Friday, 9 April 2021

ವೇದ, ವೇದ. ಏನಿದನ್ನು ಕುರಿತ ವಾದ ಪ್ರತಿವಾದ; ವಿವಾದ!? (ಭಾಗ: ೬)

 

 

ಕೆ. ಶ್ರೀಕಂಠಯ್ಯನವರ ಸಾಹಿತ್ಯದ ಪರಿಧಿ:

೧೯೫೩ರಲ್ಲ್ಲಿ ಮುದ್ರಣವಾದ ಸರ್ವಭಾಷಾಮಯೀಭಾಷಾ ಸಿರಿಭೂವಲಯದಲ್ಲಿ  ಸಂಪಾದಕ  ಕೆ. ಶ್ರೀಕಂಠಯ್ಯನವರು ಮುವ್ವತ್ತು ಪುಟಗಳ ವಿಸ್ತಾರವಾದ , ವಿದ್ವತ್ಪೂರ್ಣವಾದ ಮುನ್ನುಡಿ ಬರೆದಿದ್ದಾರೆ. ಅದರಲ್ಲಿ ಅಡಕವಾಗಿರುವ ನೂರಾರು ವಿಚಾರಗಳಲ್ಲಿ ಮಹವೀರನ ಕಾಲನಿರ್ಣಯಕ್ಕೆ  ಸಂಬಂಧಿಸಿದ ವಿಚಾರವೂ ಒಂದು. ಈ ವಿಚಾರವಾಗಿ ಅವರು ನೀಡಿರುವ  ಮಾಹಿತಿಗಳು ಚಾರಿತ್ರಿಕವಾಗಿ ಬಹಳ ಗಮನಾರ್ಹವಾದುದು. ಅಲ್ಲಿ ಕಾಣಬರುವ ಮಾಹಿತಿಯನ್ನು ಸರಳವಾಗಿ ಅರ್ಥಮಾಡಿಕೊಂಡರೆ, ದೊರೆಯುವ ಸಾರಾಂಶವಿಷ್ಟು:   ಗೌತಮಬುದ್ಧನು  ೨೩ನೇ ತೀರ್ಥಂಕರ ಪಾರ್ಶ್ವನಾಥನಿಗೆ ಶಿಷ್ಯನಾಗಿದ್ದವನು.  ೨೪ನೇ ತೀರ್ಥಂಕರ ಮಹವೀರನ ಹಾಗೂ ಪಾರ್ಶ್ವನಾಥನ ನಡುವಿನ ಕಾಲದ ಅಂತರ  ೨೫೦ ವರ್ಷಗಳು.

 ಬುದ್ಧನ ಜೀವಿತಕಾಲದಲ್ಲಿ ಅವನ ಚಿಕ್ಕಮ್ಮನ ಮಕ್ಕಳಾದ್ಸ ದೇವದತ್ತ, ಪೂರ್ಣಕಸ್ಸಪ, ಪಕುಧ ಕಾತ್ಯಾಯನ, ಸಂಜಯ ಬೇಲಟ್ಠಿಪುತ್ರ, ನಿಗ್ಗಂಠನಾಥಪುತ್ತ ಎಂಬ ಐವರು ಸಹೋದರರು ಬುದ್ಧನು ಸ್ಥಾಪಿಸಿದ ಬೌದ್ಧಮತಕ್ಕೂ ಬುದ್ಧನ ವ್ಯಕ್ತಿತ್ವಕ್ಕೂ  ಶತೃಗಳಾಗಿ ತಾವೇ ಒಂದೊಂದು ಹೊಸ ಮತದ ಸ್ಥಾಪನೆಗೆ ಕೈ ಹಾಕಿದರು.  ನಿಗ್ಗಂಠನಾಥಪುತ್ತನು ಬೋಧಿಸುತ್ತಿದ್ದ ಮತ ತತ್ವದ ಸಾರವನ್ನು ಕುರಿತು ಬೌದ್ಧಧರ್ಮದ ತ್ರಿಪಿಟಿಕಗಳಲ್ಲಿ ವಿಸ್ತಾರವಾದ ವಿವರಣೆಗಳಿವೆ.  ಶ್ರಾಮಣ್ಯ ಧರ್ಮಫಲಸೂತ್ರಎಂಬ ಕೃತಿಯಲ್ಲಿ ಈ ಐದೂಜನ ಮತ ಪ್ರವರ್ತಕರ ಉಪದೇಶಸ್ಗಳ ಸಂಗ್ರಹವಿದೆ.  ಇದರಲ್ಲಿ ನಿಗ್ಗಂಠ ನಾಥಪುತ್ತನು ಅಂದಿನ ದಿನಗಳಲ್ಲಿ  ಮಹಾದಂಡನಾಯಕ ನಾಗಿದ್ದ ಸೇನಾಪತಿಸಿಂಹ  ಎಂಬುವವನಿಗೆ ಗುರುವಾಗಿದ್ದವನು. ಇವನನ್ನೇ ನಾಥಪುತ್ತಮಹವೀರ  ಎಂದು ಬೌದ್ಧಗ್ರಂಥಗಳಿಂದ ಊಹಿಸಿ, ಮಹವೀರನ ಕಾಲವನ್ನು ಬುದ್ಧನಕಾಲದೊಂದಿಗೆ ಸೇರಿಸಿ, ಮೊದಲಿಗೆ ಪಾಶ್ಚಾತ್ಯವಿದ್ವಾಂಸರೂ; ಅನಂತರ ಪೌರಾತ್ಯವಿದ್ವಾಂಸರೂ ಒಪ್ಪಿಕೊಂಡಿದ್ದಾರೆ.  ಜೈನಸಂಪ್ರದಾಯದ ವಿದ್ವಾಂಸರೂ ಇದನ್ನೇ ಒಪ್ಪಿಕೊಂಡಿದ್ದಾರೆ!!

ಈ ನಿಗ್ಗಂಠನಾಥಪುತ್ತನು ನಾಥವಂಶದವನು. ತೀರ್ಥಂಕರ ಮಹವೀರನೂ ನಾಥವಂಶೀಯ. ಈ ರೀತಿಯಲ್ಲಿ ನಮಸಾದೃಶ್ಯ ಹಾಗೂ ವಂಶಸಾದೃಶ್ಯದಿಂದಾಗಿ ಮಹವೀರನ ಕಾಲವನ್ನು ತಪ್ಪಾಗಿ ನಿರ್ಣಯಿಸಲು ಅವಕಾಶವಾಗಿದೆ.  ಬೌದ್ಧಸಾಹಿತ್ಯದಲ್ಲಿ ಬರುವ ನಿಗ್ಗಂಠನಾಥಪುತ್ತನ  ಚರಿತ್ರೆಯು ಬಹಳ ಕೀಳುಮಟ್ಟದ್ದಾಗಿದೆ.  ಆದರೂ ಈ  ಮಾಹಿತಿಗಳನ್ನು; ಘಟನೆಗಳನ್ನು ಸಂಪೂರ್ಣವಾಗಿ ಸುಳ್ಳು ಎಂದು ನಿರಾಕರಿಸುವಂತಿಲ್ಲ! ಈ ನಿಗ್ಗಂಠನಾಥಪುತ್ತನು  ಜೀವಕನೆಂಬುವವನೊಂದಿಗೆಹೋಗಿ, ಬುದ್ಧನಿಗೆ ನಿರೂಪಿಸಿದ  ಶ್ರಾಮಣ್ಯ ಫಲಸೂತ್ರಎಂಬ ಕೃತಿಯಲ್ಲಿ ಬರುವ ತತ್ವಶಾಸ್ತ್ರಕ್ಕೆ, ನಿಗ್ಗಂಠನಾಥಪುತ್ತನ ಮಾತುಗಳಿಗೆ ಜೈನಮತದ ಯಾವ ವಿಭಾಗದಲ್ಲಿ ಹೊಂದಾಣಿಕೆ ಇದೆಯೋ ಎಂಬುದು ಜೈನೇತರನಾದ ನನಗಂತೂ ತಿಳಿಯದು ಎಂದು ಕೆ. ಶ್ರೀಕಂಠಯ್ಯನವರು  ಖಚಿತವಾಗಿ ವಿವರಿಸಿರುವುದಿದೆ. ಸಂಬಂಧಿಸಿದ ವಿದ್ವಾಂಸರು ಸಮಗ್ರವಾಗಿ ಅಧ್ಯಯನಮಾಡಿ ನಿರ್ಧರಿಸಬೇಕಾದ ವಿಚಾರವಿದು.

ಈ ಮಾಹಿತಿಯಿಂದ ನಾವು ತಿಳಿಯಬಹುದದ  ಸಂಗತಿಯೆಂದರೆ: ಅಂದಿನ ದಿನಗಳಲ್ಲಿ ಮಹಾದಂಡನಾಯಕನಾಗಿದ್ದ ಸೇನಾಪತಿಸಿಂಹಎಂಬುವವನಿಗೆ  ಗುರುವಾಗಿದ್ದ ನಿಗ್ಗಂಠನಾಥಪುತ್ತ ನೆಂಬುವವನು ತನಗಿದ್ದ ಪಾಂಡಿತ್ಯ ಹಾಗೂ ಅಧಿಕಾರಬಲದ  ಅಮಲಿನಲ್ಲಿ ತಾನೇ ಒಂದು ಸ್ವತಂತ್ರವಾದ ಧರ್ಮವನ್ನು  ಸ್ಥಾಪಿಸಿ ಅದನ್ನು ಪ್ರಚಾರಕ್ಕೆ ತರುವ ಪ್ರಯತ್ನ ನಡೆಸಿದ್ದಾನೆ.  ಈ ಪ್ರಯತ್ನವು ಸಫಲವಾಗದಿದ್ದರೂ ಮುಂದೆ ೨೫೦ ವರ್ಷಗಳ ನಂತರ ಪ್ರಸಿದ್ಧಿಗೆ ಬಂದ ಮಹವೀರನ ಕಾಲನಿರ್ಣಯಿಸುವಾಗ ಇಲ್ಲದ ಗೊಂದಲವ್ಗನ್ನು ಸೃಷ್ಠಿಸುವಲ್ಲಿ ಈ ಘಟನೆಯು ಯಶಸ್ವಿಯಾಗಿದೆ ಇದು ಒಂದು ರೀತಿಯಲ್ಲಿ ಇಲ್ಲದ ಇತಿಹಾಸ ನಿರ್ಮಿಸ್ವುವ  ವ್ಯರ್ಥ ಸಾಹಸವಾಗುತ್ತದೆ. ಸತ್ಯಾಸತ್ಯವನ್ನು ತಿಳಿದವರು ಇದನ್ನು  ಪ್ರಶ್ನಿಸುತ್ತಾರೆ. ತಿಳಿಯದವರು ಸುಮ್ಮನೆ ಒಪ್ಪಿಕೊಳ್ಳುತ್ತಾರೆ!!

***

ಅಪೌರುಷೇಯವೆನಿಸಿರುವ  ವೇದಗಳೇ ಜಗತ್ತಿನಲ್ಲಿರುವ ಎಲ್ಲ  ಮತ ಸಂಪ್ರದಾಯಗಳಿಗೂ  ಮೂಲವೆಂದು ಹೇಳಿದರೆ; ಅದು ಕೆಲವರಿಗೆ ಅಪಹಾಸ್ಯದ  ವಿಚಾರವಾಗಬಹುದು. ಆದರೆ, ಜಗತ್ತಿನಾದ್ಯಂತವೂ ಹರಡಿರುವ ಸನಾತನ, ಜೈನ, ಬೌದ್ಧ, ಪಾರಸಿ, ಯಹೋದಿ, ಕ್ರಿಶ್ಚಿಯನ್, ಹಾಗೂ ಮುಸ್ಲಿಮ್ ಜನಾಂಗಗಳ  ಮೂಲಬೇರನ್ನು ಹುಡುಕುತ್ತಹೋಗಿ,  ಅವರ ಪ್ರಾಚೀನ ಪರಂಪರೆಯ ಆಧಾರಗ್ರಂಥಗಳ ವಿವರಗಳ ಸಾರವನ್ನು ತುಲನೆಮಾಡಿದರೆ,  ಮೇಲೆ ಸೂಚಿಸಿರುವ ಹೇಳಿಕೆಯು  ಸಮಂಜಸವೆನಿಸುತ್ತದೆ.  ಇದಕ್ಕೆ ಪೋಷಕವಾದ ಅಪಾರ ಮಾಹಿತಿಗಳನ್ನು  ಒಂದೆಡೆ ಕಲೆಹಾಕಿ  ಸಿರಿಭೂವಲಯದ ಶ್ರೀಕಂಠಯ್ಯನವರು ನಮ್ಮದೇಶದ ಪ್ರಾಚೀನ ಕಾಲದ ಚರಿತ್ರೆಗೆ ಸಂಬಂಧಿಸಿದಂತೆ ಮಹತ್ತರವಾದ ಲೋಕೋಪಕಾರಮಾಡಿರುವುದನ್ನು ಅವರ  ಸಾಹಿತ್ಯ ಕೃತಿಗಳಲ್ಲಿ ಕಾಣಬಹುದಾಗಿದೆ. ಅದನ್ನು ಮಾನ್ಯಮಾಡಲು ಇಚ್ಛಿಸದವರು ಶಾಲಾ ಕಾಲೇಜುಗಳಲ್ಲಿ ತಾವು ಕಲಿತ ಹಾಗೂ ಇಂದಿಗೂ ಪ್ರಚಾರದಲ್ಲಿರುವ ಅಸಂಬದ್ಧ ಚರಿತ್ರೆಯ ವಿಚಾರಗಳನ್ನೇ ಮೆಲುಕುಹಾಕುತ್ತ, ಖಚಿತವಾದ ಐತಿಹಾಸಿಕ ಮಾಹಿತಿಗಳನ್ನು ಯಾವುದೇ ಸಂಕೋಚವಿಲ್ಲದೇ ನಿರಾಕರಿಸಿ ನಿರ್ಲಕ್ಷಿಸುವವರಾಗಿರುತ್ತಾರೆ.

***

ಭಾರತೀಯ ಇತಿಹಾಸ ಕುರಿತು ಶ್ರೀ ಎಂ. ವಿ. ಆರ್. ಶಾಸ್ತ್ರಿಯವರ ಬರಹದ ಮಹತ್ವ:

ಭಾರತ ದೇಶದ ಪ್ರಾಚೀನ ಹಾಗೂ ಆಧುನಿಕ ಇತಿಹಾಸದತುಂಬ  ಹಲವಾರು ಅಸಂಗತಗಳು ತುಂಬಿಕೊಂಡಿರುವುದನ್ನು ಹಲವಾರು ಪ್ರಾಜ್ಞರು ಪಟ್ಟಿಮಾಡಿತೋರಿಸಿರುವುದುಂಟು. ಅಂಥವರ ಪೈಕಿ ಶ್ರೀ. ಎಂ.ವಿ.ಆರ್. ಶಾಸ್ತ್ರಿಯವರ ಬರಹವು ಗಮನಾರ್ಹವಾದುದು.  ತೆಲುಗು ಭಾಷಿಕರಾದ ಶ್ರೀ ಶಾಸ್ತ್ರಿಯವರು  ಹಲವಾರು ತೆಲುಗು ಪತ್ರಿಕೆಗಳ ಸಂಪಾದಕರಾಗಿದ್ದವರು. ಅನೇಕ ಕೃತಿಗಳನ್ನು ರಚಿಸಿದವರು. ಅವುಗಳ ಪೈಕಿ ಏದಿ ಚರಿತ್ರ  ಒಂದು ಮಹತ್ತರವಾದ ಇತಿಹಾಸದ  ದರ್ಶನವಾಗಿದೆ. ಕನ್ನಡ ಪ್ತ್ರಕರ್ತ ಹಾಗೂ ಸಾಹಿತ್ಯ ಅಕಾಡಮಿ ಪುರಸ್ಕೃತ  ಬಾಬು ಕೃಷ್ಣಮೂರ್ತಿಯವರು  ಈ ಆಸಕ್ತಿದಾಯಕವಾದ ಕೃತಿಯನ್ನು  ಯಾವುದು ಚರಿತ್ರೆಎಂಬ  ಹೆಸರಿನಲ್ಲಿ  ಕನ್ನಡಕ್ಕೆ ಭಾಷಾಂತರಿಸಿದ್ದು, ಬೆಂಗಳೂರಿನ ವಸಂತ ಪ್ರಕಾಶನದವರು ಅದನ್ನು ೨೦೧೩ರಲ್ಲಿ ಪ್ರಕಟಿಸಿದ್ದಾರೆ.

ಪ್ರಾಚೀನಕಾಲದಿಂದ ಹಿಡಿದು; ಮಧ್ಯಕಾಲದ ವರೆಗಿನ ನಮ್ಮ ದೇಶದ ಚರಿತ್ರೆಗೆ ಸಂಬಂಧಿಸಿದಂತೆ ಹಲವಾರು ಮಹನೀಯರು  ರಾಶಿಗಟ್ಟಳೆ ಮಾಹಿತಿಗಳನ್ನು ದಾಖಲಿಸಿರುವುದಿದೆ.  ಆಸಕ್ತಿ ಇರುವವರು ಅವುಗಳನ್ನು ತಾಳ್ಮೆಯಿಂದ ಅಧ್ಯಯನಮಾಡಬೇಕಷ್ಟೇ.ಈ ರೀತಿಯ ಶ್ರಮದ ಅಧ್ಯಯನಮಾಡುವ ಶಕ್ತಿಯು ಸ್ವಾತಂತ್ರ್ಯಾನಂತರದ ವಿದ್ಯಾರ್ಥಿಗಳಲ್ಲಿ  ಬಹಳವಾಗಿ ಕ್ಷೀಣಿಸಿದೆ.  ಅದಕ್ಕೆ ಮೂಲಕಾರಣ: ಅವರಿಗೆ ಶಿಕ್ಷಣನೀಡಿದ ಶಿಕ್ಷಕರು ಪಾಶ್ಚಾತ್ಯ ವಿದ್ವಾಂಸರ ದಾಸಾನುದಾಸರಾಗಿವರ್ತಿಸಿರುವುದು! ಮತ್ತು ದೇಶದ ನಿಜವಾದ ಚರಿತ್ರೆಯ ವಿಚಾರದಲ್ಲಿ  ಕಿವುಡರಂತೆಯೂ; ಮೂಗರಂತೆಯೂ ವರ್ತಿಸಿರುವುದು!! ಚರಿತ್ರೆಗೆ ಸಂಬಂಧಿಸಿದಂತೆ  ಇವೆಲ್ಲ ನ್ಯೂನತೆಗಳನ್ನೂ ಗಮನದಲ್ಲಿರಿಸಿಕೊಂಡು ಶ್ರೀ ಎಂ.ವಿ.ಆರ್. ಶಾಸ್ತ್ರಿಯವರು ತಮ್ಮ  ಏದಿ ಚರಿತ್ರವನ್ನು ರೂಪಿಸಿದ್ದಾರೆ.

