Saturday 5 April 2014

ಕುಮುದೇಂದುಮುನಿಯ ಸಿರಿಭೂವಲಯವು ಒಂದು ಶಾಪಗ್ರಸ್ತ ಗ್ರಂಥವೇ?!



ಕುಮುದೇಂದುಮುನಿಯ ಸಿರಿಭೂವಲಯವನ್ನು ಸರಳವಾಗಿ ಪರಿಚಯಿಸುವ ದಿಸೆಯಲ್ಲಿ ನಾನು ರಚಿಸಿದ ಸಿರಿಭೂವಲಯದ ಒಳನೋಟ ವನ್ನು ಲೋಕಾರ್ಪಣೆಮಾಡುವಲ್ಲಿ ಕೃತಿಯ ಪ್ರಕಾಶನಸಂಸ್ಥೆಯವರು, ಸಭಿಕರಿಗೆ ಕೃತಿಯ ಪರಿಚಯ ಮಾಡಿಕೊಟ್ಟ ಪ್ರಸಿದ್ಧ ವಿದ್ವಾಂಸರು ಸೂಚಿಸಿದ ಅಭಿಪ್ರಾಯ ಕುರಿತು ನಾನು ವ್ಯಕ್ತಪಡಿಸಿದ ಭಾವನೆಗಳು ಇಲ್ಲಿ ನಮೂದಾಗಿದ್ದು ಅದಕ್ಕೆ ಸಂಬಂಧಿಸಿದಂತೆ ವಿವರಗಳನ್ನು ಸೂಚಿಸುತ್ತಿದ್ದೇನೆ.

ಕರ್ನಾಟಕದ ಸುಪ್ರಸಿದ್ಧ ಗಂಗವಂಶದ ರಾಜ ಸೈಗೊಟ್ಟ ಸಿವಮಾರನಿಗೂ ಪ್ರಖ್ಯಾತ ಸಾಮ್ರಾಟ ಅಮೋಘವರ್ಷ ನೃಪತುಂಗನಿಗೂ ಗುರುವಾಗಿದ್ದ ಯಾಪನೀಯ ಜೈನಸಂಪ್ರದಾಯದ ಕುಮುದೇಂದು ಮುನಿಯು ರಚಿಸಿರುವ ಸರ್ವಭಾಷಾಮಯೀಭಾಷಾ ಸಿರಿಭೂವಲಯವು ಸರ್ವಶಾಸ್ತ್ರಮಯಿ ಮಾತ್ರವಲ್ಲ; ಸರ್ವಜ್ಞಾನಮಯಿಯಾದ; ಸಾರ್ವಕಾಲಿಕವಾಗಿ ಅಚ್ಚರಿಯ ಕೃತಿಯೆನಿಸಿರುವ ಜಗತ್ತಿನ ಮಟ್ಟಮೊದಲ ಗಣಕಯಂತ್ರ ತಂತ್ರಾಂಶವಷ್ಟೇಅಲ್ಲ, ಜಗತ್ತಿನ ಪ್ರಪ್ರಥಮ ವಿಶ್ವಕೋಶವಾಗಿರುವ; ಏಕೈಕ ಕನ್ನಡ ಅಂಕಕಾವ್ಯವಾಗಿರುವ ಸಂಗತಿಯು ಜಗಜ್ಜಾಹಿರಾಗಿದೆ. ಇದು ಕನ್ನಡಭಾಷೆ, ಅಂಕಿ, ಅಕ್ಷರಗಳ ಉಗಮವನ್ನು ಕುರಿತಂತೆ  ನಿಖರವಾದ ಮಾಹಿತಿಯನ್ನು ನೀಡುವ 1200ವರ್ಷಗಳ ಹಿಂದಿನ ಖಚಿತವಾದ, ಅತ್ಯಂತ ಪ್ರಾಚೀನವಾದ, ಅಪರೂಪವಾದ ಜೀವಂತವಾದ ಸಾಕ್ಷಿಯಾಗಿದೆ! ಜೈನಸಂಪ್ರದಾಯದಲ್ಲಿ ಶಿಖರಪ್ರಾಯವಾದ ಧಾಮರ್ಿಕಸಾಹಿತ್ಯವೆನಿಸಿರುವ ಪಂಚಧವಳ ಗಳನ್ನು ರಚಿಸಿರುವ, ಗಣಿತಶಾಸ್ತ್ರಕ್ಕೆ ಸಂಬಂಧಿಸಿದಂತೆ ಮಾಹಾನ್ ಮೇಧಾವಿಯೆನಿಸಿರುವ  ವೀರಸೇನಾಚಾರ್ಯರು ಹಾಗೂ ಅವರ ಶಿಷ್ಯ ಜಿನಸೇನಾಚಾರ್ಯರಿಗೆ ಶಿಷ್ಯನಾಗಿದ್ದವನು ಕುಮುದೆಂದುಮುನಿ. ಇವನ ಕಾಲವನ್ನು ಕುರಿತಂತೆ ಆಧುನಿಕ ವಿದ್ವಾಂಸರಲ್ಲಿ ಒಮ್ಮತವಿಲ್ಲವಾದರೂ, ಕುಮುದೇಂದು ಮುನಿಯು ಗಣಿತಶಾಸ್ತ್ರದ ಪ್ರತಿಭೆಯಲ್ಲಿ ತನ್ನ ಗುರು ವೀರಸೇನಾಚಯಾರ್ಯರಿಗಿಂತಲೂ ಮುಂಚೂಣಿಯವನು ಎಂಬ ಅನಿಸಿಕೆಯನ್ನು ಸುಪ್ರಸಿದ್ಧ ಇತಿಹಾಸ ಪ್ರಾಧ್ಯಾಪಕ ಡಾ| ಎಸ್. ಶ್ರೀಕಂಠಶಾಸ್ತ್ರಿಯವರು ಸೂಚಿಸಿರುವುದಿದೆ.

ಇಂದಿನ ಆಧುನಿಕ ಕಾಲದಲ್ಲಿ ಮಾತ್ರವೇಅಲ್ಲ; ಪ್ರಾಯಶಃ ತನ್ನ ಜೀವಿತಕಾಲದಲ್ಲೂ ಕುಮುದೇಂದುಮುನಿಯು ರೀತಿಯ ಪ್ರಶಂಸೆಗೆ ಪಾತ್ರನಾಗಿದ್ದಿರಬೇಕು. ರೀತಿಯ ಲೋಕಪ್ರಸಿದ್ಧಿಯ ಸಿರಿಭೂವಲಯದ ಪ್ರಖ್ಯಾತಿಯನ್ನು ಸಹಿಸದೇ ಯಾರೋ ಮಹಾತ್ಮರು ಗ್ರಂಥಕ್ಕೆ ಶಾಪನೀಡಿರಬೇಕು. ಇದಕ್ಕೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಇಲ್ಲಿ ಓದುಗರು ಗಮನಿಸಬಹುದಾಗಿದೆ.

ಜೈನಸಂಪ್ರದಾಯದ ಪ್ರವರ್ತಕ ಆದಿತೀರ್ಥಂಕರನಿಗಿಂತಲೂ ಪ್ರಾಚೀನವಾದ, ಜಗತ್ತಿನ ಸಕಲಶಾಸ್ತ್ರ, ಜ್ಞಾನ-ವಿಜ್ಞಾನಗಳ ಮೂಲವಾದ; ಜಗತ್ತಿನ ಸೃಸ್ಟಿ ಸ್ಥಿತಿ ಲಯಗಳ ರಹಸ್ಯವನ್ನು ವಿವರಿಸುವ, ಅಪೌರುಷೇಯವಾದ  ವೇದಗಳ ಸತ್ಯತೆಯನ್ನು ಸೂಕ್ತವಾಗಿ ಸಮಥರ್ಿಸಿರುವುದು ಸಿರಿಭೂವಲಯದಲ್ಲಿ ಕಾಣಬಹುದಾದ ಅತಿಪ್ರಮುಖವಾದ ದೋಷವಾಗಿದೆ! ಕಾರಣದಿಂದಾಗಿಯೇ ಯಾರೋ ಮಹಾತ್ಮರು ಇದನ್ನು ಶಪಿಸಿರಬೇಕು. (ಕರ್ಣನಿಗೆ ಪರಶುರಾಮರ ಶಾಪವಿದ್ದಂತೆ!) ಅದರಿಂದಾಗಿಯೇ ಇದು ತನ್ನ ಯೋಗ್ಯತೆಗೆತಕ್ಕ ಪ್ರಶಂಸೆ ಹಾಗೂ ಪ್ರಖ್ಯಾತಿಯನ್ನು  ಪಡೆದೇಯಿಲ್ಲ ಎಂದು ನನ್ನ ಅನಿಸಿಕೆ.

