬೇಕೆಂಬ ಆಕಾಂಕ್ಷೆ ತೀವ್ರವಾಗಿದೆ. ಸಮಕಾಲೀನ ಸಾಹಿತ್ಯ ಸಮೂಹವು ಈದಿಸೆಯಲ್ಲಿ ಸೂಕ್ತ ಗಮನಹರಿಸದಿರುವುದನ್ನು ಕುರಿತು ತೀವ್ರವಾಧ ಅಸಮಾಧಾನವೂ ತುಂಬಿದೆ. ಈಕಾರಣದಿಂದಾಗಿ ಇಲ್ಲಿನ ಬರಹದಲ್ಲಿ ಸಾಕಷ್ಟು ಕಾಠಿನ್ಯ ತುಂಬಿರುವುದೂ ಇದೆ.   ಉದಾಹರಣೆಗೆ ಈ ವಾಕ್ಯಗಳನ್ನು ಗಮನಿಸಬಹುದು: ಈ ಮೊದಲೇ ಒಮ್ಮೆ ಸೂಚಿಸಿರುವಂತೆ ಪೂರ್ಣಪದ್ಯ ಹಾಗೂ ಪಾದ ಪದ್ಯಗಳ ಅಶ್ವಗತಿಯ  ಅಂತರ್ಸಾಹಿತ್ಯವನ್ನು ಗುರುತಿಸುವಾಗ ಎರಡು ಅಥವಾ ಅದಕ್ಕೂ ಹೆಚ್ಚಿನ ಬೇರೆ ಬೇರೆ ಕಾವ್ಯಭಾಗಗಳು ಒಟ್ಟೊಟ್ಟಿಗೇ ಪ್ರವಹಿಸಿರುವಂತೆ ಕಾಣುತ್ತದೆ. ಪ್ರಾಚೀನ ಕನ್ನಡ, ಸಂಸ್ಕೃತ, ಪ್ರಾಕೃತ ಸಾಹಿತ್ಯಗಳ ಪರಿಚಯವಿರುವವರು ಮಾತ್ರ ಇಲ್ಲಿನ ಅಂತರ್ಸಾಹಿತ್ಯವನ್ನು ಕ್ರಮಬದ್ಧವಾಗಿ ಬಿಡಿಸಲು ಸಾಧ್ಯವಾಗುತ್ತದೆ. ನಮ್ಮ ಸಮಕಾಲೀನ ವಿದ್ವಾಂಸರು ಈ ವಿಚಾರವಾಗಿ ಆಸಕ್ತಿವಹಿಸಿ, ಹೊಸವಿಚಾರಗಳನ್ನು ಹೊರತೆಗೆಯುವ ಕಾರ್ಯಕ್ಕೆ ಕೈಹಾಕುವರೆಂಬ ನಂಬಿಕೆ ನನಗಿಲ್ಲ. ಕನ್ನಡದ ಹೆಮ್ಮೆಯನ್ನು ಜಗದ್ವಿಖ್ಯಾತಗೊಳಿಸುವ ಆಕಾಂಕ್ಷೆಹೊಂದಿ, ಮುಂದೆ ಹುಟ್ಟಿಬರುವ ಯಾರಾದರೂ ಪ್ರತಿಭಾಶಾಲಿಯು ಈ ಕಠಿಣವಾದ ಕಾರ್ಯಕ್ಕೆ ಪ್ರಯತ್ನಿಸಬಹುದೇನೋ ಎಂಬ ಆಶೆಯಿಂದ ನಾನು ಈ ಕಾಯಕ ನಡೆಸಿದ್ದೇನೆ. ಸರಳವಾಗಿ ಇಂದಿನ ಲಿಪಿಕ್ರಮದಲ್ಲೇ ಓದಿತಿಳಿಯಬಹುದಾದ ಆವೃತಿಯು ಸಿರಿಭೂವಲಯಸಾರ ಎಂಬುದಾಗಿ ೨೦೧೦ರಲ್ಲೇ ಪ್ರಕಟವಾಗಿದ್ದರೂ ಇದುವರೆವಿಗೆ ಯಾರೊಬ್ಬ ಸಂಸ್ಕೃತ ಅಥವಾ ಪ್ರಾಕೃತಭಾಷಾ ವಿದ್ವಾಂಸರೂ ಇಲ್ಲಿನ ಮಾಹಿತಿಯ ತಪ್ಪು ಒಪ್ಪುಗಳನ್ನು ಕುರಿತು ತಮ್ಮ ತುಟಿಬಿಚ್ಚದಿರುವುದರಿಂದ ನಾನು ಈ ಅನಿಸಿಕೆಯನ್ನು ವ್ಯಕ್ತಗೊಳಿಸುವುದು ಅನಿವಾರ್ಯವಾಗಿದೆ. ವೈದಿಕ ಸಂಪ್ರದಾಯದವರಿಗೆ ಪ್ರಾಕೃತಭಾಷೆಯ ವಿಚಾರವಾಗಿ ಹೆಚ್ಚಿನ ಒಲವಿಲ್ಲದಿರುವುದು ಸಹಜಸಂಗತಿ. ಆದರೆ, ತಮ್ಮ ಸಂಪ್ರದಾಯದ ಧಾರ್ಮಿಕ ವಿಚಾರಗಳಗಣಿ ಎಂಬ ಕಾರಣದಿಂದಾಗಿ ಜೈನಸಂಪ್ರದಾಯದವರು ಇಂದಿಗೂ ಪ್ರಾಕೃತಭಾಷೆಯ ಪೋಷಕರಾಗಿರುವುದು ಸರ್ವವೇದ್ಯ. ಆದರೆ ಸಿರಿಭೂವಲಯವು ಸರ್ವಧರ್ಮ ಸಮನ್ವಯ ಸಾರಿರುವುದರಿಂದ, ಸರ್ವ ಜ್ಞಾನದ ಮೂಲವೂ ಋಗ್ವೇದವೇಂದೇ ಘಂಟಾಘೋಷವಾಗಿ ಸಾರಿರುವುದಿದೆ.. ಇಲ್ಲಿ ವೈದಿಕ ಅಥವಾ ಜೈನ ಸಂಪ್ರದಾಯದ ನಡುವೆ ಯಾವುದು ಹೆಚ್ಚು ಶ್ರೇಷ್ಠ ಎಂಬ ಅನುಚಿತ ವಿಚಾರಕ್ಕಿಂತಲೂ ಈ ಅಚ್ಚರಿಯ ಪ್ರಾಚೀನ ಕನ್ನಡ ಅಂಕಕಾವ್ಯದಲ್ಲಿ ಅಡಗಿರುವ ಮಹತ್ತರವಾದ ಮಾಹಿತಗಳತ್ತ ವಿದಾಂಸರು ಹೆಚ್ಚಿನ ಗಮನ ಹರಿಸಬೇಕೆಂಬುದು ನನ್ನ ಕಳಕಳಿಯ ಮನವಿಯಾಗಿದೆ. ಈ ಕಾರಣದಿಂದಾದರೂ ಇಂದಿನ ವಿದ್ವಾಂಸರು ಇತ್ತ ಗಮನ ಹರಿಸಿದರೆ, ಕುಮುದೆಂದು ಮುನಿಯ ಅಭಿಮಾನಿಗಳೆಲ್ಲರೂ ಹೆಚ್ಚು ಸಂಭ್ರಮ ಪಡಬಹುದಾದ ಪ್ರಾಚೀನ ಮಹತ್ವಗಳು ಬೆಳಕು ಕಾಣಲು ಅವಕಾಶವಾದೀತೆಂದು ನಾನು ಕನಸು ಕಾಣುತ್ತಿದ್ದೇನೆ! ಕುಮುದೇಂದುಮುನಿ, ಕರ್ಲಮಂಗಲಂ ಶ್ರೀಕಂಠಯ್ಯನವರು, ಕೆ ಅಂತಸುಬ್ಬರಾಯರು ಇವರುಗಳ ಅನನ್ಯವಾದ ಕನ್ನಡಾಭಿಮಾನದಿಂದ ಪ್ರೇರಿತನಾಗಿ ನಾನು ಈ ಕಠಣವಾದ ಕಾರ್ಯಕ್ಕೆ ಕೈಹಾಕಿರುವೆನೆಂದು ಸೂಚಿಸುವ ಈ ಪರಿಚಯಕಾರನ ಸಾತ್ವಿಕ ಕೋಪಕ್ಕೆ ಯಾರೊಬ್ಬರೂ ಬೇಸರಿಸುವ ಅಗತ್ಯವಿಲ್ಲ. ಇದು ಕ್ಷಮಾರ್ಹವಾದುದು.
  ಸಿರಿಭೂವಲಯದ ಅಕ್ಷರ ಅವತರಣಿಕೆಯು ಪ್ರಕಟವಾದ ಪ್ರಾರಂಭದಲ್ಲಿ ಅದರ ವಿಚಾರವಾಗಿ ಸಾಕಷ್ಟು ಆಳವಾಗಿ ಅಧ್ಯಯನ ನಡೆಸಿ, ತಮ್ಮ ಖಚಿತವಾದ ಅನಿಸಿಕೆಗಳನ್ನು ವ್ಯಕ್ತಪಡಿಸಿದವರಲ್ಲಿ ಡಾ| ಎಸ್. ಶ್ರೀಕಂಠಶಾಸ್ತ್ರಿಯವರು ಮೊದಲಿಗರು. ಇವರ ಆಲೋಚನೆಯ ಜಾಡನ್ನು ಅನುಸರಿಸಿ, ಕೆ. ಅನಂತಸುಬ್ಬರಾಯರು ನೀಡಿದ ಮಾರ್ಗದರ್ಶನದಲ್ಲಿ ಮುನ್ನಡೆದು, ಅಂತರ್ಸಾಹಿತ್ಯವನ್ನು ಹೊರತೆಗೆದು ಸಿರಿಭೂವಲಯದ ನಿಜವಾದ ಅಂತರಂಗವನ್ನು ಪರಿಚಯಿಸುವ ಕಾರ್ಯದಲ್ಲಿ ಸುಧಾರ್ಥಿಯು ಮೊದಲಿಗನೆಂಬುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಸಿರಿಭೂವಲಯದ ವಿಚಾರವಾಗಿ ಸುಧಾರ್ಥಿಯು ಹೊಂದಿರುವ ಆಸಕ್ತಿಯಫಲವಾಗಿ ಈಗ ಸಿರಿಭೂವಲಯದ ಅಭಿಮಾನಿಗಳ ಸಂಖ್ಯೆ ಸಾಕಷ್ಟು ಬೆಳೆದಿದೆ. ಬೆಳಗಾವಿಯ ಅಭಿಮಾನಿಯೊಬರು ಅಲ್ಲಿನ ಭರತೇಶ ಶಿಕ್ಷಣಸಂಸ್ಥೆಗಳ ಸಮೂಹದ ವತಿಯಿಂದ ಸಿರಿಭೂವಲಯವನ್ನು ಓದುವ ಕ್ರಮಕುರಿತು ಆರುದಿಗಳ ಅವಧಿಯ ಒಂದು ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿದ್ದು ಒಂದು ಪ್ರಮುಖ ಸಂಗತಿ. 
  ತಾನು ಕೈಗೊಂಡ ಈ ಪರಿಚಯಕಾರ್ಯದಲ್ಲಿ ತನ್ನಂತೆಯೇ ಆಸಕ್ತಿ ಹೊಂದಿರುವ ಮುಂದಿನ ಪೀಳಿಗೆಯ ನಿರ್ಮಾಣದಲ್ಲಿಯೂ ಸುಧಾರ್ಥಿಯು ಆಸಕ್ತಿವಹಿಸಿರುವುದು ಸಂತೋಷದ ಸಂಗತಿಯಾಗಿದೆ. ಪವರ್ ಗ್ರಿಡ್ ಕಾರ್ಪೋರೇಷನೆ ಆಫ್ ಇಂಡಿಯಾ ಸಂಸ್ಥೆಯಲ್ಲಿ ಅಧಿಕಾರಿಯಾಗಿ ದೂರದ ಮಿಜೋರಾಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಹೆಚ್. ಎಂ. ಸದಾನಂದ ಅವರು ಸಿರಿಭೂವಲಯ ಕುರಿತು ಹಂಪೆಯ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಲು ನಿರೂಪಿಸುತ್ತಿರುವ ಮಹಾಪ್ರಬಂಧದ ವಿಚಾರವಾಗಿ ಅವರೊಂದಿಗೆ ಪ್ರತಿದಿನವೂ ದೂರವಾಣಿಯ ಮೂಲಕ ವಿಚಾರವಿನಿಮಯಮಾಡಿ, ಅವರಲ್ಲಿ ಸಾಕಷ್ಟು ಆಸಕ್ತಿ ಹಾಗೂ ವಿಚಾರಗಳನ್ನು ತುಂಬಿ ಒಬ್ಬ ಸಮರ್ಥ ವ್ಯಕ್ತಿಯನ್ನು ಮುಂದಿನ ಕಾರ್ಯಕ್ಕೆ ಇವರು ಸಿದ್ಧಗೊಳಿಸುತ್ತಿರುವುದು ಅನುಕರಣೀಯ.
  ಸಾಹಿತ್ಯಕೃತಿಗಳ ಅಧ್ಯಯನವು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕ್ಷೀಣಿಸಿದೆ. ಅದರಲ್ಲೂ ಸಿರಿಭೂವಲಯವನ್ನು ಸುಲಭವಾಗಿ ಓದಿ ಅರಗಿಸಿಕೊಳ್ಳುವುದು ಬಹಳ ಶ್ರಮದಕಾರ್ಯ. ತಮಗೆ ಆಸಕ್ತಿಯಿರುವ ವಿಚಾರಗಳ ಅಧ್ಯಯನಕ್ಕೆ ಇಂದಿನ ವಿದ್ಯಾವಂತರು ತಮಗೆ ಅನುಕೂಲಕರವಾದ ಅಂತರ್ಜಾಲತಾಣಗಳನ್ನು ವೀಕ್ಷಿಸುವುದು ಸಾಮಾನ್ಯ ಸಂಗತಿಯಾಗಿದೆ. ಸಿರಿಭೂವಲಯವನ್ನು ಕುರಿತಂತೆಯೂ ಈ ಅಂತರ್ಜಾಲತಾಣಗಳಲ್ಲಿ ಸಾಕಷ್ಟುಮಾಹಿತಿಗಳು ಲಭ್ಯವಿವೆ. ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ತನಗೆ ಗೋಚರವಾದ ಹೊಸಹೊಸ ಖಚಿತಮಾಹಿತಿಗಳನ್ನು ಅಂತರ್ಜಾಲತಾಣದಲ್ಲಿಯೂ ಪ್ರಚುರಪಡಿಸುತ್ತಿರುವುದು ಸುಧಾರ್ಥಿಯ ಇನ್ನೊಂದು ವಿಶೇಷತೆಯಾಗಿದೆ. ಇದಕ್ಕೆ ನೆರವಾಗುತ್ತಿರುವ ಅಭಿಮಾನಿಗಳೂ ಅಭಿನಂದನಾರ್ಹರು.
  ಸುಧಾರ್ಥಿಯು ರಚಿಸಿರುವ ಸರಳ ಪರಿಚಯಕೃತಿಗಳ ಅಧ್ಯಯನದಿಂದಾಗಿ, ವೈದಯಕೀಯ, ಗಣಿತ, ಗಣಕಯಂತ್ರಕ್ರಮ, ಧರ್ಮ ಮುಂತಾದ ಬೇರೆ ಬೇರೆ ಕ್ಷೇತ್ರಗಳ ಕೆಲವರು ಆಸಕ್ತಿವಹಿಸಿ, ಕುಮುದೇಂದುವಿನ ಕಾವ್ಯದ ವಿಚಾರ ತಿಳಿಯುವ ಉತ್ಸಾಹ ಹೊಂದುವಂತಾಗಿರುವುದು ಸ್ವಾಗತಾರ್ಹವಾದ ಸಂಗತಿ. ಇದೆ ಕ್ರಮದಲ್ಲಿ ಸಂಗೀತ, ನೃತ್ಯ, ವೇದೋಪನಿಷತ್ತುಗಳಿಗೆ ಸಂಬಂಧಿಸಿದ  ಬೇರೆ ಬೇರೆ ಭಾಷೆಯ ತಜ್ಞರೂ ಇದರತ್ತ ಗಮನಹರಿಸಿ, ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈ ಅಚ್ಚರಿಯ ಕಾವ್ಯದಲ್ಲಿ ಅಡಕವಾಗಿರುವ ಮಾಹಿತಿಗಳನ್ನು ಸಮರ್ಪಕವಾಗಿ ಹೊರಗೆಡಹಿ, ಸಿರಿಭೂವಲಯದ ಮಹತ್ವವನ್ನು ಹೆಚ್ಚಿಸಲು ಸಹಕಾರಿಯಾಗಲೀ ಎಂದು ಆಶಿಸುತ್ತೇನೆ. ಈ ರೀತಿ ಆದಲ್ಲಿ ಸುಧಾರ್ಥಿಯ ಶ್ರಮ ಸಾರ್ಥಕವಾದಂತೆ.