ದೇಶದ ಪ್ರಚೀನ ಸಂಸ್ಕೃತಿ ಹಾಗೂ ಇತಿಹಾಸಕ್ಕೆ ಸಂಬಂಧಿಸಿದಂತೆ ತೆರೆದುಕೊಳ್ಳುವ ಹೊಸ ಹೊಸ ಮಾಹಿತಿಗಳ ವಿಚಾರದಲ್ಲಿ  ಸೂಕ್ತವಾಗಿ ಸ್ಪಂಧಿಸದಿರುವ ಮೇಧಾವಿಗಳು ಹಾಗೂ ವಿದ್ವಾಂಸಾರವಿಚಾರವಾಗಿ ನಿರಾಶೆಯನುಡಿಗಳೊಂದಿಗೆ ಪ್ರಾರಂಭವಾಗುವ ಈ ಕೃತಿಯು  ಹಸಿಸುಳ್ಳುಗಳ ದಂಡಯಾತ್ರೆ; ಒಣಗಿದನದಿಗೆ ವಂದನೆ; ಆಷಾಢಭೂತಿ ಮ್ಯಾಕ್ಸ್ ಮುಲ್ಲರ್; ಆರ್ಯರುಯಾರು? ಬೊಗಳೆ ಪುರಣಗಳು,;  ಬಿಳಿದೊರೆಗಳು ನುಂಗಿದ ಚರಿತ್ರೆ; ಇವನಿರಬೇಕು ಬಹುಷಃ; ಶಕೆಗಳು, ಶಕಾರಿಗಳು; ಮತಮುಂದೆ..ಪ್ರವರ್ತಕ ಹಿಂದೆ; ಆದಿಶಂಕರರೇ ಕ್ಷಮಿಸಿ ಇತ್ಯಾದಿ ಹಲವಾರು ತಲೆಬರಹದಲ್ಲಿ ಮೊಗಲರ ದುರಾಡಲಿತ ಹಾಗೂ ಅವೆಲ್ಲವನ್ನೂ ಮರೆಮಾಚುವ ಇತಿಹಾಸದ ನಿರೂಪಣೆಗಳನ್ನು  ಎಳೆ ಎಳೆಯಾಗಿ ವಿವರಿಸಿ, ಸಾಮಾನ್ಯ ಓದುಗರಿಗೆ ನಿಜವಾದ ಇತಿಹಾಸದ ಸತ್ಯದರ್ಶನ ಮಾಡಿಸಿದ್ದಾರೆ.   ಇವುಗಳಲ್ಲಿ  ಘಜನೀ ಮಹಮದನ ದುರಾಕ್ರಮಣ ಹಾಗೂ ಲೂಟಿಯಿಂದಾರಂಭಿಸಿ ಗುಲಾಮಿಸಂತತಿಯವರು, ಖಿಲ್ಜಿಸಂತತಿಯವರು;  ತುಘಲಕ್ ಸಂತತಿಯವರು, ಬಹಮನಿ ಸಂತತಿಯವರು; ಅದಿಲ್ಷಾಹಿಗಳು ಮುಂತಾದವರ ಆಡಳಿ ವೈಖರಿಯೂ; ತೈಮೂರನಿಂದ ಆರಂಭವಾಗಿ, ಹುಮಾಯೂನ್;, ಅಕ್ಬರ್ ದಿಗ್ರೇಟ್, ಇವನು ಸ್ಥಾಪಿಸಿದ ದೀನ್ ಇಲಾಹಿಎಂಬ ನೂತನ ಧರ್ಮದವಿಚಾರ;  ಷಾಜಹಾನ,  ಬಾಬರ್, ಜಹಾಂಗೀರ,  ಔರಂಗಜೇಬ ಮುಂತಾದವರ ವಿಚಾರಗಳು,  ಇವರುಗಳ ಮತಾಂಧತೆಯ ಕ್ರೂರ ವರ್ತನೆ, ತಾಜ್ ಮಹಲಿನ ನಿಜ ಚರಿತ್ರೆ;  ಶಿವಾಜಿಯ ವಿಚಾರ ಹೀಗೆ ನೂರಾರು ವಿಚಾರಗಳು ಈ ಕೃತಿಯಲ್ಲಿ ಸಮಾವೇಶವಾಗಿರುವುದನ್ನು ಓದುಗರು ಗಮನಿಸಬಹುದಾಗಿದೆ.

ಇದಕ್ಕಾಗಿ ಅವರು ಆಧಾರವಾಗಿ ಪರಿಗಣಿಸಿರುವುದು ಮೊಗಲರ ಆಡಳಿತಾವಧಿಯ ದಾಖಲೆ ಪತ್ರಗಳನ್ನೇ! ಈ ಕಾರಣದಿಂದಾಗಿ ಯಾರೊಬ್ಬರೂ ಈ ಬರಹವನ್ನು ಆಧಾರರಹಿತವಾದ ಸ್ವಕಪೋಲಕಲ್ಪಿತ ಮಾಹಿತಿಗಳೆಂದು ಅಲ್ಲಗಳೆಯಲಾಗದು!! ಈ ವಿದೇಶೀ ಆಕ್ರಮಣಕಾರರ ದುರಾಡಳಿತದ ಹಲವಾರು  ದುಷೃತ್ಯಗಳ ವಿವರಗಳನ್ನು ಶ್ರೀ ಶಾಸ್ತ್ರಿಯವರು ಸೂಕ್ತವಾದ ದಾಖಲೆಗಳ ಸಹಿತವಾಗಿ ಎಂಥವರಿಗೂ ಮನವರಿಕೆಯಾಗುವಂತೆ  ರೂಪಿಸಿಸಿದ್ದಾರೆ.  ಇಂಥ ಸತ್ವಶಾಲೀ ಬರಹಗಳ ಅಧ್ಯಯನವು ಇಂದಿನ ಯುವಜನತೆಯ ಅಂತಸ್ಸತ್ವವನ್ನು ಸಾಕಷ್ಟು ಪರಿಷ್ಕರಿಸುತ್ತದೆ.

***

ಉಪಸಂಹಾರ:

ಶಾಸ್ತ್ರವಚನಗಳನ್ನು ಅವಹೇಳನಮಾಡಿ; ಮೂದಲಿಸಿ  ಮೂಲೆಗುಂಪುಮಾಡುವುದು ಸುಲಭದ ವಿಚಾರ. ಆದರೆ, ಕಷ್ಟನಷ್ಟಗಳನ್ನು  ನೋವನ್ನು ಅನುಭವಿಸುವುದು ಬಹಳ ಯಾತನೆಯವಿಚಾರವೆಂಬುದು ಎಲ್ಲರಿಗೂ ತಿಳಿಯಬೇಕು. 

ನಾವು ಯೋಗ್ಯರಾದರೂ ನಮಗೇ ಕಷ್ಟಗಳು ಬರುತ್ತವೆಂದು ಭಾವಿಸಿ; ಕಣ್ಣಿಗೆ ಕಾಣಿಸದ  ದೈವಶಕ್ತಿಯನ್ನು ನಿಂದಿಸುವುದು ಇನ್ನೂ ಹೆಚ್ಚಿನ ಪಾಪಕಾರ್ಯ.  ನಮ್ಮ ಪ್ರಾಚೀನ ಕರ್ಮದ ನಾಶಕ್ಕಾಗಿ ಜಪತಪಗಳನ್ನಾಚರಿಸುವುದನ್ನೂ ಶಾಸ್ತ್ರಗಳು ಸೂಚಿಸಿವೆ.  ಇದು ಸಾಮಾನ್ಯವಾಗಿ ಎಲ್ಲರಿಗೂ ಅನಿವಾರ್ಯವಾದ ಕ್ರಿಯೆ.

ಹಿಂದಿನ ಋಷಿಮುನಿಗಳು ತಪಸ್ಸನ್ನಾಚರಿಸಲು ಕಾಡಿಗೆ ತೆರಳಬೇಕಿತ್ತು. ನಿಯತಿದೇವಿಯು ಇಂದಿನ ಲೌಕಿಕರಿಗೆ ಹೆಚ್ಚಿನ ಕರುಣೆ ತೋರಿದ್ದಾಳೆ. ನಾವು ತಪಸ್ಸುಮಾಡುವುದಕ್ಕಾಗಿ ಕಾಡಿಗೆ ತೆರಳುವ ಅಗತ್ಯವಿಲ್ಲ.   ಬಿಡುವಿಲ್ಲದ ನಮ್ಮ ದುಡಿಮೆಯನಡುವೆ ದೊರೆಯುವ ಅಲ್ಪಸ್ವಲ್ಪ ವಿರಾಮವನ್ನೂ ನಾವು ವ್ಯರ್ಥಮಾಡದೇ  ಏಕಾಗ್ರಚಿತ್ತದಿಂದಿಂದ ಶಾಂತಮನಸ್ಕರಾಗಿ ಜಪಧ್ಯಾನದಲ್ಲಿ ನಿರತರಾದರೆ,  ನಮಗೇ ಅಚ್ಚರಿಯೆನಿಸುವಂತೆ ಅದರಿಂದ ಸತ್ಫಲದೊರೆಯುವುದನ್ನು ನಾವು ಪರೀಕ್ಷಿಸಬಹುದು.

ಜಪಮಾಡಲು ಯಾವ ಮಂತ್ರೋಪದೇಶ ಬೇಕು? ಎಂಬ ಪ್ರಶ್ನೆಯ ಗೊಂದಲವು ಅನವಶ್ಯಕ. ಹಿಂದಿನಿಂದ ಇಂದಿನವರೆವಿಗೆ; ಮುಂದೆಯೂ ಸಾಮಾನ್ಯ ಲೌಕಿಕರಿಗೆ ಗಾಯತ್ರೀಮಂತ್ರಕ್ಕಿಂತ ಸುಲಭವಾದ ಮಂತ್ರಜಪ ಬೇರಾವುದು ಬೇಕು!?  ತೀರಾ ಅಪರಿಚಿತರಿಗೆ ಈ ಪ್ರಯತ್ನದಲ್ಲಿ  ಪ್ರಾರಂಭದಲ್ಲಿ ಕೆಲವು ತೊಂದರೆಗಳು ಕಾಣಿಸಬಹುದು. ಅಭ್ಯಾಸವಾದಂತೆ ಎಲ್ಲವೂ ಸರಿಯಾಗುತ್ತದೆ. ಆಗದಿದ್ದಲ್ಲಿ ನಾವೇ ಪ್ರಯತ್ನಿಸಿ ಸರಿಪಡಿಸಿಕೊಳ್ಳಬೇಕು. ನಮ್ಮ ಪೂರ್ವಾರ್ಜಿತಪುಣ್ಯ ಬಲದಿಂದ ಗಾಯತ್ರೀ ಮಂತ್ರವು ಸಿದ್ದಿಯಾದಲ್ಲಿ ಕ್ರಮೇಣ ನಮಗೆ ವಾಕ್ಸಿದ್ಧಿಯುಂಟಾಗುತ್ತದೆ.  ಆ ಸ್ಥಿತಿಯಲ್ಲಿ ಯಾರಿಗೂ ಕೆಟ್ಟದಾಗಲೆಂದು ನುಡಿಯಬಾರದು.. ಇದರಿಂದ ನಮ್ಮ ವಾಕ್ಸಿದ್ಧಿಯು ಕ್ಷೀಣಿಸಿ, ಲೋಪವಾಗುವುದು ಖಚಿತ. ವಾಕ್ಸಿದ್ಧಿಯು ನಮ್ಮ ಅನುಭವಕ್ಕೆ ಬಂದನಂತರವೂ ನಾಮಗೆ  ಇಷ್ಟವಿದ್ದಲ್ಲಿ ಜಪಕ್ರಮವನ್ನು ಮುಂದುವರೆಸಬಹುದು.  ಇಲ್ಲವಾದಲ್ಲಿ ಮುಂದೆ ನೆಮ್ಮದಿಯಿಂದ ಜೀವಿಸಬಹುದು.

ಧರ್ಮೋ ರಕ್ಷತಿ ರಕ್ಷಿತಃ ಅಂದರೆ; ಧರ್ಮವನ್ನು ಪಾಲಿಸುವ ಮೂಲಕ ರಕ್ಷಿಸಿದವನನ್ನು ಧರ್ಮವು ರಕ್ಷಿಸುತ್ತದೆ.  ಜಗತ್ತಿನಲ್ಲಿರುವ ೩೬೩ ಮತಧರ್ಮಗಳೂ ಅವಿನಾಶಿಯಾದುವೆಂದು ಕನ್ನಡದವೇದ ಸಿರಿಭೂವಲಯದ ಕವಿ ಕುಮುದೇಂದುಮುನಿಯು ಘೋಷಿಸಿರುವುದನ್ನು         ಈಗಾಗಲೇ ತಿಳಿದದ್ದಾಗಿದೆ.  ಸಾವಿರಾರು ವರ್ಷಗಳಿಂದಲೂ  ಸನಾತನಧರ್ಮವನ್ನು ನಾಶಮಾಡುವ ಕಾರ್ಯದಲ್ಲಿ ಕೋಟ್ಯಾಂತರಜನ ದೈತ್ಯರು ಶ್ರಮಿಸಿದ್ದಾಗಿದೆ. ಆದರೂ ನಮ್ಮ ಕಾಲದವರೆವಿಗೂ ಈ ಕಾರ್ಯ ಯಶಸ್ವಿಯಾಗಿಲ್ಲ!!   ದ್ವಾಪರಯುಗದ ಕೊನೆಯಲ್ಲಿ ಮಹಾಭಾರತದ ಯುದ್ಧನಡೆದು,  ಕೌರವ- ಪಾಂಡವರಿಗೆ ಸೇರಿದ ೧೮ ಅಕ್ಷೋಹಿಣಿ ಸೈನ್ಯವು ನಾಶವಾಯಿತು. ಈ ಯುದ್ಧದಲ್ಲಿ ಭಾಗವಹಿಸದೇ ಉಳಿದ  ಕೃಷ್ಣನ ದ್ವಾರಕೆಯ ಯಾದವರೂ ತಮ್ಮತಮ್ಮಲ್ಲಿಯೇ ಹೊಡೆದಾಡಿಕೊಂಡು ಸರ್ವನಾಶ ವಾದರು! ಮೊಗಲರು  ಹಾಗೂ ಆಂಗ್ಲರಂತೂ ಅತ್ಯಂತ ಕ್ರೂರವಾಗಿ ಹಿಂದೂಗಳನ್ನು ಹಿಂಸಿಸಿ, ಮತಾಂತರಗೊಳಿಸುವ ಮೂಲಕ ಅಥವಾ ಕೊಲೆಮಾಡುವಮೂಲಕ  ಸನಾತನಧರ್ಮದ ನಾಶಕ್ಕೆ ಪ್ರಯತ್ನಿಸಿದ್ದಾಗಿದೆ. ಆದರೂ ಈ ಪ್ರಾಚೀನವಾದ  ಧರ್ಮವು ಇನ್ನೂ ಜೀವಂತವಿದೆ.!!

ಇನ್ನು ಮುಂದಿನ ವಿಚಾರ. ಇಂದಿನ ಪರಿಸರದಲ್ಲಿ  ಹಿಂದೂಗಳಲ್ಲದವರ ಕುತಂತ್ರದಿಂದಾಗಿ  ಹಿಂದೂ ಧರ್ಮವು ವಿನಾಶದ ಅಂಚಿಗೆ ಬಂದಿರುವುದು.  ಅದಕ್ಕಾಗಿ ಯಾರೂ ಕಳವಳಗೊಂಡರೂ ಏನೂ  ಪ್ರಯೋಜನವಿಲ್ಲ!! ಒಂದು ಸ್ಥರದಲ್ಲಿ ನಿಷ್ಪ್ರಯೋಜಕರಾದ  ಸನಾತನಿಗಳ ಸಂತತಿಯು ಸಂಪೂರ್ಣವಾಗಿ ಕ್ರಿಶ್ಚಿಯನ್ ಅಥವಾ ಇಸ್ಲಾಂ ಸಂಪ್ರದಾಯಕ್ಕೆ ಮತಾಂತರಗೊಂಡರೂ; ಆ ಸಮುದಾಯದಲ್ಲೇ ಅಂತಃ ಕಲಹವು ಹುಟ್ಟಿಕೊಂಡು, ಅಲ್ಲಿನ  ನಿರುಪಯೋಗಿಗಳೆಲ್ಲರೂ ನಾಶವಾಗಿ ಮನುಕುಲವೇ ಕ್ಷೀಣವಾಗುವುದು ಖಚಿತ! ಅದನ್ನು ಯಾರೊಬ್ಬರೂ ತಡೆಯಲಾರರು. 

ಇಂದಿನ ಕಲ್ಪಾಂತ್ಯದಿಂದ ಮುಂದಿನ ಕಲ್ಪಾರಂಭದ ವರೆವಿಗೆ  ಗೊಂದಲದ ಸ್ಥಿತಿಯಿದ್ದರೂ, ಮುಂದಿನ ಕಲ್ಪದಲ್ಲಿ ಎಲ್ಲವೂ ಸಮರ್ಪಕವಾಗಿ ಪುನರ್ವ್ಯವಸ್ಥೆಗೊಳ್ಳುವುದು ಪ್ರಕೃತಿಯ ನಿಯಮ. ಅದಕ್ಕಾಗಿ ಯಾರೊಬ್ಬರೂ ಸಂಭ್ರಮಿಸುವುದಾಗಲೀ; ಕಳವಳಗೊಳ್ಳುವುದಾಗಲೀ ಉಪಯೋಗವಿಲ್ಲ  ಎಂಬುದನ್ನರಿತು,  ನಾವು ಹುಟ್ಟಿಬೆಳೆದ ಧಾರ್ಮಿಕ ಸಂಪ್ರದಾಯವನ್ನು ಶ್ರದ್ಧೆಯಿಂದ ಅನುಸರಿಸುತ್ತ ಯಾವುದೇ ಗೊಂದಲಕ್ಕೆ ಸಿಲುಕದೇ ನೆಮ್ಮದಿಯಿಂದ ಜೀವಿಸುವುದಷ್ಟೇ ನಮ್ಮ ಕರ್ತವ್ಯ.  ಎಂಬ ಆತ್ಯಂತಿಕ ನಿಲುವನ್ನು ಅನುಸರಿಸುವುದು ಸೂಕ್ತವಾಗಿರುತ್ತದೆ.