ಕುಮುದೇಂದುವಿನ ಜೀವಿತಕಾಲದಲ್ಲಿ ಅಂದಿನ ಸಮಾಜವು ಸಿರಿಭೂವಲಯವನ್ನು ಯಾವರೀತಿಯಲ್ಲಿ ಸ್ವೀಕರಿಸಿತು ಎಂಬುದು  ಯಾರಿಗೂ ತಿಳಿಯದ ಸಂಗತಿಯಾಗಿದೆ. ಮುಂದೆಯೂ ಇದು ಹೆಚ್ಚು ಪ್ರಖ್ಯಾತಿ ಪಡೆದ ದಾಖಲೆ ಯಾವುದೂ ಉಳಿದಿಲ್ಲ. ಹಲವಾರು ಕವಿಚರಿತ್ರೆ ಹಾಗೂ ಸಾಹಿತ್ಯ ಚರಿತ್ರೆಯನ್ನು ರಚಿಸಿದವರು ಯಾರೊಬ್ಬರೂ ಅಚ್ಚರಿಯ ಕಾವ್ಯ ಹಾಗೂ ಕವಿಯನ್ನು ಕುರಿತಂತೆ ಏನನ್ನೂ ದಾಖಲಿಸಿಲ್ಲ. ಮಲ್ಲಿಕಬ್ಬೆ ಎಂಬ ಸಾಧ್ವಿಯೊಬ್ಬಳು ತನ್ನ ಗುರು ಮಾಘಣನಂದಿ ಎಂಬುವವನಿಗೆ ಶಾಸ್ತ್ರದಾನಕ್ಕಾಗಿ ಮಾಡಿಸಿದ ಪ್ರತಿಲಿಪಿ ಅಂಕಕಾವ್ಯ ಎಂಬ ಮಾಹಿತಿಯು ಕಳೆದ 60 ವರ್ಷಗಳಿಂದ ಚಚರ್ೆಗೆಬಂದಿದೆ.

ಅಚ್ಚರಿಯ ಅಂಕಕಾವ್ಯವು ದೊಡ್ಡಬೆಲೆ ಗ್ರಾಮದಲ್ಲಿ ನೆಲೆಸಿದ್ದ ಧರಣೇಂದ್ರ ಪಂಡಿತರೆಂಬ ವಿದ್ವಾಂಸರಲ್ಲಿ ವಂಶಪಾರಂಪರ್ಯವಾಗಿ ರಕ್ಷಿಸಲ್ಪಟ್ಟಿತ್ತೆಂಬ ಖಚಿತಮಾಹಿತಿಯಿದೆ. ಗ್ರಂಥದ  ಅಧ್ಯಯನದಿಂದ ಜ್ಯೋತಿಶಾಸ್ತ್ರ, ಆಯುವರ್ೇದ, ಪಶುವೈದ್ಯ, ಲೋಹಶಾಸ್ತ್ರ ಮುಂತಾದ ವಿಷಯಗಳಲ್ಲಿ ಪರಿಣತರಾಗಿ, ಅಪಾರವಾದ ಜನಮನ್ನಣೆ ಪಡೆದಿದ್ದ, ಶತಾವಧಾನಿಗಳಾಗಿ ಆಸ್ಥಾನ ವಿದ್ವಾಂಸರೆಂದು ಮನ್ನಣೆ ಪಡೆದಿದ್ದ ಧರಣೇಂದ್ರ ಪಂಡಿತರ ವಿರುದ್ಧ ಮತ್ಸರಗ್ರಸ್ತರಾದ ಕೆಲವು ವಿದ್ವಾಸಂರು ಅವರ ವಿರುದ್ಧ ಜ್ಞಾನವಂಚನೆಯ ಆರೂಪ ಹೊರಿಸಿ, ಅವರನ್ನು ನ್ಯಾಯಾಲಯದ ಕಟ್ಟೆ ಹತ್ತಿಸಿದರೆಂಬ ಮಾಹಿತಿ ಇದೆ. ಅದು ನಿರಾಧಾರವಾದ ಆಪಾದನೆಯೆಂದು ನ್ಯಾಯಾಲಯದಲ್ಲಿ ತಿರಸ್ಕೃತವಾಯಿತೆಂಬ ಮಾಹಿತಿಯೂ ಇದೆ. ಆದರೂ ಸಾತ್ವಿಕ ವಿದ್ವಾಂಸರಿಗೆ ಸಾರ್ವಜನಿಕವಾಗಿ ಅಪಮಾನವಾಗುವುದು ತಪ್ಪಲಿಲ್ಲ.