   ತಾನು ರೂಪಿಸಿ ಪ್ರಕಟಿಸಿರುವ ಪರಿಚಯಕೃತಿಗಳಿಗಿಂತಲೂ; ಕರ್ಲಮಂಗಲಂ ಶ್ರೀಕಂಠಯ್ಯನವರು ರೂಪಿಸಿರುವ ಸಿರಿಭೂವಲಯದ ಜನತಾಸಂಸ್ಕರಣ ದಲ್ಲಿ ಇನ್ನೂ ಹೆಚ್ಚು ವ್ಯಾಪಕವಾದ ಮಾಹಿತಿಗಳು ಅಡಕವಾಗಿವೆ. ಪ್ರಾಯಶಃ ಅದರಲ್ಲಿ ಸಿರಿಭೂವಲಯದ ನಾಲ್ಕನೇ ಖಂಡದವರೆಗಿನ ಮಾಹಿತಿಗಳು ಲಭ್ಯವಿರಬಹುದು. ಅವುಗಳನ್ನು ನಾನು ಒಮ್ಮೆ ಮಾತ್ರ ನೋಡಿದ್ದೇನೆ. ಶ್ರೀಕಂಠಯ್ಯನವರ ಉತ್ತರಾಧಿಕಾರಿಗಳಲ್ಲಿ ಸುರಕ್ಷಿತವಾಗಿರುವ ಈ ಪ್ರತಿಯನ್ನು ಅವರುಗಳೇ ಆಗಲೀ, ಸರ್ಕಾರವಾಗಲೀ ಆಸಕ್ತಿವಹಿಸಿ ಮುದ್ರಣಮಾಡಿಸುವ ಕಾರ್ಯ ನಿರ್ವಹಿಸಿದರೆ ಅದರಿಂದ ಶ್ರೀಕಂಠಯ್ಯನವರ ಆತ್ಮಕ್ಕೆ ಶಾಂತಿ ಸಿಗುವುದು ಮಾತ್ರವಲ್ಲ; ಜಗತ್ತಿನ ಸಾಹಿತ್ಯಾಸಕ್ತರೆಲ್ಲರಿಗೂ ಮಹತ್ತರವಾದ ಉಪಯೋಗವಾಗುತ್ತದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಾನೇ ಬೇಕಾದರೂ ಈ ಕಾರ್ಯ ನಿರ್ವಹಿಸುವೆ ಎಂದು ಸುಧಾರ್ಥಿಯು ನನ್ನಲ್ಲಿ ಅನೇಕಸಲ ಸೂಚಿಸಿರುವುದಿದೆ. ಸಂಬಂಧಿಸಿದವರು-ಶ್ರೀಕಂಠಯ್ಯನವರ ವಂಶಸ್ತರು ಅಥವಾ ಸರ್ಕಾರದ ಸಂಬಂಧಿಸಿದ ಸಂಸ್ಥೆಗಳು ಈ ಕಾರ್ಯ ಕೈಗೊಳ್ಳುವುದು ಸೂಕ್ತವೆಂದು ನನಗನಿಸುತ್ತದೆ. ಅಥವಾ ಈ ವಿಚಾರದಲ್ಲಿ ಹೆಚ್ಚಿನ ಆಸಕ್ತಿ-ಅನುಭವ ಹೊಂದಿರುವ ಸುಧಾರ್ಥಿಯಾದರೂ ಈ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕಾದುದು ಅಗತ್ಯ.
  ಕೇವಲ ಸಾಹಿತ್ಯ ಕೃಷಿಮಾತ್ರವಲ್ಲದೇ, ಭೂಮಿಯ ಕೃಷಿಯಲ್ಲೂ ಹೆಚ್ಚಿನ ಆಸಕ್ತಿವಹಿಸಿರುವ ಸುಧಾರ್ಥಿಯ ಶ್ರಮದ ಫಲವನ್ನು ನಾನು ಪ್ರತ್ಯಕ್ಷವಾಗಿ ನೋಡಿದ್ದೇನೆ. ೩೫ ವರ್ಷಗಳ ಬೆಂಗಳೂರಿನ ಜೀವನವನ್ನು ತೊರೆದು, ಗ್ರಾಮೀಣ ಪರಿಸರದಲ್ಲಿ ನೆಲೆಸುವ ನಿರ್ಧಾರಕ್ಕೆ ಸಮ್ಮತಿಸುವುದು ಬಹಳ ಕಠಿಣ. ಆದರೆ, ಕಠಿಣವಾದ ನಿರ್ಧಾರವಿಲ್ಲದೇ ಇಂಥ ಕಠಿಣವಾದ ಕಾರ್ಯಸಾಧನೆ ಸಾಧ್ಯವಿಲ್ಲ. ಈ ದಿಸೆಯಲ್ಲಿ ಸುಧಾರ್ಥಿಯ ಅರ್ಧಾಂಗಿಯ ಕೊಡುಗೆ ಅಮೂಲ್ಯವಾದುದು. ಸುಧಾರ್ಥಿಯು ರಚಿಸಿದ ಪರಿಚಯಕೃತಿಗಳನ್ನು ಪ್ರಕಟಿಸಲು ಯಾರಾದರೂ ಮುಂದೆ ಬರದಿದ್ದರೆ, ಅದರ ಉಪಯೋಗ ಹೆಚ್ಚುಜನಗಳಿಗೆ ಸಿಗುವ ಅವಕಾಶವಿರಲಿಲ್ಲ! ಸುಧಾರ್ಥಿಯ  ಸಹಧರ್ಮಿಣಿ ಚಿ.ಸೌ. ಗಿರಿಜೆಯು ನಿಜವಾದ ಅರ್ಥದಲ್ಲಿ ಆತನಿಗೆ  ಅರ್ಧಾಂಗಿಯಾಗಿ, ಈ ಕೃತಿಗಳ ಪ್ರಕಟಣೆಯ ಹೊಣೆಹೊತ್ತಿರುವುದು ಆತನ ಪೂರ್ವಾರ್ಜಿತ ಸುಕೃತ. ಕೆ. ಅನಂತಸುಬ್ಬರಾಯರ ಸ್ಮಾರಕಸಂಸ್ಥೆಯಾಗಿ ಸುಮಾರು ಒಂದು ದಶಕದಕಾಲ ಅನಂತಪ್ರಕಾಶನ ವನ್ನು ಯಶಸ್ವಿಯಾಗಿ ನೆಡಸುತ್ತಿದ್ದಾಗಿನಿಂದಲೂ ನನಗೆ ಈ ದಂಪತಿಗಳು ಪರಿಚಿತರು. ಸುಧಾರ್ಥಿಯ ಶ್ರೀಮತಿ ಚಿ.ಸೌ ಗಿರಿಜೆಯು ಕೇವಲ ಪ್ರಕಾಶಕಿಯಾಗಿ ಮಾತ್ರವಲ್ಲ; ಈಗ ಒಂದೊಂದೇ ಅಕ್ಷರಗಳನ್ನು ಹುಡುಕಿಕೊಂಡು ಸಿರಿಭೂವಲಯದ ಅಂತರ್ಸಾಹಿತ್ಯವನ್ನು  ಸಂಗ್ರಹಿಸುವ ಕಾರ್ಯದಲ್ಲಿಯೂ ನೆರವುನೀಡುತ್ತಿರುವ ಸಂಗತಿಯನ್ನು ಸುಧಾರ್ಥಿಯು ನನ್ನ ಗಮನಕ್ಕೆ ತಂದಿರುವುದರಿಂದ ಪ್ರಕಾಶಕಿಯ ಔದಾರ್ಯವನ್ನು ಮೆಚ್ಚಿದ್ದೇನೆ. ಅರ್ಥ ಸಂಪಾದನೆಯ ಅಪೇಕ್ಷೆಯಿಲ್ಲದ ಈ ಅರ್ಥಪೂರ್ಣ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿರುವ ಈ ದಂಫತಿಗಳ ಪ್ರಯತ್ನವು ಸಾರ್ಥಕವಾಗಲೆಂದು ಆಶೀರ್ವದಿಸಿದ್ದೇನೆ.  ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ, ಕೇವಲ ಕನ್ನಡಾಭಿಮಾನದಿಂದ ಸಿರಿಭೂವಲಯ ಕುರಿತು ಇಷ್ಟೆಲ್ಲ ಕಾರ್ಯನಿರ್ವಹಿಸಿರುವ ಹಾಸನದ ಸುಧಾರ್ಥಿಯನ್ನು ಸಿರಿಭೂವಲಯದ ಸುಧಾರ್ಥಿ ಎಂದು ಸೂಚಿಸುವುದು ಹೆಚ್ಚುಸೂಕ್ತವಾದೀತು. ಈ ಪರಿಚಯಗ್ರಂಥದ ಮುಖಬೆಲೆಯನ್ನು ಗಮನಿಸಿದಾಗ ನಿಜಕ್ಕೂ ಇದೊಂದು ಜ್ಞಾನದಾನಯಜ್ಞವೆನಿಸುತ್ತದೆ. ಕನ್ನಡದಮೇಲಿನ ಅಭಿಮಾನದಿಂದ ನಡೆದಿರುವ ಈ ಮಹಾನ್ ಜ್ಞಾನದಾನದ ಪೂರ್ಣಫಲವನ್ನು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ಥಕವಾಗಿ ಬಳಸಿಕೊಳ್ಳಲೆಂದು ಆಶಿಸುತ್ತೇನೆ. ಶ್ರೀ ಸುಧಾರ್ಥಿಯವರ ಶ್ರಮಕ್ಕೆ ನನ್ನ ಅಭಿನಂದನೆಗಳು.