ಇದೇ ಧರ್ಮವು ನಮಗೆ ತಿಳಿಸುವ ಕರ್ತವ್ಯವಾಗಿದೆ.  ಶ್ರದ್ಧೆ ಹಾಗೂ ನಂಬಿಕೆಯಿಂದ ಇದನ್ನು ಪಾಲಿಸೋಣ. ಉಳಿದದ್ದು ಸರ್ವಶಕ್ತನ ಇಚ್ಛೆಗೆ ಸೇರಿದ್ದು ಅದನ್ನು ಬದಲಿಸಲು ಯಾರೊಬ್ಬರಿಗೂ ಸಾಧ್ಯವಿಲ್ಲ ಎಂಬ ವಿಚಾರ ನಮಗೆ ಮನವರಿಕೆಯಾದರೆ ಸಾಕು.  ಇವೆಲ್ಲ ಮಾಹಿತಿಗಳನ್ನೂ ಶಾಂತಮನಸ್ಸಿನಿಂದ ಓದಿ, ಆಲೋಚಿಸಿ, ವಿವೇಚಿಸಿ, ಧರ್ಮಬದ್ಧವಾದ ಮಾರ್ಗದಲ್ಲಿ ನಮ್ಮ ಜೀವನಸಾಗಿಸುವ  ವಿವೇಕ; ತಾಳ್ಮೆ, ನಮ್ಮೆಲ್ಲರಿಗೂ ಒದಗಿಬರಲೆಂದು ಸರ್ವಶಕ್ತನಲ್ಲಿ ಪ್ರಾರ್ಥಿಸೋಣ.

ಸಿರಿಭೂವಲಯದಸುಧಾರ್ಥಿ.

_()_

ಇಲ್ಲಿನ ವಿವರಣೆಗಳ ವಿಚಾರದಲ್ಲಿ  ಹೆಚ್ಚಿನ ಮಾಹಿಯನ್ನು ಬಯಸುವವರು ಗಮನಿಸಬಹುದಾದ ಮೂಲಕೃತಿಗಳು:

೧) ಎನ್. ಎಸ್. ಅನಂತರಂಗಾಚಾರ್ ಅವರ ವೈದಿಕ ಸಾಹಿತ್ಯ ಚರಿತ್ರೆ

೨) ಬ್ರಹ್ಮೀಭೂತ ಶ್ರೀ ಪರಮಾನಂದಭಾರತೀ ಸ್ವಾಮಿಗಳವರ  ಪ್ರಥಮಸೋಪಾನ.

೩) ಶ್ರೀ ಎಂ.ವಿ.ಆರ್. ಶಾಸ್ತ್ರಿಯರು ತೆಲುಗುಭಾಷೆಯಲ್ಲಿ ಬರೆದಿರುವ ಏದಿ ಚರಿತ್ರಾಎಂಬ ಕೃತಿಯ ಕನ್ನಡಾನುವಾದವಾದ ಯಾವುದು ಚರಿತ್ರೆ?’ ಎಂಬ ಕೃತಿ:     (ಅನುವಾದಕಾರು ಶ್ರೀ. ಬಾಬುಕೃಷ್ಣಮೂರ್ತಿ)

 ೪) ಹಾಸನದ ಸುಧಾರ್ಥಿಯ ತ್ರಿಮತಸ್ಥ ಸಂಧ್ಯಾವಂದನೆ

೫) ಇದೇ ಲೇಖಕನ .ವೇದಗಳು ಅಪೌರುಷೇಯ ಎಂಬ ಕಿರುಹೊತ್ತಿಗೆ

೬)ಇದೇ ಲೇಖಕನ ಸಿರಿಭೂವಲಯದ ಸರಳಪರಿಚಯ ಕೃತಿಗಳಲ್ಲೊಂದಾದ ಜಗತ್ತಿನ ಹತ್ತನೇ ಅಚ್ಚರಿ

) ಗೂಗಲ್ಲಿನ ಕೆಲವು ಮಾಹಿತಿಗಳು.

***

Friday, 12 February 2021

ವೇದವಿಜ್ಞಾನದ ಮುಂದುವರೆದ ಸಂತತಿಯೇ ಆಧುನಿಕ ವಿಜ್ಞಾನ!!!

ಪ್ರಾಚೀನವಾದ  ವೇದವಿಜ್ಞಾನವು  ಇಂದಿನ ’ಆಧುನಿಕವಿಜ್ಞಾನದ’  ಪರಿಧಿಯನ್ನೂ  ಮೀರಿ, ’ವಿಜ್ಞಾವನ್ನು ಪ್ರತಿಪಾದಿಸುತ್ತದೆ!  ಎಂದು ಹೇಳಿದರೆ, ಕೆಲವು ’ಆಧುನಿಕ  ವಿಜ್ಞಾನಾಂಧಕಾರ’ ಪೀಡಿತರಿಗೆ ಪಥ್ಯವಾಗದ ಸಂಗತಿಯೆಂಬುದು ನನಗೆ ಅರಿವಿದೆ.  ವಿಚಾರಶಾಲಿಗಳಾದ ಕೆಲವರು ವಿಜ್ಞಾನಿಗಳು ವೇದವಿಜ್ಞಾನದ  ಮಹತ್ವವನ್ನು ಗ್ರಹಿಸಿರುತ್ತಾರೆ.  ಆದರೆ, ಆಧುನಿಕ ವಿಜ್ಞಾನದ  ’ಅತ್ಯಾಕರ್ಷಕಫಲ’ ಗಳಿಂದ  ಸುಖ; ಸೌಲಭ್ಯ; ಹಾಗೂ ಸಂತೋಷವನ್ನು ಅನುಭವಿಸುತ್ತಿರುವ ಅಕ್ಷರಸ್ತರಾದ, ಅಥವಾ ಅನಕ್ಷರಸ್ತರಾದ ಜನಸಾಮಾನ್ಯರಲ್ಲಿ ’ವಿಜ್ಞಾನಾಂಧಕಾರ’ ತುಂಬಿರುತ್ತದೆ.  ಬಹುಪಾಲು ಮಂದೆಯಂಥ ಮಂದಿಯು ಮೇಲಿನ ಹೇಳಿಕೆಗೆ ಸಮ್ಮತಿಸುವುದಿಲ್ಲ. ಇದಕ್ಕೆ ಮುಖ್ಯವಾದ ಕಾರಣ: ಅವರಲ್ಲಿ ವೇದಗಳ ವಿಚಾರವಾಗಿ  ಸದಭಿಪ್ರಾಯ ಇಲ್ಲದಿರುವುದು! 

ಕಳೆದ ೩-೪ ಶತಮಾನಗಳಿಂದೀಚೆಗೆ  ಆಧುನಿಕವಿಜ್ಞಾನವು  ಊಹಾತೀತವಾದ  ಅಭಿವೃದ್ಧಿಯನ್ನು ಸಾಧಿಸಿ, ತಾನು ಜಗತ್ತನ್ನೇ  ಸರ್ವನಾಶಮಾಡುವೆನೆಂಬ ಬೆದರಿಕೆ ಹಾಕುವ ಹಂತಕ್ಕೆ ತಲುಪಿರುವುದು ಸರ್ವವೇದ್ಯ.  ಇಂಥ ಅಚ್ಚರಿಯ ಸಾಧನೆಯು  ಆಧುನಿಕವಿಜ್ಞಾನಕ್ಕೆ ಇದ್ದಕ್ಕಿದ್ದಂತೆಯೇ ಒಂದೇ ರಾತ್ರಿಯಲ್ಲಿ ಬಂದುದೇನಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕಾದುದು  ಅನಿವಾರ್ಯ!  ಆಧುನಿಕವಿಜ್ಞಾನದ ಸಾಧನೆಗಳು ದಿನದಿಂದ ದಿನಕ್ಕೆ ವಿಕಾಸಗೊಂಡು, ಹೊಸಹೊಸತಂತ್ರಜ್ಞಾನಗಳ ಆವಿಷ್ಕಾರವಾಗಿದೆ. ಇದಕ್ಕೆ ಇಂದಿನ ವಿಜ್ಞಾನಿಗಳು ಹಾಗೂ ತಂತ್ರಜ್ಞರು  ತಮ್ಮ ಹಿಂದಿನ ವಿಜ್ಞಾನಿಗಳು ಹಾಗೂ ತಂತ್ರಜ್ಞರು ದಾಖಲಿಸಿಟ್ಟುರುವ ವೈಜ್ಞಾನಿಕ ಪ್ರಯೋಗಗಳಿಗೆ ಸಂಬಂಧಿಸಿದ ’ಟಿಪ್ಪಣಿಗಳು’ ಮೂಲಕಾರಣವೆಂಬುದು ಸರ್ವವಿಧಿತ.  

ಈ ರೀತಿಯ ವೈಜ್ಞಾನಿಕ-ತಾಂತ್ರಿಕ ಅಭಿವೃದ್ಧಿಯದಿಸೆಯಲ್ಲಿ ಅಚ್ಚರಿಯ ಸಾಧನೆ ಸಾಧಿಸಿರುವ  ಅಣುವಿಜ್ಞಾನ, ವೈಮಾನಿಕ ಕ್ಷೇತ್ರ,  ಬಾಹ್ಯಾಂತರಿಕ್ಷಯಾನ, , ದೂರದರ್ಶನ,, ಗಣಕಯಂತ್ರಕ್ರಮ,   ದೂರವಾಣಿ  ಇತ್ಯಾದಿ  ಎಲ್ಲ ಕ್ಷೆತ್ರಗಳ ಅಚ್ಚರಿಯ ಸಾಧನೆಗಳಿಗೂ ಹಿಂದಿನ ಮೇಧಾವಿಗಳು ದಾಖಲಿಸಿಟ್ಟಿರುವ ’ಟಿಪ್ಪಣಿ’ಗಳು ನೆರವಾಗಿರುವುದು ನಿಶ್ಚಯ.  ಇವುಗಳ ಪೈಕಿ ’ದೂವಾಣಿಗೆ ಸಂಬಂಧಿಸಿದ ಮಾಹಿತಿಯನ್ನೇ ಗಮನಿಸೋಣ.   ’ಸ್ಥಿರದೂರವಾಣಿ ’ ಸಂಪರ್ಕದಲ್ಲಿ ಬಳಸುವ ಸಂಪರ್ಕಯಂತ್ರವು ಹಿಂದೆ  ಬಹಳ ತೂಕದ್ದಾಗಿತ್ತು.  ಅದರ ರಿಸೀವರನ್ನು ಎತ್ತಿ ಹಿಡಿದುಕೊಳ್ಳುವುದೇ ವಯಸ್ಸಾದ ಕೆಲವರಿಗೆ  ಕಷ್ಟದ ಕೆಲಸವಾಗಿತ್ತು. ಅಂದಿನ ಪರಿಸರದಲ್ಲಿ ಈ ದೂರಸಂಪರ್ಕ ಕ್ಷೇತ್ರದಲ್ಲಿ  ’ಚರದೂರವಾಣಿ’ ಯ ಕಲ್ಪನೆಯೂ ಇರಲಿಲ್ಲ!  ಮೇಧಾವಿಯೊಬ್ಬ ಈ ಸಾಧನೆಯಲ್ಲೂ ಸಿದ್ಧಿಪಡೆದ!

 ಒಂದು ಕೈಮುಷ್ಟಿಯಲ್ಲಿ ಹಿಡಿದು ಮತನಾಡಬಲ್ಲ ಚರದೂರವಾಣಿಯ ಅವತಾರವಾಯಿತು!!  ಅದರಲ್ಲಿ ಅಳವಡಿಸಿರುವ ಅತಿ ಸೂಕ್ಷ್ಮವಾದ ಕೀಲಿಮಣೆಯ ಗುಂಡಿಗಳನ್ನು ಒತ್ತುವಮೂಲಕ ಸಂಪರ್ಕ ಸಾಧಿಸುವಂತಾಯಿತು.  ಮುಂದಿನ ಮೇಧಾವಿಗಳು ಅದನ್ನು ಇನ್ನೂ ಹೆಚ್ಚು ಅಭಿವೃದ್ಧಿ ಪಡಿಸಿ, ಮೊಬೈಲ್ಲಿನ ತೆರೆಯಮೇಲೆ ಬೆರಳಿಟ್ಟು  ಅಕ್ಷರಗಳ ಕೀಲೀಮಣೆಯನ್ನು  ಪಡೆದು, ಅದನ್ನು ಒತ್ತುವ ಮೂಲಕ  ಬಯಸಿದ ವ್ಯಕ್ತಿಯೊಂದಿಗೆ ಸಂಪರ್ಕಸಾಧಿವಂತಾಯಿತು. ಕಪ್ಪು ಬಿಳುಲಿನ ದರ್ಷಕವು ಬದಲಾಗಿ, ವರ್ಣರಂಜಿತವಾದ ಆಕರ್ಷಕ ತೆರೆಯು ಬಳಕೆಗೆ ಬಂದು, ಹೆಚ್ಚು ಜನಪ್ರಿಯವಾದದ್ದು ಇತಿಹಾಸ! 

ಈಗ ಈ ಮೊಬೈಲ್ ಗಳ ಮೂಲಕ ಸಂಪರ್ಕಿತರಾದ ವ್ಯಕಿಗಳ  ವೀಡಿಯೋಚಿತ್ರಗಳೂ ಪರಸ್ಪರರಿಗೆ ದೊರೆಯುವಂತಾಗಿ ಅವರ ಭ್ರಮಾಜೀವನಕ್ಕೆ ಹೆಚ್ಚಿನ ಆಸರೆಯಾಯಿತು!  ಇಷ್ಟೆಲ್ಲ ಅನೂಹ್ಯವಾದ ಸಾಧನೆ ಹಾಗೂ ಸಿದ್ದಿಗೆ ಈ ಸಂಪರ್ಕ ಸಾಧನದ ಮೂಲ ಯಂತ್ರವನ್ನು ರೂಪಿಸಿದವನ ತಂತ್ರಜ್ಞಾನದ ಮಾರ್ಗದರ್ಷಕ  ಟಿಪ್ಪಣಿಗಳು ಪ್ರಮುಖಕಾರಣವೆಂಬುದನ್ನು ಯಾರೂ ಅಲ್ಲಗಳೆಯಲಾಗದು. 

ಇದೇಕ್ರಮದಲ್ಲಿ ಉಳಿದೆಲ್ಲ ಕ್ಷೇತ್ರಗಳ ಅಭಿವೃದ್ಧಿಗೂ  ಆಯಾಯಕ್ಷೇತ್ರಗಳ ಮೂಲಭೂತ ಸಂಶೋಧಕರ  ಸಂಬಂಧಿಸಿದ ’ಟಿಪ್ಪಣಿಗಳೇ’  ಪ್ರಮುಖ ಆಧಾರವಾಗಿರುತ್ತವೆ. ಮುಂದಿನವರ ಮೇಧಾಶಕ್ತಿಯು ಸಂಬಂಧಿಸಿದ ಕ್ಷೇತ್ರದಲ್ಲಿ ಅಸಾಧಾರಣವಾದ ಅಭಿವೃದ್ಧಿ ಸಾಧಿಸಲು ಪಾವಟಿಕೆಗಳಾಗಿರುತ್ತವೆ. ಇದು ಎಲ್ಲರೂ ಸಮ್ಮತಿಸಲೇ ಬೇಕಾದ ವಿಚಾರ.   ಇಂದಿನವರ  ಇಂಥ ಅನೂಹ್ಯವೆನಿಸಿರುವ ಸಾಧನೆಗಳ ಆವಿಷ್ಕಾರವು ನಿಜಕ್ಕೂ ಶ್ಲಾಘನೀಯವಾದದ್ದು. ಇದನ್ನೂ ಯಾರೂ ನಿರಾಕರಿಸುವಂತಿಲ್ಲ. 

ಅನಾದಿಯೂ, ಅನಂತವೂ, ಅಪುರುಷೇಯವೂಆದ ಭಾರತೀಯ ವೇದೋಪನಿಷತ್ತುಗಳಲ್ಲಿ ಅಡಕವಾಗಿರುವ ಇಂಥ ಸಾಧನ ಸಲಕರಣೆಗಳ ತಂತ್ರಜ್ಞಾನವು ಜನಸಾಮಾನ್ಯರ ಅರಿವಿಗೆ ನಿಲುಕದ್ದಾಗಿದೆ. ಮೇಧಾವಿಗಳಾದ, ಜಗತ್ಪಸಿದ್ಧಿಪಡೆದ ವಿಜ್ಞಾನಿಗಳು ಬಹಳ ಶ್ರಮಪಟ್ಟು ಈ ವೇದಾಂತರ್ಗತವಾದ ಅಧ್ಬುತ ವೈಜ್ಞಾನಿಕ ಸೂತ್ರಗಳನ್ನು ಅಧ್ಯಯನಮಾಡಿ, ಅವನ್ನು ಪ್ರಯೋಗಶಾಲೆಯಲ್ಲಿ ಪರೀಕ್ಷಿಸಿ, ತಮ್ಮ ಅನ್ವೇಷಣೆಯಲ್ಲಿ ಯಶಸ್ಸುಪಡೆದಿರುವರೆಂಬ ವಿಚಾರೆದಲ್ಲಿ ಸಂದೇಹಕ್ಕೆ ಅವಕಾಶವೇ ಇಲ್ಲ!! 

ವೇದಾಂತರ್ಗತವಾದ ರಹಸ್ಯಮಾಹಿತಿಗಳನ್ನು ಶ್ರಮವಹಿಸಿ, ಸಂಸ್ಕೃತಭಾಷೆಯ ಅಧ್ಯಯನದಮೂಲಕ ತಾವು ಅರಿತು, ಅದನ್ನು ತಮ್ಮ ಮಾತೃಭಾಷೆಯಲ್ಲಿ ಅನುವಾದಿಸಿ ಟಿಪ್ಪಣಿಗಳನ್ನು ಸಿದ್ಧಪಡಿಸಿಕೊಂಡ ಯಾವ ಮೇಧಾವಿಯೂ ಪ್ರಾಮಾಣಿಕವಾಗಿ ತನ್ನ ಸಾಧನೆಯ ಹಿಂದಿನ ತೆರೆಮರೆಯ ಮಾಹಿತಿಗಳನ್ನು ಬಹಿರಂಗಪಡಿಸಿದ್ದಿಲ್ಲ! ಇದು ಅವರವರ ಕಾಲಘಟ್ಟದ ಸಾಮಾಜಿಕ ಪರಿಸರ ಹಾಗೂ ವಿಜ್ಞಾನಕ್ಷೇತ್ರದ ಅನಿವಾರ್ಯ ಪದ್ಧತಿಯಾಗಿತ್ತು. ಆದರೂ ಕೆಲವಾರು ಪ್ರಸಿದ್ಧ ವಿಜಾನಿಗಳು ಭಾರತೀಯ ವೇದೋಪನಿಶತ್ತುಗಳ ’ಮಹತ್ವವನ್ನು’  ಕುರಿತು ಪ್ರಶಂಸಿಸಿರುವುದಿದೆ. ಆಸಕ್ತಿ ಇರುವವರ ಗಮನಕ್ಕೆ ಇದು ಬಾರದ್ದೇನಲ್ಲ. 