ಮುಂದೆ ಅಂಕ ಕಾವ್ಯವು ಬೆಂಗಳೂರಿನಲ್ಲಿ ನೆಲೆಸಿದ್ದ ಒಬ್ಬಸಾಹಿತ್ಯಪ್ರೇಮಿಯಾದ  ಆಯುವರ್ೇದ ಔಷಧಮಾರಾಟದ ಪ್ರತಿನಿಧಿ ಯಲ್ಲಪ್ಪಶಾಸ್ತ್ರಿಯೆಂಬುವವರ ಕೈಸೇರಿದ ಮಾಹಿತಿ ಇದೆ. ಮುಂದೆ ಅಂಕಕಾವ್ಯವು ಕರ್ಲಮಂಗಲಂ ಶ್ರೀಕಂಠಯ್ಯ ಎಂಬುವವರು ಹಾಗೂ ಅವರಿಗೆ ಪರಿಚಯವಾದ ಕೆ. ಅನಂತಸುಬ್ಬರಾಯರು ಎಂಬ ಕನ್ನಡ ಅಭಿಮಾನಿಗಳ ಸೂಚನೆಯಂತೆ ಸೂಕ್ತವಾಗಿ ಸಂರಕ್ಷಿಸಲ್ಪಟ್ಟು, ಮುಂದೆ ಅಂಕಕಾವ್ಯಕ್ಕೆ ಸಂಬಂಧಿಸಿದಂತೆ ಬಹಳ ಶ್ರಮದಾಯಕವಾದ ಅಧ್ಯಯನವುನಡೆದು, 1950 ಸುಮಾರಿಗೆ ಇದು ಕನ್ನಡಲಿಪಿಯ ಅಕ್ಷರರೂಪ ಪಡೆದು, ಭಾರತದ ರಾಷ್ಟ್ರಪತಿಯವರ ಆದೇಶದಂತೆ ರಾಷ್ಟ್ರೀಯ ಪ್ರಾಚ್ಯಪತ್ರಾಗಾರದಲ್ಲಿ ರಕ್ಷಣೆ ಪಡೆದು, ಪ್ರಪಂಚದ ಹತ್ತನೇ ಅಚ್ಚರಿ ಎಂದು ವಿದೇಶೀ ಗಣ್ಯರಿಂದ ಮನ್ನಣೆಪಡೆೆದು,   1953ರಲ್ಲಿ ಮುದ್ರಣಕ್ರಮದಲ್ಲಿ ಪ್ರಕಟವಾಗಿದೆ.  ಇದಕ್ಕೆ  ಸಂಬಂಧಿಸಿದಂತೆಯೂ ವಿವಾದಗಳಿವೆ. ಸನ್ನಿವೇಶದಲ್ಲಿ  ಕೆಲವಾರು ವಿದ್ವಾಂಸರು ಗ್ರಂಥರಚನೆಯ ಕಾಲವನ್ನು ಕುರಿತಂತೆ ಇಲ್ಲ ಸಲ್ಲದ ಊಹಾತ್ಮಕವಾದ ವಿವಾದಗಳನ್ನು ಉಂಟುಮಾಡಿ ಗ್ರಂಥದ ಪ್ರಾಮುಖ್ಯತೆಯನ್ನು ಮೂಲೆಗುಂಪುಮಾಡಿ ಕತ್ತಲಕೋಣೆಗೆ ಸೇರಿಸುವಲ್ಲಿ ಯಶಸ್ವಿಯಾದಮಾಹಿತಿಗಳಿವೆ.