- ಜಿ.ವೆಂಕಟಸುಬ್ಬಯ್ಯ

ಬೆಂಗಳೂರು ೧೮-೦೨-೨೦೧೩                                                                        

Monday, 17 December 2012

ಸಿರಿಭೂವಲದ ಬಗ್ಗೆ ಪ್ರೊ. ಜಿ ವೆಂಕಟಸುಬ್ಬಯ್ಯನವರೊಡನೆ ವಿಚಾರ ವಿನಿಮಯ

OLYMPUS DIGITAL CAMERAOLYMPUS DIGITAL CAMERA    
ಯಾವ ಮುನ್ಸೂಚನೆ ಇಲ್ಲದೆ ನಮ್ಮ ರಿಕ್ಷಾ ಪ್ರೊ. ಜಿ.ವೆಂಕಟಸುಬ್ಬಯ್ಯನವರ ಮನೆ ಮುಂದೆ ನಿಂತಾಗ, ನಮಗೆ ಅಚ್ಚರಿ ಕಾದಿತ್ತು. ನಗುಮುಗ ಹೊತ್ತ ವೆಂಕಟಸುಬ್ಬಯ್ಯನವರು ನಮ್ಮನ್ನು ಎದಿರುಗೊಳ್ಳಲು ನಿಂತಂತೆ ಮನೆಯ ಗೇಟ್ ನಲ್ಲೇ ನಿಂತಿರಬೇಕೇ! ನಗುಮೊಗದಿಂದಲೇ ಒಳಗೆ ಬನ್ನಿ, ಎಂದರು ಶ್ರೀ ಸುಧಾರ್ಥಿಯವರು ನನ್ನ ಪರಿಚಯ ಮಾಡಿಕೊಟ್ಟರು. ಸುಮಾರು ಅರ್ಧಗಂಟೆ ಉಭಕುಶಲೋಪರೀ ಮಾತನಾಡಿದಮೇಲೆ ಅವರ ಮಾತುಗಳನ್ನು ರೆಕಾರ್ಡ್ ಮಾಡಿಕೊಳ್ಳಲು ಅವರ ಅನುಮತಿ ಪಡೆದು ನನ್ನ ರೆಕಾರ್ಡರ್ ಅವರ ಮುಂದಿಟ್ಟೆ. ಮಾತುಕತೆ ಶುರುವಾಯ್ತು.
"ಸಿರಿಭೂವಲಯ" ಗ್ರಂಥದ ಬಗ್ಗೆ ಅದೇಕೋ ಸತ್ಯವು ಹೊರಬರುತ್ತಿಲ್ಲ. ಸಾಹಿತಿಗಳು ಸಂಶೋಧಕರಿಗೆ ಅದೇಕೋ ಸಿರಿಭೂವಲಯದಲ್ಲೇನಿದೆ, ಎಂಬ ವಿಚಾರವನ್ನು ತಿಳಿಯುವ ಕಾತುರತೆ ಕಾಣುತ್ತಿಲ್ಲ. ಅಥವಾ ಸತ್ಯ ಹೊರಬರುವುದು ಕೆಲವರಿಗೆ ಬೇಕಿಲ್ಲವೇನೋ. ಅಂತೂ ಕಳೆದ ಇಪ್ಪತ್ತೈದು ವರ್ಷಗಳಿಂದ ಈ ಗ್ರಂಥದ ಬಗ್ಗೆ ಸಂಶೋಧನೆ ಮಾಡುತ್ತಾ ಅದರಲ್ಲಿ ಅದ್ಭುತ ಅಡಗಿದೆ ಎನ್ನುವ ಸುಧಾರ್ಥಿಯವರ ಮಾತು ನಿಜವಾಗಬೇಕು, ಇಲ್ಲವೇ ಸುಳ್ಳಾಗಬೇಕು...ಎಂಬುದು ನನ್ನ ಅನಿಸಿಕೆ ಆ ದೃಷ್ಟಿಯಿಂದ ಇಂತಾ ಹಿರಿಯರನ್ನು ಮಾತನಾಡಿಸಿ ನಿಮ್ಮ ಮುಂದೆ ಅವರ ಮಾತುಗಳನ್ನು ಯಥಾವತ್ತಾಗಿ ಅವರ ಧ್ವನಿಯಲ್ಲೇ ಇಟ್ಟಿರುವೆ. ಸಾಹಿತ್ಯಾಸಕ್ತರು, ನಿಜವ ತಿಳಿಯಬೇಕೆನ್ನುವ ಕುತೂಹಲಿಗಳು ದಯಮಾಡಿ ಸನ್ಮಾನ್ಯ ವೆಂಕಟಸುಬ್ಬಯ್ಯನವರ ಮಾತುಗಳನ್ನು ಕೇಳಬೇಕೆಂಬುದು ನನ್ನ ಕೋರಿಕೆ. ಆ ನಂತರ ಒಂದು ದಿನ ವಿಚಾರಗೋಷ್ಠಿ ನಡೆಯಬೇಕು, ಈ ಬಗ್ಗೆ ಸಿರಿಭೂವಲಯದ  ಅಭಿಮಾನಿಗಳು ನಿಮ್ಮ ಅಭಿಪ್ರಾಯ ತಿಳಿಸಬೇಕು.
ಪ್ರೊ. ಜಿ. ವೆಂಕಟಸುಬ್ಬಯ್ಯನವರ ಬಗ್ಗೆ ತಿಳಿದುಕೊಂಡಿಲ್ಲದವರು ಕರ್ನಾಟಕದಲ್ಲಿ ವಿರಳ. ಹಾಗಾಗಿ ಅವರ ಪರಿಚಯ ಇಲ್ಲಿ ಮಾಡುವುದು ಅನಗತ್ಯ. ಆದರೂ ಗೂಗಲ್ ಮೂಲಕ ಶ್ರೀಯುತರ ಫೇಸ್ ಬುಕ್ ತೆರೆದಾಗ ಸಿಕ್ಕ ಮಾಹಿತಿಗಳನ್ನು ಓದುಗರ ಗಮನಕ್ಕಾಗಿ ಪ್ರಕಟಿಸಿರುವೆ.
ಮಾಹಿತಿ ಕೃಪೆ: ಫೇಸ್ ಬುಕ್
Biography
Early life and education: Venkatasubbaiah was born on August 23, 1913. He was born and brought up in Mysore. He is the son of renowned Kannada and Sanskrit scholar Ganjam Thimmanniah. He secured his Masters of Arts degree from the Maharaja college in Mysore in the year 1932, ranking first in the university. He took up the teaching profession and taught Kannada language at the Maharaja's College in Mysore and the Vijaya college in Bangalore.He served as Head of department of Kannada in Vijaya College and Prof.V.T.Srinivasan was the Principal of that college from 1951 to 1972. Literary contributions: Venkatasubbaiah has compiled more than 10 dictionaries, including an eight-volume Kannada-Kannada Nighantu (Dictionary). This dictionary has also been translated to the Braille language by the Braille Transcription Centre of the Canara Bank Relief and Welfare Society. He has been writing the popular column, Igo Kannada for over a decade in the major Kannada daily, Prajavani. The articles published in Igo Kannada have been compiled into a book in two volumes. He has also authored a dictionary entitled Klishtapada Kosha (a dictionary of complex Kannada words) which was released to mark the Suvarna Karnataka (Silver Jubilee of the formation of Karnataka). It is the first of its kind in Kannada language which covers different language specifications such as derivation, punctuation, phoneme and morphological patterns of Kannada language as the language has evolved over the centuries. He has served as the vice president of the Lexicographical Association of India for 17 years. In 1998, he was appointed as an advisor to the multilingual dictionary project of the Institute of Asian Studies, Chennai, which comprises Japanese, Kannada, English and Tamil. He was also appointed as a consultative committee member in the Telugu lexicon project initiated by the Telugu Academy of the Government of Andhra Pradesh.
Description
Prof. G. Venkatasubbaiah (Kannada: ಪ್ರೊ ಜಿ.ವೆಂಕಟಸುಬ್ಬಯ್ಯ) (born August 23, 1913) is a Kannada lexicographer who has compiled over 10 dictionaries, edited over 25 books and published several papers. He is regarded as the father of the modern Kannada dictionary
Awards:
Venkatasubbaiah has been conferred numerous awards, important among which are the Kannada Sahitya Academy award, the Karnataka Rajyotsava award and the Nadoja award, which is honorary degree equivalent to the D.Litt degree. He has also been awarded the Masti Award by the Government of Karnataka. He was President of the Kannada Sahitya Parishat from 1964-69. He has also chaired the annual Kannada literary festival, Alvas Nudisiri in 2007.He was also congratulated at the first international lexicographers meeting held in Annamalai University in Tamil Nadu.
Special occasion: Writers Chennaveera Kanavi, G.S. Shivarudrappa, G. Venkatasubbaiah, L.S. Seshagiri Rao and Sa.Shi. Marulaiah at a function to felicitate writer and historian M. Chidananda Murthy (second from left) on the occasion of his 80th birthday, in Bangalore on Tuesday. — Photo: V. Sreenivasa Murthy Special occasion: Writers Chennaveera Kanavi, G.S. Shivarudrappa, G. Venkatasubbaiah, L.S. Seshagiri Rao and Sa.Shi. Marulaiah at a function to felicitate writer and historian M. Chidananda Murthy (second from left) on the occasion of his 80th birthday, in Bangalore on Tuesday. — Photo: V. Sreenivasa Murthy      
---------------------------------------------------------------------------------------------
ಸುಧಾರ್ಥಿಯವರ ಮಾತುಗಳಲ್ಲಿ.....
ಹಲ್ಮಿಡಿ ಶಾಸನಕ್ಕಿಂತಲೂ ಹಳೆಯ ಕನ್ನಡ ಶಾಸನಗಳಿವೆ
ಋಗ್ವೇದವೇ  ಎಲ್ಲಾ  ಜ್ಞಾನಿಗೂ ಮೂಲ
ಿರಿೂವ ಗ್ರ ಅಕ್ೂಪಲ್ಲೂ ಇದ
ಂದಿ ಬೆಟ್ಟ ಅತ್ಯಂತ ಪ್ರಾಚೀನಾದದ್ದೇ?
ಾವೀರತ್ತು ಬುದ್ಲ್ಲಿ ಯಾರು ಮೊದಿಗ 

"ಸಿರಿಭೂವಲಯ ಒಂದು ರಾಷ್ಟ್ರೀಯ ಸಂಪತ್ತು ಅದರಲ್ಲಿರುವ   ಜ್ಞಾನ ಹೊರಬರಬೇಕ" ಪ್ರೊ. ಜಿ ವೆಂಕಟಸುಬ್ಬಯ್ಯನವರ ಖಚಿತ ನಿಲುವು
----------------------------------------------------------------------------------




ಅಭಿಪ್ರಾಯಗಳು:

ಸಿರಿ ಭೂ ವಲಯ ಒಂದು ಅತ್ಯಪೂರ್ವ ಗ್ರಂಥ ಎನ್ನುವುದು ನಿರ್ವಿವಾದ, ಅದೇ ರೀತಿ ಹಲ್ಮಿಡಿ ಗಿಂತಲೂ ಬಹಳ ಹಿಂದೆಯೇ ಕನ್ನಡ ಶಾಸನಗಳು ಬಂದಾಗಿತ್ತು. ಹಾಗೆಯೇ ಕನ್ನಡ ಲಿಪಿಯ ದೃಷ್ಟಿಯಿಂದ ಅದಕ್ಕೂ ಮೊದಲು ಅಂದರೆ ೨ನೆ ಶತಮಾನದ ಕಾಲಕ್ಕೆಲ್ಲ ಕನ್ನಡ ಲಿಪಿ ಬಳಕೆ ಗೊಂದಾಗಿತ್ತು. ಬ್ರಾಹ್ಮಿಯಿಂದ ನೇರವಾಗಿ ಕವಲೊಡೆದು ಬಂದ ಕನ್ನಡ ಕ್ರಿಸ್ತ ಪೂರ್ವಕ್ಕೆ ಒಂದು ಹಂತ ತಲುಪಿತ್ತು, ಅಂದಾಗ ಕನ್ನಡ ಇನ್ನು ಹಿಂದಕ್ಕೆ ಇದ್ದಿರಲೇ ಬೇಕು. ಅಂದರೆ ಕ್ರಿಸ್ತ ಪೂರ್ವ ೩ನೆ ಶತಮಾನದ ಸುಮಾರಿಗೆ ಕನ್ನಡ ಇದ್ದಿರಲೇ ಬೇಕು.