ಪ್ರಕೃತ ಈ ಬರಹದ ಕರ್ತೃವು ವಿಜ್ಞಾನಿಯಲ್ಲ, ವೇದವಿದ್ವಾಂಸನೂ ಅಲ್ಲ!! ಹಾಗಿರುವಲ್ಲಿ ಈತನು ಬರೆದಿರುವ ಬರಹದ ಮೌಲ್ಯ ಎಷ್ಟಿರಬಹುದು ಎಂದು ಸಾಮಾನ್ಯವಾಗಿ ವಿಚರಶಾಲಿಗಳೆಲ್ಲರಿಗೂ ಅನಿಸುವುದು ಸಹಜ.  ಅದನ್ನು ಈ ಬರಹಗಾರನೂ ಅನುಮೋದಿಸುತ್ತಾನೆ.  ಆದರೆ, ಕಳೆದ ಸುಮಾರು ೧೨೦೦ ವರ್ಷಗಳ ಹಿಂದೆ ರೂಪಿತವಾದ ಕನ್ನಡಭಾಷೆಯ ಒಂದು ಅತ್ಯಂತ ಅಚ್ಚರಿಯ ರಹಸ್ಯಮಯವಾದ ಶೈಲಿಯಕನ್ನಡ ’ಅಕ್ಷರ’ ಹಾಗೂ ’ಅಂಕಿಗಳ’ ರೂಪದ ಸಿರಿಭೂವಲಯವೆಂಬ ಹೆಸರಿನ ’ಸಿರಿಭೂವಲಯವೇದಾಂತ’ ಎಂಬ ಅನೂಹ್ಯವಾದ ಮಾಹಿತಿಗಳ ಆಗರವಾದ  ಕಾವ್ಯವನ್ನು ಈ ವ್ಯಕ್ತಿಯು ಸುಮಾರು ಮೂರುದಶಕಗಳಿಂದಲೂ ಅತ್ಯಂತ ಆಸಕ್ತಿ ಹಾಗೂ ಶ್ರದ್ಧೆಯಿಂದ ಪರಿಶೀಲಿಸಿ, ಅಧ್ಯಯನಮಾಡಿದ ಫಲವಾಗಿ ಸಾಮಾನ್ಯ ಸ್ಥಿತಿಯಲ್ಲಿ ಯಾರೊಬ್ಬರೂ ಸಮ್ಮತಿಸಲಾಗದ ಮಹಾನ್  ಮಾಹಿತಿಗಳು ಕಳೆದೊಂದು ದಶಕದಿಂದ ಈಚೆಗೆ  ಈ ಕಾವ್ಯದ ಸರಳಪರಿಚಯ ರೂಪದಲ್ಲಿ ಒಂಬತ್ತು ಕಿರುಹೊತ್ತಿಗೆಗಳಾಗಿ ಪ್ರಕಟವಾಗಲು  ಸಾಧ್ಯವಾಯಿತು. . 

ಇವುಗಳ ಸಂಕ್ಷಿಪ್ತ ಭಾವಾನುವಾದವು ಹಿಂದಿಭಾಷೆ ಹಾಗೂ ಆಂಗ್ಲಾಭಾಷೆಯಲ್ಲೂ ರೂಪಗೊಂಡಿವೆ. ( ಹಿಂದಿರೂಪಾಂತರ::  ಹಿಂದೀವಿದ್ವಾಂಸ ಸ್ವರ್ಗೀಯ ಎಸ್. ರಾಮಣ್ಣನವರು. ಆಂಗ್ಲಾಭಾವಾನುವಾದ: ಶಿವಮೊಗ್ಗೆಯ ಕವಿ.  ಸುರೇಶ್ ಅವರು) ಸಿರಿಭೂವಲಯದ ಕವಿಯು ೮ನೇ ಶತಮಾನದವನು.  ಸರ್ವಜ್ಞ ಸ್ವರೂಪಿ.  ಪಶುಸಂರಕ್ಷಣೆ, ಅಣುವಿಜ್ಞಾನ, ಆಯುರ್ವೇದ,  ವಿಮಾನಶಾಸ್ತ್ರ; ಬಹ್ಯಾಕಾಶಯಾನ, ಉಪಗ್ರಹತಂತ್ರಜ್ಞಾನ;  ಅಣುವಿಜ್ಞಾನ, ಗಣಿತಶಾಸ್ತ್ರ; ಗಣಕಯಂತ್ರಕ್ರಮ, ಸಂಗೀತ, ಸಾಹಿತ್ಯ, ನೃತ್ಯಶಾಸ್ತ್ರ ಇತ್ಯಾದಿ ಎಲ್ಲ ವಿಚಾರಗಳಲ್ಲೂ  ಎಲ್ಲ ಮಾಹಿತಿಗಳನ್ನೂ ತಿಳಿದಿದ್ದವನು. ಈ ಕಾರಣದಿಂದಾಗಿ ಈ ಸರಳಪರಿಚಯಕಾರನು ಈ ಸಿರಿಭೂವಲಯ ಕಾವ್ಯವನ್ನು "ಕನ್ನಡದ ವೇದ’ ಎಂದು ಭಾವಿಸಿದ್ದಾಗಿದೆ.  ಇಂಥ ಸಿರಿಭೂವಲಯದ ಕವಿಯು ಲೌಕಿಕ ವಿಚಾರಗಳಿಗೆ ಸಂಬಂಧಿಸಿದ ಯಾವುದೇ ವಿಚಾರಕ್ಕೂ ಮಹತ್ವವಿಲ್ಲವೆಂದು ನಿರ್ಧರಿಸಿ, ಅವುಗಳನ್ನು ಕಾಲಿನಿಂದೊದ್ದು, ಪಾರಮಾರ್ಥಿಕದೆಡೆಗೆ ಗಮನಹರಿಸಿದವನು.   ಜಗದಚ್ಚರಿಯ ತನ್ನ ಸಿರಿಭೂವಲಯ ಕಾವ್ಯವನ್ನು  ಅದರ ಮಹತ್ವಕ್ಕೆ ತಕ್ಕಂತೆ ’ಸಿರಿಭೂವಲಯವೇದಾಂತ’ ಎಂದು ಪ್ರಶಂಸಿಸಿದವನು.  ತನ್ನ ಮುಂದಿನ ಮೇಧಾವಿಗಳ ’ಪ್ರಕ್ಷಿಪ್ತ’ ವಿಚಾರಗಳಿಗೆ ಬಲಿಯಾಗಬಾರದೆಂದು ತನ್ನ ಕಾವ್ಯವನ್ನು ತಂಬಾ ಕ್ಲಿಷ್ಟಕರವಾದ ಚಂಕ್ರಬಂಧಶೈಲಿಯಲ್ಲಿ ರಚಿಸಿದ್ದಲ್ಲದೇ,  ಅದನ್ನು ಗಣಕಯಂತ್ರ ಕ್ರಮಕ್ಕೆ ಮೂಲವಾದ ಗಣಿತದ "ಜೋಡಿಯಂಕದ ಕೂಟ"  ಕ್ರಮದಲ್ಲಿ, ಅತ್ಯಂತ ನಿಗೂಢವಾಗಿ ರಚನೆಮಾಡಿ, ಜಗತ್ತಿನಲ್ಲಿ ನಾಶವಾಗದರೀತಿಯಲ್ಲಿ ಸಂರಕ್ಷಿಸಿದವನು!! 

ಈ ಮಹನ್ ಕಾವ್ಯದ ಅಧ್ಯಯನದಿಂದ ಯಾರುಬೇಕಾದರೂ, ವೇದಾಂತರ್ಗತವಾದ ಮಹತ್ವದ ಮಾಹಿತಿಗಳನ್ನು ಸರಳವಾದ ಕನ್ನಡ ಸಾಂಗತ್ಯರೂಪದಲ್ಲಿ ಅಭಾಸಮಾಡಬಹುದಾಗಿದೆ. ಅಪಾರವಾದ ತಾಳ್ಮೆ, ಭಕ್ತಿ ಹಾಗೂ ದೀರ್ಘಕಾಲಾವಧಿಯ ಅಧ್ಯಯನಫಲವಾಗಿ, ಈ ಕಾವ್ಯವನ್ನು ಕುರಿತಂತೆ ಅಮೂಲ್ಯವಾಗ ಮಾಹಿತಿಗಳನ್ನೊಂಳಗೊಂಡು, ಮೇಲೆಸೂಚಿಸಿದ ’ಸರಳಪರಿಚಯಕೃತಿ’ ಗಳು ರೂಪುಗೊಂಡಿವೆ. 

ವೇದಗಳು ಅಪುರುಷೇಯ ಎಂಬ ಪ್ರಾಚೀನ ನಿಲುವನ್ನೇ  ಹಿಂದಿನಿಂದಲೂ ಹಲವಾರು  ಮೇಧಾವಿಗಳು ನಿರಾಕರಿಸಿರುವುದಿದೆ. ಇಂಥ ಮಹತ್ತರವಾದ ವೇದಜ್ಞಾನವನ್ನು ನಾಶಮಾಡುವ ಸಾಹಸಕ್ಕೆ ಕೈಹಾಕಿದವರಿಗೂ ಜಗತ್ತಿನಲ್ಲಿ ಅಭಾವವಿಲ್ಲ! ಹಲವರು ಈ ಸಾಹಸಕ್ಕೆ ಕೈಹಾಕಿ ವಿಫಲರಾಗಿರುವುದಿದೆ!  ಆದರೆ,  ಇಂದಿನ ದಿನಗಳಲ್ಲಿ ಈ ವೇದಗಳ ವಿಚಾರವನ್ನು ಬಹಳ ಜಾಣ್ಮೆಯಿಂದ ಖಂಡಿಸಿ, ವೇದಾಭಿಮಾನಿಗಳನ್ನು ಕಂಗೆಡಿಸುವ ಪ್ರತಿಭಾಶಲಿಗಳು ಹೆಚ್ಚಾಗಿದ್ದಾರೆ! ವೇದಗಳ ನಿಜವಾದ ಸ್ವರೂಪವನ್ನರಿತವರೂ ಇಂಥ ’ಪ್ರತಿಭಾಶಾಲಿಗಳ’ ವಾದ ವೈಖರಿಯ ಎದುರು  ನಿರುತ್ತರರಾಗುವುದೂ ಇದೆ. ಆದರೆ, ಎಲ್ಲರು ನಿಲುವೂ ಒಂದೇ ರೀತಿಯದಲ್ಲ. ವೇದಗಳ ನಿಜವಾದ ರೂಪವನ್ನು ಖಚಿತವಾಗಿ ಕಂಡವರಾರೂ ಇಂಥ ಅಗ್ಗದ ವಾದ- ಪ್ರತಿವಾದಗಳಿಗೆ ಗಮನವೀಯುವುದಿಲ್ಲ.  ಇಂಥ ವಿಚಿತ್ರ ಪರಿಸರದಲ್ಲಿ ಈ ಬರಹವನ್ನು ರೂಪಿಸಲಾಗಿದೆ. !!!

ಯಾವುದೇ ವ್ಯಕ್ತಿಯ ವಿತಂಡವಾದಗಳನ್ನೂ ಇಲ್ಲಿ ಉಲ್ಲೇಖಿಸುವ ಅಗತ್ಯವಿಲ್ಲ. ಆದರೆ, ನಮ್ಮ ಕಣ್ಣೆದುರಿಗೆ ಪ್ರತ್ಯಕ್ಷವಾಗಿ ಕಾಣಿಸುವ  ಅಥವಾ ಭೂಮಂಡಲದ ಬೇರೆ ಪ್ರದೇಶಗಳ,  ಇಲ್ಲವೇ ನಮ್ಮ ಸೌರಮಂಡಲಕ್ಕೆ ಸೇರಿದ ಅತಿದೂರಲ್ಲಿ ನೆಲೆಗೊಂಡಿರುವ ಬೇರೆ ಬೇರೆ ಗ್ರಹಗಳಲ್ಲಿ ಎಲ್ಲೆಲ್ಲಿ ಹುಡುಕಿದರೂ ಈ ವೇದಗಳ ಹೇಳಿಕೆಯನ್ನು ಸಮರ್ಥಿಸುವ ದೇವಲೋಕ, ದೇವತೆಗಳು,  ಇತ್ಯಾದಿಗಳು  ಆಧುನಿಕವಿಜ್ಞಾನಕ್ಕೆ ಕಂಡುಬಂದಿಲ್ಲ,  ಅದರ ಬದಲಿಗೆ ವೇದಗಳನ್ನು ರಚಿಸಿದ ಹಲವಾರು ಋಷಿಗಳು ಮತ್ತು, ವೇದದ ವಿವರಣೆಯಲ್ಲಿ ಕಾಣಬರುವ ಹಲವಾರು ಭೂಪ್ರದೇಶಗಳ ವಿವರಣೆಯನ್ನು ನಾವು ಗಮನಿಸಬಹುದಷ್ಟೇ!  ಆದ್ದರಿಂದ ವೇದಗಳು ಮಾನವಕೃತವೇ ವಿನಃ ಅವು ’ಅಪೌರುಷೇಯ’ ಎಂಬುದಕ್ಕೆ ಯಾವುದೇ ಸಾಕ್ಷ್ಯವೂ ಇಲ್ಲ ಎಂದು ಕೆಲವರು ವಾದಿಸುವುದಿದೆ.   ಈ ವಾದವು ಕೆಲವು ವೇದಾಭಿಮಾನಿಗಳಿಗೂ ’ಸಮಂಜಸ’ ಅನಿಸುವುದು ಸಹಜ.  ಅಂದಮಾತ್ರಕ್ಕೆ ಇದು ಪ್ರಾಕೃತಿಕವಾದ ನಿಲುವಾಗಲು ಸಾಧ್ಯವಿಲ್ಲ!!!

ಜಗತ್ತೆಂದರೆ ಕೇವಲ ನಮ್ಮ ಸೌರಮಂಡಲಕ್ಕೆ ಸೇರಿದ ಭೂಮಿ ಹಾಗೂ ಇನ್ನುಳಿದ ಕೆಲವಾರು ಗ್ರಹಗಳೆಂಬ ಸಂಕುತ ವಿವರಣೆಯನ್ನು ವೇದಗಳು ಸಮರ್ಥಿಸುವುದಿಲ್ಲ.  ಬರಿಗಣ್ಣಿಗೆ ಕಾಣಿಸುವ ಆಕಾಶದ ವಿಸ್ತಾರವು ಎಷ್ಟೆಂಬುದನ್ನು ಅಳತೆಮಾಡಿರುವವರು ಯಾರೂ ಇಲ್ಲ! ನಮಗೆ ಅರ್ಥವಾಗದಿದ್ದರೂ ಅನುಭವಕ್ಕೆ ಬಂದಿರುವ ’ಕಾಲ’ ದ ನಿಜವಾದ ಪ್ರಮಾಣ ಎಷ್ಟೆಂಬುದನ್ನು ಅಳೆದವರು ಯಾರೂ ಇಲ್ಲ!! ಹಾಗಿರುವಲ್ಲಿ ಇಂಥ ಅಳತೆ ಮಾಡಲಾಗದ ಕಾಲ ಮತ್ತು ಆಕಾಶದ ವ್ಯಾಪ್ತಿಯಲ್ಲಿ ಅಡಗಿರುವ ಅಗೋಚರವಾದ ಹಲವಾರು ಸೌರಮಂಡಲಗಳಿಗೆ ಸೇರಿದ  ಜಗತ್ತನ್ನುಕುರಿತು ನಾವು ’ಅದುಇಲ್ಲವೇಇಲ್ಲ’ ಎಂದು ವಾದಿಸುವುದು ಸೂಕ್ತವಾದೀತೇ ಯೋಚಿಸಿರಿ.

 ಯಾವುದು ನಮ್ಮ ಕಣ್ಣಿಗೆ ಕಾಣಿಸುವುದೋ ಅದನ್ನು ಕುರಿತುಮಾತ್ರ ವಿವರವಾಗಿ ಸೂಚಿಸುವ ಸಾಮರ್ಥ್ಯವು ’ಆಧುನಿಕ ವಿಜ್ಞಾನಕ್ಕೆ’ ಇರುವ ಸೀಮಿತವಾದ ಶಕ್ತಿ ಎಂಬುದನ್ನು ವೇದ ಪರಂಪರೆಯರೂ ಒಪ್ಪುತ್ತಾರೆ. ಆದರೆ ನಮ್ಮ ಕಣ್ಣಿಗೆ ಅಗೂಚರವಾದ ಲೋಕಾತಂರಗಳ ಮಾಹಿತಿಯನ್ನು ತೋರಿಸಿಕೊಡುವುದೇ, ಅಪುರುಷೇಯವಾದ ವೇದಗಳ ಮುಖ್ಯ ಉದ್ದೇಶ ಎಂಬುದನ್ನು ಮಾತ್ರ ವೇದವಿರೋಧಿಗಳು ಒಪ್ಪುವುದಿಲ್ಲ!! 

 ಈ ಕಾರಣದಿಂದಾಗಿ, ಆಧುನಿಕವಿಜ್ಞಾನದ ವಿವರಗಳನ್ನು ಒಪ್ಪಿಕೊಳ್ಳುವಂತೆಯೇ,  ’ವೇದವಿಜ್ಞಾನದ’ ಹೇಳಿಕೆಗಳನ್ನೂ ಒಪ್ಪಿಕೊಳ್ಳುವುದು ಅನಿವಾರ್ಯ ಎಂಬ ನಿಲುವಿಗೆ ಎಲ್ಲರೂ ಬರಲೇ ಬೇಕಾಗಿದೆ.  ಇದಕ್ಕೆ ಮೂಲಕಾರಣ ಕೇವಲ ೩೦೦-೪೦೦ ವರ್ಷಗಳಿಂದೀಚಿನ ’ಆಧುನಿಕ’ ವಿಚಾರಧಾರೆಗಳಿಗೆ ಮೂಲಾಧಾರವಾಗಿರುವ , ಅನಾದಿಯೂ ಅನಂತವೂ ಆದ ವೇದ ವಿಜ್ಞಾನದ ಮಾಹಿತಿಗಳು ಹೆಚ್ಚು ಮಹತ್ವಪೂರ್ಣವಾದುವಾಗಿರುವುದಾಗಿದೆ. 

