Monday, 10 February 2020

ಸಿರಿಭೂವಲಯದಲ್ಲಿ ಜೀವದ ಸ್ವರೂಪವನ್ನು ನಮ್ಮ ಪ್ರಾಚೀನರು ಬಲ್ಲವರಿದ್ದರು.

***ನೀವು ಒಪ್ಪದಿದ್ದರೂಚಿಂತೆಯಿಲ್ಲ. ಒಮ್ಮೆ ಓದಿನೋಡಿ****
   
’ಆಧುನಿಕ ವಿಜ್ಞಾನದ ಸಾಧನೆಗಳನ್ನು ಮೀರಿಸಿದ  ಪ್ರತ್ಯಕ್ಷ ಪ್ರಯೋಗದ ಮಾಹಿತಿಗಳು ನಮ್ಮ ಪೂರ್ವಿಕರಿಗೆ ತಿಳಿದಿತ್ತು’ ಎಂದು ಯಾರಾದರೂ ಹೇಳಿದರೆ, ಇಂದಿನ ವಿಜ್ಞಾನದ ಆರಾಧಕರಿಗೆ ಪಿತ್ತಕೆರಳುತ್ತದೆ!  ಹುಚ್ಚರಂತೆ ಕಚ್ಚಲು ಮೇಲೆಬೀಳುತ್ತಾರೆ!! ಸೂಕ್ಷ್ಮ ಜೀವಾಣುಗಳ ದರ್ಶನವಾಗಬೇಕಾದರೆ ತುಂಬ ಉತ್ಕೃಷ್ಟವಾದ ಸೂಕ್ಷ್ಮದರ್ಶಕಯಂತ್ರವಿರಬೇಕೆಂಬುದು ಸಾಮಾನ್ಯವಾಗಿ ಎಲ್ಲರ ಭಾವನೆ.
ಇಂದಿನ ವಿಜ್ಞಾನಿಗಳಿಗೆ ಸೂಕ್ತ ಯಂತ್ರೋಪಕರಣಗಳಿಲ್ಲದೇ ಯಾವ ಪ್ರಯೋಗವೂ ಸಾಧ್ಯವಿಲ್ಲ! ಆದರೆ, ನಮ್ಮ ಪ್ರಾಚೀನ ಋಷಿಮುನಿಗಳಿಗೆ ಇಂಥ ಯಾವುದೇ ಯಂತ್ರೋಪಕರಣಗಳ ಅಗತ್ಯವೂ ಇಲ್ಲದೇ ಅವರು ಈ ಜಗತ್ತಿನ- ಮಾತ್ರವಲ್ಲ- ಲೋಕ ಲೋಕಾಂತರಗಳ ಅಣು- ಹಾಗೂ ಮಹಾನ್ - ಮಾಹಿತಿಯನ್ನೂ ಖಚಿತವಾಗಿ ತಿಳಿಯಬಲ್ಲವರಾಗಿದ್ದರು ಎಂದು ಹೇಳಿದರೆ ಆ ಹೇಳಿಕೆಯನ್ನು ಮಾನ್ಯಮಾಡುವುದಿರಲೀ;  ಗಮನಿಸುವ ಸೌಜನ್ಯವೂ ಅವರಲ್ಲಿರುವುದಿಲ್ಲ!!!
ಈಗ ಸೂಕ್ಷ್ಮದರ್ಶಕಕ್ಕೆ ಸಂಬಂಧಿಸಿದ ಒಂದು ವಿಚಾರ ಕುರಿತು ಕುಮುದೇಂದುಮುನಿಯ ಸಿರಿಭೂವಲಯವು ಏನು ಹೇಳುತ್ತದೆ ಎಂಬುದನ್ನು ಸ್ವಲ್ಪ ಗಮನಿಸೋಣ.  
ನಮ್ಮ ಶರೀರಾಂತರ್ಗತವಾದ ’ಜೀವಾತ್ಮವು’  ಅತ್ಯಂತ ಸೂಕ್ಷ್ಮವಾದುದು.  ಈ ಆತ್ಮದ ಸ್ವರೂಪವನ್ನು ವಿವರಿಸುವಾಗ ರೂಪರಸಸ್ಪರ್ಶಗಂಧಾದಿಗಳಿಂದ ಅದನ್ನು ಗುರುತಿಸಲು ಸಾಧ್ಯವಿಲ್ಲ-ಆತ್ಮಕ್ಕೆ ಬಣ್ಣವಿಲ್ಲ; ರುಚಿಯಿಲ್ಲ; ಆಕಾರವಿಲ್ಲ; ಕಣ್ಣಿಂದ ನೋಡಲಾಗದು; ಕೈಯಿಂದ ಮುಟ್ಟಲಾಗದು, ಮೂಗಿನಿಂದ ವಾಸನೆಯನ್ನು ತಿಳಿಯಲಾಗದು ಎಂಬ ಖಚಿತವಾದ ವಿವರಣೆಗಳನ್ನೊಳಗೊಂಡ ಉಪನಿಷತ್ತಿನ ಶುದ್ಧಕನ್ನಡ ರೂಪಾಂತರವನ್ನು ನಾವು ಸಿರಿಭೂವಲಯದಲ್ಲಿ ಕಾಣಬಹುದು. 
೩೫ನೇ ಅಧ್ಯಾಯದಪೂರ್ಣ ಪದ್ಯಗಳ ಮೊದಲನೇ ಪಾದದ ಕೊನೆಯಿಂದ ನಾಲ್ಕನೇ ಅಕ್ಷರವನ್ನು ಮೇಲಿನಿಂದ ಕೆಳಕ್ಕೆ ಸಾಗುತ್ತ ಜೋಡಿಸಿಕೊಂಡು, ಮೂರನೇ ಅಕ್ಷರವನ್ನು ಕೆಳಗಿನಿಂದ ಮೇಲಕ್ಕೆ ಸಾಗುತ್ತ ಜೋಡಿಸಿಕೊಂಡು, ಎರಡನೇ ಅಕ್ಷರವನ್ನು ಮೇಲಿನಿಂದ ಕೆಳಕ್ಕೆ ಸಾಗುತ್ತ ಜೋಡಿಸಿಕೊಂಡು, ಪಾದದ ಕೊನೆಯ ಅಕ್ಷರವನ್ನು ಕೆಳಗಿನಿಂದ ಮೇಲಕ್ಕೆ ಸಾಗುತ್ತ ಜೋಡಿಸಿಕೊಂಡು ಜೋಡಿನಾಗರಬಂಧದಲ್ಲಿ ಸಾಗಿದಾಗ:           
'ಭಾವದಿಂ ಬಾಳುವ ಸರ್ವಜೀವದ್ರವ್ಯವಿಹುದು ಹೇಳು ಸಾಧಾರಣ ಶೀಲದೋಳೆರಡು ಮಾರ್ಗದಲಿ ಕಾಲವಕಳೆವ ಈಜೀವದ ದ್ರವ್ಯವಂ ಪೇಳುವ ಕಾವ್ಯಭೂವಲಯ ಜೀವದ್ರವ್ಯದೊಳ್ ಷಡ್ಲೇಶೆಯಿದ್ದರೆ ನಾವದ ಕಣ್ಣಿಂದಕಂಡು ಜೀವನು ಕಪ್ಪು ಕೆಂಪೆನಬಹುದಾಗಿತ್ತು ಜೀವನೊಳಿಲ್ಲವುಬಣ್ಣ ಯಶದ ಜೀವನು ಸಿಹಿ ಒಗರುಪ್ಪು ಕಹಿಯಾದಿ ರಸದೊಳೆಳ್ದಿ' (ಬಲಬದಿಯಕ್ಷರದಿಂದಮೇಲಕ್ಕೆ) ರೆ ನಾಲಗೆಯಿಂ ರಸವನೆಕ್ಕುತ ಕಂಡುಹಿಡಿಯಲು ಬಹುದಿತ್ತು ರಸಗಳಿಲ್ಲವು ಜೀವಗಳೊಳು ಕಮಲಾದಿ ವಿದ್ದರೆ ಸಮನಿಸಿಮುದು ಬಹುದು ಸಾರಜೀವ ನೊಳಿಲ್ಲ ವಾಸನೆ ರಸ ಬಣ್ಣ ದಾರಿ ಮೂಗ್ ನಾಲಗೆ ಕಣ್ಣು ಸೇರವು ಜೀವದ್ರವ್ಯವಹುದು ಕುವದಾರಿಯೊಳೆಲ್ಲ ಸಾಯುವುವುಏ' (ಬಲಬದಿಯಕ್ಷರದಿಂದಕೆಳಕ್ಕೆ) 'ನೆಂಬಿ ಜೀವನೊಳ್ ಮೃದುವು ಕರ್ಕಶವಾದಿ ನಾನಾಸ್ಪರ್ಶಗಳೆಂಬುದವ ನೊಳೇನಿಲ್ಲವದರಿಂದ ಮುಟ್ಟಲಾಗುವುದಿಲ್ಲ ಶ್ರೀನಿವಾಸನನು ಜೀವಜೀವನನು ಜಿನಮತದಂತೆ ಜೀವನಲಿ ಸದದಿಲ್ಲವು ಚಿನುಮಯಜೀವನಂ ಅದರಿಂದ ನುಮಾನದಿಂಬಡಿದರೆ ಸಿಗದಿಹ ಜೀವನ ನುಭವದೊಳಗೆ ಸದದಿಲ್ಲ’ ಎಂಬ ವಿವರದೊಂದಿಗೆ  ಸಂಸ್ಕೃತಭಾಷೆಯೊಂದಿಗೆ ಬೆರೆತ ಬೇರಾವುದೋ ಭಾಷೆಯಲ್ಲಿ ಎರಡುಶ್ಲೋಕಗಳು ಉಗಮವಾಗುತ್ತವೆ.
ಇಲ್ಲಿಯೂ ಅಷ್ಟೇ. ಕವಿಯು ಸೂಚಿಸದಿರುವ ಯಾವುದೋ ವಿಚಾರವನ್ನು ಸ್ವಕಪೋಲ ಕಲ್ಪಿತವಾಗಿ ಇಲ್ಲಿ ಸುಧಾರ್ಥಿಯು ನಮೂದಿಸಿಲ್ಲ. ಇಲ್ಲಿನ ವಿವರಣೆಯನ್ನು ಗಮನಿಸಿದಮೇಲಾದರೂ, ನಮ್ಮ ಪ್ರಾಚೀನರ ಸರ್ವಜ್ಞತ್ವವನ್ನು ಸೂಕ್ತವಾಗಿ ಗ್ರಹಿಸುವ ಬುದ್ಧಿ ಇಂದಿನವರಿಗೆ ಬಂದೀತೆಂದು ಭಾವಿಸಬಹುದು.  ಇಂಥ ಮಾಹಿತಿಗಳ ಕಾರಣಕ್ಕಾಗಿಯೇ ಸುಧಾರ್ಥಿಯು ಸಿರಿಭೂವಲಯವನ್ನು ’ಕನ್ನಡದವೇದ’ ಎಂದು ಪರಿಗಣಿಸಿದ್ದಾನೆ.  ವೇದದಲ್ಲಿಲ್ಲದ್ದು ಬೇರೆಲ್ಲಿಯೂ ಇಲ್ಲವೆಂದು ಬಲ್ಲವರ ನಿಲುವು. ಸಿರಿಭೂವಲಯವೂ ಇದೇ ಹಾದಿಯದು ಇಲ್ಲಿ ಎಲ್ಲವೂ ಸಮಾವೇಶವಾಗಿವೆ!!!!
                                                                                                    -ಸಿರಿಭೂವಲಯದಸುಧಾರ್ಥಿ. 

ಸಮತಾವಾದದ ಉಗಮ ಎಲ್ಲಿಂದಾದುದು??