Friday, 2 November 2012

ಸಿರಿಭೂವಲಯ ಒಂದು ಪರಿಚಯ

The Tenth wonder of the world
SARVA BHASHAMAYI BHASHA SIRIBUVALAYA
(A Book by name SarvaBhashamayIbhasha Siribhuvalaya is written in Kannada numerals, which comprised all Languages of the universe)
                   The volume of this amazing Book is about 16,000 pages. These pages are named as “CHAKRAS’ These chakras are in the form of a Magic Square, formed by small 27 squares horizontally and 27 squares vertically. These small squares filled with Kannada numerals from 1 to 64 as per formula. These 1 to 64 numerals represents 64 ancient Kannada Alphabets, which can pronounce and write all sounds /words belongs to 718languages of the Universe! Without any ambiguity SiriBhuvalaya is undoubtedly an amazing poem that belongs to all mankind.
The custodian of this ancient Kannada Numeric Literature was Mr. Yallappa Shastri, who was an Ayurvedic Medical representative in Bangalore. However he was not in a position to open the secret of this Book. Deciphering of this numeric literature was not an ordinary Job to do during 1930.
Mr. Karlamangalam Srikantaiah –A great legend in Kannada Literature –an unique scholar in his life time-with-out any degree or doctorate from any university, but studied only up to primary 3rd year, made an attempt to meet this challenge and ultimately succeeded. Just because of this reason his effort in this research work was agitated by the scholars. Dr. S. Srikantashastri M.A.D.Lit,-a great name in the study of Indian history has scrutinized the authenticity of Karlamangalam Srikantaiah’s effort in this project. He also discarded all the childish and unfair comments of kannada scholars during his life time. The same situation is continuing till date.
The metre (prosody) which is used by Kumudendu to compose this astonishing work is ‘Shabdagana’, which was a branch of ‘Sangthya’ This information is available in his work itself, and was clearly pointed out by K. Srikantaiah. Kannada scholars are not accepting this truth.
During 1953, a part of this book (about 1270 chakras out of 16,000 chakras) was deciphered, edited, printed, published and propagated by Karlamangalam Srikanatiah with the help of the custodian of the original manuscript, and Mr. K. Ananthasubbarao This attracted the notice of the president of India, Dr. Rajendra Prasad. As per his instruction, Government of India made an arrangement to preserve some portion of this work in the form of micro film.
The author of Sarvabhashamayibhasha Siribhuvalaya is Kumudendu . A Jain saint who lived during 800 A.D. He was the discipal of Virasena; Jinasena and Guru of Rashtrakuta Amoghavarsha Nrupatunga- and saigotta Sivamara of ganga Dynasty at Talakad..
Kumudendu was popularly known as yalavabhurisi and produced an unparalleled work Viz , siribhuvalaya with a brilliance of rarity, he stands out as a meteor, Though coming to lime light, this precious work of literature is not merely cornered, but has remained unknown, which is still a mystery. May be it is due to callous indifference, negligence and egoism of scholars in kannada literary field. What should have been proclaimed from house tops as the best literary work of the universe has gone to incognito-which is our misfortune.
Siribhuvalaya is comprising of the wisdom of 362 religions. All the branches of knowledge beginning from cattle rearing, Atomic sciences, Ayurveda, Aerodynamics, Astrology, Numerology, Physics, Chemistry, Metallurgy, Philosophy, Politics, culture, science of matrimony, Theosophy, History, Music, Dance and other subjects appear in this work. It is a fact, that this amazing work is also comprising of the ancient literature of India, like Ramayana; Bharatha; Bagavatha; bhagavadgeetha; Sahasranamas etc. In general all the information regarding to the subject of ‘knowledge’ are embedded in this unique work. This is a big ocean of Knowiedge.
Some great personalities from abroad have seen this Siribhuvalaya and described it as “The Tenth Wonder Of The World”.
The treasure house of knowledge designed to realize the achievements of individuals in this and other world,(Lowkika and paramarthika) Siribhuvalaya is basically a religious work. Sanathana Dharma is the root of all Dharmas., it is this part that siribhuvalaya heralds.
Vedas and Upanishads are the basics of Sanathana Dharma. Jainism does not concur with Vedas and Upanishads. It is an account of this factor (Hostility/ Controversy/ Disagreement) the Jains, Jain Scholars did not respect this great work with the honor it richly deserved, though its author was Jain, labeled as ‘Yapaniya’. Other religions of Kannada literary field also did not identify and recognize this unique work, this is just for the reason which they only know it better.
Mr. K. Ananthasubbarao who was the founder of kannada Shorthand and Typewriter, and a close associate of  karlamangalam Srikantaiah and yallappa Shasthti was propagating this Book throughout his lifetime. All the authentic information’s about this Book was induced to K.R. Shankaranarayana , who was working in ITI.Bangalore. He is studying this Book Since 1978, and collecting all internally generated literature from 1953 publication.
Since 2000 A.D, ‘Pustakashakthi prakashana‘-A Bangalore based publication is publishing number .of Books on this work, With the assistance of some well known scholars, headed by Dr. T.V. venkatachala sastry, and throwing some light on this work in their own way.
Recently, a Book by name ‘Sarvabhashamayibhasha Siribhuvalayasara’ written By: Sudharthy Hassan, (the penname of K.R.Shankaranarayana.) has been published by Sri Kashisheshashastri Caritable trust, Bangalore, during 2010. All the authentic information’s which belongs Siribhuvalaya of 1953 edition, and a general review of Pustakashakthi publications work, belongings to Siribhuvalaya are discussed in detail, in this book. It is a use full guide to forthcoming researchers on Kumudendu’s wonderfull work. More details can be had in this work about “kumudendumuni’s siribhuvalaya’. It is very difficult to go through the text which is internally generated out of 1953 edition. To over come this, Sudharthy Hassan made another effort to simplify the text, and published a selected poems of his siribhuvalayasara. ‘Siribhuvalayada AYDHA SANGATHYA PADYAGALA SANGRAHA is published during 2011.
The house top of Kannada literature were not able to experience the very rare essence of Kumudendu’s work, since last 60 years. Sudharthy Hassan has made it possible to enjoy this beauty by any interested common reader who can go through modern Kannada script. Through this ‘Aydha Sangathya padyagala sangraha’ author will take the common readers to very near to Kumudendu without any hurdle. More details can be had from above mentioned two Books which are available with leading Book sellers in Bangalore, and also with the author.
May contact : SUDHARTHY HASSAN, HALUVAGILU, THATTEKERE POST, HASSAN KASABA, HASSAN. 573 201. Mob. NO. 9449946280.

"ಸಿರಿಭೂವಲಯವನ್ನು "ಅಧ್ಯಯನ ಮಾಡಲು ಮನವಿ


ವೇದಸುಧೆಯ ಪ್ರೀತಿಯ ಅಭಿಮಾನಿಗಳೇ, ನಮಸ್ತೆ.
ಹಾಸನದ ಶ್ರೀ ಸುಧಾರ್ಥಿಯವರು ತಮ್ಮ ಸುಮಾರು ಇಪ್ಪತ್ತೈದು ವರ್ಷಗಳ ಸತತ ಪರಿಶ್ರಮದಿಂದ ಬಹಳ ಅಪರೂಪವಾದ ವಿಚಿತ್ರವಾದ, ವಿಶಿಷ್ಟವಾದ ಸಿರಿಭೂವಲಯ ಎಂಬ ಒಂದು ಅಂಕರೂಪದ ಗ್ರಂಥವನ್ನು ನಮಗೆ ಪರಿಚಯಿಸಲು ಹೊರಟಿದ್ದಾರೆ. ಸರಳವಾಗಿರದ ಅವರ ಈ ಪ್ರಯತ್ನವು ಕಷ್ಟಕರವೇ ಹೌದು. ವಿಶ್ವಕ್ಕೆ ನೀಡಬಹುದಾದ ಜ್ಞಾನವು ಸಿರಿಭೂವಲಯ ಗ್ರಂಥದಲ್ಲಿ ಅಡಗಿದೆ ಎನ್ನುವುದು ಅವರ ವಿಶ್ವಾಸ.ಏನಾದರಾಗಲೀ, ಅವರ ಲೇಖನವನ್ನು ದಯಮಾಡಿ ಓದಿ ನಿಮ್ಮ ಪ್ರಶ್ನೆಗಳನ್ನು ಕೇಳಿ, ಅವರೇ ನೇರವಾಗಿ ಉತ್ತರಿಸುವರು. ಸಾವಿರಾರು ವರ್ಷಗಳಿಂದ ಮೂಲೆಗೆ ಸೇರಿರುವ ಈ ಗ್ರಂಥದಿಂದ ಅನೇಕ ಅಚ್ಚರಿಯ ಮಾಹಿತಿಗಳು ಲಭ್ಯವಾಗಬಹುದು. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆಯೆಂದು ಹೇಳುವ ಸುಧಾರ್ಥಿಯವರ ಮಾತನ್ನು ಅಲ್ಲಗಳೆಯಲಾಗದು. ಅಷ್ಟೇ ಅಲ್ಲ ಬದುಕಿನ ಸೂತ್ರ ಅದರಲ್ಲಡಗಿದೆ ಎಂದು ಅವರು ಹೇಳುತ್ತಾರೆ! ವೇದಸುಧೆಯನ್ನು ವಿಶ್ವದ ಮೂಲೆ ಮೂಲೆಯಲ್ಲಿರುವ ಕನ್ನಡಿಗರು ಓದುತ್ತಿರುವ ಮಾಹಿತಿಯು ನಿತ್ಯವೂ ಲಭ್ಯವಾಗುತ್ತಿದೆ. ಸಾಫ್ಟ್ ವೇರ್ ಕ್ಷೇತ್ರದಲ್ಲಿ ಪರಿಣಿತ ಯುವಕರು ಸಂಶೋಧನೆಯ ದೃಷ್ಟಿಯಲ್ಲಿ "ಸಿರಿಭೂವಲಯವನ್ನು " ಅಧ್ಯಯನ ಮಾಡಬೇಕೆಂಬುದು ವೇದಸುಧೆಯ ಮನವಿ.ಅಧ್ಯಯನ ಮಾಡುತ್ತೀನೆನ್ನುವವರಿಗಾಗಿ ಸುಧಾರ್ಥಿಯವರು ಮಾಹಿತಿ ಒದಗಿಸುವರು. ಸಿರಿಭೂವಲಯ ಅಧ್ಯಯನ ಗೋಷ್ಟಿಯೊಂದನ್ನು ಹಾಸನದಲ್ಲಿ ಆರಂಭಿಸುವ ಪ್ರಯತ್ನ ಸಾಗಿದೆ. ಈ ವಿಚಾರವು ಯಾರಲ್ಲಿ ಆಸಕ್ತಿ ಮೂಡಿಸುತ್ತದೆಯೋ, ಯಾರಲ್ಲಿ ಸಂದೇಹ ಮೂಡುತ್ತದೆಯೋ ಅಂತವರು ತಮ್ಮ ವಿಚಾರವನ್ನು ಕಾಮೆಂಟ್ ಕಾಲಮ್ ನಲ್ಲಿ ಬರೆದರೆ ಚರ್ಚೆ ಮುಂದುವರೆಸಬಹುದು.