ವೇದಮೂಲದ ಮಾಹಿತಿಗಳಿಗೆ ಅನುಗುಣವಾಗಿ ರೂಪಾತಂತಗೊಂಡು, ನೂತನವಾಗಿ ರಚನೆಯಾಗಿರುವ ಮುಂದಿನ ದೈವಿಕ ಸಾಹಿತ್ಯವು ಕೆಲವಾರು ಅರ್ವಾಚೀನ ಮಾಹಿತಿಗಳನ್ನು ಕುರಿತು ಸೂಚಿಸುವುದು  ಸಾಮಾನ್ಯವಾದರೂ  ಅವುಗಳಲ್ಲಿ ಅಡಕವಾಗಿರುವ ವೇದೋಕ್ತವಾದ  ಹಲವರು ಮಾಹಿತಿಗಳನ್ನು ನಿರಾಕರಿಸುವಂತಿಲ್ಲ!! 

ಈ ದಿಸೆಯಲ್ಲಿ ಉಪನಿಷತ್ತುಗಳು ಹಾಗೂ  ಸರ್ವಶಕ್ತನನ್ನು ವಿವರಿಸುವ ’ಸಹಸ್ರನಾಮಗಳ’ ಪಾತ್ರವು ಪ್ರಮುಖವಾದುವು. ’ಲಲಿತಾಸಹಸ್ರನಾಮ’ ಗಳ ಸರಣಿಯಲ್ಲಿ ’ಅಖಿಲಾಂಡಕೋಟಿಬ್ರಹ್ಮಾಂಡನಾಯಕಿ’ ಎಂಬ ಹೆಸರೊಂದು ಬರುತ್ತದೆ.   ನಮ್ಮ ಬರಿಗಣ್ಣಿಗೆ ಕಾಣಿಸುವ ಅಥವಾ ಅದಕ್ಕೂ ಮೀರಿದ ಭೂಪ್ರದೇಶಗಳು, ವಿದೇಶಗಳು. ಬೇರೇಬೇರೆ ಗ್ರಹಗಳನ್ನೊಂಳಗೊಂಡ ಒಂದು ಸೂರ್ಯಮಂಡಳದ,  ಒಂದು ಬ್ರಹ್ಮಾಂಡದ ವಿಚಾರವೇ ನಮಗೆ ಸರಿಯಾಗಿ ತಿಳಿಯದಿರುವಲ್ಲಿ, ಒಂದೆರಡು ಕೋಟಿಯಲ್ಲ! ಅಖಿಲಾಂಡ ಕೋಟಿ ಸಂಖ್ಯೆಯಲ್ಲಿರುವ ಬ್ರಹ್ಮಾಂಡಗಳ ಅಸ್ಥಿತ್ವವನ್ನು ಅತ್ಯಂತ ಸಾಮಾನ್ಯರಾದ ನಾವುಗಳು ನಿರಾಕರಿಸಲು ಹೇಗೆಸಾಧ್ಯವಾದೀತು ?

 ಆರೀತಿ ನಿರಾಕರಿಸುವುದು ಉದ್ಧಟತನವಾಗುವುದಲ್ಲವೇ??  ನಮ್ಮಕಣ್ಣಿಗೆ ಕಾಣಿಸದ, ನಾವು ನಂಬಲಾಗದ  ಹಲವಾರು ಲೋಕಗಳು; ಹಲವಾರು ದೇವತೆಗಳು, ಅವರಿಗೆ ಒಡೆಯರಾದ ಹಲವಾರು ಇಂದ್ರರು; ಇಂದ್ರಲೋಕಗಳು, ಇಂದ್ರಭವನಗಳು, ಮುಂತಾಗುವುಗಳ ಪ್ರತ್ಯಕ್ಷ ವರದಿಯನ್ನು ಸಿರಿಭೂವಲಯದ ಕವಿಯು ಖಚಿತವಾಗಿ ವಿವರಿಸಿರುವುದಿದೆ!  ಈ ಗಾಗಲೇ ಸೂಚಿಸಿರುವಂತೆ ನಮ್ಮ ಬಾಹ್ಯ ಚಕ್ಷುವಿಗೆ -ನಮ್ಮ ಪಂಚೇಂದ್ರಿಅಗಲಲ್ಲಿ ಒಂದಾದ ಹೊರಗಣ್ಣಿಗೆ ಕಾಣಿಸುವಂಥ ಲೌಕಿಕಮಾಹಿತಿಗಳನ್ನು ಮಾತ್ರವೇ ಆಧುನಿಕ ವಿಜ್ಞಾನವು ನಮಗೆ ಸಾಕ್ಷಾತ್ಕರಿಸಿ ಕೊಡಬಲ್ಲುದು.  ನಮ್ಮ ಹೊರಗಣ್ಣಿಗೆ ಕಾಣಿಸದ -ಅಂತರ್ದೃಷ್ಟಿಗೆಮಾತ್ರ ಗೋಚರವಾಗಬಲ್ಲ ಮಾಹಿತಿಗಳನ್ನೂ, ಲೋಕಗಳನ್ನೂ, ವಿಸ್ತು ವಿಷಯ ಹಾಗೂ ವ್ಯಕ್ತಿ ವಿಶೇಷಗಳನ್ನೂ ವೇದೋಪನಿಷತ್ತುಗಳು ನಮಗೆ ಸಾಕ್ಷಾತ್ಕರಿಸ್ಸಬಲ್ಲವು. ಇಂದಿನ ಆಧುನಿಕ ವಿಜ್ಞಾನಕ್ಕೆ ತನ್ನ ಪ್ರಯೋಗಗಳನ್ನು ನಡೆಸಲು ಸಾಧನ ಸಲಕರಣೆಗಳು (ಹಾರ್ಡ್ ವೇರ್) ಅತ್ಯವಶ್ಯಕ.  ಕಣ್ಣಿಗೆ ಕಾಣಿಸದ ಲೋಕಾಂತರಗಳ ವಿಚಾರಗಳನ್ನರಿಯಲು ನಮ್ಮ ಪ್ರಾಚೀನಋಷಿಗಳಿಗೆ ಇಂಥ ಸಾಧನ ಸಲಕರಣೆಗಳ ನೆರವು ಅಗತ್ಯವಿರಲಿಲ್ಲ.  ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಅವರು ತಮ್ಮ ಬೌತಿಕದೇಹವನ್ನು ಇಲ್ಲಿಯೇ ಬಿಟ್ಟು, ಸೂಕ್ಷ್ಮಶರೀರದಿಂದ  ಮನೋವೇಗದಲ್ಲಿ ಲೋಕಾಂತರಗಳ ಪ್ರವಾಸಮಾಡಿ ತಮ್ಮ ಕಾರ್ಯ ಪೂರೈಸಿಕೊಳ್ಳುವ ಸಾಮರ್ಥ್ಯ ಅವರಿಗಿತ್ತು .  ಇಂದಿಗೂ ಕೆಲವು ಯೋಗಿಗಳು ಈ ಕಾರ್ಯವನ್ನು ನಿರ್ವಹಿಸುವುದಿದೆ. ಹಾಗಿರುವಲ್ಲಿ ೧೨೦೦ ವರ್ಷಗಳಷ್ಟು ಅಗಾಧ ಕಾಲಘಟ್ಟದ ಹಿಂದೆ ಜೀವಿಸಿದ್ದ ಕುಮುದೇಂದುಮುನಿಯು ಇಂಥ ಅಲೌಕಿ ಸಾಮರ್ಥ್ಯಹೊಂದಿರುವುದು ಅಸಂಭವವೇನಲ್ಲ.  ಬ್ರಾಹ್ಮಣರು ಆಚರಿಸುವ ಸಂಧ್ಯಾವಂದನೆಯಲ್ಲಿ ಇದಕ್ಕೆ ಸಂಬಂಧಿಸಿದ ಮಂತ್ರದ ಪಳೆಯುಳಿಕೆಯು ಇನ್ನೂ ಉಳಿದುಬಂದಿರುವುದಿದೆ!  ಅದನ್ನೆಲ್ಲ ನಾವು ನಂಬುದುವುದಿಲ್ಲ. ಅದೆಲ್ಲವೂ ವಂಚನೆಯಜಾಲಗಳು ಎಂದು ವಾದಿಸುವವರನ್ನು ಯಾರು ತಾನೇ  ಸುಧಾರಿಸಲು ಸಾಧ್ಯವಿದೆ!?  

  ವೇದಗಳ ವಿಚಾರವನ್ನೇ ನಾವು ಮಾನ್ಯಮಾಡುವುದಿಲ್ಲವೆಂದಮೇಲೆ ಇನ್ನು ’ಸಹಸ್ರನಾಮಗಳ’ ಕಥೆಗಳಿಗೆ ಯಾರು ಕಿವಿಗೊಡುತ್ತಾರೆ? ಎಂದೂ ವಾದಿಸಬಹುದು.  ವೇದೋಕ್ತಕ್ರಮದಲ್ಲಿ ಮುಂದಿನ ಬ್ರಹ್ಮಾಂಡದ ಸೃಷ್ಟಿಗೆ ಅಗತ್ಯವಾದ ಮೂಲದ್ರವ್ಯಗಳನ್ನು ಲೋಕಾಕಾಶವು ಕಳೆದುಹೋಗಲು ಬಿಡದೇ, ತನ್ನಲ್ಲಿ ರಕ್ಷಿಸಿಕೊಂಡಿರುತ್ತದೆ’ ಎಂಬ ಗಹನವಾದ ವಿಚಾರವನ್ನು;  ಮಹತ್ತರವಾದ ಜ್ಞಾನವನ್ನು ಸಿರಿಭೂವಲಯವು ಸೂಚಿಸಿರುವುದಿದೆ.  ವೇದಗಳೆಂಬುವವು  ಅನಾದಿಯೂ, ಅನಂತವೂ  ಆದ ಅಖಿಲಾಂಡಕೋಟಿಬ್ರಹ್ಮಾಂಡಗಳ  ಸೃಷ್ಠಿ, ಸ್ಥಿತಿ, ಲಯಗಳಿಗೆ  ಸಂಬಂಧಿಸಿದ,  ಹಾಗೂ ಇಂಥ ಅಪಾರ ಬ್ರಹ್ಮಾಂಡಗಳಲ್ಲಿ ಜೀವಿಸುವ ಸಕಲ ಜೀವರಾಶಿಯೂ ಕಡ್ಡಾಯವಾಗಿ ಅನುಸರಿಸಲೇ ಬೇಕಾದ  ಒಂದು ಮಹತ್ತರವಾದ ’ಸಂವಿಧಾನ’  ಯಾವುದೇ ಸವಿಧಾನವಿರಲೀ, ಯುಗಧರ್ಮಕ್ಕೆ ಅನುಗುಣವಾಗಿ  ಕೆಲವೊಂದು ಬದಲಾವಣೆಗಳನ್ನು ಅಳವಡಿಸಿಕೊಳ್ಳಲೇ ಬೇಕಾದುದು ಅನಿವಾರ್ಯ.  ಈ ಅನಿವಾರ್ಯತೆಗೆ ಅನುಗುಣವಾಗಿಯೇ ಜಗತ್ತಿನ ಮೂಲ ಸೃಷ್ಟಿಯಾದದಂದಿನಿಂದ ಇದುವರೆವಿಗೂ  ಸಾವಿರಾರು  ಚತುರ್ಯುಗಗಳ ಚಕ್ರದಲ್ಲಿ ೨೮ ಜನ  ’ವ್ಯಾಸ’ ಪದವಿಯನ್ನು ಅಲಂಕರಿಸಿದವರು, ಆಯಾಯಾ ಯುಗಧರ್ಮಕ್ಕೆ ಅನುಸಾರವಾಗಿ,  ನಿಸರ್ಗದ ನಿಯಮಕ್ಕೆ ಬದ್ಧವಾಗಿ (ನಿಯತಿಯ ಆಣತಿಗನುಗುಣವಾಗಿ)  ವೇದಗಳ ರಾಶಿಯನ್ನು ವಿಂಗಡಿಸುವ ಕಾರ್ಯ ನಿರ್ವಹಿಸುತ್ತಾರೆ.  ಅದರಂತೆ ಮುಂದಿನವರು ಅದನ್ನು  ಪಾಲಿಸುತ್ತಾರೆ.  

ಈಗ ನಡೆಯುತ್ತಿರುವುದು  ೨೮ನೇ ವ್ಯಾಸಮಹರ್ಷಿ ಕೃಷ್ಣದ್ವೈಪಾಯನನು  ಪರಿಷ್ಕರಿಸಿದ ವೇದಗಳ ಆವೃತ್ತಿ. ಈ ಕಾರ್ಯವು  ಜಗತ್ತಿನ ಸಮರ್ಪಕ ಪರಿಪಾಲನೆಯ ಅತಿ ದೀರ್ಘಕಾಲೀನ ಮೇಲ್ವಿಚಾರಕರಾದ ಸಪ್ತರ್ಷಿಗಳ ಮಂಡಳಿಯ  ಸಮ್ಮತಿಯಂತೆ ನಡೆಯಬೇಕೇ ವಿನಃ  ಯಾರೊಬ್ಬ ಮೇಧಾವಿಯೂ ತನ್ನಿಚ್ಛೆಯಂತೆ  ಮಾಡುವ ರಚನೆ ಅಥಾ ಬದಲಾವಣೆಯ ಕಾರ್ಯವಲ್ಲ ಎಂಬುದನ್ನು ನಾವು ಗಮನದಲ್ಲಿರಿಸಿಕೊಲ್ಳಬೇಕಾದುದು ಅತ್ಯವಶ್ಯಕ.  ಆಗಮಾತ್ರವೇ ವೇದಗಳ ಪ್ರಚೀನತೆ  ಹಾಗೂ  ಪ್ರಾಮಣ್ಯವನ್ನು ಪ್ರಶ್ನಿಸುವ ಸಾಧ್ಯತೆ  ಇರುವುದಿಲ್ಲ.  ಇದು ಕೇವಲ ನಮ್ಮ ಸೌರಮಂಡಲದ  ಜಗತ್ತಿಗೆಮಾತ್ರ ಸಂಬಂಧಿಸಿದ್ದಲ್ಲ.  ಹಲವಾರು ಕೋಟಿ ಬ್ರಹ್ಮಾಂಡಗಳ ಸೃಷ್ಟಿ, ಸ್ಥಿತಿ, ಲಯಗಳಿಗೂ ಸಂಬಂಧಿಸಿದ ವಿಶಾಲ ವ್ಯಾಪ್ತಿಯ ನಿಯಮ  ಎಂಬುದನ್ನು ಯಾರೂ ಮರೆಯಬಾರದು. 

ಇಂಥ ಅಗಾಧಕಾಲವಧಿಯ  ವಿಶಾಲತಳಹದಿಯ  ’ವೇದ’ ಸಮುದಾಯವನ್ನು  ಯುಗಪರಿವರ್ತನೆಯ ನಿಯಮಾನುಸರವಾಗಿ ೨೮ನೇ  ಬಾರಿಗೆ ಪುನರ್ವಿಂಗಡಣೆಮಾಡಿದ  ಕೃಷ್ಣದ್ವೈಪಯನನು  ತನ್ನ ಕಾರ್ಯದಲ್ಲಿ ಸುಮಾರು ಮೂರುಸಾವಿರ ವರ್ಷಗಳನ್ನು ಸವೆಸಿದ ಕಾಲಘಟ್ಟದಲ್ಲಿ  ಅಂದರೆ, ಇಂದಿಗೆ  ಸುಮಾರು ೧೨೦೦ ವರ್ಷಗಳ ಹಿಂದೆ ಕುಮುದೇಂದುಮುನಿಯು ತನ್ನ ಸರ್ವಜ್ಞತ್ವದ ಬಲದಿಂದ ತ್ರಿಕಾಲಜ್ಞಾನಹೊಂದಿದವನಾಗಿ  ’ಆದಿವ್ಯಾಸನ’ ಕುರಿತು ತನ್ನ ಸಿರಿಭೂವಲಯಕಾವ್ಯದಲ್ಲಿ ಹೆಸರೆತ್ತಿರುವುದಿದೆ. . ಅತಿ ಹೆಚ್ಚುದೀರ್ಘಕಾಲ ದೇಹಧಾರಣೆಮಾಡಿಕೊಳ್ಳುತ್ತಿದ್ದ  ಪ್ರಾಚೀನ ಋಷಿಗಳ ವಿಚಾರ ಊಹಿಸಲೂ ಅಗದಷ್ಟು  ಹಿಂದಿನದು. ಹಾಗಿರುವಲ್ಲಿ  ’ಆದಿವ್ಯಾಸ’ ನ ಕಾಲ  ಯಾವುದೆಂಬುದನ್ನು  ಊಹಿಸಿ, ನಿರ್ಧರಿಸಿಕೊಳ್ಳಲು ಸಾಧ್ಯವಿಲ್ಲ!!! ಹಾಗಿರುವಲ್ಲಿ ಅವರೆಲ್ಲರೂ ಇದ್ದದ್ದೇ ಸುಳ್ಳು ಎಂದು ನಿರ್ಧರಿಸುವ ಅಧಿಕಾರ ನಮಗೆಲ್ಲಿದೇ!?