ಜಗತ್ತಿನಲ್ಲಿ ಕಾರ್ಲ್ ಮಾರ್ಕ್ಸ್, ಲೆನಿನ್ ಮುಂತಾದವರಿಂದ  ಸಮತಾವಾದವು ಹುಟ್ಟಿ ಬೆಳೆಯಿತೆಂಬ ವಿಚಾರ ಚರಿತ್ರೆಯಾಗಿ ಪ್ರಚಲಿತವಿದೆ! ಆದರೆ ಈ ಸಮತಾವಾದವು ದ್ವಾರಕೆಯ ಶ್ರೀ ಕೃಷ್ಣನ ಕಾಲಕ್ಕೆ ಮೊದಲೇ ತಲೆಯೆತ್ತಿದ್ದ ಒಂದು ಸಾಮಾಜಿಕ ಪ್ರತಿಭಟನೆಯಾಗಿತ್ತು!!
ವೇದೋಕ್ತಜೀವನಪಥದಲ್ಲಿ ಪ್ರತಿಯೊಬ್ಬರೂ ತಮಗೆ ವಿದಿತವಾದ ಕ್ರಮದಲ್ಲಿ ಜೀವನಸಾಗಿಸುತ್ತ, ಸಮಾಜದ ಏಳಿಗೆಯಲ್ಲಿ ಭಾಗವಹಿಸುವ ಕ್ರಮವಿದೆ.   ದುಡಿದವರು ಸಂಪತ್ತನ್ನು ಹೊಂದಿ ತಾವೂ ನೆಮ್ಮದಿಯಿಂದಿದ್ದು, ಉಳಿದವರ ನೆಮ್ಮದಿಗೂ ನೆರವಾಗುವ ಕ್ರಮವಿತ್ತು. ಆದರೆ ಸಮತಾವದದ ನೀತಿಯಲ್ಲಿ ಉಳ್ಳವರನ್ನು ಗುರುತಿಸಿ, ತಮ್ಮ ತೋಳ್ಬಲದಿಂದ ಅವರನ್ನು ಬೀದಿಗೆ ತಂದು ತಮಗೆ ಬೇಕಾದವರಿಗೆ ಸಂಪತ್ತನ್ನು ಹಂಚುವುದು ಸಮತಾವಾದದ ನೀತಿ!!
ಚೈನಾ, ರಷ್ಯಾ, ಸೈಬೀರಿಯಾ ಮುಂತಾದ ಶೀತದೇಶಗಳಲ್ಲಿ ಪ್ರಚಲಿತವಿದ್ದ  ಇಂಥ ಜೀವನ ಪದ್ಧತಿ , ಹಾಗೂ ಅವರ ಸಾಮಾಜಿಕ ತಿಳುವಳಿಕೆಯು ಸಮಂಜಸವಲ್ಲ ಎಂಬುದನ್ನು ಕೃಷ್ಣನು ಪಾರ್ಥನಿಗೆ ಸೂಚಿಸುವ ಸನ್ನಿವೇಶವೊಂದು ಸಿರಿಭೂವಲಯದಲ್ಲಿ ಕಾಣಬರುತ್ತದೆ!
 ಅಂದರೆ ನಾಲ್ಕುಸಾವಿರ ವರ್ಷಗಳಿಗೂ ಹಿಂದಿನಿಂದಲೇ ಜಗತ್ತಿನಲ್ಲಿ ಈ ಸಮತಾವಾದಿಗಳ (ಕಮ್ಮಿನಿಷ್ಟೆಯರ) ಉಗಮವಾಗಿತ್ತೆಂಬುದನ್ನು  ಇಂದಿನ ಜಗತ್ತು ಅರಿಯಬೇಕಿದೆ!!
 ”ಶೀತದೇಶದ ಜನರ ಅರಿವ ಅರಿವೆಂದರಿಯಲಾಗದು ಅರಿಯೆಂದು ತಿಳಿದು ಇರಿ’ ಎಂಬ ಕೃಷ್ಣನ ಉಪದೇಶವು ಸಿರಿಭೂವಲಯದಲ್ಲಿದೆ. ಅಂದರೆ ’ಜೀವನಸಾಗಿಸುವ ದಿಸೆಯಲ್ಲಿ ಶೀತದೇಶದಜನರು ಅನುಸರಿಸುವ ಕ್ರಮ ಸರಿಯಲ್ಲ;  ಅದನ್ನು ತಿಳುವಳಿಕೆ ಎಂದು ನಿರ್ಧರಿಸಲಾಗದು, ಅದನ್ನು ’ಜೀವವಿರೋದಿ ತಿಳುವಳಿಕೆ’ ಎಂದು ತಿಳಿದು  ನಾಶಮಡಬೇಕು’ ಎಂಬುದು ಯೋಗೀಶ್ವರನಾದ ಕೃಷ್ಣನ ಉಪದೇಶವಾಗಿದೆ.
ಆದರೆ ನಾಲ್ಕುಸಾವಿರ ವರ್ಷಕ್ಕೂ ಹೆಚ್ಚು ಸಮಯಕಳೆದರೂ ಅಂದಿನಿಂದ ಇಂದಿನವರೆವಿಗೂ ಜಗತ್ತಿನಲ್ಲಿ ಈ ಕಮ್ಮಿನಿಷ್ಟೆಯವರ ಕುತಂತ್ರವನ್ನು ನಂಬಿ ಜೀವನವನ್ನು ವ್ಯರ್ಥಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿಲ್ಲ!!
ಭಾರತದ ಚರಿತ್ರೆಯಲ್ಲಂತೂ ಶೋಕೀಲಾಲ ನೆಹರೂ  ಇಲ್ಲಿನ ಕೇರಳದ ಕೃಷ್ಣ ಮೆನನ್ನನಂಥ ದೇಶದ್ರೋಹಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ,  ಜಾತ್ಯಾತೀತವೆಂಬ ಭೂತದ ನೆನ್ನೇರಿ, ಭಾರತವನ್ನು ಅಧೋಗತಿಗೆ ಇಳಿಸಿದ್ದು ಸರ್ವ ವಿದಿತ. ದೇವರಾಜ ಅರಸರು ’ಉಳುವವನಿಗೇ ಭೂಮಿ’ ಎಂಬ ಘೋಷಣೆಲ್ಲಿ,  ’ಭೂಸುಧಾರಣೆ’ ಕಾನೂನಿನ  ನೆಲೆಯಲ್ಲಿ ದುರ್ಬಲರಾದ ಸಾವಿರಾರು ಜನ ಭೂಮಾಲೀಕರನ್ನು ನೆಲಸಮಮಾಡಿ  ದೇಶೋದ್ಧಾರಮಾಡಿದ್ದಾಯಿತು. ಇಂದಿನ ಕಾಂಗ್ರೆಸ್ ಭ್ರಮಾಧೀನರೂ ಇದೇ ಹಾದಿಯಲ್ಲಿ ಸಾಗುತ್ತ ತಮ್ಮನ್ನೂ, ದೇಶವನ್ನೂ ಆಳವಾದ ಕಂದಕದಲ್ಲಿ ಬೀಳಿಸುತ್ತಿದ್ದಾರೆ.
ಇದನ್ನು ಅನುಭವಿಸುವುದು ಈ ದೇಶದ ಜನಸಾಮಾನ್ಯರಿಗೆ ಅನಿವಾರ್ಯ!!  ಕಾರಣ ಅನ್ಯಾಯವನ್ನು ವಿರೋಧಿಸಿ, ದೇಶದ, ಧರ್ಮದ ರಕ್ಷಣೆಮಾಡುವ ಚೈತನ್ಯವೇ ಇವರಲ್ಲಿ ನಾಶವಾಗಿ ಪೌರುಷಹೀನರಾದ ನಪುಂಸಕರಂತೆ ವರ್ತಿಸುವುದೇ ಬಹುಪಾಲು ಜನರ ಜೀವನಮಾರ್ಗವಾಗಿದೆ
 ಇಂಥ ಪ್ರಜೆಗಳಿಂದ ರೂಪಿತವಾಗುವ ಆಡಳಿತ ವ್ಯವಸ್ಥೆಯು  ದೇಶದ ಹಿತ ಕಾಪಾಡಲು ಹೇಗೆ ಸಾಧ್ಯ!!?? ಈ ಕಾರಣದಿಂದಾಗಿಯೇ ದೇಶದಲ್ಲಿ ಮೋದಿವಿರೋಧಿಗಳ ಕೈ ಮೇಲಾಗಲು ಅವಕಾಶವಾಗುತ್ತಿದೆ.  ಜನತೆ ಎಚ್ಚೆತ್ತರೆ ಇದನ್ನು ಬದಲಿಸುವುದು ಅಸಾಧ್ಯವೇನಲ್ಲ.  ವಿವೇಕಿಗಳು ತಾಳ್ಮೆಯಿಂದ ಈ ಕಾರ್ಯ ಸಾಧಿಸಬೇಕಿದೆ.
           ಸಿರಿಭೂವಲಯದಸುಧಾರ್ಥಿ.

Sunday, 9 February 2020

ಸಿರಿಭೂವಲಯವು ಸೂಚಿಸುವ ಜೀವನದ ಹಾದಿ


ಜಗತ್ತಿನಲ್ಲಿ ವ್ಯಕ್ತಿಜೀವನವು ಧರ್ಮ ಕರ್ಮಗಳ ಸೊಂಯೋಗದ ಫಲವಾಗಿದೆ!  ಯೋಗ ಭೋಗಗಳ ಒಕ್ಕೂಟವಾಗಿದೆ. ಧರ್ಮವನ್ನು ಬದಿಗಿರಿಸಿ, ಕರ್ಮದಲ್ಲೇ ಮುಳುಗಿದರೆ ಅಪಾಯ! ಕರ್ಮವನ್ನು ನಿರಾಕರಿಸಿ ಧರ್ಮದಲ್ಲೇ ಐಕ್ಯವಾದರೂ ಅಪಾಯತಪ್ಪಿದ್ದಲ್ಲ!!  ಭೋಗದಲ್ಲೇ ಆಸಕ್ತರಾಗಿ ಯೋಗವನ್ನು ಬದಿಗಿರಿಸಿದರೂ ಕಷ್ಟು; ಭೋಗವನ್ನು ತೊರೆದು ಯೋಗದಲ್ಲೇ ಮುಳುಗಿದರೂ  ಸರಿಯಿರದು!  ಯೋಗ ಭೋಗಗಳನ್ನು ಸಮನ್ವಯಗೊಳಿಸಿಕೊಳ್ಳುವುದು ಅವಶ್ಯಕ.
ಧರ್ಮಕರ್ಮಗಳು; ಯೋಗಭೋಗಗಳು ಜೀವನದ ಅವಿಭಾಜ್ಯ ಅಂಗಗಳೆಂದೂ, ಅವುಗಳನ್ನು ಸಮನ್ವಯಗೊಳಿಸಿಕೊಳ್ಳುವುದು ಸಾರ್ಥಕಜೀವನಕ್ಕೆ ಅನಿವಾರ್ಯವೆಂದೂ ಸಿರಿಭೂವಲಯವು ಸಮರ್ಥಿಸುತ್ತದೆ. "ಸರ್ವಾರ್ಥಸಿದ್ಧಿಸಂಪದದನಿರ್ಮಲಕಾವ್ಯ|ಧರ್ಮವಲೌಕಿಕಗಣಿತ|ನಿರ್ಮಮ ಬುದ್ಧಿಯನವಲಂಬಿಸಿರುವರ| ಧರ್ಮಾನುಯೋಗದವಸ್ತು|| ಧರ್ಮಸಮನ್ವಯಕಾವ್ಯ|ಧರ್ಮಸಮನ್ವಯಗಣಿತ| ಮುಂತಾದ ಪದ್ಯಗಳಮೂಲಕ ಗಣಿತಶಾಸ್ತ್ರದ ’ಸಂಖ್ಯಾತ’  ’ಅಸಂಖ್ಯಾತ’  ’ಅನಂತಾಂಕ’  ’ಉತ್ಕೃಷ್ಟದನಂತ’  ಮುಂತಾದ ಗಣಿತಾಂಕಗಳ ಸ್ಥಾನನಿರ್ದೇಶನದ ತಾಂತ್ರಿಕ ಪದಗಳನ್ನು ಸೂಚಿಸಲಾಗಿದೆ. ಅಧ್ಯಾಯದ ಅಂತ್ಯಭಾಗದಲ್ಲಿ  ’ಆದಿಮದ ’ಅ’ಕ್ಷರಮಂಗಲ| ನವ ಆ ಅ ಅ ಅ ಅ ಅ ಅ ಅ ಅ| ಎಂದು ಸೂಚಿಸಿದ್ದು,  ೫೯ನೇ ಅಧ್ಯಾಯದಲ್ಲೂ ಕೊನೆಯಕ್ಷರದ ಸ್ತಂಬಕಾವ್ಯದಲ್ಲಿ  ಈರೀತಿ ಒಂಬತ್ತು ’ಅ’ ಕಾರಗಳನ್ನು ಸೂಚಿಸಿರುವುದು ಕಾಣಬರುತ್ತದೆ.
                               -ಸಿರಿಭೂವಲಯದಸುಧಾರ್ಥಿ.