ಕನ್ನಡಕುಲಕೋಟಿಯ ಜನ್ಮಜನ್ಮಾಂತರದ ಜ್ಞಾನಸಂಪತ್ತು ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯ ಶಾಸ್ತ್ರೀಯಭಾಷೆಯ ಸ್ಥಾನಮಾನದ ಸಮಸ್ಯೆಗೆ ಇದೊಂದೇ ಸೂಕ್ತ ಪರಿಹಾರ !
ಸಿರಿಭೂವಲಯ ಎಂಬುದು ಒಂದು ಪ್ರಾಚೀನ ಕನ್ನಡ ಅಂಕಕಾವ್ಯ. ಕನ್ನಡದ ಒಂದರಿಂದ ೬೪ ರವರೆಗಿನ ಅಂಕಿಗಳನ್ನು ಮಾತ್ರ ಬಳಸಿ ಈ ಗ್ರಂಥವನ್ನು ರಚಿಸಲಾಗಿದೆ. ಸರ್ವಭಾಷಾಮಯೀಭಾಷಾ ಕನ್ನಡವರ್ಣಮಾಲೆಯ ೬೪ ಅಕ್ಷರಗಳನ್ನು ಈ ೬೪ ಅಂಕಿಗಳು ಪ್ರತಿನಿಧಿಸುತ್ತವೆ. ಒಂದೊದು ಪುಟದಲ್ಲಿಯೂ ಅಡ್ಡಸಾಲು ೨೭ ಹಾಗೂ ಉದ್ದಸ್ಸಾಲು ೨೭ ರಂತೆ ಒಟ್ಟು ೭೨೯ ಚಿಕ್ಕ ಚೌಕಗಳಿರುವ ಒಂದು ಪುಟವನ್ನು ಚಕ್ರ ಎಂದು ಕರೆಯಲಾಗುತ್ತದೆ.ಇಂಥ ೧೬೦೦೦ ಚಕ್ರಗಳು ಈ ಗ್ರಂಥದ ಒಟ್ಟುವ್ಯಾಪ್ತಿಯಾಗಿತ್ತು. ಅಂಕಿಗಳಿರುವಲ್ಲಿ ಅನ್ವಯವಾಗುವ ಅಕ್ಷರಗಳನ್ನು ಅಳವಡಿಸಿಕೊಂಡು; ಸುಮಾರು ೪೦ ಬೇರೆ ಬೇರೆ ಬಂಧಗಳಲ್ಲಿ ಓದಿದಾಗ, ಅದರಲ್ಲಿ ಆರುಲಕ್ಷ ಮೂಲ ಕನ್ನಡ ಸಾಂಗತ್ಯ ಪದ್ಯಗಳು ಹೊರಹೊಮ್ಮುತ್ತವೆ. ಇವುಗಳನ್ನು ಸೂಚನೆಗನುಗುಣವಾಗಿ ವಿಂಗಡಿಸಿಕೊಂಡು ಓದಿದಾಗ, ಅಕ್ಷರಕ್ಕೆ ಲಕ್ಷದಂತೆ ಜಗತ್ತಿನ ೭೧೮ ಭಾಷೆಗಳಿಗೆ ಸೇರಿದ, ೩೬೩ ಮತಧರ್ಮಗಳ ಸಮನ್ವಯ ಹಾಗೂ ಅಣುವಿಜ್ಞಾನ; ಆಕಾಶಗಮನ; ಆಯುರ್ವೇದ; ಅಂಕಗಣಿತ ಇತ್ಯಾದಿ ಸಕಲ ಜ್ಞಾ-ವಿಜ್ಞಾನಗಳಿಗೆ ಸೇರಿದ ಪ್ರಾಚೀನ ಸಾಹಿತ್ಯದ ಸಾರವು ನಮಗೆ ದೊರೆಯುತ್ತದೆ.೭೧೮ ಭಾಷೆಗಳ ಬೇರೆ ಬೇರೆ ಸಾಹಿತ್ಯವನ್ನು ಒಂದೆಡೆ ಕಟ್ಟಿರಿಸುವ ದಿಸೆಯಲ್ಲಿ ಬಳಸಿರುವ ಇಲ್ಲಿನ ಲಿಪಿಕ್ರಮವು ನಮಗೆ ಸ್ವಲ್ಪ ಅಪರಿಚಿತವೆನಿಸುವುದು ಸಹಜ. ಇಲ್ಲಿನ ಬರವಣಿಗೆಯಲ್ಲಿ ಪ್‌ಊರ್‌ಣ್‌ಆಕ್‌ಷ್‌ಅರ್‌ಅ ಕ್‌ರಮವಿಲ್‌ಲ. ಈ ಕ್ರಮದಲ್ಲಿ ಸಮಗ್ರ ಕಾವ್ಯವನ್ನು ಓದಿತಿಳಿಯುವುದು ಬಹಳ ಕಠಿಣವಾದ ಕಾರ್ಯ. ಕ್ರಿ.ಶ. ೮೦೦ ರರ ಸುಮಾರಿನಲ್ಲಿದ್ದ ಸುಪ್ರಸಿದ್ಧ ವ್ಯಾಖ್ಯಾನಕಾರ ವೀರಸೇನನ ಶಿಷ್ಯನೂ; ರಾಷ್ಟ್ರಕೂಟ ಚಕ್ರವರ್ತಿ ಮಾನ್ಯಖೇಟದ ಅಮೋಘವರ್ಷನಿಗೆ ಗುರುವೂ ಆಗಿದ್ದ ಕುಮುದೇಂದುವೆಂಬ ಜೈನ ಮುನಿಯು ತನ್ನ ಪ್ರಾಚೀನ ಗುರುಪರಂಪರೆಯ ಜ್ಞಾನಧಾರೆಯ ಆಧಾರದಲ್ಲಿ ರಚಿಸಿದ ಜಗತ್ತಿನ ಅತ್ಯದ್ಭುತ ಕನ್ನಡ ಅಂಕಕಾವ್ಯ ಈ ಸಿರಿಭೂವಲಯ.
ಈ ರೀತಿಯಲ್ಲಿ ಊಹಾತೀತವಾದ ಸಂಗತಿಯನ್ನು ಸಾಕ್ಷಾತ್ಕರಿಸಿಕೊಂಡು; ಕನ್ನಡದ ಅಂಕಿಗಳಿಗೆ ಅನ್ವಯವಾಗುವ ಪ್ರಾಚೀನ ಲಿಪಿಕ್ರಮವನ್ನು ರೂಪಿಸಿಕೊಂಡು; ಒಟ್ಟುಗ್ರಂಥದ ೬೦ ರಲ್ಲಿ ನಾಲ್ಕುಭಾUದಷ್ಟನ್ನು ಸಂಶೋಧಿಸಿ; ಅದರಲ್ಲಿ ನಾಲ್ಕನೇ ಒಂದುಭಾಗದಷ್ಟನ್ನು ೧೯೫೩ ರರಷ್ಟು ಹಿಂದೆಯೇ ಆಧುನಿಕ ಮುದ್ರಣ ಕ್ರಮದಲ್ಲಿ ಮುದ್ರಣ ಮಾಡಿಸಿ; ಕನ್ನಡಿಗರಿಗೆ ಓದಲು ಒದಗಿಸಿಕೊಟ್ಟ ಅನುಪಮ ಕನ್ನಡಾಭಿಮಾನಿ ಕರ್ಲಮಂಗಲಂ ಶ್ರೀಕಂಠಯ್ಯನವರೆಂಬ ಬಹುಭಾಷಾ ವಿಶಾರದರ ಶೈಕ್ಷಣಿಕ ಅರ್ಹತೆ ಕೇವಲ ಪ್ರಾಥಮಿಕ ೩ನೇ ತರಗತಿ ಎಂದರೆ, ಓದುಗರು ನಂಬಲಾರರೇನೋ! ಇದೊಂದೇ ಕಾರಣದಿಂದಾಗಿ ಅಂದಿನ ವಿದ್ವಾಂಸರು ಇವರ ಪ್ರತಿಭೆಯ ವಿರುದ್ಧ ಇಲ್ಲ ಸಲ್ಲದ ತಕರಾರು ತೆಗೆದು; ಇವರ ಅನುಪಮ ಸಂಶೋಧನೆಯನ್ನು ಮೂಲೆಗುಂಪು ಮಾಡುವಲ್ಲಿ ಯಶಸ್ವಿಯಾದರು.
ಸರಿಸಾಟಿಯಿಲ್ಲದ ಇವರ ಪ್ರಚಂಡ ಮೇಧಾಶಕಿಯಿಂದಾಗಿ ಬೆಳಕುಕಂಡ ಈ ಸಿರಿಭೂವಲಯz ೧೨೭೦ ಚಕ್ರಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಮೂಲಸಾಹಿತ್ಯವನ್ನು ಭಾರತದ ರಾಷ್ಟ್ರಪತಿ ಡಾ|| ರಾಜೇಂದ್ರ ಪ್ರಸಾದರು ಇದು ಕೇವಲ ಕನ್ನಡಭಾಷೆಯ ಸಾಹಿತ್ಯವಲ್ಲ; ಜಗತ್ತಿನ ಮಾನವಕುಲಕ್ಕೆ ಸೇರಿದ ಜ್ಞಾನದಗಣಿ ಎಂಬ ಅನಿಸಿಕೆಯಿಂದ ಅವುಗಳನ್ನು ಕೇಂದ್ರ ಸರ್ಕಾರದ ಪ್ರಾಚ್ಯಪತ್ರಾಗಾರ ಇಲಾಖೆಯಲ್ಲಿ ಮೈಕ್ರೋಫಿಲಂ ರೂಪದಲ್ಲಿ ಶಾಶ್ವತವಾಗಿ ಸಂರಕ್ಷಿಸುವ ಕಾರ್ಯ ನೆರವೇರಿಸಿದರು. ಕರ್ಲಮಂಗಲಂ ಶ್ರೀಕಂಠಯ್ಯನವರ ವಿದ್ವತ್ತು ಊಹಾತೀತವಾದುದು. ಅವರೊಬ್ಬ ಬಹುಮುಖ ಪ್ರತಿಭಾಶಾಲಿ. ಕ್ರಮಬದ್ಧವಾದ ಶಾಲಾಶಿಕ್ಷಣವಿಲ್ಲದೆಯೇ ಸ್ವಯಂಶಿಕ್ಷಣ ಕ್ರಮದಲ್ಲಿ ದೇಶವಿದೇಶಗಳಿಗೆ ಸೇರಿದ ಸುಮಾರು ೧೪ ಭಾಷೆಗಳಲ್ಲಿ ಅವರಿಗೆ ಸಂಶೋಧನೆಯ ಮಟ್ಟದ ಪಾಂಡಿತ್ಯವಿದ್ದುದನ್ನು ಗಮನಿಸಿದವರಿಗೆ; ಸಹಿಸಿದವರಿಗೆ ಮಾತ್ರವೇ ಅವರ ಮಹತ್ವದ ಅರಿವಾಗುತ್ತಿದ್ದುದು. ಈ ಕಾರಣದಿಂದಾಗಿಯೇ ಸುಪ್ರಸಿದ್ಧ ಭಾರತೀಯ ಇತಿಹಾಸ ಪ್ರಾಧ್ಯಾಪಕ ಡಾ|| ಎಸ್. ಶ್ರೀಕಂಠಶಾಸ್ತ್ರಿಗಳು ಇವರ ಅಗಾಧವಾದ ಪ್ರತಿಭೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
ಕನ್ನಡಭಾಷೆ; ಸಾಹಿತ್ಯ; ಸಂಸ್ಕೃತಿ; ಜನಜೀವನದ ಪರಿಸರ ಮುಂತಾದುವುಗಳ ನೆಲೆ-ಬೆಲೆಯನ್ನು ಕುರಿತು ಚಿಂತಿಸಿ, ಚರ್ಚಿಸುವುದಕ್ಕಾಗಿ ತಾಲ್ಲೂಕು ಮಟ್ಟದಿಂದ ಆರಂಭಿಸಿ; ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ವಿಶಮಟ್ಟದಲ್ಲಿ ಸಮ್ಮೇಳನಗಳು ನಡೆದು, ಇತಿಹಾಸ ನಿರ್ಮಿಸುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಆದರೆ, ಜಗತ್ತಿನ ಹತ್ತನೇ ಅಚ್ಚರಿ ಎಂಬುದಾಗಿ ವಿದೇಶೀ ವಿದ್ವಾಂರುಗಳಿಂದಲೂ ಪ್ರಶಂಸೆ ಪಡೆದಿರುವ ಜಗತ್ತಿನ ಅತ್ಯಂತ ಪ್ರಾಚೀನ ಕನ್ನಡಅಂಕಕಾವ್ಯ ಸರ್ವಭಾಷಾಮಯೀಭಾಷಾ ಸಿರಿಭೂವಲಯದ ವಿಚಾರವನ್ನು ಕುರಿತು ಖಚಿತವಾಗಿ ಯಾವುದೇ ಒಂದು ವಿಸ್ತೃತ ಚರ್ಚೆಯೂ ಕಳೆದ ೬೦ ವರ್ಷಗಳಿಂದ ಇದುವರೆವಿಗೂ ನಡೆದ ದಾಖಲೆ ಇರುವುದು ಅಪರೂಪ.! ಈ ಅಚ್ಚರಿಯ ಅಂಕಕಾವ್ಯವನ್ನು ಕುರಿತು ಬಹಳ ಅಚ್ಚರಿಯ ಕಾವ್ಯ ಅಮೋಘವಾದ ಸಾಹಿತ್ಯ ಎಂಬ ಉದ್ಘಾರವನ್ನು ಹೊರತು ಪಡಿಸಿ; ಈ ಕಾವ್ಯದಲ್ಲಿ ಏನಿದೆ? ಎಂಬುದನ್ನು ಕುರಿತು ಸಾಮಾನ್ಯ ಓದುಗರಿಗೆ ನಿಖರವಾದ ಪರಿಚಯ ಮಾಡಿಕೊಡುವ ಪ್ರಯತ್ನವು ಇದುವರೆವಿಗೂ ನಡೆಯಲೇ ಇಲ್ಲವೆಂದರೆ ತಪ್ಪಾಗಲಾರದು.
ಈಚೆಗೆ ಬೆಂಗಳೂರಿನ ಪುಸ್ತಕಶಕ್ತಿ ಪ್ರಕಾಶನದವರು ನಡೆಸಿದ ಪ್ರಯತ್ನದಿಂದಾಗಿ; ನಾಡಿನ ಸುಪ್ರಸಿದ್ಧ ವಿದ್ವಾಂಸರಾದ ಡಾ|| ಟಿ. ವಿ. ವೆಂಕಟಾಚಲಶಾಸ್ತ್ರಿಯವರ ನೇತೃತ್ವದಲ್ಲಿ ವಿದ್ವಾಂಸರ ತಂಡವೊಂದು ಸುಮಾರು ಒಂದುದಶಕದ ಕಾಲ ಶ್ರಮವಹಿಸಿ ಈ ಗೃಂಥದ ೧೯೫೩ ರರ ಮುದ್ರಣವನ್ನು ತಮ್ಮದೇಆದ ಹಾದಿಯಲ್ಲಿ ಪರಿಷ್ಕರಿಸಿ ಅಪೂರ್ಣವಾಗಿ ಪುನರ್ಮುದ್ರಿಸಿದ್ದಾರೆ. ಆದರೆ ಅಲ್ಲ್ಲಿನ ವಿವರಗಳಿಂದ ಸಿರಿಭೂವಲಯದ ವಿಚಾರವು ಇನ್ನಷ್ಟು ಗೊಂದಲದ ಗೂಡಾಗಿದೆ!
ಮುದ್ರಿತವಾಗಿರುವ ಭಾಗದ ಸಿರಿಭೂವಲಯವನ್ನು ಅಭ್ಯಾಸಮಾಡುವುದಕ್ಕೂ; ಅರ್ಥಮಾಡಿಕೊಳ್ಳುವುದಕ್ಕೂ ಬೇರೆಯವರಿಗೆ ಅದನ್ನು ಪರಿಚಯ ಮಾಡಿಕೊಡುವುದಕ್ಕೂ ಅಪಾರವಾದ ಸಹನೆ; ಶ್ರಮಸಹಿಷ್ಣುತೆ ಹಾಗೂ ಅನ್ಯರಲ್ಲಿರುವ ಅಪಾರ ಮೇಧಾವಿತನವನ್ನು ಮುಕ್ತಮನಸ್ಸಿನಿಂದ ಮೆಚ್ಚುವ ಉದಾರಗುಣ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಮುದ್ರಿತ ಪ್ರತಿಯ ಒಂದೇವೊಂದು ಪುಟವನ್ನೂ ಓದಿತಿಳಿಯಲು ಸಾಧ್ಯವಾಗದು. ಇದರ ವಿಚಾರವಾಗಿ ಕುಮುದೇಂದುಮುನಿಯೇ ಯಾರೆಷ್ಟುಜಪಿಸಿದರಷ್ಟು ಸತ್ಫಲವೀವ ಕಾವ್ಯ ಅವರವರ ಶಕ್ತಿಗೆ ತಕ್ಕ ವರವಾದ ಕಾವ್ಯ ಮುಂತಾಗಿ ಸೂಚನೆ ನೀಡಿದ್ಧಾನೆ! ಈ ಗ್ರಂಥದ ಭಾಷೆಯ ಲಿಪಿಕ್ರಮವು ಇಂದಿನ ಸರಳಭಾಷೆಗೆ ಹೊಂದಿಕೊಂಡಿರುವ ವಿದ್ವಾಂಸರ ಸುಲಭವಾದ ಓದಿಗೆ ತೊಡಕಾಗಿ ಪರಿಣಮಿಸಿದೆ. ಈ ಕಾರಣದಿಂದ ನಮ್ಮ ವಿದ್ವಾಂಸರು ಇದಕ್ಕೆ ಕಬ್ಬಿಣದಕಡಲೆ ಎಂದು ಹೆಸರಿಟ್ಟು ದೂರವಿರಿಸಿದ್ದರು. ಈಗ ಈ ಅಚ್ಚರಿಯ ಅಂಕಕಾವ್ಯವನ್ನು ಸರಳವಾಗಿ ಪರಿಚಯಮಾಡಿಕೊಡುವ ಕೆಲಸವು ಯಶಸ್ವಿಯಾಗಿ ನಡೆದಿದೆ.