ಕಳೆದೊಂದು ದಶಕದಿಂದೀಚೆಗೆ ಬೆಂಗಳೂರಿನ ಪುಸ್ತಕಶಕ್ತಿ ಪ್ರಕಾಶನ ಹಾಗೂ ಗ್ರಂಥ ಸಂರಕ್ಷಕ ಶ್ರೀ ಧರ್ಮಪಾಲ್ ಎಂಬುವವರ ಸಹಯೋಗದೊಂದಿಗೆ (ದಿ||ಎಲ್ಲಪ್ಪಶಾಸ್ತ್ರಿಯವರ ಪುತ್ರ. ಈಗ ಅವರೂ ದಿವಂಗತರಾಗಿದ್ದಾರೆ)  ಡಾ|| ಟಿ.ವಿ. ವೆಂಕಟಾಚಲಶಾಸ್ತ್ರಿಯವರ ನೇತೃತ್ವದಲ್ಲಿ ಹಲವಾರು ವಿದ್ವಾಂಸರ ತಂಡವು ಸಿರಿಭೂವಲಯದ ಪ್ರಖ್ಯಾತಿಯ ಪುನರುಜ್ಜೀವನಕ್ಕೆ ಪ್ರಯತ್ನನಡೆಸಿತು. ಅದು ಸಮರ್ಪಕವಾದ ಮಾರ್ಗದಲ್ಲಿರದ ಕಾರಣ ತನ್ನ ಗುರಿಸಾಧಿಸುವಲ್ಲಿ ಪೂರ್ಣಯಶಸ್ಸು ಪಡೆಯಲಿಲ್ಲವೆಂಬ ಮಾಹಿತಿ ಇದೆ.
ನಾವು ಬಳಸುತ್ತಿರುವ ಕನ್ನಡಲಿಪಿಯೇ ಯಾವುದೆ ಬದಲಾವಣೆಯಿಲ್ಲದೇ, ಇಂದಿನ ಆಧುನಿಕ  ಕನ್ನಡ ಗಣಕಯಂತ್ರಕ್ರಮ ಹಾಗೂ ಮೊಬೈಲ್ಗಳಲ್ಲಿ ಸರಳವಾಗಿ ಬಳಕೆಗೆಬರುವಲ್ಲಿ ಮೂಲಕಾರಣವಾದ ಅನಂತ ಕೀಬೋಡರ್ಿನ ಜನಕ ಕೆ. ಅನಂತಸುಬ್ಬರಾಯರ ಅಭಿಮಾನಿಯಾಗಿ,  ಕನ್ನಡ ಭಾಷಾಪ್ರೇಮಿಯಾಗಿರುವ ಹಾಸದ ಸುಧಾಥರ್ಿಯು ಕುಮುದೇಂದುಮುನಿಯ ಸಿರಿಭೂವಲಯಕ್ಕೆ ಸಂಬಂಧಿಸಿದ ಎಲ್ಲ ಚಾರಿತ್ರಿಕ ಸಂಗತಿಗಳನ್ನೂ ಕ್ರೋಢೀಕರಿಸಿ, ಸಿರಿಭೂವಲಯಲ್ಲಿ ಅಡಗಿಕುಳಿತಿರುವ ಅಮೂಲ್ಯವಾದ ಅಂತಸರ್ಾಹಿತ್ಯವನ್ನು ಸಾಮಾನ್ಯ ಓದುಗರ ಸುಲಭವಾದ ಓದಿಗೆ ನೆರವಾಗುಗಂತೆ ಸರಳವಾದ ಪರಿಚಯ ಕೃತಿಗಳ ರೂಪದಲ್ಲಿ ನಿರೂಪಿಸಿ, ಒಂಬತ್ತು ಕಿರಿಹೊತ್ತಿಗೆಗಳನ್ನು ರಚಿಸಿರುವುದಿದೆ. ಇವುಗಳ ಪೈಕಿ 2010ರಲ್ಲಿ ಬೆಳಕುಕಂಡ ಸರ್ವಭಾಷಾಮಯೀಭಾಷಾ ಸಿರಿಭೂವಲಯಸಾರ ವನ್ನು ಲೇಖಕನ ಪರವಾಗಿ ಆಥರ್ಿಕನೆರವು ಪಡೆದು ಪ್ರಕಟಿಸಿರುವವರು