Saturday, 8 February 2020

ಸಂಸ್ಕೃತಭಾಷೆ ಕುರಿತು ಸಿರಿಭೂವಲಯದ ಮಾಹಿತಿ

’ಗೀರ್ವಾಣಿ’ ಎಂಬುದು ’ಸಂಸ್ಕೃತ’ ಭಾಷೆಯ ಇನ್ನೊಂದು ಹೆಸರು.  ಗೀರುಗಳನ್ನೇ ಹೆಚ್ಚಾಗಿ ಬಳಸುವ ಲಿಪಿ ’ದೇವನಾಗರಿ ಲಿಪಿ’   ಈಕಾರಣದಿಂದಾಗಿ ’ಸಂಸ್ಕೃತಭಾಷೆಗೆ’  ಗೀರ್ವಾಣ ಎಂಬ ಹೆಸರೂ ಪ್ರಚಲಿತವಿದೆ.
ಸಂಸ್ಕೃತವೆಂದರೆ, ’ಸಂಸ್ಕರಿಸಲ್ಪಟ್ಟದ್ದು’ ಎಂದರ್ಥ.  ಹಲವಾರು ಪ್ರಾಚೀನಭಾಷೆಗಳ ಸಾರವನ್ನು ಸಂಗ್ರಹಿಸಿ ಈ ಭಾಷೆಯನ್ನು ಸಂಸ್ಕರಿಸಲಾಗಿದೆ.  ಇದು ಅತ್ಯಂತ ಸರಳವಾದ ಹಾಗೂ ಸೂಕ್ಷ್ಮವಾದ ಸಮರ್ಥಭಾಷೆಯಾಗಿದೆ.
 ಪ್ರಾಕೃತ, ಕನ್ನಡ, ಬೆಂಗಾಲಿ,  ಬ್ರಜ್,  ಗ್ರೀಕ್, ಲ್ಯಾಟೀನ್, ಪರ್ಷಿಯನ್ ಮುಂತಾದ ಏಳೆಂಟು  ಭಾಷೆಗಳನ್ನು ಸಂಸ್ಕರಿಸಿದ ಭಾಷೆಯೇ ’ಸಂಸ್ಕೃತ;’ ಎಂಬ ವಿಚಾರವನ್ನು ಪಂ|| ತಾರಾನಾಥರು ಪ್ರತಿಪಾದಿಸಿದ್ದ ಮಾಹಿತಿ ಇದೆ.
 ಎಲ್ಲಜೀವರಾಶಿಗಳೂ ಆಡುವ ಮಾತುಗಳು ಬೇರೆ ಬೇರೆಯಾಗಿರುತ್ತದೆಯೇ ಹೊರತು ಅದು ಗೀರ್ವಾಣಿಯಲ್ಲ ಎಂಬ ಹೇಳಿಕೆಯು ಸಿರಿಭೂವಲಯದಲ್ಲೇ ಉಕ್ತವಾಗಿರುವುದನ್ನು ಭಾಷಾಶಾಸ್ತ್ರಿಗಳು ಗಮನಿಸಬೇಕು.  ಸಂಸ್ಕೃತಭಾಷೆಯ ಮೂಲದವಿಚಾರವಾಗಿ  ಪಂಡಿತ ತಾರಾನಾಥರ ನಿಲುವನ್ನುಕುರಿತು fbನಲ್ಲಿ ಈಹಿಂದೆ  ಸೂಚಿಸಲಾಗಿದೆ.
ಅದೊಂದು ಆಧಾರರಹಿತ ಕಲ್ಪನೆಯೆಂದು ಯಾರೊಬ್ಬರೂ ಅತ್ತ ಗಮನಹರಿಸದಿರಬಹುದು!  ಆದರೆ, ಈ ಮಾಹಿತಿಗೆ ಸಿರಿಭೂವಲಯದಲ್ಲೂ ಕುರುಹು ಸಿಗುವುದನ್ನು ಕಾಣಬಹುದು.
ರಸವಿಹಸ್ವರಜತಿಗಳ ಗಮನ ವಿರುವ ಗೀರ್ವಾಣಿ, ,(ಸಂಸ್ಕೃತಭಾಷೆಯ ಸೊಗಸಿನ ಸಹಜವರ್ಣನೆ)  ಯಶಸ್ಸು ಒಲಿದವರ ಅಂಕಿಗಳು ಇವೆಲ್ಲವೂ ಪ್ರಾಚೀನವಾದುವೆಂಬುದನ್ನು ಕೃಷ್ಣನು ಪಾರ್ಥನಿಗೆ ಸೂಚಿಸುವ ಪ್ರಸಂಗವಿದಾಗಿದೆ. 
”ವೇದಗಳು ಲಿಖಿತವಾಗಿರುವುದು  ದೇವನಾಗರಿಲಿಪಿಯನ್ನು ಬಳಸಿರುವ ಸಂಸ್ಕೃತಭಾಷೆಯಲ್ಲಲ್ಲಾ, ಅದಕ್ಕೆ ಅದರದೇ ಆದ ’ಗೂಢಲಿಪಿಯೊಂದಿತ್ತು’’ ಎಂಬುದು ಸಿರಿಭೂವಲಯಕ್ಕೆ ಸಂಬಂಧಿಸಿದಂತೆ  ಒಂದು ದಾಖಲೆಯ ಕಾರ್ಯನಿರ್ವಹಿಸಿರುವ ಗೋಕರ್ಣಮೂಲದ ಮಂತ್ರದ್ರಷ್ಟಾರ ಮಹರ್ಷಿ ದೇವರಾತರ ನಿಲುವಾಗಿತ್ತು.
  ೧೨೦೦ ವರ್ಷಗಳಹಿಂದೆ ಕುಮುದೇಂದುಮುನಿಯೂ ಇದಕ್ಕೆ ಸನಿಹವಾದ ಹೇಳಿಕೆಯಮೂಲಕ ಈ ಮಾಹಿತಿಯನ್ನು ಸಮರ್ಥಿಸಿರುವುದನ್ನು ಇಲ್ಲಿ ಓದುಗರು ಗಮನಿಸಬಹುದು. ಈ ವಿಚಾರವನ್ನು ಇಲ್ಲಿ ವಿವರಿಸುತ್ತಿರುವುದು ಯಾರನ್ನೂ ಒಪ್ಪಿಸುವುದಕ್ಕಲ್ಲಾ!!  ಮನವರಿಕೆಯಾದವರು ಒಪ್ಪಬಹುದು, ಇಲ್ಲದವರು ಬಿಡಬಹುದು! ಅದು ಅವರವರ ಇಚ್ಛೆಗೆಬಿಟ್ಟ ಸಂಗತಿ.
 ಇದು  ಆಸಕ್ತರಿಗೆ ಗೂಗಲ್ಲಿನಲ್ಲಾಗಲೀ ವಿಕಿಪಿಡಿಯಾದಲ್ಲಾಗಲೀ , ಬೇರೆಲ್ಲೇ ಆಗಲೀ  ಹುಡುಕಿದಾಗ ಸಿಗುವ ಮಾಹಿತಿಯಲ್ಲ!!   ಹಿಮಾಲಯದ ಪ್ರಶಾಂತವಾದ ದುರ್ಗಮವಾದ ಗುಹೆಗಳಲ್ಲಿ ಮಹಾತ್ಮರು ರಕ್ಷಿಸಿಟ್ಟಿರುವ ಪ್ರಾಚೀನ ಸಾಹಿತ್ಯಕೃತಿಗಳಲ್ಲಿಮಾತ್ರ ದೊರೆಯುವ ಮಾಹಿತಿ ಎಂಬುದನ್ನು  ನೆನಪಿನಲ್ಲಿಡಬೇಕಿದೆ. ಇಲ್ಲಿ  ಬೇಕಿದ್ದಲ್ಲಿ ಸಿರಿಭೂವಲಯದ ಒಳಹೊಕ್ಕು ನೋಡಬೇಕಷ್ಟೇ!!!!
 (೨೪ನೇ ಅಧ್ಯಾಯದ ಅಶ್ವಗತಿಯ ಅಂತರ್ಸಾಹಿತ್ಯದ ೧೫ನೇ ಪದ್ಯನೋಡಿರಿ) 
                                                                                 -  ಸಿರಿಭೂವಲಯದಸುಧಾರ್ಥಿ.