ಭಾರತದ ರಾಷ್ತ್ರಪತಿ ಡಾ|| ರಾಜೇಂದ್ರಪ್ರಸಾದರ ಆಣತಿಯಂತೆ ಕೇಂದ್ರಸರ್ಕಾರವು ಭಾರತೀಯ ಪ್ರಾಚ್ಯಪತ್ರಾಗಾರ ಇಲಾಖೆಯಲ್ಲಿ ಮೈಕ್ರೋಫಿಲಂ ರೂಪದಲ್ಲಿ ಸಂರಕ್ಷಿಸುವ ಸಂರಕ್ಷಿಸಿರುವ ಸುಮಾರು ೧೨೭೦ ಚಕ್ರಗಳಷ್ಟು ಭಾಗದ ಸಾಹಿತವು ಆದರೆ ಆಸಕ್ತಿಯಿರುವ ಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತಿಲ್ಲ!. ಆಸಕ್ತಿ ಇರುವ ಅಭಿಮಾನಿಗಳಿಗೆ ಇವುಗಳು ಕನ್ನಡನಾಡಿನಲ್ಲಿಯೇ ಸುಲಭವಾಗಿ ಕೈಗೆಟುಕುವಂತೆ ವ್ಯವಸ್ಥೆಮಾಡಬೇಕಾದುದು ರಾಜ್ಯಸರ್ಕಾರದ ಕರ್ತವ್ಯವಾಗಿದೆ. ಇಂದಿನ ಕಂಪ್ಯೂಟರ್ ಸಾಧನದ ನೆರವಿನಿಂದ ಈ ಗ್ರಂಥದ ಮುಂದಿನ ಸಂಶೋಧನೆಗೆ ನೆರವು ದೊರೆಯುವ ವಿಚಾರದಲ್ಲಿ ಸಾಫ್ಟ್‌ವೇರ್ ವಿಜ್ಞಾನಿಗಳಿಗೆ ಭರವಸೆಯಿದೆ. ಈ ವಿಚಾರದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಬಲ್ಲವರಿಗೆ; ನಿರ್ವಹಿಸಿರುವವರಿಗೆ ಈ ವಿಶ್ವವಿದ್ಯಾಲಯಗಳ ವಿದ್ಯಾವಂತರ ಮನ್ನಣೆಯು ಅದೇಕೋ ದೊರೆಯುತ್ತಿಲ್ಲ! ಕನ್ನಡಭಾಷೆಯಲ್ಲಿರುವ ಅಪರೂಪದ ಜ್ಞಾನನಿಧಿಯು ಇಂಥ ಕ್ಷುಲ್ಲಕ ಕಾರಣದಿಂದಾಗಿ ಜಗತ್ತಿನಲ್ಲಿ ಸೂಕ್ತವಾಗಿ ಬೆಳಕಿಗೆಬಾರದಂತಾಗಿದೆ.
ಕಳೆದ ಅರುವತ್ತು ವರ್ಷಗಳಿಂದ ಈ ಗ್ರಂಥವನ್ನು ಕುರಿತು ನಡೆದಿರುವ ಚಾರಿತ್ರಿಕ ಚಟುವಟಿಕೆಗಳ ಮಾಹಿತಿಗಳು ಹಾಗೂ ಗ್ರಂಥದ ಅಧ್ಯಯನದಿಂದ ದೊರೆಯುವ ಮಹತ್ತರವಾದ ಮಾಹಿತಿಗಳು ಮತ್ತು ಈ ಗ್ರಂಥದಲ್ಲಿ ಅಡಕವಾಗಿರುವ ಬೇರೆ ಬೇರೆ ಸಾಹಿತ್ಯದ ವಿವರವನ್ನು ಸೂಚಿಸಿ; ನಾನು ಈಗಾಗಲೇ ಸಿರಿಭೂವಲಯಸಾರ ಎಂಬ ಪರಿಚಯ ಗ್ರಂಥ ಪ್ರಕಟಿಸಿದ್ದಾಗಿದೆ. ಅದರಲ್ಲಿ ಕಳೆದ ೬೦ ವರ್ಷಗಳಿಂದಲೂ ಸಿರಿಭೂವಲಯದ ವಿಚಾರವಾಗಿ ನಡೆದಿರುವ; ನೆಡಯಬೇಕಾಗಿದ್ದ; ಮುಂದೆನಡೆಬೇಕಿರುವ ಚಟುವಟಿಕೆಗಳನ್ನು ಕುರಿತು ವಿವರವಾದ ಚರ್ಚೆನಡೆದಿದೆ.
ಈ ಗ್ರಂಥದ ಸಾಂಗತ್ಯ ಪದ್ಯಗಳನ್ನು ಇಂದಿನ ಸರಳವಾದ ಕ್ರಮದಲ್ಲಿಯೇ ಓದಲು ಸುಲಭ ಸಾಧ್ಯವಾಗುವಂತೆ ನಿರೂಪಿಸಿ; ಸಿರಿಭೂವಲಯದ ಆಯ್ದ ಸಾಂಗತ್ಯ ಪದ್ಯಗಳ ಸಂಗ್ರಹ ಎಂಬ ಕೃತಿಯನ್ನೂ ಪ್ರಕಟಿಸಲಾಗಿದೆ. ಈ ಕಾರ್ಯಗಳಿಗೆ ಸಕಾರದಿಂದ ಯಾವುದೇ ನೆರವನ್ನೂ ಅಪೇಕಿಸಿಲ್ಲ. ಏಕಾಂಗಿಯಾಗಿ ಒಬ್ಬ ವ್ಯಕಿಯು ಮಾಡಬಹುದಾದುದನ್ನು ನಾನು ಮಾಡಿ ಮುಗಿಸಿದ್ದೇನೆ. ಅದನ್ನು ಈ ಮೂಲಕ ನಿಮ್ಮೆಲ್ಲರ ಗಮನಕ್ಕೆ ತಂದಿದ್ದೇನೆ. ಇಂದಿನ ಕನ್ನಡದ ಬೆಳವಣಿಗೆಗೆ ಮೂಲಕಾರಣವಾಗಿರುವ ಕನ್ನಡ ಬೆರಳಚ್ಚುಯಂತ್ರಕ್ರಮದ ನಿರೂಪಕರಾದ ದಿವಂಗತ ಕೆ. ಅನಂತಸುಬ್ಬರಾಯರು ಈ ಗ್ರಂಥದ ಸಂಶೋಧಕ ಕರ್ಲಮಂಗಲಂ ಶ್ರೀಕಂಠಯ್ಯನವರ ಸಹಚರರಾಗಿದುಡಿದು; ತಮ್ಮ ಜೀವಮಾನಪೂರ್ತ ಸಿರಿಭೂವಲಯದ ಪ್ರಚಾರಮಾಡಿದವರು. ಅವರಿಂದ ಸಂಪೂರ್ಣವಾಗಿ ಖಚಿತ ಮಾಹಿತಿಗಳನ್ನರಿತು; ಕಳೆದ ೨೫ ವರ್ಷಗಳಿಂದ ಶ್ರದ್ಧೆವಹಿಸಿ ಈ ಗ್ರಂಥದ ಅಧ್ಯಯನ ಮಾಡಿರುವುದಷ್ಟೇ ನನ್ನ ಶಿಕ್ಷಣಾರ್ಹತೆ. ನನಗೂ ಯಾವುದೇ ವಿಶ್ವವಿದ್ಯಾಲಯ ಪದವಿಯ ಮುದ್ರೆ ಇಲ್ಲ!
ಈಚೆಗೆ ಬೆಂಗಳೂರು ಹಾಗೂ ಬೆಳಗಾವಿ ನಗರದಲ್ಲಿ ಏರ್ಪಾಡಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ವಿಶ್ವಕನ್ನಡ ಸಮ್ಮೇಳನದ ವೇದಿಕೆಯಲ್ಲಿ ಕಳೆದ ಐವತ್ತು ವರ್ಷಗಳಿಂದ ಕನ್ನಡ ಭಾಷೆಯ ಸಾಹಿತ್ಯ; ಸಂಸ್ಕೃತಿ; ಜನಜೀವನ; ರಾಜಕಾರಣ ಇತ್ಯಾದಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಆಗಿರುವ ಸಾಧನೆಯನ್ನು ಕುರಿತು ಆತ್ಮಾವಲೋಕನ ಮಾಡಿಕೊಳ್ಳಲು ಅವಕಾಶವಾಗುವುದೆಂಬ ನಿರೀಕ್ಷೆಯಿತ್ತು. ಆದರೆ ಸಿರಿಭೂವಲಯದ ವಿಚಾರವಾಗಿ ಅಭಿಮಾನಹೊಂದಿದ್ದ ಮಾನ್ಯಶ್ರೀ ಜಿ. ವೆಂಕಟಸುಬ್ಬಯ್ಯನವರೂ ಕೂಡ ಚಕಾರವೆತ್ತಲಿಲ್ಲ! ಪ್ರಜಾವಾಣಿಯಲ್ಲಿ ಈ ವಿಚಾರವಾಗಿ ಮನವಿಮಾಡಿರೂ ಅದು ಫಲನೀಡಲಿಲ್ಲ. ಕನ್ನಡಕುಲಕೋಟಿಯ ಜನ್ಮಜನ್ಮಾಂತರದ ಜ್ಞಾನಸಂಪತ್ತು ಎನಿಸಿಕೊಂಡಿರುವ ಸರ್ವಭಾಷಾಮಯೀಭಾಷಾ ಸಿರಿಭೂವಲಯ ಎಂಬ ಅಚ್ಚರಿಯ ಪ್ರಾಚೀನ ಕನ್ನಡ ಅಂಕಕಾವ್ಯದ ವಿಚಾರದಲ್ಲಿ ಕಳೆದ ಅರುವತ್ತು ವರ್ಷಗಳಿಂದಲೂ ಕನ್ನಡ ಕನ್ನಡಸಾಹಿತ್ಯದ ದಿಗ್ಗಜರು ಅನುಸರಿಕೊಂಡು ಬಂದಿರುವ ಉದಾಸೀನ ಧೋರಣೆಯಿಂದ ಉಂಟಾಗಿರುವ ತೊಡಕನ್ನು ಕುರಿತು ಇಲ್ಲಿ ಓದುಗರ ಗಮನಸೆಳೆಯಲು ಆಶಿಸುತ್ತೇನೆ.
ಕ್ರಿ.ಶ. ೮೫೦ರ ಸುಮಾರಿನಲ್ಲಿ ಅಮೋಘವರ್ಷ ನೃಪತುಂಗನ ಕಾಲದಲ್ಲಿ ರಚನೆಯಾದ ಕವಿರಾಜಮಾರ್ಗ ಎಂಬ ಲಕ್ಷಣಗ್ರಂಥವೇ ಕನ್ನಡದ ಪ್ರಾಚೀನ ಸಾಹಿತ್ಯ ಎಂದು ಕನ್ನಡ ಸಾರಸ್ವತ ಲೋಕದ ದಿಗ್ಗಜರು ನಿರ್ಧರಿಸಿಬಿಟ್ಟಿದ್ದಾರೆ! ಇದಕ್ಕೂ ಮೊದಲು ರಚನೆಯಾಗಿರುವ ಅಂಕಕಾವ್ಯ ಸಿರಿಭೂವಲಯ. ಈ ಗ್ರಂಥದಲ್ಲಿ ಕನ್ನಡದ ಪ್ರಾಚೀನತೆಯ ಬಗೆಗೆ ಖಚಿತವಾದ ಹೇಳಿಕೆಗಳಿವೆ. ೨೪ನೇ ತೀರ್ಥಂಕರ ಮಹಾವೀರನು ಕನ್ನಡಭಾಷೆಯಲ್ಲಿ ನೀಡಿರುವ ಪರಂಪರಾಗತ ಉಪದೇಶಗಳ ಸಾರವೇ ಈ ಗ್ರಂಥದ ಮೂಲವೆಂದು ಕುಮುದೇಂದುಮುನಿಯು ಸ್ಪಷ್ಟವಾಗಿ ಸೂಚಿಸಿದ್ದಾನೆ. ಅಂದರೆ ಕನ್ನಡವು ೨೩೦೦ ವರ್ಷಗಳ ಇತಿಹಾಸ ಹೊಂದಿರುವುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ. ಇದನ್ನು ಅಲ್ಲಗಳೆಯಲು ಯಾರಿಗೂ ಸಾಧ್ಯವಿಲ್ಲ.
ಕನ್ನಡ ಅಕ್ಷರಗಳು ಹಾಗೂ ಅಂಕಿಗಳು ಕರುನಾಡತಣ್ಪಿನ ನೆಲದೊಳ್ ಹುಟ್ಟಿದ ಕುರು; ಹರಿ; ಪುರುವಂಶವೆರೆದು ಪೊರೆದು ಹೊತಿಸಿದ ಅಂಕಜ್ವಾಲೆಯ ಬೆಳಕಿನ ಪರಿಯ ಚುಜ್ಯೋತಿ ಇದರಿಯಾ ಎಂದು ಶ್ರೀಕೃಷ್ಣನು ಪಾರ್ಥನಿಗೆ ತಿಳಿಯಹೇಳಿದ್ದನ್ನು ಈ ಗ್ರಂಥವು ಸೂಚಿಸಿದೆ. ಅಂದರೆ, ಕನ್ನಡವು ಕ್ರಿ.ಪೂ. ೧೫೬೦ ಕ್ಕೆ ಮೊದಲೇ -ಸುಮಾರು ನಾಲ್ಕುಸಾವಿರ ವರ್ಷಗಳ ಹೆಂದೆಯೇ-ಬಳಕೆಯಲ್ಲಿದ್ದುದಕ್ಕೆ ಇದು ಸಾಕ್ಷಿಯಾಗಿದೆ.
ಆದಿ ತೀರ್ಥಂಕರ ಋಷಭದೇವನು ಕನ್ನಡ ಅಕ್ಷರಗಳ ಹಾಗೂ ಅಂಕಿಗಳ ಉಗಮವನ್ನು ಕುರಿತು ತನ್ನ ಪುತ್ರಿಯರಿಗೆ ತಿಳಿಸಿ ಕೊಟ್ಟದ್ದನ್ನೂ; ಅದೇ ಬ್ರಾಹ್ಮಿ ಹಾಗೂ ಸೌಂದರಿ ಲಿಪಿಗಳೆಂದು ಪ್ರಚಾರಕ್ಕೆ ಬಂದುದನ್ನೂ ಸಿರಿಭೂವಲಯವು ಖಚಿತವಾಗಿ ನಿರೂಪಿಸಿದೆ. ಸಿರಿಭೂವಲಯದ ಒಂದು ಅಂಗವೇಆಗಿದ್ದು ಇಂದಿನ ಜಗತ್ತಿನಾದ್ಯಂತ ಮನ್ನಣೆಗಳಿಸಿರುವ ಭಗವದ್ಗೀತೆಯಲ್ಲಿರುವ ಮಾಹಿತಿಗಳನ್ನಾಧರಿಸಿ ಲೆಕ್ಕಹಾಕಿದಲ್ಲಿ; ಕನ್ನಡ ಲಿಪಿ ಹಾಗೂ ಅಂಕಿಗಳಿಗೆ ಲಕ್ಷಾಂತರ ವರ್ಷಗಳಷ್ಟೇಅಲ್ಲ; ಕೋಟ್ಯಾಂತರ ವರ್ಷಗಳ ಇತಿಹಾಸವಿರುವುದು ಸ್ಪಷ್ಟವಾಗಿದೆ. ಆದರೆ ನಮ್ಮ ಕನ್ನಡ ವಿದ್ವಾಂಸರು ಕ್ರಿ. ಶ. ೬೦೦ ಕ್ಕೆ ಮೊದಲು ಕನ್ನಡವು ಲಿಪಿಬದ್ಧವಾಗಿರಲಿಲ್ಲವೆಂದೇ ನಿರ್ಧರಿಸಿಬಿಟ್ಟಿದ್ದರು! ಈಗ ಸುಮಾರು ಎರಡುಸಾವಿರ ವರ್ಷಗಳ ಶಾಸನದ ಆಧಾರವಿದೆ ಎಂದು ತಿದ್ದುಪಡಿ ಮಾಡಿಕೊಂಡಿದ್ದಾರೆ!! ಇದೆಲ್ಲ ಮಾಹಿತಿಗಳನ್ನು ಕುರಿತು ಸಿರಿಭೂವಲಯದ ಶ್ರೀಕಂಠಯ್ಯನವರು ೧೯೫೦ ಕ್ಕೆ ಮೊದಲೇ ಜಗತ್ತಿನ ಗಮನ ಸೆಳೆದಿದ್ದಾರೆ