ಬೆಂಗಳೂರಿನ ಶ್ರೀ ಕಾಶಿಶೇಷಶಾಸ್ತ್ರಿ ಛಾರಿಟಬಲ್ ಟ್ರಸ್ಟ್ ನವರು. ಪರಿಚಯಗ್ರಂಥವನ್ನು ಕುರಿತಂತೆ ವ್ಯಾಪಕವಾದ ಪ್ರಚಾರನೀಡುವ ದಿಸೆಯಲ್ಲಿ ಖಾಸಗೀ ವಾಹಿನಿಯೊಂದು ಕಾರ್ಯಕ್ರಮ ನಿರೂಪಿಸಿತು. ಲೇಖಕನು ಹಾಸನದಲ್ಲಿ ನೆಲೆಸಿರುವ ಕಾರಣದಿಂದ ಪ್ರಕಾಶನದ ಮುಖ್ಯಸ್ಥ ಶ್ರೀ ಸದಾನಂದ ಅವರೇ ಗ್ರಂಥದ ವಿಚಾರವಾಗಿ ತಮಗೆ ತೋಚಿದಂತೆ ಮಾಹಿತಿಗಳನ್ನು ನೀಡಿ, ಸಿರಿಭೂವಲಯಸಾರದ ಲೇಖಕಯಾರು? ಎಂಬ ವಿಚಾರವನ್ನೇ ತೆರೆಮರೆಗೆ ಸರಿಸಿಬಿಟ್ಟರು! ಪರಿಚಯ ಗ್ರಂಥದ ಮುಖಪುಟವನ್ನು ವ್ಯಾಪಕವಾಗಿ ಪ್ರದಶರ್ಿಸುವಾಗಲೂ ಲೇಖಕನ ಹೆಸರು ಕಾಣಿಸದಂತೆ ಎಚ್ಚರವಹಿಸಲಾಯಿತು! ಸಿರಿಭೂವಲಯಗ್ರಂಥದ ಸಂಶೋಧನೆಯಲ್ಲಿ ತಮ್ಮ ಸಂಸ್ಥೆಯು ತೊಡಗಿದೆ ಎಂಬ  ತಪ್ಪು ಮಾಹಿತಿಯನ್ನೂ ಶ್ರೀ ಸದಾನಂದಅವರು ನೀಡಿದ್ದಾಯಿತು. ಕಾರ್ಯಕ್ರಮದ ನಿರೂಪಕರೂ ಬಹಳ ಮೇಧಾವಿಗಳು. ಕನ್ನಡ ನಾಡುನುಡಿಗೆ ಸಂಬಂಧಿಸಿದ ಕೆಲವಾರು ಚಾರಿತ್ರಿಕ ಸಂಗತಿಗಳನ್ನು ಪ್ರಸಿದ್ಧ ಸಂಶೋಧಕರಾದ ಶ್ರೀ ಚಿದಾನಂದಮೂತರ್ಿಯವರು ವಿವರುಸುತ್ತಿರುವ ಹಿನ್ನೆಲೆಯಲ್ಲಿ ವಿವರಗಳನ್ನು ಸೇರಿಸಿ ಪ್ರಸಾರಮಾಡಿಬಿಟ್ಟರು! ಕಾರಣದಿಂದಾಗಿ ಕೆಲವರಿಗೆ ಇದು ಶ್ರೀ ಚಿದಾನಂದ ಮೂತರ್ಿಯವರು ವಿವರಿಸುತ್ತಿರುವ ಮಾಹಿತಿ ಎಂಬ ತಪ್ಪು ಕಲ್ಪನೆ ಉಂಟಾಗುವುದೂ ಸಾಧ್ಯ! ಉದ್ದೇಶಪೂರ್ವಕವಾದ ಅಚಾತುರ್ಯವನ್ನು ಕುರಿತು ಕೆಲವು ಮಿತ್ರರು ಶ್ರೀ ಸದಾನಂದ ಅವರಲ್ಲಿ ವಿಚಾರಿಸಿದಾಗ, ಲೇಖಕರನ್ನು ಕುರಿತೂ ನಾನು ಹೇಳಿದ್ದೆ. ಅದು