Monday, 3 February 2020

ಸಿರಿಭೂವಲಯದಲ್ಲಿ ಅಣುವಿಜ್ಞಾನ


ಅಣು; ಪರಮಾಣು ಮುಂತಾದ ಅಣುವಿಜ್ಞಾನಕ್ಕೆ ಸಂಬಂಧಿಸಿದ ಪಾರಿಭಾಷಿಕ ಪದಗಳು ಜಗತ್ತಿನಲ್ಲಿ ಅಣುವಿಜ್ಞಾ ಕುರಿತ ಮಾಹಿತಿಗಳ ಪ್ರಸಾರದನಂತರ ಪ್ರಚಲಿತವಾದ, ಹೊಸದಾಗಿ ಎರಕಹೊಯ್ಯಲಾದ ಪದಗಳು ಎಂಬ ಭ್ರಮೆ ನಮ್ಮಲ್ಲಿ ಹಲವರನ್ನು ಆವರಿಸಿದೆ!  ಇದು ಸರಿಯಲ್ಲ.
ಪಾಶ್ಚಾತ್ಯಜಗತ್ತಿನಲ್ಲಿ ಆಧುನಿಕ ಭೌತಶಾಸ್ತ್ರವು ಕಣ್ಣುಬಿಡುವದಕ್ಕೆ ಮೊದಲೇ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಈ ಪಾರಿಭಾಷಿಕ ಪದಗಳು ಪ್ರಾಚೀನ ಭಾರತೀಯರಲ್ಲಿ ಪ್ರಚಲಿತವಿತ್ತು.
 ಜಗತ್ತಿನೆಲ್ಲೆಡೆಯೂ ಕಾಣಬರುವ ’ನೀರಿನ’ ಸಂಯೋಜನೆಯನ್ನುಕುರಿತು ಆಧುನಿಕ ವಿಜ್ಞಾನಿಗಳು ’ಎರಡುಜಲಜನಕದ ಕಣಗಳು ಹಾಗೂ ಒಂದು ಆಮ್ಲಜನಕದ ಕಣವು ಸೇರಿದ ರೂಪವೇ ’ನೀರು’ ಎಂದು ಸೂಚಿಸುವುದು ಸರಿಯಷ್ಟೆ. (H2O)  ಅಣುವಿಜ್ಞಾನಕ್ಕೆ ಸಂಬಂಧಿಸಿದ ಈ ಮಾಹಿತಿಯನ್ನುಕುರಿತು ಹಾಗೂ ಇದಕ್ಕಿಂತ ವಿಶೇಷವಾದ ಹಲವಾರು ಮಾಹಿತಿಗಳನ್ನು ಕುರಿತು,  ಜೊತೆಗೆ ಈ ಅಣು ಪರಮಾಣುಗಳ ಬೇರೆ ಬೇರೆ ಪ್ರಮಾಣಗಳ ವಿಂಗಡಣೆ ಹಾಗೂ ಸಂಯುಕ್ತರೂಪವನ್ನು ಕುರಿತು ಬೇರೆ ಬೇರೆ ಹೆಸರುಗಳನ್ನು ಬಳಸಿ ಸೂಚಿಸಿರುವುದನ್ನು ಕುಮುದೇಂದು ಮುನಿಯು ಸಿರಿಭೂವಲಯದಲ್ಲಿ  ೧೨೦೦ ವರ್ಷಗಳ ಹಿಂದೆಯೇ ಸೂಚಿಸಿರುವುದಿದೆ!! ನೋಡಿರಿ: ”ಅಣುವೆಂದು ಪರಮಾಣುವೆಂದುಪುದ್ಗಲವನು| ಗಣಿಸುವಾಗಿರುವಂಕವೆಷ್ಟು| ಅಣುವಿನಗುಣವೇನು| ಅಣುವಿನಕ್ಷಣವೇನು| ಅಣುವುನೀರೊಳಗೆಷ್ಟು| ಅನಲವಾಯುಗಳೆಷ್ಟು|  ನೆನೆದುಸುಡದ ಅಣುವೆಷ್ಟು|” ಎಂಬುದಾಗಿ ಹಲವಾರು ಪದ್ಯಗಳರೂಪದಲ್ಲಿ ಈ ಅಣುವಿಜ್ಞಾನ ಕುರಿತ ಸೂಕ್ಷ್ಮಾತಿ ಸೂಕ್ಷ್ಮವಾದ ಮಾಹಿತಿಗಳನ್ನು ಸೂಚಿಸಿರುವುದಿದೆ.  ಇಲ್ಲಿ ಅಂಕಗಳು ಹಾಗೂ ವಸ್ತುಗಳಲ್ಲಿರುವ ಸೂಕ್ಷ್ಮಕಣಗಳಾದ ’ಅಣು, ಪರಮಾಣುಗಳ’  ವಿಚಾರ ವಿವರಿಸಿರುವುದು ಅಚ್ಚರಿ ಮೂಡಿಸುತ್ತದೆ.  ನೀರಿನಲ್ಲಿರುವ ಅಣುಗಳೆಷ್ಟು? ಬೆಂಕಿ ಹಾಗೂ ಗಾಳಿಯಲ್ಲಿರುವ ವಿಧಗಳೆಷ್ಟು?  ನೀರಿನಲ್ಲಿ ನೆನೆಯದ; ಬೆಂಕಿಯಲ್ಲಿ ಸುಟ್ಟುಹೋಗದಿರುವ  ಅಣುಗಳು ಎಷ್ಟೆಂಬ ವಿಚಾರವಾಗಿ ಇಲ್ಲಿ ಪ್ರಸ್ಥಾಪಿಸಿರುವುದನ್ನು ಪ್ರತ್ಯಕ್ಷವಾಗಿ ಕಾಣಬಹುದಾಗಿದೆ.
ವಸ್ತುಗಳ ಗುಣಲಕ್ಷಣಗಳು ಯಾವಾಗಲೂ ಬದಲಾಗುತ್ತಿರುತ್ತದೆ. ಆದರೂ ಅವು ಕೆಡುವುದಿಲ್ಲ. ಹಾಲು ಮೊಸರಾಗುತ್ತದೆ, ಮೊಸರು ಮಜ್ಜಿಗೆ ಹಾಗೂ ಬೆಣ್ಣೆಯಾಗಿ ಬದಲಾಗುತ್ತದೆ. ಬೆಣ್ಣೆಯು ತುಪ್ಪವಾಗಿ ಬದಲಾಗುತ್ತದೆ ಇತ್ಯಾದಿ. ಈ ರೀತಿಯಲ್ಲಿ ಕೆಡದೇ ಇರುವಂಥ ಅಣು- ಪರಮಾಣುಗಳ ಸಂಖ್ಯೆ ಎಷ್ಟಿವೆ? ಕಾಲವೆಂಬುದರ ಪ್ರಮಾಣವನ್ನು ಇದುವರೆವಿಗೂ ಯಾರೂ ಅಳತೆಮಾಡಿ ಅದು ಇಷ್ಟು ವ್ಯಾಪ್ತಿಯದೆಂದು ಹೇಳಿದವರು ಯಾರೂ ಇಲ್ಲ! ಆದರೂ ಅದರ ಗಣನೆಯನ್ನು ಹೇಳುವ ಕ್ರಮಯಾವುದು? ಎಂದು ಸಿರಿಭೂವಲಯದಲ್ಲಿ ಪ್ರಶ್ನಿಸಲಾಗಿದೆ. ನೋಡಿ:
ಅನುಗಾಲವು ಬದಲಾಗುತಿದ್ದರೂಕೆಡದಿಹ| ಅಣುಪರಮಾಣುಗಳೆಷ್ಟು| ಕೊನೆಮೊದಲಿಲ್ಲದಕಾಲವನಳೆಯುವ|
ಗಣನೆಯ ಪೇಳುವುದೆಂತು||
ಸಾಮಾನ್ಯವಾಗಿ ಅಕ್ಕಿ ಗಿರಣಿಗಳಲ್ಲಿ ಭತ್ತವನ್ನು ಮೋಟೆಗಟ್ಟಳೆ ಸುರಿದು ಅಕ್ಕಿಯನ್ನು ತಯಾರಿಸಲಾಗುತ್ತದೆ. ಬಹಳ ಹಿಂದಿನಕಾಲದಲ್ಲಿ ಈ ಕ್ರಮವಿರಲಿಲ್ಲ. ಒರಳು ಕಲ್ಲಿನಲ್ಲಿ ಭತ್ತವನ್ನುಹಾಕಿ, ಅದನ್ನು ಒನಕೆಯಿಂದ ಕುಟ್ಟಿ ಅಕ್ಕಿಯನ್ನು ತಯಾರಿಸಲಾಗುತ್ತಿತ್ತು!
ಹೆಚ್ಚು ಅಕ್ಕಿ ತಯಾರಿಸಬೇಕಿದ್ದಲ್ಲಿ ಒನಕೆಯ ಬದಲಿಗೆ ಒರಳಿನಲ್ಲಿ ಏತವನ್ನು ಅಳವಡಿಸಲಾಗುತ್ತಿತ್ತು. ಈ ರೀತಿ ಕುಟ್ಟಿ ತಯಾರಿಸಿದ ಅಕ್ಕಿಗೆ ’ಕೊಟ್ಟಣದಕ್ಕಿ’ ಎಂಬ ಹೆಸರಿತ್ತು. ಈ ಕ್ರಮದಲ್ಲಿ ಭತ್ತದ ಮೇಲಿನ ಹೊಟ್ಟನ್ನು ಮಾತ್ರ ಬೇರ್ಪಡಿಸಲಾಗುತ್ತಿತ್ತು. ಬತ್ತದೊಳಗಿನ ಅಕ್ಕಿಯು ನಸುಗೆಂಪುಬಣ್ಣದ್ದಾಗಿರುತ್ತದೆ. ಇದರಿಂದ ತಯಾರಿಸಿದ ಅನ್ನದಲ್ಲಿ ಹೆಚ್ಚಿನ ಪೋಷಕಾಂಶಗಳಿರುತ್ತಿತ್ತು. ರೋಗ ನಿರೋಧಕಶಕ್ತಿ ಹೆಚ್ಚಿರುತ್ತಿತ್ತು.
ಆದರೆ, ಈ ಅಕ್ಕಿಯನ್ನು ಬೇಯಿಸಿ ಮಾಡಿದ ಅನ್ನವು ಬಿಸಿಯಾಗಿರುವಾಗ ತಿನ್ನಲು ಸುಲಭವಾಗಿರುತ್ತಿತ್ತು. ಅನ್ನದ ಬಿಸಿ ಆರಿ ತಣ್ಣಗಾದಮೇಲೆ ಅದನ್ನು ತಿನ್ನುವುದು ಶ್ರಮದಕಾರ್ಯವಾಗಿತ್ತು! ಕಾಲಕ್ರಮದಲ್ಲಿ ಅಕ್ಕಿಯಮೇಲಿರುವ ಈ ನಸುಗೆಂಪು ಬಣ್ಣದ ತೌಡನ್ನು ಬೇರ್ಪಡಿಸಿ, ಅನ್ನವನ್ನು ಮೃದುಗೊಳಿಸುವ ಕ್ರಮ ರೂಢಿಗೆಬಂದಿತು.
ಹೊರಮೈಯ್ಯಿನಮೇಲಿರುವ ಹೊಟ್ಟನ್ನು ಕಳೆದುಕೊಂಡು, ಬಿಳಿಯಕಣ್ಣಕ್ಕೆ ತಿರುಗಿದ ಅಕ್ಕಿಯು ವ್ಯಕ್ತಿಯ ಶರೀರದ ಪೋಷಣೆಗೆ ಅತ್ಯಗತ್ಯವಾದ ಆಹಾರ ಸತ್ವವನ್ನು ಕಳೆದುಕೊಂಡಿತು! ಭತ್ತವನ್ನು ಕುಟ್ಟಿ, ತೌಡೆಲ್ಲವನ್ನೂ ನುಚ್ಚಕ್ಕಿಯಿಂದ ಬೇರ್ಪಡಿಸಿದನಂತರ ಅದನ್ನು ದನಕರುಗಳ ಆಹಾರವಾಗಿ ಬಳಸುವ ಕ್ರಮ ರೂಢಿಗೆ ಬಂದಿತು. ಪುಷ್ಟಿದಾಯಕವಾದ ಈ ಅಕ್ಕಿಯ ತೌಡನ್ನು ಸೇವಿಸುವ ದನಕರುಗಳು ಆರೋಗ್ಯಶಾಲಿಯಾದರೆ, ಸತ್ವಹೀನವಾದ ಅಕ್ಕಿಯನ್ನು ತಿನ್ನುವ ಮನುಷ್ಯರು ರೋಗದ ಮೊಟ್ಟೆಗಳಾದರು!! ಅಪೌಷ್ಟಿಕತೆಗೆ ಸಂಬಂಧಿಸಿದ ಹಲವಾರು ರೋಗರುಜಿನಗಳಿಗೆ ಮಾನವ ಶರೀರವು ಆಶ್ರಯತಾಣವಾಯಿತು! ಈ ವಿಚಾರ ಹಾಗಿರಲೀ, ಈಗ ಇದಕ್ಕೆ ಸಂಬಂಧಿಸಿದ ಅಣುವಿಜ್ಞಾನವನ್ನು ಕುರಿತ ಮಾಹಿತಿಯನ್ನು ಗಮನಿಸೋಣ.
ಮೇಲೆ ಸೂಚಿಸಿದಂತೆ ಭತ್ತವನ್ನು ಕುಟ್ಟಿದಾಗ, ದೊರೆಯುವ ಅಕ್ಕಿಯ ಲೆಕ್ಕ, ಆರೀತಿ ಅಕ್ಕಿಯನ್ನು ತಯಾರಿಸುವಾಗ ದೊರೆಯುವ ತೌಡಿನ ಲೆಕ್ಕ, ಈರೀತಿ ದೊರೆಯುವ ತೌಡನ್ನು ದನಕರುಕಳಿಗೆ ಉಣಿಸಿದಾಗ, ಉತ್ಪಾದನೆಯಾಗುವ ಹಾಲಿನ ಪ್ರಮಾಣ ಇತ್ಯಾದಿಗಳ ಲೆಕ್ಕವನ್ನು ಕರಾರುವಾಕ್ಕಾಗಿ ನೀಡುವ ಅಣುವಿಜ್ಞಾನವನ್ನು ಕುರಿತ ಮಾಹಿತಿಯು ಸಿರಿಭೂವಲಯದಲ್ಲಿ ಅಡಕವಾಗಿದೆ. ನೋಡಿ:
ಅಕ್ಕಿಯಕುಟ್ಟಲುಬರುವತೌಡೆಲ್ಲರ| ಚಿಕ್ಕನುಚ್ಚಕ್ಕಿಯಿಂಬಿಡಿಸಿ| ಅಕ್ಕಪಕ್ಕದಹಸುಕರುಗಳಿಗುಣಿಸುವ| ಅಕ್ಕಿಯಲೆಕ್ಕವದೆಂತು||
ಈ ಲೆಕ್ಕಾಚಾರವು ಇಲ್ಲಿಗೇ ಮುಗಿಯುವುದಿಲ್ಲ!! ಒಂದು ಅಗುಳು ಅನ್ನವನ್ನು ತಿಂದಾಗ ನಮ್ಮ ಶರೀರಕ್ಕೆ ಅದರಿಂದ ಒದಗುವ ಶಕ್ತಿಯ ಪ್ರಮಾಣವೆಷ್ಟು ಎಂಬುದನ್ನು ಪ್ರೀತಿಯಿಂದ ಹೇಳುವುದು ಹೇಗೆ? ಅನ್ನ ಹಾಗೂ ಚಿನ್ನದಲ್ಲಿ ಇರುವ ಭೇದದ ಮರ್ಮವನ್ನು ಚೆನ್ನಾಗಿ ಹೇಳುವುದು ಹೇಗೆ? ಎಂದೂ ಸಿರಿಭೂವಲಯವು ಸೂಚಿಸಿರುವುದಿದೆ! ನೋಡಿ:
” ಅನ್ನದಕಾಳೊಂದರಿಂಬಹಶಕ್ತಿಯ| ನನ್ನಿಯಿಂಪೇಳುವುದೆಂತು| ಅನಚಿನಗಳಲ್ಲಿರುವಭೇದದಮರ್ಮವ| ಚೆನ್ನಾಗಿಪೇಳುವುದೆಂತು||”
ಪದಾರ್ಥದ ಗಣಿತಾತ್ಮಕವಾದ ಲೆಕ್ಕಾಚಾರದಲ್ಲಿ ಬರುವ ಊಹೆ/ಅನುಮಾನ/ ಸಂದೇಹಗಳು ಲೆಕ್ಕವಿಡಲಾಗದಷ್ಟು ಇರುತ್ತವೆ! ಅಣುವಿನಲ್ಲಿ ಅಡಗಿರುವ ಜೀವ ವಿಜ್ಞಾನವನ್ನು ಹೇಳುವುದಕ್ಕೆ ಸಾಕಷ್ಟು ಕಾಲಾವಕಾಶಬೇಕಿರುತ್ತದೆ. ಅದನ್ನು ಒಂದು ಕ್ಷಣದಲ್ಲಿ ಹೇಳಾಲಾಗದು ಎಂದು ಸಿರಿಭೂವಲಯವು ಖಚಿತವಾಗಿ ಸೂಚಿಸಿರುವುದಿದೆ! ನೋಡಿ:
”ಗಣಿತಪ್ರಾರೂಪಣೆಯೊಳುಬರ್ಪದ್ರವ್ಯದ|ಗಣನೆಯನಂತವಿಕಲ್ಪ| ಅಣುವಿನೊಳಗಿರ್ಪಜೀವವಿಜ್ಞಾನವ| ಕ್ಷಣದೊಳ್ ಪೇಳಲಶಕ್ಯ||” ಇಂಥ ವಿಚಾರಗಳ ಸಾಕಷ್ಟು ಮಾಹಿತಿಗಳು ೯ ಖಂಡಗಳ ಸಿರಿಭೂವಲಯದ ಪ್ರಥಮಖಂಡದ ೫೯ ಅಧ್ಯಾಯಗಳ ಅಂತರ್ಸಾಹಿತ್ಯದಲ್ಲೇ ಸಾಕಷ್ಟು ಪ್ರಮಾಣದಲ್ಲಿ ಉಗಮವಾಗಿರುವುದನ್ನು ಕಂಡದ್ದಾಗಿದೆ. ಇವಾವುದೂ ಸಿರಿಭೂವಲಯದ ಸರಳ ಪರಿಚಯಕಾರನ ಸ್ವಕಪೋಲಕಲ್ಪಿತ ವಿಚಾರಗಳಲ್ಲವೆಂಬುದು ಖಚಿತ!
ಇದರೊಂದಿಗೆ ಇಲ್ಲಿ ಇನ್ನೂಒಂದು ಮಾಹಿತಿಯನ್ನು ಗಮನಿಸುವು ಅಗತ್ಯವಿದೆ.   ವೈದ್ಯಕೀಯಶಿಕ್ಷಣ ಪಡೆಯಲು ಹೋಗುವವರಿಗೆ ಗಣಿತಶಾಸ್ತ್ರ;  ಅಣುವಿಜ್ಞಾನದ  ಸಮರ್ಪಕ ಪರಿಚಯವಿರಲೇಬೇಕಾದುದು ಅಗತ್ಯವೆಂಬ ಮಾಹಿತಿಯನ್ನು ಆಧುನಿಕ ವಿಜ್ಞಾನಿಗಳು ರೂಪಿಸಿದ್ದೆಂದು ಕೆಲವರು ಭಾವಿಸಬಹುದು. ಆದರೆ ಈ ವಿಚಾರವನ್ನೂ ಸಿರಿಭೂವಲಯದ ಕವಿಯು ತನ್ನ ಕಾವ್ಯದಲ್ಲಿ ಸೂಚಿಸಿರುವುದಿದೆ!! ನೋಡಿ: ”ಗುಣವೃದ್ಧಿಯಾಗುವಗಣಿತವನರಿಯದೆ|ಅಣುಪರಮಾಣುಗಳ|ಅಣಕದಿಂಪುಟ್ಟುವವಿಪರೀತರೋಗದಾ|ಎಣಿಕೆಯನರಿಯಲಶಕ್ಯ||” ಎಂದು ಖಚಿತವಾಗಿ ನಮೂದಿಸಲಾಗಿದೆ!!  ಅಂದಮೇಲೆ ವೈದ್ಯಕೀಯದ ಅಧ್ಯಯನಮಾಡುವವರಿಗೆ ಗಣಿತ ಹಾಗೂ ಅಣುವಿಜ್ಞಾನದ ಪರಿಚಯವು ಅತ್ಯಗತ್ಯವೆಂಬ ಮಾಹಿತಿಯು ಪ್ರಾಚೀನಭಾರತೀಯರಿಗೆ ತಿಳಿದಿತ್ತೆಂಬುದರಲ್ಲಿ ಸಂದೇಹಕ್ಕೆ ಅವಕಾಶವೇಇಲ್ಲ!!! ಓದುಗರ ತಲೆಯಲ್ಲಿ ಇದನ್ನು ಕುರಿತು ಇನ್ನೂ ಸಂದೇಹವಿದ್ದಲ್ಲಿ ಮೂಲಕೃತಿಯಲ್ಲೇ ಈ ಮಾಹಿತಿಯ ವಿವರವನ್ನು ನೋಡಿ ಪರಿಶೀಲಿಸಬಹುದಾಗಿದೆ.
                                                                                                            -ಸಿರಿಭೂವಲಯದಸುಧಾರ್ಥಿ.