ಕನ್ನಡಭಾಷೆಗೆ ಶಾಸ್ತ್ರೀಯಭಾಷೆಯ ಸ್ಥಾನಮಾನ ನೀಡುವ ವಿಚಾರದಲ್ಲಿ ಚೆನ್ನೈನ ಶ್ರೇಷ್ಠನ್ಯಾಯಾಲಯದಲ್ಲಿರುವ ವಿವಾದದ ಸೂಕ್ತ ಪರಿಹಾರಕ್ಕೆ ಈ ಅಪರೂಪದ ಅಪರಿಚಿತ ಕಾವ್ಯದಲ್ಲಿರುವ ಖಚಿತವಾದ ಮಾಹಿತಿಗಳು ಪ್ರಮುಖವಾದ ಸಾಕ್ಷ್ಷಿಯಾಗಿವೆ. ಇದರ ಆಧಾರದಲ್ಲಿ, ಮದ್ರಾಸಿನ ನ್ಯಾಯಾಲಯ ದಲ್ಲಿರುವ ವಿವಾದವನ್ನು ಸುಲಭವಾಗಿ; ಶೀಘ್ರವಾಗಿ ಪರಿಹರಿಸಿಕೊಳ್ಳಬಹುದು. ಅದಕ್ಕೆ ಮೊದಲು ನಮ್ಮ ವಿದ್ವಾಂಸರು ಸಿರಿಭೂವಲಯವನ್ನು ಅದರಲ್ಲಿ ಅಡಕವಾಗಿರುವ ಮಾಹಿತಿಗಳ ಆಧಾರದಲ್ಲಿ ಪ್ರಾಚೀನ ಕನ್ನಡ ಅಂಕಕಾವ್ಯ ಎಂಬುದಕ್ಕೆ ತಮ್ಮ ಸಮ್ಮತಿಯ ಮುದ್ರೆ ದಾಖಲಿಸಿ ನ್ಯಾಯಾಧೀಶರನ್ನು ಒಪ್ಪಿಸಬೇಕಾದ ಅಗತ್ಯವಿದೆ!
ಸಿರಿಭೂವಲಯ ಗ್ರಂಥವು ನನ್ನೊಬ್ಬನ ಆಸಕ್ತಿಯ ವಿಚಾರವಲ್ಲ. ಇಂದಿನ ಆರುಕೋಟಿ ಕನ್ನಡಿಗರು ಮಾತ್ರವಲ್ಲ; ಇಡೀ ಜಗತ್ತಿನ ಜನತೆಗೆ ಮಹತ್ತರವಾದ ಜ್ಞಾನನೀಡುವ ಕೃತಿಯಾಗಿz ಇದು. ಇದರಲ್ಲಿ ೭೧೮ ಭಾಷೆಯ ಸಾಹಿತ್ಯವು ಅಡಕವಾಗಿದೆ! ಜಗತ್ತಿನ ೩೬೩ ಮತಧರ್ಮಗಳೂ ಸಮಾನವೆಂದು ವಿವರಿಸಿ; ಯೋಗ ಹಾಗೂ ಭೋಗವನ್ನು ಸಮನ್ವಯಗೊಳಿಸಿಕೊಂಡಿದ್ದ ಯಾಪನೀಯವೆಂಬ ಅಲ್ಪಸಂಖ್ಯಾತ ಪಂಗಡಕ್ಕೆ ಸೇರಿದವನು ಈ ಅಚ್ಚರಿಯ ಗ್ರಂಥದ ಕರ್ತೃ ಕುಮುದೇಂದು ಮುನಿ!
ಅಣುವಿಜ್ಞಾನ; ಆಕಾಶಗಮನ; ಗಣಕಯಂತ್ರಕ್ರಮ; ಗಣಿತಶಾಸ್ತ್ರ; ಜೀವವಿಜ್ಞಾನ; ಶಿಲ್ಪಶಾಸ್ತ್ರ; ಧರ್ಮಶಾಸ್ತ್ರ; ಪುರಾಣ; ಇತಿಹಾಸ; ಸಂಗೀತ; ನೃತ್ಯ ಇತ್ಯಾದಿ ಸಕಲಜ್ಞಾನಕ್ಕೆ ಸಂಬಂಧಿಸಿದಂತೆ ಜಗತ್ತಿನಲ್ಲಿ ೧೨೦೦ ವರ್ಷಗಳ ಹಿಂದೆ ನಮ್ಮಲ್ಲಿ ಪ್ರಚಾರದಲ್ಲಿದ್ದ ಮಾಹಿತಿಗಳನ್ನು ಈ ಅಚ್ಚರಿಯ ಅಂಕಕಾವ್ಯವು ತೆರೆದಿಟ್ಟಿದೆ.
ಈ ಗ್ರಂಥದ ಭಾಷೆಯ ಲಿಪಿಕ್ರಮವು ಕಠಿಣವಾದುದು. ಇಂದಿನ ಸರಳಭಾಷೆಗೆ ಹೊಂದಿಕೊಂಡಿರುವ ವಿದ್ವಾಂಸರ ಸುಲಭವಾದ ಓದಿಗೆ ಇದು ತೊಡಕಾಗಿ ಪರಿಣಮಿಸಿದೆ. ಈ ಕಾರಣದಿಂದ ನಮ್ಮ ವಿದ್ವಾಂಸರು ಇದಕ್ಕೆ ಕಬ್ಬಿಣದಕಡಲೆ ಎಂದು ಹೆಸರಿಟ್ಟು ದೂರವಿರಿಸಿದ್ದರು. ಈಗ ಈ ಅಚ್ಚರಿಯ ಅಂಕಕಾವ್ಯವನ್ನು ಸರಳವಾಗಿ ಪರಿಚಯಮಾಡಿಕೊಡುವ ಕೆಲಸವು ಯಶಸ್ವಿಯಾಗಿ ನಡೆದಿದೆ. ಆಯುರ್ವೇದ ಹಾಗೂ ಗಣಕಯಂತ್ರ ಕ್ಷೇತ್ರದವರು; ಗಣಿತಜ್ಞರು ಮತ್ತು ಇಂಜಿನಿಯರಿಂಗ್ ಕ್ಷೇತ್ರದವರು ಈ ಗ್ರಂಥದ ವಿಚಾರದಲ್ಲಿ ಆಸಕ್ತಿವಹಿಸುತ್ತಿರುವುದು ತಂಬಾ ಹೆಚ್ಚಿನ ಸಂತೋಷದ ಸಂಗತಿ!
ಭಾರತದ ಸಾಹಿತ್ಯಪರಂಪರೆಯ ಪುರಸ್ಕಾರದ ಸರಣಿಯಲ್ಲಿ ಒಂದು ಮಹೋನ್ನತವಾದ ಕೀರ್ತಿಪತಾಕೆ ಎನಿಸಿರುವ ಜ್ಞಾನಪೀಠ ಪ್ರಶಸ್ತಿಗೂ ಸಿರಿಭೂವಲಯದ ಶ್ರೀಕಂಠಯ್ಯನವರ ವಿದ್ವತ್ತು; ವಿನಯ; ಉದಾರಗುಣ ಹಾಗೂ ನಿರಪೇಕ್ಷಮನೋಭಾವಕ್ಕೂ ಒಂದು ರೀತಿಯ ನೆರವಾದ ಸಂಪರ್ಕವಿದೆ. ಸಿರಿಭೂವಲಯದ ವಿಚಾರದಲ್ಲಿ ಆಸಕ್ತರಾಗಿದ್ದ ಅಂದಿನ ಕಲ್ಕತ್ತೆಯ ಕೋಟ್ಯಾಧಿಪತಿ ಶಾಂತಿಪ್ರಸಾದ್‌ಜೈನ್ ಅವರು ಶ್ರೀಕಂಠಯ್ಯನವರನ್ನು ತಮ್ಮಲ್ಲಿಗೆ ಕರೆಸಿಕೊಂಡು; ಅವರಿಂದ ಸಿರಿಭೂವಲಯದ ಸಮರ್ಪಕವಾದ ಪರಿಚಯ ಪಡೆದು ಕೃತಾರ್ಥರಾದರು. ಈ ಅಗಾಧವಾದ ಜ್ಞಾನನಿಧಿಯನ್ನು ಸೂಕ್ತವಾಗಿ ಗೌರವಿಸುವ ದಿಶೆಯಲ್ಲಿ ನಾನು ನಿಮಗೆನು ಕೊಡಬಲ್ಲೆ ಅಪ್ಪಣೆಯಾಗಲೀ ಎಂದು ವಿನಂತಿಸಿದರು. ಇವರ ಅಪಾರ ವಿದ್ವತ್ತನ್ನು ಬಹಳವಾಗಿ ಮೆಚ್ಚಿಕೊಂಡಿದ್ದ ಜೈನ್ ಅವರು ಈ ಗ್ರಂಥದ ಸಂಶೋಧನೆಯ ವೆಚ್ಚಕ್ಕಾಗಿ ಇವರು ಕೋಟ್ಯಾಂತರ ರೂಪಾಯಿಗಳ ಆರ್ಥಿಕ ನೆರವು ಕೇಳಿದ್ದರೂ ಸಂತೋಷದಿಂದ ಕೊಡುವ ಮನೋಸ್ಥಿತಿಯಲ್ಲಿದ್ದರು. ಬಹಳನಯವಾಗಿ ಇವರ ಈ ಕೊಡುಗೆಯನ್ನು ನಿರಾಕರಿಸಿದ ಶ್ರೀಕಂಠಯ್ಯನವರು ತಮ್ಮ ನಿರಪೇಕ್ಷಾ ಮನೋಭಾವವನ್ನು ಮೆರೆದರು. ಇದು ಶಾಂತಿಪ್ರಸಾದ್ ಜೈನ್ ಅವರ ಅಂತರಂಗದಲ್ಲಿ ಅಳಿಸಲಾಗದ ಪ್ರಭಾವಬೀರಿ; ಇಂಥ ಅಭಿಮಾನಧನರಾದ ಮಹಾನ್ ಜ್ಞಾನಿಗಳನ್ನು ಸೂಕ್ತವಾಗಿ ಗೌರವಿಸುವ ಸಲುವಾಗಿ ಅಪಾರ ಧನರಾಶಿಯನ್ನು ದೇಣಿಗೆನೀಡಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಸ್ಥಾಪನೆಗೆ ನಾಂದಿಹಾಡಿದರು! ಈ ಘಟನೆಯ ಪ್ರತ್ಯಕ್ಷಸಾಕ್ಷಿಯಾಗಿದ್ದವರಿಗೆ ಮಾತ್ರವೇ ಶ್ರೀಕಂಠಯ್ಯನವರ ವ್ಯಕ್ತಿತ್ವದ ಅರಿವಾಗುವುದು ಸಾಧ್ಯ!!
ಈ ಹಿನ್ನೆಲೆಯಲ್ಲಿ ವಿಚಾರಶಾಲಿಗಳಾದ ಓದುಗರು ಸಿರಿಭೂವಲಯ ಗ್ರಂಥದ ಮುಂದಿನ ಸಂಶೋಧನೆಯ ವಿಚಾದಲ್ಲಿ ಸರ್ಕಾರವನ್ನು ಸೂಕ್ತವಾಗಿ ಒತ್ತಾಯಿಸುವಂತಾಗಲೆಂದು ಆಶಿಸುತ್ತೇನೆ. ಸಿರಿಭೂವಲಯದಲ್ಲಿ ಸುಲಭವಾಗಿ ಓದಿ ತಿಳಿಯಬಹುದಾದ ಕೆಲವು ಸಾಂಗತ್ಯ ಪದ್ಯಗಳನ್ನು ಇಲ್ಲಿ ಓದುಗರ ಅವಗಾಹನೆಗೆ ತರಲಿಚ್ಚಿಸುತ್ತೇನೆ:
* * *
ಅಷ್ಟಮಹಾಪ್ರಾತೀಹಾರ್ಯವೈಭವದಿಂದ| ಅಷ್ಟಗುಣಂಗಳೊಳ್‌ಓಂದಮ್|
ಸೃಷ್ಟಿಗೆ ಮಂಗಲಪರ್ಯಾಯದಿನಿತ್ತ| ಅಷ್ಟಮಜಿನಗೆರಗುವೆನು||೧||
ಓದಿಸಿದೆನುಕರ್ಮಾಟದಜನರಿಗೆ| ಶ್ರೀದಿವ್ಯವಾಣಿಯಕ್ರಮದೆ|
ಶ್ರೀದಯಾಧರ್ಮಸಮನ್ವಯಗಣಿತದ| ಮೋದದಕಥೆಯನಾಲಿಪುದು||೨||
ಕನ್ನಡದೊಂದೆರಳ್‌ಮೂರುನಾಲ್ಕೈದುಆರೇ| ಳೆಂಟುಒಂಬತ್ತೆಂಬ|
ಉನ್ನತವಾದಂಕಸೊನ್ನೆಯಿಂಹುಟ್ಟಿತೆಂ| ದೆನುವುದನು ಕಲಿಸಿದನು||೩||
ಅಂಕೆಯಿಂದಿರಿಕೊಳ್ಳುವವಿಜ್ಞಾನದ| ಶಂಕೆಗಳನಿಲ್ಲಿಪೇಳುವೆ|
ಶಂಕೆಗುತ್ತರವನುಮುಂದಕೆಪೇಳ್ವಾಗ| ಅಂಕಿಯಶಂಕೆಗಳೆಷ್ಟು||೪||
ಅಣುವೆಂದುಪರಮಾಣುವೆಂದುಪುದ್ಗಲವನು| ಗಣಿಸುವಾಗಿರುವಂಕವೆಷ್ಟು|
ಅಣುವಿನಗುಣವೇನುಅಣುವಿನಕ್ಷಣವೇನು| ಗಣಿತದಮರ್ಮವದೇನು||೫||
ಅಣುವನೊಡೆದುಪರಮಾಣುವಮಾಡಲು| ಕೊನೆಗೆನಿಲ್ಲುವಶಕ್ತಿಯೇನು|
ಅಣುವಿಂದಣುವಾಗಿನಿಲ್ಲುವದ್ರವ್ಯದ| ಗಣನೆಯಪೇಳುವುದೆಂತು||೬||
ತನುವನಾಕಾಶಕೆಹಾರಿಸಿನಿಲಿಸುವ| ಘನವೈಮಾನಿಕದಿವ್ಯಕಾವ್ಯ|
ಪನಸಪುಷ್ಪದಕಾವ್ಯವಿಶ್ವಂಭರಕಾವ್ಯ| ಜಿನರೂಪಿನಭದ್ರಕಾವ್ಯ||೭||
ಯವೆಯಕಾಳಿನಕ್ಷೇತ್ರದಳತೆಯೊಳಡಗಿಸಿ| ಅವರೊಳನಂತವಸಕಲಾನ್|
ಕವನವದೊಳ್‌ಸವಿಯಾಗಿಸಿಪೇಳುವ| ನವಸಿರಿಇರುವಭೂವಲಯ||೮||
ವನಿತಾಬಿಂಬಾದರದಚುಂಬನದರಸಪೀರ್| ದನದರರಸದರುಚಿಯಿಂತೇರಿದರ್|
ಶನದಪರವಶರಾನಂದಲಾವಣ್ಯz| ಯದುರಿನಭವನಾಮರರ್||೯||
ಕರುಣೆಯಧವಲವರ್ಣದಪಾದಗಳಿಹ| ಪರಮಾತ್ಮಪಾದದ್ವಯದೆ|
ಸಿರವಿಹನಾಲ್ಕಂಕವೆರಸಿಸಿಂಹದಮುಖ| ಭರತಖಂಡದಶುಭಚಿಹ್ನೆ||೧೦||
ಸಿವಪಾರ್ವತೀಶನಗಣಿತದಶ್ರೀಕಂಠ| ದವನಿಯತಾಳೆಯೋಲೆಗಳ|
ಸುವಿಶಾಲಪತ್ರದಕ್ಷರದಭೂವಲಯಕೆ| ಸವಿಸ್ತರಕಾವ್ಯಕೆನ್ನನಮಹವು||೧೧||
ನೀಲಾಂಬರದೊಳುಹೊಳೆವನಕ್ಷತ್ರ| ಮಾಲಿನ್ಯವಾಗದವರೆಗೆ|
ಶೀಲವ್ರತಂಗಳೊಳುಬಾಳ್ದುಜನರೆಲ್ಲ| ಕಾಲನಜಯಿಸಲೆತ್ನಿಸಲಿ||೧೨||
* * *
ಸಿರಿಭೂವಲಯದಲ್ಲಿ ಈ ರೀತಿಯ ಮೂಲ ಕನ್ನಡ ಸಾಂಗತ್ಯ ಪದ್ಯಗಳ ಸಂಖ್ಯೆಯು ಆರುಲಕ್ಷ! ಇವುಗಳಲ್ಲೇ ಅಕ್ಷರಕ್ಕೆ ಲಕ್ಷದಂತೆ ಬೇರೆ ಬೇರೆ ಭಾಷೆಗಳಲ್ಲಿ ಈ ಜಗತ್ತನ್ನೇ ತುಂಬಿರಿಸುವಷ್ಟು ಸಾಹಿತ್ಯದ ರಚನೆಯಾಗುತ್ತದೆ!! ವಿದೇಶಗಳ ವಿದ್ಯಾವಂತರು ಇದನ್ನು ಜಗತ್ತಿನ ಹತ್ತನೇ ಆಶ್ಚರ್ಯ ಎಂದು ಪರಿಗಣಿಸಿದ್ದಾರೆ!!! ಇಂಥ ಮಹೋನ್ನತ ಸಾಹಿತ್ಯ ಕೃತಿಯು ಇಂದಿನ ಆಧುನಿಕ ವಿಜ್ಞಾನಯುಗದಲ್ಲಿ ಪ್ರಜ್ವಲಿಸುವಂತೆ ಮಾಡುವಲ್ಲಿ ನಾಡಿನ ವಿದ್ಯಾವಂvರು ಹಾಗೂ ಆಡಳಿತಗಾgರು ಉತ್ಸಾಹದಿಂದ ಕೈಜೋಡಿಸುವಂತಾಗಲೆಂಬುದು ಈ ಬರಹದ ಉದ್ದೇಶವಾಗಿದೆ. ಓದುಗರು ಈ ದಿಸೆಯಲ್ಲಿ ಸಂಬಂಧಿಸಿದವರೆದುರು ತಮ್ಮ ಹಕ್ಕೊತ್ತಾಯವನ್ನು ಮಂಡಿಸಬೇಕಾಗಿ ವಿನಂತಿ.
ಕನ್ನಡಕುಲಕೋಟಿಯು ಚಿರಾಯುವಾಗಲೀ ಸಿರಿಭೂವಲಯದ ಅಭಿಮಾನಿಗಳ ಪರವಾಗಿ,
ಕನ್ನಡದ ಅಡಿಯಾಳು: ಸುಧಾರ್ಥಿ ಹಾಸನ, ಹಾಲುವಾಗಿಲು ಗ್ರಾಮ, ತಟ್ಟೇಕೆರೆ ಅಂಚೆ. ಹಾಸನ ಕಸಬ, ಹಾಸನ. ೫೭೩೨೦೧. ದೂರವಾಣಿ: ೯೪೪೯೯೪೬೨೮೦.    ೭೬೭೬೪೭೪೯೭೨.   