ಪ್ರಸಾರವಾಗಿಲ್ಲ. ನಾನೇನುಮಾಡಲಿ? ಎಂದು ಅವರು ಮರುಪ್ರಶ್ನೆ ಹಾಕಿದ್ದಾರೆ. ಈವಿಚಾರವಾಗಿ ಸಂಬಂಧಿಸಿದ ಖಾಸಗೀ ದೂರದರ್ಶನ ವಾಹಿನಿಯವರಲ್ಲಿ ವಿಚಾರಿಸಿದಾಗ, ಅವರು ನೀಡಿದ ಮಾಹಿತಿಯನ್ನು ನಾವು ಪ್ರಸಾರಮಾಡಿದ್ದೇವೆ. ನ್ಯೂನತೆ ಇದ್ದರೆ, ಪ್ರಕಾಶಕರನ್ನೇ ವಿಚಾರಿಸಿ ಎಂದು ಉತ್ತರಿಸಿದರು. ಪುನಃ ಪ್ರಕಾಶಕರನ್ನು ವಿಚಾರಿಸಿದಾಗ ವಿಚಾರಣೆಗಳಿಂದಾಗಿ ನನಗೆ ಬೇಸರವಾಗಿದೆ. ಪರಿಚಯಗ್ರಂಥವನ್ನು ಏಕಾದರೂ ಪ್ರಕಟಿಸಿದೆನೋ ಎನಿಸಿದೆ. ಈಗ ವಾಹಿನಿಯವರೊಂದಿಗೆ ಮಾತನಾಡಿದ್ದೇನೆ ಅವರು ಹಾಸನದಲ್ಲಿ ಲೇಖಕನನ್ನೇ ಸಂದಶರ್ಿಸಿ ವಿಸ್ತಾರವಾದ ಕಾರ್ಯಕ್ರಮ ರೂಪಿಸುತ್ತಾರೆ ಎಂದು ಸೂಚಿದರು. ಲೇಖಕನಿಗೆ ಇಂಥ ಪ್ರಚಾರದಲ್ಲಿ ಆಸಕ್ತಿ ಇಲ್ಲದ ಕಾರಣ ಅದನ್ನು ಕುರಿತು ಯಾರನ್ನೂ ವಿಚಾರಿಸಲಿಲ್ಲ.

ಕನ್ನಡಿಗರ ಕನ್ನಡಾಭಿಮಾನವನ್ನು ತಾತ್ಕಾಲಿಕವಾಗಿ ಎಚ್ಚರಗೊಳಿಸುವ ರಾಜ್ಯೋತ್ಸವದ ನವೆಂಬರ್ ತಿಂಗಳು  ಕಾಲಿಟ್ಟಕೂಡಲೇ ಮಾಧ್ಯಮದವರ ಚಟುವಟಿಕೆಯೂ ಚುರುಕುಗೊಂಡಿತು. ಹಿಂದೆ ಪ್ರಸಾರವಾಗಿದ್ದ ಸಿರಿಭೂವಲಯಸಾರ ಕುರಿತ ಅಸಮರ್ಪಕ ಪರಿಚಯವು ಕೆಲವೊಂದು ವಿಚಾರಗಳ ಸೇರ್ಪಡೆಯೊಂದಿಗೆ ಅಥವಾ ಹಿಂದೆ ಇದ್ದಂತೆಯೇ ಅದೇ ಖಾಸಗೀ ವಾಹಿಯಲ್ಲಿ ಮರುಪ್ರಸಾರವಾಯಿತು.  ಈಗಲೂ ಸರ್ವಭಾಷಾಮಯೀಭಾಷಾ ಸಿರಿಭೂವಲಯಸಾರ ಲೇಖಕನು ಕುಮುದೇಂದುಮುನಿ ಎಂದೇ ತಪ್ಪಾಗಿ ಸೂಚಿಸಲಾಯಿತು! ಪುನಃ ಹಿಂದಿನಂತೆಯೇ ಲೇಖಕನ ಹೆಸರು ಕಾಣಿಸದಂತೆ ಎಚ್ಚರಿಕೆಯಿಂದ ಮುಖಪುಟವನ್ನು ಪ್ರದಶರ್ಿಸಲಾಯಿತು! ಮೂಲಗ್ರಂಥದ ಕರ್ತೃ ಕುಮುದೆಂದುವೇ ಸಿರಿಭೂವಲಯಸಾರ ಪರಿಚಯಕಾರನೆಂದು ಸೂಚಿಸಿದರೆ ತಪ್ಪೇನಿಲ್ಲ. ಆದರೆ 1200 ವರ್ಷಗಳ ಹಿಂದೆ ಜೀವಿಸಿದ್ದ ಕುಮುದೇಂದುವು ಈಗೆಲ್ಲಿ ಬದುಕಿಬಂದ? ಎಂಬ ಅಚ್ಚರಿಯು ನೋಡುಗರಲ್ಲಿ ಉಂಟಾಗುದಿಲ್ಲವೇ?! 27 ವರ್ಷಗಳಕಾಲ ಯಾರೋ ಶ್ರಮವಹಿಸಿ ಮಾಡಿದ ಕಾರ್ಯವನ್ನು  ಬೇರೆಯಾರೋ  ತಾವು ಮಾಡಿಸಿದ ಸಾಧನೆಯೆಂದು ಸುಳ್ಳು  ಮಾಹಿತಿಯನ್ನು  ಪ್ರಸಾರಮಾಡಿ ವಿಕ್ಷಕರನ್ನು ತಪ್ಪುದಾರಿಗೆ ಕಳಿಸುವುದು ಯುಕ್ತವಲ್ಲ ಎಂಬ ಕಾರಣದಿಂದಾಗಿ ಇಲ್ಲಿ ಅನಿಸಿಕೆಯನ್ನು ಸೂಚಿಸುವುದು ನನಗೆ ಅನಿವಾರ್ಯವಾಗಿದೆ.

ಎಲ್ಲ ಕಾರಣಗಳಿಂದಾಗಿ, ಜಗದ ಅಚ್ಚರಿಯೆನಿಸಿದ ಸಿರಿಭೂವಲಯ, ಸರ್ವಜ್ಞಸ್ವರೂಪಿಯೆನಿಸಿದ ಕುಮುದೇಂದುಮುನಿಯ ಅಸಾಧಾರಣ ಪ್ರತಿಭೆ, ಅವನನ್ನು ಸಮರ್ಥವಾಗಿ ಅಧ್ಯಯನ ಮಾಡಿದ್ದ ಧರಣೇಂದ್ರ ಪಂಡಿತರು, ಅಕ್ಷರ ರೂಪದ ಪರಿವರ್ತನೆಯಲ್ಲಿ ಶ್ರಮಿಸಿದ ಕರ್ಲಮಂಗಲಂ ಶ್ರೀಕಂಠಯ್ಯನವರು,  ಇದನ್ನೆಲ್ಲ ವಿವರಿಸುವ ಪರಿಚಯಕೃತಿಗಳಿಗೆ ಮೂಲಕಾರಣರಾದ ಕೆ. ಅನಂತಸುಬ್ಬರಾಯರು, ಎಲ್ಲ ವಿವರಗಳ ಪರಿಚಯದ ನಿರೂಪಣೆಗೆ ಕೈಹಾಕಿದ ಹಾಸನದ ಸುಧಾಥರ್ಿ ತಮ್ಮ ಸಾಧನೆಯಲ್ಲಿ ಸಿದ್ಧಿಪಡೆದರೂ, ಅದಕ್ಕೆ ಸೂಕ್ತವಾದ ಜನಮನ್ನಣೆ ಪಡೆಯುವಲ್ಲಿ ಮಾತ್ರ ತೆರೆಯಮರೆಗೆ ಸರಿಸಲ್ಪಟ್ಟು, ಇಲ್ಲದ ವಿವಾದಗಳಲ್ಲಿ ಸಿಲುಕಿದ್ದು, ಚಾರಿತ್ರಿಕ ಸತ್ಯ. ಇದೆಲ್ಲದಕ್ಕೂ ಸಿರಿಭೂವಲಯವು ಯಾವುದಾದರೂ ಅನುಚಿತವಾದ ಶಾಪಕ್ಕೆ ಗುರಿಯಾಗಿರುವುದೇ ಕಾರಣವೇನೋ ಎಂಬ ಭಾವನೆ ನನಗುಂಟಾಗಿದೆ!

- ಸುಧಾರ್ಥಿ ಹಾಸನ.