Sunday, 2 February 2020

ಸಿರಿಭೂವಲಯದ ಕಟ್ಟಡಗಳ ಸೊಬಗು!!!

 ಇಂದ್ರಭವನಗಳ ರಚನೆ ಹಾಗೂ ವಿಸ್ತಾರ ಗೊತ್ತೆ!!??

ಆಧುನಿಕ ಪರಿಸರದಲ್ಲಿ ಜಗತ್ತಿನಾದ್ಯಂತವೂ ಸುಂದರವಾದ ಕಟ್ಟಡಗಳು ನಿರ್ಮಾಣವಾಗುತ್ತಿರುವುದನ್ನು ನೋಡುತ್ತಿದ್ದೇವೆ. ಇಂಥ ಕಟ್ಟಡಗಳ ನಿರ್ಮಾಣವು ಭಾರತಲ್ಲಿಯೂ ಕಾಣಬರುತ್ತಿದೆ. ಈ ಕಟ್ಟಡಗಳ ಒಳಾಂಗಣದ ಹಾಗೂ ಹೊರಾಂಗಣದ  ಅಲಂಕಾರಕ್ಕಾಗಿ ಹಲವಾರು ವಿನ್ಯಾಸಗಳ ಗಾಜಿನ  ಬೃಹತ್ ಹಲಗೆಗಳನ್ನು ಬಳಸುವುದು, ಅವುಗಳಿಗೆ ಅನುಗುಣವಾದ ನಯವಾದ ಗಾರೆಯಕೆಲಸದ ಕುಶಲತೆ ಇತ್ಯಾದಿಗಳು ಊಹಾತೀತವಾಗಿ ಬಳಕೆಗೆ ಬಂದಿರುವುದು ಸರಿಯಷ್ಟೇ.
ಗಾಜಿನ ತಯಾರಿಕೆಯ ಇತಿಹಾಸದಲ್ಲಿ ಬೆಲ್ಜಿಯಂದೇಶವು ಹೆಚ್ಚು ಪ್ರಸಿದ್ಧಿ ಪಡೆದಿದೆ.  ಗಾಜಿನ ಹಲಗೆಗೆಳಲ್ಲಿ- ವಿಶೇಷವಾಗಿ ಕನ್ನಡಿಗಳಲ್ಲಿ- ಗಾಳಿಯನ್ನು ಬಳಸಿ ನಿರೂಪಿಸುವ ಕಲಾಕೌಶಲ್ಯವು ಬಹಳ ಮನಮೋಹಕವಾಗಿರುವುದೂ ನಿಶ್ಚಯ!
 ಈ ರೀತಿಯ ಕೌಶಲ್ಯವು ಇಂದಿನ ಆಧುನಿಕ ವಿಜ್ಞಾನದ  ಆವಿಷ್ಕಾರದ ಫಲ ಎಂಬುದರಲ್ಲಿ ಇಂದಿನವರಿಗೆ ಯಾವುದೇ ರೀತಿಯ ಸಂಶಯವಿರುವುದಿಲ್ಲ!  ಆದರೆ, ಇದೆಲ್ಲವನ್ನೂ ಮೀರಿಸಿದ ಕೌಶಲ್ಯವು ಪ್ರಾಚೀನಭಾರತೀಯರಿಗೆ ಕರಗತವಾಗಿತ್ತೆಂದರೆ ಅದನ್ನು ಯಾರೂ ನಂಬಲಾರರು!!
ಇಂದಿನ ಕಟ್ಟಡನಿರ್ಮಾಣ ತಂತ್ರಜ್ಞಾನವು ಎಷ್ಟು ಮುಂದುವರೆದಿದೆಯೆಂದರೆ, ಮುಗಿಲಿಗೆ ಮುತ್ತಿಕ್ಕುವಂತೆ ಗಗನದತ್ತ ತಲೆಎತ್ತಿದ ಕಟ್ಟಡಗಳ ನಿರ್ಮಾಣವು ಬಹಳ ಬಿರುಸಿನ ಪೈಪೋಟಿಯಿಂದ ಮುಂದುವರೆದು ನಗರ ಪ್ರದೇಶಗಳಲ್ಲಿ ಕಟ್ಟಡಗಳೆಲ್ಲವೂ ಗಗನದಲ್ಲೇ ತೇಲುವಂತೆ ಭಾಸವಾಗುವುದು ಸಹಜ.
 ಇದೆಲ್ಲ ಭ್ರಮೆಯೂ ಎಷ್ಟೇ ಅದ್ಭುತವೆನಿಸಿದರೂ, ಈ ಕಟ್ಟಡಗಳ ಬುನಾದಿಗೆ ಭೂಮಿಯೇ ಆಧಾರವೆಂಬುದನ್ನು ಯಾರೂ ಅಲ್ಲಗಳೆಯಲಾಗದು!!  ಆದರೆ, ಸಿರಿಭೂವಲಯದಲ್ಲಿ ವರ್ಣಿತವಾಗಿರುವ  ಕಟ್ಟಡಗಳ ಪರಿ ಈ ರೀತಿಯದಲ್ಲ!! ಗಗನದಲ್ಲಿ ಹವಾರು ಲೋಕಗಳಿರುವುದನ್ನೂ,  ಅವುಗಳಲ್ಲಿ ನಿರ್ಮಾಣವಾಗಿರುವ ಊಹಾತೀತವಾದ ಕಟ್ಟಡಗಳ ಭವ್ಯತೆಯನ್ನೂ ವಿಸ್ತಾರವನ್ನೂ  ಸಿರಿಭೂವಲಯದಲ್ಲಿ ಕುಮುದೇಂದುಮುನಿಯು ವರ್ಣಿಸಿರುವುದಿದೆ!!
ಅಂದಿನ ಕಟ್ಟಡನಿರ್ಮಾಣಶೈಲಿಯ ವಿವರಗಳನ್ನು ಗಮನಿಸಿದಾಗ, ೧೨೦೦ ವರ್ಷಗಳಹಿಂದೆಯೂ ಕನ್ನಡಿಯ (ದರ್ಪಣ) ಬಳಕೆಇತ್ತೆಂಬುದು ಖಚಿತವಾಗುತ್ತದೆ. ಈಗಲೂ ಕನ್ನಡಿಯಲ್ಲಿ ಗಾಳಿಯನ್ನು ಬಳಸಿ ಸುಂದರವಾದ ಚಿತ್ರಗಳನ್ನು ಬಿಡಿಸುವ ಕಲೆಯು ಜೀವಂತವಾಗಿದೆ.  ಕಟ್ಟಡದ ನಿರ್ಮಾಣದಲ್ಲಿ ಇಂಥ ಗಾಜಿನಕನ್ನಡಿಯಂತೆ ನುಣುಪಾಗಿರುವ ನೆಲವನ್ನು ರಚನೆ ಮಾಡುತ್ತಿದ್ದರೆಂಬುದು ಹಾಗೂ ಅಂದಿನವರ ಕಟ್ಟಡನಿರ್ಮಾಣದ ಕೌಶಲ್ಯವು ಎಷ್ಟು ಉನ್ನತವಾಗಿದ್ದಿತೆಂಬುದು ಅಚ್ಚರಿಯ ವಿಚಾರವಾಗಿದೆ.
ಇಂದಿನ ಕಟ್ಟಡನಿರ್ಮಾಣದ ಸಾಮಗ್ರಿಗಳ ವಿಚಾರ ಬಂದಾಗ ಅಲ್ಲಿ ಕಲ್ಲು, ಗಾರೆ/ಸಿಮೆಂಟ್,  ಇಟ್ಟಿಗೆ , ಮರಳು ಮುಂತಾದುವು  ಅನಿವಾರ್ಯವಾದವಾಗಿರುತ್ತವೆ. ಆದರೆ  ಸಿರಿಭೂವಲಯದ ’ ದೇವನಿವಾಸ’ ಹಾಗೂ ’ಇಂದ್ರಭವನಗಳ’  ನಿರ್ಮಾಣದಲ್ಲಿ ಚಿನ್ನ, ಬೆಳ್ಳಿ, ವಜ್ರ ಹಾಗೂ ನವರತ್ನಗಳ ಬಳಕೆಯು ತೀರ ಸಾಮಾನ್ಯವಾದುದು!!!
 ಇವುಗಳ ನಿರ್ಮಾಣಕ್ಕೆ  ತಳಪಾಯ ಹಾಕಲು ಭೂಮಿಯ ಆಧಾರವೂ ಬೇಕಿಲ್ಲ!!  ಇವೆಲ್ಲವೂ ನಿರ್ಮಾಣವಾಗಿರುವುದು ಬಾಹ್ಯಾಕಾಶದಲ್ಲಿ ಎಂಬುದನ್ನು ನಾವು ಗಮನದಲ್ಲಿರಿಸಿಕೊಳ್ಳಬೇಕು!!!
 ಈ ವಿವರಣೆಯನ್ನು ಓದುತ್ತಿರುವಂತೆಯೇ ನಿಮ್ಮ ಅಂತರಂಗದಲ್ಲಿ ಇವೆಲ್ಲವೂ ಕೇವಲ ಕಲ್ಪನೆಯ ಮಾಹಿತಿಗಳು ಎಂಬ ಹುಸಿನಗೆಯ ಭಾವನೆ ಉಂಟಾಗಿದೆಯೆಂಬುದು ನನಗೆ ಅರಿವಿದೆ. ಆದರೂ ಕಾವ್ಯಾಂತರಂಗದಲ್ಲಿ ಅಡಗಿದ್ದು ತನ್ನ ಒಳಗಣ್ಣಿಗೆ ಕಾಣಿಸಿದ ಮಾಹಿತಿಯನ್ನು ಇಲ್ಲಿ ವಿವರಿಸುವುದು ಈ ಕಾವ್ಯದ ಪರಿಚಯಕಾರನಿಗೆ ಅನಿವಾರ್ಯವಾದುದು.  ಇದನ್ನು ಒಪ್ಪಿಕೊಂಡು ನಂಬುವುದು ಅಥವಾ ನಂಬದಿರುವುದು ಓದುಗರ ಇಚ್ಛೆಗೆಬಿಟ್ಟ ಸಂಗತಿ. ಇದೊಂದು ರೀತಿಯ ವಿಲಕ್ಷಣವಾದ ಮಾಹಿತಿ (Fantastic) ಎಂದು ಬೇಕಾದರೂ ನೀವು ಇದನ್ನು ನಿರ್ಧರಿಸಬಹುದು.  ಏನೇ ಆಗಲೀ  ಸಿರಿಭೂವಲಯಕಾವ್ಯದಲ್ಲಿ ಇದಕ್ಕೆ ಸಂಬಂಧಿಸಿದ ಖಚಿತವಾದ ವಿವರಣೆಗಳು ತುಂಬಿರುವುದು ನಿಶ್ಚಯ. ನೋಡಿ:
”ಣವರತ್ನದಿಂದಶೋಭಿತವಾದಭವನದೆ|ಅವೆರಡೂಭಾಗದಲಿಪ್ರವರದ ಭರಭಾಗ ಹದಿನಾರುಸಾವಿರಯೋಜನವಿಹವು||
ಅಸುರರಿಗೆ ೬೪ ಲಕ್ಷಭವನಗಳು, ನಾಗಕುವರರಿಗೆ ೮೪ಲಕ್ಷಭವನಗಳು,ಸುಪರ್ಣರಿಗೆ೭೨ ಲಕ್ಷ, ಣವದೀಪಕುವರರ್ಗೆಪ್ಪತ್ತಾರುಲಕ್ಷ,..  ಇತ್ಯಾದಿಗಳ ಲೆಕ್ಕಹೇಳಿ,  ಧರಣಾನಂದ, ವೇಣುಧಾರಿ, ವಸಿಷ್ಟ, ಜಲಕಾಂತ, ಮಹಾಘೋಷ ,ಹರಿಕಾಂತ, ಮಿತವಾಹನ, ಮುಂತಾದ ಹಲವಾರು ಇಂದ್ರರ ಹೆಸರು ಸೂಚಿಸಿ,  ಅವರಿಗಾಗಿರುವ ಹಲವಾರು ಲಕ್ಷ ಇಂದ್ರಭವನಗಳ ವಿವರನೀಡಲಾಗಿದೆ!!
ಇವುಗಳನ್ನೆಲ್ಲ ಲೆಕ್ಕಹಾಕಿ ಒಟ್ಟುಗೂಡಿಸಿ, ಅದನ್ನು ಕುರಿತು ಒಟ್ಟು ಏಳುಕೋಟಿ ಎಪ್ಪತ್ತೆರಡು ಲಕ್ಷ ಭನಗಳಿರುವುದೆಂದು ಸೂಚಿಸಲಾಗಿದೆ!! ನೋಡಿ: ’ಪಿಡಿದಿರುವನೆಲ್ಲಕೂಡಲುಏಳುಕೋಟಿಯಕಡೆಗೆ| ಎಪ್ಪತ್ತೆರಡುಲಕ್ಷಗಳು| ಪೊಡವಿಯ ಇಂದ್ರಭವನಗಳಿಹವು| ಬಿಡದೆಲೆಕ್ಕಗಳಮ್’|| ಈ ರೀತಿಯಲ್ಲಿ ಸೂಚಿಸಿರುವ ಇಂದ್ರಭವನಗಳ ಲೆಕ್ಕವು  ಸರಿಯೋ? ತಪ್ಪೋ?? ಎಂಬುದನ್ನು ಪರೀಕ್ಷಿಸುವುಇದಕ್ಕಾದರೂ ಕುತೂಹಲಿಗಳು ಇಲ್ಲಿನ ಲೆಕ್ಕವನ್ನು ಪರಿಶೀಲಿಸಬೇಕು!