ಸಿರಿಭೂವಲಯವೆಂಬ ಕಾವ್ಯರಚಿಸಿದ ಕುಮುದೇಂದುವೆಂಬ ಮಹಾನ್ ಶಕ್ತಿಯು ೧೨೦೦ ವರ್ಷಗಳಾದರೂ ತನ್ನ ಮಹೋನ್ನತ  ಕಾವ್ಯದಿಂದಾಗಿ  ಇನ್ನೂ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಜೀವಂತವಾಗಿದ್ದಾನೆ. ಈಗ ಪ್ರಚಲಿತವಿರುವ ಹಿಂದಿನಕಾಲದ ಕೆಲವು  ಕವಿ-ಕವಯಿತ್ರಿಯರನ್ನು ಬಿಟ್ಟರೆ, ಕನ್ನಡನಾಡಿನಾದ್ಯತವೂ ಪ್ರಖ್ಯಾತರಾಗಿದ್ದ ಹಲವಾರು ಬರಹಗಾರರು ಈಗಾಗಲೇ ತೆರೆಮರೆಗೆ ಸರಿದದ್ದಾಗಿದೆ!  ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೇ ಒಂದುಕಾಲದಲ್ಲಿ ತಮಿಳರ ಪ್ರಾಭಲ್ಯವು ಹೆಚ್ಚಾಗಿ,  ಕನ್ನಡ ಸಾಹಿತ್ಯ, ಸಂಗೀತ, ಸಂಸ್ಕೃತಿಯು ಹೇಳಹೆಸರಿಲ್ಲದಂತಾಗುವ ಪರಿಸರ ನಿರ್ಮಾಣವಾಗಿತ್ತು!  ಅಂಥ ಪರಿಸರದಲ್ಲಿ ಕನ್ನಡಿಗರಲ್ಲಿ ಓದುವ ಹವ್ಯಾಸವನ್ನು ಜೀವಂತಗೊಳಿಸಿದ  ಮಹಾನ್ ಚೇತನ ಅನಕೃ.  ಅವರ ಹೆಸರೇ ಇಂದಿನ ಯುವಜನತೆಗೆ  ತಿಳಿಯದ್ದು!!  ಹಾಗಿರುವಲ್ಲಿ ಅದೆಷ್ಟುಜನ  ’ಪ್ರಖ್ಯಾತ ಕನ್ನಡ ಬರಗಾರರು ’ ಮುಂದೆ ಕುಮುದೇಂದುವಿನಂತೆ ದೀರ್ಘಕಾಲ  ಜೀವಂತವಿದ್ದಾರು!?  ಆದರೂ, ಇಂಥವರ ಹೆಸರು  ಚಿರಸ್ಥಾಯಿಯಾಗದಿದ್ದ ಮಾತ್ರಕ್ಕೆ,  ಅವರು ಹುಟ್ಟಿ, ಬೆಳೆದು, ಸಾಹಿತ್ಯಕೃಷಿಮಾಡಿ, ಕಾಲವಶರಾದದ್ದೇ ಸುಳ್ಳೆಂದು ಮುಂದೆ ಯಾರಾದರೂ ನಿರ್ಧರಿಸಲು ಸಾಧ್ಯವೇ!?  ಇಂಥವೆಲ್ಲ ಸಾಮಾನ್ಯ ಸಂಗತಿಗಾನ್ನು ಮೀರಿದ್ದು ’ವೇದ’ ಗಳ ವಿಚಾರ. ಅದನ್ನು ಕುರಿತು ಅವಹೇಳನಕಾರಿಯಾಗಿ  ಮಾತನಾಡುವುದು ಯಾರಿಗೂ ಶೋಭೆತರುವುದಲ್ಲ; ಶ್ರೇಯಸ್ಸನ್ನುಂಟುಮಾಡುವದೂ ಅಲ್ಲ. 

 ವ್ಯಕ್ತಿಜೀವನದ ಮುನ್ನಡೆಯ ಹಾದಿಯಲ್ಲಿ ಅತಗತ್ಯವಾದುದು. .’ಜ್ಞಾನ’  ಜ್ಞಾನವಿಲ್ಲದವನು ಪ್ರಜ್ಞಾಹೀನನಾಗಿ ಇದ್ದಲ್ಲಿಯೇ ಬಿದ್ದಿರುತ್ತಾನೆಂಬುದು ಸರ್ವವೇದ್ಯ. ೧೨೦೦ವರ್ಷಗಳ ಹಿಂದೆ ಮಹಾನ್ ಜ್ಞಾನಿಯಾಗಿದ್ದ ದಿಗಂಬರ ಜೈನಸಂಪ್ರದಾಯದ ಯತಿ ಕುಮುದೇಂದುವು ವೈದೀಕ ಸಂಪ್ರದಾಯಕ್ಕೆ ಸೇರಿದ ಸಕಲ ಮಾಹಿತಿಗಳನ್ನೂ ಸೂಕ್ತವಾಗಿ ಸಮರ್ಥಿಸಿರುವ ಮಹಾ ಮಹಿಮನಾಗಿದ್ದಾನೆ.   "ಜಗತ್ತಿನ ಎಲ್ಲರೀತಿಯ ಜ್ಞಾನಕ್ಕೂ ಋಗ್ವೇದವೇ ಮೂಲಆಕರ" ಎಂಬ ಖಚಿತವಾದ ಮಾಹಿತಿಯನ್ನು ಸಿರಿಭೂವಲಯದ ಕವಿಯು ಸೂಚಿಸಿರುವುದಿದೆ. 

೧) ಮಾನವರೆಲ್ಲರಿಗೂ ಒಂದೇ ಧರ್ಮ ಅದು  ’ಜೀವಧರ್ಮ’ ಎಂಬುದಾಗಿಯೂ,  ೨) ಜಗತ್ತಿನಲ್ಲಿ ನಡೆಯುವ ಯಾವುದೇ ಘಟನೆಯೂ ಆಕಸ್ಮಿಕವಾಗಿ ಸಂಭವಿಸುವುದಿಲ್ಲ; ಎಲ್ಲವೂ ಪೂರ್ವಭಾವಿಯಾಗಿ; ಸಂಬಂಧಿಸಿಗವರ ಕರ್ಮಾನುಸಾರವಾಗಿ;  ಗಣಿತಾತ್ಮಕವಾಗಿಯೇ ಸಂಭವಿಸುತ್ತವೆ. ೩) ಜಗತ್ತಿನಲ್ಲಿರುವ ಹುಟ್ಟು-ಸಾವು; ಸುಖ-ದುಃಖ;  ಪಾಪ-ಪುಣ್ಯ, ಒಳಿತು- ಕೆಡಕು; ಶೀಲ- ಅಶ್ಲೀಲ;  ಪ್ರೀತಿ- ದ್ವೇಶ; ಲಾಭ-ನಷ್ಟ; ಹಗಲು- ರಾತ್ರಿ; ಕಪ್ಪು ಬಿಳುಪು;  ಹಿಂಸೆ-ಅಹಿಂಸೆ; ಕರುಣೆ- ಕ್ರೌರ್ಯ ಇತ್ಯಾದಿ ದ್ವಂದ್ವಗಳೆಲ್ಲವೂ ಜಗತ್ತಿನಲ್ಲಿ ಸಮಸಮವಾಗಿವೆ. ಇದರಲ್ಲಿ ಎಲ್ಲರಿಗೂ ಸಮವಾದ ಪಾಲಿದೆ.  ಎಂಬ ನಾಲ್ಕು ಮೂಲಭೂತವಾದ ವಿಚಾರವನ್ನು ಸಿರಿಭೂವಲಯವು ಪ್ರಧಾನವಾಗಿ  ಪ್ರತಿಪಾದಿಸುತ್ತದೆ.  ಕೆಲವರು ಇದನ್ನೂ ವಿರೋಧಿಸಬಹುದು. 

 ಯಾವುದೇ ತಪ್ಪಿಲ್ಲದಿದ್ದರೂ,   ಕೆಲವರು ಜೀವಮಾನಪೂರ್ತ ಕಷ್ಟ; ನಷ್ಟ ಹಾಗೂ ಯಾತನೆಯನ್ನು ಅನುಭವಿಸುವುದನ್ನು ಕಾಣುತ್ತೇವೆ. ಕೆಲವರು  ಎಲ್ಲರೀತಿಯ ಅವ್ಯವಹಾರಗಳನ್ನು ನಡೆಸಿಯೂ ತಮ್ಮ ಜೀವಮಾನಪೂರ್ತ  ಸುಖ; ಲಾಭ ಹಾಗೂ ಸಂತೋಷವನ್ನೇ ಅನುಭವಿಸುತ್ತಾರೆ. ಇದರಲ್ಲಿ ಸಮಾನತೆಯ ವಿಚಾರವೆಲ್ಲಿ ಬಂತು!? ಎಂದು ವಾದಿಸುವುದಿದೆ. 

 ಯಾವುದೇ ವ್ಯಕ್ತಿಯ ಯಾವುದೇ ಜೀವನಸ್ಥಿತಿಗೂ ಅಗೋಚರವಾದ ದೈವೀಶಕ್ತಿಯೆಂಬುದು ಪ್ರತ್ಯಕ್ಷ ಕಾರಣವಲ್ಲ! ಸಂಬಂಧಿಸಿದ ದೇಹಾಂತರ್ಗತವಾದ  ’ಆತ್ಮವು’ ತನ್ನ ಪೂವಜನ್ಮಗಳಲ್ಲಿ ಸಂಪಾದಿಸಿದ ’ಕರ್ಮಫಲದಿಂದಾಗಿಯೇ’ ಈ ರೀತಿಯ ವಿರೋಧಾಭಾಸಗಳು ಉಂಟಾಗುತ್ತವೆ ಎಂಬುದನ್ನು  ನಮ್ಮ ಪ್ರಾಚೀನ ಶಾಸ್ತ್ರಗ್ರಂಥಗಳು ಸರಳವಾಗಿ, ಸ್ಪಷ್ಟವಾಗಿ ವಿವರಿಸಿರುವುದಿದೆ. ಅದನ್ನು ಗಮನವಿಟ್ಟು ಅರಿಯದೇ, ಮನಸೋಇಚ್ಛೆ ವಾದಿಸುವುದರಿಂದ ನಮ್ಮ ಮುಂದಿನ ಜೀವನವು ಇನ್ನಷ್ಟು ದುರ್ಗಮವಾಗುವುದೆಂಬುದನ್ನು ಎಲ್ಲರೂ ಅರಿಯಬೇಕಿದೆ.

 ಅಂಥ ಅರಿವನ್ನು ಹೊಂದಲು ಎಲ್ಲರಿಗೂ ಗುರುಕೃಪೆ ದೊರೆಯಲೆಂದು  ಆಶಿಸುತ್ತೇನೆ. ನಿಮಗೆ ಆಸಕ್ತಿ ಇದ್ದು ಈ ಬರಹವನ್ನು ಪೂರ್ಣವಾಗಿ  ಓದಿದರೆ; ಓದಿದ ಮಾಹಿತಿಯು ನಿಮಗೆ ಸೂಕ್ತವೆನಿಸಿದರೆ, ಈ ಜಾಲತಾಣದಲ್ಲಿ ಬೇರೆಯವರಿಗೂ ಇದು ಲಭ್ಯವಾಗುವಂತೆ ಹಂಚಿಕೊಳ್ಳಿರಿ. ಇಲ್ಲವಾದಲ್ಲಿ ನಿಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥಮಾಡಿದ್ದಕ್ಕೆ ಈ ಬರಹಗಾರನನ್ನು ಕ್ಷಮಿಸುವ ಕೃಪೆಮಾಡಬೇಕಾಗಿ ವಿನಂತಿ.

 ಇದರೊಂದಿಗೆ ಕೊನೆಯದಾಗಿ ಒದು ಮಾತು.  ತೆಂಗಿನಮರವನ್ನೇರಲು ಬಾರದ ವ್ಯಕ್ತಿಯೊಬ್ಬನನ್ನು ತೆಂಗಿನ ಮರಹತ್ತಿಸಲು  ಸಹಾಯಮಾಡುವುದೆಂದರೆ, ನೆಲದಮೇಲೆನಿಂತವರು ತಮ್ಮ ಕೈಗಳಿಗೆ ನಿಲುಕುವಷ್ಟು ಎರ್ರರಕ್ಕೆ ಅವನ ಕಾಲಿಗೆ ಆಸರೆನೀಡಿ, ಮೇಲೇರಲು ಸಹಾಯಮಾಡಬಹುದು, ಅಲ್ಲಿಂದ ಮುಂದೆ ಮೇಲಕ್ಕೇರುವುದು  ಆ ವ್ಯಕ್ತಿಯ ಶಕ್ತಿ ಸಾಮ್ರ್ಥ್ಯಕ್ಕೆ ಸೇರಿದ್ದು. ಶಕ್ತಿಯಿದ್ದು ಸಾಧ್ಯವಾದರೆ, ಆತನು ಮೇಲೇರಿ ಮರದಿಂದ ಎಳನೀರು ಕಿತ್ತು, ಕುಡಿದು, ಸಂತೋಷಿಸಬಹುದು, ಇಲ್ಲವಾದಲ್ಲಿ ಕೆಳಗೆಬಿದ್ದು, ಕೈಕಾಲುಗಳಿಗೆ ಊನ ಮಾಡಿಕೊಳಬಹುದು. ಇದು ಸಂಬಂಧಿದ ವ್ಯಕ್ತಿಯ ವಿವೇಚನೆಗೆ ಬಿಟ್ಟಸಂಗತಿಯಾಗಿರುತ್ತದೆ. 

*  *  *

Friday, 6 November 2020

ಕನ್ನಡದ ಜೈನ ಮುನಿ ಕುಮುದೇಂದುವಿನ ಮಹತ್ವ

 ಜಗತ್ತಿನ ಸಾಹಿತ್ಯೇತಿಹಾಸದಲ್ಲಿ ಕುಮುದೇಂದುಮುನಿಯ ಸ್ಥಾನವು ಅನನ್ಯವಾದುದೆಂಬುದರಲ್ಲಿ ಎರಡುಮಾತಿಲ್ಲ.  ವೇದಗಳು  ಜಗತ್ತಿನಲ್ಲಿ ಅಪೌರುಷೇಯವಾದುವು  ಅದರಮುಂದೆ ಇದಾವುದು ಹಿರಿಮೆಯ ಕಾವ್ಯ!? ಎಂದು ಪ್ರಶ್ನಿಸುವವರಿಸುವುದು ಸಹಜ.  ಆದರೆ,  ಇಲ್ಲಿ ಚರ್ಚಿಸುತ್ತಿರುವ ಅಚ್ಚರಿಯ ಕನ್ನಡಕಾವ್ಯವು  ’ಕನ್ನಡದವೇದ’ವೇ ಆಗಿರುವುದರಿಂದ , ಅದನ್ನು ಅಲ್ಲಗಳೆಯಲು ಯಾರಿಗೂ ಸಾಧ್ಯವಿಲ್ಲ!! 

ಆಧುನಿಕ ವಿಜ್ಞಾನದ ಪಾದಸೇವಕರಾಗಿರುವ  ಇಂದಿನ ಜನತೆಗೆ ಪ್ರಾಚೀನಭಾರತದ ಜೀವನಮೌಲ್ಯಗಳೆಂದರೆ,  ಇನ್ನಿಲ್ಲದ ಅಸಡ್ಡೆ. ಇಂಥ ಅನುಚಿತ ಭಾವನೆಗೆ ಸವಾಲಾಗಿರುವ ೧೨೦೦ ವರ್ಷಗಳ  ಹಿಂದಿನವನಾದ  ಸಾರ್ವಕಾಲಿಕ  ಕನ್ನಡದ  ಆದಿ ಕವಿ ದಿಗಂಬರ ಜೈನ ಸಂಪ್ರದಾಯದ ಯತಿ ಕುಮುದೇಂದುಮುನಿಯು ತನ್ನ ಕಾವ್ಯದಲ್ಲಿ ’ಅಡಗಿಸಿಟ್ಟಿರುವ’  ಅನರ್ಘ್ಯ ಜ್ಞಾನ ಭಂಡಾರದಿಂದಾಗಿ,  ಲೋಕವಿಖ್ಯಾತನಾಗಿದ್ದಾನೆ. 

ಈ ಕವಿಯ ’ಸಿರಿಭೂವಲಯ’ ಕಾವ್ಯದ ಮೂಲವು ಎಂಟರ ಆದಿ. ಎಂಟರ ವರ್ಗವಾದ ೬೪ ಅಂಕಿಗಳು. ಈ ೬೪ ಅಂಕಿಗಳಿಗೆ  ಅನ್ವಯವಾಗುವ  ಸರ್ವಭಾಷಾಮಯಿಭಾಷೆಯಾದ ಕನ್ನಡದ ೬೪ ಅಕ್ಷರಗಳಲ್ಲಿ ಜಗತ್ತಿನ ಎಲ್ಲಭಾಷೆಗಗಳ ಎಲ್ಲ ಜ್ಞಾನದ ಬರಹವನ್ನೂ  ಒಂದೆಡೆ. ಕನ್ನಡ ಲಿಪಿರೂಪದಲ್ಲಿ ಕಟ್ಟಿರಿಸಿರುವ  ಜಗತ್ತಿನ ಏಕೈಕ ಕವಿ  ಕುಮುದೇಂದುಮುನಿ. ಈತನ ಜ್ಞಾನದ ಪರಿಧಿ ’ಸರ್ವಜ್ಞತ್ವ’ ಇದನ್ನು ಕುರಿತಾದರೂ ಇಂದಿನ ಕನ್ನಡಿಗರು; ವಿಶೇಷವಾಗಿ ಜೈನಸಮುದಾಯದವರು ಈ ಕವಿಯನ್ನು ನಮ್ಮವನೆಂದು ಹೆಮ್ಮೆ ಪಡಬೇಕಾದುದು ಅನಿವಾರ್ಯ. 

ಸಿರಿಭೂವಲಯಕಾವ್ಯವು ’ಸರ್ವಭಾಷಾಮಯಿ’  ’ಸರ್ವಶಾಸ್ತ್ರಮಯಿ’  ’ಸರ್ವಜ್ಞಾನಮಯಿ’ ಎಂದು ಸೂಚಿತವಾಗಿದೆ.  ವ್ಯಕ್ತಿಜೀವನಕ್ಕೆ ಸಂಬಂಧಿಸಿದಂತೆ ಲೌಕಿಕ ಹಾಗೂ ಪಾರಮಾರ್ಥಿಕವಿಚಾರಗಳೂ ಈ ಕಾವ್ಯದಲ್ಲಿ ತುಂಬಿವೆ! ಇದರಲ್ಲಿ ಅಡಕವಾಗದಿರುವ ಯಾವ ವಿಚಾರವೂ ಉಳಿದಿಲ್ಲ!  ಅಂಕಕಾವ್ಯವಾಗಿ ಪರಿವರ್ತಿತವಾಗಿರುವ ಈ ಕಾವ್ಯದಲ್ಲಿ ಅಂಕಿಗಳು, ಅಣುವಿಜ್ಞಾನ, ಆಕಾಶಗಮನ, ಗಣಕಯಂತ್ರಕ್ರಮ, ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಮಾಹಿತಿಗಳನ್ನು ವಿವರಿಸಿದ್ದಾಗಿದೆ. 

ಜೀವನದಲ್ಲಿ ಕೆಲವು ನಂಬಿಕೆಗಳಿಗೆ ಸಂಬಂಧಿಸಿದಂತೆ, ’ಮೂಢನಂಬಿಕೆಗಳು’ ಎಂದು ಅಪಪ್ರಚಾರ ಹೊಂದಿರುವ ಕೆಲವೊಂದು ವಿಚಾರಗಳಿಗೆ ಸಂಬಂಧಿಸಿದಂತೆ ಈಗ  ವಾಸ್ತವವಾದ ಕೆಲವೊಂದು ಮಾಹಿತಿಯನ್ನು ಗಮನಿಸೋಣ. 