ಸಿರಿಭೂವಲಯ ಪರಿಚಯ ಕೃತಿಗಳ ಲೋಕಾರ್ಪಣೆ ಸಮಾರಂಭದ ದೃಶ್ಯಾವಳಿ ಮತ್ತು ಕೆಲವು ಆಡಿಯೋ ಕ್ಲಿಪ್ ಗಳು

ದಿನಾಂಕ 20.1.2012  ರಂದು ಹಾಸನದ "ಈಶಾವಾಸ್ಯಮ್" ಸಭಾಂಗಣದಲ್ಲಿ ಬಿಡುಗಡೆಯಾದ ಅತ್ಯಂತ ಪ್ರಾಚೀನ ಅಂಕಕಾವ್ಯ ಸಿರಿಭೂವಲಯ ಗ್ರಂಥದ ಪರಿಚಯ ಕೃತಿಗಳ ಸಮಾರಂಭದ ಕೆಲವು ದೃಶ್ಯಗಳು ಮತ್ತು ಕೆಲವು ಆಡಿಯೋ ಕ್ಲಿಪ್ ಗಳು ಇಲ್ಲಿವೆ. ಬರುವ ದಿನಗಳಲ್ಲಿ ಸಮಾರಂಭದಲ್ಲಿ ಮಾತನಾಡಿದ ಎಲ್ಲರ ಭಾಷಣವನ್ನೂ ಪ್ರಕಟಿಸಲಾಗುವುದು. ಇದೊಂದು ಕುತೂಹಲಕಾರಿ ವಿಷಯವಾಗಿರುವುದರಿಂದ ವೇದಸುಧೆಯ ಅಭಿಮಾನಿಗಳು ಕೃತಿಪರಿಚಯದ ಮತ್ತು ಮುಂದೆ ಪ್ರಕಟವಾಗಲಿರುವ ಕೃತಿಯ ಕರ್ತೃ ಶ್ರೀ ಸುಧಾರ್ಥಿ ಹಾಸನ ಇವರ ಮಾತುಗಳನ್ನೂ ಇಲ್ಲಿ ಕೇಳಬಹುದಾಗಿದೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತವಿದೆ. ನಿಮ್ಮ ಸಂದೇಹಗನ್ನು ಬರೆದು ವೇದಸುಧೆಗೆ ತಿಳಿಸಿದರೆ ಶ್ರೀ ಸುಧಾರ್ಥಿಯವರು ನಿಮ್ಮ ಸಂದೇಹಗಳಿಗೆ ಉತ್ತರಿಸುವರು.

ಶ್ರೀ ಕೈಪಾ ಶೇಷಾದ್ರಿ, ಶ್ರೀ ಸಿ.ಎಸ್.ಕೃಷ್ಣಸ್ವಾಮಿ,ಮತ್ತು ಶ್ರೀ ಸುಧಾರ್ಥಿ-ಹಾಸನ








ಸಭೆಯ ಮುಂದಿನಸಾಲಿನಲ್ಲಿ  ಕನ್ನಡಸಾಹಿತ್ಯ ಪರಿಷತ್    ಜಿಲ್ಲಾಧ್ಯಕ್ಷರಾದ        ಶ್ರೀ ಉದಯರವಿ, ಪತ್ರಕರ್ತರ ಸಂಘದ ಕಾರ್ಯದರ್ಶಿ ಶ್ರೀ ಪ್ರಭಾಕರ್ 







ಕೃತಿಯ ಹಿಂದಿಯ ಅನುವಾದಕಮತ್ತು    ವಿದ್ವಾಂಸರಾದ ಶ್ರೀ ರಾಮಣ್ಣ 



ಶ್ರೀಮತಿ  ಶಾರದಮ್ಮನವರು

ಶ್ರೀ ರಾಮಣ್ಣ    ದಂಪತಿಗಳಿಗೆ ಸನ್ಮಾನ 

ಶ್ರೀ ಪ್ರಭಾಕರರಿಂದ ರಾಮಣ್ಣನವರ ಪರಿಚಯ 

ಪ್ರಾಧ್ಯಾಪಕರಾದ ಶ್ರೀ ನಾರಾಯಣ ಪ್ರಸಾದ್ ರಿಂದ ಕೃತಿ ಪರಿಚಯ 











ಶ್ರೀ ಸದಾನಂದರಿಂದ ಸಿರಿಭೂವಲಯದ ಬಗ್ಗೆ  ಅನಿಸಿಕೆ







                   ಹರಿಹರಪುರ ಶ್ರೀಧರ್  ಅವರಿಂದ ಧನ್ಯವಾದ ಸಮರ್ಪಣೆ