 ಇದು ಅಂತರಿಕ್ಷದಲ್ಲಿ ಭವನಗಳು ಎಷ್ಟಿವೆಯೆಂಬುದನ್ನು ಕುರಿತು ಲೆಕ್ಕವಾಯಿತು.  ಇನ್ನು ಇವುಗಳು ನಿರ್ಮಾಣವಾಗಿರುವ ನಿವೇಶದ ಒಟ್ಟು ವಿಸ್ತೀರ್ಣವು  ಎಷ್ಟಿರಬಹುದು!? ಕಾವ್ಯದಲ್ಲಿ ಹದಿನಾರು ಸಾವಿರ ಯೋಜನಗಳೆಂದು ಸೂಚಿಸಲಾಗಿದೆ!!   ( ಒಂದು ಯೋಜನ ದೂರವು  ಸುಮಾರು ೧೨  ಮೈಲುಗಳಿಗೆ ಸಮ)  ವಿಸ್ಥೀರ್ಣದಲ್ಲಿ ಒಂದು ಯೋಜನವೆಂದರೆ ಅದು ೧೪೪ ಚದರ ಮೈಲಿಗಳಾಗುತ್ತದೆ!  ಅಲ್ಲಿಗೆ ಈ ಭವನಗಳ ಒಟ್ಟು ವಿಸ್ತೀರ್ಣವು ಎಷ್ಟು ? ಎಂಬುದನ್ನು ಕುರಿತು ನಿಮಗೆ ಬಿಡುವಾದಾಗ ಲೆಕ್ಕಹಾಕಿರಿ!!!
ಅಸುರರಿಗೆ ೬೪ಲಕ್ಷಭವನಗಳೆಂದು ಸೂಚಿಸಿರುವುದು ಸಾರಿಯಷ್ಟೇ. ಅವರುಗಳಿರುವ ಅವನಿಯು ’ಚಿತ್ರಾಪೃಥ್ವಿಯ’ ಕೆಳಗಿರುವುದೆಂದು ಸೂಚಿಸಲಾಗಿದೆ.
 ’ಚಿತ್ರಾಪೃಥ್ವಿಯ’ ಕೆಳಗಿರುವ ಅವನಿಯಲ್ಲಿ ಅಲ್ಪರು ಅಧಿಕರೆಂದು ಹೇಳಲಾಗಿದೆ. ಇಲ್ಲಿಂದ ೨ ಸಾವಿರ ಯೋಜನದ ಕೆಳಗೆ ಇದಕ್ಕೆ ಸೇರದಂತಿರುವ ೪೨ಸಾವಿರ ಯೋಜನದ ಕೆಳಗೆ ಮಹರ್ಧಿಕರಿರುತ್ತಾರೆ! ಆಕಡೆ ಕೆಳಗೆ ಒಂದು ಲಕ್ಷಯೋಜನದ ಅಡಿಯಲ್ಲಿ  ಮೂರಾರ್ಧಿಧಾರಕರ ನಿವಾಸಗಳಿರುತ್ತವೆ.
 ಅವುಗಳೆಲ್ಲವೂ ವಿಸ್ತಾರವಾದ ಚತುಷ್ಕೋಣ ರೂಪದಲ್ಲಿರುವುವೆಂದೂ, ಅವುಗಳು  ವಜ್ರಮಯವಾದ ದ್ವಾರಗಳಿಂದ ಶೋಭಿಸುವ ಅವನಿಯ ಕಾವ್ಯ ಭೂವಲಯ ಎಂದು ವಿವರಿಸಲಾಗಿದೆ.
 ಒಟ್ಟು ೧೪೪೦೦೦ ಯೋಜನಗಳ ವ್ಯಾಪ್ತಿಯಲ್ಲಿ ಈ ಚಿತ್ರಾಪೃಥ್ವಿ, ಮಹರ್ಧಿಕರು ಹಾಗೂ ಮೂರಾರ್ಧಿಧಾರಕರ ವಸತಿ ಪ್ರದೇಶವು ಹರಡಿಕೊಂಡಿದ್ದರೆ, ಅದರ ವಿಸ್ಥಾರವು ಎಷ್ಟಾಗುವುದೆಂಬುದನ್ನು ಊಹಿಸಿಕೊಳ್ಳಬೇಕು!!!
ಪ್ರಿಯ ಓದುಗರೇ, ಸಿರಿಭೂವಲಯಕಾವ್ಯದ ಈಭಾಗದಲ್ಲಿ ವಿವರಿಸಿರುವ ಮಾಹಿತಿಯು ಕೇವಲ ಕವಿಕಲ್ಪನೆ ಎಂದು ಉಪೇಕ್ಷಿಸಲಾಗದು.ಆಕಾಶದ ವಿಸ್ತಾರವು ಎಷ್ಟಿರುವುದೆಂಬುದನ್ನು ಮಾನವಮಾತ್ರದವರು ಇದುವರೆವಿಗೂ ಅಳೆಯಲಾಗಿಲ್ಲವೆಂಬುದು ಸರ್ವವಿದಿತ.  ಮಂಗಳಗ್ರಹಕ್ಕೆ ಬಾರತವು ಕಳೆಸಿದ ಅತ್ಯಂತವೇಗವಾಗಿ ಚಲಿಸಿದ ಬಾಹ್ಯಾಕಾಶನೌಕೆಯು ಅಲ್ಲಿಗೆ ತಲುಪಲು ೩೬೫ ದಿನಗಳ ಸಮಯ ಹಿಡಿಯಿತು! ಅಂದರೆ ಅಷ್ಟು ದೂರದ ಪ್ರಯಾಣವಾಯಿತು. ಇಲ್ಲಿ ಸರ್ವಜ್ಞಸ್ವರೂಪಿಯಾದ ಕುಮುದೇಂದುಮುನಿಯು ಇವೆಲ್ಲ ಕಟ್ಟಡಗಳು ವ್ಯಾಪಿಸಿರುವ ಅನೂಹ್ಯವಾದ ನಗರಗಳ ವೈಭವವನ್ನು ಒಂದು ಅಂದಾಜಿನ ರೂಪದಲ್ಲೇ ಆಗಿರಲೀ  ಲೆಕ್ಕಹಾಕಿ ಅದನ್ನು ಯೋಜನದ ಮಾನದಲ್ಲಿ ಸೂಚಿಸಿರುವುದನ್ನು ಊಹಿಸಿಕೊಳ್ಳಲೂ ನಮಗೆ ಸಾಧ್ಯವಾಗದು.
ಕವಿಯು ನೀಡಿರುವ ಈ ಲೆಕ್ಕಾಚಾರವು ಅವನ ಯೋಗಬಲದ ಪ್ರಯಾಣದಿಂದ ಪ್ರತ್ಯಕ್ಷವಾಗಿ ಕಂಡ ಪರಿಸರದ ಚಿತ್ರಣವೆಂಬುದನ್ನು ನಿರಾಕರಿಸಲಾಗದು.
 ಒಂದು ಯೋಜನವೆಂದರೆ ನಮ್ಮ ಒಂದು ಮಿಲಿಮೀಟರಿಗೆ ಸಮಾನವೆಂಬ ಲೆಕ್ಕಾಚಾರದಲ್ಲಿ ಈ ಅದ್ಭುತ ಬಡಾವಣೆಯ ನಕ್ಷೆ ತಯಾರಿಸಿದರೆ, ಅದರ ಸ್ವರೂಪವು ಹೇಗಿರಬಹುದೆಂಬುದನ್ನು ಶಕ್ತಿಯಿರುವವರು ಚಿತ್ರಿಸಿ ತೋರಿಸಬಹುದಲ್ಲವೇ!!??
 ಭೂಮಿಯ ಆಧಾರವೇ ಇಲ್ಲದೆ ಗಗನದಲ್ಲಿ ನಿರ್ಮಿತವಾಗಿರುವ ಈ ವೈಭವೋಪೇತವಾದ ಬೃಹತ್ ಇಂದ್ರಭವನಗಳ ರಚನೆಗೆ ಬಳಕೆಯಾಗಿರುವ ಸಾಮಗ್ರಿಯು ಕೇವಲ ಕಲ್ಲು, ಇಟ್ಟಿಗೆ, ಗಾರೆಯಲ್ಲ.  ನವರತ್ನಕೆತ್ತಿದ ಹಾಸುಗಲ್ಲುಗಳು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.  ಮತ್ತು ಈ ಇಂದ್ರಭವನಗಳ ನೆಲವು  ’ನವರತ್ನಕೆತ್ತಿದ ಹಸೆಯ ದರ್ಪಣದಂತೆ ಹೊಳೆವ ನೆಲ ’ ಎಂಬ ವರ್ಣನೆಯು ನಿಜಕ್ಕೂ ಕವಿ ಕಲ್ಪನೆಯಲ್ಲ!!
ನಭೋಮಂಡಲದಲ್ಲಿ ಯಾವುದೇ ಆಧಾರವಿಲ್ಲದೇ ಇಂದ್ರಭವನಗಳನ್ನು ನಿರ್ಮಿಸುವುದು  ಹುಚ್ಚುಕಲ್ಪನೆ ಎಂದು ನಿರಾಕರಿಸಲಾಗದು!  ಆಧುನಿಕ ವಿಜ್ಞಾನವು ನಭೋಮಂಡಲಕ್ಕೆ ಕೃತಕ ಉಪಗ್ರಹಗಳನ್ನು  ಕಳಿಸಿ ಅಲ್ಲಿ ಸ್ಥಿರಕ್ಷೆಯಲ್ಲಿ ಸೇರಿಸುವಮೂಲಕ ಈ ಸಾಧನೆಯನ್ನು  ಸಾಕ್ಷಾತ್ಕರಿಸಿದ್ದಾಗಿದೆ!
ಇನ್ನು ಅಷ್ಟೊಂದು ವೈಭವೋಪೇತವಾದ ಇಂದ್ರಭವನಗಳ ನಿರ್ಮಾಣಕ್ಕೆ ಅಗತ್ಯವಾದ ಹಣಕಾಸಿನ ವ್ಯವಸ್ಥೆಗೂ  ಚಿಂತಿಸುವ ಅಗತ್ಯವಿಲ್ಲ!! ಜಗತ್ತಿನ ವಿಚಾರಬೇಡ, ಭಾರತದ ವಿಚಾರಬೇಡ, ನಮ್ಮ ಕರ್ನಾಟಕದ ರಾಜಕಾರಣಿಗಳು, ಅಧಿಕಾರಿಗಳು, ಉದ್ದಿಮೆದಾರರು ಸರ್ಕಾರಕ್ಕೆ ವಂಚಿಸಿ ಸಂಗ್ರಹಿಸಿಕೊಂಡಿರುವ ಸಂಪತ್ತಿನ ಪ್ರಮಾಣವನ್ನೇ ಸರಿಯಾಗಿ ಲೆಕ್ಕಹಾಕಿಕೊಳ್ಳಿ ಅದು ಇಂಥ ಮಹಾ ಇಂದ್ರಭವನಗಳ ನಗರ ನಿರ್ಮಾಣಕ್ಕೆ ಸಾಕಾಗಿ ಮಿಗುವಷ್ಟಾಗುತ್ತದೆ!!
 ಕುಶಲಕರ್ಮಿಗಳ ವಿಚಾರ ಬಂದಾಗ ಸ್ವಲ್ಪ ಸಮಸ್ಯೆ ಕಾಣಿಸಬಹುದು, ಭಾರತದಲ್ಲಿರುವ ಜಗತ್ಪ್ರಸಿದ್ಧವಾದ  ಸಾವಿರಾರು ದೇವಾಲಯಗಳ ಕುಸುರಿಕೆಲಸವನ್ನು ಮಾಡಿದಂಥ  ಶ್ರದ್ಧಾವಂತ ಪ್ರಾಮಾಣಿಕ ಕುಶಲಕರ್ಮಿಗಳು ಈಗ ಸಿಗದಿರಬಹುದು. ಈಗಿನ ಕುಶಲಕರ್ಮಿಗಳಿಗೆ ಮಾಡಲು ಉದ್ಯೋಗಬೇಕು, ವೆಚ್ಚಕ್ಕೆ ಹಣಬೇಕು! ಆದರೆ ಶ್ರಮವಹಿಸಿ ಕೆಲಸಮಾಡುವುದುಮಾತ್ರ ಯಾರಿಗೂ ಬೇಡದ ಸಂಗತಿ!! ಆದರೆ  ಈರೀತಿಯಲ್ಲಿ ಶ್ರಮವಹಿಸಿ ದುಡಿಯುವ ಕುಶಲಕರ್ಮಿಗಳು ಹಿಂದೆ  ಹೇರಳವಾಗಿದ್ದರು ಎಂಬುದಕ್ಕೆ  ಪ್ರತ್ಯಕ್ಷ ಸಾಕ್ಷಿಗಳು ಉಳಿದಿವೆ.
ಈ ವಿಚಾರಗಳ ಹಿನ್ನೆಲೆಯಲ್ಲಿ ನೀವು ಈ ಪರಿಚಯಲೇಖನದ ಮಾಹಿತಿಗಳನ್ನು ನಂಬಬಹುದು ಅಥವಾ ನಿರಾಕರಿಸಬಹುದು. ಕುಮುದೇಂದುಮುನಿಯ ಸಿರಿಭೂವಲಯವು ಇದನ್ನೆಲ್ಲ ವಿವರಿಸಿರುವುದಂತೂ ನಿಶ್ಚಯ.  ಇದು ಸುಧಾರ್ಥಿಯ ಸ್ವಕಪೋಲಕಲ್ಪಿತಮಾಹಿತಿಗಳಂತೂ ಅಲ್ಲ!!!
                                                    -ಸಿರಿಭೂವಲಯದಸುಧಾರ್ಥಿ.  