ಇಂದಿನ ದಿನಗಳಲ್ಲಿ ಜೋತಿಷಿಗಳುಹಾಗೂ ಜೋತಿಶ್ಶಾಸ್ತ್ರದ ವಿಚಾರವಾಗಿ ಹೆಚ್ಚಿನ ಅವಹೇಳನೆ ಇರುವುದು ಸರ್ವವೇದ್ಯ.  ಇದೊಂದು ಅವೈಜ್ಞಾನಿಕಶಾಸ್ತ್ರವೆಂದು ಬಹಳಷ್ಟುಜನ  ನಿರ್ಧರಿಸಿದ್ದಾಗಿದೆ. ಫಲಜೋತಿಷ್ಯಕ್ಕೆ ಸಂಬಂಧಿಸಿದಂತೆ ಕುಮುದೇಂದು ಮುನಿಯು ರೂಪಿಸಿರುವ ಒಂದು ಚಕ್ರವನ್ನು ಕುರಿತು ಈಗಾಗಲೇ ವಿವರಿಸಿದ್ದಾಗಿದೆ.  ಉದ್ದಗಲಗಳಲ್ಲಿ ೨೭x೨೭ ರಂತೆ ವಿಸ್ತಾರವಾದ ಚೌಕಾಕೃತಿಯನ್ನು  ೭೨೯ ಚೌಕಗಳಾಗಿ ವಿಂಗಡಿಸಿ, ಅವನ್ನು ನವಮಾಂಕ ಕ್ರಮದಲ್ಲಿ ೯ ಭಾಗಗಳಾಗಿ ವಿಂಗಡಿಸಿ, ಅದರಲ್ಲಿ ಎಡಬದಿ ಹಾಗೂ ಮೇಲಿನ ಬದಿಯಲ್ಲಿ ದಿನದ ನಕ್ಷತ್ರಗಳು  ಮತ್ತು  ವ್ಯಕ್ತಿಯ ಜನ್ಮನಕ್ಷತ್ರಗಳನ್ನು ಕ್ರಮವಾಗಿ ನಮೂದಿಸಿ, ೭೨೯ ಚೌಕಗಳಲ್ಲೂ  ೧ ರಿಂದ ೯ ರವರೆಗಿನ ಅಂಕಿಗಳನ್ನು ’ಸೂತ್ರಾಂಕ’ ಗಳಾಗಿ ಸರ್ವ ಸಮಾನವಾಗಿರುವಂತೆ ಸೂತ್ರಬದ್ಧವಾಗಿ ತುಂಬಿರುವಂತೆ ಚಕ್ರವನ್ನು ರೂಪಿಸಲಾಗಿದೆ.  ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಸಿರಿಭೂವಲಯದ ಸರಳ ಪರಿಚಯಕೃತಿಯಲ್ಲಿ ವಿವರಿಸಲಾಗಿದೆ. ಈಗ ಇಲ್ಲಿ ಈ ಫಲಜೋತಿಷ್ಯದ ವಿಚಾರವಾಗಿ ಕವಿಯು ಸೂಚಿಸಿರುವ ಖಚಿತವಾದ ವಿವರಕುರಿತು ತಿಳಿದುಕೊಳ್ಳೋಣ. 

ಸೂರ್ಯ, ಚಂದ್ರ, ತಾರೆಗಳ ಉದಯಾಸ್ತವನ್ನು ತಿಳಿದುಕೊಂಡು, ವ್ಯಕ್ತಿಜೀವನದಲ್ಲಿ ತ್ರಿಕಾಲಗಳಿಗೆ ಸಂಬಂಧಿದ ( ಭೂತ, ವರ್ತಮಾನ. ಭವಿಷ್ಯತ್ ಕಾಲ)  ಸುಖ ದುಃಖದ ವಿವರಗಳನ್ನು ಖಚಿತವಾಗಿ ಅರಿಯಬಹುದೆಂದು ಕಾವ್ಯದಲ್ಲಿ ಸೂಚಿಸಲಾಗಿದೆ.   ಇದನ್ನೂ ಮೀರಿ,  ವ್ಯಕ್ತಿಯ ಮರಣಕಾಲವನ್ನೂ ಸದರವಾಗಿ  ಅರಿಯಬಹುದೆಂದು ಕವಿಯು ಸೂಚಿಸಿರುವುದಿದೆ.!  ಇದಕ್ಕೆ ಸಂಬಂಧಿಸಿದಂತೆ ಇಲ್ಲಿ ಒಂದು ಸ್ಪಷ್ಟನೆ ಅತ್ಯಗತ್ಯ. ಈ ಕಾವ್ಯದ ವ್ಯಾಪ್ತಿ ೯ ಖಂಡಗಳು. ಅದರಲ್ಲಿ ಮಂಗಳಪ್ರಾಭೃತವೆಂಬ ಮೊದಲನೇ ಖಂಡವು ಪೀಠಿಕಾರೂಪದ್ದಾಗಿದ್ದು, ಇದರಲ್ಲಿ ಸಮಗ್ರಕಾವ್ಯದ ವಿಷಯವ್ಯಾಪ್ತಿಯನ್ನು ಪರಿವಿಡಿಯರೂಪದಲ್ಲಿ ನೀಡಲಾಗಿದೆ. ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿಗಳ ವಿವರವನ್ನು ಮುಂದಿನ ಖಂಡದಲ್ಲಿ ಸೂಚಿಸಲಾಗಿರುತ್ತದೆ. ಈ ಅಂಶವನ್ನು ಗಮದಲ್ಲಿರಿಸಿಕೊಳ್ಳಬೇಕಾದುದು ಓದುಗರ ಕರ್ತವ್ಯ. 

 ಈ ರೀತಿಯ ’ಭವಿಷ್ಯ’ ಹೇಳುವುದು ಕೆಲವರ ಹೊಟ್ಟೆಪಾಡಿನ ಉದ್ಯೋಗವಾಗಿದೆ.  ಅಮಾಯಕಜನರನ್ನು ವಂಚಿಸಿ, ಶೋಷಿಸುವುದಕ್ಕೆ ಇದೊಂದು ತಂತ್ರ ಎಂದು ಕೆಲವರು ವಾದಿಸುವುದಿದೆ. ಆದರೆ,, ಸರ್ವಸಂಗಪರಿತ್ಯಾಗಿಯಾಗಿದ್ದ ಈ ದಿಗಂಬರ ಮುನಿಯು  ಇಂದಿನವರು ಭಾವಿಸುವಂತೆ ಹೊಟ್ಟೆಯಪಾಡಿಗಾಗಿ ಈ ಅಮೂಲ್ಯಮಾಹಿತಿಯನ್ನು ತನ್ನ ಶಾಶ್ವತಕಾವ್ಯದಲ್ಲಿ ಅಡಗಿಸುವ ಅಗತ್ಯವಿರಲಿಲ್ಲವೆಂಬುದು ಗಮನಾರ್ಹವಾದುದು. 

ಸ್ತ್ರೀಪುರುಷರ ಸಮಾಗಮದಿಂದ ನೂತನ ಶಿಶುವು ಉಗಮವಾಗುವುದಕ್ಕೆ ಸಂಬಂಧಿಸಿದ  ವೈಜ್ಞಾನಿಕ ಮಾಹಿತಿಯ ವಿವರಗಳನ್ನು ಕುರಿತು ಈಗಾಗಲೇ ವಿವರಿಸಿದ್ದಾಗಿದೆ.  ಈಗ ವ್ಯಕ್ತಿಯ ಶರೀರದಲ್ಲಿ  ಭೌತಿಕದೇಹದ ಇರುವಿಕೆಗೆ ಅಗತ್ಯವಾದ ’ಸಪ್ತಧಾತು’ ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸ್ವಲ್ಪ ಗಮನಿಸೋಣ. ವ್ಯಕ್ತಿಯ ತಲೆಯೊಳಗಿರುವ ’ಮಿದುಳು’ ; ಶರೀರಾದ್ಯಂತವಿರುವ  ರಸ,  ದೇಹದೆಲ್ಲೆಡೆಯೂ ಇರುವ ಯುಕ್ತಪ್ರಮಾಣದ  ಮಾಂಸ,  ಅತಿಸೂಕ್ಷ್ಮವಾದ ನಳಿಕೆಯಾಗಿರುವ ನರಮಂಡಲ, ಅವುಗಳಲ್ಲಿ ಪ್ರವಹಿಸುವ ರಕ್ತ, ಶರೀರಕ್ಕೆ ಆಸರೆಯಾಗಿರುವ  ಮೂಳೆಗಳು (ಅಸ್ತಿ)  ಮುಂದಿನಸಂತತಿಯ ನಿರ್ಮಾಣಕ್ಕೆ ಅತ್ಯಗತ್ಯವಾದ  ಶುಕ್ಲ (ವೀರ್ಯ); ಇತ್ಯಾದಿಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ನಾವು ಸಿರಿಭೂವಲಯಕಾವ್ಯದಲ್ಲಿ ಕಾಣಬಹುದು! 

ಭೌಮವೆಂದರೆ, ಭೂಮಿಗೆ ಸಂಬಂಧಿಸಿದ್ದೆಂದು ಅರ್ಥ.  ಆಕಾಶ, ಮಂಗಳ, ನೀರು ಎಂಬ ಅರ್ಥವ್ಯಾಪ್ತಿಯೂ ಈ ಪದಕ್ಕಿದೆ.  ಈ ಭೌಮದ ಸಾಂದ್ರತೆಯನ್ನವಲಂಬಿಸಿ ಭೂಮಿಯಲ್ಲಿ  ಚಿನ್ನ, ತಾಮ್ರ, ಕಬ್ಬಿಣ ಮುಂತಾದ ಲೋಹಗಳ ನಿಕ್ಷೇಪವಿರುವುದರ ವಿವರವು ಸಿರಿಭೂವಲಯದಲ್ಲಿ ಅಡಕವಾಗಿದೆ!  ಮಣ್ಣಿನ ಗಡಸುತನ ಹಾಗೂ ಮೃದುತ್ವ ವನ್ನವಲಂಬಿಸಿ  ಈ ನಿಕ್ಷೇಪವಿರುವುದರ ಮಾಹಿತಿ ಇದೆ.   ಪ್ರಾಚೀನ ಭಾರತೀಯರು ಮಂಕುದಿಣ್ಣೆಗಳು. ಬ್ರಿಟಿಷರು ಮಹಾನ್ ಮೇಧಾವಿಗಳು. ಅವರು ತಮ್ಮ ಪ್ರತಿಭೆಯಿಂದ ಕೋಲಾರದ ಚಿನ್ನದಗಣಿಯನ್ನೆ ಪತ್ತೆಮಾಡಿ, ಭಾರತದ ಸಂಪತ್ತನ್ನು ಹೆಚ್ಚಿಸಿದರು ಎಂಬ ಭ್ರಮೆ ಕೆಲವರಲ್ಲಿದೆ! ಪ್ರಾಚೀನಭಾರತೀಯರಲ್ಲಿ ಪ್ರಾಕೃತಿಕವಾದ ನಿಧಿ ನಿಕ್ಷೇಪಗಳನ್ನು ಸಂರಕ್ಷಿಸುವ ಸಂಪ್ರದಾಯವಿತ್ತೇ ವಿನಃ, ಅದನ್ನು ಬಗೆದು ಬಳಸಿಕೊಳ್ಳುವ ಮೂರ್ಖತನವಿರಲಿಲ್ಲ!! ಶ್ರಮವಹಿಸಿ, ದುಡಿದು ತಿನ್ನುವ ಕ್ರಮವಿತ್ತೇ ವಿನಃ, ಯಾವುದೇ ’ಪುಕ್ಕಟೆ’ ಭಾಗ್ಯಗಳ ಕೊಡುಗೆ ಇರಲಿಲ್ಲ!!  ಬೆಟ್ಟಗಳನ್ನೇ ಪುಡಿಮಾಡಿ, ಮಾರಾಟಕ್ಕಿಟ್ಟು, ನುಂಗಿನೀರುಕುಡಿಯುವವರು ನಿಧಿ ನಿಕ್ಷೇಪ್ಪಗಳನ್ನು ರಕ್ಷಿಸುವುದುಂಟೇ!!?? 

ವ್ಯಕ್ತಿಯು ನಿದ್ರೆಯಲ್ಲಿದ್ದಾಗ ಕಾಣುವ ಕನಸು, ಈ ಕನಸುಗಳು ವ್ಯಕ್ತಿಯ ಭವಿಷ್ಯಜೀವನದ ಸೂಕ್ಷ್ಮಮುನ್ಸೂಚನೆಯಾಗಿರುವುದೆಂಬ ಹೇಳಿಕೆಯು  ಕೆಲವರಿಗೆ  ಅಪಹಾಸ್ಯದ ಸಂಗತಿಯಾಗಿರುತ್ತದೆ!  ಪ್ರಾಚೀನ ಭಾರತೀಯರು ಪ್ರತಿಪಾದಿಸಿರುವ ಜಾಗ್ರತ್, ಸ್ವಪ್ನ, ಸುಷುಪ್ತಿ  ಎಂಬ ಅವಸ್ಥಾತ್ರಯಗಳನ್ನು ಕುರಿತು ಆಧುನಿಕ ವಿಜ್ಞಾನಿಗಳಲ್ಲಿ ಒಮ್ಮತವಿಲ್ಲ. ಕೆಲವರು ನಂಬುತ್ತಾರೆ, ಕೆಲವರು ತಟಸ್ಥರಾಗುತ್ತಾರೆ. ಈ ಅವಸ್ಥಾತ್ರಯಗಳು ಅರ್ಥಹೀನವಾದ ಹೇಳಿಕೆಗಳಲ್ಲ ಎಂಬುದಕ್ಕೆ ಸಿರಿಭೂವಲಯದಲ್ಲಿ ವಿವರವಿದೆ!

 ಸ್ವಪ್ನವನ್ನು ಕುರಿತ ಹೇಳಿಕೆಗಳಿಗೆ ಕಾವ್ಯದಲ್ಲಿ ಯಾವುದೇ ರೀತಿಯ ವಂಚನೆಯ ಲೇಪವೂ ಇಲ್ಲ!!  ವ್ಯಕ್ತಿಯು ಕನಸಿನಲ್ಲಿ ಕಾಣುವ  ಫಲಗಳು (ಹಣ್ಣುಗಳು) ಪುಷ್ಪಗಳು, ಪ್ರಾಣಿಗಳು, ಸನ್ನಿವೇಶಗಳು ಇತ್ಯಾದಿಗಳಿಗೆ ಬೇರೆ ಬೇರೆಯ ಸೂಕ್ಷ್ಮತೆಗಳಿರುತ್ತವೆ.  ಇವುಗಳನ್ನಾಧರಿಸಿ, ಮುಂದೆ ಎದುರಾಗುವ ಸುಖ ದುಃಖಗಳನ್ನು ತಿಳಿಯಬಹುದೆಂಬ  ಸೂಚನೆಯಿದೆ. ಕತ್ತೆ, ಒಂಟೆ ಇತ್ಯಾದಿ ಪ್ರಾಣಿಗಳು ಕನಸಿನಲ್ಲಿ ಬಂದಾಗ; ಪರದೇಶಕ್ಕೆ ಪ್ರಯಾಣವೆಂಬ ಸೂಕ್ಷ್ಮವನ್ನು ತಿಳಿಸಲಾಗಿದೆ.  ಇಲ್ಲಿ ಓದುಗರು ಗಮನಿಸಬೇಕಾದ ಒಂದು ಮಹತ್ವವಿದೆ. ಈ ರೀತಿಯ ಕನಿಸಿನ ಫಲವನ್ನು ತಿಳಿಯುವಲ್ಲಿ, ಕನಸುಕಂಡ ವ್ಯಕ್ತಿಯ ಆರೋಗ್ಯವು  ವಾತ, ಪಿತ್ಥಾದಿಗಳ ಆಧಿಕ್ಯದಿಂದ ಕೂಡಿರಬಾರದು! 

ಪ್ರಾಣಿಗಳು ಹಾಗೂ ಮಾನವರು ಚಿತ್ರ ವಿಚಿತ್ರವಾಗಿ ಅರಚುವುದನ್ನು (ಕಿರುಚಿಕೊಳ್ಳುವುದು) ಅದಕ್ಕೆ ಸಂಬಂಧಿಸಿದ ಸುಖ ದುಃಖವನ್ನು ಅರಿತುಕೊಳ್ಳುವ ಬಗೆಯನ್ನು ಕಾವ್ಯದಲ್ಲಿ ತಿಳಿಸಲಾಗಿದೆ. 

ಈರೀತಿಯ ಮಾಹಿತಿಗಳೆಲ್ಲವೂ ಪ್ರಾಚೀನಭಾರತದ ಶಕುನಶಾಸ್ತ್ರ ಹಾಗೂ ಇನ್ನಿತರ ಶಾಸ್ತ್ರಗಳಿಗೆ ಸಂಬಂಧಿಸಿದ ಮಾಹಿತಿಗಳಾಗಿರುತ್ತವೆ. ಇವುಗಳನ್ನು ’ಮೂಢನಂಬಿಕೆಗಳು’ಎಂದು ನಿರಾಕರಿಸುವುದು ಅಥವಾ ’ಶಾಸ್ತ್ರವಚನ’ಗಳೆಂದು ಗೌರವಿಸುವುದು ವ್ಯಕ್ತಿಯ ಇಚ್ಛೆಗೆ ಸೇರಿದ್ದಾಗಿದೆ. ಯಾವುದನ್ನೇ ಆಗಲೀ, ಒತ್ತಾಯಪೂರ್ವಕವಾಗಿ ಅನುಸರಿಸಬೇಕೆಂಬ ಒತ್ತಡವನ್ನೆಲ್ಲಿಯೂ ನಮ್ಮ ಶಾಸ್ತ್ರಗ್ರಂಥಗಳು ಹೇರಿಲ್ಲವೆಂಬುದು ಗಮನಾರ್ಹ.  

ಸಿರಿಭೂವಲಯದಸುಧಾರ್ಥಿ. 