Saturday, 1 February 2020

ಶಾಸ್ತ್ರ ಮತ್ತು ವಿಜ್ಞಾನ


ಹಿಂದೆಲ್ಲ ನಮ್ಮ  ಸಾಮಾಜಿಕ ಜೀವನದಲ್ಲಿ ಶಾಸ್ತ್ರ ಮತ್ತು ಸಂಪ್ರದಾಯಗಳನ್ನು ಕುರಿತ ಮಾತುಗಳು ಕೇಳಿಬರುತ್ತಿದ್ದುವು. ಈಗ ಕಾಲಬದಲಾಗಿದೆ. ವ್ಯಕ್ತಿಜೀವನದ ಎಲ್ಲ ಕ್ಷೇತ್ರಗಳಲ್ಲೂ  ಆಧುನಿಕ ವಿಜ್ಞಾನವು ಆಕ್ರಮಣಮಾಡಿ; ಅವುಗಳನ್ನು ತನ್ನ ವಶಕ್ಕೆ ಪಡೆದಿದೆ.! ನಾವು ಮಾತನಾಡುವಾಗ ಬಳಸುವ ಪ್ರತಿಯೊಂದು ಪದಕ್ಕೂ ಹಲವಾರು ಅರ್ಥಗಳಿರುತ್ತವೆ. ಸಂದರ್ಭಕ್ಕೆ ಅನುಗುಣವಾಗಿ ಪ್ರತಿಯೊಂದು ಪದಕ್ಕೂ ನಾವು ಅರ್ಥವನ್ನು ಅನ್ವಯಿಸಿಕೊಳ್ಳಬೇಕಾಗುತ್ತದೆ.

ಶಾಸ್ತ್ರ ಎಂಬ ಪದಕ್ಕೆ ಸಂಪ್ರದಾಯ; ನಿಯಮ; ವಿಜ್ಞಾನ; ಮುಂತಾದ ಅರ್ಥಗಳಿವೆ. ವಿಜ್ಞಾನ ಎಂಬ ಪದಕ್ಕೆ ಶಾಸ್ತ್ರ; ಕ್ರಮಬದ್ಧವಾದ ತಿಳುವಳಿಕೆ; ವಿಶೇಷವಾದ ಜ್ಞಾನ; ಎಂಬ ಅರ್ಥವಿವರಣೆ ಇದೆ. ಆಂಗ್ಲಭಾಷೆಯಲ್ಲಿ ಸೈನ್ಸ್ ಎಂಬ ಪದಕ್ಕೆ ನಾಲೆಡ್ಜ್; (ತಿಳುವಳಿಕೆ) ಸಿಸ್ಟಮೆಟಿಕ್ ನಾಲೆಡ್ಜ್ (ಕ್ರಮಬದ್ಧವಾದ ತಿಳುವಳಿಕೆ) ಎಂಬ ಅರ್ಥವಿವರಣೆ ಇದೆ. ವಿಜ್ಞಾನಶಾಸ್ತ್ರ ಎಂಬ ಅರ್ಥವೂ ಬಳಕೆಯಲ್ಲಿದೆ. ಅಂದಮೇಲೆ; ಶಾಸ್ತ್ರ ಹಾಗೂ ವಿಜ್ಞಾನ ಎರಡೂ ಒಂದೇ ಎಂದಾಯಿತು! ಶಾಸ್ತ್ರವೆಂಬುದು ಭಾರತೀಯರು ಕಲ್ಪಿಸಿಕೊಂಡಿರುವ ಮೂಢನಂಬಿಕೆಗಳ ಕಂತೆ ಪುರಾಣವಾಗಿದೆ. ಆದರೆ, ವಿಜ್ಞಾನವೆಂಬುದು ಪಾಶ್ಚಿಮಾತ್ಯರು ಅಪಾರ ಬುದ್ಧಿಶಕ್ತಿಯಿಂದ ಪ್ರತ್ಯಕ್ಷ ಪ್ರಯೋಗಗಳ ಮೂಲಕ ಕಂಡುಕೊಂಡ ಸತ್ಯ ಸಂಗತಿಗಳಾಗಿವೆ ಎಂಬುದು ಸಾಮಾನ್ಯವಾಗಿ ವಿಜ್ಞಾನಾರಾಧಕರ ಭ್ರಮೆಯಾಗಿರುತ್ತದೆ.

ಶಾಸ್ತ್ರವನ್ನು ನಂಬಿದವರು; (ಶಾಸ್ತ್ರಿಗಳು) ವಿಜ್ಞಾನವನ್ನು ಅರಿತವರು (ವಿಜ್ಞಾನಿಗಳು) ಇಬ್ಬರೂ ಮಾತನ್ನು ನಿರಾಕರಿಸುವುದಿಲ್ಲ. ಆದರೆ ಇಂದಿನ ವಿಜ್ಞಾನದ ಆರಾಧಕರುಮಾತ್ರ ಯಾವಕಾರಣಕ್ಕೂ ಇವೆರಡೂ ಒಂದೇ ಎಂಬ ಮಾತನ್ನು ಒಪ್ಪುವುದೇ ಇಲ್ಲ! ಅವರ ದೃಷ್ಟಿಯಲ್ಲಿ ಪ್ರಾಚೀನ ಭಾರತದ ಶಾಸ್ತ್ರಜ್ಞಾನವು ಪ್ರಯೋಜನವಿಲ್ಲದುದು; ವಿಜ್ಞಾನ; ವ್ಶೆಜ್ಞಾನಿಕ ಎಂದರೆ ಸರ್ವಶಕ್ತವಾದ ಹೆಚ್ಚಿನ ಮೌಲ್ಯವುಳ್ಳ ವಿಚಾರ ಎಂದಾಗಿರುತ್ತದೆ!!

ಶಾಸ್ತ್ರಗಳು  ಸೂಚಿಸುವ ಮಾಹಿತಿಗಳಿಗೆ ನಮ್ಮ ಪ್ರಾಚೀನ ಋಷಿ ಮುನಿಗಳು ತಮ್ಮ ಏಕಾಗ್ರ ಚಿತ್ತದ  ತಪಸ್ಸಿನ ಮೂಲಕ ಪ್ರತ್ಯಕ್ಷವಾಗಿ ಕಂಡ ಅನುಭವವು ಆಧಾರವಾಗಿರುತ್ತದೆ. ಇವುಗಳಿಗೆಲ್ಲ ವೇದಗಳೇ ಮೂಲ ಆಕರವಾಗಿರುತ್ತದೆ. ವಿಜ್ಞಾನಕ್ಕೆ ವಿಜ್ಞಾನಿಗಳ ಸತತವಾದ ಪ್ರಯೋಗ ಹಾಗೂ ಇಂಥ ಪ್ರಯೋಗಗಳ ವಿವರ ಮತ್ತು ಅದರ ಪರಿಣಾಮಗಳನ್ನು ಕುರಿತ ಟಿಪ್ಪಣಿಗಳು ಮುಂದಿನವರಿಗೆ ಮೂಲ ಆಕರವಾಗುತ್ತವೆ.  ಶಾಸ್ತ್ರಗಳಿಗೆ ಮೂಲವಾದ ಸನಾತನ ಧರ್ಮವು ಅನಾದಿ ಅನಂತ. ಇದರ ಹೇಳಿಕೆಗಳನ್ನು ಯಾರೂ ಅಲ್ಲಗಳೆದು ಬದಲಿಸುವಂತಿಲ್ಲ. ವಿಜ್ಞಾನವು ಕೇವಲ 300-400 ವರ್ಷಗಳ ಈಚಿನ ಹಸುಗೂಸುಗಳು. ಇದರ ಹೇಳಿಕೆಗಳನ್ನು ಕಾಲಕ್ರಮದಲ್ಲಿ ಮುಂದಿನ ಮೇಧಾವಿಯು ನಿರಾಕರಿಸಿ ನೂತನವಾದ ಸಮರ್ಪಕವಾದ ಹೊಸ ವಿಚಾರವನ್ನು ಪ್ರತಿಪಾದಿಸಬಹುದು. (ವಿದ್ಯುದುಪಕರಣಗಳು; ದೂರವಾಣಿ; ದೂರಸಂಪರ್ಕ ಇತ್ಯಾದಿಗಳಲ್ಲಿ ನೂತನ ಆವಿಷ್ಕಾರದಿಂದ ಊಹಾತೀತವಾದ ಬದಲಾವಣೆಗಳಾಗಿರುವುದು ಸಹಜ ಸಂಗತಿ) ಆದರೆ, ವೇದಶಾಸ್ತ್ರ್ರಗಳಲ್ಲಿ ರೀತಿಯ ಹೊಸವಿಚಾರಗಳ ಪ್ರತಿಪಾದನೆಗೆ ಅವಕಾಶವೇ ಇಲ್ಲ!

ಪಂಚಭೂತಗಳಿಂದ ರೂಪುಗೊಂಡಿರುವ ಶರೀರವು ಶಾಶ್ವತವಾದುದಲ್ಲ. ಒಂದು ನಿರ್ದಿಷ್ಟ ಅವಧಿಯನಂತರ ಅದು ನಾಶವಾಗುವುದು ನಿಶ್ಚಿತ. ಆದರೆ ಶರೀರದಲ್ಲಿ ಅಂತರ್ಗತವಾಗಿರುವ ಆತ್ಮವು ಶಾಶ್ವತವಾದುದು. ಎಂದಿಗೂ ಇದು ನಾಶವಾಗುವ ವಸ್ತುವಲ್ಲ. ಆದರೆ ಇದು ನಮ್ಮ್ಮ ಕಣ್ಣಿಗೆ ಕಾಣಿಸುವ ವಸ್ತುವಲ್ಲ! ಶಾಸ್ತ್ರವು ಆತ್ಮದ ಇರವನ್ನು ಕಂಡುಕೊಂಡಿದೆ. ಶರೀರ ಹಾಗೂ ಆತ್ಮದ ನೆಮ್ಮದಿಗೆ; ಉನ್ನತಿಗೆ  ಅತ್ಯಗತ್ಯವಾದ ಮಾರ್ಗದರ್ಶನವನ್ನು ಶಾಸ್ತ್ರವು ಮಾಡುತ್ತದೆ. ಶರೀರವು ಕಣ್ಣಿಗೆ ಪ್ರತ್ಯಕ್ಷವಾಗಿ ಕಾಣುತ್ತದೆ. ಪ್ರತ್ಯಕ್ಷವಾಗಿ ಕಾಣುವುದನ್ನು ಮಾತ್ರವೇ ವಿಜ್ಞಾನವು ನಂಬುತ್ತದೆ. ಅದಕ್ಕೆ ಅಗತ್ಯವಾದ ಸೌಲಭ್ಯಗಳನ್ನು ನಿrmiಸಲು ಪ್ರಯೋಗಗಳನ್ನು ನಡೆಸಿ; ನೂತನವೆನಿಸುವ  ಹಲವಾರು ಸಾಧನ ಸಲಕರಣೆಗಳನ್ನು ರೂಪಿಸಿಕೊಡುತ್ತದೆ! ಆದರೆ, ಕಣ್ಣಿಗೆ ಕಾಣಿಸದ ಆತ್ಮದ ನೆಮ್ಮ್ಮದಿಗೆ, ಉನ್ನತಿಗೆ ವಿಜ್ಞಾನವು ಯಾವುದೇ ಮಾರ್ಗದರ್ಶನ ಮಾಡಲೂ ಶಕ್ತವಾಗಿಲ್ಲ!

ಆಧುನಿಕ ವಿಜ್ಞಾನವು ರೂಪಿಸಿರುವ ಅತ್ಯಾಧುನಿಕ ಸಾಧನ ಸಲಕರಣೆಗಳೆಲ್ಲವನ್ನೂ ಮೀರಿಸಿದ ಸೌಲಭ್ಯವನ್ನು ಪ್ರಾಚೀನ ಶಾಸ್ತ್ರ್ರಗಳ ಪರಿಣತರು ತಿಳಿದಿದ್ದರು. ಪಾರಮಾರ್ಥಕವಾಗಿ ಅವುಗಳು ನಿರುಪಯೋಗಿಯೆಂದು ಅವರು ಅವುಗಳನ್ನು ತ್ಯಜಿಸಿದ್ದರು. ಅವರ ಹೇಳಿಕೆಗಳ ಮೂಲಾಧಾದಲ್ಲಿಯೇ ಆಧುನಿಕ ವಿಜ್ಞಾನದ ತಳಪಾಯ ನಿಂತಿದೆ. ಕಾಲಕ್ರಮದಲ್ಲಿ ವಿಜ್ಞಾನದ ವಿಚಾರದಲ್ಲಿ ಮೇಧಾವಿಗಳಾದವರು ಅದನ್ನು ಪ್ರಾಯೋಗಿಕವಾಗಿ ಸಾಕ್ಷಾತ್ಕರಿಸಿಕೊಂಡಿದ್ದಾರೆ. ಅವರ ಮುಂದಿನ ಮೇಧಾವಿಗಳು ಅದನ್ನು ಇನ್ನೂ ಹೆಚ್ಚಾಗಿ ಅಭಿವೃದ್ಧಿ ಪಡಿಸುತ್ತಿರುವುದು  ನಿಜವಾದ ಸಂಗತಿಯಾಗಿದೆ.

ಮಾಹಿತಿಯನ್ನು ಖಚಿತವಾಗಿ ವಿವರಿಸುವ ಪ್ರಾಚೀನ ಸಾಹಿತ್ಯಕೃತಿಗಳು ನಮ್ಮ ಕನ್ನಡಭಾಷೆಯಲ್ಲಿಯೇ ಇನ್ನೂ ಜೀವಂತವಾಗಿವೆ. ಅವುಗಳನ್ನು ಶ್ರಮವಹಿಸಿ, ಅಧ್ಯಯನಮಾಡಿ ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ. ಸಮರ್ಪಕವಾಗಿ ಕಾರ್ಯ ನಡೆದಲ್ಲಿ ಶಾಸ್ತ್ರಕ್ಕೂ ವಿಜ್ಞಾನಕ್ಕೂ ಒಂದು ಹೊಸ ಅರ್ಥವ್ಯಾಪ್ತಿಯು ದಕ್ಕುತ್ತದೆ.

ಇದು ಕೇವಲ ವಾದಕ್ಕಾಗಿ ಸೂಚಿಸುವ ವಿಚಾರವಲ್ಲ. ಇಂದಿನ ವಿಜ್ಞಾನಿಗಳ ಅನುಭವ ಹಾಗೂ ಮಾಹಿತಿಗಳಿಗೆ ಮಾನ್ಯತೆ ನೀಡುವಂತಯೇ ಶಾಸ್ತ್ರ್ರಗಳು ನೀಡುವ ಮಾಹಿತಿಗಳ ವಿವರಗಳಿಗೂ ಮಾನ್ಯತೆ ನೀಡುವ ಮನೋಭಾವ ನಮ್ಮಲ್ಲಿ ಬೆಳೆಯಬೇಕಾಗಿದೆ. ಶಾಸ್ತ್ರ ಹಾಗೂ ವಿಜ್ಞಾನ ಎಂಬ ಎರಡು ಪದಗಳ ಅರ್ಥವೂ ಒಂದೇ ಆಗಿರುವುದರಿಂದ ಅದನ್ನು ನಿರಾಕರಿಸಲು ಸಾಧ್ಯವಿಲ್ಲ.

- ಸುಧಾರ್ಥಿ, ಹಾಸನ
*  *