Friday, 16 October 2020

 ಡಾ|| ಎಸ್. ಶ್ರೀಕಂಠಶಾಸ್ತ್ರಿ

ಯವರ ಹೇಳಿಕೆಯಂತೆ ೧೯೫೩ರಲ್ಲಿ
ಸಿರಿಭೂವಲಯದ ಕಾರ್ಯವು
ಜಗತ್ತಿನಲ್ಲಿ ೭-೮ ಜನಗಳಿಗೆ
ಮಾತ್ರ ಆಸಕ್ತಿ ಇರುವುದೆನಿಸಿತ್ತು!
ಈಗ Fb ಒಂದರಲ್ಲೇ ಸುಮಾರು
೨೦ಕ್ಕೂ ಹೆಚ್ಚುಜನ ಈ ಕಾವ್ಯದಲ್ಲಿ
ಅಭಿಮಾನ ಹೊಂದಿದ್ದಾರೆ!
೩೦ ವರ್ಷದಲ್ಲಿ ಸುಧಾರ್ಥಿಯು
ಸಾಧಿಸಿದ್ದು ಇದಿಷ್ಟನ್ನೇ!!
ಇಂದಿನ ವೈಜ್ಞಾನಿಕಯುಗದಲ್ಲಿ
ಲಕಾಂತರ ಜನಗಳಿಗೆ ಒಮ್ಮೆಗೇ
ಈಕಾವ್ಯದಪರಿಚಯಒದಗಿದರೂ
ದೊರೆತಫಲವಿದು ಗುಡ್ಡವನು
ಬಗೆದು ಇಲಿಯನ್ನುಹಿಡಿದಂತೆ!!
ಕನ್ನಡದ ಕುಲದವರ
ಕಾವ್ಯದಾಸಕ್ತಿಯೂ
ಇದಕಿಂತ ಬೇರಲ್ಲ
ಭೂವಲಯದೊಳಗೆ!!
ಕುದುರೆಯನು ಕರೆದೊಯ್ದು
ಕೆರೆಯೊಳಗೆ ನಿಲಿಸಿದರು,
ನೀರಕುಡಿಯುವುದದುವೆ
ಕುದುರೆಯಾ ಮನದಿಚ್ಛೆ!!
ಕೆರೆಯ ಅಂಗಳಕಂತು
ಕರೆದೊಯ್ದುದಾಗಿಹುದು
ಕುಡಿಯದಲೆ ಬಿಡುತಿರಲು
ನನಗೇಕೆ ಚಿಂತೆ!?
ಸಿರಿಭೂವಲಯದ
ಸುಧೆಯನು ಸವಿಯುತ
ವೃದ್ಧಿಸಲಿನಿಮ್ಮಗಳ
ಸಂಸ್ಕಾರಶರಧಿಯದು
ಜಗದಪರಿಧಿಯವರೆಗೆ.
ಅಧಿಕಮಾಸವಿದು
ಅಧಿಕವಾಗುತಲಿರಲಿ
ಅಧಿಕಜನಗಳಿಗದುವೆ
ಅಧಿಕಫಲತರುತಿರಲಿ
ಹೌದು ಪೂರ್ವಸಿದ್ಧತೆಗಾಗಿ
ಈಕಾವ್ಯದ ಸರಳಪರಿಚಯದಲ್ಲಿ
ಅಲ್ಪ ವಿರಾಮವಿದ್ದದ್ದುನಿಜ.
ಈಗ ಮತ್ತೆ ಹರಿಯಲಿದೆ ಈ
ಕಾವ್ಯರಸದಾ ಪ್ರವಾಹ.
ಸಧ್ಯದಲ್ಲಿಯೇ!!!
-ಸಿರಿಭೂವಲಯದಸುಧಾರ್ಥಿ.

Sunday, 4 October 2020

ಕುಮುದೇಂದು/ಪಂಪರೊಳು ಮಿಗಿಲಾರು ಜಗದೊಳಗೆ ಈ ಈರ್ವರೊಳಗೆ?

ಕುಣಿದುಕುಪ್ಪಳಿಸುತಿವೆ ಕೂಪಮಂಡೂಕಗಳು

ಪಂಪನೆಂಬುವನವನೆ ಹಳಗನ್ನಡದ ಮೊದಲ ಕವಿಯೆಂದು! 

ತನ್ನೊಡೆಯನ ಬೆಡಗಂ ಪಿಡಿದು  ’ಪಂಪಭಾರತ’ಮೆಂಬ ’ವಿಕ್ರಮಾರ್ಜುನವಿಜಯ’

ವನು ರಚಿಸಿದೊಡೆ  ಪಂಪನೆಂದು ನೆಗಳ್ತೆವೆತ್ತವನ ಪೊಗಳ್ವುದು ಆಪದಮಲ್ತೆ!?

ಪಂಪನುಸುರಿದವಾಣಿಯ ಕಂಪಿನೊಡಗೂಡಿ ’ಅರ್ಥ’ಪಡೆದವರೆಷ್ಟು ಪೊಡವಿಯೊಳಗೆ!? ಪಂಪನಾಡಿದನುಡಿಯ ಬಿಡಿಸಿಪೇಳ್ದವನೆಂದು  ಖ್ಯಾತಿವೆತ್ತವನೋರ್ವನೇ ಧಾರಿಣಿಯೊಳುತಾ ಮುಳಿಯತಿಮ್ಮನಲಾ! ತಿಮ್ಮಪಯ್ಯನು ಬಿಡಿಸಿದ ನುಡಿಯಬಲದಲಿ ಮುಂದೆ ಮೆರೆದರು  ಅತುಲ ಭುಜಬಲ ಪರಾಕ್ರಮಿಗಳುತಾವ್ ಪೊಡವಿಯೊಳ್ ಪಂಪನ ಪೆಸರ ಮುಗಿಲಿಗೇರಿಸಿದೆವೆಂದು!!

ಈ ಮುದಲ್  ’ಅಭಿನವಪಂಪ’ನೆಂಬಗ್ಗಳಿಕೆ ಪೊಂದಿರ್ದ ಹದಿನಾಲ್ಕುಶತಕಗಳ ಹಿದಿನವ ನಾಗಚಂದ್ರನೂ ತಾನ್  ’ಪಸರಿಪ ಕನ್ನಡಕ್ಕೊಡೆಯನೋರ್ವನೇ ಸತ್ಕವಿ ಪಂಪನಾವಗಂ’  ಎಂದು ಪರಾಕುಹೇಳಿದವ! ಮುಂದಡಿಯಿಡಲ್  ’ಕುವೆಂಪು’ ಪೂರ್ವದ ಬಿ.ಎಂ.ಶ್ರೀ. ಟಿ.ಎಸ್. ವೆಂಕಣಾರ್ಯರೂಂ  ಅನಂತರದ, ತ.ಸು.ಶಾಮರಾಯ, ತುಸು ಮುಂದಿನ  ಹಂಪನಾ ಇತ್ಯಾದಿಗಳ್ ’ಪಂಪ ನಭೂತೋ ನಭವಿಷ್ಯತಿ’  ಎಂದಂದು ಪಂಪನಹೊಗಳುಭಟರೇ ಆಗಿರ್ಪರ್. 

ತನಗೆ ಅಶ್ರಯವಿತ್ತ ಅರಿಕೇಸರಿಯಂ ಪೊಗಳಿ, ಭಾರತದ ಕಥೆಯ ಹಸಗೆಡಿಸಿದ ಪಂಪನ ಗುರಿಯದುತಾನ್ ತನ್ನಯ ಧಣಿಯಕೀರ್ತಿಯು ಶಾಶ್ವತಮಾಗಿರಲೆಂಬುದೊಂದೆವಲಾ. 

 ಆದೊಡಮಿದು ಅಲ್ಪಾಕಾಂಕ್ಷೆ ನಿಚ್ಚಂಮಿದು.

ಪಂಪಪೂರ್ವದ ಶತಕದಿ ಅವತರಿಸಿರ್ದ, ಕುಮುದೇಂದುಮುನಿತಾಂ ಆವ ಅರಸನ ಊಳಿಗದ ಕೂಳಿಗೂ ಕೈಯೊಡ್ಡದವ ತಾನ್. ಸರ್ವಜ್ಞತಾನ್ ದಿಟದಿ. ಜಗದೆಲ್ಲ ಜ್ಞಾನವಂ ವೇದಮಾರ್ಗದಲರಿದವಂ, ಜಗದೊಳಿರುವೆಲ್ಲ ಭಾಷೆಗಳ ಕೃತಿಗಳಂ ಪಿಡಿದೌಂಕಿಸಿತನ್ನ ಕಾವ್ಯದಲಿ ಗಿಡಿದುತುಂಬಿದ ಜಗದೇಕೈಕ ಕವಿ ಪುಂಗವನೀತಂ ಕುಮುದೇಂದು. ಜಗದ ಜ್ಞಾನ,  ಸುಜ್ಞಾನ, ವಿಜ್ಞಾನವಾವುದೇ ಇರಲಿ, ಅವುಗಳಂ ತನ್ನ ಅಂಗುಲಿಯಮೂಲದಲಿ ಕುಣಿಸಿಬಿಸುಟವನೀತಂ   ತಾನಂದು ಹಿಂದಿಂದು, ಮುಂದಿನರೆಲ್ಲರ ಭಾಷಾಶೈಲಿಯಂ  ತಂದು ತುಂಬಿದನು ತನ್ನ ಕಾವ್ಯದುದರದಲಿ. 

ತನ್ನಕಾವ್ಯದ ಹಿರಿಮೆ ಗರಿಮೆಯಕುರಿತು ಬಾರಿಬಾರಿಗೂ ಒರೆದಿರುವನೀತಂ. ತನ್ನನುಂ ಕುರುತಿಲ್ಲಿ ಬರೆದಿರುವುದತಿಅಲ್ಪಂ! 

ಕನ್ನಡದ ಜನುಮವದು ಜಗದಾದಿಯಿಂದೆಂದು ಉಸುರಿ, ತ್ರಿಕಾಲಂಗಳಲಿ ನವರೂಪ ಧರಿಸಿರ್ಪ  ಕನ್ನಡದ ಸೊಗಡು ಸುಭಗತೆ ಸರಳತೆಯ ಶಿಖರಗಳ ನೌಕಿಸಿತನ್ನ ಕಾವ್ಯದಲಿ ಚಿರಸ್ಥಾಯಿಗೊಳಿಸಿದವಂ ಕುಮುದೇಂದು ಮುನಿತಾನ್!!   ಪಂಪರನ್ನರೇ ಇರಲಿ, ಜನ್ನಪೊನ್ನರೆ ಇರಲಿ, ಕುಮರವ್ಯಾಸನ ಕಾವ್ಯಮೆಚ್ಚಿದ ಕುವೆಂಪು  ಪೂರ್ವೋತ್ತರದ ಕನ್ನಡದ ದಿಗ್ಗಜಗಳೇ ಇರಲಿ; ಇಂತಿವರಾರ ಕಣ್ಗಳೂ ಒಮ್ಮೆಯಾದರೂ ಕಾಣದಾಗಿಹ ಕನ್ನಡದ ಆದಿಕಾವ್ಯವಿದು ಸಿರಿಭೂವಲಯ ತಾನ್ ! ಜಗದಕಾವ್ಯವಿದರ ಸನಿಹವೂಂ ಸುಳಿಯದವರೆಂತು ಇದರ ಸೊಬಗನರಿಯಲಕ್ಕುಂ. ಇಂತಿರ್ಪಕಾವ್ಯವಿದು  ಕನ್ನಡದ ಹಾದಿ ಬೀದಿಗಳ ಜನಮೆಚ್ಚುವ ಜನಪದಕಾವ್ಯಮಾಗಲೆಂಬುದೆ ಎನ್ನ ಮನದಿಂಗಿತಮಾಗಿರ್ಪುದಲಾ. 

ದಶಕಗಳ ಹಿಂದಿನಿಂ ಹೃದಯದಲಿ ಹುಗಿದಿದ್ದ ಭಾವಗಳನಿಂದು ಪರಿಯಬಿಟ್ಟಿಹೆನಿಲ್ಲಿ ಕನ್ನಡದ ಕುವರರಿಗೆ ಅರಿವಾಗುವ ಪರಿಯಲಿ ಒರೆದೊರೆ   ಸಿರಿಭೂವಲಯದ ಸುಧೆಯನರ್ಥಿಸುವನಲಾ. 

                             _()_


Sunday, 12 July 2020

ಸಿರಿಭೂವಲಯಕಾವ್ಯದ ಪ್ರಥಮಖಂಡದ ಐದನೇ ಅಧ್ಯಾಯಾಂತರ್ಗತ ಸಂಸ್ಕೃತ ಸಾಹಿತ್ಯ:


ಐದನೇ ಅಧ್ಯಾಯದ ಪ್ರರ್ಣಪದ್ಯ ಸಂಖ್ಯೆ ೯೫ ರಿಂದ ೧೪೫ರ ವರೆಗೆ ಅಂತರಶ್ರೇಣಿಯಲ್ಲಿ (ಅಶ್ವಗತಿ) ಸಾಗಿದಾಗ ದೊರೆಯುವ ಸಂಸ್ಕೃತಸಾಹಿತ್ಯವು ಪ್ರಾಚೀನವಾದ ೧೮ಭಾಷೆಗಳ ಲಿಪಿಯ ಸಿದ್ಧಮಾತೃಕಾವರ್ಣಮಾಲೆಯನ್ನು ವಿವರಿಸುವುದಾಗಿದೆ.
'ಅಥವಾ ಪ್ರಾಕೃತ ಸಂಸ್ಕೃತ ಮಾಗಧ ಪಿಶಾಚಭಾಷಾಶ್ಚ ಶೂರಸೇನೀಚ ಷಷ್ಟೋತ್ರಭೇದೋ ದೇಶ ವಿಶೇಷಾದಪಭ್ರಂಶಹ ಕರ್ನಾಟ ಮಾಗಧ ಮಾಲವ ಲಾಟ ಗೌಡ ಗುರ್ಜರ ಪ್ರತ್ಯೇಕತ್ರಯ ಮಿತ್ಯಷ್ಟಾದಶ ಮಹಾಭಾಷಾ ಸರ್ವಭಾಷಾಮಯೀಭಾಷಾ ವಿಶ್ವ ವಿದ್ಯಾವಭಾಸಿನೇ ತ್ರಿಷಷ್ಟಿಹಿ ಚತುಃಷಷ್ಟಿರ್ವಾ ವರ್ಣಾಾಹ ಶುಭಮತೇಮತಾಃ ಪ್ರಾಕೃತೇ ಸಂಸ್ಕೃತೇಚಾಪಿ ಸ್ವಯಂಪ್ರೋಕ್ತಾಹ ಸ್ವಯಂಭುವಾ ಅಕಾರಾದಿ ಹಕಾರಾಂತಂ ಶುದ್ಧಾ ಮುಕ್ತಾವಲೀಮಿವ ಸ್ವರ ವ್ಯಂಜನ ಭೇದೇನ ದ್ವಿದಾಭೇದಮುಪಯ್ಯುಷೀಂ ಅಯೋಗವಾಹಪರ್ಯುಂತಾಂ ಸರ್ವ ವಿದ್ಯಾಸುಸಂಗತಾಂ ಅಯೋಗಾಕ್ಷರಸಂಭುತಿಂ ನೈಕಬೀಜಾಕ್ಷರೈಶ್ಚಿತಾಂ ಸಮವಾದಿಃ ದಧತ್ಬ್ರಾಹ್ಮೀ ಮೇಧವಿನ್ಯತಿಸುಂದರೀ ಸುಂದರೀ ಗಣಿತಂ ಸ್ಥಾನಂ ಕ್ರಮೈಹಿ ಸಂಯುಗಧಾಸ್ಯತ್ ತತೋಭಗವತೋ ವಕ್ತ್ರಾನಿಹಿ ಸ್ರುತಾಕ್ಷರಾವಲೀಂ ನಮ ಇತಿವ್ಯಕ್ತ ಸುಮಂಗಲಾಂ ಸಿದ್ಧಮಾತೃಕಾಂ' ಎಂಬ ಸಾಹಿತ್ಯವು ದೊರೆಯುತ್ತದೆ. ಭಟ್ಟಾಕಳಂಕನ ಶಬ್ದಾನುಶಾಸನದಲ್ಲಿ ಹಾಗೂ ಪಾಣಿಯ ವ್ಯಾಕರಣದಲ್ಲಿ ಅಂದಿನ ಕನ್ನಡ ವರ್ಣಮಾಲೆಯನ್ನು ಕುರಿತು ದೊರೆಯುವ ವಿವರಣೆಯೂಕೂಡ ಕೆಲವೊಂದು ವ್ಯತ್ಯಾಸಗಳೊಂದಿಗೆ ಇದೇ ಆಗಿವೆ ಎಂಬುದನ್ನು ಕರ್ಲಮಂಗಲಂ ಶ್ರೀಕಂಠಯ್ಯನವರು ವಿವರಿಸಿದ್ದಾರೆ. ಈ ಕಾರಣದಿಂದಾಗಿ ಪಾಣಿನಿಯ ಕಾಲದಲ್ಲೇ ೬೪ ಧ್ವನಿಸಂಕೇತಗಳ ವರ್ಣಮಾಲೆಯು ಕನ್ನಡಭಾಷೆಯದೆಂಬ ವಿಚಾರ ಖಚಿತವಾಗಿದೆ! ಆದರೂ ಈ ೬೪ ಧ್ವನಿಸಂಕೇತಗಳ ವರ್ಣಮಾಲೆಯು ಸಂಸ್ಕೃತದ್ದೆಂದು ನಿರ್ಧರಿಸುವ ಆಧುನಿಕ ವಿದ್ವಾಂಸರ ವಿತಂಡವಾದದಿಂದಾಗಿ ಸಂಸ್ಕೃತಭಾಷೆಯ ಪೇಟೆಂಟ್ ಪಡೆದಿರುವ ಜರ್ಮನರು ಇದು ತಮ್ಮ್ಮ ಸ್ವಾಮ್ಯಕ್ಕೆ ಸೇರಿದ್ದೆಂದು ಸ್ವಾತಂತ್ರ್ಯವಹಿಸಲು ಹಾದಿ ಸುಗಮವಾಯಿತು!! ಇದು ಕನ್ನಡದ ಪ್ರಾಚೀನ ಆಸ್ಥಿ ಎಂಬುದನ್ನು ಕನ್ನಡ ವಿದ್ವಾಂಸರು ಆಗಲೇ ಪ್ರತಿಪಾದಿಸಿದ್ದಲ್ಲಿ ಸೂಪರ್ ಕಂಪ್ಯೂಟರಿಗೆ  ಸಾಫ್ಟ್ವೇರ್ ರೂಪಿಸುವಲ್ಲಿ ಸನ್ ಮೈಕ್ರೋಸಿಸ್ಟಮ್ ನವರು  ಕನ್ನಡಭಾಷೆಗೆ ರಾಜಧನ (ರಾಯಲ್ಟಿ) ಕೊಡಬೇಕಾದುದು ಅನಿವಾರ್ಯವಾಗುತ್ತಿತ್ತು.